Homeಅಂಕಣಗಳುಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

ಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

- Advertisement -
- Advertisement -

ಮಾನ್ಯರೇ,

ತಾವು ನಮ್ಮ ವೋಟು ಪಡೆದು ಟಾಟಾ ಬೈ ಬೈ ಹೇಳಿ ನಮ್ಮ ಸುಂಕದ ಹಣದಿಂದ ಖರೀದಿ ಮಾಡಿದ ಪುಷ್ಪಕ ವಿಮಾನ ಹತ್ತಿ ಬೆಂಗಾವಲು ಊರಿಗೆ ಹೋದಮೇಲೆ ನಮ್ಮ ನಿಮ್ಮ ಭೇಟಿ ಇಲ್ಲ. ಒಂದು ಪತ್ರ ಇಲ್ಲ, ಈಮೇಲೂ ಇಲ್ಲ, ಎಸ್‌ಎಂಎಸ್‌ಗೆ ಉತ್ತರ ಇಲ್ಲ. ವಾಟ್ಸ್‌ಅಪ್ ಸಂದೇಶಕ್ಕೆ ಬ್ಲೂ ಟಿಕ್‌ನ ಪರತ್ ಪಾವತಿ ಸಹಿತ ಸಿಗಲಿಲ್ಲ. ವೋಟು ಕೇಳುವ ಮುನ್ನ ನೀವೇ ನಮ್ಮನ್ನು ಹುಡುಕಿಕೊಂಡು ಬಂದಿರಿ. ಆದರೆ ವೋಟು ಎಣಿಕೆ ನಂತರ ನೀವು ಅಂತರ್ದಾನವಾಗಿಬಿಟ್ಟಿರಿ. ನಮ್ಮ ಓಣಿಯಲ್ಲಿ ಪಿಕ್‌ಪಾಕೆಟ್ ಮಾಡಿ ಜೈಲಿಗೆ ಹೋಗಿದ್ದ, ನಿಮ್ಮ ಆಶೀರ್ವಾದದಿಂದ ಹೊರಗೆಬಂದಿದ್ದ ಕಳ್ಳ ಕಿಟ್ಯಾ ಈಗ ಕೆ. ಕೃಷ್ಣ ಕುಮಾರ್ ಆಗಿ ಬಿಟ್ಟಿದ್ದಾನೆ. ಅವನು ಈಗ ತಮ್ಮ ಪಿಎ ಆಗಿದ್ದೇನೆ ಎಂದೂ, ತಮ್ಮ ಸ್ವಯಂ ಘೋಷಿತ ಸಲಹೆಗಾರನಾಗಿಬಿಟ್ಟಿದ್ದಾನೆ ಎಂದೂ ಹೇಳಿಕೊಂಡಿದ್ದಾನೆ. ನನ್ನಂಥ ಬಡಪಾಯಿಗಳ ಪಾಲಿಗೆ ಅವನೇ ಮುಖ್ಯಮಂತ್ರಿಯಾಗಿ ಬಿಟ್ಟಿದ್ದಾನೆ.

ನಮಗೆ ಅವನ ಭೇಟಿಯೇ ದೇವ ದುರ್ಲಭವಾಗಿಬಿಟ್ಟಿದೆ. ಇನ್ನು ನಿಮ್ಮಂಥವರ ಮಾತು ಕೇವಲ ಆಕಾಶವಾಣಿಯಲ್ಲಿ ಕೇಳುತ್ತಿದೆ. ನೀವು ನಮ್ಮನ್ನು ಬಂದು ಭೇಟಿ ಆಗುವುದು ಇನ್ನು ಐದು ವರ್ಷದ ನಂತರ ಇದ್ದೇ ಇದೆ ಅಂತ ನಾವು ಸುಮ್ಮನೆ ಇದ್ದು ಬಿಡುತ್ತೇವೆ. ನೀವು ನಮ್ಮ ಊರನ್ನು ಉದ್ಧಾರ ಮಾಡ್ತೀರಿ ಅಂತ ಆಶ್ವಾಸನೆ ನೀಡಿದ್ದರೂ ಸಹಿತ ಮಾಡಿಲ್ಲ. ನಿಮ್ಮ ಊರಿನ ಮೇಲೆ ನಿಮಗೆ ಎಷ್ಟು ಪ್ರೀತಿ ಎಂದರೆ ನಿಮ್ಮ ಬಾಲ್ಯದಾಗ ನೀವು ಬಿಟ್ಟು ಹೋದಾಗ ಅದು ಹೆಂಗ ಇತ್ತೋ ಹಾಂಗೆ ಇರಬೇಕು ಅಂತ ನೀವು ಏನೂ ಬದಲಾವಣೆ ಮಾಡಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ಇರಲಿ.

ಇದು ಎಲ್ಲಾ ಹೆಂಗ ಐತಿ ಅಂದರ, ಜಗಜಿತ್ ಸಿಂಗ್ ಅವರ ಗಜಲ್‌ನ ಸಾಲಿನ ಹಂಗ ಐತಿ.

“ಈ ವರ್ಷ ಬಹಳ ಮಳೆ ಆಗ್ತದ, ಬೆಳೆ ಬರ್ತದ, ಎಲ್ಲಾ ಛಲೋ ಆಗ್ತೆತಿ,

ಹಿಂಗ ಆಗ್ತದೋ, ಇಲ್ಲೋ, ಗೊತ್ತಿಲ್ಲ,

ಆದರ ಹಿಂಗ ಆಗ್ತದ ಅನ್ನುವ ಕನಸು ಮಾತ್ರ ಭಾರಿ ಛಲೋ ಐತಿ”.

ಇದೆಲ್ಲಾ ಐತಿ. ಇರಲಿ, ಆದರೂ ಉಭಯ ಕುಶಲೋಪರಿ ಸಾಂಪ್ರತ. ಇನ್ನು ನಮ್ಮ ಊರಿನವರ ಕಡೆಯಿಂದ ನಿಮಗೆ ಒಂದು ಮೂಕ ಅರ್ಜಿ.

ಮೆಹರ್‌ಬಾನ್ ಸಾಹೇಬರೇ,

ರಾಜ್ಯ ಸರಕಾರ ನೇಮಿಸಿದ ವಿಜಯ ಭಾಸ್ಕರ ಸಮಿತಿ ಆಡಳಿತ ಸುಧಾರಣೆ ಬಗ್ಗೆ ಕೆಲವು ಶಿಫಾರಸುಗಳನ್ನು ಮಾಡಿದೆ. ಮೊದಲ ಹಂತದಲ್ಲಿ ಕಂದಾಯ, ಆಹಾರ ಹಾಗೂ ರಸ್ತೆ ಸಾರಿಗೆ ಇಲಾಖೆಗಳ ಬಗ್ಗೆ ಸಲಹೆಗಳನ್ನು ನೀಡಿದೆ. ಇವುಗಳಲ್ಲಿ ಕೆಲವು ಜನಪರ ಸಲಹೆಗಳಾಗಿದ್ದು ಅವುಗಳನ್ನು ನಾವು ಸ್ವಾಗತ ಮಾಡುತ್ತೇವೆ. ಇನ್ನು ಕೆಲವು ವಿಷಯಗಳನ್ನು ನಾವು ಸಕಾರಣವಾಗಿ ವಿರೋಧಿಸುತ್ತೇವೆ.

ಅವುಗಳು ಇಂತಿವೆ:

ಸರಕಾರದ 800ಕ್ಕೂ ಹೆಚ್ಚು ಸೇವೆಗಳನ್ನು ಸೇವಾಸಿಂಧು ಎನ್ನುವ ಒಂದೇ ಜಾಲತಾಣ ಹಾಗೂ ತಂತ್ರಾಂಶದ ಮೂಲಕ ನೀಡುವುದು ಸ್ವಾಗತಾರ್ಹ. ಈ ಸೇವೆಗಳನ್ನು ಜನರಿಗೆ ದೊರಕಿಸಲು ನಗರಗಳಲ್ಲಿ ಕರ್ನಾಟಕ-ಒನ್ ಹಾಗೂ ಅಟಲ್‌ಜಿ ಜನಸ್ನೇಹಿ ಕೇಂದ್ರ ಹಾಗೂ ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳನ್ನು ಏಕ ಗವಾಕ್ಷಿಗಳಾಗಿ ಬಳಸುವ ಯೋಜನೆ ಸಹಿತ ಸ್ವಾಗತಾರ್ಹ. ಇದರಿಂದ ಜನ ಅನೇಕ ಕಚೇರಿಗಳಿಗೆ ಅನಗತ್ಯವಾಗಿ ಎಡತಾಕುವುದು ತಪ್ಪುತ್ತದೆ.

PC : mandya.nic.in

ಆಹಾರ ಧಾನ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಸಹಿತ ಬಹಳ ಅನುಕೂಲಕರವಾದದು. ಆದರೆ ಇದಕ್ಕಾಗಿ ಜನರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ಒಳ್ಳೆಯದಲ್ಲ. ಇದರಿಂದ ಬಡವರ ಹೊಟ್ಟೆಯ ಮೇಲೆ ಹೊಡೆದಂತೆ ಆಗುತ್ತದೆ. ಇದರ ಇನ್ನೊಂದು ಅಪಾಯಕಾರಿ ಸಾಧ್ಯತೆ ಏನು ಎಂದರೆ, ಈ ರೀತಿಯ ನಿಯಮ ಜಾರಿಗೆ ಬಂದರೆ, ಹಳ್ಳಿಗಳಲ್ಲಿ ಮನೆಗೆ ಆಹಾರ ಧಾನ್ಯ ತಂದು ಕೊಡುವ ಏಜೆಂಟ್‌ಗಳು ಹುಟ್ಟಿಕೊಳ್ಳಬಹುದು. ಆಹಾರ ಧಾನ್ಯಗಳನ್ನು ಮನೆಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಆರಂಭವಾದರೆ ಸರಕಾರಕ್ಕೆ ವಿವಿಧ ಮಟ್ಟದ ಮಧ್ಯವರ್ತಿಗಳ ಲಾಭ ಹಾಗೂ ಅವರ ಕಮಿಷನ್ ಹಣದ ಹಣ ಉಳಿತಾಯವಾಗುತ್ತದೆ. ಇದೆ ಹಣವನ್ನು ಮನೆ ಬಾಗಿಲಿಗೆ ತಲುಪಿಸುವ ಖರ್ಚಿಗೆ ಬಳಸಬಹುದು.

ಜನಸಂಖ್ಯೆ, ರಹವಾಸ, ಬೆಲೆ ಹಾಗೂ ರೈತಾಪಿ ಕುಟುಂಬದ ಪ್ರಮಾಣಪತ್ರಗಳು ಅನವಶ್ಯಕ ಎಂದು ಹೇಳಿ ಅವುಗಳನ್ನು ರದ್ದುಮಾಡಬೇಕು ಎನ್ನುವ ಶಿಫಾರಸು ಮಾಡಲಾಗಿದೆ. ಇದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಇದನ್ನು ಕೇವಲ ಆಡಳಿತಾತ್ಮಕ ಅನುಕೂಲಕತೆ ದೃಷ್ಟಿಯಿಂದ ನೋಡದೆ, ನಾಳೆ ಜನರಿಗೆ ಈ ಪ್ರಮಾಣ ಪತ್ರಗಳನ್ನು ನ್ಯಾಯಾಲಯಗಳ ಮುಂದೆ ಹಾಜರು ಪಡಿಸಲಿಕ್ಕೆ ಬರಬೇಕಾಗುವುದೋ ಬೇಡವೋ ಅನ್ನುವುದನ್ನು ನೋಡಿ ನಿರ್ಧಾರ ಮಾಡಬೇಕು. ಹಾಗೆ ರದ್ದುಮಾಡುವುದೇ ಆದಲ್ಲಿ, ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡ ಬಳಿಕವಷ್ಟೇ ರದ್ದುಮಾಡಬೇಕು.

ರಸ್ತೆ ಸಾರಿಗೆ ಅಧಿಕಾರಿಗಳು ಜಫ್ತಿ ಮಾಡಿದ ವಾಹನಗಳನ್ನು ಮಾರಾಟ ಮಾಡಲು ನ್ಯಾಯಾಲಯದ ಅನುಮತಿಗೆ ಕಾಯುವುದು ಬೇಡ ಎನ್ನುವ ಶಿಫಾರಸು ಇದರಲ್ಲಿ ಇದೆ.

ಇದನ್ನು ಜಾರಿಮಾಡುವ ಮುನ್ನ, ರಸ್ತೆ ಸಾರಿಗೆ ಇಲಾಖೆಯ ವಿವಿಧ ವಿಷಯಗಳಿಗೆ ಅನ್ವಯವಾಗುವಂತೆ, ವಿದ್ಯುತ್ ಪ್ರಾಧಿಕಾರ, ವಿಮೆ ಪ್ರಾಧಿಕಾರ, ಆಹಾರ ಪದಾರ್ಥ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ
ಮಾದರಿಯಲ್ಲಿ ಸಾರಿಗೆ ಪ್ರಾಧಿಕಾರ ಸ್ಥಾಪಿಸಬೇಕು.

ಈ ಸಮಿತಿಯ ಅತಿ ಮುಖ್ಯ ಶಿಫಾರಸು ಎಂದರೆ ಪ್ರಾದೇಶಿಕ ಆಯುಕ್ತರ ಕಚೆರಿಗಳನ್ನು ರದ್ದು ಮಾಡುವುದು. ಇದನ್ನು ನಾವು ವಿರೋಧಿಸುತ್ತೇವೆ. ಇದು ಅತ್ಯಂತ ಅಪಾಯಕಾರಿ. ಇದು ಭಾರತದ ಸಂವಿಧಾನದ ಮೂಲ ತತ್ವವಾದ ವಿಕೇಂದ್ರೀಕರಣ ವಿರೋಧಿ ಬೆಳವಣಿಗೆ. ಇದು ರಾಜ್ಯದ ಜನರಿಗಾಗಲಿ, ಅಭಿವೃದ್ಧಿ-ಸುಶಾಸನಕ್ಕಾಗಲಿ ಅನುಕೂಲಕರವಾದದ್ದಲ್ಲ. ಕೆಲವು ಜನ ಹಿರಿಯ ಐಎಎಸ್ ಅಧಿಕಾರಿಗಳು ಬೆಂಗಳೂರು ಬಿಟ್ಟುಹೋಗಲು ಮನಸು ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದು ಮಾಡುವುದು ಸಾಧುವಲ್ಲ.

ರಾಜ್ಯದ 350 ಐಎಎಸ್ ಅಧಿಕಾರಿಗಳಲ್ಲಿ 60 ಜನ ಮಾತ್ರ ಬೆಂಗಾವಲು ಊರು ಬಿಟ್ಟು ಹೊರಗೆ ಇದ್ದಾರೆ. ಅವರಲ್ಲಿ ಮೂರು ಜನ ಪ್ರಾದೇಶಿಕ ಆಯುಕ್ತರು ಮಾತ್ರ ವಿಭಾಗ ಮಟ್ಟದಲ್ಲಿ ಇದ್ದಾರೆ. ಆ ಮೂರು ಹುದ್ದೆಗಳ ಸಲುವಾಗಿ ನೀವು ಆರು ಕೋಟಿ ಕನ್ನಡಿಗರ ಎದುರು ಕಣ್ಕಟ್ಟು ಆಡಬಾರದು ಎಂದು ನಮ್ಮ ಅಂಬೋಣ.

ನಿಜವಾಗಿ ಬೇಕಾಗಿರುವುದು ಏನು ಎಂದರೆ,

ಅ) ರಾಜ್ಯದಲ್ಲಿ ಈಗ ಇರುವ ನಾಲ್ಕು ಕಂದಾಯ ವಿಭಾಗಗಳನ್ನು ಎಂಟು ವಿಭಾಗಗಳನ್ನಾಗಿ ಮಾಡಬೇಕು. ಪ್ರತಿ ವಿಭಾಗಕ್ಕೆ ಈಗ 7-8 ಜಿಲ್ಲೆಗಳು ಬರುತ್ತವೆ. ಪ್ರತಿ ವಿಭಾಗಕ್ಕೆ 3-4 ಜಿಲ್ಲೆಗಳು ಬರುವಂತೆ ಮಾಡಿ ಮರುಹಂಚಿಕೆ ಮಾಡಬೇಕು.

ಆ) ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಹಿಂದಿನಂತೆ ವಿಭಾಗೀಯ ಅಧಿಕಾರಿಗಳ ಕಚೇರಿಗಳಾಗಿ ಉನ್ನತೀಕರಣ ಮಾಡಬೇಕು. ಅವರಿಗೆ ಜಿಲ್ಲಾಧಿಕಾರಿಗಳ ಮೇಲೆ ಮೇಲು ಉಸ್ತುವಾರಿ ಹಾಗೂ ಜಿಲ್ಲೆ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಹಾಗೂ ಜವಾಬುದಾರಿ ನೀಡಬೇಕು.

ಇ) ಪ್ರಾದೇಶಿಕ ಆಯುಕ್ತರಿಗೆ ಅಭಿವೃದ್ಧಿಯ ಜವಾಬುದಾರಿಯನ್ನು ಸಹಿತ ಕೊಡಬೇಕು. ಅವರಿಗೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಹಾಗೂ ನಗರಪಾಲಿಕೆ-ನಗರಸಭೆಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಮೇಲೆ ವಿಚಕ್ಷಣೆ ಹಾಗೂ ಮೇಲು ಉಸ್ತುವಾರಿ ನಡೆಸುವ ಅಧಿಕಾರ ನೀಡಬೇಕು.

ಈ) ವಿಭಾಗಾಧಿಕಾರಿ ಮಟ್ಟದಲ್ಲಿ ಕಂದಾಯ ನ್ಯಾಯಾಲಯ ಸ್ಥಾಪಿಸಬೇಕು. ಇದರಿಂದ ಜನ ತಮ್ಮ ಕಂದಾಯ ಪ್ರಕರಣಗಳ ಸಲುವಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ.

ಉ) ವಿಭಾಗಾಧಿಕಾರಿಗಳಿಗೆ ಸಾರ್ವಜನಿಕ ಕುಂದುಕೊರತೆಗಳನ್ನು ಸ್ವೀಕರಿಸುವ ಹಾಗೂ ಅವುಗಳನ್ನು ಪರಿಹರಿಸುವ ಅಧಿಕಾರ ಹಾಗೂ ಜವಾಬುದಾರಿ ಕೊಡಬೇಕು. ಜನಸಾಮಾನ್ಯರು ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳ ವಿರುದ್ಧ ದೂರು ಕೊಟ್ಟರೆ ಅವುಗಳ ವಿಚಾರಣೆ ವಿಭಾಗ ಮಟ್ಟದಲ್ಲಿ ನಡೆಯಬೇಕು.

ಊ) ವಿಭಾಗಾಧಿಕಾರಿಗಳನ್ನು ಸಕಾಲ ಯೋಜನೆಯ ನಿಯಂತ್ರಣ ಪ್ರಾಧಿಕಾರಿಯನ್ನಾಗಿ ಮಾಡಬೇಕು. ಸಕಾಲ ಯೋಜನೆಯಲ್ಲಿನ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಹೋದರೆ, ಆ ಕಾಲಹರಣದ ಬಗ್ಗೆ ತನಿಖೆ ನಡೆಸುವ ಅಧಿಕಾರ ಕೊಡಬೇಕು.

ಎ) ಈ ಎಲ್ಲಾ ಜವಾಬುದಾರಿಗಳನ್ನು ಸರಿಯಾಗಿ ನಿರ್ವಹಿಸಲು ವಿಭಾಗಾಧಿಕಾರಿಗಳಿಗೆ ಸೂಕ್ತ ಸಿಬ್ಬಂದಿಗಳನ್ನು ನೀಡಬೇಕು. ಅವರ ಕಚೇರಿಗೆ ಪ್ರಮುಖ ಇಲಾಖೆಗಳ ಜಂಟಿ ನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಜಿಲ್ಲೆ ಹಾಗೂ ಪ್ರದೇಶ ಮಟ್ಟದ ಯಾವುದೇ ಕೆಲಸಗಳು ಆಯಾ ಜಿಲ್ಲೆ ಹಾಗೂ ಪ್ರದೇಶ ಮಟ್ಟದಲ್ಲಿ ಆಗಬೇಕು. ಇಂತಹ ಎಲ್ಲಾ ಕೆಲಸಗಳಿಗೆ ಜನರು ಬೆಂಗಳೂರಿಗೆ ಅಲೆದಾಡುವ ಅನಿವಾರ್ಯತೆಯನ್ನು ತಪ್ಪಿಸಬೇಕು.

ನಮ್ಮ ಸಲಹೆಗಳನ್ನು ಪರಿಗಣಿಸಬೇಕು, ನೀವು ಮುಂದಿನ ಬಾರಿ ಬರುವಾಗ ಇದನ್ನು ಮರೆಯಬಾರದು ಎಂದು ನಮ್ಮ ಎಲ್ಲಾ ಬಡಪಾಯಿಗಳ ಕೋರಿಕೆ.


ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...