Homeಮುಖಪುಟಕಾಂಗ್ರೆಸ್ ಅಭ್ಯರ್ಥಿಗೆ ಮುಖೇಶ್ ಅಂಬಾನಿ ಬೆಂಬಲ ಏನನ್ನು ತೋರಿಸುತ್ತದೆ?

ಕಾಂಗ್ರೆಸ್ ಅಭ್ಯರ್ಥಿಗೆ ಮುಖೇಶ್ ಅಂಬಾನಿ ಬೆಂಬಲ ಏನನ್ನು ತೋರಿಸುತ್ತದೆ?

- Advertisement -
- Advertisement -

| ನೀಲಗಾರ |

ಯಾವುದೇ ಚುನಾವಣೆಯ ಫಲಿತಾಂಶ ಬರುವ ಮುಂಚೆ ಎರಡು ಗುಂಪುಗಳಿಗೆ ಅದರ ವಾಸನೆ ಹತ್ತಿರುತ್ತದೆ ಎನ್ನಲಾಗುತ್ತದೆ. ಒಂದು ಉದ್ಯಮಿಗಳ ಗುಂಪು. ಇನ್ನೊಂದು ಅಧಿಕಾರಿಗಳ ಗುಂಪು. ಆದರೆ, ನರೇಂದ್ರ ಮೋದಿಯವರು ಮತ್ತು ಅವರ ತಂಡ ಹುಟ್ಟಿಸಿರುವ ಭೀತಿಯ ವಾತಾವರಣದಲ್ಲಿ ಯಾವುದೇ ಅಧಿಕಾರಿ ಅಥವಾ ಉದ್ದಿಮೆಪತಿ ಅವರ ವಿರುದ್ಧ ಮಾತನಾಡುವ ಪರಿಸ್ಥಿತಿ ಇಲ್ಲ.

ಸಮಾಜದಲ್ಲಿ ಸಾಮಾನ್ಯವಾಗಿ ನಿರ್ಭೀತಿಯಿಂದ ಮಾತಾಡುವ ಸಾಹಿತಿಗಳು, ಕಲಾವಿದರೇ ಹೆದರಿ ನಡುಗುವಂತಹ ವಾತಾವರಣ ಇದೆ. ಧಾಬೋಲ್ಕರ್, ಪಾನ್ಸರೆ, ಕಲಬುರ್ಗಿ, ಗೌರಿ ಲಂಕೇಶ್, ಜಸ್ಟೀಸ್ ಲೋಯಾರೂ ಸೇರಿದಂತೆ ಹಲವು ಕೊಲೆಗಳು ಸಮಾಜದಲ್ಲಿ ಒಂದು ನಿರ್ದಿಷ್ಟ ಸಂದೇಶವನ್ನು ರವಾನಿಸಿವೆ.

ಹೀಗಿರುವಾಗ ಉದ್ದಿಮೆಪತಿಗಳು ಮತ್ತು ಅಧಿಕಾರಿಗಳು ಮಾತನಾಡುವುದು ಕಷ್ಟಸಾಧ್ಯವೇ ಸರಿ.

ಇಂತಹ ಪರಿಸ್ಥಿತಿಯಲ್ಲಿ ದೇಶದ ನಂ.1 ಶ್ರೀಮಂತ ಮುಖೇಶ್ ಅಂಬಾನಿಯು ದಕ್ಷಿಣ ಮುಂಬೈನ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವ್ರಾ ಪರವಾಗಿ ಬ್ಯಾಟಿಂಗ್ ಮಾಡಿರುವುದು ಏನನ್ನು ತೋರಿಸುತ್ತದೆ ಎಂಬ ಕುತೂಹಲ ಮೂಡಿದೆ. ಮುಖೇಶ್ ಅಂಬಾನಿಯ ಜಿಯೋ ಲಾಂಚ್ ಮಾಡಿದಾಗ, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನೇ ಬಳಸಿಕೊಂಡಿದ್ದರು. ಅಷ್ಟಲ್ಲದೇ ಮುಖೇಶ್ ಅಂಬಾನಿ ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ದೊಡ್ಡ ಪ್ರಮಾಣದಲ್ಲಿ ಹಣಕಾಸನ್ನು ಒದಗಿಸಿಕೊಟ್ಟಿದ್ದರು ಎಂಬ ಆರೋಪವಿದೆ.

ಮೋದಿ ಸರ್ಕಾರವನ್ನು ‘ಅಂಬಾನಿ, ಅದಾನಿಗಳ ಸರ್ಕಾರ’ ಎಂದು ಕರೆಯುವುದು ಒಂದು ನುಡಿಗಟ್ಟಾಗಿ ಹೋಗಿದೆ. ರಫೇಲ್ ಡೀಲ್.ಅನ್ನು ಮೋದಿ ಸರ್ಕಾರ ಎಲ್ಲಾ ನಿಯಮಗಳನ್ನೂ ಉಲ್ಲಂಘಿಸಿ ದಯಪಾಲಿಸಿದ್ದು ಅನಿಲ್ ಅಂಬಾನಿಗೆ. ಅಂದರೆ ಇದೇ ಮುಖೇಶ್ ಅಂಬಾನಿಯ ಸ್ವಂತ ಸಹೋದರನಿಗೆ. ಅದನ್ನು ರಾಹುಲ್ ಗಾಂಧಿಯವರು ತಮ್ಮ ಯಾವ ಚುನಾವಣಾ ಭಾಷಣದಲ್ಲೂ ಉಲ್ಲೇಖಿಸದೇ ಬಿಟ್ಟಿಲ್ಲ.

ಹೀಗಿದ್ದರೂ, ಮುಖೇಶ್ ಅಂಬಾನಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಬಹಿರಂಗವಾಗಿ ಮಾತಾಡಿರುವುದು ಏಕೆ? ಮಿಲಿಂದ್ ದೇವ್ರಾ ಮೊದಲಿಗೆ ಮು.ಅಂಬಾನಿಯ ವಿಡಿಯೋವನ್ನು ಟ್ವೀಟ್ ಮಾಡಿ, ಬೆಂಬಲವನ್ನು ಸಾದರಪಡಿಸಿದ್ದರು.

ಇದನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು.

ಒಂದು, ಮೇಲೆ ಹೇಳಿದಂತೆ ಮೋದಿಯೇತರ ಸರ್ಕಾರ ಕೇಂದ್ರದಲ್ಲಿ ಬರಬಹುದು ಎಂಬ ವಾಸನೆ ಅಂಬಾನಿಗೆ ಹತ್ತಿದೆ. ಕೆಲವು ಕೋಟಿಗಳನ್ನು ಖರ್ಚು ಮಾಡಿದರೆ, ದೇಶಾದ್ಯಂತ ಇರುವ ಮತದಾರರ ಮನದಿಂಗಿತವನ್ನು ಸರ್ವೇ ಮಾಡಿಕೊಡುವ ಏಜೆನ್ಸಿಗಳಿವೆ. ದೇಶದ ನಂ.1 ಕಾರ್ಪೋರೇಟ್ ಸಂಸ್ಥೆಯು ತನಗಿಷ್ಟ ಬಂದ ಹಾಗೆ ಮತದಾರರ ಒಲವನ್ನು ತಿರುಚಲು ಅಥವಾ ಗಾಳಿ ಬಂದ ಕಡೆಗೆ ತಿರುಗಿಕೊಳ್ಳಲು ಇಂತಹ ಸರ್ವೇ ಮಾಡಿಸಿರಲ್ಲ ಎಂದು ನಂಬಲಾಗದು. ಹಾಗಾಗಿ ಮುಖೇಶ್ ಅಂಬಾನಿಗೆ ಸಣ್ಣ ಮೊತ್ತವಾಗಿರಬಹುದಾದ ಕೆಲವು ಕೋಟಿಗಳನ್ನು ಖರ್ಚು ಮಾಡಿ ತಿಳಿದುಕೊಂಡಿರಬಹುದಾದ, ಗಾಳಿಯ ದಿಕ್ಕಿನ ಅನುಸಾರ ಈ ಬಹಿರಂಗ ಬೆಂಬಲ ಇರಬಹುದು.

ಎರಡು, ಮಿಲಿಂದ್ ದೇವ್ರಾ ಕುಟುಂಬ ಮತ್ತು ಅಂಬಾನಿ ಕುಟುಂಬದ ಸಂಬಂಧ ಬಹಳ ಹಳೆಯದು. ಮುಂಬೈನ ಮೇಯರ್ ಸಹಾ ಆಗಿದ್ದ ಮುರಳಿ ಮನೋಹರ್ ದೇವ್ರಾ ಈ ಅಂಬಾನಿಯ ಅಪ್ಪ ಧೀರೂಬಾಯಿ ಅಂಬಾನಿಯ ಸ್ನೇಹಿತರಾಗಿದ್ದರು. ಸೀನಿಯರ್ ದೇವ್ರಾ ತೀರಿಕೊಂಡಾಗ ಅಂಬಾನಿಯ  ಇಡೀ ಕುಟುಂಬವಲ್ಲದೇ ಸೋನಿಯಾಗಾಂಧಿಯವರ ಇಡೀ ಕುಟುಂಬವೂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿತ್ತು. ಆ ರೀತಿಯಲ್ಲಿ ದೇವ್ರಾ ಕುಟುಂಬವು 10, ಜನಪತ್ (ಸೋನಿಯಾ ನಿವಾಸ) ಮತ್ತು ಮುಂಬೈ ಉದ್ದಿಮೆದಾರರ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತದೆ.

ಮುರಳೀ ದೇವ್ರಾ 2006ರಿಂದ 2011ರವರೆಗೆ ಸತತ ಐದು ವರ್ಷಗಳ ಕಾಲ ಕೇಂದ್ರ ಪೆಟ್ರೋಲಿಯಂ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಕೃಷ್ಣಾ ಗೋದಾವರಿ ಕಣಿವೆಯ ತೈಲ –ಅನಿಲ ನಿಕ್ಷೇಪಗಳು ಅಂಬಾನಿಯ ಪಾಲಿಗೆ ಹೋಗುವ ಪ್ರಕ್ರಿಯೆ ನಡೆದಿತ್ತು.

ಇವೆಲ್ಲದರ ಭಾಗವಾಗಿ ಮಿಲಿಂದ್ ಗೆ ನೀಡುತ್ತಿರುವ ಬೆಂಬಲ ಸುದೀರ್ಘ ಕಾಲದ ಕೌಟುಂಬಿಕ ಬಾಂಧವ್ಯದ ಕಾರಣಕ್ಕೆ ಎಂದು ಹೇಳಬಹುದಾಗಿದ್ದರೂ, ಅದನ್ನು ಬಹಿರಂಗವಾಗಿ ಹೇಳುವ ಅಗತ್ಯವಿರಲಿಲ್ಲ. ಬದಲಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದರೆ, ಇದೇ ಮಿಲಿಂದ್ ಸರ್ಕಾರದ ಜೊತೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿ ಎಂಬ ಮುಂದಾಲೋಚನೆಯೂ ಅಂಬಾನಿಯದ್ದಿರಬಹುದು.

ಯಾರು ಅಧಿಕಾರಕ್ಕೆ ಬಂದರೂ, ಅಂಬಾನಿಗೆ ಏನೂ ಧಕ್ಕೆಯಾಗದಂತೆ ಇಂತಹ ಹಲವು ಏರ್ಪಾಡುಗಳಿರಲು ಸಾಧ್ಯ. ಆದರೆ, ‘ಮೋದಿಯು ಆ 15-20 ಉದ್ದಿಮೆಪತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಪದೇ ಪದೇ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿಯು ಮುಖೇಶ್ ಅಂಬಾನಿಯ ಪರವಾಗಿ ಇರುತ್ತಾರಾ ಎಂಬ ಪ್ರಶ್ನೆಗೆ ಭವಿಷ್ಯವಷ್ಟೇ ಉತ್ತರ ನೀಡಬಲ್ಲುದು.

ಅದೇ ಸಂದರ್ಭದಲ್ಲಿ ಮಿಲಿಂದ್ ದೇವ್ರಾನಂತಹ ವ್ಯಕ್ತಿಗಳು ಹೇಗೆ ರಾಜಕಾರಣ ಮತ್ತು ಉದ್ದಿಮೆಪತಿಗಳ ನಡುವಿನ ಕೊಂಡಿಯಾಗಿ ಎಲ್ಲಾ ಕಾಲದಲ್ಲೂ ಚಲಾವಣೆಯಲ್ಲಿರುತ್ತಾರೆಂಬುದನ್ನೂ ಈ ಬೆಳವಣಿಗೆ ತೋರಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...