Homeಮುಖಪುಟಖಿನ್ನತೆಯ ಸುದ್ದಿಯಿಂದ ನಿಮಗ ಖಿನ್ನತೆ ಆತೋ, ಖುಷಿ ಆತೋ?

ಖಿನ್ನತೆಯ ಸುದ್ದಿಯಿಂದ ನಿಮಗ ಖಿನ್ನತೆ ಆತೋ, ಖುಷಿ ಆತೋ?

- Advertisement -
- Advertisement -

ಈ ಲಾಕ್ ಡೌನ್ ಕೀಲಿ ಕೀಟಕ್ ಕಾಲದಾಗ ನಮ್ಮೆಲ್ಲರ ಪ್ರೀತಿಯ ಆಂಟಿ ಸೋಷಿಯಲ್ ಮೀಡಿಯಾದಾಗ ಒಬ್ಬರಿಗೊಬ್ಬರು ಟ್ಯಾಗು ಮಾಡಿ, ನಾಮಿನೇಟು ಮಾಡೋ ಆಟ Y ಹುಡುಗರ ಡುಬ್ಬಾ ಡುಬ್ಬಿ ಆಟ ಇದ್ದಂಗ. ಅದಕ್ಕೇನು ಅರ್ಥ ಇಲ್ಲ ಸ್ವಾರ್ಥ ಇಲ್ಲ. ಆದರ ಒಬ್ಬರಿಂದಾ ಒಬ್ಬರಿಗೆ ಹಬ್ಬಿಕೊಂಡು ನಡದಾದ- ಒಣಾ ಹುಲ್ಲಿಗೆ ಹತ್ತಿದ ಬೆಂಕಿ ಇದ್ದಂಗ.

ಅಂತಹ ಸಮಾಜ ವಿರೋಧಿ ಮಾಧ್ಯಮದಾಗ ಒಬ್ಬರು ಮೊನ್ನೆ ಒಂದು ಪ್ರಶ್ನೆ ಕೇಳಿದರು-

ನಿಮಗೆ ಅತೀವ ಖಿನ್ನತೆ ಉಂಟಾದಾಗ ನಿಮ್ಮನ್ನು ಹುರಿದುಂಬಿಸುವ ವಿಷಯ ಯಾವುದು?. ಅದಕ್ಕ ಕೆಲವರು ನಿಸರ್ಗ, ನದಿ ದಂಡೆ, ಕಾಡು, ಅಡುಗೆ, ಸಂಗೀತ, ನೃತ್ಯ, ಚಿತ್ರಕಲೆ, ನಮ್ಮ ಮನೆಯ ನಾಯಿ ಬೆಕ್ಕು ಅಂತೆಲ್ಲಾ ಉತ್ತರ ಕೊಟ್ಟರು.

ಆದರೆ ಒಬ್ಬರು ಒಂದು ಕುತೂಹಲಕಾರಿ ಉತ್ತರ ಕೊಟ್ಟರು – “ಯಾರಾದರೂ ಪ್ರಖ್ಯಾತರು ಖಿನ್ನತೆಯಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿಯನ್ನು ಓದೋದು’’. ಇದು ಅಪಹಾಸ್ಯದ ಉತ್ತರ ಇರಬಹುದು. ಆದರೆ ಬಹಳ ಮಂದಿಯ ಮನಸಿನೊಳಗ ಇರೋ ಮಾತನ್ನು ಅವರು ಒಡದು ಹೇಳಿದಾರು.

ನಾವು ಯಾವಾಗಲೂ ಹಿಂಗ. ಬೇರೆಯವರು ಬಿದ್ದಾಗ ನಗೋದು ನಮ್ಮ ಸ್ವಭಾವ. ಇನ್ನೊಬ್ಬರು ಗುಂಡಿಯೊಳಗ ಬಿದ್ದಾಗ ಆವರಿಗೆ ಕೈ ಕೊಟ್ಟು ಎತ್ತೋದು ಬಿಟ್ಟು ಮೊಬೈಲಿನಾಗ ವಿಡಿಯೋ ತೆಗಿಯೋದು ನಮ್ಮ ಚಟ.

ಮೊನ್ನೆ ಸುಶಾಂತ ಸಿಂಗ್ ರಜಪೂತ ಅವರ ಸಾವು ಪತ್ರಿಕೆ, ಚಾನೆಲ್, ವೆಬ್‌ಸೈಟುಗಳಲ್ಲಿ ರಾರಾಜಿಸಿತು. ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ ಅವರ ಪಾತ್ರ ವಹಸಿದ್ದ ಯುವ ಕಲಾವಿನದ ಸಾವಿನ, ಆರೋಪಿತ ಆತ್ಮ ಹತ್ಯೆಯ ಬಗ್ಗೆ ಅನೇಕ ಆಧಾರ ರಹಿತ ವಿಷಯಗಳು ಚರ್ಚೆಗೆ ಬಂದವು.

ಒಂದು ರೀತಿಯೊಳಗ ಆ ಸಾವು ಎರಡು- ಮೂರು ದಿನಗಳ ಮಟ್ಟಿಗೆ ಸುದ್ದಿ ವಾಹಿನಿಗಳನ್ನ ಮನೋರಂಜನೆ ವಾಹಿನಿಗಳನ್ನಾಗಿ ಬದಲಾಯಿಸಿಬಿಟ್ಟಿತು.

ಒಂದು ಹಿಂದಿ ವಾಹಿನಿಯಂತೂ `ತೆರೆಯ ಮೇಲಿನ ಧೋನಿಯ ಹಿಟ್ ವಿಕೆಟ್ಟು ಆಗಿದ್ದು ಹೇಗೆ?’ ಅಂತ ಚೀರಾಡಿಕೊಂಡಿತು. ಆ ವಾಹಿನಿಯ ಮೇಲೆ ಈಗ ಕಾನೂನು ಕ್ರಮ ಆರಂಭ ಆಗೇದ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಆತ್ಮಹತ್ಯೆಯನ್ನು ಮಾಧ್ಯಮಗಳು ಹೇಗೆ ವರದಿ ಮಾಡಬೇಕು ಅಂತ ಅನುಸೂಚಿಗಳು ಇವೆ. ಅದನ್ನು ಕೆಲವರು ಪಾಲಿಸುತ್ತಾರೆ, ಕೆಲವರು ಪಾಲಿಸುವುದಿಲ್ಲ.

ಅದರ ಪ್ರಕಾರ ಸುದ್ದಿ ಶೀರ್ಷಿಕೆಯೊಳಗ, ಅಥವಾ ಮೊದಲನೇ ಸಾಳಿನೊಳಗ ಆತ್ಮಹತ್ಯೆ ಅನ್ನೋ ಪದ ಇರಬಾರದು. ಮತ್ತು ಅವರು ಹೇಗೆ ಆತ್ಮಹತ್ಯೆ ಮಾಡಿಕೊಂಡರು ಅನ್ನೋ ವಿವರ ಇರಬಾರದು.

ಅದು ಯಾಕ ಅಂದ್ರ ಖಿನ್ನತೆಯಿಂದ ಬಳಲುತ್ತಿರುವ ಜನ ಆತ್ಮಹತೆಯ ಸುದ್ದಿ ಓದಿದಾಗ ತಾವೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡ್ತಾರೆ ಅಂತ ಅಧ್ಯಯನದಿಂದ ತಿಳದು ಬಂದದ. ವಿವರ ತಿಳಿಸಿದರ ಅದೇ ರೀತಿಯೊಳಗ ತಾವೂ ಮಾಡಿಕೊಳ್ಳಲಿಕ್ಕೆ ಪ್ರಯತ್ನ ಮಾಡ್ತಾರ.

ಇನ್ನು ಸುದ್ದಿಯ ಕೊನೆಗೆ ಖಿನ್ನತೆ ಅಥವಾ ಇತರ ಮಾನಸಿಕ ತೊಂದರೆಗೆ ಒಳಗಾದವರಿಗೆ ಸಲಹೆ ನೀಡುವಂತಹ ಯಾವುದಾದರೂ ಸಂಸ್ಥೆಯ ಟೆಲಿಫೋನ್ ಸಂಖ್ಯೆ ಕೊಡಬೇಕು ಅಂತನೂ ಅದ. ಇದನ್ನು ಎಷ್ಟು ಪತ್ರಿಕೆಯವರು, ಟೀವಿಯವರು ಮಾಡತಾರ?

ಇದು ಕೇವಲ ಭಾರತೀಯರ ಸಮಸ್ಯೆ ಅಲ್ಲ. ನೀವು ಹಾಲಿವುಡ್ ನಟರ ವಿವರಗಳನ್ನು ವಿಕಿಪೀಡಿಯಾದಾಗ ನೋಡಿದರ ಸರಾಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕೈಯಾರೆ ತಮ್ಮ ಜೀವ ತೊಗೊಂಡವರು ಆದ್ರಗ ಸಿಗತಾರ. ಅವರಿಗೆ ಇನ್ನೂ ಕಮ್ಮಿ ಆಗಿತ್ತು? ಅವರ ಹತ್ತರ ಹಣ, ಯಶಸ್ಸು, ಅನಗತ್ಯ ಪ್ರಚಾರ, ಎಲ್ಲಾ ಇತ್ತು. ಮರಲಿನ ಮನರೋ ರೀತಿಯ ನಟಿಯರು ಈ ಪರಬೇಧದಾಗ ಬರ್ತಾರ.

ಇನ್ನೊಂದು ಕಡೆ ಕೆಲವು ನಟ- ನಟಿಯರು ಇರತಾರ. ಅವರು ನೂರಕ್ಕೂ ಹೆಚ್ಚು ವರ್ಷ ಆರಾಮಾಗಿ ಇರ್ತಾರ, ಸಾಯೋ ತನಕ ಸಿನಿಮಾ- ರಂಗಭೂಮಿದಾಗ ಚಾಲತಿ ಒಳಗ ಇರ್ತಾರ. ಇಲ್ಲಾ ಅಂದ್ರ ಸಮಾಜ ಸೇವೆ, ಸಾಲವೆಶನ ಆರ್ಮಿಯಂತಹ ಧಾರ್ಮಿಕ ಸಂಸ್ಥೆಗಳು, ವಿಶ್ವ ಸಂಸ್ಥೆ, ಅಥವಾ ರಾಜಕೀಯ ಇಂತದರಾಗ ಬಿಸಿ ಆಗಿ ಬಿಡತಾರ. ಜೂಲಿ ಅಂಡರೂಸ್, ಆಡರಿ ಹೆಪಬರ್ನ ನಂತವರು ಈ ಕೆಟಗರಿ ಒಳಗ ಬರ್ತಾರ.

ಈ ಎರಡನೇ ರೀತಿಯ ನಟ- ನಟಿಯರ, ಯಶಸ್ಸಿನ ಗುಟ್ಟು ಏನು?

ನಟ ಮನೋಜ್ ಬಾಜಪೇಯಿ ಹೇಳಿದಂತೆ ಮೊದಲನೇ ರೀತಿಯ ನಟರು ತಮ್ಮ ತೆರೆಯ ಮೇಲಿನ ಜೀವನವನ್ನೇ ನಿಜಜೀವನ ಅಂತ ತಿಳಕೊಂಡರು, ಎರಡನೇ ರೀತಿಯವರು ತಮ್ಮ ಜೀವನದಿಂದ ಅತಿ ಮಾನುಷ ಅಪೇಕ್ಷೆಗಳನ್ನು ಇಟ್ಟುಕೊಳ್ಳಲಿಲ್ಲ.

ನಮ್ಮ ಮಾಧ್ಯಮಗಳಿಂದ ನಾವು ಕೇವಲ ಹುಲು ಮಾನವ ಅಪೇಕ್ಷೆಗಳನ್ನು ಇಟ್ಟುಕೊಳ್ಳಬಹುದಲ್ಲವೇ ಮನೋಲ್ಲಾಸಿನಿ?‌

  • ಐ ವಿ ಗೌಲ್

ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. After looking over a handful of the blog posts
    on your web page, I honestly appreciate your way of writing a blog.
    I book-marked it to my bookmark webpage list
    and will be checking back soon. Please check out my website too and
    let me know what you think.

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...