Homeಮುಖಪುಟಬಿಲಿಯನೇರ್ ಬೂಮ್: ಶ್ರೀಮಂತರ ಜೇಬುಗಳನ್ನು ಸೇರಿದ ಕೋವಿಡ್ ಕ್ಯಾಷ್!

ಬಿಲಿಯನೇರ್ ಬೂಮ್: ಶ್ರೀಮಂತರ ಜೇಬುಗಳನ್ನು ಸೇರಿದ ಕೋವಿಡ್ ಕ್ಯಾಷ್!

ಕಳೆದ ವರ್ಷ ವೈರಸ್ ಹರಡುತ್ತಿದ್ದಂತೆ, ಕೇಂದ್ರ ಬ್ಯಾಂಕುಗಳು ವಿಶ್ವಾದ್ಯಂತ ಆರ್ಥಿಕತೆಗಳಿಗೆ 9 ಟ್ರಿಲಿಯನ್ ಡಾಲರ್ ಹಣವನ್ನು ಸುರಿದವು. ಇದರ ಬಹುಪಾಲು ಅತಿ ಶ್ರೀಮಂತರ ಜೇಬುಗಳನ್ನು ಸೇರಿತು!

- Advertisement -
- Advertisement -

ಇತ್ತೀಚಿನ ದಶಕಗಳಲ್ಲಿ, ಬಿಲಿಯನೇರ್‌ಗಳ (ಶತಕೋಟ್ಯಾಧಿಪತಿಗಳ) ಜಾಗತಿಕ ಜನಸಂಖ್ಯೆಯು ಐದು ಪಟ್ಟು ಹೆಚ್ಚಾಗಿದೆ ಮತ್ತು ಅವರ ಒಟ್ಟು ಮೊತ್ತವು 100 ಶತಕೋಟಿ ಡಾಲರ್‌ನಷ್ಟಾಗಿದೆ. ಹೆಚ್ಚುತ್ತಿರುವ ಅಸಮಾನತೆಯು ಬಂಡವಾಳಶಾಹಿಯ ವಿರುದ್ಧ ಜನರಲ್ಲಿ ಆಕ್ರೋಶ ಮೂಡಿಸುತ್ತಿದೆ.

ಸಾಂಕ್ರಾಮಿಕವು ಬಂಡವಾಳಶಾಹಿಗಳ ಸಂಪತನ್ನು ಬಲಪಡಿಸಿದೆ. ವೈರಸ್ ಹರಡುತ್ತಿದ್ದಂತೆ, ಕೇಂದ್ರ ಬ್ಯಾಂಕುಗಳು ವಿಶ್ವಾದ್ಯಂತ ಆರ್ಥಿಕತೆಗಳಿಗೆ 9 ಟ್ರಿಲಿಯನ್ ಡಾಲರ್ ಹಣವನ್ನು ಸುರಿದವು. ಇದರ ಬಹುಪಾಲು ಹಣಕಾಸು ಮಾರುಕಟ್ಟೆಗಳಿಗೆ ಮತ್ತು ಅಲ್ಲಿಂದ ಅತಿ ಶ್ರೀಮಂತರ ನಿವ್ವಳ ಮೌಲ್ಯಕ್ಕೆ ಸೇರಿ ಹೋಯಿತು. ವಿಶ್ವಾದ್ಯಂತದ ಒಟ್ಟು ಶತಕೋಟ್ಯಾಧಿಪತಿಗಳ ಸಂಪತ್ತು 12 ತಿಂಗಳಲ್ಲಿ 5 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿ 13 ಟ್ರಿಲಿಯನ್ ಡಾಲರ್ ತಲುಪಿದೆ, ಇದು ಫೋರ್ಬ್ಸ್ ನಿಯತಕಾಲಿಕವು ಸಂಗ್ರಹಿಸಿದ ವಾರ್ಷಿಕ ಪಟ್ಟಿಯಲ್ಲಿ ದಾಖಲಾದ ಅತ್ಯಂತ ನಾಟಕೀಯ ಉಲ್ಬಣವಾಗಿದೆ.

ಬಿಲಿಯನೇರ್‌ಗಳ ಜನಸಂಖ್ಯೆಯೂ ಹೆಚ್ಚಾಯಿತು. ಏಪ್ರಿಲ್ 6 ರವರೆಗೆ ನಡೆಯುವ 2021 ಫೋರ್ಬ್ಸ್ ಪಟ್ಟಿಯಲ್ಲಿ, ಅವರ ಸಂಖ್ಯೆ ಸುಮಾರು 700 ರಷ್ಟು ಏರಿಕೆಯಾಗಿ 2,700ಕ್ಕಿಂತ ಹೆಚ್ಚಾಗಿದೆ. ಚೀನಾದಲ್ಲಿ ಅತಿದೊಡ್ಡ ಉಲ್ಬಣವು ಸಂಭವಿಸಿದೆ, ಅದು ಒಟ್ಟು 626 ಬಿಲಿಯನೇರ್‌ಗಳಲ್ಲಿ ಈ 12 ತಿಂಗಳಲ್ಲಿ ಹೊಸ 238 ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದಾರೆ. ಮುಂದಿನದು ಯುಎಸ್, ಒಟ್ಟು 724ರಲ್ಲಿ ಹೊಸದಾಗಿ 110 ಜನ ಈ ಪಟ್ಟಿ ಸೇರಿದ್ದಾರೆ. ಭಾರತದಲ್ಲಿ ಹೊಸದಾಗಿ 38 ಬಿಲಿಯನೇರ್‌ಗಳು ಕಂಡುಬಂದಿದ್ದು, ಒಟ್ಟು 140 ಬಿಲಿಯನೇರ್‌ಗಳಿದ್ದಾರೆ.

ಹೊಸ ಸಂಪತ್ತಿನ ಗಣ್ಯರ ವಿರುದ್ಧ ಕೋಪ ಬೆಳೆಯುತ್ತಿರುವಾಗ 2010ರಲ್ಲಿ ಭಾರತದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆನ್ನು ಗುರುತಿಸಲು ಆರಂಭಿಸಿದೆ. ಭಾರತವು ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಸಾಪೇಕ್ಷವಾಗಿ ಕಡಿಮೆ ಇದ್ದರೂ, ಬಿಲಿಯನೇರ್ ಸಂಪತ್ತು ಒಟ್ಟು ದೇಶೀಯ ಉತ್ಪನ್ನದ 17%ಕ್ಕಿಂತ ಹೆಚ್ಚಿದೆ! ಉದ್ಯಮಿ ಕುಟುಂಬಗಳು ಈ ಅಗಾಧ ಸಂಪತ್ತನ್ನು ಪಡೆಯುತ್ತಿದ್ದು, ಕ್ರೋನಿ ಕ್ಯಾಪಿಟಲಿಸಂ ಸಂಭವಿಸಲು ಕಾರಣವಾಗಿದೆ.

ಭಾರತಕ್ಕೆ ವ್ಯತಿರಿಕ್ತವಾಗಿ, ಅಮೆರಿಕದ ಬಿಲಿಯನೇರ್ ವರ್ಗವು 2010 ರ ದಶಕದ ಆರಂಭದಲ್ಲಿ ಆಶ್ಚರ್ಯಕರವಾಗಿ ಸಮತೋಲಿತವಾಗಿದೆ. ಆ ಸಮಯದಲ್ಲಿ ಬಿಲಿಯನೇರ್ ಸಂಪತ್ತು ಒಟ್ಟು ಜಿಡಿಪಿಯ ಸುಮಾರು 10% ರಷ್ಟಿತ್ತು, 2015 ರ ಹೊತ್ತಿಗೆ, ಬಿಲಿಯನೇರ್ ಸಂಪತ್ತು ಹಲವು ಪಟ್ಟುಗಳಲ್ಲಿ ಏರುತ್ತ ಹೋಗಿದೆ.

ಭಾರತದಲ್ಲಿ ಕ್ರೋನಿ-ಕ್ಯಾಪಟಲಿಸಂ

ಭಾರತ ಕೂಡ ಅಪಾಯದಲ್ಲಿರುವ ಸಮಾಜ. ಅದರ ಬಿಲಿಯನೇರ್ ವರ್ಗದ ಒಟ್ಟು ಸಂಪತ್ತು ಜಿಡಿಪಿಯ ಸುಮಾರು 20% ಗೆ ಸಮನಾಗಿರುತ್ತದೆ, ಇದು ರಷ್ಯಾದ ನಂತರ ಉದಯೋನ್ಮುಖ ರಾಷ್ಟ್ರಗಳಲ್ಲಿ ಎರಡನೆಯದು. ಬಿಲಿಯನೇರ್ ಸಂಪತ್ತಿನ 55% ಕ್ಕಿಂತ ಹೆಚ್ಚು ಉದ್ಯಮ ಕುಟುಂಬಗಳಲ್ಲಿ ಕೇಂದ್ರಕೃತವಾಗಿದೆ. ಒಳ್ಳೆಯ ಸುದ್ದಿ ಏನೆಂದರೆ, ಕಳೆದ ವರ್ಷ ಬಿಲಿಯನೇರ್ ಸಂಪತ್ತು ಒಂದು ಪಾಲಾಗಿ ಕುಸಿಯಿತು, ಏಕೆಂದರೆ ಹೊಸ ಸಂಪತ್ತು ತಂತ್ರಜ್ಞಾನ, ಉತ್ಪಾದನೆ ಮತ್ತು ವಿಶೇಷವಾಗಿ ವೈವಿಧ್ಯಮಯ ಉದ್ಯಮಗಳಲ್ಲಿ ಬಂದಿತು.

ಇದನ್ನೂ ಓದಿ: ತಲಾ ಆದಾಯದಲ್ಲಿ ಬಾಂಗ್ಲಾ ಭಾರತಕ್ಕಿಂತ ಮುಂದೆ, ಅದಾನಿ ಏಷ್ಯಾದ 2ನೆ ಶ್ರೀಮಂತ: ಇದು ಮೋದಿ ಮಾಡೆಲ್!

ಸಾಂಕ್ರಾಮಿಕವು ಈಗಾಗಲೇ ಚಲನೆಯಲ್ಲಿರುವ ಅನೇಕ ಆರ್ಥಿಕ ಮತ್ತು ಸಾಮಾಜಿಕ ಪ್ರವೃತ್ತಿಗಳನ್ನು ವೇಗಗೊಳಿಸಿತು, ಇದರಲ್ಲಿ ಬಿಲಿಯನೇರ್ ಉತ್ಕರ್ಷ ಸೇರಿದೆ. ಬಿಲಿಯನೇರ್‌ಗಳ ಏರಿಕೆಯ ಹಿಂದೆ ಕೇಂದ್ರ ಬ್ಯಾಂಕುಗಳಿಂದ ಸುಲಭವಾಗಿ ಹಣ ಸುರಿಯುವ ಪ್ರವೃತ್ತಿಯಲ್ಲಿದೆ.
ಸಂಪತ್ತಿನ ಸೃಷ್ಟಿಯ ಬಗ್ಗೆ ಸಾರ್ವಜನಿಕರ ಮನೋಭಾವದ ದೃಷ್ಟಿಯಿಂದ ಮುಂದೆ ಏನಾಗುತ್ತದೆ ಎಂಬುದು ಇಲ್ಲಿಂದ ಉತ್ಕರ್ಷ ಹೇಗೆ ವಿಕಸನಗೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿಯವರೆಗೆ, ಟೆಕ್ ಮತ್ತು ಉತ್ಪಾದನೆಯಂತಹ ಉತ್ಪಾದಕ ಕೈಗಾರಿಕೆಗಳಲ್ಲಿ ಸ್ವಯಂ ನಿರ್ಮಿತ ಉದ್ಯಮಿಗಳಿಗೆ ಅತಿದೊಡ್ಡ ಲಾಭಗಳು ಬಂದಿವೆ.

ಸಾಂಕ್ರಾಮಿಕವು ಅತಿ ಶ್ರೀಮಂತರ ಪಾಲಿಗೆ ವರವಾಗಿದೆ. ಕೋವಿಡ್ ಮೊದಲ ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಮುಖೇಶ್ ಅಂಬಾನಿ, ಅದಾನಿ ಮತ್ತು ಇಂತಹವರ ಸಂಪತ್ತು ಏರಿದ್ದನ್ನು ಗಮನಿಸಬೇಕು.

-ರುಚಿರ್ ಶರ್ಮಾ

(ಕೃಪೆ: ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್)


ಇದನ್ನೂ ಓದಿ: ರಾಷ್ಟ್ರೀಯ ದುರಂತಕ್ಕೆ ನಾಂದಿ ಹಾಡಿದ ಗುಜರಾತ್ ಮಾದರಿಯ ಅನುಷ್ಠಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...