”ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಷಕನ್ಯೆ, ಮತ್ತೆ ಅವರು ಚೀನಾ ಪಾಕಿಸ್ತಾನದ ಎಜೆಂಟ್” ಎಂದು ಕೊಪ್ಪಳದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯತ್ನಾಳ್, ”ಮೋದಿ ನಾಗರಹಾವು ಆದರೆ ಸೋನಿಯಾ ಗಾಂಧಿ ವಿಷಕನ್ಯೆನಾ?” ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ”ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಹುಚ್ಚ” ಎಂದು ಕರೆದಿದ್ದಾರೆ.
ಯತ್ನಾಳ್ ಹೇಳಿಕೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ”ಸೋನಿಯಾ ಗಾಂಧಿ ವಿಷಕನ್ಯೆ ಎಂಬ ಹೇಳಿಕೆ ಮೂಲಕ ಇಡೀ ಸ್ತ್ರೀ ಕುಲವನ್ನೇ ಅವಮಾನಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ ತಕ್ಷಣ ಉಚ್ಛಾಟಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ”ಯತ್ನಾಳ ಅವರು ಭಾರತದ ಎಲ್ಲ ಮಹಿಳೆಯರನ್ನು ಅವಮಾನಿಸಿದ್ದಾರೆ. ಈ ಘಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಶದ ಕ್ಷಮೆ ಕೋರಬೇಕು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಕ್ಷಣವೇ ಯತ್ನಾಳ ಅವರನ್ನು ಉಚ್ಛಾಟಿಸಬೇಕು” ಎಂದು ಒತ್ತಾಯಿಸಿದ್ದಾರೆ.
”ಸೋನಿಯಾ ಅವರು ಈ ದೇಶದ ಅಖಂಡತೆ ಮತ್ತು ಸಮಗ್ರತೆಗಾಗಿ ಅತ್ತೆ ಹಾಗೂ ಗಂಡನನ್ನು ಕಳೆದುಕೊಂಡರು. ಎರಡು ಬಾರಿ ದೇಶದ ಪ್ರಧಾನಿ ಹುದ್ದೆ ಅಲಂಕರಿಸುವ ಅವಕಾಶ ಸಿಕ್ಕರೂ ಡಾ.ಮನಮೋಹನ್ ಸಿಂಗ್ ಅವರಂತಹ ಶ್ರೇಷ್ಠ ಆರ್ಥಿಕ ತಜ್ಞನಿಗೆ ಅವಕಾಶ ಕಲ್ಪಿಸಿದರು. ಅಂತಹ ಧೀಮಂತ ಮಹಿಳೆಯ ಕುರಿತು ಯತ್ನಾಳ ಕೀಳುಮಟ್ಟದ ಹೇಳಿಕೆ ನೀಡಿರುವುದು ಅಕ್ಷಮ್ಯ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಮೋದಿ ವಿಷದ ಹಾವಿದಂತೆ’; ರಾಜಕೀಯ ಚರ್ಚೆಗೆ ಗ್ರಾಸವಾದ ಖರ್ಗೆ ಹೇಳಿಕೆ
”ಯತ್ನಾಳ್, ನಿನ್ನ ಹೇಳಿಕೆಗೆ ಈ ರಾಜ್ಯದ ಜನರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಗೆ ಪ್ರತಿಕ್ರಿಯಿಸುತ್ತಾರೋ ನನಗಂತೂ ಗೊತ್ತಿಲ್ಲ” ಎಂದು ಏಕವಚನದಲ್ಲೇ ಎಚ್ಚರಿಕೆ ಡಿಕೆ ಶಿವಕುಮಾರ್ ನೀಡಿದ್ದಾರೆ.
”ನರೇಂದ್ರ ಮೋದಿಯವರು ಗುರುವಾರ ವರ್ಚ್ಯುಯಲ್ ಸಭೆ ನಡೆಸಿದ್ದಾರೆ. 50 ಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಸಭೆಗೆ ಅನುಮತಿ ನೀಡಲಾಗಿತ್ತೆ? ಸಭೆಯ ವೆಚ್ಚದ ವಿವರವನ್ನು ಯಾರ ಲೆಕ್ಕಕ್ಕೆ ಸೇರಿಸಲಾಗುತ್ತದೆ ಎಂಬುದನ್ನು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು. ಈ ಕುರಿತು ಕ್ರಮ ಕೈಗೊಳ್ಳಬೇಕು” ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಬಗ್ಗೆ ಕಾಂಗ್ರೆಸ್ ಘಟಕ ಸರಣಿ ಟ್ವೀಟ್ ಮಾಡಿದ್ದು, ”ಯತ್ನಾಳರ “ವಿಷಕನ್ಯೆ” ಹೇಳಿಕೆಗೆ ನರೇಂದ್ರ ಮೋದಿ ಅವರ ಅನುಮೋದನೆ ಇರಬಹುದೇನೋ, ಅವರದ್ದೂ ಇದೇ ಮನಸ್ಥಿತಿಯಲ್ಲವೇ! ಕಾಂಗ್ರೆಸ್ಸಿನ ವಿಧವೆ, ಜರ್ಸಿ ಹಸು, ವಿಷಕನ್ಯೆ, ಶ್ರೀಮತಿ ಸೋನಿಯಾ ಗಾಂಧಿಯವರ ಬಿಜೆಪಿ ಪ್ರಯೋಗಿಸುವ ಅತ್ಯಂತ ಕೀಳು ಪದಗಳು ಇನ್ನೆಷ್ಟಿವೆ? ಸಿಎಂ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಯತ್ನಾಳ್ ಈ ಹೇಳಿಕೆ ನೀಡಿದರೆ?” ಎಂದು ಪ್ರಶ್ನಿಸಿದೆ.
ಯತ್ನಾಳರ "ವಿಷಕನ್ಯೆ" ಹೇಳಿಕೆಗೆ @narendramodi ಅವರ ಅನುಮೋದನೆ ಇರಬಹುದೇನೋ, ಅವರದ್ದೂ ಇದೇ ಮನಸ್ಥಿತಿಯಲ್ಲವೇ!
ಕಾಂಗ್ರೆಸ್ಸಿನ ವಿಧವೆ,
ಜರ್ಸಿ ಹಸು,
ವಿಷಕನ್ಯೆ,ಶ್ರೀಮತಿ ಸೋನಿಯಾ ಗಾಂಧಿಯವರ ಬಿಜೆಪಿ ಪ್ರಯೋಗಿಸುವ ಅತ್ಯಂತ ಕೀಳು ಪದಗಳು ಇನ್ನೆಷ್ಟಿವೆ?
ಸಿಎಂ @BSBommai ಅವರ ನಿರ್ದೇಶನದಂತೆ ಯತ್ನಾಳ್ ಈ ಹೇಳಿಕೆ ನೀಡಿದರೆ?
— Karnataka Congress (@INCKarnataka) April 28, 2023
”ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯು ಈ ದೇಶದ ಸಂಸ್ಕೃತಿಗೆ ದಕ್ಕೆ ತರುವಂತಹದ್ದು. ಅವರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಸಿಎಂ ಬಸವರಾಜಬೊಮ್ಮಾಯಿ ಅವರು ಸೋನಿಯಾ ಗಾಂಧಿಯವರ ಹಾಗೂ ಈ ದೇಶದ ಸಮಸ್ತ ಮಹಿಳೆಯರಲ್ಲಿ ಮಂಡಿಯೂರಿ ಕ್ಷಮೆ ಕೇಳಬೇಕು. ಇದು ಸೋನಿಯಾ ಗಾಂಧಿಯವರೊಬ್ಬರ ಪ್ರಶ್ನೆಯಲ್ಲ, ಇಡೀ ಸ್ತ್ರೀಕುಲದ ಘನತೆಯ ಪ್ರಶ್ನೆ” ಕಾಂಗ್ರೆಸ್ ಆಗ್ರಹಿಸಿದೆ.
ಬಿಜೆಪಿಯ @BasanagoudaBJP ಅವರ ಹೇಳಿಕೆಯು ಈ ದೇಶದ ಸಂಸ್ಕೃತಿಗೆ ದಕ್ಕೆ ತರುವಂತಹದ್ದು.
ಅವರ ಹೇಳಿಕೆಗೆ ಪ್ರಧಾನಿ @narendramodi ಅವರು ಹಾಗೂ ಸಿಎಂ @BSBommai ಅವರು ಸೋನಿಯಾ ಗಾಂಧಿಯವರ ಹಾಗೂ ಈ ದೇಶದ ಸಮಸ್ತ ಮಹಿಳೆಯರಲ್ಲಿ ಮಂಡಿಯೂರಿ ಕ್ಷಮೆ ಕೇಳಬೇಕು.
ಇದು ಸೋನಿಯಾ ಗಾಂಧಿಯವರೊಬ್ಬರ ಪ್ರಶ್ನೆಯಲ್ಲ, ಇಡೀ ಸ್ತ್ರೀಕುಲದ ಘನತೆಯ ಪ್ರಶ್ನೆ. pic.twitter.com/q9N9xXQNpw
— Karnataka Congress (@INCKarnataka) April 28, 2023
”ಬಾರ್ ಡ್ಯಾನ್ಸರ್, ಕಾಂಗ್ರೆಸ್ನ ವಿಧವೆ, ಜರ್ಸಿ ಹಸು, ವಿಷಕನ್ಯೆ.. ಬಿಜೆಪಿಗರಿಂದ ಈ ರೀತಿಯ ಕೀಳು ಮಟ್ಟದ ನಿಂದನೆಗೆ ಒಳಗಾಗುತ್ತಿರುವ ಶ್ರೀಮತಿ ಸೋನಿಯಾ ಗಾಂಧಿಯವರು ಮಾಡಿದ ಅಪರಾದವಾದರೂ ಏನು? ಅವರು ಭಾರತದ ಸಂಸ್ಕೃತಿ ಅಳವಡಿಸಿಕೊಂಡು ಬದುಕುತ್ತಿರುವುದು ತಪ್ಪೇ? ದೇಶಕ್ಕಾಗಿ ಪತಿಯನ್ನು ಕಳೆದುಕೊಂಡಿದ್ದು ತಪ್ಪೇ?” ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಬಾರ್ ಡ್ಯಾನ್ಸರ್, ಕಾಂಗ್ರೆಸ್ಸಿನ ವಿಧವೆ, ಜರ್ಸಿ ಹಸು, ವಿಷಕನ್ಯೆ..
ಬಿಜೆಪಿಗರಿಂದ ಈ ರೀತಿಯ ಕೀಳು ಮಟ್ಟದ ನಿಂದನೆಗೆ ಒಳಗಾಗುತ್ತಿರುವ ಶ್ರೀಮತಿ ಸೋನಿಯಾ ಗಾಂಧಿಯವರು ಮಾಡಿದ ಅಪರಾದವಾದರೂ ಏನು?
ಅವರು ಭಾರತದ ಸಂಸ್ಕೃತಿ ಅಳವಡಿಸಿಕೊಂಡು ಬದುಕುತ್ತಿರುವುದು ತಪ್ಪೇ?
ದೇಶಕ್ಕಾಗಿ ಪತಿಯನ್ನು ಕಳೆದುಕೊಂಡಿದ್ದು ತಪ್ಪೇ? pic.twitter.com/VFjK73BV2K
— Karnataka Congress (@INCKarnataka) April 28, 2023