Homeಅಂಕಣಗಳುಮೋದಿ ಆಡಳಿತಕ್ಕೆ ಆರು ವರ್ಷ : ಸೂತಕದ ಮನೆಯಲ್ಲಿ ಸಂಭ್ರಮ

ಮೋದಿ ಆಡಳಿತಕ್ಕೆ ಆರು ವರ್ಷ : ಸೂತಕದ ಮನೆಯಲ್ಲಿ ಸಂಭ್ರಮ

- Advertisement -
- Advertisement -

ಈ ಸಂಚಿಕೆಯನ್ನು ನಾವು ಅಂತಿಮಗೊಳಿಸುತ್ತಿರುವ ಹೊತ್ತಿನಲ್ಲಿ ಯಡಿಯೂರಪ್ಪನವರು ಯಲಹಂಕ ಫ್ಲೈಓವರ್‌ಗೆ ಮರುನಾಮಕರಣ ಮಾಡಲು ಸಿದ್ಧರಾಗುತ್ತಿರುವ ಸುದ್ದಿ ಬಂದಿದೆ. ಅದೇ ಸಮಯದಲ್ಲಿ ದೆಹಲಿಯ ಸಿಂಹಾಸನದಲ್ಲಿ ಕುಳಿತಿರುವವರು ಎರಡನೆ ಸಾರಿ ಪಟ್ಟಾಭಿಷಕ್ತರಾಗಿ ಒಂದು ವರ್ಷ ಕಳೆಯುತ್ತಿದ್ದು, ಒಟ್ಟು ಆರು ವರ್ಷಗಳ ಸಂಭ್ರಮಕ್ಕೆ ಛೇ ಸಾಲ್ ಬೇಮಿಸಾಲ್ ಎಂಬ ಘೋಷಣೆ, ಹ್ಯಾಷ್‍ಟ್ಯಾಗ್‍ಅನ್ನು ಅಂತಿಮಗೊಳಿಸುತ್ತಿದ್ದಾರೆಂದು ಹೇಳಲಾಗಿದೆ.

ಇಲ್ಲೇ ಕರ್ನಾಟಕದಲ್ಲಿ ಜಾರ್ಖಂಡ್‍ನಿಂದ ಇಲ್ಲಿಗೆ ‘ಬಂದಿರುವ’ ಇಬ್ಬರು ವಲಸೆ ಕಾರ್ಮಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆಯೆಂದು ನೆರವು ನೀಡಲು ಹೋದ ಜನಶಕ್ತಿ ಮತ್ತು ಸ್ವಾನ್ ಕಾರ್ಯಕರ್ತರಿಗೆ ಅದು ‘ಅತ್ಯಾಚಾರ, ಮಾನವ ಕಳ್ಳಸಾಗಾಣಿಕೆ, ಅಕ್ರಮ ಬಂಧನ ಹಾಗೂ ಜೀತದ ದುಡಿಮೆ’ಯ ಪ್ರಕರಣವೆಂದು ಗೊತ್ತಾಗಿದೆ. ಆ ಮಹಿಳೆಯರಿಗೆ ಅಕಸ್ಮಾತ್ತಾಗಿ ಪರಿಚಯವಾದ್ದರಿಂದ ನೆರವು ನೀಡಲು ಇಲ್ಲೇ ಉಳಿದುಕೊಂಡ ನಿಕೊಲಸ್ ಮುರ್ಮು ಎಂಬ ಸಂತಾಲಿ ಯುವಕ ಈಗ ತಾನೇ ನಮ್ಮ ಕಚೇರಿಗೆ ಬಂದು ಹೋದರು.

ಆ ನಿಕೊಲಸ್ ಮುರ್ಮುವನ್ನು ನಾನೊಂದು ಪ್ರಶ್ನೆ ಕೇಳಿದೆ, ‘ನಿಮಗೆ ಸಿದ್ದು ಮುರ್ಮು ಗೊತ್ತಾ?’. ಆತ ನೀಡಿದ ಉತ್ತರ ನನಗೆ ಅಚ್ಚರಿ ಮೂಡಿಸಿತು. ‘ಅಂಗ್ರೇಜಿಗಳ ವಿರುದ್ಧ ನಮ್ಮ ಸಂತಾಲರು ನಡೆಸಿದ ಸಂಗ್ರಾಮದ ನಾಯಕನಾತ. ನಮಗೆ ಸ್ವಾತಂತ್ರ್ಯ ಬಂದಿತೆಂದು ಹೇಳುತ್ತಾರೆ. ನಮಗಂತೂ ಬಂದಿಲ್ಲ. ಬಂದಿದ್ದರೆ ಹೀಗೇಕಾಗುತ್ತಿತ್ತು?’ ಪಕ್ಕದಲ್ಲೇ ಕೂತಿದ್ದ ಅತ್ಯಾಚಾರವನ್ನು ಎದುರಿಸಿ ಗಟ್ಟಿಯಾಗಿ ನಿಂತಿರುವ ಮಹಿಳೆಯನ್ನು ತೋರಿಸಿ ಹೇಳಿದರು. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಪೊಲೀಸ್ ಸ್ಟೇಷನ್ನುಗಳನ್ನು ಸುತ್ತುತ್ತಾ ಇದ್ದ ಆಕೆ ತನ್ನನ್ನು ಬಾಧಿಸುತ್ತಿರುವ ಕಿವಿ ನೋವಿಗೆ ಪರಿಹಾರ ಕೇಳಲು ಬಂದಿದ್ದರು.

ಇಂತಹ ನೂರಲ್ಲ, ಸಾವಿರವಲ್ಲ, ಕೋಟಿ ಕಥೆಗಳು ಈ ದೇಶದ ವಲಸೆ ಕಾರ್ಮಿಕರದ್ದಿದೆ ಎಂದು ಕಳೆದ ಒಂದು ತಿಂಗಳಿಂದ ಗೊತ್ತಾಗುತ್ತಿದೆ. ಹಸಿವಿನಿಂದ ರೈಲಿನಲ್ಲೇ ಸತ್ತ ಮಗು, ನಡೆದೂ ನಡೆದೂ ಸತ್ತ ವಯಸ್ಕರು, ಬಹುಶಃ ದಿಕ್ಕೇಡಿಗಳಾಗಿರುವ ವೃದ್ಧರು ಇಂತಹ ಎಷ್ಟೋ ಎಷ್ಟೋ ಕಥೆಗಳು. ಕನಿಷ್ಠ ಸಂವೇದನೆಯಿರುವವರು ಯಾರಾಗಿದ್ದರೂ ಅವರಿಗೆ ನಾವು ಗಾಢ ಸೂತಕದ ಮಧ್ಯೆ ಇದ್ದೇವೆ ಎನಿಸಬೇಕು. ಆದರೆ ಹ್ಯಾಷ್‍ಟ್ಯಾಗ್‍ಗಳನ್ನು ಅಂತಿಮಗೊಳಿಸಿಕೊಂಡು ಸಂಭ್ರಮಿಸಲು ಯತ್ನಿಸುತ್ತಿರುವವರಿಗೆ ಅದು ತಟ್ಟಿದಂತೆ ಕಾಣುತ್ತಿಲ್ಲ.

ಅಂತಹುದೇ ಮನಸ್ಥಿತಿಯ ಭಾಗವಾಗಿ ಕರ್ನಾಟಕದ ಮುಖ್ಯಮಂತ್ರಿಯೂ ಫ್ಲೈಓವರ್ ಮರುನಾಮಕರಣಕ್ಕೆ ಮುಂದಾಗಿದ್ದಾರೆಯೇ? ಅಷ್ಟೇ ಇದ್ದಂತೆ ಕಾಣುತ್ತಿಲ್ಲ. ಸಾವರ್ಕರ್ ಹೆಸರನ್ನು ಇಡುವ ಘೋಷಣೆ ಮಾಡಿದಾಕ್ಷಣ ಅದರ ಬಗ್ಗೆ ಚರ್ಚೆ ಶುರುವಾಗುತ್ತದೆ. ಅಲ್ಲಿಗೆ ಕರ್ನಾಟಕಕ್ಕೆ ಕೇಂದ್ರದಿಂದಾದ ಅನ್ಯಾಯ, ವಲಸೆ ಕಾರ್ಮಿಕರ ಬವಣೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವುದು ಎಲ್ಲವೂ ಪಕ್ಕಕ್ಕೆ ಸರಿಯುತ್ತದೆ. ಇನ್ನು ಮುಂದೆ ಶ್ರಮಿಕರು ಕೆಲಸವಿಲ್ಲದೇ ಮತ್ತಷ್ಟು ಅಗ್ಗವಾಗುವುದು, ವ್ಯಾಪಾರಸ್ಥರು ವ್ಯಾಪಾರ ಕಡಿಮೆಯಾಗಿ ಕಂಗೆಡುವುದು ಇವ್ಯಾವುವೂ ಚರ್ಚೆಯ ವಿಷಯಗಳಾಗದಿರಬೇಕೆಂದರೆ ಇಂತಹ ವಿವಾದಗಳು ಮೇಲಿಂದ ಮೇಲೆ ಏಳುತ್ತಿರಬೇಕು.

ಹೀಗಿರುವಾಗ ಮಾಧ್ಯಮಗಳು ಆಳುವವರನ್ನು ಪ್ರಶ್ನಿಸುವ ಬದಲು, ತುತ್ತೂರಿಗಳಾಗಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಸರ್ಕಾರ ಮಾಡಿದ ಸರಿಯನ್ನು, ಸರಿಯೆಂದೂ, ತಪ್ಪನ್ನು ತಪ್ಪೆಂದೂ ಹೇಳುವ ಧೈರ್ಯವಾಗಲೀ, ವೃತ್ತಿ ಬದ್ಧತೆಯಾಗಲೀ ಇಲ್ಲವೇ ಇಲ್ಲ. ಹೀಗಾಗಿ ಪತ್ರಿಕೆಯಲ್ಲಿ ಈ ಸಾರಿ ಒಂದು ವರ್ಷದ ಕೇಂದ್ರ ಸರ್ಕಾರದ ಸಾಧನೆಯನ್ನು ಒರೆಗೆ ಹಚ್ಚಲು ಪ್ರಯತ್ನಿಸಲಾಗಿದೆ.

ಹಲವಾರು ತಜ್ಞರನ್ನು ಈ ಕುರಿತ ಲೇಖನಗಳನ್ನು ಬರೆದುಕೊಡಲು ಕೇಳಿದೆವು. ಕೆಲವರಿಗೆ 5 ವರ್ಷಗಳಲ್ಲಿ ನಡೆದದ್ದಕ್ಕೂ ಈ ಒಂದು ವರ್ಷಕ್ಕೂ ವ್ಯತ್ಯಾಸವಿದೆಯೆನಿಸಿದರೆ, ಇನ್ನು ಕೆಲವರಿಗೆ 5 ವರ್ಷಗಳಲ್ಲಿ ಮಾಡಲು ಯತ್ನಿಸಿ ವಿಫಲವಾದದ್ದಕ್ಕೆಲ್ಲಾ ಈಗ ಒಂದು ರೂಪ ಕೊಡುತ್ತಿದ್ದಾರೆ ಎನಿಸಿದೆ. ಆದರೆ, ಕೊರೊನಾ ಬಿಕ್ಕಟ್ಟನ್ನು ಸರ್ಕಾರವು ಜನವಿರೋಧಿ ನೀತಿಗಳನ್ನು ತರಲು ಬಳಸುತ್ತಿದೆ ಎಂಬ ವಿಚಾರದಲ್ಲಿ ಯಾರಿಗೂ ಅನುಮಾನವಿಲ್ಲ. ಉಳಿದೆಲ್ಲಾ ದೇಶಗಳು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಎಂದಿನ ನೀತಿಗಳನ್ನು ಮಾರ್ಪಡಿಸಿಕೊಂಡು ಜನಪರವಾದ ಕೆಲವು ನೀತಿಗಳನ್ನು ಜಾರಿಗೆ ತರಲು ಮುಂದಾಗಿದ್ದರೆ, ಭಾರತವು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಸಾಗಿದೆ.

ರೈತರು-ಕೃಷಿ ಕ್ಷೇತ್ರ, ಕಾರ್ಮಿಕರು-ಉದ್ದಿಮೆಗಳ ಕ್ಷೇತ, ಪರಿಸರ-ಅರಣ್ಯ ಒಳಗೊಂಡಂತೆ ಎಲ್ಲಾ ಕಡೆ ಒಂದೇ ಹಾಡು. ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಇದೊಂದು ರೀತಿಯ ಸಂಭ್ರಮವಿದ್ದಂತೆ ಕಾಣುತ್ತಿದೆ. ಎಲ್ಲವೂ ಸೂತಕದ ಮನೆಯ ಸಂಭ್ರಮವಲ್ಲದೇ ಇನ್ನೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...