Homeಚಳವಳಿ’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ...

’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ…

- Advertisement -
- Advertisement -

ಈಗ ನಮ್ಮ ದೇಶದಾಗ ಹಿಂದೂ ಅನ್ನೋ ಪದ ಎನ್ನುವುದು ಟ್ರೆಂಡಿಂಗ್ ಆಗೇದ. ಒಂದ ಏನಪಾ ಅಂದರ ಹಿಂದೆಲ್ಲಾ ‘ನಾವೆಲ್ಲ ಹಿಂದೂ ಅಂತ ಅಂತಿದ್ದವರು ಈಗ ನಾವಷ್ಟ ಹಿಂದೂ’ ಅಂತ ಅನ್ನಲಿಕ್ಕೆ ಹತ್ಯಾರ.

ಭಾರತ- ಪಾಕಿಸ್ತಾನ ಎರಡೂ ದೇಶಗಳ ಸಾಂಸ್ಕೃತಿಕ ಕೊಂಡಿಯಾಗಿದ್ದ ಜನಪ್ರಿಯ ಕವಿ ಫೈಜ್ ಅಹಮದ್ ಫೈಜ್ ಅವರ ‘ಹಮ್ ದೇಖೇಂಗೆ’ ಅನ್ನೋ ಹಾಡು ಹಿಂದೂ ವಿರೋಧಿ ಅಂತ ಕೆಲವರು ದೂರು ಕೊಟ್ಟಾರ. ಅದು ಹೌದೋ ಅಲ್ಲೋ ಅಂತ ನೋಡಲಿಕ್ಕೆ ಐಐಟಿ ಯವರು ಒಂದು ಸಮಿತಿ ನೇಮಕ ಮಾಡ್ಯಾರ. ವಿಧಾನಸೌಧದ ಮೂರನೇ ಮಹಡಿಯೊಳಗ ಒಂದು ಜೋಕ್ ಅದ. ಯಾವುದರೇ ವಿಷಯಕ್ಕ ಯಾವ ನಿರ್ಧಾರಕ್ಕ ಬರಬೇಕು ಅಂತ ತಿಳೀದೇ ಇದ್ದಾಗ ಒಂದು ಸಮಿತಿ ನೇಮಕ ಮಾಡ್ರಿ.

ಹಿಂಗ ಮಾಡಬಹುದು ಅಂತ ಗೊತ್ತಾದನಂತರ ಅದನ್ನ ಈಗ ಸದ್ಯ ಜಾರಿ ಮಾಡಬಾರದು ಅಂತ ಇದ್ದರ ಅದರ ಪರಾಮರ್ಶೆಗೆ ಇನ್ನೊಂದು ಸಮಿತಿ ನೇಮಿಸಿರಿ ಅಂತ.

ನಾಲ್ಕು ಪ್ಯಾರಾದ ಆ ಹಾಡಿನ್ಯಾಗ ಬಳಸಿದ ಕೆಲವು ಶಬ್ದ ಕೆಲವರಿಗೆ ಕಿರಿಕಿರಿ ಆಗ್ಯಾವು.

ಇದರಾಗಿನ ಒಂದು ಸಾಲು ಇದು- “ದೇವ ಭೂಮಿ ಕಾಬಾದಾಗಿನ ಎಲ್ಲಾ ಮೂರ್ತಿಗಳನ್ನು ತೆಗೆಯಲಾಗತದ”. ಇದು ಇಸ್ಲಾಮಿನ ಇತಿಹಾಸಕ್ಕೆ ಸಂಬಂಧಪಟ್ಟದ್ದು. ಇಸ್ಲಾಂ ಪೂರ್ವ ಅರೇಬಿಯಾದಲ್ಲಿ ಮೂರ್ತಿ ಪೂಜೆ ಇತ್ತು. ಪ್ರವಾದಿ ಮಹಮ್ಮದರು ಮೂರ್ತಿ ಪೂಜೆಯ ವಿರೋಧಿ. ಅವರು ಬದ್ರದ ಯುದ್ಧ ಗೆದ್ದು ಮೆಕ್ಕಾಗೆ ಬಂದನಂತರ ಕಾಬಾದಾಗ ಸುಮಾರು 360 ಮೂರ್ತಿಗಳನ್ನ ಇಟ್ಟದ್ದನ್ನ ನೋಡಿದರು. ಅದರಾಗ ಅಂದಿನ ಪ್ರಮುಖ ದೇವತೆ ಹುಬಾಲನ ವಿಗ್ರಹವೂ ಇತ್ತು.

ಅವನ್ನೆಲ್ಲಾ ಅವರು ಅಲ್ಲಿಂದ ತೆಗೆದರು.
ಫೈಜ್ ಅವರ ಕವನದಲ್ಲಿ ಇದು ಮೂರ್ತಿ ಪೂಜೆಯ ವಿರೋಧದಂತೆ ಕಂಡರೂ, ಅದು ಅಸಲಿಗೆ ಆಧುನಿಕ ಕಾಲದ ವ್ಯಕ್ತಿ ಪೂಜೆಯ ವಿರೋಧವಾಗಿರೋದು.

ಇನ್ನ ಅದರಾಗ “ಎಲ್ಲಾ ಕಡೆ ಅನಲ್ ಹಕ್‍ನ ಘೋಷಣೆ ಹೊಮ್ಮಲಿದೆ” ಅನ್ನೋ ಇನ್ನೊಂದು ಸಾಲು ಅದ. ಇದು “ಅಹಂ ಬ್ರಹ್ಮಾಸ್ಮಿ”ಗೆ ಹತ್ತಿರವಾದದ್ದು.

“ನಾನೇ ದೇವರು, ನಾನೇ ಸತ್ಯ” ಅನ್ನೋದು ಇಸ್ಲಾಂನ ಮೂಲತತ್ವ ಅಲ್ಲ ಅಂತ ವಾದಿಸುವವರು ಇರಬಹುದು. ಆದರೆ ಅದನ್ನೇ ನಂಬಿ ಬದುಕಿದ. ಆ ಘೋಷಣೆ ಕೂಗಿದ್ದಕ್ಕೆ ಫಾಸಿ ಶಿಕ್ಷೆ ಅನುಭವಿಸಿದ ಸೂಫಿ ಮನ್ಸೂರ ಅಂಥವರೂ ಇಲ್ಲೇ ದೆಹಲಿಯೊಳಗ ಇದ್ದರು ಅನ್ನೋದು ನಾವು ಮರೆಯಬಾರದು.

ಅದು ಇರಲಿ ಬಿಡಲಿ. ಅಹಂ ಬ್ರಹ್ಮಾಸ್ಮಿ ಅನ್ನೋದಂತೂ ಚೊಕ್ಕ ಹಿಂದೂ ಧರ್ಮದ ತತ್ವ. ಅದನ್ನು ಯಾರಿಗೂ ನೆನಪು ಮಾಡೋದು ಬ್ಯಾಡ.
ಹಂಗಾರ ಇದರಾಗ ಹಿಂದೂ ವಿರೋಧಿ ಅನ್ನೋದು ಏನು ಐತಿ?
ಹೋಗಲಿ ಬಿಡ್ರಿ. ಹಿಂದೂ ಅಂದರರ ಏನು?

ಇದರ ಬಗ್ಗೆ ತತ್ವಜ್ಞಾನಿಗಳು ತಮ್ಮಳವಿಗೆ ತಿಳಿದಂತೆ ಉತ್ತರ ಕೊಟ್ಟರ ಭಾರತದ ಸರ್ವೋಚ್ಚ ನ್ಯಾಯಾಲಯ ಇನ್ನೊಂದು ಉತ್ತರ ಕೊಟ್ಟದ.

ಇವತ್ತಿಗೆ ಸುಮಾರು 50 ವರ್ಷದ ಹಿಂದೆ ಶಾಸ್ತ್ರಿ ವಿರುದ್ಧ ಮೂಲದಾಸ ಪ್ರಕರಣದಾಗ ನ್ಯಾಯಮೂರ್ತಿ ಪಿ. ಬಿ ಗಜೇಂದ್ರಗಡಕರ ಅವರು ಮತ್ತು ಇತರರು ಇದಕ್ಕೊಂದು ಸರ್ವಮಾನ್ಯ ಅನ್ನೋವಂಥಾ ವ್ಯಾಖ್ಯಾನ ಕೊಟ್ಟಾರ.

“ಹಿಂದೂ ಅಂದರ ಅದು ಒಂದು ಜೀವನಶೈಲಿ ಅಷ್ಟೇ. ಅದಕ್ಕೂ ಹೆಚ್ಚಿನದೇನೂ ಇಲ್ಲ” ಅಂತ ಅಧಿಕಾರಯುತವಾಗಿ ಅವರು ಹೇಳಿದ ಮಾತು ಇವತ್ತಿನವರೆಗೂ ನಮ್ಮ ನ್ಯಾಯಾಲಯಗಳನ್ನ ಕೈಹಿಡಿದು ನಡೆಸುತ್ತಾ ಬಂದದ.

ಆ ತೀರ್ಪಿನೊಳಗ ಕಾಣುವ ಮಾತುಗಳು ಇವು.
“ವೇದಗಳಲ್ಲಿ ವಿಶ್ವಾಸ ಹಾಗೂ ಪುನರ್‍ಜನ್ಮದಲ್ಲಿ ನಂಬಿಕೆ ಮತ್ತು ಜನನಮರಣದ ಚಕ್ರದಿಂದ ಬಿಡುಗಡೆಯೇ ಹಿಂದೂ ಧರ್ಮದಲ್ಲಿ ಜೀವನದ ಅಂತಿಮ ಗುರಿ.

ಇದು ಸಾಧ್ಯವಾಗುವುದು ಅನೇಕ ವಿಧಗಳಿಂದ, ಅನೇಕ ರೀತಿ ರಿವಾಜುಗಳಿಂದ. ಇದಕ್ಕ ಒಂದ ದಾರಿ, ಒಂದ ರೀತಿ, ಒಂದ ಧರ್ಮಸಿಂಧು ಅಂತ ಇಲ್ಲ.

ಕೆಲವರು ಇದು ಜ್ಞಾನದಿಂದ ಸಾಧ್ಯ ಎಂದರೆ ಕೆಲವರು ಕರ್ಮ ಹಾಗೂ ಇನ್ನು ಕೆಲವರು ಭಕ್ತಿಯಿಂದ ಅಂತಾರ. ಸತ್ಯಕ್ಕೆ ಹಲವು ಮುಖ. ಅವುಗಳನ್ನು ಯಾರೂ ಸಂಪೂರ್ಣವಾಗಿ ತಿಳಿಸಲು ಸಾಧ್ಯ ಇಲ್ಲ. ಆದ್ದರಿಂದ ಅವೆಲ್ಲವೂ ಖರೆ.”

“ಇದು ಸತ್ಯ ಅಂತ ಎಲ್ಲರಿಗೂ ಗೊತ್ತು. ಎಲ್ಲರೂ ಅದನ್ನು ಅರ್ಥಮಾಡಿಕೊಂಡಾರ. ಆದ್ದರಿಂದನ ಎಲ್ಲಾರಿಗೂ ಹಿಂದೂ ಧರ್ಮದ ಯಾವುದೇ ಮುಖ ಅಪರಿಚಿತ ಅನ್ನಿಸೋದಿಲ್ಲ. ಯಾರು ಯಾವ ಅಭಿಪ್ರಾಯ ಮಂಡಿಸಿದರೂ ಅದನ್ನು ಒಪ್ಪುವುದು ಸಹಜ. ನಂದ ಖರೇ ಅಂತ ಯಾರಾದರೂ ವಾದಾ ಮಾಡಿದರ ಇರಲೆಪ್ಪ, ನನಗ ನಂದ ಖರೇ ನಿನಗ ನಿಂದ ಖರೇ, ಅಂತ ಹೇಳಿ ಸುಮ್ಮನೇ ಆಗತಾರ. ಸತ್ಯದ ಕಡೆ ಹೋಗೋ ದಾರಿ ಪ್ರತಿಯೊಬ್ಬರದೂ ಬ್ಯಾರೆ ಇರಬಹುದು. ಆದರ ಈ ದಾರಿಯೊಳಗ ಬಂದವರಷ್ಟ ನಮ್ಮವರು, ಆ ದಾರಿಯೊಳಗ ಬಂದವರು ನಮ್ಮವರಲ್ಲಾ ಅಂತ ಹೇಳಲಿಕ್ಕೆ ಬರೋದಿಲ್ಲ. ಇದೇ ಸತ್ಯ. ಹಿಂದೂ ಧರ್ಮದ ಪರಂಪರೆಯೊಳಗ ಇರುವ ಅಗಣಿತ ತಾತ್ವಿಕ ಪರಂಪರೆಗಳು ಎಲ್ಲವೂ ಮಾನ್ಯ. ಯಾವುವೂ ತಿರಸ್ಕಾರಕ್ಕೆ ಯೋಗ್ಯ ಅಲ್ಲ.”

“ಯಾಕೆ ಇಷ್ಟೋಂದು ಪಂಥಗಳು ಆದವು ಅನ್ನೋದು ಸಹಿತ ಆಸಕ್ತಿಕರ ವಿಷಯ. ಅದು ಈ ಧಾರ್ಮಿಕ ಪರಂಪರೆಯೊಳಗಿನ ಸೃಜನಶೀಲ ಚಲನೆಯ ಕುರುಹು. ಸಂತರು, ದಾರ್ಶನಿಕರು, ಈ ಧರ್ಮ ಭ್ರಷ್ಟತೆಯನ್ನ, ಅಂಧ ವಿಶ್ವಾಸವನ್ನ ಎದುರಿಸಿದರು. ಪುರೋಹಿತಶಾಹಿಯ ವಿರುದ್ಧ, ವಿಚಾರಕ್ಕಿಂತ ಆಚರಣೆಯ ಹೆಚ್ಚು ಮಹತ್ವ ಪಡೆಯುವುದರ ವಿರುದ್ಧ, ಸಮರ ಸಾರಿದರು. ಇದರಿಂದಾಗಿಯೇ ನಮಗೆ ಬೇರೆ ಬೇರೆ ಪಂಥ ಅಂತ ಅನ್ನಿಸತಾವು. ಆದರ ಇವು ಎಲ್ಲವೂ ಸತ್ಯವನ್ನು ಕಂಡುಕೊಳ್ಳುವ ವಿವಿಧ ದಾರಿಗಳು ಅಷ್ಟ. ಮೇಲುನೋಟಕ್ಕ ಇವು ಬ್ಯಾರೆ ಅಂತ ಅನ್ನಿಸಿದರೂ ಇವು ಒಳಗೆಲ್ಲಾ ಒಂದೇ.”

“ಈ ಎಲ್ಲಾ ಸಂತರ ವಿಚಾರದ ಮೂಲ ನೋಡಿದಾಗ ಅವು ವೇದಗಳಿಂದ ಬಂದದ್ದವು ಅಂತ ಸ್ಪಷ್ಟವಾಗಿ ಗೊತ್ತಾಗತದ. ವೇದ ಎಂಬ ವೈಚಾರಿಕ ಜಲಾಶಯದಿಂದನ ಇವರಿಗೆಲ್ಲಾ ಸ್ಫೂರ್ತಿ ಸಿಕ್ಕದ. ಅವರ ವಿಚಾರದ ಮೂಲಗಳ ಆಕರ ವೇದ ಎಂಬ ಝರಿ. ಹಿಂದೂ ಧರ್ಮ ಅಪೌರುಶೇಯ. ಇದಕ್ಕೆ ಯಾರೋ ಒಬ್ಬ ಮೂಲ ಪುರುಷ, ಜನಕ ಅಥವಾ ಸ್ಥಾಪಕ ಅಂತ ಇಲ್ಲ. ಒಂದೇ ಸಿದ್ಧಾಂತ ಅಂತ ಇಲ್ಲ. ಹಿಂದೂಗಳು ಒಬ್ಬ ದೇವರನ್ನೇ ಪೂಜಿಸುತ್ತಾರೆ ಅಂತೇನೂ ಇಲ್ಲ. ಒಂದೇ ಕಟ್ಟುಪಾಡುಗಳು, ರೀತಿ ರಿವಾಜುಗಳು ಇಲ್ಲ. ಖರೇ ಹೇಳಬೇಕಂದರ ಧರ್ಮ ಅಂದರ ಹಿಂಗ ಇರಬೇಕು ಅಂತ ನಾವು ಯಾವುದಕ್ಕ ಹೇಳತೇವೋ ಅವು ಯಾವ ಗುಣಗಳೂ ಇದಕ್ಕೆ ಇಲ್ಲ. ಇದೊಂದು ಜೀವನ ಶೈಲಿ ಅಷ್ಟ”.
ನಂತರ ಅಪ್ಪಾ ಬಾಳು ಇಂಗಳೆ ಪ್ರಕರಣದಾಗ ಅಸ್ಪøಶ್ಯತೆ ಎನ್ನುವುದು ಹಿಂದೂ ಧರ್ಮವನ್ನು ನಾವು ಅಪಾರ್ಥ ಮಾಡಿಕೊಂಡಿದ್ದರಿಂದ ಬಂದ ಕೆಡುಕು. ಇದು ಹಿಂದು ಧರ್ಮದ ಭಾಗ ಅಂತ ವಾದ ಮಾಡೋರು ಹಿಂದೂ ಧರ್ಮ ಅರ್ಥಮಾಡಿಕೊಂಡೇ ಇಲ್ಲ ಅನ್ನೋ ಮಾತು ಬಂತು.

ಹಿಂದೂ ಧರ್ಮ ಅನ್ನೋದು ಇಷ್ಟು ಸರಳ ಅಂತಾದರ, ಹಿಂದೂ ವಿರೋಧಿ ಅನ್ನೋದು ಯಾಕ ನಮಗ ಅಷ್ಟ ಕಠಿಣ ಆಗೇದ? ತಿಳಿಯಲಾರದವರೇ ತಿಳಿ ಹೇಳಬೇಕು.

ಅಷ್ಟಕ್ಕೂ ಆಳುವವರು ಕಾವ್ಯ ವಿರೋಧಿಗಳಾಗಿರೋದು ಯಾಕ?
ಅದರ ಉತ್ತರ ಕವಿ ಹಬೀಬ್ ಜಾಲಿಬ್‍ರ ಶಾಯರಿಯೊಳಗ ಐತಿ.

“ಶೇರು ಶಾಯರಿಗಳಿಗೆ ಹೆದರತಾರೋ ಇವರು
ಇರುಳುಗಣ್ಣಿನವರು ಬೆಳಕಿಗೆ ಹೆದರತಾರೋ”…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...