Homeಮುಖಪುಟಬಿಲಿಯನೇರ್ ಬೂಮ್: ಶ್ರೀಮಂತರ ಜೇಬುಗಳನ್ನು ಸೇರಿದ ಕೋವಿಡ್ ಕ್ಯಾಷ್!

ಬಿಲಿಯನೇರ್ ಬೂಮ್: ಶ್ರೀಮಂತರ ಜೇಬುಗಳನ್ನು ಸೇರಿದ ಕೋವಿಡ್ ಕ್ಯಾಷ್!

ಕಳೆದ ವರ್ಷ ವೈರಸ್ ಹರಡುತ್ತಿದ್ದಂತೆ, ಕೇಂದ್ರ ಬ್ಯಾಂಕುಗಳು ವಿಶ್ವಾದ್ಯಂತ ಆರ್ಥಿಕತೆಗಳಿಗೆ 9 ಟ್ರಿಲಿಯನ್ ಡಾಲರ್ ಹಣವನ್ನು ಸುರಿದವು. ಇದರ ಬಹುಪಾಲು ಅತಿ ಶ್ರೀಮಂತರ ಜೇಬುಗಳನ್ನು ಸೇರಿತು!

- Advertisement -
- Advertisement -

ಇತ್ತೀಚಿನ ದಶಕಗಳಲ್ಲಿ, ಬಿಲಿಯನೇರ್‌ಗಳ (ಶತಕೋಟ್ಯಾಧಿಪತಿಗಳ) ಜಾಗತಿಕ ಜನಸಂಖ್ಯೆಯು ಐದು ಪಟ್ಟು ಹೆಚ್ಚಾಗಿದೆ ಮತ್ತು ಅವರ ಒಟ್ಟು ಮೊತ್ತವು 100 ಶತಕೋಟಿ ಡಾಲರ್‌ನಷ್ಟಾಗಿದೆ. ಹೆಚ್ಚುತ್ತಿರುವ ಅಸಮಾನತೆಯು ಬಂಡವಾಳಶಾಹಿಯ ವಿರುದ್ಧ ಜನರಲ್ಲಿ ಆಕ್ರೋಶ ಮೂಡಿಸುತ್ತಿದೆ.

ಸಾಂಕ್ರಾಮಿಕವು ಬಂಡವಾಳಶಾಹಿಗಳ ಸಂಪತನ್ನು ಬಲಪಡಿಸಿದೆ. ವೈರಸ್ ಹರಡುತ್ತಿದ್ದಂತೆ, ಕೇಂದ್ರ ಬ್ಯಾಂಕುಗಳು ವಿಶ್ವಾದ್ಯಂತ ಆರ್ಥಿಕತೆಗಳಿಗೆ 9 ಟ್ರಿಲಿಯನ್ ಡಾಲರ್ ಹಣವನ್ನು ಸುರಿದವು. ಇದರ ಬಹುಪಾಲು ಹಣಕಾಸು ಮಾರುಕಟ್ಟೆಗಳಿಗೆ ಮತ್ತು ಅಲ್ಲಿಂದ ಅತಿ ಶ್ರೀಮಂತರ ನಿವ್ವಳ ಮೌಲ್ಯಕ್ಕೆ ಸೇರಿ ಹೋಯಿತು. ವಿಶ್ವಾದ್ಯಂತದ ಒಟ್ಟು ಶತಕೋಟ್ಯಾಧಿಪತಿಗಳ ಸಂಪತ್ತು 12 ತಿಂಗಳಲ್ಲಿ 5 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿ 13 ಟ್ರಿಲಿಯನ್ ಡಾಲರ್ ತಲುಪಿದೆ, ಇದು ಫೋರ್ಬ್ಸ್ ನಿಯತಕಾಲಿಕವು ಸಂಗ್ರಹಿಸಿದ ವಾರ್ಷಿಕ ಪಟ್ಟಿಯಲ್ಲಿ ದಾಖಲಾದ ಅತ್ಯಂತ ನಾಟಕೀಯ ಉಲ್ಬಣವಾಗಿದೆ.

ಬಿಲಿಯನೇರ್‌ಗಳ ಜನಸಂಖ್ಯೆಯೂ ಹೆಚ್ಚಾಯಿತು. ಏಪ್ರಿಲ್ 6 ರವರೆಗೆ ನಡೆಯುವ 2021 ಫೋರ್ಬ್ಸ್ ಪಟ್ಟಿಯಲ್ಲಿ, ಅವರ ಸಂಖ್ಯೆ ಸುಮಾರು 700 ರಷ್ಟು ಏರಿಕೆಯಾಗಿ 2,700ಕ್ಕಿಂತ ಹೆಚ್ಚಾಗಿದೆ. ಚೀನಾದಲ್ಲಿ ಅತಿದೊಡ್ಡ ಉಲ್ಬಣವು ಸಂಭವಿಸಿದೆ, ಅದು ಒಟ್ಟು 626 ಬಿಲಿಯನೇರ್‌ಗಳಲ್ಲಿ ಈ 12 ತಿಂಗಳಲ್ಲಿ ಹೊಸ 238 ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದಾರೆ. ಮುಂದಿನದು ಯುಎಸ್, ಒಟ್ಟು 724ರಲ್ಲಿ ಹೊಸದಾಗಿ 110 ಜನ ಈ ಪಟ್ಟಿ ಸೇರಿದ್ದಾರೆ. ಭಾರತದಲ್ಲಿ ಹೊಸದಾಗಿ 38 ಬಿಲಿಯನೇರ್‌ಗಳು ಕಂಡುಬಂದಿದ್ದು, ಒಟ್ಟು 140 ಬಿಲಿಯನೇರ್‌ಗಳಿದ್ದಾರೆ.

ಹೊಸ ಸಂಪತ್ತಿನ ಗಣ್ಯರ ವಿರುದ್ಧ ಕೋಪ ಬೆಳೆಯುತ್ತಿರುವಾಗ 2010ರಲ್ಲಿ ಭಾರತದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆನ್ನು ಗುರುತಿಸಲು ಆರಂಭಿಸಿದೆ. ಭಾರತವು ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಸಾಪೇಕ್ಷವಾಗಿ ಕಡಿಮೆ ಇದ್ದರೂ, ಬಿಲಿಯನೇರ್ ಸಂಪತ್ತು ಒಟ್ಟು ದೇಶೀಯ ಉತ್ಪನ್ನದ 17%ಕ್ಕಿಂತ ಹೆಚ್ಚಿದೆ! ಉದ್ಯಮಿ ಕುಟುಂಬಗಳು ಈ ಅಗಾಧ ಸಂಪತ್ತನ್ನು ಪಡೆಯುತ್ತಿದ್ದು, ಕ್ರೋನಿ ಕ್ಯಾಪಿಟಲಿಸಂ ಸಂಭವಿಸಲು ಕಾರಣವಾಗಿದೆ.

ಭಾರತಕ್ಕೆ ವ್ಯತಿರಿಕ್ತವಾಗಿ, ಅಮೆರಿಕದ ಬಿಲಿಯನೇರ್ ವರ್ಗವು 2010 ರ ದಶಕದ ಆರಂಭದಲ್ಲಿ ಆಶ್ಚರ್ಯಕರವಾಗಿ ಸಮತೋಲಿತವಾಗಿದೆ. ಆ ಸಮಯದಲ್ಲಿ ಬಿಲಿಯನೇರ್ ಸಂಪತ್ತು ಒಟ್ಟು ಜಿಡಿಪಿಯ ಸುಮಾರು 10% ರಷ್ಟಿತ್ತು, 2015 ರ ಹೊತ್ತಿಗೆ, ಬಿಲಿಯನೇರ್ ಸಂಪತ್ತು ಹಲವು ಪಟ್ಟುಗಳಲ್ಲಿ ಏರುತ್ತ ಹೋಗಿದೆ.

ಭಾರತದಲ್ಲಿ ಕ್ರೋನಿ-ಕ್ಯಾಪಟಲಿಸಂ

ಭಾರತ ಕೂಡ ಅಪಾಯದಲ್ಲಿರುವ ಸಮಾಜ. ಅದರ ಬಿಲಿಯನೇರ್ ವರ್ಗದ ಒಟ್ಟು ಸಂಪತ್ತು ಜಿಡಿಪಿಯ ಸುಮಾರು 20% ಗೆ ಸಮನಾಗಿರುತ್ತದೆ, ಇದು ರಷ್ಯಾದ ನಂತರ ಉದಯೋನ್ಮುಖ ರಾಷ್ಟ್ರಗಳಲ್ಲಿ ಎರಡನೆಯದು. ಬಿಲಿಯನೇರ್ ಸಂಪತ್ತಿನ 55% ಕ್ಕಿಂತ ಹೆಚ್ಚು ಉದ್ಯಮ ಕುಟುಂಬಗಳಲ್ಲಿ ಕೇಂದ್ರಕೃತವಾಗಿದೆ. ಒಳ್ಳೆಯ ಸುದ್ದಿ ಏನೆಂದರೆ, ಕಳೆದ ವರ್ಷ ಬಿಲಿಯನೇರ್ ಸಂಪತ್ತು ಒಂದು ಪಾಲಾಗಿ ಕುಸಿಯಿತು, ಏಕೆಂದರೆ ಹೊಸ ಸಂಪತ್ತು ತಂತ್ರಜ್ಞಾನ, ಉತ್ಪಾದನೆ ಮತ್ತು ವಿಶೇಷವಾಗಿ ವೈವಿಧ್ಯಮಯ ಉದ್ಯಮಗಳಲ್ಲಿ ಬಂದಿತು.

ಇದನ್ನೂ ಓದಿ: ತಲಾ ಆದಾಯದಲ್ಲಿ ಬಾಂಗ್ಲಾ ಭಾರತಕ್ಕಿಂತ ಮುಂದೆ, ಅದಾನಿ ಏಷ್ಯಾದ 2ನೆ ಶ್ರೀಮಂತ: ಇದು ಮೋದಿ ಮಾಡೆಲ್!

ಸಾಂಕ್ರಾಮಿಕವು ಈಗಾಗಲೇ ಚಲನೆಯಲ್ಲಿರುವ ಅನೇಕ ಆರ್ಥಿಕ ಮತ್ತು ಸಾಮಾಜಿಕ ಪ್ರವೃತ್ತಿಗಳನ್ನು ವೇಗಗೊಳಿಸಿತು, ಇದರಲ್ಲಿ ಬಿಲಿಯನೇರ್ ಉತ್ಕರ್ಷ ಸೇರಿದೆ. ಬಿಲಿಯನೇರ್‌ಗಳ ಏರಿಕೆಯ ಹಿಂದೆ ಕೇಂದ್ರ ಬ್ಯಾಂಕುಗಳಿಂದ ಸುಲಭವಾಗಿ ಹಣ ಸುರಿಯುವ ಪ್ರವೃತ್ತಿಯಲ್ಲಿದೆ.
ಸಂಪತ್ತಿನ ಸೃಷ್ಟಿಯ ಬಗ್ಗೆ ಸಾರ್ವಜನಿಕರ ಮನೋಭಾವದ ದೃಷ್ಟಿಯಿಂದ ಮುಂದೆ ಏನಾಗುತ್ತದೆ ಎಂಬುದು ಇಲ್ಲಿಂದ ಉತ್ಕರ್ಷ ಹೇಗೆ ವಿಕಸನಗೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿಯವರೆಗೆ, ಟೆಕ್ ಮತ್ತು ಉತ್ಪಾದನೆಯಂತಹ ಉತ್ಪಾದಕ ಕೈಗಾರಿಕೆಗಳಲ್ಲಿ ಸ್ವಯಂ ನಿರ್ಮಿತ ಉದ್ಯಮಿಗಳಿಗೆ ಅತಿದೊಡ್ಡ ಲಾಭಗಳು ಬಂದಿವೆ.

ಸಾಂಕ್ರಾಮಿಕವು ಅತಿ ಶ್ರೀಮಂತರ ಪಾಲಿಗೆ ವರವಾಗಿದೆ. ಕೋವಿಡ್ ಮೊದಲ ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಮುಖೇಶ್ ಅಂಬಾನಿ, ಅದಾನಿ ಮತ್ತು ಇಂತಹವರ ಸಂಪತ್ತು ಏರಿದ್ದನ್ನು ಗಮನಿಸಬೇಕು.

-ರುಚಿರ್ ಶರ್ಮಾ

(ಕೃಪೆ: ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್)


ಇದನ್ನೂ ಓದಿ: ರಾಷ್ಟ್ರೀಯ ದುರಂತಕ್ಕೆ ನಾಂದಿ ಹಾಡಿದ ಗುಜರಾತ್ ಮಾದರಿಯ ಅನುಷ್ಠಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...