ರೈತ ಪ್ರತಿಭಟನೆಯ ಪರವಾಗಿ ಹರಿಯಾಣದಲ್ಲಿ ನಡೆದ ಈ ಮಹಾ ಪಂಚಾಯತ್ನಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಧ್ಯಮಗಳು ಬರೆದಿವೆ/ಪ್ರಕಟಿಸಿವೆ. ಆದರೆ ಅವು ಹೈಲೈಟ್ ಮಾಡದ ಒಂದು ಮಿಸ್ಸಿಂಗ್ ಪಾಯಿಂಟ್ ಇದೆ: ’ಮೋದಿ-ಶಾ ಮಾತುಕತೆಯಲ್ಲಿ ಪಾಲ್ಗೊಳ್ಳಲಿ/ ಮಾತುಕತೆಗೆ ಬರಲಿ’ ಎಂಬ ನಿರ್ಣಯ!
ನವೆಂಬರ್ನಿಂದ ದೆಹಲಿಯ ಹೊರಗಿನ ರೈತ ಪ್ರತಿಭಟನೆಯು ಹೃದಯಭಾಗದಲ್ಲಿ ಮೂರು ಹೊಸ ಕಾನೂನುಗಳನ್ನು ರದ್ದುಗೊಳಿಸುವಂತೆ ನಡೆದಿರುವ ಪ್ರತಿಭಟನೆಗೆ ಬೆಂಬಲಾರ್ಥವಾಗಿ, ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ಬುಧವಾರ ನಡೆದ ರೈತರ “ಮಹಾಪಂಚಾಯತ್”ಗೆ ಭಾರಿ ಜನಸಮೂಹ ಜಮಾಯಿಸಿತ್ತು. ಉತ್ತರಪ್ರದೇಶದಲ್ಲಿ ಕಳೆದ ಕೆಲವು ದಿನಗಳಲ್ಲಿ ಇಂತಹ ಹಲವಾರು ಸಮಾವೇಶಗಳು ಕಂಡುಬಂದಿವೆ, ಆದರೆ ಬುಧವಾರದ ಸಭೆ ಅದನ್ನು ಹರಿಯಾಣದ ಜಾಟ್ ಹೃದಯಭಾಗಕ್ಕೆ ಕೊಂಡೊಯ್ದಿದೆ.
ಇದನ್ನೂ ಓದಿ: ’ಒಂದು ಟ್ವೀಟ್ನಿಂದ ನಿಮ್ಮ ಐಕ್ಯತೆ ಧಕ್ಕೆ ಆಗುವುದಾದರೆ…’ ಭಾರತೀಯ ಸಲೆಬ್ರಿಟಿಗಳ ಕಪಾಳಕ್ಕೆ ಬಾರಿಸಿದ ತಾಪ್ಸಿ…
ಹರಿಯಾಣದಲ್ಲಿ ಜಾಟ್ ರಾಜಕೀಯದ ಕೇಂದ್ರಬಿಂದುವೆಂದು ಪರಿಗಣಿಸಲಾದ ಜಿಂದ್ ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಭಾಷಣ ಮಾಡಿದರು. (ಟಿಕಾಯತ್ ಮತ್ತು ಇತರರು ವೇದಿಕೆಯಲ್ಲಿದ್ದಾಗ ಅದು ಇದ್ದಕ್ಕಿದ್ದಂತೆ ಕುಸಿಯಿತು, ಸಭೆಯನ್ನು ಸಂಕ್ಷಿಪ್ತವಾಗಿ ಅಡ್ಡಿಪಡಿಸಿತು ಅಷ್ಟೇ)
“ಹೊಸ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಅಧಿಕಾರದಲ್ಲಿ ಉಳಿಯುವುದು ಕಷ್ಟವಾಗುತ್ತದೆ” ಎಂದು ಟಿಕಾಯತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
“ನಾವು ಇಲ್ಲಿಯವರೆಗೆ ’ಬಿಲ್ ವಾಪ್ಸಿ’ (ಕೃಷಿ ಕಾನೂನುಗಳನ್ನು ರದ್ದುಪಡಿಸುವುದು) ಬಗ್ಗೆ ಮಾತನಾಡಿದ್ದೇವೆ. ಸರ್ಕಾರ ಎಚ್ಚರಿಕೆಯಿಂದ ಆಲಿಸಬೇಕು. ಯುವಕರು ’ಗದ್ದಿ ವಾಪ್ಸಿ’ (ಅಧಿಕಾರದಿಂದ ತೆಗೆದುಹಾಕುವುದು)ಗೆ ಕರೆ ಮಾಡಿದರೆ ನೀವು ಏನು ಮಾಡುತ್ತೀರಿ?” ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: ಹಿರಿಯ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
ಗಣರಾಜ್ಯ ದಿನದ ಟ್ರಾಕ್ಟರ್ ರ್ಯಾಲಿಯಲ್ಲಿ ಕೆಲವು ಸಂಚುಕೊರರು ಮಾಡಿದ ಹಿಂಸಾಚಾರದ ಹಿನ್ನಡೆಯ ನಂತರ ರೈತ ಆಂದೋಲನವು ಸಂಚಯನಗೊಳ್ಳಲು ಕಳೆದ ವಾರ ಟಿಕಾಯತ್ ಮಾಡಿದ ಭಾವನಾತ್ಮಕ ಭಾಷಣವೂ ಪ್ರಬಲ ಕಾರಣವಾಗಿದೆ.
ಜನವರಿ 26 ರ ಹಿಂಸಾಚಾರದ ನಂತರ, ದೆಹಲಿಯ ಗಡಿಯ ಹೊರಗಿನ ಪ್ರತಿಭಟನಾ ಸ್ಥಳಗಳನ್ನು ಪೊಲೀಸರು ಬ್ಯಾರಿಕೇಡ್, ಸಿಮೆಂಟ್ ಗೋಡೆ, ಕಬ್ಬಿಣದ ಮೊಳೆಗಳು, ತಂತಿಗಳ ಮೂಲಕ ಸುತ್ತುವರೆದು, ಅಲ್ಲಿ ಒಂದು ಕೋಟೆಯನ್ನೆ ನಿರ್ಮಿಸಿದ್ದಾರೆ.
ಬುಧವಾರ ಮಹಾಪಂಚಾಯತ್ ನಡೆದ ಕಾಂಡೇಲಾ ಪಟ್ಟಣವು, ದೆಹಲಿ-ಯುಪಿ ಗಾಜಿಪುರ ಗಡಿಯಲ್ಲಿ ಟಿಕಾಯತ್ ಅವರ ಧರಣಿಗೆ ಜನರನ್ನು ಕಳುಹಿಸಿದ ಆ ಪ್ರದೇಶದ ಮೊದಲನೆಯ ಪಟ್ಟಣವಾಗಿದೆ.
ಇದನ್ನೂ ಓದಿ: ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?
ಮಹಾಪಂಚಾಯತ್ನಲ್ಲಿ ಐದು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಕೃಷಿ ಕಾನೂನುಗಳನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂಬ ಬೇಡಿಕೆಯ ಹೊರತಾಗಿ, ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಮತ್ತು ಗಣರಾಜ್ಯೋತ್ಸವದ ಹಿಂಸಾಚಾರದ ನಂತರ ಬಂಧಿತ ರೈತರನ್ನು ಬಿಡುಗಡೆ ಮಾಡಲು ಕಾನೂನು ಖಾತರಿ ನೀಡಬೇಕೆಂದು ನಿರ್ಣಯಗಳು ಕರೆ ನೀಡಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೇರವಾಗಿ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಬೇಕು ಎಂದೂ ಸಮಾವೇಶ ಆಗ್ರಹಿಸಿದೆ.
ಜಿಂದ್ನ ಜಾಟ್ ರೈತರ ಬೆಂಬಲವು ಮುಖ್ಯವಾಗಿ ಬಿಜೆಪಿಯ ಹರಿಯಾಣ ಮಿತ್ರ ದುಶ್ಯಂತ್ ಚೌತಾಲ್ ಅವರಿಗೆ ಹಿನ್ನಡೆಯಾಗಿ ಪರಿಣಮಿಸಬಹುದು. ಜಿಂದ್ ಜಿಲ್ಲೆಯಲ್ಲಿ ಮೂರು ಶಾಸಕರನ್ನು ದುಷ್ಯಂತ್ ಅವರ ಜೆಜೆಪಿ ಹೊಂದಿದೆ. ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಳ್ಳದೇ ಇದ್ದರೆ, ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಅದು ದೊಡ್ಡ ನಷ್ಟವನ್ನು ಉಂಟುಮಾಡಲಿದೆ ಎಂದು ಅವರ ಪಕ್ಷದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ನಟ-ನಟಿಯರು ಬೀದಿಗಿಳಿದು ರೈತರನ್ನು ಬೆಂಬಲಿಸಬೇಕು – ಸಿದ್ದರಾಮಯ್ಯ ಆಗ್ರಹ


