Homeಮುಖಪುಟಕಾಂಗ್ರೆಸ್ ಅಭ್ಯರ್ಥಿಗೆ ಮುಖೇಶ್ ಅಂಬಾನಿ ಬೆಂಬಲ ಏನನ್ನು ತೋರಿಸುತ್ತದೆ?

ಕಾಂಗ್ರೆಸ್ ಅಭ್ಯರ್ಥಿಗೆ ಮುಖೇಶ್ ಅಂಬಾನಿ ಬೆಂಬಲ ಏನನ್ನು ತೋರಿಸುತ್ತದೆ?

- Advertisement -
- Advertisement -

| ನೀಲಗಾರ |

ಯಾವುದೇ ಚುನಾವಣೆಯ ಫಲಿತಾಂಶ ಬರುವ ಮುಂಚೆ ಎರಡು ಗುಂಪುಗಳಿಗೆ ಅದರ ವಾಸನೆ ಹತ್ತಿರುತ್ತದೆ ಎನ್ನಲಾಗುತ್ತದೆ. ಒಂದು ಉದ್ಯಮಿಗಳ ಗುಂಪು. ಇನ್ನೊಂದು ಅಧಿಕಾರಿಗಳ ಗುಂಪು. ಆದರೆ, ನರೇಂದ್ರ ಮೋದಿಯವರು ಮತ್ತು ಅವರ ತಂಡ ಹುಟ್ಟಿಸಿರುವ ಭೀತಿಯ ವಾತಾವರಣದಲ್ಲಿ ಯಾವುದೇ ಅಧಿಕಾರಿ ಅಥವಾ ಉದ್ದಿಮೆಪತಿ ಅವರ ವಿರುದ್ಧ ಮಾತನಾಡುವ ಪರಿಸ್ಥಿತಿ ಇಲ್ಲ.

ಸಮಾಜದಲ್ಲಿ ಸಾಮಾನ್ಯವಾಗಿ ನಿರ್ಭೀತಿಯಿಂದ ಮಾತಾಡುವ ಸಾಹಿತಿಗಳು, ಕಲಾವಿದರೇ ಹೆದರಿ ನಡುಗುವಂತಹ ವಾತಾವರಣ ಇದೆ. ಧಾಬೋಲ್ಕರ್, ಪಾನ್ಸರೆ, ಕಲಬುರ್ಗಿ, ಗೌರಿ ಲಂಕೇಶ್, ಜಸ್ಟೀಸ್ ಲೋಯಾರೂ ಸೇರಿದಂತೆ ಹಲವು ಕೊಲೆಗಳು ಸಮಾಜದಲ್ಲಿ ಒಂದು ನಿರ್ದಿಷ್ಟ ಸಂದೇಶವನ್ನು ರವಾನಿಸಿವೆ.

ಹೀಗಿರುವಾಗ ಉದ್ದಿಮೆಪತಿಗಳು ಮತ್ತು ಅಧಿಕಾರಿಗಳು ಮಾತನಾಡುವುದು ಕಷ್ಟಸಾಧ್ಯವೇ ಸರಿ.

ಇಂತಹ ಪರಿಸ್ಥಿತಿಯಲ್ಲಿ ದೇಶದ ನಂ.1 ಶ್ರೀಮಂತ ಮುಖೇಶ್ ಅಂಬಾನಿಯು ದಕ್ಷಿಣ ಮುಂಬೈನ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವ್ರಾ ಪರವಾಗಿ ಬ್ಯಾಟಿಂಗ್ ಮಾಡಿರುವುದು ಏನನ್ನು ತೋರಿಸುತ್ತದೆ ಎಂಬ ಕುತೂಹಲ ಮೂಡಿದೆ. ಮುಖೇಶ್ ಅಂಬಾನಿಯ ಜಿಯೋ ಲಾಂಚ್ ಮಾಡಿದಾಗ, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನೇ ಬಳಸಿಕೊಂಡಿದ್ದರು. ಅಷ್ಟಲ್ಲದೇ ಮುಖೇಶ್ ಅಂಬಾನಿ ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ದೊಡ್ಡ ಪ್ರಮಾಣದಲ್ಲಿ ಹಣಕಾಸನ್ನು ಒದಗಿಸಿಕೊಟ್ಟಿದ್ದರು ಎಂಬ ಆರೋಪವಿದೆ.

ಮೋದಿ ಸರ್ಕಾರವನ್ನು ‘ಅಂಬಾನಿ, ಅದಾನಿಗಳ ಸರ್ಕಾರ’ ಎಂದು ಕರೆಯುವುದು ಒಂದು ನುಡಿಗಟ್ಟಾಗಿ ಹೋಗಿದೆ. ರಫೇಲ್ ಡೀಲ್.ಅನ್ನು ಮೋದಿ ಸರ್ಕಾರ ಎಲ್ಲಾ ನಿಯಮಗಳನ್ನೂ ಉಲ್ಲಂಘಿಸಿ ದಯಪಾಲಿಸಿದ್ದು ಅನಿಲ್ ಅಂಬಾನಿಗೆ. ಅಂದರೆ ಇದೇ ಮುಖೇಶ್ ಅಂಬಾನಿಯ ಸ್ವಂತ ಸಹೋದರನಿಗೆ. ಅದನ್ನು ರಾಹುಲ್ ಗಾಂಧಿಯವರು ತಮ್ಮ ಯಾವ ಚುನಾವಣಾ ಭಾಷಣದಲ್ಲೂ ಉಲ್ಲೇಖಿಸದೇ ಬಿಟ್ಟಿಲ್ಲ.

ಹೀಗಿದ್ದರೂ, ಮುಖೇಶ್ ಅಂಬಾನಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಬಹಿರಂಗವಾಗಿ ಮಾತಾಡಿರುವುದು ಏಕೆ? ಮಿಲಿಂದ್ ದೇವ್ರಾ ಮೊದಲಿಗೆ ಮು.ಅಂಬಾನಿಯ ವಿಡಿಯೋವನ್ನು ಟ್ವೀಟ್ ಮಾಡಿ, ಬೆಂಬಲವನ್ನು ಸಾದರಪಡಿಸಿದ್ದರು.

ಇದನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು.

ಒಂದು, ಮೇಲೆ ಹೇಳಿದಂತೆ ಮೋದಿಯೇತರ ಸರ್ಕಾರ ಕೇಂದ್ರದಲ್ಲಿ ಬರಬಹುದು ಎಂಬ ವಾಸನೆ ಅಂಬಾನಿಗೆ ಹತ್ತಿದೆ. ಕೆಲವು ಕೋಟಿಗಳನ್ನು ಖರ್ಚು ಮಾಡಿದರೆ, ದೇಶಾದ್ಯಂತ ಇರುವ ಮತದಾರರ ಮನದಿಂಗಿತವನ್ನು ಸರ್ವೇ ಮಾಡಿಕೊಡುವ ಏಜೆನ್ಸಿಗಳಿವೆ. ದೇಶದ ನಂ.1 ಕಾರ್ಪೋರೇಟ್ ಸಂಸ್ಥೆಯು ತನಗಿಷ್ಟ ಬಂದ ಹಾಗೆ ಮತದಾರರ ಒಲವನ್ನು ತಿರುಚಲು ಅಥವಾ ಗಾಳಿ ಬಂದ ಕಡೆಗೆ ತಿರುಗಿಕೊಳ್ಳಲು ಇಂತಹ ಸರ್ವೇ ಮಾಡಿಸಿರಲ್ಲ ಎಂದು ನಂಬಲಾಗದು. ಹಾಗಾಗಿ ಮುಖೇಶ್ ಅಂಬಾನಿಗೆ ಸಣ್ಣ ಮೊತ್ತವಾಗಿರಬಹುದಾದ ಕೆಲವು ಕೋಟಿಗಳನ್ನು ಖರ್ಚು ಮಾಡಿ ತಿಳಿದುಕೊಂಡಿರಬಹುದಾದ, ಗಾಳಿಯ ದಿಕ್ಕಿನ ಅನುಸಾರ ಈ ಬಹಿರಂಗ ಬೆಂಬಲ ಇರಬಹುದು.

ಎರಡು, ಮಿಲಿಂದ್ ದೇವ್ರಾ ಕುಟುಂಬ ಮತ್ತು ಅಂಬಾನಿ ಕುಟುಂಬದ ಸಂಬಂಧ ಬಹಳ ಹಳೆಯದು. ಮುಂಬೈನ ಮೇಯರ್ ಸಹಾ ಆಗಿದ್ದ ಮುರಳಿ ಮನೋಹರ್ ದೇವ್ರಾ ಈ ಅಂಬಾನಿಯ ಅಪ್ಪ ಧೀರೂಬಾಯಿ ಅಂಬಾನಿಯ ಸ್ನೇಹಿತರಾಗಿದ್ದರು. ಸೀನಿಯರ್ ದೇವ್ರಾ ತೀರಿಕೊಂಡಾಗ ಅಂಬಾನಿಯ  ಇಡೀ ಕುಟುಂಬವಲ್ಲದೇ ಸೋನಿಯಾಗಾಂಧಿಯವರ ಇಡೀ ಕುಟುಂಬವೂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿತ್ತು. ಆ ರೀತಿಯಲ್ಲಿ ದೇವ್ರಾ ಕುಟುಂಬವು 10, ಜನಪತ್ (ಸೋನಿಯಾ ನಿವಾಸ) ಮತ್ತು ಮುಂಬೈ ಉದ್ದಿಮೆದಾರರ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತದೆ.

ಮುರಳೀ ದೇವ್ರಾ 2006ರಿಂದ 2011ರವರೆಗೆ ಸತತ ಐದು ವರ್ಷಗಳ ಕಾಲ ಕೇಂದ್ರ ಪೆಟ್ರೋಲಿಯಂ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಕೃಷ್ಣಾ ಗೋದಾವರಿ ಕಣಿವೆಯ ತೈಲ –ಅನಿಲ ನಿಕ್ಷೇಪಗಳು ಅಂಬಾನಿಯ ಪಾಲಿಗೆ ಹೋಗುವ ಪ್ರಕ್ರಿಯೆ ನಡೆದಿತ್ತು.

ಇವೆಲ್ಲದರ ಭಾಗವಾಗಿ ಮಿಲಿಂದ್ ಗೆ ನೀಡುತ್ತಿರುವ ಬೆಂಬಲ ಸುದೀರ್ಘ ಕಾಲದ ಕೌಟುಂಬಿಕ ಬಾಂಧವ್ಯದ ಕಾರಣಕ್ಕೆ ಎಂದು ಹೇಳಬಹುದಾಗಿದ್ದರೂ, ಅದನ್ನು ಬಹಿರಂಗವಾಗಿ ಹೇಳುವ ಅಗತ್ಯವಿರಲಿಲ್ಲ. ಬದಲಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದರೆ, ಇದೇ ಮಿಲಿಂದ್ ಸರ್ಕಾರದ ಜೊತೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿ ಎಂಬ ಮುಂದಾಲೋಚನೆಯೂ ಅಂಬಾನಿಯದ್ದಿರಬಹುದು.

ಯಾರು ಅಧಿಕಾರಕ್ಕೆ ಬಂದರೂ, ಅಂಬಾನಿಗೆ ಏನೂ ಧಕ್ಕೆಯಾಗದಂತೆ ಇಂತಹ ಹಲವು ಏರ್ಪಾಡುಗಳಿರಲು ಸಾಧ್ಯ. ಆದರೆ, ‘ಮೋದಿಯು ಆ 15-20 ಉದ್ದಿಮೆಪತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಪದೇ ಪದೇ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿಯು ಮುಖೇಶ್ ಅಂಬಾನಿಯ ಪರವಾಗಿ ಇರುತ್ತಾರಾ ಎಂಬ ಪ್ರಶ್ನೆಗೆ ಭವಿಷ್ಯವಷ್ಟೇ ಉತ್ತರ ನೀಡಬಲ್ಲುದು.

ಅದೇ ಸಂದರ್ಭದಲ್ಲಿ ಮಿಲಿಂದ್ ದೇವ್ರಾನಂತಹ ವ್ಯಕ್ತಿಗಳು ಹೇಗೆ ರಾಜಕಾರಣ ಮತ್ತು ಉದ್ದಿಮೆಪತಿಗಳ ನಡುವಿನ ಕೊಂಡಿಯಾಗಿ ಎಲ್ಲಾ ಕಾಲದಲ್ಲೂ ಚಲಾವಣೆಯಲ್ಲಿರುತ್ತಾರೆಂಬುದನ್ನೂ ಈ ಬೆಳವಣಿಗೆ ತೋರಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...