Homeಮುಖಪುಟಟ್ವಿಟರ್‌ಗೆ ಮೋದಿ ಸರ್ಕಾರ ಬೆದರಿಕೆ ಹಾಕಿದ ವಿಚಾರ: ದಾಖಲೆ ಸಮೇತ ಮಾಹಿತಿ ಹಂಚಿಕೊಂಡ ಟಿಎಂಸಿ ವಕ್ತಾರ

ಟ್ವಿಟರ್‌ಗೆ ಮೋದಿ ಸರ್ಕಾರ ಬೆದರಿಕೆ ಹಾಕಿದ ವಿಚಾರ: ದಾಖಲೆ ಸಮೇತ ಮಾಹಿತಿ ಹಂಚಿಕೊಂಡ ಟಿಎಂಸಿ ವಕ್ತಾರ

- Advertisement -
- Advertisement -

ಟ್ವಿಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಅವರು ಭಾರತದಲ್ಲಿ ಟ್ವಿಟರ್ ಕಚೇರಿಯನ್ನು ಸ್ಥಗಿತಗೊಳಿಸುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಬಗ್ಗೆ ಟಿಎಂಸಿ ನಾಯಕ, ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸರಣಿ ಟ್ವಿಟ್ ಮಾಡಿದ್ದು, ಟ್ವಿಟರ್ ಬಳಿ ಕೇಂದ್ರ ಸರ್ಕಾರ ಹಲವು ಖಾತೆಗಳ ಮಾಹಿತಿಯನ್ನು ಕೇಳಿತ್ತು ಎಂಬುವುದನ್ನು ಸೂಚಿಸುವ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ಜಾಕ್ ಡೋರ್ಸೆ ಅವರ ಬೇಹುಗಾರಿಕೆ ಹಾಗೂ ಸೆನ್ಸಾರ್‌ಶಿಪ್ ಆರೋಪಗಳನ್ನು ಮೋದಿ ಸರ್ಕಾರವು ಸುಳ್ಳು ಎಂದು ಹೇಳಿ ನಿರಾಕರಿಸಿದೆ. ಆದರೆ, ಟ್ವಿಟರ್ ನ ಪಾರದರ್ಶಕತೆ ವರದಿಗಳ ಡೇಟಾವನ್ನು ಆಧರಿಸಿದ ಸತ್ಯ ಇಲ್ಲಿದೆ ಎಂದು ಸಿಎಎ ವಿರೋಧಿ ಪ್ರತಿಭಟನೆ, ರೈತರ ಪ್ರತಿಭಟನೆ ಹಾಗೂ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಟ್ವಿಟರ್ ಬಳಕೆದಾರರ ಮಾಹಿತಿಯನ್ನು ಮೋದಿ ಸರ್ಕಾರವು ಟ್ವಿಟರ್ ಬಳಿ ಕೇಳಿತ್ತು ಎಂದು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಾಕೇತ್ ಗೋಖಲೆ ಟ್ವಿಟ್ ಮಾಡಿದ್ದಾರೆ.

ಇದನ್ನೂ ಓದಿ: ಈ ದೇಶದ ಪ್ರಧಾನಿಗೆ ಯಾಕೆ ಇಷ್ಟೊಂದು ಹೇಡಿತನ?: ಟ್ವಿಟರ್‌ನ ಮಾಜಿ ಸಿಇಒ ಹೇಳಿಕೆ ಹಿನ್ನೆಲೆ ಕಾಂಗ್ರೆಸ್ ಪ್ರಶ್ನೆ

”ಈಗ ಕೆಳಗಿನ ಟ್ವೀಟ್‌ಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ರೈತ ಪ್ರತಿಭಟನೆಗಳ (2020-2021) ಅವಧಿಯ ಡೇಟಾ ಇಲ್ಲಿದೆ. 👇

CAA ವಿರೋಧಿ ಮತ್ತು ರೈತರ ಪ್ರತಿಭಟನೆಯ ಅವಧಿಯಲ್ಲಿ ಭಾರತ ಸರ್ಕಾರವು ಜಾಗತಿಕವಾಗಿ ಅತಿ ಹೆಚ್ಚು ಮಾಹಿತಿಗಳನ್ನು ಕೇಳಿದ ಸರ್ಕಾರವಾಗಿದೆ.

ಈ ಅವಧಿಯಲ್ಲಿ ಜಾಗತಿಕವಾಗಿ ಸಲ್ಲಿಸಿದ ವಿನಂತಿಗಳಲ್ಲಿ 25% ವಿನಂತಿಗಳನ್ನು ಭಾರತ ಸರ್ಕಾರವೇ ಸಲ್ಲಿಸಿದೆ” ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

2019ರ ಜನವರಿ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ 1,057 ಖಾತೆದಾರರ ಮಾಹಿತಿ ಹಾಗೂ ವಿವರಗಳನ್ನು ಭಾರತ ಸರ್ಕಾರ ಕೇಳಿದೆ.

2020 ರ ಜನವರಿ ಹಾಗೂ ಡಿಸೆಂಬರ್ ಅವಧಿಯಲ್ಲಿ ಮೋದಿ ಸರ್ಕಾರವು 5,830 ಟ್ವಿಟರ್ ಬಳಕೆದಾರರ ಮಾಹಿತಿ ಹಾಗೂ ವಿವರಗಳನ್ನು ನೀಡುವಂತೆ ಟ್ವಿಟರ್ ಸಂಸ್ಥೆಯನ್ನು ಒತ್ತಾಯಿಸಿದೆ ಎಂದು ದತ್ತಾಂಶಗಳೊಡನೆ ಸಾಕೇತ್ ಗೋಖಲೆ ಹೇಳಿದ್ದಾರೆ.

👉ತದನಂತರ, 2020 ರ ಜನವರಿ ಹಾಗೂ ಡಿಸೆಂಬರ್ ಅವಧಿಯಲ್ಲಿ ಸಿಎಎ ಮತ್ತು ರೈತ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ, ಮೋದಿ ಸರ್ಕಾರವು 5830 ಖಾತೆಗಳಿಗೆ ಮಾಹಿತಿ ಮತ್ತು ಬಳಕೆದಾರರ ವಿವರಗಳನ್ನು ಕೋರಿತು.

ಇದು 452% ರಷ್ಟು ಹೆಚ್ಚಳವಾಗಿದೆ!”

2021 (ಕೋವಿಡ್) ಕಾಲದಲ್ಲಿ ಬಳಕೆದಾರರ ವಿವರಗಳಿಗಾಗಿ ಸಲ್ಲಿಕೆಯಾದ ಒಟ್ಟು ಜಾಗತಿಕ ವಿನಂತಿಗಳಲ್ಲಿ 19% ವಿನಂತಿಗಳನ್ನು ಭಾರತ ಸರ್ಕಾರವೇ ಮಾಡಿದೆ. ಇದೇ ಅವಧಿಯಲ್ಲಿ ಯುನೈಟೆಡ್ ಕಿಂಗ್‌ಡಂ 4% ವಿನಂತಿಗಳನ್ನು ಮಾಡಿದ್ದರೆ, ಜರ್ಮನಿ 6%, ಬ್ರೆಝಿಲ್ 2% ವಿನಂತಿಗಳನ್ನಷ್ಟೇ ಮಾಡಿತ್ತು. ಪಾಕಿಸ್ತಾನ ಕೇವಲ 1% ಕಡಿಮೆ ವಿನಂತಿ ಮಾಡಿದೆ ಎಂದು ಸಾಕೇತ್ ಗೋಖಲೆ ಟ್ವಿಟರ್ ನೀಡಿರುವ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಇನ್ನು, ಟ್ವಿಟರ್ ಖಾತೆಯನ್ನು ಅಮಾನತು ಮಾಡುವುದು ಮತ್ತು ವಿಷಯಗಳನ್ನು ಡಿಲಿಟ್ ಮಾಡುವಂತೆಯೂ ಭಾರತ ಸರ್ಕಾರ ನೀಡಿದ ಆದೇಶಗಳ ಮಾಹಿತಿಯನ್ನು ಟ್ವಿಟರ್ ನೀಡಿದೆ. ಅದರಲ್ಲಿ ಕೋರ್ಟ್‌ ನಿರ್ದೇಶನದ ಪ್ರಕಾರ ಸರ್ಕಾರ ನೀಡಿದ ಆದೇಶಗಳು ಹಾಗೂ ಲೀಗಲ್ ನೋಟಿಸ್ ಇಲ್ಲದೆ ಪೊಲೀಸ್ ಹಾಗೂ ಸರ್ಕಾರಿ ಏಜನ್ಸಿಗಳು ನೀಡಿದ ಆದೇಶಗಳು ಎಂದು ಎರಡು ವಿಭಾಗ ಮಾಡಬಹುದು. 2020 ರಲ್ಲಿ, ವಿಷಯವನ್ನು ತೆಗೆದುಹಾಕುವಿಕೆ ಹಾಗೂ ಖಾತೆಗಳ ಅಮಾನತು ಸೇರಿದಂತೆ 9,724 ಆದೇಶಗಳನ್ನು ಮೋದಿ ಸರ್ಕಾರ ನೀಡಿದೆ. ಅದರಲ್ಲಿ ಕೇವಲ 19 ಮಾತ್ರ ಕೋರ್ಟ್ ನಿರ್ದೇಶನದಂತೆ ಆದೇಶಿಸಲಾಗಿದೆ. ಉಳಿದ ಎಲ್ಲವನ್ನೂ ಮೋದಿ ಸರ್ಕಾರವೇ ಆದೇಶಿಸಿದೆ. 2021 ರಲ್ಲಿ 8,863 ಆದೇಶಗಳನ್ನು ಮೋದಿ ಸರ್ಕಾರ ನೀಡಿದರೆ, ಅದರಲ್ಲಿ ಕೇವಲ 32 ಮಾತ್ರ ಕೋರ್ಟ್ ಆದೇಶಗಳಾಗಿತ್ತು ಎಂದು ಗೋಖಲೆ ಟ್ವಿಟ್ ನಲ್ಲಿ ಹೇಳಿದ್ದಾರೆ.

ಭಾರತ ಸರ್ಕಾರವು 12,916 ಟ್ವಿಟರ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲು 3,992 ಆದೇಶಗಳನ್ನು ನೀಡಿದ್ದು, ಇದು ಜಾಗತಿಕವಾಗಿ 8% ಆಗಿದೆ. ಅದೇ ವೇಳೆ UK ಕೇವಲ 16 ಆದೇಶ ನೀಡಿದ್ದರೆ, ಅಮೇರಿಕ 32 ಆದೇಶಗಳನ್ನು, ಇಸ್ರೇಲ್ 7 ಆದೇಶಗಳನ್ನು ಮಾತ್ರ ನೀಡಿದೆ. ಇವೆಲ್ಲವೂ ಜಾಗತಿಕ ಆದೇಶಗಳ 1% ವೂ ಇಲ್ಲ. ನೆರೆಯ ಪಾಕಿಸ್ತಾನ 489 ಆದೇಶಗಳನ್ನು ನೀಡಿದ್ದು, ಜಾಗತಿಕವಾಗಿ 1% ಆದೇಶಗಳನ್ನು ನೀಡಿದೆ. ಬಾಂಗ್ಲಾದೇಶ ಟ್ವಿಟರ್ ಖಾತೆ ಅಮಾನತು ಹಾಗೂ ವಿಷಯ ತೆಗೆದುಹಾಕುವಿಕೆ ಕುರಿತಂತೆ ಯಾವುದೇ ಆದೇಶವನ್ನೂ ನೀಡಿಲ್ಲ. ಅದೇ ವೇಳೆ, ಭಾರತ ಸರ್ಕಾರವು 12,919 ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಆದೇಶಿಸಿದೆ ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.

ಈ ಡೇಟಾಗಳ ಪ್ರಕಾರ ಸಿಎಎ ವಿರೋಧಿ ಹಾಗೂ ರೈತರ ಆಂದೋಲನದ ಸಂದರ್ಭದಲ್ಲಿ ಮೋದಿ ಸರ್ಕಾರವು ಟ್ವಿಟರ್ ಖಾತೆದಾರರ ಮಾಹಿತಿ ನೀಡುವಂತೆ ಹಾಗೂ ಖಾತೆಗಳ ನಿಷೇಧಕ್ಕೆ ಒತ್ತಡ ಹೇರಿದೆ ಎನ್ನುವುದು ಖಚಿತವಾಗಿದೆ. ಕೋಮುವಾದಿ ದ್ವೇಷ ಹರಡುವಿಕೆ, ಮಹಿಳಾ ಖಾತೆದಾರರ ಮೇಲೆ ಸೈಬರ್ ನಿಂದನೆ ದಾಳಿ, ಬಿಜೆಪಿ ಐಟಿ ಸೆಲ್ ಗಳು ಮುಕ್ತವಾಗಿ ಸುಳ್ಳು ಸುದ್ದಿ ಹರಡುತ್ತಿರುವ ಸಂದರ್ಭದಲ್ಲೇ ಮೋದಿ ಸರ್ಕಾರವು ಇಷ್ಟೆಲ್ಲಾ ಆದೇಶಗಳನ್ನು ನೀಡಿದೆ. ಬಿಜೆಪಿ ನಾಯಕರ ಟ್ವಿಟ್‌ಗಳನ್ನು ‘ತಿರುಚಿದ ಸುದ್ದಿ’ ಎಂದು ಸ್ವತಃ ಟ್ವಿಟರ್ ಫ್ಲ್ಯಾಗ್ ಮಾಡಿದ್ದರೂ ಸಹ ಅವುಗಳನ್ನು ತೆಗೆದುಹಾಕಿರಲಿಲ್ಲ. ಮೋದಿ ಸರಕಾರ ಟೀಕೆಗಳನ್ನು ಹತ್ತಿಕ್ಕುತ್ತದೆ ಎಂಬುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಈ ಅಧಿಕೃತ ಡೇಟಾವನ್ನು ನಿರಾಕರಿಸುವ ಮತ್ತು ಆರೋಪಗಳನ್ನು “ಸುಳ್ಳು” ಮತ್ತು “ವಿದೇಶಿ ಪಿತೂರಿ” ಎಂದು ಹೇಳುವ ಧೈರ್ಯವನ್ನು ಮೋದಿ ಸರ್ಕಾರ ಹೊಂದಿದೆಯೇ? ಸಚಿವ ರಾಜೀವ್ ಅವರೇ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಏಕೆಂದರೆ ಈಗ ನೀವು ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಸಾಕೇತ್ ಗೋಖಲೆ ಟ್ವಿಟ್ ನಲ್ಲಿ ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...