Homeಮುಖಪುಟಬಿಲಿಯನೇರ್ ಬೂಮ್: ಶ್ರೀಮಂತರ ಜೇಬುಗಳನ್ನು ಸೇರಿದ ಕೋವಿಡ್ ಕ್ಯಾಷ್!

ಬಿಲಿಯನೇರ್ ಬೂಮ್: ಶ್ರೀಮಂತರ ಜೇಬುಗಳನ್ನು ಸೇರಿದ ಕೋವಿಡ್ ಕ್ಯಾಷ್!

ಕಳೆದ ವರ್ಷ ವೈರಸ್ ಹರಡುತ್ತಿದ್ದಂತೆ, ಕೇಂದ್ರ ಬ್ಯಾಂಕುಗಳು ವಿಶ್ವಾದ್ಯಂತ ಆರ್ಥಿಕತೆಗಳಿಗೆ 9 ಟ್ರಿಲಿಯನ್ ಡಾಲರ್ ಹಣವನ್ನು ಸುರಿದವು. ಇದರ ಬಹುಪಾಲು ಅತಿ ಶ್ರೀಮಂತರ ಜೇಬುಗಳನ್ನು ಸೇರಿತು!

- Advertisement -
- Advertisement -

ಇತ್ತೀಚಿನ ದಶಕಗಳಲ್ಲಿ, ಬಿಲಿಯನೇರ್‌ಗಳ (ಶತಕೋಟ್ಯಾಧಿಪತಿಗಳ) ಜಾಗತಿಕ ಜನಸಂಖ್ಯೆಯು ಐದು ಪಟ್ಟು ಹೆಚ್ಚಾಗಿದೆ ಮತ್ತು ಅವರ ಒಟ್ಟು ಮೊತ್ತವು 100 ಶತಕೋಟಿ ಡಾಲರ್‌ನಷ್ಟಾಗಿದೆ. ಹೆಚ್ಚುತ್ತಿರುವ ಅಸಮಾನತೆಯು ಬಂಡವಾಳಶಾಹಿಯ ವಿರುದ್ಧ ಜನರಲ್ಲಿ ಆಕ್ರೋಶ ಮೂಡಿಸುತ್ತಿದೆ.

ಸಾಂಕ್ರಾಮಿಕವು ಬಂಡವಾಳಶಾಹಿಗಳ ಸಂಪತನ್ನು ಬಲಪಡಿಸಿದೆ. ವೈರಸ್ ಹರಡುತ್ತಿದ್ದಂತೆ, ಕೇಂದ್ರ ಬ್ಯಾಂಕುಗಳು ವಿಶ್ವಾದ್ಯಂತ ಆರ್ಥಿಕತೆಗಳಿಗೆ 9 ಟ್ರಿಲಿಯನ್ ಡಾಲರ್ ಹಣವನ್ನು ಸುರಿದವು. ಇದರ ಬಹುಪಾಲು ಹಣಕಾಸು ಮಾರುಕಟ್ಟೆಗಳಿಗೆ ಮತ್ತು ಅಲ್ಲಿಂದ ಅತಿ ಶ್ರೀಮಂತರ ನಿವ್ವಳ ಮೌಲ್ಯಕ್ಕೆ ಸೇರಿ ಹೋಯಿತು. ವಿಶ್ವಾದ್ಯಂತದ ಒಟ್ಟು ಶತಕೋಟ್ಯಾಧಿಪತಿಗಳ ಸಂಪತ್ತು 12 ತಿಂಗಳಲ್ಲಿ 5 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿ 13 ಟ್ರಿಲಿಯನ್ ಡಾಲರ್ ತಲುಪಿದೆ, ಇದು ಫೋರ್ಬ್ಸ್ ನಿಯತಕಾಲಿಕವು ಸಂಗ್ರಹಿಸಿದ ವಾರ್ಷಿಕ ಪಟ್ಟಿಯಲ್ಲಿ ದಾಖಲಾದ ಅತ್ಯಂತ ನಾಟಕೀಯ ಉಲ್ಬಣವಾಗಿದೆ.

ಬಿಲಿಯನೇರ್‌ಗಳ ಜನಸಂಖ್ಯೆಯೂ ಹೆಚ್ಚಾಯಿತು. ಏಪ್ರಿಲ್ 6 ರವರೆಗೆ ನಡೆಯುವ 2021 ಫೋರ್ಬ್ಸ್ ಪಟ್ಟಿಯಲ್ಲಿ, ಅವರ ಸಂಖ್ಯೆ ಸುಮಾರು 700 ರಷ್ಟು ಏರಿಕೆಯಾಗಿ 2,700ಕ್ಕಿಂತ ಹೆಚ್ಚಾಗಿದೆ. ಚೀನಾದಲ್ಲಿ ಅತಿದೊಡ್ಡ ಉಲ್ಬಣವು ಸಂಭವಿಸಿದೆ, ಅದು ಒಟ್ಟು 626 ಬಿಲಿಯನೇರ್‌ಗಳಲ್ಲಿ ಈ 12 ತಿಂಗಳಲ್ಲಿ ಹೊಸ 238 ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದಾರೆ. ಮುಂದಿನದು ಯುಎಸ್, ಒಟ್ಟು 724ರಲ್ಲಿ ಹೊಸದಾಗಿ 110 ಜನ ಈ ಪಟ್ಟಿ ಸೇರಿದ್ದಾರೆ. ಭಾರತದಲ್ಲಿ ಹೊಸದಾಗಿ 38 ಬಿಲಿಯನೇರ್‌ಗಳು ಕಂಡುಬಂದಿದ್ದು, ಒಟ್ಟು 140 ಬಿಲಿಯನೇರ್‌ಗಳಿದ್ದಾರೆ.

ಹೊಸ ಸಂಪತ್ತಿನ ಗಣ್ಯರ ವಿರುದ್ಧ ಕೋಪ ಬೆಳೆಯುತ್ತಿರುವಾಗ 2010ರಲ್ಲಿ ಭಾರತದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆನ್ನು ಗುರುತಿಸಲು ಆರಂಭಿಸಿದೆ. ಭಾರತವು ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಸಾಪೇಕ್ಷವಾಗಿ ಕಡಿಮೆ ಇದ್ದರೂ, ಬಿಲಿಯನೇರ್ ಸಂಪತ್ತು ಒಟ್ಟು ದೇಶೀಯ ಉತ್ಪನ್ನದ 17%ಕ್ಕಿಂತ ಹೆಚ್ಚಿದೆ! ಉದ್ಯಮಿ ಕುಟುಂಬಗಳು ಈ ಅಗಾಧ ಸಂಪತ್ತನ್ನು ಪಡೆಯುತ್ತಿದ್ದು, ಕ್ರೋನಿ ಕ್ಯಾಪಿಟಲಿಸಂ ಸಂಭವಿಸಲು ಕಾರಣವಾಗಿದೆ.

ಭಾರತಕ್ಕೆ ವ್ಯತಿರಿಕ್ತವಾಗಿ, ಅಮೆರಿಕದ ಬಿಲಿಯನೇರ್ ವರ್ಗವು 2010 ರ ದಶಕದ ಆರಂಭದಲ್ಲಿ ಆಶ್ಚರ್ಯಕರವಾಗಿ ಸಮತೋಲಿತವಾಗಿದೆ. ಆ ಸಮಯದಲ್ಲಿ ಬಿಲಿಯನೇರ್ ಸಂಪತ್ತು ಒಟ್ಟು ಜಿಡಿಪಿಯ ಸುಮಾರು 10% ರಷ್ಟಿತ್ತು, 2015 ರ ಹೊತ್ತಿಗೆ, ಬಿಲಿಯನೇರ್ ಸಂಪತ್ತು ಹಲವು ಪಟ್ಟುಗಳಲ್ಲಿ ಏರುತ್ತ ಹೋಗಿದೆ.

ಭಾರತದಲ್ಲಿ ಕ್ರೋನಿ-ಕ್ಯಾಪಟಲಿಸಂ

ಭಾರತ ಕೂಡ ಅಪಾಯದಲ್ಲಿರುವ ಸಮಾಜ. ಅದರ ಬಿಲಿಯನೇರ್ ವರ್ಗದ ಒಟ್ಟು ಸಂಪತ್ತು ಜಿಡಿಪಿಯ ಸುಮಾರು 20% ಗೆ ಸಮನಾಗಿರುತ್ತದೆ, ಇದು ರಷ್ಯಾದ ನಂತರ ಉದಯೋನ್ಮುಖ ರಾಷ್ಟ್ರಗಳಲ್ಲಿ ಎರಡನೆಯದು. ಬಿಲಿಯನೇರ್ ಸಂಪತ್ತಿನ 55% ಕ್ಕಿಂತ ಹೆಚ್ಚು ಉದ್ಯಮ ಕುಟುಂಬಗಳಲ್ಲಿ ಕೇಂದ್ರಕೃತವಾಗಿದೆ. ಒಳ್ಳೆಯ ಸುದ್ದಿ ಏನೆಂದರೆ, ಕಳೆದ ವರ್ಷ ಬಿಲಿಯನೇರ್ ಸಂಪತ್ತು ಒಂದು ಪಾಲಾಗಿ ಕುಸಿಯಿತು, ಏಕೆಂದರೆ ಹೊಸ ಸಂಪತ್ತು ತಂತ್ರಜ್ಞಾನ, ಉತ್ಪಾದನೆ ಮತ್ತು ವಿಶೇಷವಾಗಿ ವೈವಿಧ್ಯಮಯ ಉದ್ಯಮಗಳಲ್ಲಿ ಬಂದಿತು.

ಇದನ್ನೂ ಓದಿ: ತಲಾ ಆದಾಯದಲ್ಲಿ ಬಾಂಗ್ಲಾ ಭಾರತಕ್ಕಿಂತ ಮುಂದೆ, ಅದಾನಿ ಏಷ್ಯಾದ 2ನೆ ಶ್ರೀಮಂತ: ಇದು ಮೋದಿ ಮಾಡೆಲ್!

ಸಾಂಕ್ರಾಮಿಕವು ಈಗಾಗಲೇ ಚಲನೆಯಲ್ಲಿರುವ ಅನೇಕ ಆರ್ಥಿಕ ಮತ್ತು ಸಾಮಾಜಿಕ ಪ್ರವೃತ್ತಿಗಳನ್ನು ವೇಗಗೊಳಿಸಿತು, ಇದರಲ್ಲಿ ಬಿಲಿಯನೇರ್ ಉತ್ಕರ್ಷ ಸೇರಿದೆ. ಬಿಲಿಯನೇರ್‌ಗಳ ಏರಿಕೆಯ ಹಿಂದೆ ಕೇಂದ್ರ ಬ್ಯಾಂಕುಗಳಿಂದ ಸುಲಭವಾಗಿ ಹಣ ಸುರಿಯುವ ಪ್ರವೃತ್ತಿಯಲ್ಲಿದೆ.
ಸಂಪತ್ತಿನ ಸೃಷ್ಟಿಯ ಬಗ್ಗೆ ಸಾರ್ವಜನಿಕರ ಮನೋಭಾವದ ದೃಷ್ಟಿಯಿಂದ ಮುಂದೆ ಏನಾಗುತ್ತದೆ ಎಂಬುದು ಇಲ್ಲಿಂದ ಉತ್ಕರ್ಷ ಹೇಗೆ ವಿಕಸನಗೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿಯವರೆಗೆ, ಟೆಕ್ ಮತ್ತು ಉತ್ಪಾದನೆಯಂತಹ ಉತ್ಪಾದಕ ಕೈಗಾರಿಕೆಗಳಲ್ಲಿ ಸ್ವಯಂ ನಿರ್ಮಿತ ಉದ್ಯಮಿಗಳಿಗೆ ಅತಿದೊಡ್ಡ ಲಾಭಗಳು ಬಂದಿವೆ.

ಸಾಂಕ್ರಾಮಿಕವು ಅತಿ ಶ್ರೀಮಂತರ ಪಾಲಿಗೆ ವರವಾಗಿದೆ. ಕೋವಿಡ್ ಮೊದಲ ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಮುಖೇಶ್ ಅಂಬಾನಿ, ಅದಾನಿ ಮತ್ತು ಇಂತಹವರ ಸಂಪತ್ತು ಏರಿದ್ದನ್ನು ಗಮನಿಸಬೇಕು.

-ರುಚಿರ್ ಶರ್ಮಾ

(ಕೃಪೆ: ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್)


ಇದನ್ನೂ ಓದಿ: ರಾಷ್ಟ್ರೀಯ ದುರಂತಕ್ಕೆ ನಾಂದಿ ಹಾಡಿದ ಗುಜರಾತ್ ಮಾದರಿಯ ಅನುಷ್ಠಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...