Homeಅಂಕಣಗಳುರಾಜಕೀಯ ಮುಖಂಡರ ಆರ್‌ಎಸ್‌ಎಸ್ ವಿರೋಧವಷ್ಟೇ ಸಾಲದು; ವಿಷಪೂರಿತ ಸಿದ್ಧಾಂತವನ್ನು ತೊಲಗಿಸುವ ಹೋರಾಟಕ್ಕೆ ಸಜ್ಜಾಗಬೇಕು

ರಾಜಕೀಯ ಮುಖಂಡರ ಆರ್‌ಎಸ್‌ಎಸ್ ವಿರೋಧವಷ್ಟೇ ಸಾಲದು; ವಿಷಪೂರಿತ ಸಿದ್ಧಾಂತವನ್ನು ತೊಲಗಿಸುವ ಹೋರಾಟಕ್ಕೆ ಸಜ್ಜಾಗಬೇಕು

- Advertisement -
- Advertisement -

ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ’ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಬಗ್ಗೆ ತಾವು ಓದಿದ ಇಂಗ್ಲಿಷ್ ಪುಸ್ತಕವನ್ನು ಆಧರಿಸಿ ಹಲವು ಟೀಕೆಗಳನ್ನು ಮಾಡಿದ್ದರು. ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಉಪಚುನಾವಣೆಗಳಲ್ಲಿ ಲಾಭಗಳಿಸಲು ಕುಮಾರಸ್ವಾಮಿಯವರು ಈ ನಿಲುವು ತಳೆದಿದ್ದಾರೆ ಎಂಬ ಟೀಕೆಗಳಿಂದ ಶುರುವಾಗಿ, ಕಾಂಗ್ರೆಸ್ ನಾಯಕರು ತಾವೇ ಅಧಿಕೃತ ಆರ್‌ಎಸ್‌ಎಸ್ ವಿರೋಧಿಗಳು ಎಂದು ಹೇಳುವ ಹಾಗೂ ಆರ್‌ಎಸ್‌ಎಸ್ ಮತ್ತು ಬಿಜೆಪಿ ಬೆಂಬಲಿಗರು ಕುಮಾರಸ್ವಾಮಿಯವರ ಮತ್ತು ಇತರ ಆರ್‌ಎಸ್‌ಎಸ್ ವಿರೋಧಿಗಳ ತೇಜೋವಧೆಗೆ ನಡೆಸಿದ ಹಲವು ಟ್ರಾಲ್‌ಗಳವರೆಗೆ, ಹತ್ತಾರು ರೀತಿಯ ಪ್ರತಿಕ್ರಿಯೆಗಳು ದಾಖಲಾದವು. (ಕುಮಾರಸ್ವಾಮಿಯವರ ಆರ್ ಎಸ್ ಎಸ್ ವಿರೋಧಿಗಳ ಹೇಳಿಕೆಗಳು ಉಪಚುನಾವಣೆಗಳಲ್ಲಿ ಜೆಡಿಎಸ್ ಗೆ ಫಲ ಕೊಟ್ಟಿಲ್ಲ, ಅದರ ಲಾಭ ಕಾಂಗ್ರೆಸ್ ಪಡೆಯಿತೇ ಎಂಬಂತಹ ಚರ್ಚೆಗಳು ಈಗ ಪ್ರಾರಂಭವಾಗಿವೆ. ಮುಂದೆ ಕೂಡ ಕುಮಾರಸ್ವಾಮಿಯವರು ತಮ್ಮ ವಿರೋಧವನ್ನು ಮುಂದುವರೆಸಲಿದ್ದಾರೆಯೇ ಎಂಬ ಚರ್ಚೆ ಕೂಡ – ಆ ಮಾತು ಬೇರೆ). ಇವೆಲ್ಲಾ ತೋರಿಸಿದ್ದೇನೆಂದರೆ 1925ರ ವಿಜಯದಶಮಿಯಂದು ಹೆಡ್ಗೇವಾರ್ ಸ್ಥಾಪಿಸಿದ ಈ ಸಂಸ್ಥೆ ಎಷ್ಟು ಹೆಮ್ಮರವಾಗಿ ಬೆಳೆದಿದೆ ಮತ್ತು ಅದು ಹೇಗೆ ಈ ದೇಶದ ಹಲವು ವಲಯಗಳಲ್ಲಿ ತೂರಿಕೊಂಡು ತನ್ನ ಚಿಂತನೆಗಳಿಂದ ಅತಿಕ್ರಮಿಸಿದೆ ಎನ್ನುವುದನ್ನು.

ಕೆಲವು ವಾರಗಳ ಹಿಂದೆ ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಅದಾದ ಕೆಲವೇ ದಿನಗಳಲ್ಲಿ ಅವರು ಒಕ್ಕೂಟ ಸರ್ಕಾರದ ಗೃಹಮಂತ್ರಿ ಬಿಜೆಪಿಯ ಅಮಿತ್ ಷಾ ಅವರನ್ನು ಭೇಟಿಯಾಗಿದ್ದರು. ಅಂದು ಮಾಧ್ಯಮಗಳಿಗೆ ಬಿಡುಗಡೆಯಾದ ಅವರಿಬ್ಬರೂ ಭೇಟಿಯಾದ ಸಂದರ್ಭದ ಫೋಟೋದ ಹಿಂಬದಿಯಲ್ಲಿ ರಾರಾಜಿಸುತ್ತಿದ್ದುದು ಸಾವರ್ಕರ್ ಚಿತ್ರ! ಬಿಜೆಪಿ ಪಕ್ಷ ಸಂಕೇತಗಳನ್ನು ಬಳಸಿಕೊಳ್ಳುವ ಅವಕಾಶದಿಂದ ಯಾವತ್ತೂ ವಂಚಿತವಾಗುವುದಿಲ್ಲ. ಕಾಂಗ್ರೆಸ್
ರಾಜಕಾರಣಿಯೊಬ್ಬ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆಯೇ ಇಟ್ಟ ಈ ಹೆಜ್ಜೆ ಇಂದಿನ ಹಲವು ಅವಕಾಶವಾದಿ ಕಾಂಗ್ರೆಸ್ ನಾಯಕರಿಗೆ ಸಂಕೇತದಂತಿದೆ. (ಈಗ ಹೊಸ ಪಕ್ಷವೊಂದನ್ನು ಸ್ಥಾಪಿಸಿರುವ ಅಮರಿಂದರ್ ಸಿಂಗ್, ಬಿಜೆಪಿ ಜೊತೆಗೆ ಸಖ್ಯ ಬೆಳೆಸಲು ಕೂಡ ಮುಂದಾಗಿದ್ದಾರೆ ಎನ್ನಲಾಗುತ್ತಿದೆ).

ಸಂಘಪರಿವಾರದ ಪ್ರತಿಪಾದನೆಗಳನ್ನು ಇಲ್ಲಿಯವರೆಗೆ ಪೋಷಿಸಿಕೊಂಡು ಬಂದಿದ್ದ ಅಮರಿಂದರ್ ಸಿಂಗ್ ಅವರ ನಡೆನುಡಿಗಳು ಕಾಂಗ್ರೆಸ್ ಪಕ್ಷಕ್ಕೆ ಇಷ್ಟು ದಿನ ಕಾಣದಾಗಿತ್ತೇ? ಸೇನೆಯ ಜೀಪ್‌ಗೆ ನಾಗರಿಕನೊಬ್ಬನನ್ನು ಕಟ್ಟಿ ಶೀಲ್ಡ್ ಆಗಿ ಬಳಸಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದ ಅಮರಿಂದರ್ ಸಿಂಗ್ ಅವರ ಸೈದ್ಧಾಂತಿಕತೆ ಏನಾಗಿತ್ತು
ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಬೇಡವಾಗಿತ್ತೇ? ಇಂದು ಕಾಂಗ್ರೆಸ್ ಅಧ್ಯಕ್ಷಗಾದಿಯಲ್ಲಿ ಕುಳಿತು, ಬಿಟ್ಟು, ಮತ್ತೆ ಕರೆಸಿಕೊಳ್ಳುತ್ತಿರುವ ರಾಹುಲ್ ಗಾಂಧಿಯವರು ಆರ್‌ಎಸ್‌ಎಸ್ ಸಿದ್ಧಾಂತವನ್ನು ಸಾರ್ವಜನಿಕವಾಗಿ ವಿರೋಧಿಸುತ್ತಾರಾದರೂ, ಅದೇ ನಿಟ್ಟಿನಲ್ಲಿ, ದೊಡ್ಡಮಟ್ಟದಲ್ಲಿ ತಮ್ಮ ಪಕ್ಷದ ಮುಖಂಡರೂ-ಕಾರ್ಯಕರ್ತರೂ ಕೂಡ ಜಾಗೃತವಾಗುವಂತೆ ಕ್ರಮ ತೆಗೆದುಕೊಳ್ಳುವುದಕ್ಕೆ ಇರುವ ಅಡ್ಡಿಗಳೇನು? ಅಧಿಕಾರದ ಸುಖದಲ್ಲಿ ದೀರ್ಘಕಾಲದಲ್ಲಿ ಆಗಬಹುದಾದ ಸಮಸ್ಯೆಗಳನ್ನು ಉಪೇಕ್ಷಿಸಿದ್ದಕ್ಕೆ ಕಾಂಗ್ರೆಸ್ ಪಕ್ಷ ಅದರ ಫಲವನ್ನು ಇಂದು ನೋಡುತ್ತಿದೆ. ಇದು ಜೆಡಿಎಸ್ ಮುಖಂಡರಿಗೂ ಅನ್ವಯಿಸುತ್ತದೆ ಎಂದು ಪ್ರತ್ಯೇಕವಾಗಿ ಇಲ್ಲಿ ಹೇಳಬೇಕಿಲ್ಲ ಅಲ್ಲವೇ?

ಇನ್ನು ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಚರ್ಚೆಯಾಗುವಂತೆ ನೋಡಿಕೊಳ್ಳಲಾಗುತ್ತಿರುವ ವಿಷಯಗಳನ್ನು ನೋಡಿ. ಕೇಸರಿ ಧಿರಿಸು ಧರಿಸಿದ ಪೊಲೀಸ್ ಪಡೆ, ಶಸ್ತ್ರಾಸ್ತ್ರಗಳನ್ನೂ ಝಳಪಿಸಿದ ಸಂಘಪರಿವಾರದ ಸದಸ್ಯರು, ಇದಕ್ಕೂ ಕೆಲವು ದಿನಗಳ ಹಿಂದೆ ಸಾವರ್ಕರ್ ಕ್ಷಮಾಪಣೆಗೆ ಗಾಂಧಿಯವರ ಸಲಹೆಯೇ ಕಾರಣವಾಗಿತ್ತು ಎಂದು ತಿರುಚಿದ ಇತಿಹಾಸವನ್ನು ಒಕ್ಕೂಟ ಸರ್ಕಾರದ ರಕ್ಷಣಾ ಸಚಿವ ರಕ್ಷಣಾ ಸಚಿವರು ಪ್ರತಿಪಾದಿಸಿದ್ದು; ಇಷ್ಟು ದಿನ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದನ್ನೇ ಒಪ್ಪದಿದ್ದ ಸಂಘಪರಿವಾರದ ಮುಖಂಡರು ಈಗ ಹೊಸ ತಿರುವು ನೀಡಲು ಪ್ರಯತ್ನಿಸುತ್ತಿದ್ದಾರೆ. ಅಂದರೆ ಸಾವರ್ಕರ್ ಬಗ್ಗೆ ಈ ದೇಶದ ಪ್ರಜ್ಞಾವಂತ ಸಮುದಾಯ ಜಾರಿಯಲ್ಲಿಟ್ಟಿರುವ ವಿರೋಧವನ್ನು ಅವರು ಗಂಭೀರವಾಗಿ ಪರಿಗಣಿಸಿರುವುದು, ಸುಳ್ಳಿಗೆ ಸವಾಲಾದ ದಿಟದ ಗೆಲುವೆನ್ನಬಹುದೇ? ಇದು ಒಂದು ಮಟ್ಟಕ್ಕೆ ನಿಜವಾದರೂ, ಚರಿತ್ರೆಯ ಪಾಠ ಇಂತಹ ಸಲೀಸು ಉತ್ತರಗಳಿಗೆ ಅವಕಾಶ ನೀಡುವುದಿಲ್ಲ.

ಆರ್‌ಎಸ್‌ಎಸ್ ಸ್ಥಾಪನೆಯಾದಾಗ ಸಾವರ್ಕರ್‌ರಿಂದ ಅದು ಸ್ಫ್ಪೂರ್ತಿ ಪಡೆದಿತ್ತಾದರೂ, ಆರ್‌ಎಸ್‌ಎಸ್ ರಾಜಕೀಯವಾಗಿ ರೂಪುಗೊಂಡಿಲ್ಲ ಎಂದು ಸಾವರ್ಕರ್, ಭಾರತದ ರಾಜಕೀಯದಲ್ಲಿ ಆ ಸಂಸ್ಥೆಯ ಪಾತ್ರವನ್ನು ತಳ್ಳಿಹಾಕಲು ಪ್ರಯತ್ನಿಸಿದ್ದರು. ಗಾಂಧಿ ಹತ್ಯೆಯಾದ ನಂತರ ಆರ್‌ಎಸ್‌ಎಸ್, ಸಾವರ್ಕರ್ ಅವರ ಹಿಂದೂ ಮಹಾಸಭಾದಿಂದ ಅಂತರ ಕಾಪಾಡಿಕೊಳ್ಳಲು ಶ್ರಮಿಸಿತ್ತು. ಗೋಡ್ಸೆ ತನ್ನ ಸದಸ್ಯನೇ ಅಲ್ಲ ಎಂದು ಪ್ರತಿಪಾದಿಸುತ್ತಾ ಬಂದಿತ್ತು. ಇವೆಲ್ಲಾ ತೋರಿಸಿಕೊಡುವುದೇನೆಂದರೆ ಅಗತ್ಯ ಬಿದ್ದಾಗ ಆರ್‌ಎಸ್‌ಎಸ್ ಯಾರನ್ನು ಬೇಕಾದರು ತನ್ನವನನ್ನಾಗಿಸಿಕೊಳ್ಳುತ್ತದೆ, ಬೇಡವಾದಾಗ ಕಳಚಿ ಬಿಸಾಕುತ್ತದೆ. ಇಂದು ಆರ್‌ಎಸ್‌ಎಸ್ ತನ್ನನ್ನು ಸಂಸ್ಥಾಪಿಸಿದ ಹೆಡ್ಗೇವಾರ್, ಅವರ ನಂತರ ಅದನ್ನು ವಿಸ್ತರಿಸಿದ ಗೋಲ್ವಾಲ್ಕರ್‌ಗಿಂತ, ಸಾವರ್ಕರ್‌ನನ್ನು ದೊಡ್ಡದಾಗಿ ಪ್ರಚಾರ ಮಾಡಲು ಮುಂದಾಗಿವೆ. ಹಿಂದುತ್ವವನ್ನು ಮುನ್ನುಗ್ಗಿಸಲು, ಅನ್ಯ ಧರ್ಮಗಳ ದ್ವೇಷವನ್ನು ಹರಡಲು ಅವರಿಗೆ ಇಂದು ಸಾವರ್ಕರ್ ಅಸ್ತ್ರವಾಗಿ ಸಿಕ್ಕಿದ್ದಾರೆ. ಮುಂದೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಶರಣಾಗತಿಯಾಗಿದ್ದ ವಿಚಾರ ಹೆಚ್ಚು ಪ್ರಚಾರಪಡೆದರೆ ಅವರ ಬಳಿ ಮತ್ತೊಬ್ಬ ಐಕಾನ್ ಸಿದ್ಧನಿರುತ್ತಾನೆ. ಅಲ್ಲದೆ, ಬಹಿರಂಗದಲ್ಲಿ, ಗೋಡ್ಸೆ ತಮಗೆ ಸಂಬಂಧ ಇಲ್ಲ ಎಂಬಂತೆ ತೋರಿಸಿಕೊಳ್ಳುವ ಆದರೆ ಆಂತರ್ಯದಲ್ಲಿ ಅವನನ್ನು ಪೂಜಿಸುವ ಮತ್ತು ಆತನಿಗೆ ಗುಡಿ ಕಟ್ಟಲು ಶ್ರಮಿಸುವ ರಾಜಕೀಯ ಮುಖಂಡರನ್ನು ಪೋಷಿಸುವ ಹುನ್ನಾರದಂತೆ ಸಾವರ್ಕರ್ ಕೂಡ ಹಲವು ರೂಪಗಳನ್ನು ಎತ್ತಬಹುದು.

ಮಹಾರಾಷ್ಟ್ರದ ಮೂಲೆಯೊಂದರಲ್ಲಿ ಅತಿ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಒಂದು ಸಂಸ್ಥೆ ಇಂದು ದೇಶದ ನಾಲ್ಕೂ ದಿಕ್ಕುಗಳಲ್ಲಿ ತನ್ನ ಹಸ್ತಗಳನ್ನು ಚಾಚಲು ಸಾಧ್ಯವಾಗಿಸಿಕೊಂಡಿದೆ. ಅನ್ಯ ಧರ್ಮಗಳ ಬಗ್ಗೆ ದ್ವೇಷ, ಹಿಂದೂ ರಾಷ್ಟ್ರೀಯತೆ, ಸರ್ವಾಧಿಕಾರಿ ಧೋರಣೆಯ ಅಧಿಕಾರ ಸ್ಥಾಪಿಸುವಲ್ಲಿ ಪಾತ್ರ ಹೀಗೆ ಈ ದೇಶಕ್ಕೆ ಮಾರಕವಾಗಬಲ್ಲ ಚಿಂತನೆಯನ್ನು ಬಹಳ ಪರಿಣಾಮಕಾರಿಯಾಗಿ ಹರಡಿದೆ. ಇದಕ್ಕಾಗಿ ಆಟ-ವ್ಯಾಯಾಮಗಳಂತಹ ಸಣ್ಣ ಸಂಗತಿಗಳಿಂದ ಪ್ರಾರಂಭಿಸಿ, ಮಾಧ್ಯಮ ಅಧಿಕಾರಶಾಹಿ ಸೇರಿದಂತೆ ಎಲ್ಲ ವಲಯಗಳಲ್ಲಿಯೂ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಜನರನ್ನು ಕೂರಿಸುವವರೆಗೆ ಅದರ ತಂತ್ರಗಾರಿಕೆ ಫಲಿಸಿದೆ. ಈ ನೂರು ವರ್ಷಗಳ ಈ ತಯ್ಯಾರಿಯನ್ನು ರಾಜಕೀಯ ಪಕ್ಷಗಳ ಕೆಲವು ಮುಖಂಡರು ತಮ್ಮ ಅವಕಾಶಕ್ಕಾಗಿ ಟೀಕಿಸದಾಗ ಸರಿ ಹೋಗುವುದೆಂದು ಭ್ರಮಿಸುವುದು ಸರಿಯಾದ ದಾರಿಯಾಗಲಾರದು.

ಈ ಸಂಘ ಪರಿವಾರ ರಾಜಕೀಯವಾಗಿ ತನ್ನ ಹಿಡಿತವನ್ನು ಸಾಧಿಸಲು ಸಾಧ್ಯವಾಗಿರುವುದು ಸಾಂಸ್ಕೃತಿಕವಾಗಿ ಒಂದು ವಿಶಾಲ ತಳಹದಿಯಲ್ಲಿ ತನ್ನ ವಿಷಪೂರಿತ ಸಿದ್ಧಾಂತದ ಬಗ್ಗೆ ಜನರನ್ನು ಒಪ್ಪಿಸಲು ಸಾಧ್ಯವಾಗಿರುವುದರಿಂದಲೇ. ರಾಜಕೀಯ ಮುಖಂಡರ ಮಾತುಗಳು ಮಾಧ್ಯಮಗಳನ್ನು ಪ್ರಚೋದಿಸಲು ಶಕ್ತವಾಗಬಹುದಷ್ಟೇ. ಆದರೆ ಇಂತಹ ಸಂದರ್ಭವನ್ನು ಉಪಯೋಗಿಸಿಕೊಂಡು, ಸಾಂಸ್ಕೃತಿಕವಾಗಿ ಜನಸಾಮಾನ್ಯರ ದಿನನಿತ್ಯದಲ್ಲಿ ವಿಷಪೂರಿತ ಸಿದ್ಧಾಂತ ಹಾಸುಹೊಕ್ಕಾಗಿರುವುದನ್ನು ತೊಡೆದುಹಾಕಲು ಪ್ರಜ್ಞಾವಂತ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ.

ಅಮರಿಂದರ್ ಸಿಂಗ್

ಆರ್‌ಎಸ್‌ಎಸ್ ಉಳಿಸಿಕೊಂಡಿರುವ ಜಾತೀಯತೆಯ ಬಗ್ಗೆ, ಸಂಘಪರಿವಾರ ಇಂದಿಗೂ ತರಬಯಸುವ ವರ್ಣವ್ಯವಸ್ಥೆಯ ಬಗ್ಗೆ, ಅವರು ಹೇರಬೇಕೆನ್ನುವ ಆಹಾರ ಸಂಸ್ಕೃತಿಯ ಬಗ್ಗೆ, ಮತೀಯ ರಾಷ್ಟ್ರೀಯತೆಯ ಅಪಾಯಗಳ ಬಗ್ಗೆ, ಸಹ ನಾಗರಿಕರನ್ನು ಅನ್ಯರನ್ನಾಗಿಸಿದರೆ ಒದಗುವ ಅಪಾಯಗಳ ಬಗ್ಗೆ, ಅವರ ಇಡಿಯ ಅಜೆಂಡಾದ ಬಗ್ಗೆ ನಾವು ಮತ್ತೆ ಮತ್ತೆ ಕಥೆಗಳನ್ನು ಹೇಳಬೇಕಿದೆ.

ಆರ್‌ಎಸ್‌ಎಸ್ ನಲ್ಲಿ ದೀರ್ಘಕಾಲ ಇದ್ದು ಹೊರಬಂದ ಭನ್ವಾರ್ ಮೇಘವಾನ್ಷಿ ಅವರು ಬರೆದ ’ಐ ಕುಡ್ ನಾಟ್ ಬಿ ಹಿಂದೂ – ದ ಸ್ಟೋರಿ ಆಫ್ ದಲಿತ್ ಇನ ಆರ್‌ಎಸ್‌ಎಸ್’ ಪುಸ್ತಕದ ಒಂದು ಅಧ್ಯಾಯ ’ಫ್ರಂ ಸಂಘಿ ಟು ರೆಬೆಲ್’ನ ಈ ಭಾಗದ ಮಾತುಗಳಿಂದ ಈ ಬರಹವನ್ನು ಮುಗಿಸಬಹುದು: “ಈ ಹೋರಾಟ ನನ್ನ ಸಮುದಾಯಕ್ಕೋಸ್ಕರವಾಗಿತ್ತು, ಆದರೆ ನಾನು ಏಕಾಂಗಿಯಾಗಿ ಹೋರಾಡಬೇಕಾಗಿದೆ ಅನಿಸುತ್ತಿತ್ತು. ನಾನು ಬರೆದೆ, ಮಾತಾಡಿದೆ, ಜನರನ್ನು ಸಂಪರ್ಕಿಸಿದೆ, ಪ್ರಕಟಿಸಿದೆ, ನನ್ನ ಕಥೆ ಚಾಲ್ತಿಯಲ್ಲಿರುವಂತೆ ನೋಡಿಕೊಂಡೆ, ಈ ನನ್ನ ಶ್ರಮದಿಂದ ಏನೂ ಹೊರಹೊಮ್ಮಲಿಲ್ಲವಾದರೂ, ಕನಿಷ್ಟ ನಾನು ಹೋರಾಡುತ್ತಿದ್ದೇನೆ ಎಂದೆನಿಸುತ್ತಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ನನಗೆ ಸಿಕ್ಕಿದ್ದು ಸಲಹೆ, ಮತ್ತು ಹಲವು ಬಾರಿ ವೈರತ್ವ ಹಾಗೂ ಬೆದರಿಕೆಗಳು, ಆದರೆ ನನ್ನ ಈ ಹೋರಾಟ ಮುಂದುವರೆಯಲಿದೆ ಎಂಬುದು ನನಗೆ ಸ್ಪಷ್ಟವಿತ್ತು ಹಾಗೂ ಆರ್‌ಎಸ್‌ಎಸ್‌ಗೆ ಇನ್ನೆಂದಿಗೂ ಹಿಂದಿರುಗುವುದಿಲ್ಲವೆಂಬುದೂ. ನನ್ನ ಹೋರಾಟ ಇನ್ನೂ ತೀವ್ರವಾಗುತ್ತಾ ಹೋಯಿತು. ನನ್ನಂತಹ ದಲಿತ ಸ್ವಯಂಸೇವಕನ ಪ್ರಶ್ನೆಗಳಿಗೆ ಸಂಘಪರಿವಾರದಿಂದ ಯಾವುದೇ ಉತ್ತರಗಳಿರಲಿಲ್ಲ, ಅಲ್ಲದೆ ಸಂಘಕ್ಕೆ ಪ್ರಶ್ನಿಸಲು ಇತರ ದಲಿತ ಸ್ವಯಂಸೇವಕರ ಬಳಿ ಪ್ರಶ್ನೆಗಳಿರಲಿಲ್ಲ ಎಂಬುದು ಎಂತಹ ವೈಚಿತ್ರ್ಯ”.


ಇದನ್ನೂ ಓದಿ: ಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..

ಇದನ್ನೂ ಓದಿ: ‘ಸತಿ’ ಹೋದ ರೂಪ್ ಕನ್ವರ್‌ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು..

ಇದನ್ನೂ ಓದಿ: ಗಾಂಧಿ ಸಲಹೆ ಮೇರೆಗೆ ಸಾವರ್ಕರ್ ಕ್ಷಮಾಪತ್ರ ಬರೆದದ್ದು ಎಂಬ ರಕ್ಷಣಾ ಸಚಿವರ ಹೇಳಿಕೆಯ ಸತ್ಯಾಸತ್ಯತೆ

ಇದನ್ನೂ ಓದಿ: ಶೀಘ್ರದಲ್ಲೇ ಅಮರೀಂದರ್ ಸಿಂಗ್‌ ಹೊಸ ಪಕ್ಷ: ರೈತ ಹೋರಾಟ ಬಗೆಹರಿದರೆ ಬಿಜೆಪಿ ಜೊತೆ ಮೈತ್ರಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...