ಪೌರತ್ವ ಕಾನೂನನ್ನು “ಸಾಂವಿಧಾನಿಕ” ಎಂದು ಘೋಷಿಸಬೇಕೆಂದು ಸಲ್ಲಿಸಿರುವ ಅರ್ಜಿಯ ಕುರಿತು ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ, ದೇಶವು ನಿರ್ಣಾಯಕ ಕಾಲದಲ್ಲಿ ಸಾಗುತ್ತಿದೆ ಮತ್ತು ಇಂತಹ ಅರ್ಜಿಗಳು ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಜೊತೆಗೆ ಹಿಂಸಾಚಾರ ನಿಲ್ಲಿಸಿದ ನಂತರವೇ ಪೌರತ್ವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಅರ್ಜಿದಾರ ವಕೀಲರಾದ ವಿನೀತ್ ಧಂಡಾ, ಸುಪ್ರೀಂ ಕೋರ್ಟ್ ಸಿಎಎಯನ್ನು “ಸಾಂವಿಧಾನಿಕ” ಎಂದು ಘೋಷಿಸಬೇಕು ಮತ್ತು “ಕಾರ್ಯಕರ್ತರು, ವಿದ್ಯಾರ್ಥಿಗಳು, ಸುಳ್ಳು ವದಂತಿಗಳನ್ನು ಹರಡುವ ಮಾಧ್ಯಮ ಸಂಸ್ಥೆಗಳ” ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಿಐಎಲ್ ಸಲ್ಲಿಸಿದ್ದರು.
“ಸಂಸತ್ತು ಅಂಗೀಕರಿಸಿದ ಕಾಯಿದೆ ಸಾಂವಿಧಾನಿಕ ಎಂದು ನಾವು ಹೇಗೆ ಘೋಷಿಸಬಹುದು? ಯಾವಾಗಲೂ ಸಾಂವಿಧಾನಿಕತೆಯ ಊಹೆಯಿದೆ. ನೀವು ಕೆಲವು ಸಮಯದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದರೆ, ನೀವು ಇದನ್ನು ತಿಳಿದುಕೊಳ್ಳಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯಿಸಿದ್ದಾರೆ.
“ದೇಶವು ನಿರ್ಣಾಯಕ ಕಾಲದಲ್ಲಿ ಸಾಗುತ್ತಿದೆ. ಪ್ರಯತ್ನವು ಶಾಂತಿಗಾಗಿರಬೇಕು. ಅಂತಹ ಅರ್ಜಿಗಳು ಸಹಾಯ ಮಾಡುವುದಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಬಾಬ್ಡೆ ಪ್ರತಿಪಾದಿಸಿದರು.