Homeಅಂಕಣಗಳುಮೋದಿ ಆಡಳಿತಕ್ಕೆ ಆರು ವರ್ಷ : ಸೂತಕದ ಮನೆಯಲ್ಲಿ ಸಂಭ್ರಮ

ಮೋದಿ ಆಡಳಿತಕ್ಕೆ ಆರು ವರ್ಷ : ಸೂತಕದ ಮನೆಯಲ್ಲಿ ಸಂಭ್ರಮ

- Advertisement -
- Advertisement -

ಈ ಸಂಚಿಕೆಯನ್ನು ನಾವು ಅಂತಿಮಗೊಳಿಸುತ್ತಿರುವ ಹೊತ್ತಿನಲ್ಲಿ ಯಡಿಯೂರಪ್ಪನವರು ಯಲಹಂಕ ಫ್ಲೈಓವರ್‌ಗೆ ಮರುನಾಮಕರಣ ಮಾಡಲು ಸಿದ್ಧರಾಗುತ್ತಿರುವ ಸುದ್ದಿ ಬಂದಿದೆ. ಅದೇ ಸಮಯದಲ್ಲಿ ದೆಹಲಿಯ ಸಿಂಹಾಸನದಲ್ಲಿ ಕುಳಿತಿರುವವರು ಎರಡನೆ ಸಾರಿ ಪಟ್ಟಾಭಿಷಕ್ತರಾಗಿ ಒಂದು ವರ್ಷ ಕಳೆಯುತ್ತಿದ್ದು, ಒಟ್ಟು ಆರು ವರ್ಷಗಳ ಸಂಭ್ರಮಕ್ಕೆ ಛೇ ಸಾಲ್ ಬೇಮಿಸಾಲ್ ಎಂಬ ಘೋಷಣೆ, ಹ್ಯಾಷ್‍ಟ್ಯಾಗ್‍ಅನ್ನು ಅಂತಿಮಗೊಳಿಸುತ್ತಿದ್ದಾರೆಂದು ಹೇಳಲಾಗಿದೆ.

ಇಲ್ಲೇ ಕರ್ನಾಟಕದಲ್ಲಿ ಜಾರ್ಖಂಡ್‍ನಿಂದ ಇಲ್ಲಿಗೆ ‘ಬಂದಿರುವ’ ಇಬ್ಬರು ವಲಸೆ ಕಾರ್ಮಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆಯೆಂದು ನೆರವು ನೀಡಲು ಹೋದ ಜನಶಕ್ತಿ ಮತ್ತು ಸ್ವಾನ್ ಕಾರ್ಯಕರ್ತರಿಗೆ ಅದು ‘ಅತ್ಯಾಚಾರ, ಮಾನವ ಕಳ್ಳಸಾಗಾಣಿಕೆ, ಅಕ್ರಮ ಬಂಧನ ಹಾಗೂ ಜೀತದ ದುಡಿಮೆ’ಯ ಪ್ರಕರಣವೆಂದು ಗೊತ್ತಾಗಿದೆ. ಆ ಮಹಿಳೆಯರಿಗೆ ಅಕಸ್ಮಾತ್ತಾಗಿ ಪರಿಚಯವಾದ್ದರಿಂದ ನೆರವು ನೀಡಲು ಇಲ್ಲೇ ಉಳಿದುಕೊಂಡ ನಿಕೊಲಸ್ ಮುರ್ಮು ಎಂಬ ಸಂತಾಲಿ ಯುವಕ ಈಗ ತಾನೇ ನಮ್ಮ ಕಚೇರಿಗೆ ಬಂದು ಹೋದರು.

ಆ ನಿಕೊಲಸ್ ಮುರ್ಮುವನ್ನು ನಾನೊಂದು ಪ್ರಶ್ನೆ ಕೇಳಿದೆ, ‘ನಿಮಗೆ ಸಿದ್ದು ಮುರ್ಮು ಗೊತ್ತಾ?’. ಆತ ನೀಡಿದ ಉತ್ತರ ನನಗೆ ಅಚ್ಚರಿ ಮೂಡಿಸಿತು. ‘ಅಂಗ್ರೇಜಿಗಳ ವಿರುದ್ಧ ನಮ್ಮ ಸಂತಾಲರು ನಡೆಸಿದ ಸಂಗ್ರಾಮದ ನಾಯಕನಾತ. ನಮಗೆ ಸ್ವಾತಂತ್ರ್ಯ ಬಂದಿತೆಂದು ಹೇಳುತ್ತಾರೆ. ನಮಗಂತೂ ಬಂದಿಲ್ಲ. ಬಂದಿದ್ದರೆ ಹೀಗೇಕಾಗುತ್ತಿತ್ತು?’ ಪಕ್ಕದಲ್ಲೇ ಕೂತಿದ್ದ ಅತ್ಯಾಚಾರವನ್ನು ಎದುರಿಸಿ ಗಟ್ಟಿಯಾಗಿ ನಿಂತಿರುವ ಮಹಿಳೆಯನ್ನು ತೋರಿಸಿ ಹೇಳಿದರು. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಪೊಲೀಸ್ ಸ್ಟೇಷನ್ನುಗಳನ್ನು ಸುತ್ತುತ್ತಾ ಇದ್ದ ಆಕೆ ತನ್ನನ್ನು ಬಾಧಿಸುತ್ತಿರುವ ಕಿವಿ ನೋವಿಗೆ ಪರಿಹಾರ ಕೇಳಲು ಬಂದಿದ್ದರು.

ಇಂತಹ ನೂರಲ್ಲ, ಸಾವಿರವಲ್ಲ, ಕೋಟಿ ಕಥೆಗಳು ಈ ದೇಶದ ವಲಸೆ ಕಾರ್ಮಿಕರದ್ದಿದೆ ಎಂದು ಕಳೆದ ಒಂದು ತಿಂಗಳಿಂದ ಗೊತ್ತಾಗುತ್ತಿದೆ. ಹಸಿವಿನಿಂದ ರೈಲಿನಲ್ಲೇ ಸತ್ತ ಮಗು, ನಡೆದೂ ನಡೆದೂ ಸತ್ತ ವಯಸ್ಕರು, ಬಹುಶಃ ದಿಕ್ಕೇಡಿಗಳಾಗಿರುವ ವೃದ್ಧರು ಇಂತಹ ಎಷ್ಟೋ ಎಷ್ಟೋ ಕಥೆಗಳು. ಕನಿಷ್ಠ ಸಂವೇದನೆಯಿರುವವರು ಯಾರಾಗಿದ್ದರೂ ಅವರಿಗೆ ನಾವು ಗಾಢ ಸೂತಕದ ಮಧ್ಯೆ ಇದ್ದೇವೆ ಎನಿಸಬೇಕು. ಆದರೆ ಹ್ಯಾಷ್‍ಟ್ಯಾಗ್‍ಗಳನ್ನು ಅಂತಿಮಗೊಳಿಸಿಕೊಂಡು ಸಂಭ್ರಮಿಸಲು ಯತ್ನಿಸುತ್ತಿರುವವರಿಗೆ ಅದು ತಟ್ಟಿದಂತೆ ಕಾಣುತ್ತಿಲ್ಲ.

ಅಂತಹುದೇ ಮನಸ್ಥಿತಿಯ ಭಾಗವಾಗಿ ಕರ್ನಾಟಕದ ಮುಖ್ಯಮಂತ್ರಿಯೂ ಫ್ಲೈಓವರ್ ಮರುನಾಮಕರಣಕ್ಕೆ ಮುಂದಾಗಿದ್ದಾರೆಯೇ? ಅಷ್ಟೇ ಇದ್ದಂತೆ ಕಾಣುತ್ತಿಲ್ಲ. ಸಾವರ್ಕರ್ ಹೆಸರನ್ನು ಇಡುವ ಘೋಷಣೆ ಮಾಡಿದಾಕ್ಷಣ ಅದರ ಬಗ್ಗೆ ಚರ್ಚೆ ಶುರುವಾಗುತ್ತದೆ. ಅಲ್ಲಿಗೆ ಕರ್ನಾಟಕಕ್ಕೆ ಕೇಂದ್ರದಿಂದಾದ ಅನ್ಯಾಯ, ವಲಸೆ ಕಾರ್ಮಿಕರ ಬವಣೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವುದು ಎಲ್ಲವೂ ಪಕ್ಕಕ್ಕೆ ಸರಿಯುತ್ತದೆ. ಇನ್ನು ಮುಂದೆ ಶ್ರಮಿಕರು ಕೆಲಸವಿಲ್ಲದೇ ಮತ್ತಷ್ಟು ಅಗ್ಗವಾಗುವುದು, ವ್ಯಾಪಾರಸ್ಥರು ವ್ಯಾಪಾರ ಕಡಿಮೆಯಾಗಿ ಕಂಗೆಡುವುದು ಇವ್ಯಾವುವೂ ಚರ್ಚೆಯ ವಿಷಯಗಳಾಗದಿರಬೇಕೆಂದರೆ ಇಂತಹ ವಿವಾದಗಳು ಮೇಲಿಂದ ಮೇಲೆ ಏಳುತ್ತಿರಬೇಕು.

ಹೀಗಿರುವಾಗ ಮಾಧ್ಯಮಗಳು ಆಳುವವರನ್ನು ಪ್ರಶ್ನಿಸುವ ಬದಲು, ತುತ್ತೂರಿಗಳಾಗಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಸರ್ಕಾರ ಮಾಡಿದ ಸರಿಯನ್ನು, ಸರಿಯೆಂದೂ, ತಪ್ಪನ್ನು ತಪ್ಪೆಂದೂ ಹೇಳುವ ಧೈರ್ಯವಾಗಲೀ, ವೃತ್ತಿ ಬದ್ಧತೆಯಾಗಲೀ ಇಲ್ಲವೇ ಇಲ್ಲ. ಹೀಗಾಗಿ ಪತ್ರಿಕೆಯಲ್ಲಿ ಈ ಸಾರಿ ಒಂದು ವರ್ಷದ ಕೇಂದ್ರ ಸರ್ಕಾರದ ಸಾಧನೆಯನ್ನು ಒರೆಗೆ ಹಚ್ಚಲು ಪ್ರಯತ್ನಿಸಲಾಗಿದೆ.

ಹಲವಾರು ತಜ್ಞರನ್ನು ಈ ಕುರಿತ ಲೇಖನಗಳನ್ನು ಬರೆದುಕೊಡಲು ಕೇಳಿದೆವು. ಕೆಲವರಿಗೆ 5 ವರ್ಷಗಳಲ್ಲಿ ನಡೆದದ್ದಕ್ಕೂ ಈ ಒಂದು ವರ್ಷಕ್ಕೂ ವ್ಯತ್ಯಾಸವಿದೆಯೆನಿಸಿದರೆ, ಇನ್ನು ಕೆಲವರಿಗೆ 5 ವರ್ಷಗಳಲ್ಲಿ ಮಾಡಲು ಯತ್ನಿಸಿ ವಿಫಲವಾದದ್ದಕ್ಕೆಲ್ಲಾ ಈಗ ಒಂದು ರೂಪ ಕೊಡುತ್ತಿದ್ದಾರೆ ಎನಿಸಿದೆ. ಆದರೆ, ಕೊರೊನಾ ಬಿಕ್ಕಟ್ಟನ್ನು ಸರ್ಕಾರವು ಜನವಿರೋಧಿ ನೀತಿಗಳನ್ನು ತರಲು ಬಳಸುತ್ತಿದೆ ಎಂಬ ವಿಚಾರದಲ್ಲಿ ಯಾರಿಗೂ ಅನುಮಾನವಿಲ್ಲ. ಉಳಿದೆಲ್ಲಾ ದೇಶಗಳು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಎಂದಿನ ನೀತಿಗಳನ್ನು ಮಾರ್ಪಡಿಸಿಕೊಂಡು ಜನಪರವಾದ ಕೆಲವು ನೀತಿಗಳನ್ನು ಜಾರಿಗೆ ತರಲು ಮುಂದಾಗಿದ್ದರೆ, ಭಾರತವು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಸಾಗಿದೆ.

ರೈತರು-ಕೃಷಿ ಕ್ಷೇತ್ರ, ಕಾರ್ಮಿಕರು-ಉದ್ದಿಮೆಗಳ ಕ್ಷೇತ, ಪರಿಸರ-ಅರಣ್ಯ ಒಳಗೊಂಡಂತೆ ಎಲ್ಲಾ ಕಡೆ ಒಂದೇ ಹಾಡು. ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಇದೊಂದು ರೀತಿಯ ಸಂಭ್ರಮವಿದ್ದಂತೆ ಕಾಣುತ್ತಿದೆ. ಎಲ್ಲವೂ ಸೂತಕದ ಮನೆಯ ಸಂಭ್ರಮವಲ್ಲದೇ ಇನ್ನೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...