Homeಮುಖಪುಟಬಿಲಿಯನೇರ್ ಬೂಮ್: ಶ್ರೀಮಂತರ ಜೇಬುಗಳನ್ನು ಸೇರಿದ ಕೋವಿಡ್ ಕ್ಯಾಷ್!

ಬಿಲಿಯನೇರ್ ಬೂಮ್: ಶ್ರೀಮಂತರ ಜೇಬುಗಳನ್ನು ಸೇರಿದ ಕೋವಿಡ್ ಕ್ಯಾಷ್!

ಕಳೆದ ವರ್ಷ ವೈರಸ್ ಹರಡುತ್ತಿದ್ದಂತೆ, ಕೇಂದ್ರ ಬ್ಯಾಂಕುಗಳು ವಿಶ್ವಾದ್ಯಂತ ಆರ್ಥಿಕತೆಗಳಿಗೆ 9 ಟ್ರಿಲಿಯನ್ ಡಾಲರ್ ಹಣವನ್ನು ಸುರಿದವು. ಇದರ ಬಹುಪಾಲು ಅತಿ ಶ್ರೀಮಂತರ ಜೇಬುಗಳನ್ನು ಸೇರಿತು!

- Advertisement -
- Advertisement -

ಇತ್ತೀಚಿನ ದಶಕಗಳಲ್ಲಿ, ಬಿಲಿಯನೇರ್‌ಗಳ (ಶತಕೋಟ್ಯಾಧಿಪತಿಗಳ) ಜಾಗತಿಕ ಜನಸಂಖ್ಯೆಯು ಐದು ಪಟ್ಟು ಹೆಚ್ಚಾಗಿದೆ ಮತ್ತು ಅವರ ಒಟ್ಟು ಮೊತ್ತವು 100 ಶತಕೋಟಿ ಡಾಲರ್‌ನಷ್ಟಾಗಿದೆ. ಹೆಚ್ಚುತ್ತಿರುವ ಅಸಮಾನತೆಯು ಬಂಡವಾಳಶಾಹಿಯ ವಿರುದ್ಧ ಜನರಲ್ಲಿ ಆಕ್ರೋಶ ಮೂಡಿಸುತ್ತಿದೆ.

ಸಾಂಕ್ರಾಮಿಕವು ಬಂಡವಾಳಶಾಹಿಗಳ ಸಂಪತನ್ನು ಬಲಪಡಿಸಿದೆ. ವೈರಸ್ ಹರಡುತ್ತಿದ್ದಂತೆ, ಕೇಂದ್ರ ಬ್ಯಾಂಕುಗಳು ವಿಶ್ವಾದ್ಯಂತ ಆರ್ಥಿಕತೆಗಳಿಗೆ 9 ಟ್ರಿಲಿಯನ್ ಡಾಲರ್ ಹಣವನ್ನು ಸುರಿದವು. ಇದರ ಬಹುಪಾಲು ಹಣಕಾಸು ಮಾರುಕಟ್ಟೆಗಳಿಗೆ ಮತ್ತು ಅಲ್ಲಿಂದ ಅತಿ ಶ್ರೀಮಂತರ ನಿವ್ವಳ ಮೌಲ್ಯಕ್ಕೆ ಸೇರಿ ಹೋಯಿತು. ವಿಶ್ವಾದ್ಯಂತದ ಒಟ್ಟು ಶತಕೋಟ್ಯಾಧಿಪತಿಗಳ ಸಂಪತ್ತು 12 ತಿಂಗಳಲ್ಲಿ 5 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿ 13 ಟ್ರಿಲಿಯನ್ ಡಾಲರ್ ತಲುಪಿದೆ, ಇದು ಫೋರ್ಬ್ಸ್ ನಿಯತಕಾಲಿಕವು ಸಂಗ್ರಹಿಸಿದ ವಾರ್ಷಿಕ ಪಟ್ಟಿಯಲ್ಲಿ ದಾಖಲಾದ ಅತ್ಯಂತ ನಾಟಕೀಯ ಉಲ್ಬಣವಾಗಿದೆ.

ಬಿಲಿಯನೇರ್‌ಗಳ ಜನಸಂಖ್ಯೆಯೂ ಹೆಚ್ಚಾಯಿತು. ಏಪ್ರಿಲ್ 6 ರವರೆಗೆ ನಡೆಯುವ 2021 ಫೋರ್ಬ್ಸ್ ಪಟ್ಟಿಯಲ್ಲಿ, ಅವರ ಸಂಖ್ಯೆ ಸುಮಾರು 700 ರಷ್ಟು ಏರಿಕೆಯಾಗಿ 2,700ಕ್ಕಿಂತ ಹೆಚ್ಚಾಗಿದೆ. ಚೀನಾದಲ್ಲಿ ಅತಿದೊಡ್ಡ ಉಲ್ಬಣವು ಸಂಭವಿಸಿದೆ, ಅದು ಒಟ್ಟು 626 ಬಿಲಿಯನೇರ್‌ಗಳಲ್ಲಿ ಈ 12 ತಿಂಗಳಲ್ಲಿ ಹೊಸ 238 ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದಾರೆ. ಮುಂದಿನದು ಯುಎಸ್, ಒಟ್ಟು 724ರಲ್ಲಿ ಹೊಸದಾಗಿ 110 ಜನ ಈ ಪಟ್ಟಿ ಸೇರಿದ್ದಾರೆ. ಭಾರತದಲ್ಲಿ ಹೊಸದಾಗಿ 38 ಬಿಲಿಯನೇರ್‌ಗಳು ಕಂಡುಬಂದಿದ್ದು, ಒಟ್ಟು 140 ಬಿಲಿಯನೇರ್‌ಗಳಿದ್ದಾರೆ.

ಹೊಸ ಸಂಪತ್ತಿನ ಗಣ್ಯರ ವಿರುದ್ಧ ಕೋಪ ಬೆಳೆಯುತ್ತಿರುವಾಗ 2010ರಲ್ಲಿ ಭಾರತದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆನ್ನು ಗುರುತಿಸಲು ಆರಂಭಿಸಿದೆ. ಭಾರತವು ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಸಾಪೇಕ್ಷವಾಗಿ ಕಡಿಮೆ ಇದ್ದರೂ, ಬಿಲಿಯನೇರ್ ಸಂಪತ್ತು ಒಟ್ಟು ದೇಶೀಯ ಉತ್ಪನ್ನದ 17%ಕ್ಕಿಂತ ಹೆಚ್ಚಿದೆ! ಉದ್ಯಮಿ ಕುಟುಂಬಗಳು ಈ ಅಗಾಧ ಸಂಪತ್ತನ್ನು ಪಡೆಯುತ್ತಿದ್ದು, ಕ್ರೋನಿ ಕ್ಯಾಪಿಟಲಿಸಂ ಸಂಭವಿಸಲು ಕಾರಣವಾಗಿದೆ.

ಭಾರತಕ್ಕೆ ವ್ಯತಿರಿಕ್ತವಾಗಿ, ಅಮೆರಿಕದ ಬಿಲಿಯನೇರ್ ವರ್ಗವು 2010 ರ ದಶಕದ ಆರಂಭದಲ್ಲಿ ಆಶ್ಚರ್ಯಕರವಾಗಿ ಸಮತೋಲಿತವಾಗಿದೆ. ಆ ಸಮಯದಲ್ಲಿ ಬಿಲಿಯನೇರ್ ಸಂಪತ್ತು ಒಟ್ಟು ಜಿಡಿಪಿಯ ಸುಮಾರು 10% ರಷ್ಟಿತ್ತು, 2015 ರ ಹೊತ್ತಿಗೆ, ಬಿಲಿಯನೇರ್ ಸಂಪತ್ತು ಹಲವು ಪಟ್ಟುಗಳಲ್ಲಿ ಏರುತ್ತ ಹೋಗಿದೆ.

ಭಾರತದಲ್ಲಿ ಕ್ರೋನಿ-ಕ್ಯಾಪಟಲಿಸಂ

ಭಾರತ ಕೂಡ ಅಪಾಯದಲ್ಲಿರುವ ಸಮಾಜ. ಅದರ ಬಿಲಿಯನೇರ್ ವರ್ಗದ ಒಟ್ಟು ಸಂಪತ್ತು ಜಿಡಿಪಿಯ ಸುಮಾರು 20% ಗೆ ಸಮನಾಗಿರುತ್ತದೆ, ಇದು ರಷ್ಯಾದ ನಂತರ ಉದಯೋನ್ಮುಖ ರಾಷ್ಟ್ರಗಳಲ್ಲಿ ಎರಡನೆಯದು. ಬಿಲಿಯನೇರ್ ಸಂಪತ್ತಿನ 55% ಕ್ಕಿಂತ ಹೆಚ್ಚು ಉದ್ಯಮ ಕುಟುಂಬಗಳಲ್ಲಿ ಕೇಂದ್ರಕೃತವಾಗಿದೆ. ಒಳ್ಳೆಯ ಸುದ್ದಿ ಏನೆಂದರೆ, ಕಳೆದ ವರ್ಷ ಬಿಲಿಯನೇರ್ ಸಂಪತ್ತು ಒಂದು ಪಾಲಾಗಿ ಕುಸಿಯಿತು, ಏಕೆಂದರೆ ಹೊಸ ಸಂಪತ್ತು ತಂತ್ರಜ್ಞಾನ, ಉತ್ಪಾದನೆ ಮತ್ತು ವಿಶೇಷವಾಗಿ ವೈವಿಧ್ಯಮಯ ಉದ್ಯಮಗಳಲ್ಲಿ ಬಂದಿತು.

ಇದನ್ನೂ ಓದಿ: ತಲಾ ಆದಾಯದಲ್ಲಿ ಬಾಂಗ್ಲಾ ಭಾರತಕ್ಕಿಂತ ಮುಂದೆ, ಅದಾನಿ ಏಷ್ಯಾದ 2ನೆ ಶ್ರೀಮಂತ: ಇದು ಮೋದಿ ಮಾಡೆಲ್!

ಸಾಂಕ್ರಾಮಿಕವು ಈಗಾಗಲೇ ಚಲನೆಯಲ್ಲಿರುವ ಅನೇಕ ಆರ್ಥಿಕ ಮತ್ತು ಸಾಮಾಜಿಕ ಪ್ರವೃತ್ತಿಗಳನ್ನು ವೇಗಗೊಳಿಸಿತು, ಇದರಲ್ಲಿ ಬಿಲಿಯನೇರ್ ಉತ್ಕರ್ಷ ಸೇರಿದೆ. ಬಿಲಿಯನೇರ್‌ಗಳ ಏರಿಕೆಯ ಹಿಂದೆ ಕೇಂದ್ರ ಬ್ಯಾಂಕುಗಳಿಂದ ಸುಲಭವಾಗಿ ಹಣ ಸುರಿಯುವ ಪ್ರವೃತ್ತಿಯಲ್ಲಿದೆ.
ಸಂಪತ್ತಿನ ಸೃಷ್ಟಿಯ ಬಗ್ಗೆ ಸಾರ್ವಜನಿಕರ ಮನೋಭಾವದ ದೃಷ್ಟಿಯಿಂದ ಮುಂದೆ ಏನಾಗುತ್ತದೆ ಎಂಬುದು ಇಲ್ಲಿಂದ ಉತ್ಕರ್ಷ ಹೇಗೆ ವಿಕಸನಗೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿಯವರೆಗೆ, ಟೆಕ್ ಮತ್ತು ಉತ್ಪಾದನೆಯಂತಹ ಉತ್ಪಾದಕ ಕೈಗಾರಿಕೆಗಳಲ್ಲಿ ಸ್ವಯಂ ನಿರ್ಮಿತ ಉದ್ಯಮಿಗಳಿಗೆ ಅತಿದೊಡ್ಡ ಲಾಭಗಳು ಬಂದಿವೆ.

ಸಾಂಕ್ರಾಮಿಕವು ಅತಿ ಶ್ರೀಮಂತರ ಪಾಲಿಗೆ ವರವಾಗಿದೆ. ಕೋವಿಡ್ ಮೊದಲ ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಮುಖೇಶ್ ಅಂಬಾನಿ, ಅದಾನಿ ಮತ್ತು ಇಂತಹವರ ಸಂಪತ್ತು ಏರಿದ್ದನ್ನು ಗಮನಿಸಬೇಕು.

-ರುಚಿರ್ ಶರ್ಮಾ

(ಕೃಪೆ: ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್)


ಇದನ್ನೂ ಓದಿ: ರಾಷ್ಟ್ರೀಯ ದುರಂತಕ್ಕೆ ನಾಂದಿ ಹಾಡಿದ ಗುಜರಾತ್ ಮಾದರಿಯ ಅನುಷ್ಠಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...