Homeಮುಖಪುಟಮಾಂಸಾಹಾರಿಗಳ ಬಗ್ಗೆ ಮೋಹನ್ ಭಾಗವತ್‌ ಕ್ಷುಲ್ಲಕ ಹೇಳಿಕೆ; ‘ಮಾಂಸ ತಿನ್ನುವವರ ಮತ ಬಿಜೆಪಿಗೆ ಬೇಡವೇ?’ ಎಂದ...

ಮಾಂಸಾಹಾರಿಗಳ ಬಗ್ಗೆ ಮೋಹನ್ ಭಾಗವತ್‌ ಕ್ಷುಲ್ಲಕ ಹೇಳಿಕೆ; ‘ಮಾಂಸ ತಿನ್ನುವವರ ಮತ ಬಿಜೆಪಿಗೆ ಬೇಡವೇ?’ ಎಂದ ಜನತೆ

- Advertisement -
- Advertisement -

ಮಾಂಸಾಹಾರ ಸೇವಿಸುವವರ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್‌ ಕ್ಲುಲ್ಲಕವಾಗಿ ಮಾತನಾಡಿದ್ದಾರೆ. ಮಾಂಸಾಹಾರವನ್ನು ತಾಮಸಿಕ ಆಹಾರ ಎಂದು ಜರಿದು, ಟೀಕೆಗೆ ಗುರಿಯಾಗಿದ್ದಾರೆ.

“ಮಾಂಸಾಹಾರ ಸೇವಿಸುವವರು ಮಾಂಸಾಹಾರ ಸೇವಿಸುವಾಗ ಶಿಸ್ತು ಅನುಸರಿಸಲು ಪ್ರಯತ್ನಿಸಬೇಕು” ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವತ್ ಮಾತನಾಡಿದ್ದಾರೆ.

ಜನರು ಸಾಮಾನ್ಯವಾಗಿ ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿರುವ ‘ತಾಮಸಿಕ ಆಹಾರ’ವನ್ನು ಸೇವಿಸುವುದನ್ನು ತಪ್ಪಿಸಬೇಕು. ನೀವು ತಪ್ಪು ಆಹಾರವನ್ನು ಸೇವಿಸಿದರೆ, ನೀವು ತಪ್ಪು ದಾರಿಯಲ್ಲಿ ಹೋಗುತ್ತೀರಿ ಎಂದು ಹೇಳಲಾಗುತ್ತದೆ. ಆದ್ದರಿಂದ ತಾಮಸಿಕ ಆಹಾರವನ್ನು ಸೇವಿಸಬೇಡಿ ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಾಶ್ಚಿಮಾತ್ಯ ದೇಶಗಳ ಮಾಂಸಾಹಾರಿಗಳೊಂದಿಗೆ ಹೋಲಿಕೆ ಮಾಡಿದ ಭಾಗವತ್, “ಭಾರತದಲ್ಲಿ ಮಾಂಸ ಮತ್ತು ಮೀನುಗಳನ್ನು ಸೇವಿಸುವವರು ‘ಶ್ರಾವಣ’ ಮಾಸ ಹಾಗೂ ವಾರದ ಕೆಲವು ದಿನಗಳಲ್ಲಿ ತಮ್ಮ ದೈನಂದಿನ ಆಹಾರ ಪದ್ಧತಿಯನ್ನು ತ್ಯಜಿಸುತ್ತಾರೆ” ಎಂದು ಹೇಳಿದ್ದಾರೆ.

“ಮಾಂಸ ಸೇವನೆಯಲ್ಲಿ ಶಿಸ್ತನ್ನು ಅನುಸರಿಸಲು ಪ್ರಯತ್ನಿಸಿ. ಇದರಿಂದ (ನಿಮ್ಮ) ಮನಸ್ಸು ಚಂಚಲವಾಗುವುದಿಲ್ಲ” ಎಂದು ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನವರಾತ್ರಿ ಆಚರಣೆಯ ಹೊತ್ತಿನಲ್ಲಿ ಭಾಗವತ್ ಹೇಳಿಕೆ ಹೊರಬಿದ್ದಿದೆ. “ಈ ಸಮಯದಲ್ಲಿ ಮಾಂಸಾಹಾರದಿಂದ ಜನರು ದೂರ ಉಳಿಯುತ್ತಾರೆ. ಆದಾಗ್ಯೂ, ದುರ್ಗಾಪೂಜಾ ಹಬ್ಬದ ಕಾರಣಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿರುವ ಪಶ್ಚಿಮ ಬಂಗಾಳದಂತಹ ಭಾರತದ ಕೆಲವು ಭಾಗಗಳಲ್ಲಿ ಜನರು ಈ ಅವಧಿಯಲ್ಲಿ ಮಾಂಸಾಹಾರವನ್ನು ಸೇವಿಸುತ್ತಾರೆ” ಎಂದು ತಿಳಿಸಿದ್ದಾರೆ.

ಭಾಗವತ್ ಹೇಳಿಕೆಗೆ ವಿರೋಧ; ಬಿಜೆಪಿಗೆ ಮತ ಹಾಕಬಾರದೇ ಎಂದು ಕೇಳಿದ ಜನತೆ

ಮಾಂಸಾಹಾರದ ಕುರಿತು ಕ್ಷುಲ್ಲಕವಾಗಿ ಮಾತನಾಡಿರುವುದನ್ನು ಅನೇಕರು ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

“ಮಾಂಸಾಹಾರ ತಿನ್ನುವವರು ಮಾಂಸಾಹಾರ ವಿರೋಧಿಗಳಿಗೆ ಮತ ನೀಡುವ ಕೆಟ್ಟ ಕೆಲಸ ಮಾಡಬೇಡಿ, ದಮ್ಮಯ್ಯ” ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಮನವಿ ಮಾಡಿದ್ದಾರೆ.

“ನೂರಕ್ಕೆ 99.99 % ನೊಬೆಲ್‌ ಪ್ರಶಸ್ತಿ ವಿಜೇತರು, ಒಲಂಪಿಕ್ ಚಿನ್ನದ ಪದಕ ಪಡೆದವರು, ಹೊಸ ಹೊಸ ವೈಜ್ಞಾನಿಕ ಅವಿಷ್ಕಾರಗಳಿಗೆ ಕಾರಣಕರ್ತರು, ಪ್ರಖ್ಯಾತ ಸಾಹಿತಿಗಳು ಎಲ್ಲರೂ ಮಾಂಸಾಹಾರಿಗಳಾಗಿದ್ದಾರೆ. ಅದರಲ್ಲೂ ಬೀಫ್ ಈಟರ್ಸ್. ಆದರೆ ನಮ್ಮ ದೇಶದ ಹುಲ್ಲು ಮೇಯುವವರ ಅವಿಷ್ಕಾರಗಳು ಇದರಲ್ಲಿ ಎಷ್ಟಿದೆ? ಯಾವುದೇ ಆಹಾರವಾಗಲಿ ಅದರಲ್ಲಿರುವುದು ಬರಿಯ ಫ್ಯಾಟ್, ಪ್ರೋಟೀನ್ ಕಾರ್ಬೊ ಹೈಡ್ರೇಟ್. ಇಂತಹ ಮೂಢರು ನಮ್ಮ ದೇಶ ಆಳುವ ದುರ್ಗತಿ ಒದಗಿ ಬಂತಲ್ಲ ಅನ್ನುವುದೇ ಒಂದು ನಾವೆಂದೂ ಕಾಣದಿದ್ದ ದೊಡ್ಡ ದುರಂತ” ಎಂದು ಕೃಷ್ಣಮೂರ್ತಿ ಶ್ರೀನಾಥ್‌ ಪೋಸ್ಟ್ ಮಾಡಿದ್ದಾರೆ.

“ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಅನ್ನುವುದು, ಆಮೇಲೆ ಗೋಮಾಂಸ ತಿನ್ನಬಾರದು ಅನ್ನುವುದು ಟೆಸ್ಟ್ ಡೋಸ್ಗಳು. ಇವರ ಮೂಲ ಉದ್ದೇಶವೇ ಇದು- ಮಾಂಸ ತಿನ್ನುವವರು ಕೀಳು- ಎಂದು ಹೇಳುವುದು. ಇದನ್ನು ದೇಶದ ಬಹುಸಂಖ್ಯಾತ ಮಾಂಸಾಹಾರಿಗಳು ಅರ್ಥಮಾಡಿಕೊಳ್ಳಬೇಕು” ಎಂದು ಪ್ರಕಾಶ್ ರಾಜ್‌ ಮೇಹು ಎಚ್ಚರಿಸಿದ್ದಾರೆ.

ಇದನ್ನೂ ಓದಿರಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಶಶಿ ತರೂರು v/s ಮಲ್ಲಿಕಾರ್ಜುನ ಖರ್ಗೆ; ದಿಗ್ವಿಜಯ್ ಸಿಂಗ್ ಕಣದಿಂದ ಹೊರಕ್ಕೆ

“ಸರ್ವ ಜನಾಂಗದ ಶಾಂತಿಯ ತೋಟವನ್ನು ಆಶಿಸಿದ ಕುವೆಂಪು ಮಾಂಸಾಹಾರಿ. ಕರುಣೆಯ ಮೂರ್ತಿ ಬುದ್ಧನೂ ಮಾಂಸಾಹಾರಿ. ಆರು‌ ಮಿಲಿಯ ಯಹೂದಿಗಳನ್ನು ಗ್ಯಾಸ್ ಚೇಂಬರಿನಲ್ಲಿ‌ ಕೊಂದ ಹಿಟ್ಲರ್ ಸಸ್ಯಾಹಾರಿ. ಶಾಂತಿಧೂತ ಗಾಂಧಿಯನ್ನು ಕೊಂದ ಗೋಡ್ಸೆ ಸಸ್ಯಾಹಾರಿ” ಎಂದು ಉದಯ್‌ ಗೋಂಕರ್‌ ಬರೆದಿದ್ದಾರೆ.

“ಮಾಂಸಾಹಾರ ಮಾಡುವವರ ವೋಟ್ ಬಿಜೆಪಿಗೆ ಬೇಡ ಅಂತ ಫರ್ಮಾನು ಹೊರಡಿಸಿ. ದಿನ ನಾನ್ಸೆನ್ಸ್ ಹೇಳಿಕೆ ಕೊಡೋದು ತಪ್ಪತ್ತದೆ” ಎಂದು ಶರತ್‌ಚಂದ್ರ ಒತ್ತಾಯಿಸಿದ್ದಾರೆ.

“ಯುಗಾದಿ ಹಬ್ಬದ ಟೈಮ್‌ನಲ್ಲಿ ಹಲಾಲ್ ಬೇಡ, ಜಟಕ ಮಾಂಸ ತಿನ್ನಿ ಅಂತ ಇವರುಗಳೇ ಹಿಂದೂವಿ ಜಟಕ ಮಾಂಸಾಹಾರದ ಪ್ರಚಾರ ಮಾಡಿದರು. ಆಯುಧ ಪೂಜೆ ಟೈಮ್‌ಗೆ ಕರೆಕ್ಟಆಗಿ ಮಾಂಸ ತಿಂದರೆ ನೀವು ಹಿಂಸಾ ವಿನೋದಿಗಳು ಅಂತಿದಾರೆ” ಎಂದು ನಾಗೇಗೌಡ ಕೀಲಾರ ಅವರು ಕುಟುಕಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ತಿನ್ನುವ ಆಹಾರದ ಆಧಾರದ ಮೇಲೂ ಸಮಾಜವನ್ನು ವಿಭಜಿಸುವ ಇವರ ವಿಚಾರಗಳ ಬಗ್ಗೆ ಜನತೆ ಎಚ್ಚತ್ತು ಕೊಳ್ಳದಿದ್ದಲ್ಲಿ ಮುಂದೆ ಇನ್ನಷ್ಟು ವಿಪತ್ತು ಕಾದಿದೆ, ಇವರ ಪುರೋಹಿತಶಾಹಿ ಧೋರಣೆಗೆ ಧಿಕ್ಕಾರ, ಮಾಂಸ ತಿಂದವರಿಂದ ಅಲ್ಲಾ ಸ್ವಾಮಿ ದೇಶ ಹಾಳಾಗಿರುವುದು, ತುಪ್ಪ ತಿಂದವರಿಂದ, ಇವರು ತಮ್ಮ ಪರಂಪರೆಯನ್ನು ಒಮ್ಮೆ ತಿರುವಿ ಹಾಕಲಿ ಯಜ್ಞ, ಯಾಗದ ಸಂಧರ್ಭದಲ್ಲಿ ಋತ್ವಿಕರುಗಳಿಗೆ ಎಳೆ ಹಸುವಿನ ಮಾಂಸ ಬಡಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದದ್ದೇ, ಈಗ ಗೊಡ್ಡು ಉಪದೇಶ ನೀಡುವ ಬದಲು ಎಲ್ಲರಿಗೂ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಮುಂತಾದ ಮೂಲಭೂತ ಸೌಕರ್ಯ ಒದಗಿಸುವಂತೆ ತಮ್ಮ ಸರ್ಕಾರಕ್ಕೆ ನಿರ್ದೇಶಿಸಿದರೆ ಅನುಕೂಲ ಆಗುತ್ತೆ, ಜನರು ಇವರ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು.

  2. What nonsence! God has created everything for human being. It is his or hercwish to consume meat, fish or vegetables. It is none of anyone’s business to set rules on food consumption. If anyone wants eat meat let him/her consume meat, who the hell we are to tell others? First of all because of the price hike and GST people are slogging to get food and this guy is delivering speech about eating non veg. First let him tell the supremos to provide shelter and food to the people who go to sleep without food then deliver speeches on consuming non veg.

LEAVE A REPLY

Please enter your comment!
Please enter your name here

- Advertisment -

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...