Homeಮುಖಪುಟಟ್ವಿಟರ್‌ಗೆ ಮೋದಿ ಸರ್ಕಾರ ಬೆದರಿಕೆ ಹಾಕಿದ ವಿಚಾರ: ದಾಖಲೆ ಸಮೇತ ಮಾಹಿತಿ ಹಂಚಿಕೊಂಡ ಟಿಎಂಸಿ ವಕ್ತಾರ

ಟ್ವಿಟರ್‌ಗೆ ಮೋದಿ ಸರ್ಕಾರ ಬೆದರಿಕೆ ಹಾಕಿದ ವಿಚಾರ: ದಾಖಲೆ ಸಮೇತ ಮಾಹಿತಿ ಹಂಚಿಕೊಂಡ ಟಿಎಂಸಿ ವಕ್ತಾರ

- Advertisement -
- Advertisement -

ಟ್ವಿಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಅವರು ಭಾರತದಲ್ಲಿ ಟ್ವಿಟರ್ ಕಚೇರಿಯನ್ನು ಸ್ಥಗಿತಗೊಳಿಸುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಬಗ್ಗೆ ಟಿಎಂಸಿ ನಾಯಕ, ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸರಣಿ ಟ್ವಿಟ್ ಮಾಡಿದ್ದು, ಟ್ವಿಟರ್ ಬಳಿ ಕೇಂದ್ರ ಸರ್ಕಾರ ಹಲವು ಖಾತೆಗಳ ಮಾಹಿತಿಯನ್ನು ಕೇಳಿತ್ತು ಎಂಬುವುದನ್ನು ಸೂಚಿಸುವ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ಜಾಕ್ ಡೋರ್ಸೆ ಅವರ ಬೇಹುಗಾರಿಕೆ ಹಾಗೂ ಸೆನ್ಸಾರ್‌ಶಿಪ್ ಆರೋಪಗಳನ್ನು ಮೋದಿ ಸರ್ಕಾರವು ಸುಳ್ಳು ಎಂದು ಹೇಳಿ ನಿರಾಕರಿಸಿದೆ. ಆದರೆ, ಟ್ವಿಟರ್ ನ ಪಾರದರ್ಶಕತೆ ವರದಿಗಳ ಡೇಟಾವನ್ನು ಆಧರಿಸಿದ ಸತ್ಯ ಇಲ್ಲಿದೆ ಎಂದು ಸಿಎಎ ವಿರೋಧಿ ಪ್ರತಿಭಟನೆ, ರೈತರ ಪ್ರತಿಭಟನೆ ಹಾಗೂ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಟ್ವಿಟರ್ ಬಳಕೆದಾರರ ಮಾಹಿತಿಯನ್ನು ಮೋದಿ ಸರ್ಕಾರವು ಟ್ವಿಟರ್ ಬಳಿ ಕೇಳಿತ್ತು ಎಂದು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಾಕೇತ್ ಗೋಖಲೆ ಟ್ವಿಟ್ ಮಾಡಿದ್ದಾರೆ.

ಇದನ್ನೂ ಓದಿ: ಈ ದೇಶದ ಪ್ರಧಾನಿಗೆ ಯಾಕೆ ಇಷ್ಟೊಂದು ಹೇಡಿತನ?: ಟ್ವಿಟರ್‌ನ ಮಾಜಿ ಸಿಇಒ ಹೇಳಿಕೆ ಹಿನ್ನೆಲೆ ಕಾಂಗ್ರೆಸ್ ಪ್ರಶ್ನೆ

”ಈಗ ಕೆಳಗಿನ ಟ್ವೀಟ್‌ಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ರೈತ ಪ್ರತಿಭಟನೆಗಳ (2020-2021) ಅವಧಿಯ ಡೇಟಾ ಇಲ್ಲಿದೆ. 👇

CAA ವಿರೋಧಿ ಮತ್ತು ರೈತರ ಪ್ರತಿಭಟನೆಯ ಅವಧಿಯಲ್ಲಿ ಭಾರತ ಸರ್ಕಾರವು ಜಾಗತಿಕವಾಗಿ ಅತಿ ಹೆಚ್ಚು ಮಾಹಿತಿಗಳನ್ನು ಕೇಳಿದ ಸರ್ಕಾರವಾಗಿದೆ.

ಈ ಅವಧಿಯಲ್ಲಿ ಜಾಗತಿಕವಾಗಿ ಸಲ್ಲಿಸಿದ ವಿನಂತಿಗಳಲ್ಲಿ 25% ವಿನಂತಿಗಳನ್ನು ಭಾರತ ಸರ್ಕಾರವೇ ಸಲ್ಲಿಸಿದೆ” ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

2019ರ ಜನವರಿ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ 1,057 ಖಾತೆದಾರರ ಮಾಹಿತಿ ಹಾಗೂ ವಿವರಗಳನ್ನು ಭಾರತ ಸರ್ಕಾರ ಕೇಳಿದೆ.

2020 ರ ಜನವರಿ ಹಾಗೂ ಡಿಸೆಂಬರ್ ಅವಧಿಯಲ್ಲಿ ಮೋದಿ ಸರ್ಕಾರವು 5,830 ಟ್ವಿಟರ್ ಬಳಕೆದಾರರ ಮಾಹಿತಿ ಹಾಗೂ ವಿವರಗಳನ್ನು ನೀಡುವಂತೆ ಟ್ವಿಟರ್ ಸಂಸ್ಥೆಯನ್ನು ಒತ್ತಾಯಿಸಿದೆ ಎಂದು ದತ್ತಾಂಶಗಳೊಡನೆ ಸಾಕೇತ್ ಗೋಖಲೆ ಹೇಳಿದ್ದಾರೆ.

👉ತದನಂತರ, 2020 ರ ಜನವರಿ ಹಾಗೂ ಡಿಸೆಂಬರ್ ಅವಧಿಯಲ್ಲಿ ಸಿಎಎ ಮತ್ತು ರೈತ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ, ಮೋದಿ ಸರ್ಕಾರವು 5830 ಖಾತೆಗಳಿಗೆ ಮಾಹಿತಿ ಮತ್ತು ಬಳಕೆದಾರರ ವಿವರಗಳನ್ನು ಕೋರಿತು.

ಇದು 452% ರಷ್ಟು ಹೆಚ್ಚಳವಾಗಿದೆ!”

2021 (ಕೋವಿಡ್) ಕಾಲದಲ್ಲಿ ಬಳಕೆದಾರರ ವಿವರಗಳಿಗಾಗಿ ಸಲ್ಲಿಕೆಯಾದ ಒಟ್ಟು ಜಾಗತಿಕ ವಿನಂತಿಗಳಲ್ಲಿ 19% ವಿನಂತಿಗಳನ್ನು ಭಾರತ ಸರ್ಕಾರವೇ ಮಾಡಿದೆ. ಇದೇ ಅವಧಿಯಲ್ಲಿ ಯುನೈಟೆಡ್ ಕಿಂಗ್‌ಡಂ 4% ವಿನಂತಿಗಳನ್ನು ಮಾಡಿದ್ದರೆ, ಜರ್ಮನಿ 6%, ಬ್ರೆಝಿಲ್ 2% ವಿನಂತಿಗಳನ್ನಷ್ಟೇ ಮಾಡಿತ್ತು. ಪಾಕಿಸ್ತಾನ ಕೇವಲ 1% ಕಡಿಮೆ ವಿನಂತಿ ಮಾಡಿದೆ ಎಂದು ಸಾಕೇತ್ ಗೋಖಲೆ ಟ್ವಿಟರ್ ನೀಡಿರುವ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಇನ್ನು, ಟ್ವಿಟರ್ ಖಾತೆಯನ್ನು ಅಮಾನತು ಮಾಡುವುದು ಮತ್ತು ವಿಷಯಗಳನ್ನು ಡಿಲಿಟ್ ಮಾಡುವಂತೆಯೂ ಭಾರತ ಸರ್ಕಾರ ನೀಡಿದ ಆದೇಶಗಳ ಮಾಹಿತಿಯನ್ನು ಟ್ವಿಟರ್ ನೀಡಿದೆ. ಅದರಲ್ಲಿ ಕೋರ್ಟ್‌ ನಿರ್ದೇಶನದ ಪ್ರಕಾರ ಸರ್ಕಾರ ನೀಡಿದ ಆದೇಶಗಳು ಹಾಗೂ ಲೀಗಲ್ ನೋಟಿಸ್ ಇಲ್ಲದೆ ಪೊಲೀಸ್ ಹಾಗೂ ಸರ್ಕಾರಿ ಏಜನ್ಸಿಗಳು ನೀಡಿದ ಆದೇಶಗಳು ಎಂದು ಎರಡು ವಿಭಾಗ ಮಾಡಬಹುದು. 2020 ರಲ್ಲಿ, ವಿಷಯವನ್ನು ತೆಗೆದುಹಾಕುವಿಕೆ ಹಾಗೂ ಖಾತೆಗಳ ಅಮಾನತು ಸೇರಿದಂತೆ 9,724 ಆದೇಶಗಳನ್ನು ಮೋದಿ ಸರ್ಕಾರ ನೀಡಿದೆ. ಅದರಲ್ಲಿ ಕೇವಲ 19 ಮಾತ್ರ ಕೋರ್ಟ್ ನಿರ್ದೇಶನದಂತೆ ಆದೇಶಿಸಲಾಗಿದೆ. ಉಳಿದ ಎಲ್ಲವನ್ನೂ ಮೋದಿ ಸರ್ಕಾರವೇ ಆದೇಶಿಸಿದೆ. 2021 ರಲ್ಲಿ 8,863 ಆದೇಶಗಳನ್ನು ಮೋದಿ ಸರ್ಕಾರ ನೀಡಿದರೆ, ಅದರಲ್ಲಿ ಕೇವಲ 32 ಮಾತ್ರ ಕೋರ್ಟ್ ಆದೇಶಗಳಾಗಿತ್ತು ಎಂದು ಗೋಖಲೆ ಟ್ವಿಟ್ ನಲ್ಲಿ ಹೇಳಿದ್ದಾರೆ.

ಭಾರತ ಸರ್ಕಾರವು 12,916 ಟ್ವಿಟರ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲು 3,992 ಆದೇಶಗಳನ್ನು ನೀಡಿದ್ದು, ಇದು ಜಾಗತಿಕವಾಗಿ 8% ಆಗಿದೆ. ಅದೇ ವೇಳೆ UK ಕೇವಲ 16 ಆದೇಶ ನೀಡಿದ್ದರೆ, ಅಮೇರಿಕ 32 ಆದೇಶಗಳನ್ನು, ಇಸ್ರೇಲ್ 7 ಆದೇಶಗಳನ್ನು ಮಾತ್ರ ನೀಡಿದೆ. ಇವೆಲ್ಲವೂ ಜಾಗತಿಕ ಆದೇಶಗಳ 1% ವೂ ಇಲ್ಲ. ನೆರೆಯ ಪಾಕಿಸ್ತಾನ 489 ಆದೇಶಗಳನ್ನು ನೀಡಿದ್ದು, ಜಾಗತಿಕವಾಗಿ 1% ಆದೇಶಗಳನ್ನು ನೀಡಿದೆ. ಬಾಂಗ್ಲಾದೇಶ ಟ್ವಿಟರ್ ಖಾತೆ ಅಮಾನತು ಹಾಗೂ ವಿಷಯ ತೆಗೆದುಹಾಕುವಿಕೆ ಕುರಿತಂತೆ ಯಾವುದೇ ಆದೇಶವನ್ನೂ ನೀಡಿಲ್ಲ. ಅದೇ ವೇಳೆ, ಭಾರತ ಸರ್ಕಾರವು 12,919 ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಆದೇಶಿಸಿದೆ ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.

ಈ ಡೇಟಾಗಳ ಪ್ರಕಾರ ಸಿಎಎ ವಿರೋಧಿ ಹಾಗೂ ರೈತರ ಆಂದೋಲನದ ಸಂದರ್ಭದಲ್ಲಿ ಮೋದಿ ಸರ್ಕಾರವು ಟ್ವಿಟರ್ ಖಾತೆದಾರರ ಮಾಹಿತಿ ನೀಡುವಂತೆ ಹಾಗೂ ಖಾತೆಗಳ ನಿಷೇಧಕ್ಕೆ ಒತ್ತಡ ಹೇರಿದೆ ಎನ್ನುವುದು ಖಚಿತವಾಗಿದೆ. ಕೋಮುವಾದಿ ದ್ವೇಷ ಹರಡುವಿಕೆ, ಮಹಿಳಾ ಖಾತೆದಾರರ ಮೇಲೆ ಸೈಬರ್ ನಿಂದನೆ ದಾಳಿ, ಬಿಜೆಪಿ ಐಟಿ ಸೆಲ್ ಗಳು ಮುಕ್ತವಾಗಿ ಸುಳ್ಳು ಸುದ್ದಿ ಹರಡುತ್ತಿರುವ ಸಂದರ್ಭದಲ್ಲೇ ಮೋದಿ ಸರ್ಕಾರವು ಇಷ್ಟೆಲ್ಲಾ ಆದೇಶಗಳನ್ನು ನೀಡಿದೆ. ಬಿಜೆಪಿ ನಾಯಕರ ಟ್ವಿಟ್‌ಗಳನ್ನು ‘ತಿರುಚಿದ ಸುದ್ದಿ’ ಎಂದು ಸ್ವತಃ ಟ್ವಿಟರ್ ಫ್ಲ್ಯಾಗ್ ಮಾಡಿದ್ದರೂ ಸಹ ಅವುಗಳನ್ನು ತೆಗೆದುಹಾಕಿರಲಿಲ್ಲ. ಮೋದಿ ಸರಕಾರ ಟೀಕೆಗಳನ್ನು ಹತ್ತಿಕ್ಕುತ್ತದೆ ಎಂಬುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಈ ಅಧಿಕೃತ ಡೇಟಾವನ್ನು ನಿರಾಕರಿಸುವ ಮತ್ತು ಆರೋಪಗಳನ್ನು “ಸುಳ್ಳು” ಮತ್ತು “ವಿದೇಶಿ ಪಿತೂರಿ” ಎಂದು ಹೇಳುವ ಧೈರ್ಯವನ್ನು ಮೋದಿ ಸರ್ಕಾರ ಹೊಂದಿದೆಯೇ? ಸಚಿವ ರಾಜೀವ್ ಅವರೇ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಏಕೆಂದರೆ ಈಗ ನೀವು ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಸಾಕೇತ್ ಗೋಖಲೆ ಟ್ವಿಟ್ ನಲ್ಲಿ ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...