Homeಮುಖಪುಟಖಿನ್ನತೆಯ ಸುದ್ದಿಯಿಂದ ನಿಮಗ ಖಿನ್ನತೆ ಆತೋ, ಖುಷಿ ಆತೋ?

ಖಿನ್ನತೆಯ ಸುದ್ದಿಯಿಂದ ನಿಮಗ ಖಿನ್ನತೆ ಆತೋ, ಖುಷಿ ಆತೋ?

- Advertisement -
- Advertisement -

ಈ ಲಾಕ್ ಡೌನ್ ಕೀಲಿ ಕೀಟಕ್ ಕಾಲದಾಗ ನಮ್ಮೆಲ್ಲರ ಪ್ರೀತಿಯ ಆಂಟಿ ಸೋಷಿಯಲ್ ಮೀಡಿಯಾದಾಗ ಒಬ್ಬರಿಗೊಬ್ಬರು ಟ್ಯಾಗು ಮಾಡಿ, ನಾಮಿನೇಟು ಮಾಡೋ ಆಟ Y ಹುಡುಗರ ಡುಬ್ಬಾ ಡುಬ್ಬಿ ಆಟ ಇದ್ದಂಗ. ಅದಕ್ಕೇನು ಅರ್ಥ ಇಲ್ಲ ಸ್ವಾರ್ಥ ಇಲ್ಲ. ಆದರ ಒಬ್ಬರಿಂದಾ ಒಬ್ಬರಿಗೆ ಹಬ್ಬಿಕೊಂಡು ನಡದಾದ- ಒಣಾ ಹುಲ್ಲಿಗೆ ಹತ್ತಿದ ಬೆಂಕಿ ಇದ್ದಂಗ.

ಅಂತಹ ಸಮಾಜ ವಿರೋಧಿ ಮಾಧ್ಯಮದಾಗ ಒಬ್ಬರು ಮೊನ್ನೆ ಒಂದು ಪ್ರಶ್ನೆ ಕೇಳಿದರು-

ನಿಮಗೆ ಅತೀವ ಖಿನ್ನತೆ ಉಂಟಾದಾಗ ನಿಮ್ಮನ್ನು ಹುರಿದುಂಬಿಸುವ ವಿಷಯ ಯಾವುದು?. ಅದಕ್ಕ ಕೆಲವರು ನಿಸರ್ಗ, ನದಿ ದಂಡೆ, ಕಾಡು, ಅಡುಗೆ, ಸಂಗೀತ, ನೃತ್ಯ, ಚಿತ್ರಕಲೆ, ನಮ್ಮ ಮನೆಯ ನಾಯಿ ಬೆಕ್ಕು ಅಂತೆಲ್ಲಾ ಉತ್ತರ ಕೊಟ್ಟರು.

ಆದರೆ ಒಬ್ಬರು ಒಂದು ಕುತೂಹಲಕಾರಿ ಉತ್ತರ ಕೊಟ್ಟರು – “ಯಾರಾದರೂ ಪ್ರಖ್ಯಾತರು ಖಿನ್ನತೆಯಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿಯನ್ನು ಓದೋದು’’. ಇದು ಅಪಹಾಸ್ಯದ ಉತ್ತರ ಇರಬಹುದು. ಆದರೆ ಬಹಳ ಮಂದಿಯ ಮನಸಿನೊಳಗ ಇರೋ ಮಾತನ್ನು ಅವರು ಒಡದು ಹೇಳಿದಾರು.

ನಾವು ಯಾವಾಗಲೂ ಹಿಂಗ. ಬೇರೆಯವರು ಬಿದ್ದಾಗ ನಗೋದು ನಮ್ಮ ಸ್ವಭಾವ. ಇನ್ನೊಬ್ಬರು ಗುಂಡಿಯೊಳಗ ಬಿದ್ದಾಗ ಆವರಿಗೆ ಕೈ ಕೊಟ್ಟು ಎತ್ತೋದು ಬಿಟ್ಟು ಮೊಬೈಲಿನಾಗ ವಿಡಿಯೋ ತೆಗಿಯೋದು ನಮ್ಮ ಚಟ.

ಮೊನ್ನೆ ಸುಶಾಂತ ಸಿಂಗ್ ರಜಪೂತ ಅವರ ಸಾವು ಪತ್ರಿಕೆ, ಚಾನೆಲ್, ವೆಬ್‌ಸೈಟುಗಳಲ್ಲಿ ರಾರಾಜಿಸಿತು. ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ ಅವರ ಪಾತ್ರ ವಹಸಿದ್ದ ಯುವ ಕಲಾವಿನದ ಸಾವಿನ, ಆರೋಪಿತ ಆತ್ಮ ಹತ್ಯೆಯ ಬಗ್ಗೆ ಅನೇಕ ಆಧಾರ ರಹಿತ ವಿಷಯಗಳು ಚರ್ಚೆಗೆ ಬಂದವು.

ಒಂದು ರೀತಿಯೊಳಗ ಆ ಸಾವು ಎರಡು- ಮೂರು ದಿನಗಳ ಮಟ್ಟಿಗೆ ಸುದ್ದಿ ವಾಹಿನಿಗಳನ್ನ ಮನೋರಂಜನೆ ವಾಹಿನಿಗಳನ್ನಾಗಿ ಬದಲಾಯಿಸಿಬಿಟ್ಟಿತು.

ಒಂದು ಹಿಂದಿ ವಾಹಿನಿಯಂತೂ `ತೆರೆಯ ಮೇಲಿನ ಧೋನಿಯ ಹಿಟ್ ವಿಕೆಟ್ಟು ಆಗಿದ್ದು ಹೇಗೆ?’ ಅಂತ ಚೀರಾಡಿಕೊಂಡಿತು. ಆ ವಾಹಿನಿಯ ಮೇಲೆ ಈಗ ಕಾನೂನು ಕ್ರಮ ಆರಂಭ ಆಗೇದ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಆತ್ಮಹತ್ಯೆಯನ್ನು ಮಾಧ್ಯಮಗಳು ಹೇಗೆ ವರದಿ ಮಾಡಬೇಕು ಅಂತ ಅನುಸೂಚಿಗಳು ಇವೆ. ಅದನ್ನು ಕೆಲವರು ಪಾಲಿಸುತ್ತಾರೆ, ಕೆಲವರು ಪಾಲಿಸುವುದಿಲ್ಲ.

ಅದರ ಪ್ರಕಾರ ಸುದ್ದಿ ಶೀರ್ಷಿಕೆಯೊಳಗ, ಅಥವಾ ಮೊದಲನೇ ಸಾಳಿನೊಳಗ ಆತ್ಮಹತ್ಯೆ ಅನ್ನೋ ಪದ ಇರಬಾರದು. ಮತ್ತು ಅವರು ಹೇಗೆ ಆತ್ಮಹತ್ಯೆ ಮಾಡಿಕೊಂಡರು ಅನ್ನೋ ವಿವರ ಇರಬಾರದು.

ಅದು ಯಾಕ ಅಂದ್ರ ಖಿನ್ನತೆಯಿಂದ ಬಳಲುತ್ತಿರುವ ಜನ ಆತ್ಮಹತೆಯ ಸುದ್ದಿ ಓದಿದಾಗ ತಾವೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡ್ತಾರೆ ಅಂತ ಅಧ್ಯಯನದಿಂದ ತಿಳದು ಬಂದದ. ವಿವರ ತಿಳಿಸಿದರ ಅದೇ ರೀತಿಯೊಳಗ ತಾವೂ ಮಾಡಿಕೊಳ್ಳಲಿಕ್ಕೆ ಪ್ರಯತ್ನ ಮಾಡ್ತಾರ.

ಇನ್ನು ಸುದ್ದಿಯ ಕೊನೆಗೆ ಖಿನ್ನತೆ ಅಥವಾ ಇತರ ಮಾನಸಿಕ ತೊಂದರೆಗೆ ಒಳಗಾದವರಿಗೆ ಸಲಹೆ ನೀಡುವಂತಹ ಯಾವುದಾದರೂ ಸಂಸ್ಥೆಯ ಟೆಲಿಫೋನ್ ಸಂಖ್ಯೆ ಕೊಡಬೇಕು ಅಂತನೂ ಅದ. ಇದನ್ನು ಎಷ್ಟು ಪತ್ರಿಕೆಯವರು, ಟೀವಿಯವರು ಮಾಡತಾರ?

ಇದು ಕೇವಲ ಭಾರತೀಯರ ಸಮಸ್ಯೆ ಅಲ್ಲ. ನೀವು ಹಾಲಿವುಡ್ ನಟರ ವಿವರಗಳನ್ನು ವಿಕಿಪೀಡಿಯಾದಾಗ ನೋಡಿದರ ಸರಾಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕೈಯಾರೆ ತಮ್ಮ ಜೀವ ತೊಗೊಂಡವರು ಆದ್ರಗ ಸಿಗತಾರ. ಅವರಿಗೆ ಇನ್ನೂ ಕಮ್ಮಿ ಆಗಿತ್ತು? ಅವರ ಹತ್ತರ ಹಣ, ಯಶಸ್ಸು, ಅನಗತ್ಯ ಪ್ರಚಾರ, ಎಲ್ಲಾ ಇತ್ತು. ಮರಲಿನ ಮನರೋ ರೀತಿಯ ನಟಿಯರು ಈ ಪರಬೇಧದಾಗ ಬರ್ತಾರ.

ಇನ್ನೊಂದು ಕಡೆ ಕೆಲವು ನಟ- ನಟಿಯರು ಇರತಾರ. ಅವರು ನೂರಕ್ಕೂ ಹೆಚ್ಚು ವರ್ಷ ಆರಾಮಾಗಿ ಇರ್ತಾರ, ಸಾಯೋ ತನಕ ಸಿನಿಮಾ- ರಂಗಭೂಮಿದಾಗ ಚಾಲತಿ ಒಳಗ ಇರ್ತಾರ. ಇಲ್ಲಾ ಅಂದ್ರ ಸಮಾಜ ಸೇವೆ, ಸಾಲವೆಶನ ಆರ್ಮಿಯಂತಹ ಧಾರ್ಮಿಕ ಸಂಸ್ಥೆಗಳು, ವಿಶ್ವ ಸಂಸ್ಥೆ, ಅಥವಾ ರಾಜಕೀಯ ಇಂತದರಾಗ ಬಿಸಿ ಆಗಿ ಬಿಡತಾರ. ಜೂಲಿ ಅಂಡರೂಸ್, ಆಡರಿ ಹೆಪಬರ್ನ ನಂತವರು ಈ ಕೆಟಗರಿ ಒಳಗ ಬರ್ತಾರ.

ಈ ಎರಡನೇ ರೀತಿಯ ನಟ- ನಟಿಯರ, ಯಶಸ್ಸಿನ ಗುಟ್ಟು ಏನು?

ನಟ ಮನೋಜ್ ಬಾಜಪೇಯಿ ಹೇಳಿದಂತೆ ಮೊದಲನೇ ರೀತಿಯ ನಟರು ತಮ್ಮ ತೆರೆಯ ಮೇಲಿನ ಜೀವನವನ್ನೇ ನಿಜಜೀವನ ಅಂತ ತಿಳಕೊಂಡರು, ಎರಡನೇ ರೀತಿಯವರು ತಮ್ಮ ಜೀವನದಿಂದ ಅತಿ ಮಾನುಷ ಅಪೇಕ್ಷೆಗಳನ್ನು ಇಟ್ಟುಕೊಳ್ಳಲಿಲ್ಲ.

ನಮ್ಮ ಮಾಧ್ಯಮಗಳಿಂದ ನಾವು ಕೇವಲ ಹುಲು ಮಾನವ ಅಪೇಕ್ಷೆಗಳನ್ನು ಇಟ್ಟುಕೊಳ್ಳಬಹುದಲ್ಲವೇ ಮನೋಲ್ಲಾಸಿನಿ?‌

  • ಐ ವಿ ಗೌಲ್

ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. After looking over a handful of the blog posts
    on your web page, I honestly appreciate your way of writing a blog.
    I book-marked it to my bookmark webpage list
    and will be checking back soon. Please check out my website too and
    let me know what you think.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...