Homeಮುಖಪುಟಮಾಂಸಾಹಾರಿಗಳ ಬಗ್ಗೆ ಮೋಹನ್ ಭಾಗವತ್‌ ಕ್ಷುಲ್ಲಕ ಹೇಳಿಕೆ; ‘ಮಾಂಸ ತಿನ್ನುವವರ ಮತ ಬಿಜೆಪಿಗೆ ಬೇಡವೇ?’ ಎಂದ...

ಮಾಂಸಾಹಾರಿಗಳ ಬಗ್ಗೆ ಮೋಹನ್ ಭಾಗವತ್‌ ಕ್ಷುಲ್ಲಕ ಹೇಳಿಕೆ; ‘ಮಾಂಸ ತಿನ್ನುವವರ ಮತ ಬಿಜೆಪಿಗೆ ಬೇಡವೇ?’ ಎಂದ ಜನತೆ

- Advertisement -
- Advertisement -

ಮಾಂಸಾಹಾರ ಸೇವಿಸುವವರ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್‌ ಕ್ಲುಲ್ಲಕವಾಗಿ ಮಾತನಾಡಿದ್ದಾರೆ. ಮಾಂಸಾಹಾರವನ್ನು ತಾಮಸಿಕ ಆಹಾರ ಎಂದು ಜರಿದು, ಟೀಕೆಗೆ ಗುರಿಯಾಗಿದ್ದಾರೆ.

“ಮಾಂಸಾಹಾರ ಸೇವಿಸುವವರು ಮಾಂಸಾಹಾರ ಸೇವಿಸುವಾಗ ಶಿಸ್ತು ಅನುಸರಿಸಲು ಪ್ರಯತ್ನಿಸಬೇಕು” ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವತ್ ಮಾತನಾಡಿದ್ದಾರೆ.

ಜನರು ಸಾಮಾನ್ಯವಾಗಿ ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿರುವ ‘ತಾಮಸಿಕ ಆಹಾರ’ವನ್ನು ಸೇವಿಸುವುದನ್ನು ತಪ್ಪಿಸಬೇಕು. ನೀವು ತಪ್ಪು ಆಹಾರವನ್ನು ಸೇವಿಸಿದರೆ, ನೀವು ತಪ್ಪು ದಾರಿಯಲ್ಲಿ ಹೋಗುತ್ತೀರಿ ಎಂದು ಹೇಳಲಾಗುತ್ತದೆ. ಆದ್ದರಿಂದ ತಾಮಸಿಕ ಆಹಾರವನ್ನು ಸೇವಿಸಬೇಡಿ ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಾಶ್ಚಿಮಾತ್ಯ ದೇಶಗಳ ಮಾಂಸಾಹಾರಿಗಳೊಂದಿಗೆ ಹೋಲಿಕೆ ಮಾಡಿದ ಭಾಗವತ್, “ಭಾರತದಲ್ಲಿ ಮಾಂಸ ಮತ್ತು ಮೀನುಗಳನ್ನು ಸೇವಿಸುವವರು ‘ಶ್ರಾವಣ’ ಮಾಸ ಹಾಗೂ ವಾರದ ಕೆಲವು ದಿನಗಳಲ್ಲಿ ತಮ್ಮ ದೈನಂದಿನ ಆಹಾರ ಪದ್ಧತಿಯನ್ನು ತ್ಯಜಿಸುತ್ತಾರೆ” ಎಂದು ಹೇಳಿದ್ದಾರೆ.

“ಮಾಂಸ ಸೇವನೆಯಲ್ಲಿ ಶಿಸ್ತನ್ನು ಅನುಸರಿಸಲು ಪ್ರಯತ್ನಿಸಿ. ಇದರಿಂದ (ನಿಮ್ಮ) ಮನಸ್ಸು ಚಂಚಲವಾಗುವುದಿಲ್ಲ” ಎಂದು ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನವರಾತ್ರಿ ಆಚರಣೆಯ ಹೊತ್ತಿನಲ್ಲಿ ಭಾಗವತ್ ಹೇಳಿಕೆ ಹೊರಬಿದ್ದಿದೆ. “ಈ ಸಮಯದಲ್ಲಿ ಮಾಂಸಾಹಾರದಿಂದ ಜನರು ದೂರ ಉಳಿಯುತ್ತಾರೆ. ಆದಾಗ್ಯೂ, ದುರ್ಗಾಪೂಜಾ ಹಬ್ಬದ ಕಾರಣಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿರುವ ಪಶ್ಚಿಮ ಬಂಗಾಳದಂತಹ ಭಾರತದ ಕೆಲವು ಭಾಗಗಳಲ್ಲಿ ಜನರು ಈ ಅವಧಿಯಲ್ಲಿ ಮಾಂಸಾಹಾರವನ್ನು ಸೇವಿಸುತ್ತಾರೆ” ಎಂದು ತಿಳಿಸಿದ್ದಾರೆ.

ಭಾಗವತ್ ಹೇಳಿಕೆಗೆ ವಿರೋಧ; ಬಿಜೆಪಿಗೆ ಮತ ಹಾಕಬಾರದೇ ಎಂದು ಕೇಳಿದ ಜನತೆ

ಮಾಂಸಾಹಾರದ ಕುರಿತು ಕ್ಷುಲ್ಲಕವಾಗಿ ಮಾತನಾಡಿರುವುದನ್ನು ಅನೇಕರು ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

“ಮಾಂಸಾಹಾರ ತಿನ್ನುವವರು ಮಾಂಸಾಹಾರ ವಿರೋಧಿಗಳಿಗೆ ಮತ ನೀಡುವ ಕೆಟ್ಟ ಕೆಲಸ ಮಾಡಬೇಡಿ, ದಮ್ಮಯ್ಯ” ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಮನವಿ ಮಾಡಿದ್ದಾರೆ.

“ನೂರಕ್ಕೆ 99.99 % ನೊಬೆಲ್‌ ಪ್ರಶಸ್ತಿ ವಿಜೇತರು, ಒಲಂಪಿಕ್ ಚಿನ್ನದ ಪದಕ ಪಡೆದವರು, ಹೊಸ ಹೊಸ ವೈಜ್ಞಾನಿಕ ಅವಿಷ್ಕಾರಗಳಿಗೆ ಕಾರಣಕರ್ತರು, ಪ್ರಖ್ಯಾತ ಸಾಹಿತಿಗಳು ಎಲ್ಲರೂ ಮಾಂಸಾಹಾರಿಗಳಾಗಿದ್ದಾರೆ. ಅದರಲ್ಲೂ ಬೀಫ್ ಈಟರ್ಸ್. ಆದರೆ ನಮ್ಮ ದೇಶದ ಹುಲ್ಲು ಮೇಯುವವರ ಅವಿಷ್ಕಾರಗಳು ಇದರಲ್ಲಿ ಎಷ್ಟಿದೆ? ಯಾವುದೇ ಆಹಾರವಾಗಲಿ ಅದರಲ್ಲಿರುವುದು ಬರಿಯ ಫ್ಯಾಟ್, ಪ್ರೋಟೀನ್ ಕಾರ್ಬೊ ಹೈಡ್ರೇಟ್. ಇಂತಹ ಮೂಢರು ನಮ್ಮ ದೇಶ ಆಳುವ ದುರ್ಗತಿ ಒದಗಿ ಬಂತಲ್ಲ ಅನ್ನುವುದೇ ಒಂದು ನಾವೆಂದೂ ಕಾಣದಿದ್ದ ದೊಡ್ಡ ದುರಂತ” ಎಂದು ಕೃಷ್ಣಮೂರ್ತಿ ಶ್ರೀನಾಥ್‌ ಪೋಸ್ಟ್ ಮಾಡಿದ್ದಾರೆ.

“ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಅನ್ನುವುದು, ಆಮೇಲೆ ಗೋಮಾಂಸ ತಿನ್ನಬಾರದು ಅನ್ನುವುದು ಟೆಸ್ಟ್ ಡೋಸ್ಗಳು. ಇವರ ಮೂಲ ಉದ್ದೇಶವೇ ಇದು- ಮಾಂಸ ತಿನ್ನುವವರು ಕೀಳು- ಎಂದು ಹೇಳುವುದು. ಇದನ್ನು ದೇಶದ ಬಹುಸಂಖ್ಯಾತ ಮಾಂಸಾಹಾರಿಗಳು ಅರ್ಥಮಾಡಿಕೊಳ್ಳಬೇಕು” ಎಂದು ಪ್ರಕಾಶ್ ರಾಜ್‌ ಮೇಹು ಎಚ್ಚರಿಸಿದ್ದಾರೆ.

ಇದನ್ನೂ ಓದಿರಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಶಶಿ ತರೂರು v/s ಮಲ್ಲಿಕಾರ್ಜುನ ಖರ್ಗೆ; ದಿಗ್ವಿಜಯ್ ಸಿಂಗ್ ಕಣದಿಂದ ಹೊರಕ್ಕೆ

“ಸರ್ವ ಜನಾಂಗದ ಶಾಂತಿಯ ತೋಟವನ್ನು ಆಶಿಸಿದ ಕುವೆಂಪು ಮಾಂಸಾಹಾರಿ. ಕರುಣೆಯ ಮೂರ್ತಿ ಬುದ್ಧನೂ ಮಾಂಸಾಹಾರಿ. ಆರು‌ ಮಿಲಿಯ ಯಹೂದಿಗಳನ್ನು ಗ್ಯಾಸ್ ಚೇಂಬರಿನಲ್ಲಿ‌ ಕೊಂದ ಹಿಟ್ಲರ್ ಸಸ್ಯಾಹಾರಿ. ಶಾಂತಿಧೂತ ಗಾಂಧಿಯನ್ನು ಕೊಂದ ಗೋಡ್ಸೆ ಸಸ್ಯಾಹಾರಿ” ಎಂದು ಉದಯ್‌ ಗೋಂಕರ್‌ ಬರೆದಿದ್ದಾರೆ.

“ಮಾಂಸಾಹಾರ ಮಾಡುವವರ ವೋಟ್ ಬಿಜೆಪಿಗೆ ಬೇಡ ಅಂತ ಫರ್ಮಾನು ಹೊರಡಿಸಿ. ದಿನ ನಾನ್ಸೆನ್ಸ್ ಹೇಳಿಕೆ ಕೊಡೋದು ತಪ್ಪತ್ತದೆ” ಎಂದು ಶರತ್‌ಚಂದ್ರ ಒತ್ತಾಯಿಸಿದ್ದಾರೆ.

“ಯುಗಾದಿ ಹಬ್ಬದ ಟೈಮ್‌ನಲ್ಲಿ ಹಲಾಲ್ ಬೇಡ, ಜಟಕ ಮಾಂಸ ತಿನ್ನಿ ಅಂತ ಇವರುಗಳೇ ಹಿಂದೂವಿ ಜಟಕ ಮಾಂಸಾಹಾರದ ಪ್ರಚಾರ ಮಾಡಿದರು. ಆಯುಧ ಪೂಜೆ ಟೈಮ್‌ಗೆ ಕರೆಕ್ಟಆಗಿ ಮಾಂಸ ತಿಂದರೆ ನೀವು ಹಿಂಸಾ ವಿನೋದಿಗಳು ಅಂತಿದಾರೆ” ಎಂದು ನಾಗೇಗೌಡ ಕೀಲಾರ ಅವರು ಕುಟುಕಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ತಿನ್ನುವ ಆಹಾರದ ಆಧಾರದ ಮೇಲೂ ಸಮಾಜವನ್ನು ವಿಭಜಿಸುವ ಇವರ ವಿಚಾರಗಳ ಬಗ್ಗೆ ಜನತೆ ಎಚ್ಚತ್ತು ಕೊಳ್ಳದಿದ್ದಲ್ಲಿ ಮುಂದೆ ಇನ್ನಷ್ಟು ವಿಪತ್ತು ಕಾದಿದೆ, ಇವರ ಪುರೋಹಿತಶಾಹಿ ಧೋರಣೆಗೆ ಧಿಕ್ಕಾರ, ಮಾಂಸ ತಿಂದವರಿಂದ ಅಲ್ಲಾ ಸ್ವಾಮಿ ದೇಶ ಹಾಳಾಗಿರುವುದು, ತುಪ್ಪ ತಿಂದವರಿಂದ, ಇವರು ತಮ್ಮ ಪರಂಪರೆಯನ್ನು ಒಮ್ಮೆ ತಿರುವಿ ಹಾಕಲಿ ಯಜ್ಞ, ಯಾಗದ ಸಂಧರ್ಭದಲ್ಲಿ ಋತ್ವಿಕರುಗಳಿಗೆ ಎಳೆ ಹಸುವಿನ ಮಾಂಸ ಬಡಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದದ್ದೇ, ಈಗ ಗೊಡ್ಡು ಉಪದೇಶ ನೀಡುವ ಬದಲು ಎಲ್ಲರಿಗೂ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಮುಂತಾದ ಮೂಲಭೂತ ಸೌಕರ್ಯ ಒದಗಿಸುವಂತೆ ತಮ್ಮ ಸರ್ಕಾರಕ್ಕೆ ನಿರ್ದೇಶಿಸಿದರೆ ಅನುಕೂಲ ಆಗುತ್ತೆ, ಜನರು ಇವರ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು.

  2. What nonsence! God has created everything for human being. It is his or hercwish to consume meat, fish or vegetables. It is none of anyone’s business to set rules on food consumption. If anyone wants eat meat let him/her consume meat, who the hell we are to tell others? First of all because of the price hike and GST people are slogging to get food and this guy is delivering speech about eating non veg. First let him tell the supremos to provide shelter and food to the people who go to sleep without food then deliver speeches on consuming non veg.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...