Homeಮುಖಪುಟಖಿನ್ನತೆಯ ಸುದ್ದಿಯಿಂದ ನಿಮಗ ಖಿನ್ನತೆ ಆತೋ, ಖುಷಿ ಆತೋ?

ಖಿನ್ನತೆಯ ಸುದ್ದಿಯಿಂದ ನಿಮಗ ಖಿನ್ನತೆ ಆತೋ, ಖುಷಿ ಆತೋ?

- Advertisement -
- Advertisement -

ಈ ಲಾಕ್ ಡೌನ್ ಕೀಲಿ ಕೀಟಕ್ ಕಾಲದಾಗ ನಮ್ಮೆಲ್ಲರ ಪ್ರೀತಿಯ ಆಂಟಿ ಸೋಷಿಯಲ್ ಮೀಡಿಯಾದಾಗ ಒಬ್ಬರಿಗೊಬ್ಬರು ಟ್ಯಾಗು ಮಾಡಿ, ನಾಮಿನೇಟು ಮಾಡೋ ಆಟ Y ಹುಡುಗರ ಡುಬ್ಬಾ ಡುಬ್ಬಿ ಆಟ ಇದ್ದಂಗ. ಅದಕ್ಕೇನು ಅರ್ಥ ಇಲ್ಲ ಸ್ವಾರ್ಥ ಇಲ್ಲ. ಆದರ ಒಬ್ಬರಿಂದಾ ಒಬ್ಬರಿಗೆ ಹಬ್ಬಿಕೊಂಡು ನಡದಾದ- ಒಣಾ ಹುಲ್ಲಿಗೆ ಹತ್ತಿದ ಬೆಂಕಿ ಇದ್ದಂಗ.

ಅಂತಹ ಸಮಾಜ ವಿರೋಧಿ ಮಾಧ್ಯಮದಾಗ ಒಬ್ಬರು ಮೊನ್ನೆ ಒಂದು ಪ್ರಶ್ನೆ ಕೇಳಿದರು-

ನಿಮಗೆ ಅತೀವ ಖಿನ್ನತೆ ಉಂಟಾದಾಗ ನಿಮ್ಮನ್ನು ಹುರಿದುಂಬಿಸುವ ವಿಷಯ ಯಾವುದು?. ಅದಕ್ಕ ಕೆಲವರು ನಿಸರ್ಗ, ನದಿ ದಂಡೆ, ಕಾಡು, ಅಡುಗೆ, ಸಂಗೀತ, ನೃತ್ಯ, ಚಿತ್ರಕಲೆ, ನಮ್ಮ ಮನೆಯ ನಾಯಿ ಬೆಕ್ಕು ಅಂತೆಲ್ಲಾ ಉತ್ತರ ಕೊಟ್ಟರು.

ಆದರೆ ಒಬ್ಬರು ಒಂದು ಕುತೂಹಲಕಾರಿ ಉತ್ತರ ಕೊಟ್ಟರು – “ಯಾರಾದರೂ ಪ್ರಖ್ಯಾತರು ಖಿನ್ನತೆಯಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿಯನ್ನು ಓದೋದು’’. ಇದು ಅಪಹಾಸ್ಯದ ಉತ್ತರ ಇರಬಹುದು. ಆದರೆ ಬಹಳ ಮಂದಿಯ ಮನಸಿನೊಳಗ ಇರೋ ಮಾತನ್ನು ಅವರು ಒಡದು ಹೇಳಿದಾರು.

ನಾವು ಯಾವಾಗಲೂ ಹಿಂಗ. ಬೇರೆಯವರು ಬಿದ್ದಾಗ ನಗೋದು ನಮ್ಮ ಸ್ವಭಾವ. ಇನ್ನೊಬ್ಬರು ಗುಂಡಿಯೊಳಗ ಬಿದ್ದಾಗ ಆವರಿಗೆ ಕೈ ಕೊಟ್ಟು ಎತ್ತೋದು ಬಿಟ್ಟು ಮೊಬೈಲಿನಾಗ ವಿಡಿಯೋ ತೆಗಿಯೋದು ನಮ್ಮ ಚಟ.

ಮೊನ್ನೆ ಸುಶಾಂತ ಸಿಂಗ್ ರಜಪೂತ ಅವರ ಸಾವು ಪತ್ರಿಕೆ, ಚಾನೆಲ್, ವೆಬ್‌ಸೈಟುಗಳಲ್ಲಿ ರಾರಾಜಿಸಿತು. ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ ಅವರ ಪಾತ್ರ ವಹಸಿದ್ದ ಯುವ ಕಲಾವಿನದ ಸಾವಿನ, ಆರೋಪಿತ ಆತ್ಮ ಹತ್ಯೆಯ ಬಗ್ಗೆ ಅನೇಕ ಆಧಾರ ರಹಿತ ವಿಷಯಗಳು ಚರ್ಚೆಗೆ ಬಂದವು.

ಒಂದು ರೀತಿಯೊಳಗ ಆ ಸಾವು ಎರಡು- ಮೂರು ದಿನಗಳ ಮಟ್ಟಿಗೆ ಸುದ್ದಿ ವಾಹಿನಿಗಳನ್ನ ಮನೋರಂಜನೆ ವಾಹಿನಿಗಳನ್ನಾಗಿ ಬದಲಾಯಿಸಿಬಿಟ್ಟಿತು.

ಒಂದು ಹಿಂದಿ ವಾಹಿನಿಯಂತೂ `ತೆರೆಯ ಮೇಲಿನ ಧೋನಿಯ ಹಿಟ್ ವಿಕೆಟ್ಟು ಆಗಿದ್ದು ಹೇಗೆ?’ ಅಂತ ಚೀರಾಡಿಕೊಂಡಿತು. ಆ ವಾಹಿನಿಯ ಮೇಲೆ ಈಗ ಕಾನೂನು ಕ್ರಮ ಆರಂಭ ಆಗೇದ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಆತ್ಮಹತ್ಯೆಯನ್ನು ಮಾಧ್ಯಮಗಳು ಹೇಗೆ ವರದಿ ಮಾಡಬೇಕು ಅಂತ ಅನುಸೂಚಿಗಳು ಇವೆ. ಅದನ್ನು ಕೆಲವರು ಪಾಲಿಸುತ್ತಾರೆ, ಕೆಲವರು ಪಾಲಿಸುವುದಿಲ್ಲ.

ಅದರ ಪ್ರಕಾರ ಸುದ್ದಿ ಶೀರ್ಷಿಕೆಯೊಳಗ, ಅಥವಾ ಮೊದಲನೇ ಸಾಳಿನೊಳಗ ಆತ್ಮಹತ್ಯೆ ಅನ್ನೋ ಪದ ಇರಬಾರದು. ಮತ್ತು ಅವರು ಹೇಗೆ ಆತ್ಮಹತ್ಯೆ ಮಾಡಿಕೊಂಡರು ಅನ್ನೋ ವಿವರ ಇರಬಾರದು.

ಅದು ಯಾಕ ಅಂದ್ರ ಖಿನ್ನತೆಯಿಂದ ಬಳಲುತ್ತಿರುವ ಜನ ಆತ್ಮಹತೆಯ ಸುದ್ದಿ ಓದಿದಾಗ ತಾವೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡ್ತಾರೆ ಅಂತ ಅಧ್ಯಯನದಿಂದ ತಿಳದು ಬಂದದ. ವಿವರ ತಿಳಿಸಿದರ ಅದೇ ರೀತಿಯೊಳಗ ತಾವೂ ಮಾಡಿಕೊಳ್ಳಲಿಕ್ಕೆ ಪ್ರಯತ್ನ ಮಾಡ್ತಾರ.

ಇನ್ನು ಸುದ್ದಿಯ ಕೊನೆಗೆ ಖಿನ್ನತೆ ಅಥವಾ ಇತರ ಮಾನಸಿಕ ತೊಂದರೆಗೆ ಒಳಗಾದವರಿಗೆ ಸಲಹೆ ನೀಡುವಂತಹ ಯಾವುದಾದರೂ ಸಂಸ್ಥೆಯ ಟೆಲಿಫೋನ್ ಸಂಖ್ಯೆ ಕೊಡಬೇಕು ಅಂತನೂ ಅದ. ಇದನ್ನು ಎಷ್ಟು ಪತ್ರಿಕೆಯವರು, ಟೀವಿಯವರು ಮಾಡತಾರ?

ಇದು ಕೇವಲ ಭಾರತೀಯರ ಸಮಸ್ಯೆ ಅಲ್ಲ. ನೀವು ಹಾಲಿವುಡ್ ನಟರ ವಿವರಗಳನ್ನು ವಿಕಿಪೀಡಿಯಾದಾಗ ನೋಡಿದರ ಸರಾಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕೈಯಾರೆ ತಮ್ಮ ಜೀವ ತೊಗೊಂಡವರು ಆದ್ರಗ ಸಿಗತಾರ. ಅವರಿಗೆ ಇನ್ನೂ ಕಮ್ಮಿ ಆಗಿತ್ತು? ಅವರ ಹತ್ತರ ಹಣ, ಯಶಸ್ಸು, ಅನಗತ್ಯ ಪ್ರಚಾರ, ಎಲ್ಲಾ ಇತ್ತು. ಮರಲಿನ ಮನರೋ ರೀತಿಯ ನಟಿಯರು ಈ ಪರಬೇಧದಾಗ ಬರ್ತಾರ.

ಇನ್ನೊಂದು ಕಡೆ ಕೆಲವು ನಟ- ನಟಿಯರು ಇರತಾರ. ಅವರು ನೂರಕ್ಕೂ ಹೆಚ್ಚು ವರ್ಷ ಆರಾಮಾಗಿ ಇರ್ತಾರ, ಸಾಯೋ ತನಕ ಸಿನಿಮಾ- ರಂಗಭೂಮಿದಾಗ ಚಾಲತಿ ಒಳಗ ಇರ್ತಾರ. ಇಲ್ಲಾ ಅಂದ್ರ ಸಮಾಜ ಸೇವೆ, ಸಾಲವೆಶನ ಆರ್ಮಿಯಂತಹ ಧಾರ್ಮಿಕ ಸಂಸ್ಥೆಗಳು, ವಿಶ್ವ ಸಂಸ್ಥೆ, ಅಥವಾ ರಾಜಕೀಯ ಇಂತದರಾಗ ಬಿಸಿ ಆಗಿ ಬಿಡತಾರ. ಜೂಲಿ ಅಂಡರೂಸ್, ಆಡರಿ ಹೆಪಬರ್ನ ನಂತವರು ಈ ಕೆಟಗರಿ ಒಳಗ ಬರ್ತಾರ.

ಈ ಎರಡನೇ ರೀತಿಯ ನಟ- ನಟಿಯರ, ಯಶಸ್ಸಿನ ಗುಟ್ಟು ಏನು?

ನಟ ಮನೋಜ್ ಬಾಜಪೇಯಿ ಹೇಳಿದಂತೆ ಮೊದಲನೇ ರೀತಿಯ ನಟರು ತಮ್ಮ ತೆರೆಯ ಮೇಲಿನ ಜೀವನವನ್ನೇ ನಿಜಜೀವನ ಅಂತ ತಿಳಕೊಂಡರು, ಎರಡನೇ ರೀತಿಯವರು ತಮ್ಮ ಜೀವನದಿಂದ ಅತಿ ಮಾನುಷ ಅಪೇಕ್ಷೆಗಳನ್ನು ಇಟ್ಟುಕೊಳ್ಳಲಿಲ್ಲ.

ನಮ್ಮ ಮಾಧ್ಯಮಗಳಿಂದ ನಾವು ಕೇವಲ ಹುಲು ಮಾನವ ಅಪೇಕ್ಷೆಗಳನ್ನು ಇಟ್ಟುಕೊಳ್ಳಬಹುದಲ್ಲವೇ ಮನೋಲ್ಲಾಸಿನಿ?‌

  • ಐ ವಿ ಗೌಲ್

ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. After looking over a handful of the blog posts
    on your web page, I honestly appreciate your way of writing a blog.
    I book-marked it to my bookmark webpage list
    and will be checking back soon. Please check out my website too and
    let me know what you think.

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...