Homeಮುಖಪುಟನೆರೆಯ ಹೊರೆ: ನೆಮ್ಮದಿಯಲ್ಲಿ ಒಂದೂ ಊರಿಲ್ಲ, ಆರು ತಿಂಗಳಾದರೂ ಸೂರಿಲ್ಲ

ನೆರೆಯ ಹೊರೆ: ನೆಮ್ಮದಿಯಲ್ಲಿ ಒಂದೂ ಊರಿಲ್ಲ, ಆರು ತಿಂಗಳಾದರೂ ಸೂರಿಲ್ಲ

- Advertisement -
- Advertisement -

ಗದಗ: ‘ಕರೆಕ್ಟ್ ಅಂದ್ರ ಕರೆಕ್ಟ್’ ಎಂದು ಅಳತೆಪಟ್ಟಿ ಹಿಡಿದು ಮನೆ ಕಾಮಗಾರಿಯನ್ನು ಅಳೆದವರಂತೆ ಆಡುತ್ತಿರುವ ಜಿಲ್ಲೆಯ ಆಡಳಿತಶಾಹಿ, ನೆರೆ ಪ್ರವಾಹ ಬಂದು ಏಳು ತಿಂಗಳಾಗುತ್ತ ಬಂದರೂ ಮನೆ ನಿರ್ಮಾಣಕ್ಕೆ ಅಥವಾ ರಿಪೇರಿಗೆ ಎರಡನೇ ಕಂತಿನ ಹಣ ನೀಡಲು ತಯಾರಿಲ್ಲ. ಆರು ತಿಂಗಳಾದರೂ ಹಲವಾರು ಊರುಗಳ ನೂರಾರು ಕುಟುಂಬಗಳು ಸುಭದ್ರ ಸೂರಿಲ್ಲದೇ ಜೀವನ ನಡೆಸುತ್ತಿವೆ.

ಈ ಕಡೆ ಜಮೀನಿನಲ್ಲಾದ ಕೊರೆತ, ರಸ್ತೆ ಸೇರಿದಂತೆ ಒಂದಿಲ್ಲೊಂದು ಸಮಸ್ಯೆ ಇದ್ದೇ ಇದೆ. ಹೀಗಾಗಿ ಮಲಪ್ರಭೆ, ಬೆಣ್ಣೆಹಳ್ಳ ತಣ್ಣಗಾಗಿ ಒಣಗಿದರೂ, ನಮ್ಮ ಅಧಿಕಾರಿಗಳ ಒಣ ಉಸಾಬರಿ ಮಾತ್ರ ನಿಂತಿಲ್ಲ.

ಗಣಿ, ಭೂವಿಜ್ಞಾನ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರ ನರಗುಂದ ಕ್ಷೇತ್ರ ನೆರೆಪ್ರವಾಹಕ್ಕೆ ಸಿಕ್ಕು ನಜ್ಜುಗುಜ್ಜಾಗಿದೆ. ಆದರೆ ಪಾಟೀಲರು ಇದರ ಬಗ್ಗೆ ತೆಲೆ ಕೆಡಿಸಿಕೊಂಡಿಲ್ಲ. ಪರಿಹಾರ ತಂದಿದ್ದಿನಲ್ಲ ಎಂದು ಮನೆಯಿಂದ ತಂದವರಂತೆ ಮಾತಾಡುತ್ತಾರೆ ಹೊರತು, ಆ ಪರಿಹಾರ ಸಂತ್ರಸ್ತರಿಗೆ ತಲುಪಿತೋ ಇಲ್ಲವೋ ಎಂಬ ಬಗ್ಗೆ ಕಾಳಜಿಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾವು ಗಣಿ ಸಚಿವ ಎಂಬುದು ಇಂಪಾರ್ಟೆಂಟ್, ಅದಕ್ಕೇ ಅವರು ಜಿಲ್ಲೆಯ ಜೀವನಾಡಿ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಹೊಂಚು ಹಾಕಿ ಕುಳಿತಿರುವ ಬಲ್ಡೊಟಾ ಮತ್ತು ಪೊಸ್ಕೊಗಳಂತಹ ಕಂಪನಿಗಳ ಬಗ್ಗೆ ಸಾಫ್ಟ್‌ ಕಾರ್ನರ್ ಹೊಂದಿದ್ದಾರೆ. ಗಣಿ ಖಾತೆ ನಿಭಾಯಿಸಬೇಕಲ್ಲ, ಪಾಪ, ಅವರಿಗೆ ಜಿಲ್ಲಾ ಉಸ್ತುವಾರಿ ಮಾಡಕು ಟೈಮ್ ಇಲ್ಲವಂತೆ.

 

ತಮ್ಮ ಹಕ್ಕಿನ ಹಣಕ್ಕೆ ಕಾದವರ ಎದುರು ಅಧಿಕಾರಿಗಳು ತಾಂತ್ರಿಕ ತೊಂದರೆ, ಮೆಜರ್‌ಮೆಂಟು, ಫ್ಲಿಂಥು, ನಿಯಮ ಎನ್ನುವುದಿದೆಯಲ್ಲ, ಅದಂತೂ ಬದುಕುವ ಹಕ್ಕಿನ ಮೇಲೆ ದಾಳಿ ಮಾಡಿದಂತೆ.

ಜಿಲ್ಲೆಯ ನೆರೆಪೀಡಿತ ತಾಲೂಕುಗಳಾದ ನರಗುಂದ ಮತ್ತು ರೋಣಗಳಲ್ಲಿ ಅಧಿಕಾರಶಾಹಿಯ ‘ಕಂತಿನ ಲೆಕ್ಕಕ್ಕೆ’ ಹೈರಾಣಾದವರು ಡಿಸಿಯವರಿಗೆ ದೂರು ತಲುಪಿಸಿದರೂ ಪ್ರಯೋಜನವಾಗಿಲ್ಲ.

ಅಂತೂ ಇಂತೂ ಪರಿಹಾರ ಬಂತು!
ಆರಂಭದಲ್ಲಿ ಈ ಸರ್ಕಾರದಿಂದ ನೆರೆ ಪರಿಹಾರ ಸಿಗುವುದೋ ಇಲ್ಲವೋ ಎಂಬ ಅನುಮಾನ, ಆತಂಕಗಳಿದ್ದವು. ಆದರೂ ಅಂತೂ ಇಂತೂ ಪರಿಹಾರ ಬಂತು. ಆದರೀಗ ಮುಳ್ಳಾಗಿರುವುದು ಕಂತು!

ಕೊಣ್ಣೂರು, ವಾಸನ, ಬೂದಿಹಾಳ, ಮೆಣಸಗಿ.. ಹೀಗೆ ನೆರೆಪೀಡಿತ ಯಾವ ಊರಿಗೆ ಹೋದರೂ ಜನರ ಗೋಳು ನಿಂತೇ ಇಲ್ಲ. ಮನೆ ನಿರ್ಮಾಣಕ್ಕೆ ಹಣ ನೀಡುವಾಗಲೇ ಗ್ರೇಡುಗಳ ಹೆಸರಿನಲ್ಲಿ ನಿಯಮಗಳ ಗೋಡೆಗಳು ಎದ್ದವು. ಮನೆ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ವಿಂಗಡಿಸಲು ಎ, ಬಿ, ಮತ್ತು ಸಿ ಎಂದು ಮೂರು ಗ್ರೇಡ್‌ಗಳನ್ನು ಮಾಡಲಾಯಿತು. ಸಂಪೂರ್ಣ ಮನೆ ನೆಲಸಮವಾಗಿದ್ದರೆ ‘ಎ’ ಗ್ರೇಡ್‌ನಲ್ಲಿ ಅದಕ್ಕೆ ಪೂರ್ಣ ಪರಿಹಾರ, ಶೇ.50ರಷ್ಟು ಹಾನಿಯಾಗಿದ್ದರೆ ಅದಕ್ಕೆ ‘ಬಿ’ ಗ್ರೇಡ್‌ನಲ್ಲಿ ಶೇ.50 ಪರಿಹಾರ ಮತ್ತು ಶೇ.25ರಿಂದ 30ರಷ್ಟು ಹಾನಿಯಾಗಿದ್ದರೆ ‘ಸಿ’ ಗ್ರೇಡ್‌ನಲ್ಲಿ 25-30 ಸಾವಿರ ರೂ ನೀಡುವ ನಿಯಮ ಮಾಡಲಾಯಿತು.

ಮೊದಲನೆಯ ಕಂತೇನೋ ಬಂತು. ಆದರೆ ಇನ್ನು ಎಷ್ಟೋ ಜನರಿಗೆ ಎರಡನೇ ಕಂತು ಬರದೇ ಮನೆಗಳೆಲ್ಲ ಅರ್ಧಂಬರ್ಧ ರಿಪೇರಿಯಾಗಿ ನಿಂತಿವೆ. ಜಿಲ್ಲಾಧಿಕಾರಿ ಖಾತೆಯಲ್ಲಿ ಇನ್ನೂ 20 ಕೋಟಿ ರೂ ಉಳಿದಿದೆ. ಮೊದಲನೇ ಕಂತಿನ ಹಣದಲ್ಲಿ ಇಂತಿಷ್ಟು ಕಾಮಗಾರಿಯಾಗಿದ್ದರೆ ಮಾತ್ರ ಎರಡನೇ ಕಂತು ಎಂದು ಕ್ರೂರತನ ತೋರಲಾಗುತ್ತಿದೆ.

ಇವರು ನಿಯಮ ಮಾಡಿದ್ದು ಆರು ತಿಂಗಳ ಹಿಂದೆ. ಪ್ರತಿ ತಿಂಗಳೂ ಸಿಮೆಂಟ್, ಕಲ್ಲು, ಕಬ್ಬಿಣ, ನಿರ್ಮಾಣದ ಕೂಲಿ ಏರುತ್ತಲೇ ಇರುವಾಗ ಇವರು ಹೇಳಿದಷ್ಟು ಎತ್ತರಕ್ಕೆ ಮನೆ ತಂದು ನಿಲ್ಲಿಸಿದರಷ್ಟೇ ಇನ್ನೊಂದು ಕಂತು ಎನ್ನುವುದು ಅವೈಜ್ಞಾನಿಕ ಮತ್ತು ಹೊಣೆಗೇಡಿತನ.

ಕೊಣ್ಣೂರು ಗ್ರಾಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿ ಗ್ರೇಡ್ ಫಲಾನುಭವಿಗಳಿಗೆ ಒಂದನೆಯ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಎರಡನೇ ಕಂತು ಮರೀಚಿಕೆಯಾಗಿದೆ. ಹೀಗಾಗಿ ಫಲಾನುಭವಿಗಳ ಮನೆಗಳು ಅಪೂರ್ಣವಾಗಿವೆ. ಮನೆಗಳನ್ನು ಪೂರ್ಣ ಮಾಡಬೇಕೆಂದರೆ, ಲೋಕದಲ್ಲಿಲ್ಲದ ನಿಯಮ ತೋರಿಸುವ ಅಧಿಕಾರಿಗಳು ನಿರಾಶೆ ಮೂಡಿಸುತ್ತಿದ್ದಾರೆ. ಇಂತಹ ಆಪತ್ತಿನ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಬೇಕಾದ ಜನಪ್ರತಿನಿಧಿಗಳು ಹತ್ತಿರ ಸುಳಿಯುತ್ತಿಲ್ಲ.

ನೆರೆಪ್ರವಾಹಕ್ಕೂ ಮುನ್ನ ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದ ತಮ್ಮದೇ ತೆರಿಗೆ ಹಣಕ್ಕೆ ‘ಕಂತು’ ಎಂಬ ಹಾಳೆ ಸುತ್ತಿ ಭಿಕ್ಷೆಯಂತೆ ನೀಡುತ್ತಿರುವುದನ್ನು ಕಂಡು ಅಸಮಾಧಾನಗೊಂಡಿದ್ದಾರೆ.

ಮಾರ್ಚ್‌ನಲ್ಲೇನಾದರೂ ಅಕಾಲಿಕ ಮಳೆ ಸುರಿದರೆ ಈಗ ಮತ್ತೆ ಮನೆ ತುಂಬ ನೀರು ನಿಲ್ಲಲಿದೆ. ಇದ್ಯಾವುದರ ಪರಿವೆಯೂ ಇಲ್ಲದ ಜಿಲ್ಲಾಡಳಿತ ಫ್ಲಿಂಥು, ಜಿಪಿಎಸ್ಸು ಅಂತೆಲ್ಲ ಮಾತಾಡುತ್ತ ಕುಳಿತಿದೆ.

ಸಚಿವ ಸಿ.ಸಿ ಪಾಟೀಲ್‌

ರೋಣ ಮತ್ತು ನರಗುಂದದ ಎಲ್ಲ ಹಂತಗಳ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಜನರ ಪರವಾಗಿ ಧ್ವನಿ ಎತ್ತುವುದು ಈಗ ಅನಿವಾರ್ಯ. ಅವರನ್ನು ಆರಿಸಿದ್ದು ಇನ್ನೇತಕ್ಕೆ?


ಸರ್ವೆ ನಂ. 703 ಮತ್ತು 705ರಲ್ಲಿ 15*20 ವಿಸ್ತೀರ್ಣದ ನನ್ನ ಎರಡು ಮನೆ ಇದ್ದವು. 703ರ ಮನೆ ಪೂರ್ತಿ ಬಿದ್ದಿದ್ದರೆ, 705ರ ಮನೆ ಭಾಗಶ: ಬಿದ್ದಿತ್ತು. ಸರ್ವೆ ಮಾಡಲು ಬಂದವರಿಗೆ 705ರ ಮನೆ ಬೇಡ, ಪೂರ್ತಿ ಬಿದ್ದ 703ರ ಮನೆ ಪರಿಗಣಿಸಿ ಎಂದೆ. ಎರಡನ್ನೂ ಸರ್ವೇ ಮಾಡಿಕೊಂಡು ಹೋಗಿ, ಭಾಗಶ: ಬಿದ್ದ ಮನೆ ಆಯ್ಕೆ ಮಾಡಿದ್ದಾರೆ. ಈ ಕುರಿತು ಡಿಸಿವರೆಗೆ ದೂರು ಕೊಟ್ಟರೂ ಸರಿಪಡಿಸಿಲ್ಲ.
-ವೀರಪ್ಪ ದ್ಯಾವಣ್ಣವರ, ಕೊಣ್ಣೂರು


ನನ್ನ ಹೊಲ, ಮನೆ ಎರಡೂ ಹಾನಿಯಾಗಿವೆ. ಭಾಗಶ: ಹಾನಿ ಎಂದು ಮೊದಲ ಕಂತು 25 ಸಾವಿರ ರೂ. ನೀಡಿದರು. 6 ತಿಂಗಳಾದರೂ 2ನೇ ಕಂತು ನೀಡುತ್ತಿಲ್ಲ. ತಹಸೀಲ್ದಾರ್, ಡಿಸಿ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ.
– ಕೃಷ್ಣಪ್ಪ, ವಾಸನ

ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ನೆರೆ ಪರಿಹಾರಕ್ಕೆ 57 ಕೋಟಿ ರೂ. ಖರ್ಚು ಮಾಡಿದ್ದೇವೆ. ಇನ್ನೂ 20 ಕೋಟಿ ರೂ ಇದೆ. ಆದರೆ ಮನೆ ನಿರ್ಮಾಣ ಅಥವಾ ರಿಪೇರಿಗೆ ಮೊದಲ ಕಂತು ಪಡೆದ ಬಹುತೇಕರು ಅದನ್ನು ಪೂರ್ಣಗೊಳಿಸಿಲ್ಲ. ಫ್ಲಿಂಥ್‌ವರೆಗೂ ಬಂದರೆ 2ನೇ ಕಂತು ಬಿಡುಗಡೆ ಮಾಡುತ್ತೇವೆ, ಅವರೇ ಅವಸರ ಮಾಡುತ್ತಿಲ್ಲ. 10 ಕೋಟಿ ರೂ ಬೆಳೆ ಪರಿಹಾರ ನೇರವಾಗಿ ರೈತರ ಖಾತೆಗೆ ಹೋಗಿದೆ. ಕೆಲವು ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ತಲುಪಿಲ್ಲ. ಸರಿಪಡಿಸುತ್ತೇವೆ.
-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...