HomeUncategorized‘ಸಂಗೀತ ಮಾರಾಟದ ವಸ್ತು ಅಲ್ಲ’ : ಮುಕ್ತಿಯಾರ್ ಅಲಿ ಸಂದರ್ಶನ

‘ಸಂಗೀತ ಮಾರಾಟದ ವಸ್ತು ಅಲ್ಲ’ : ಮುಕ್ತಿಯಾರ್ ಅಲಿ ಸಂದರ್ಶನ

- Advertisement -
- Advertisement -

| ಕಲ್ಯಾಣಿ ಎಸ್. ಕುಮಾರ್ |

ಮುಕ್ತಿಯಾರ್ ಅಲಿಯವರು ರಾಜಸ್ತಾನದ ಜಾನಪದ ಸಂಗೀತದ ತಾನ, ಮಟ್ಟುಗಳನ್ನು ಶಾಸ್ತ್ರೀಯ ಗಾಯನಕ್ಕೆ ಒಗ್ಗಿಸಿಕೊಂಡು, ಮೀರಾ, ಕಬೀರರ ಕಾವ್ಯದ ಅಪೂರ್ವ ಸಂಯೋಜನೆಗಳನ್ನು ರೂಪಿಸುವ ಅಪರೂಪದ ಹಾಡುಗಾರರು. ‘ಮೀರಾಸಿ’ ಎಂಬ ಸಂಗೀತ ಸಮುದಾಯಕ್ಕೆ ಸೇರಿದ ಇವರ ವಿಶಿಷ್ಟ ಹಾಡುಗಾರಿಕೆ ಸಭಾ ಕಾರ್ಯಕ್ರಮಗಳು ಭಾರತ ಮತ್ತು ನೆರೆ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ, ಚೀನಾ, ಅಮೆರಿಕಾ ಯುರೋಪ್‍ಗಳಲ್ಲೂ ಆಗಾಗ ನಡೆಯುತ್ತಿರುತ್ತದೆ. ಇಂತಹ ಜನಪರ ಪ್ರತಿಭೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ಮತ್ತು ಗೌರಿ ಮೀಡಿಯಾ ಟ್ರಸ್ಟ್ ಜಂಟಿಯಾಗಿ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸೂಫಿಯಾನ ಕಾರ್ಯಕ್ರಮದಲ್ಲಿ ಹಾಡಲು ಬಂದಾಗ ಅವರ ಸಂದರ್ಶನ ನಡೆಸಲಾಯಿತು.

1. ಸಂಗೀತದ ಕಡೆಗೆ ನೀವು ನಡೆದುಬಂದದ್ದು ಹೇಗೆ?

ನಮ್ಮ ಸಂಗೀತ ಪರಂಪರೆ ಬಹಳ ಹಿಂದಿನ ಕಾಲದಿಂದ ನಡೆದುಬಂದಿದೆ. ನಮ್ಮ ಕಣ್ಣು ತೆರೆದಂತೆಯೇ ನನ್ನ ಸುತ್ತಲೂ ಸಂಗೀತಗಾರರೆ ನೆರೆದಿದ್ದರು. ನನ್ನ ತಂದೆ, ದೊಡ್ಡಪ್ಪ, ಚಿಕ್ಕಪ್ಪ, ತಾತ, ಮುತ್ತಾತ ಎಲ್ಲರೂ ಗಾಯಕರೆ. ನಾನು 26ನೇ ಪೀಳಿಗೆಯ ಗಾಯಕ. ನಮ್ಮ ಸಂಗೀತ ಪರಂಪರೆ 300-400 ವರ್ಷ ಪುರಾತನದ್ದು. ನಮ್ಮ ತಂದೆಯ ಕಾಲದಲ್ಲಿ ಭಾರತ ಸ್ವಾತಂತ್ಯ್ರ ಪಡೆಯಿತು. ಅಲ್ಲಿಯವರೆಗೂ ಎಲ್ಲವೂ ಸುಗಮವಾಗಿತ್ತು. ಸ್ವತಂತ್ರದ ತರುವಾಯ ಬಹಳಷ್ಟು ಬದಲಾವಣೆಗಳು ನಮ್ಮ ಸಂಸ್ಕೃತಿ, ಉಡುಪು, ಸಂಗೀತ ಎಲ್ಲವೂ ನಿಧಾನವಾಗಿ ಬದಲಾಗತೊಡಗಿತು. ಹಿಂದೆ ವಿನಿಮಯ ವ್ಯವಸ್ಥೆ (baster system)ಯಲ್ಲಿ ನಮಗೆ ಪೋಷಿಸಲು ಜನರು ನಮಗೆ ದವಸ, ಧಾನ್ಯಗಳನ್ನು ಹಾಗೂ ನಮ್ಮ ಮನೆಯನ್ನು ನಡೆಸಲುಬೇಕಾದ ದೈವಗಳನ್ನು ದಾನವಾಗಿ ನೀಡುತ್ತಿದ್ದು. ನಮ್ಮ ಮನೆಯ ಮದುವೆಗಳಲ್ಲಿ ಹಾಗೂ ಇತರ ಸಂದರ್ಭಗಳಲ್ಲಿ ತಮ್ಮ ಯೋಗದಾನವನ್ನು ಮಾಡುತ್ತಿದ್ದರು. ಒಬ್ಬರು ಊಟದ ವ್ಯವಸ್ಥೆ ಮಾಡಿದರೆ ಇನ್ನೊಬ್ಬರು ಬೆಳಕಿನ ವ್ಯವಸ್ಥೆ ಹೀಗೆ ಎಲ್ಲಾ ಕೆಲಸಗಳನ್ನು ಹಂಚಿಕೊಳ್ಳುತ್ತಿದ್ದರು. ಇದರ ಪ್ರತಿಯಾಗಿ ನಾವು ನಮ್ಮನ್ನು ಪೋಷಿಸಿದವರು ಹಾಗೂ ಅವರ ಮನೆಯ ಮಕ್ಕಳಿಗೆ ಸಂಗೀತ ಹೇಳಿಕೊಟ್ಟು ನಮ್ಮ ಗೌರವ ಸಲ್ಲಿಸುತ್ತಿದ್ದೆವು.

ಆದರೆ 80ನೇ ವರ್ಷದ ತರುವಾಯ ನಮ್ಮ ಸಂಗೀತಕ್ಕೆ ಹಾಗೂ ನಮ್ಮ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದವು. ಹೊಸದಾಗಿ ಬಂದ ವಿಸಿಆರ್ ಹಾಗೂ ಟಿವಿಯಿಂದ. ರೇಡಿಯೋ ಇದ್ದರೂ ನಮ್ಮ ವ್ಯವಹಾರಕ್ಕೆ ಪೆಟ್ಟು ಬಿದ್ದಿರಲಿಲ್ಲ. ಆದರೆ ಚಲನಚಿತ್ರ ಹಾಡುಗಳಿಂದ ನಮ್ಮ ಪಂಗಡದ ಹಾಡಿನ ಜನಪ್ರಿಯತೆ ನಿಧಾನವಾಗಿ ಇಳಿಯತೊಡಗಿತು. ಜನರು ಚಲನಚಿತ್ರದ ಕಡೆಗೆ ಮೋಹಗೊಂಡರು. ನಮ್ಮ ಸಂಗೀತ 1984ರಲ್ಲಿ ನಿಂತೆ ಹೋದಂತೆ ಕಾಣುತ್ತಿತ್ತು. ನಮ್ಮ ಸಂಗೀತದೊಂದಿಗೆ ನಮ್ಮ ಪಂಗಡದ ವೃತ್ತಿ ಬದಲಾಗತೊಡಗಿತು. ನಮ್ಮ ಪಂಗಡದ ಜನರು ವ್ಯವಸಾಯದ ಕಡೆಗೆ ವಾಲಲು ಆರಂಭಿಸಿದರು. ಕೆಲವರು ತಮ್ಮ ಜೀವನದ ಆದಾಯ ಪಡೆಯಲು ಬೇರೆ ಬೇರೆ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡರು. ನಾನು ದರ್ಜಿ ಆಗಬೇಕೆಂದು ನಿರ್ಧರಿಸಿ ಕೆಲಸ ಕಲಿಯಲು ಆರಂಭಿಸಿದೆ. ನನಗೆ 1989ರಲ್ಲಿ ಮದುವೆಯಾಯಿತು. ಹೆಂಡತಿ ಮಕ್ಕಳ ಜವಾಬ್ದಾರಿ ಬಂದಿದ್ದ ಕಾರಣ ನಾನು ದರ್ಜಿ ಕೆಲಸದ ನಡುವೆ ಬೇರೆ ಬೇರೆ ವ್ಯವಹಾರ ಮಾಡಲಾರಂಭಿಸಿದೆ. ಈ ಜವಾಬ್ದಾರಿಗಳ ನಡುವೆ ನನ್ನ ಸಂಗೀತ 1984ರಿಂದ ನಿಂತೇಹೋಯಿತು ಎನ್ನಬಹುದು.

2. ನಿಮ್ಮ ಸಂಗೀತ ನಿಂತು ಹೋದಮೇಲೆ ಸಂಗೀತ ಕ್ಷೇತ್ರಕ್ಕೆ ನಿಮ್ಮ ಮರುಪ್ರವೇಶ ಹೇಗಾಯಿತು?

ಕಲಾವಿದರು ಬಹಳಷ್ಟು ಮಂದಿ ಅಶಿಕ್ಷಿತರು. ನಮಗೆ ಈ ಟಿವಿ ಹಾಗೂ ವಿಸಿಆರ್ ದಾಳಿಗೆ ನಮ್ಮ ತಿರುಮಂತ್ರ ಹೇಗಿರಬೇಕು ಎಂದು ಯೋಚಿಸಲು ಆಗದ ಸ್ಥಿತಿಯಲ್ಲಿ ಇದ್ದೆವು. ನಮ್ಮ ಹತ್ತಿರ ಹಣವೂ ಇರಲಿಲ್ಲ. ಸಾಲದ್ದಕ್ಕೆ ನಮ್ಮ ಪಂಗಡದವರ ಹತ್ತಿರ ಭೂಮಿ ಕೂಡ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಉರ್‍ಮೂಲ್ ಟ್ರಸ್ಟ್‍ನ ಸಂಪರ್ಕದಲ್ಲಿ ಶಾಜೀತ್ ಘೋಷ್ ಎಂಬಾತನನ್ನು ಕಂಡೆ. ಅವರ ಎನ್‍ಜಿಓ ಮೀಟಿಂಗ್‍ಗಳಲ್ಲಿ ಪಾಲ್ಗೊಂಡೆ.

ಎರಡು ವರ್ಷ ಹೀಗೆ ನಡೆಯುತ್ತಿರುವಾಗ ಎಲ್ಲರಿಗೂ ನನ್ನ ಸಂಗೀತದ ಮಹತ್ವ ಅವರಿಗೆ ತಿಳಿಯಿತು. ಅವರು ನನಗೆ ಅವರಿಗಾದಷ್ಟು ಹಣ ಸಹಾಯ ಮಾಡಿದರು. 1998ರಲ್ಲಿ ರಾಹುಲ್ ಘೈ ನನ್ನನ್ನು ಭೇಟಿ ಮಾಡಿದರು. ಅವರು ನನಗೆ ನೀವು ನಿಮ್ಮ ಸಂಗೀತ ನಿಲ್ಲಿಸಿ ಸಂಗೀತಕ್ಕೆ ಅವಮಾನ ಮಾಡುತ್ತಿದ್ದೀರಿ ಎಂದರು. ಈ ಮಾತು ನನ್ನನ್ನು ಪ್ರಚಲಿತಗೊಳಿಸಿ ನನ್ನದೇ ಶೈಲಿಯನ್ನು ಆರಂಭ ಮಾಡಬೇಕೆಂದು ನಿರ್ಧರಿಸಿ, ನನ್ನ ಸಂಗೀತ ಸಂಶೋಧನೆ ಆರಂಭಿಸಿದೆ. ನವದೆಹಲಿಯಲ್ಲಿ ನನ್ನ ಗಾಯನವನ್ನು ಜನ ಮೆಚ್ಚಿದರು. ಆ ಸಭೆಯಲ್ಲಿ ನೆರೆದಿದ್ದ ಶಬ್ನಂ 2003ರಲ್ಲಿ ನನಗೆ ಕಬೀರನ ಗಾಯನ ಹಾಡಲು ಅವಕಾಶ ಮಾಡಿದರು. ಇತ್ತೀಚಿನ ಚಲನಚಿತ್ರ (ಫೈಂಡಿಂಗ್ ಫನ್ನಿ) ಹಾಡಿದ್ದೇನೆ. ಹೀಗೆ ನನ್ನ ಪಯಣ ಸಂಗೀತದಲ್ಲಿ ಹಾಗೂ ಸಂಗೀತದೊಡನೆ ಸಾಗುತ್ತಿದೆ.

3. ನಿಮ್ಮ ಕನಸಿನ ಭಾರತ ಯಾವುದು? ಅದು ಬರೀ ಕನಸಾಗಿ ಉಳಿಯುವ ಅಪಾಯ ಇದೆಯೇ?

ಭಾರತವನ್ನು ನಾನು ಬಂದು ಬೃಹತ್ ಆಲದಮರಕ್ಕೆ ಹೋಲಿಸುತ್ತೇನೆ. ಅದರಲ್ಲಿ ಚಿಕ್ಕ ಪಕ್ಷಿಗಳು, ದೊಡ್ಡ ಪಕ್ಷಿಗಳು ವಾಸಿಸುತ್ತವೆ. ಎಲ್ಲಾ ಜೀವಜಂತುಗಳು ಸಹಬಾಳ್ವೆ ನಡೆಸುತ್ತವೆ. ಇದನ್ನು ನೋಡಿದರೆ ನನಗೆ ಒಂದು ಸುಂದರ ಚಿತ್ರದ ತರಹ ಕಾಣಿಸುತ್ತದೆ. ಅದೇ ನನ್ನ ದೃಷ್ಟಿಯಲ್ಲಿ ಭಾರತ. ಎಲ್ಲಾ ಪ್ರಾಂತ್ಯದ ಜನರು ಸಹಬಾಳ್ವೆಯನ್ನು ನಂಬಿ ಬದುಕುತ್ತಿದ್ದರು. ಈಗ ನನಗೆ ಕೆಲವು ವಿಷಾದಗಳಿವೆ.

ಕಲಾವಿದರನ್ನು ನೋಡುವ ಕಣ್ಣುಗಳಲ್ಲಿ ಸಂಶಯ, ಅಸೂಯೆ ಹಾಗೂ ಅಹಂ ಎಲ್ಲಾ ಕಂಡುಬರುತ್ತಿದೆ. ಕಲಾವಿದರೇ ಆಗಲಿ ಅಥವಾ ಸಹಜ ಮನುಷ್ಯನೇ ಆಗಲಿ ಸಹಬಾಳ್ವೆಯ ಅಂಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಎಲ್ಲರೂ ವಿದ್ಯಾವಂತರು, ಆದರೂ ನಮ್ಮ ಭಾರತ ಹೀಗಿದೆ ಎಂದು ನನಗೆ ಬಹಳ ಬೇಸರವಾಗುತ್ತದೆ. ನಮ್ಮ ಭಾರತದಲ್ಲಿ ಸುಮಾರು ಪೀಳಿಗೆಯಿಂದಲೂ ವಿದ್ವಾಂಸರಿದ್ದರು. ಅವರ ಯೋಚನೆ ಇಂದಿನ ವಿದ್ಯಾವಂತರಿಗಿಂತ ಮಿಗಿಲಾದದ್ದು ಎಂದು ನಾನು ಭಾವಿಸಿದ್ದೇನೆ. ಅವರ ವಿಚಾರಗಳು, ಮಾತನಾಡುವ ಸ್ವಭಾವ, ಧರ್ಮಗಳನ್ನು ಜೊತೆಗಿಡುವ ವಿಧಾನವೆಲ್ಲಾ ತಿಳಿದಿತ್ತು. ನಾವು ಇದನ್ನು ತಿಳಿದುಕೊಳ್ಳುವುದು ಅಗತ್ಯ. ಇಂದಿನ ವಿದ್ಯಾವಂತರು ಮಾತಾಡಿದರೆ ನನಗೆ ಬಹಳ ಭೀತಿಯುಂಟಾಗುತ್ತದೆ. ಇದು ಬದಲಾಗಬೇಕು.

4. ಸೌಹಾರ್ದ ಭಾರತದ ನಿರ್ಮಾಣಕ್ಕೆ ಸಂಗೀತದ ಅಗತ್ಯ ಮತ್ತು ಸ್ವರೂಪದ ಬಗ್ಗೆ ವಿವರಿಸಿ

ನಮ್ಮ ಜನ ಸಂಗೀತವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಹಿಂದು ಸಂಗೀತ, ಇದು ಮುಸ್ಲಿಂ ಸಂಗೀತ, ಇದು ಸಿಖ್ ಹಾಡುಗಳು ಎಂದು ವಿಂಗಡಿಸಿದ್ದಾರೆ. ನಮ್ಮ ಸಂಗೀತ ವಿಂಗಡಣೆಗೆ ಚಲನಚಿತ್ರದ ಗಾಯನವು ಕಾರಣ ಎನ್ನಬಹುದು. ಹಿಂದೆ 60ರ ದಶಕದಲ್ಲಿ ಇರುವ ಸಂಗೀತ ನೋಡಿದರೆ ಎಲ್ಲಾ ಹಾಡುಗಳು ರಾಗದ ಆಧಾರಿತವಾಗಿವೆ. ಇಂದು ಎಲ್ಲಾ ಮೀಟರ್ ತಕ್ಕಂತೆ ಹಾಡುವುದು ವಾಡಿಕೆಗೆ ಬಂದಿದೆ. ಸಂಗೀತಗಾರರು ಎಲ್ಲರೂ ಕೂತು ಅವರ ಪರಸ್ಪರ ಆಲೋಚನೆ, ರಾಗದ ಸಮ್ಮಿಲನ ಸಂಗೀತ ಎನಿಸಿಕೊಳ್ಳುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ನಾನು ನೊಡಿಯೇ ಇಲ್ಲ. ಒಬ್ಬೊಬ್ಬರು ಬಂದು ತಮ್ಮ ಭಾಗ ಹಾಡಿ ಹೋಗುವರು. ಇದರಲ್ಲಿ ನಾವು ಕಲಾವಿದರ ಮನೋಧರ್ಮ ನಿರೀಕ್ಷಿಸುವುದು ಕಷ್ಟ. ಇದನ್ನು ಬ್ಯುಸಿನೆಸ್ ಮಾಡಿದ್ದಾರೆ. “ಸಂಗೀತ ಮಾರಾಟದ ವಸ್ತು ಅಲ್ಲ”. ಕಲಾವಿದ ಹಾಗೂ ಅವರ ಸಂಗೀತದ ಗೌರವ ಕಾಪಾಡಬೇಕು. ಇದನ್ನು ಮಾಡಿದರೆ ನಾವು ಸಹಬಾಳ್ವೆಯನ್ನು ಅರಿತುಕೊಳ್ಳಬಹುದು. ಕಲಾವಿದರು ಒಟ್ಟಿಗೆ ನಿಂತರೆ ಎಲ್ಲರಿಗೂ ಈ ತತ್ವ ಬೋಧಿಸಬಹುದು ಎಂದು ಭಾವಿಸುತ್ತೇನೆ.

5. ಭಾರತ ಒಡೆಯುವವರ ಶಕ್ತಿಗೆ ಎದುರಾಗಿ ಸಂಗೀತ ನಿಲ್ಲಬಹುದೇ?

ಸಂಗೀತ ಹಿಂದಿನ ಭಾರತದ ಸ್ವಾತಂತ್ರ್ಯದಿಂದ ಇಂದಿನವರೆಗೂ ನಮ್ಮನ್ನು ಬೆಂಬಲಿಸಿದೆ. ಸಂಗೀತ ಎಂದೆಂದಿಗೂ ಮಹಾಶಕ್ತಿಯಾಗಿ ಮುಂದಕ್ಕೂ ನಮ್ಮನ್ನು ಬೆಂಬಲಿಸಲಿದೆ. ಇದು ನಮ್ಮ ಒಗ್ಗಟ್ಟಿಗೆ ಮುಖ್ಯ ಕಾರಣವಾಗಲಿದೆ ಎನ್ನಬಹುದು.

6. ಕಬೀರರ ರಾಮ ಹಾಗೂ ಅಯೋಧ್ಯೆಯ ರಾಮ ಇಬ್ಬರ ನಡುವಿನ ಅಂತರವನ್ನು ನೀವು ಹೇಗೆ ನೋಡುವಿರಿ?

ಕಬೀರರ ರಾಮ ಹಾಗೂ ಅಯೋಧ್ಯೆಯ ರಾಮನಲ್ಲಿ ಬಹಳ ವ್ಯತ್ಯಾಸವಿದೆ. ಕಬೀರರ ರಾಮನಿಗೆ ಹುಟ್ಟು ಸಾವು ಇಲ್ಲ. ರಾಮ ಅಮರ. ರಾಮನಿಗೆ ತಂದೆ ತಾಯಿ ಇಲ್ಲ, ಆದಿಅಂತ್ಯವಿಲ್ಲ. ಆತನಿಗೆ ನಿರ್ದಿಷ್ಟ ದೇಹ, ರೂಪುರೇಷೆಯಿಲ್ಲ.

ಅಯೋಧ್ಯೆಯ ರಾಮನಿಗೆ ರೂಪ, ತಂದೆ-ತಾಯಿ ಎಲ್ಲವೂ ಇದೆ. ಕಬೀರರ ರಾಮ ಬ್ರಹ್ಮಾಂಡವನ್ನು ನಡೆಸುವವನು. ಆದರೆ ಅಯೋಧ್ಯೆಯ ರಾಮ ಐತಿಹಾಸಿಕ ರಾಮ. ಅಯೋಧ್ಯೆಗೆ ಅದರದ್ದೇ ಆದ ಇತಿಹಾಸವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನಾಸಿಕ್‌ನ...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...