Homeಮುಖಪುಟಸಿಂಘು ಗಡಿಯಲ್ಲಿ ಲಖ್ಬೀರ್‌‌ ಹತ್ಯೆ ಪ್ರಕರಣ: ಹರಿಂದರ್‌‌‌ ಸಿಂಗ್‌‌ ಬರಹ

ಸಿಂಘು ಗಡಿಯಲ್ಲಿ ಲಖ್ಬೀರ್‌‌ ಹತ್ಯೆ ಪ್ರಕರಣ: ಹರಿಂದರ್‌‌‌ ಸಿಂಗ್‌‌ ಬರಹ

- Advertisement -
- Advertisement -

ಹರಿಂದರ್‌‌‌ ಸಿಂಗ್‌‌

(ಸಿಂಘು ಗಡಿಯಿಂದ… ರೈತ ಹೋರಾಟದ ನೆಲದಲ್ಲಿರುವ ದಲಿತ ಹೋರಾಟಗಾರ)

ಕೃಪೆ: zindahal.blogspot.com ([email protected])

ಸಿಂಘು ಬಾರ್ಡರ್‌ನಲ್ಲಿ ನಡೆದದ್ದು ಜಾತಿಗೆ ಸಂಬಂಧಿಸಿದ್ದಲ್ಲ, ಅಥವಾ ರೈತರಿಗೆ ಸಂಬಂಧಿಸಿದ್ದೂ ಅಲ್ಲ. ಇದು ಸಂಪೂರ್ಣವಾಗಿ ಧಾರ್ಮಿಕವಾದದ್ದು ಮತ್ತು ಅಪರಾಧದಿಂದ ಕೂಡಿದ್ದಾಗಿದೆ. ದುರಾದೃಷ್ಟವಶಾತ್‌ ಇದನ್ನು ರೈತರು ಮತ್ತು ಕಾರ್ಮಿಕರ ನಡುವಿನ ಸಂಘರ್ಷದಂತೆ ಬಿಂಬಿಸಲಾಗುತ್ತಿದೆ. ಆದರೆ ಅದರಾಚೆಗಿನ ಸತ್ಯಗಳಿವೆ. ಈ ಘಟನೆಯ ಬಗ್ಗೆ ಹೇಳಬೇಕೆಂದರೆ ಕೊಲೆಯಾದ ಹಾಗೂ ಕೊಲೆಗೈದ ಆರೋಪಿಗಳಿಬ್ಬರೂ ದಲಿತರಾಗಿದ್ದಾರೆ.

ಖಂಡಿತವಾಗಿಯೂ ಪಂಜಾಬ್‌ನಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ. ಆದರೆ ಪಂಜಾಬ್‌ ಮತ್ತು ಸಿಖ್ಖಿ ನಡುವಿನ ವ್ಯತ್ಯಾಸವನ್ನು ಅರಿಯಬೇಕಾಗಿದೆ. ಬಲಿಷ್ಠ ಜಾತಿ ವ್ಯವಸ್ಥೆಯನ್ನು ಹೊಂದಿರುವ ಪಂಜಾಬ್‌ನಲ್ಲಿ ಸಿಖ್ಖಿಯು ಜಾತಿ ವ್ಯವಸ್ಥೆಯ ಪರ ವಕಾಲತ್ತು ವಹಿಸುವುದಿಲ್ಲ. ಅದು ಜಾತೀಯತೆಯ ವಿರುದ್ಧವಿದೆ. ಸಿಖ್‌ ಧರ್ಮ ಗ್ರಂಥವು ಜಾತಿ ವಿರೋಧಿಯಾಗಿದೆ. ಗುರು ಗ್ರಂಥ ಸಾಹೇಬ್‌ಗೆ ದಲಿತರು ಅಪಾರ ಕೊಡುಗೆ ನೀಡಿದ್ದಾರೆ. ಖಲ್ಸ ಪಂತ್‌‌ ಹೋರಾಟದಲ್ಲಿ ಹಲವರು ದಲಿತ ನಾಯಕರು, ಸೈನಿಕರು ಇದ್ದರು. ಪಿತೃಪ್ರಧಾನ ಹಿಂದುತ್ವದ ಪ್ರಭಾವದಿಂದಾಗಿ ಗ್ರಾಮೀಣ ಸಮಾಜದಲ್ಲಿ ಈ ಸಮಸ್ಯೆ (ಜಾತಿ ವ್ಯವಸ್ಥೆ) ಇದೆ. ಪಂಜಾಬ್‌ನಲ್ಲಿ ಶೇ. 33ರಷ್ಟು ದಲಿತರಿದ್ದು, ಆದರೆ ಶೇ. 3ರಷ್ಟು ಮಂದಿ ಮಾತ್ರ ಕೃಷಿ ಭೂಮಿಯನ್ನು ರಾಜ್ಯದಲ್ಲಿ ಹೊಂದಿದ್ದಾರೆ. ಮುಖ್ಯವಾಗಿ ಜಾಟ್‌ ರೀತಿಯ ಮೇಲ್ಜಾತಿಗಳ ದೈಹಿಕ ಹಾಗೂ ಮಾನಸಿಕ ಕಿರುಕುಳವನ್ನು ದಿನನಿತ್ಯವೂ ದಲಿತರು ಅನುಭವಿಸುತ್ತಿದ್ದಾರೆ. ಅದರಲ್ಲೂ ದಲಿತ ಮಹಿಳೆಯರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ.

ಇದನ್ನೂ ಓದಿರಿ: ಲಖಿಂಪುರ್‌ ಹತ್ಯಾಕಾಂಡ: ಅಜಯ್ ಮಿಶ್ರಾ ಬಂಧನ, ವಜಾಗೆ ಆಗ್ರಹಿಸಿ ರೈತರ ರೈಲ್ ರೋಕೋ ಚಳವಳಿ

ದಲಿತ ಮುಖ್ಯಮಂತ್ರಿ, ಅಕಾಲ್‌ತಖ್‌ನ ದಲಿತ ಜಾತೇದಾರ್‌, ದಲಿತ ಪೊಲೀಸ್ ಮುಖ್ಯಸ್ಥ, ದಲಿತ-ಸ್ತ್ರೀ-ಎಡಪಂಥೀಯ ಗುಂಪುಗಳ ಸಕ್ರಿಯತೆ ಮತ್ತು ಶೇ. 33ರಷ್ಟು ದಲಿತ ಜನಸಂಖ್ಯೆ ಪಂಜಾಬ್‌ನಲ್ಲಿದ್ದರೂ ದಲಿತರು ಹಿಂದುಳಿದಿದ್ದಾರೆ, ವಂಚನೆ ಹಾಗೂ ಶೋಷಣೆಗೆ ಒಳಗಾಗಿದ್ದಾರೆ.

ಲೂದಿಯಾನದಲ್ಲಿನ ಪಂಜಾಬ್‌ ಕೃಷಿ ವಿವಿಯ ಸಮೀಕ್ಷೆಯ ಪ್ರಕಾರ, 2000ನೇ ಇಸವಿಯಿಂದ 2018ರವರೆಗೆ, ಪಂಜಾಬ್‌ನ 2400 ಹಳ್ಳಿಗಳಲ್ಲಿ ಒಟ್ಟು 7303 ಕೃಷಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಂಜಾಬ್‌ನಲ್ಲಿ ಆತ್ಯಹತ್ಯೆಗೆ ಶರಣಾಗಿರುವ ರೈತರ ಪ್ರಮಾಣದಷ್ಟೇ ಕೃಷಿ ಕಾರ್ಮಿಕರ ಆತ್ಮಹತ್ಯೆಯ ಪ್ರಮಾಣವೂ ಇದೆ. ಕೃಷಿ ಕಾರ್ಮಿಕರ ಸಾವಿಗೆ ಸಾಲಬಾಧೆಯೇ ಪ್ರಮುಖ ಕಾರಣವಾಗಿದೆ. ಹಲವು ಸಮೀಕ್ಷೆಗಳ ಪ್ರಕಾರ, ಪ್ರತಿ ರೈತ ಕಾರ್ಮಿಕ ಕುಟುಂಬದ ಪ್ರತಿಯೊಬ್ಬರ ತಲೆ ಮೇಲೂ 68,000 ರೂ.ನಿಂದ 1 ಲಕ್ಷ ರೂ.ವರೆಗೆ ಸಾಲದ ಭಾರವಿದೆ. ಇದು ಭಾರತ ಕೃಷಿ ಮಾದರಿಯ ಸಾರ- ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆ!

ಮಹಿಳಾ ಕೃಷಿಕರ ಸ್ಥಿತಿಗಿಂತ ಮಹಿಳಾ ಕೃಷಿ ಕಾರ್ಮಿಕರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ. ದಲಿತ ಕೃಷಿ ಕಾರ್ಮಿಕರು, ಪಿತೃಪ್ರಧಾನ ವ್ಯವಸ್ಥೆ, ಕೂಲಿ, ಜಾತಿ ಮತ್ತು ಬಡತನದ ಭಾರದಲ್ಲಿ ಬದುಕುತ್ತಿದ್ದಾರೆ. ಹೊಸ ಪ್ರಜಾಪ್ರಭುತ್ವ ಸಮಾಜವನ್ನು ನಿರ್ಮಿಸಬೇಕಾದಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಿರುವ ಈ ಸಮಾಜವು, ಬಹುತೇಕ ಕೃಷಿ ಸಂಸ್ಥೆಗಳ ಕ್ರಾಂತಿಕಾರಿ ಸುಧಾರಣಾ ಕಾರ್ಯಕ್ರಮಗಳ ಭಾಗವಾಗಿಲ್ಲ.

ಕೃಷಿಕ ವರ್ಗವೇ ಕೃಷಿ ಕಾರ್ಮಿಕ ವರ್ಗವಾಗಿದ್ದಾಗ ಮತ್ತು ರೈತರು ಮತ್ತು ಕೃಷಿ ಕಾರ್ಮಿಕರ ಸಂಬಂಧಗಳು ‘ಐಕ್ಯತೆ ಮತ್ತು ಸಂಘರ್ಷ’ದ ಸಂಬಂಧವಾಗಿರುತ್ತದೆ. ಕೃಷಿ ವಲಯದಲ್ಲಿ ಕಾರ್ಮಿಕ ವಿರೋಧಿ ಯಾಂತ್ರೀಕರಣವಿದ್ದಾಗ ಕಾರ್ಮಿಕರಿಗೆ ಸಾಮೂಹಿಕ ನಿರುದ್ಯೋಗದ ಪ್ರಶ್ನೆಯಿರುತ್ತದೆ, ಇದು ದಬ್ಬಾಳಿಕೆಯ ಮೂಲಕ ಕಾರ್ಮಿಕರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ.

ಆದರೆ ಎಂಬ ಆದರೆ ಎಂಬುದಿದೆ. ಈ ಆದರೆ ದಲಿತ ವಿಚಾರಗಳ ಕುರಿತ ಅತಿಯಾದ ಚಿಂತನೆ ಹಾಗೂ ಕುತೂಹಲಕ್ಕೆ ಸಂಬಂಧಿಸಿದ್ದಾಗಿದೆ. ಜಾತಿ ಹಿಂಸೆಯು ಇರುವುದು ಸತ್ಯ, ಆದರೆ ಅದು ಸ್ವೀಕಾರರ್ಹವಲ್ಲ. ದಲಿತರು ವರ್ಸಸ್‌ ಜಾಟರು ಅಥವಾ ರೈತ ವರ್ಸಸ್‌ ಕೃಷಿ ಕಾರ್ಮಿಕ ಸಂಬಂಧಿಸಿದ ನೂರಾರು ಸಂಗತಿಗಳಿವೆ. ಆದರೆ ಈ ಪ್ರಕರಣದಲ್ಲಿ ನೀವು ಜಾತಿಯನ್ನು ಹುಡುಕಬಹುದೇ? ಕೊಲೆಯಾದ ಲಖ್ಬೀರ್‌ ಸಿಂಗ್‌ ದಲಿತ ಎಂಬುದನ್ನು ನಾವು ಸುಲಭವಾಗಿ ಪತ್ತೆ ಹಚ್ಚಿದೆವು. ಆದರೆ ಆರೋಪಿಗಳಾದ ಸರಬ್ಜಿತ್‌ ಸಿಂಗ್ ಹಾಗೂ ನಾರಾಯಣ್‌ ಸಿಂಗ್ ಕೂಡ ದಲಿತರು ಎಂಬುದನ್ನು ನಾವು ನೋಡಲಿಲ್ಲ. ಈ ಸಮಸ್ಯೆಯು ಸಂಪೂರ್ಣವಾಗಿ ಧಾರ್ಮಿಕ ಮತ್ತು ಅಪರಾಧ ಕೃತ್ಯವಾಗಿದೆ. ಸಿಖ್ಖರು ದಬ್ಬಾಳಿಕೆಯ ವಿರುದ್ಧ ತಮ್ಮ ಧ್ವನಿಯನ್ನು ಪ್ರತಿಪಾದಿಸಿದ ಭಾವುಕ ರೀತಿಯದ್ದಾಗಿದೆ. ಸಿಖ್/ನಿಹಾಂಗ್‌ಗಳಿಂದ ಹತ್ಯೆಗೀಡಾದ ಇಂದಿರಾ ಗಾಂಧಿ, ಬಿಯಾಂತ್ ಸಿಂಗ್, ಮಾಸಾ ರಂಗರ್ ಮೇಲ್ಜಾತಿಯವರು ಎಂಬುದನ್ನು ದಯವಿಟ್ಟು ಗಮನಿಸಬೇಕು.

ಇದನ್ನೂ ಓದಿರಿ: ಸಿಂಘು ಗಡಿನಲ್ಲಿ ಯುವಕನ ಹತ್ಯೆ: ನಿಹಾಂಗ್ ಗುಂಪು, ಮೃತ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದ ಎಸ್‌ಕೆಎಂ

ಇದು ಅಪವಿತ್ರತೆಯ ಸಮಸ್ಯೆಯಾಗಿದೆ. ಕೊಲೆಯಾದ ವ್ಯಕ್ತಿಯು ಪವಿತ್ರ ಗ್ರಂಥವನ್ನು ಮೋಟಾರ್‌ ಸೈಕಲ್‌ನ ಬಾಕ್ಸ್‌ನಲ್ಲಿ ಇಟ್ಟು ಕೊಳಕಾದ ರಸ್ತೆಯ ಬದಿಯಲ್ಲಿ ಇಟ್ಟಿದ್ದ ಎಂಬುದಕ್ಕೆ ಸಂಬಂಧಿಸಿದ್ದಾಗಿದೆ. ನಿಹಾಂಗ್ ಸಿಖ್ಖರು ಮೊದಲು ಲಖ್‌ಬೀರ್‌ಸಿಂಗ್ ಅವರ ಎಡಗೈಯನ್ನು ಕತ್ತರಿಸಿ ನಂತರ ಅವರ ಕಾಲಿನ ಮೇಲೆ ದಾಳಿ ಮಾಡಿದರು. ಮೊದಲ ದಾಳಿಯ 1 ಗಂಟೆಯ ನಂತರ ಲಖ್ಬೀರ್‌ ಸಾವಿಗೀಡಾದರು.

ಪಂಜಾಬ್‌ ನಲ್ಲಿ 2015ರಲ್ಲಿ ಗುರುಗ್ರಂಥ ಸಾಹೇಬ್‌ ಅಪವಿತ್ರತೆ ಪ್ರಕರಣವೊಂದು ಸಂಭವಿಸಿತು.  ಅಪವಿತ್ರಕ್ಕೆ ವಿರುದ್ಧವಾಗಿ ಸಂಗತ್‌‌ನವರು ಹೋರಾಡುತ್ತಿದ್ದಾಗ ಪೊಲೀಸರ ದಾಳಿಯಿಂದ ಇಬ್ಬರು ಸಿಖ್ಖರು ಸಾವನ್ನಪ್ಪಿದ್ದರು. ಮೂರು ತನಿಖಾ ಆಯೋಗಗಳನ್ನು ರಚಿಸಲಾಯಿತು, ಮೂವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ, ಈ ಆಟದಲ್ಲಿ ಅನೇಕ ಅಧಿಕಾರಿಗಳು ಬಂದರು, ಹೋದರು ಆದರೆ ನ್ಯಾಯಮಾತ್ರ ಸಿಗಲಿಲ್ಲ. ಸಿಂಘುವಿನಲ್ಲಿ ಘಟನೆ ನಡೆಯುವ ಮೂರು ದಿನಗಳ ಹಿಂದೆ 2015ರ ಪ್ರಕರಣಕ್ಕೆ ಆರು ವರ್ಷಗಳಾಯಿತು. ಹಾಗೆಯೇ 1984ರ ಸಿಖ್ ವಿರೋಧಿ ಹತ್ಯಾಕಾಂಡಕ್ಕೆ 37 ವರ್ಷಗಳಾಗಿದೆ. ಅಂದಿನಿಂದಲೂ ಸಾವಿರಾರು ನಾಗರಿಕರ ಕರಾಳ ಹತ್ಯೆಗೆ ಪಂಜಾಬ್‌ ಸಾಕ್ಷಿಯಾಗಿದೆ. ಆದರೆ ಈವರೆಗೆ ನ್ಯಾಯ ಮಾತ್ರ ಸಿಕ್ಕಿಲ್ಲ.

ಕೊನೆಯ ಪ್ಯಾರಾಗ್ರಾಫ್ ಅನ್ನು ಉಲ್ಲೇಖಿಸುವ ಉದ್ದೇಶ ಈ ಸಿಂಘು ಪ್ರಕರಣವನ್ನು ಒಂದು ಪ್ರತ್ಯೇಕ ಘಟನೆಯಾಗಿ ನೋಡದಂತೆ ನಿಮ್ಮೆಲ್ಲರನ್ನೂ ವಿನಂತಿಸುವುದಾಗಿದೆ. ಯಾವುದೇ ಅಪವಿತ್ರತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಹತ್ಯೆಯನ್ನು ನಿಹಾಂಗ್‌ಗಳು ‘ನ್ಯಾಯ’ ಎಂದು ಆಚರಿಸುತ್ತಾರೆ. ಈ ಪ್ರಕರಣದಲ್ಲಿನ ಹತ್ಯೆಯೂ ಅವರ ಪ್ರಕಾರ ನ್ಯಾಯದ ಸಂಕೇತವಾಗಿದೆ.

ಈ ಥರದ ಹತ್ಯೆಗಳು ನ್ಯಾಯವೆಂಬುದನ್ನು ನಾನು ಸಮರ್ಥಿಸುತ್ತಿಲ್ಲ. ಗುಂಪು ಹತ್ಯೆ ಹಾಗೂ ಕಾನೂನು ಬಾಹಿರ ಕೃತ್ಯಗಳಿಗಿಂತ ಈ ಪ್ರಕರಣ ಕಡಿಮೆಯೇನಲ್ಲ. ಧರ್ಮವನ್ನು ಅಪರಾಧೀಕರಿಸುವುದು ಅತ್ಯಂತ ಅಪಾಯಕಾರಿಯಾದದ್ದು, ಅದು ಈಗ ಚಾಲ್ತಿಯಲ್ಲಿದೆ. ದುರಾದೃಷ್ಟವಶಾತ್‌ ಈ ಘಟನೆ ರೈತ ಪ್ರತಿಭಟನಾ ನೆಲದಲ್ಲಿ ನಡೆಯಿತು. ರೈತ ಹೋರಾಟಕ್ಕೆ, ಸಂಯುಕ್ತ ಕಿಸಾನ್‌ ಮೋರ್ಚಾಕ್ಕೆ, ಸಿಖ್ಖಿಗೆ ನಕರಾತ್ಮಕ ಚಿತ್ರಣವನ್ನು ತಂದುಕೊಟ್ಟಿತು.

ಇದನ್ನೂ ಓದಿರಿ: ಅದಾನಿಯಿಂದ ಹಸ್ಡಿಯೋ ಕಾಡನ್ನು ಉಳಿಸಿ: ಚತ್ತೀಸ್‌ಘಡ ಆದಿವಾಸಿಗಳಿಂದ 300 ಕಿ.ಮೀ ಪಾದಯಾತ್ರೆ

“ಒಂದು ಪುಸ್ತಕ ಹೇಗೆ ಮುಖ್ಯವಾಗುತ್ತದೆ” ಎಂದು ಕೇಳುತ್ತಿರುವವರು ತಮ್ಮದೇ ಹೋರಾಟದಲ್ಲಿ ಮಾತ್ರ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ವಾಲ್ಮೀಕಿ ದೇವಾಲಯವೊಂದನ್ನು ದೆಹಲಿಯಲ್ಲಿ ಕೆಡವಲಾಯಿತು, ಎಲ್ಲ ಅಂಬೇಡ್ಕರ್ ವಾದಿಗಳು ಹೋರಾಟ ಆರಂಭಿಸಿದರು. ಬಾಬ್ರಿ ಮಸೀದಿ ದ್ವಂಸವು ಜಾತ್ಯತೀತತೆಯ ಮೇಲಿನ ದಾಳಿಯಾಗಿತ್ತು. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಪ್ರತಿಮೆಯನ್ನು ಉರುಳಿಸುವುದು ಕೂಡ ಅಗೌರವದ ಸಂಕೇತವಾಗಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಸಾಂಕೇತಗಳು ಮತ್ತು ಚಿಹ್ನೆಗಳು ಸಮಾಜದ ಒಂದು ಪ್ರಮುಖ ಹಾಗೂ ಅವಿಭಾಜ್ಯ ಅಂಗ ಎಂಬುದನ್ನು ನಾವು ನಿರಾಕರಿಸಬಾರದು.

ಕೊಲೆಯಾದ ಲಖ್ಬೀರ್‌ ಸಿಂಗ್‌ ಪವಿತ್ರ ಗ್ರಂಥವನ್ನು ಮುಟ್ಟಿದ, ಅಸ್ಪೃಶ್ಯನಾದ ಲಖ್ಬೀರ್‌‌ನಿಂದಾಗಿ ಮೇಲ್ಜಾತಿಯ ಸಿಂಗ್‌ಗಳ ಭಾವನೆಗೆ ದಕ್ಕೆಯಾಯಿತು ಎಂಬುದು ಆಧಾರ ರಹಿತ ಸಂಗತಿ. ಬೇರೆಯವರಿಗೆ ಹೋಲಿಸಿದರೆ ಸಿಖ್‌ನಲ್ಲಿ ಹೆಚ್ಚಿನ ಸಾಮಾಜಿಕ ಚಲನೆ ಇದೆ. ದಲಿತನೂ ಕೂಡ ಪವಿತ್ರ ಗ್ರಂಥವನ್ನು ಮುಟ್ಟಬಹುದು, ಓದಬಹುದು. ಸಿಖಿ ಶ್ಲೋಕಗಳನ್ನು, ಕೀರ್ತನಗಳನ್ನು ಕೇಳಿದಾಕ್ಷಣ ಯಾರೂ ದಲಿತರ ಕಿವಿಗೆ ಹಾನಿ ಮಾಡುವುದಿಲ್ಲ. ಇನ್ನು ಹೇಳಬೇಕೆಂದರೆ ಗುರು ಗ್ರಂಥ ಸಾಹೇಬ್‌ ರಚನೆಯಲ್ಲಿ ದಲಿತರು ಬಹುದೊಡ್ಡ ಪಾತ್ರ ವಹಿಸಿದ್ದಾರೆ.

ನನ್ನ ಅಜ್ಜ ಎಸ್.ವೀರ್‌ ಸಿಂಗ್‌ ಕೂಡ ಒಬ್ಬ ದಲಿತ. ಅವರು ಗುರುದ್ವಾರದಲ್ಲಿ ಪಾತಿ ಆಗಿದ್ದರು. ಧಾರ್ಮಿಕ ವಿಧಿವಿಧಾನಗಳಿಗಾಗಿ ಎಲ್ಲ ಜಾತಿಯವರು ಆತನನ್ನು ಕರೆಸಿಕೊಳ್ಳುತ್ತಿದ್ದಾರೆ. ಮೊದಲನೆಯದಾಗಿ, ಸಿಖ್ ಫಿಲಾಸಫಿಯಲ್ಲಿ ಜಾತಿ ಎಂಬುದು ಇಲ್ಲ. ಎರಡನೆಯದಾಗಿ, ಪಂಜಾಬಿಗಳು ಜಾತಿ ವ್ಯವಸ್ಥೆಯನ್ನು ಹೊಂದಿದ್ದರೂ, ಹಿಂದೂ ಧರ್ಮದಂತೆ ಕಟುವಾಗಿ ಇಲ್ಲಿನ ಜಾತಿ ವ್ಯವಸ್ಥೆ ಇಲ್ಲ. ಸಿಖ್ ಧರ್ಮದಲ್ಲಿರುವ ದಲಿತರು ‘ಗುರು ಗ್ರಂಥ ಸಾಹಿಬ್’ ಅಥವಾ ಯಾವುದೇ ಪವಿತ್ರ ಪಠ್ಯವನ್ನು ಸ್ಪರ್ಶಿಸಬಹುದು, ಕೇಳಬಹುದು ಮತ್ತು ಓದಬಹುದು.

ಈ ಪ್ರಕರಣದಲ್ಲಿ ಇದು ಜಾತಿ ಹಿಂಸೆಯಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಆದರೆ ಇದು ಕ್ರೂರ ಹಿಂಸೆ ಎಂಬುದು ಸಾಬೀತಾಗಿದೆ. ಇದು ಅಧಿಕಾರಶಾಹಿಯಿಂದ ಪ್ರಚೋದಿತವಾದ ಹಿಂಸೆಯಾಗಿದೆ ಎಂಬುದನ್ನು ಇಲ್ಲಿ ಅರ್ಥಮಾಡಿಕೊಳ್ಳಬೇಕು. ಭಾರತ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯನ್ನು ಪ್ರಚಾರ ಮಾಡುತ್ತಿದೆ…

ಭಾರತವು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಕಾನೂನು ಹೊಂದಿದೆ. ಈ ಸಮಸ್ಯೆಯನ್ನು ಕಾನೂನಿನ ಮೂಲಕ ಪರಿಗಣಿಸಬೇಕು. ಕಿಸಾನ್ ಮೋರ್ಚಾ ತನ್ನ ಹೇಳಿಕೆಯಲ್ಲಿ ಹೇಳುವಂತೆ “ಅವರು ಯಾವುದೇ ಧಾರ್ಮಿಕ ಪಠ್ಯ ಅಥವಾ ಚಿಹ್ನೆಯ ಅಗೌರವಕ್ಕೆ ವಿರುದ್ಧವಾಗಿದ್ದಾರೆ. ಆದರೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ಒಪ್ಪುವುದಿಲ್ಲ. ಆದರೆ ಅದೇ ಸಮಯದಲ್ಲಿ, ನಮ್ಮ ನ್ಯಾಯ ವ್ಯವಸ್ಥೆಯು ಅಗತ್ಯವಿರುವವರಿಗೆ ಉತ್ತಮ ಹಾಗೂ ಸಕಾಲದಲ್ಲಿ ನ್ಯಾಯವನ್ನು ದೊರಕಿಸುವುದನ್ನು ಸಾಬೀತುಪಡಿಸುವ ಸಮಯ ಬಂದಿದೆ.

ನಾಲ್ಕು ನಿಹಾಂಗ್ಸ್ ಪೊಲೀಸರಿಗೆ ಶರಣಾಗಿದ್ದಾರೆ. ಅವರಲ್ಲಿ ಇಬ್ಬರು ಪ್ರಮುಖ ಆರೋಪಿಗಳು ದಲಿತರು ಎಂಬುದನ್ನು ನಾನು ದೃಢೀಕರಿಸಬಲ್ಲೆ. ಇವರೆಲ್ಲರೂ ದಲಿತರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಈ ನಿಹಾಂಗ್ ಗುಂಪಿನ ಮುಖ್ಯಸ್ಥನೂ ದಲಿತನೇ.

ಇನ್ನು ಮಾಧ್ಯಮಗಳ ಹಲವು ಪ್ರಶ್ನೆಗಳು ಉತ್ತರವಿಲ್ಲದೆ ಹಾಗೆ ಉಳಿದುಕೊಂಡಿವೆ.

1. ಸಿಂಘು ಗಡಿಗೆ ಲಖಬೀರ್ ಸಿಂಗ್ ಅವರನ್ನು ಕರೆತಂದವರು ಯಾರು?

2. ಅಪವಿತ್ರತೆಗೊಳಿಸಿದ್ದಕ್ಕೆ ಪುರಾವೆ ಏನು?

3. ಅವರು ಯಾಕೆ ಸಂತ್ರಸ್ತನನ್ನು ಪೊಲೀಸರಿಗೆ ಒಪ್ಪಿಸಲಿಲ್ಲ?

4. ಕಿಸಾನ್‌ ಸಂಯುಕ್ತ ಮೋರ್ಚಾ ಏಕೆ ಹೆಚ್ಚು ಮಾತಾಡಿಲ್ಲ ಮತ್ತು ಬೇಜವಾಬ್ದಾರಿ ತೋರಿದೆ?

ನನ್ನ ಒಂದೇ ಪ್ರಶ್ನೆಗೆ ಅವರು ಉತ್ತರಿಸಲಾಗಿಲ್ಲ.

“ಸರ್ಕಾರವು ಕೃಷಿ ಕಾನೂನುಗಳನ್ನು ಏಕೆ ರದ್ದುಗೊಳಿಸಿಲ್ಲ ಮತ್ತು ಏಕೆ ಎಂಎಸ್‌ಪಿ ಮೇಲೆ ಕಾನೂನು ಜಾರಿಗೊಳಿಸಿಲ್ಲ?

ಆಳವಾದ ತನಿಖೆ ನಡೆಯಬೇಕು. ಇದು ಪ್ರತ್ಯೇಕ ಘಟನೆಯಲ್ಲ. ಜಾತಿ ಎಂಬುದು ವದಂತಿಯಲ್ಲ; ಅದು ಗುರಾಣಿಯೂ ಅಲ್ಲ. ಹಿಂಸೆ ಎಂಬುದು ಹಿಂಸೆಯಷ್ಟೇ. ಒರಟು ನ್ಯಾಯ ಎಲ್ಲಿಯೂ ಸಮರ್ಥನೀಯವಲ್ಲ ಮತ್ತು ನ್ಯಾಯಸಮ್ಮತವಲ್ಲ.

ನೀವು ಮತ್ತು ನಾನು ಒಬ್ಬರನ್ನೊಬ್ಬರು ದೂಷಿಸುವ ಮೂರ್ಖರಾಗಿದ್ದೇವೆ. ಅಲ್ಲಿ ಸರ್ಕಾರವು ಯಶಸ್ವಿಯಾಗಿ ಒಡೆದು ಆಡುವ ನೀತಿಯೊಂದಿಗೆ ಯಶಸ್ವಿಯಾಗಿ ಆಡಳಿತ ನಡೆಸುತ್ತಿದೆ.

ಹರಿಂದರ್‌‌‌ ಸಿಂಗ್‌‌

(ಅಭಿಪ್ರಾಯಗಳು ಲೇಖಕರದ್ದು)


ಇದನ್ನೂ ಓದಿ: ಲಖ್ಬೀರ್ ಹತ್ಯೆ ಪ್ರಕರಣ: ರೈತ ಸಂಘಟನೆಗಳ‌ ಹೊಣೆಯ ಕುರಿತು ಎರಡು ನೋಟಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...