Homeಚಳವಳಿ’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ...

’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ…

- Advertisement -
- Advertisement -

ಈಗ ನಮ್ಮ ದೇಶದಾಗ ಹಿಂದೂ ಅನ್ನೋ ಪದ ಎನ್ನುವುದು ಟ್ರೆಂಡಿಂಗ್ ಆಗೇದ. ಒಂದ ಏನಪಾ ಅಂದರ ಹಿಂದೆಲ್ಲಾ ‘ನಾವೆಲ್ಲ ಹಿಂದೂ ಅಂತ ಅಂತಿದ್ದವರು ಈಗ ನಾವಷ್ಟ ಹಿಂದೂ’ ಅಂತ ಅನ್ನಲಿಕ್ಕೆ ಹತ್ಯಾರ.

ಭಾರತ- ಪಾಕಿಸ್ತಾನ ಎರಡೂ ದೇಶಗಳ ಸಾಂಸ್ಕೃತಿಕ ಕೊಂಡಿಯಾಗಿದ್ದ ಜನಪ್ರಿಯ ಕವಿ ಫೈಜ್ ಅಹಮದ್ ಫೈಜ್ ಅವರ ‘ಹಮ್ ದೇಖೇಂಗೆ’ ಅನ್ನೋ ಹಾಡು ಹಿಂದೂ ವಿರೋಧಿ ಅಂತ ಕೆಲವರು ದೂರು ಕೊಟ್ಟಾರ. ಅದು ಹೌದೋ ಅಲ್ಲೋ ಅಂತ ನೋಡಲಿಕ್ಕೆ ಐಐಟಿ ಯವರು ಒಂದು ಸಮಿತಿ ನೇಮಕ ಮಾಡ್ಯಾರ. ವಿಧಾನಸೌಧದ ಮೂರನೇ ಮಹಡಿಯೊಳಗ ಒಂದು ಜೋಕ್ ಅದ. ಯಾವುದರೇ ವಿಷಯಕ್ಕ ಯಾವ ನಿರ್ಧಾರಕ್ಕ ಬರಬೇಕು ಅಂತ ತಿಳೀದೇ ಇದ್ದಾಗ ಒಂದು ಸಮಿತಿ ನೇಮಕ ಮಾಡ್ರಿ.

ಹಿಂಗ ಮಾಡಬಹುದು ಅಂತ ಗೊತ್ತಾದನಂತರ ಅದನ್ನ ಈಗ ಸದ್ಯ ಜಾರಿ ಮಾಡಬಾರದು ಅಂತ ಇದ್ದರ ಅದರ ಪರಾಮರ್ಶೆಗೆ ಇನ್ನೊಂದು ಸಮಿತಿ ನೇಮಿಸಿರಿ ಅಂತ.

ನಾಲ್ಕು ಪ್ಯಾರಾದ ಆ ಹಾಡಿನ್ಯಾಗ ಬಳಸಿದ ಕೆಲವು ಶಬ್ದ ಕೆಲವರಿಗೆ ಕಿರಿಕಿರಿ ಆಗ್ಯಾವು.

ಇದರಾಗಿನ ಒಂದು ಸಾಲು ಇದು- “ದೇವ ಭೂಮಿ ಕಾಬಾದಾಗಿನ ಎಲ್ಲಾ ಮೂರ್ತಿಗಳನ್ನು ತೆಗೆಯಲಾಗತದ”. ಇದು ಇಸ್ಲಾಮಿನ ಇತಿಹಾಸಕ್ಕೆ ಸಂಬಂಧಪಟ್ಟದ್ದು. ಇಸ್ಲಾಂ ಪೂರ್ವ ಅರೇಬಿಯಾದಲ್ಲಿ ಮೂರ್ತಿ ಪೂಜೆ ಇತ್ತು. ಪ್ರವಾದಿ ಮಹಮ್ಮದರು ಮೂರ್ತಿ ಪೂಜೆಯ ವಿರೋಧಿ. ಅವರು ಬದ್ರದ ಯುದ್ಧ ಗೆದ್ದು ಮೆಕ್ಕಾಗೆ ಬಂದನಂತರ ಕಾಬಾದಾಗ ಸುಮಾರು 360 ಮೂರ್ತಿಗಳನ್ನ ಇಟ್ಟದ್ದನ್ನ ನೋಡಿದರು. ಅದರಾಗ ಅಂದಿನ ಪ್ರಮುಖ ದೇವತೆ ಹುಬಾಲನ ವಿಗ್ರಹವೂ ಇತ್ತು.

ಅವನ್ನೆಲ್ಲಾ ಅವರು ಅಲ್ಲಿಂದ ತೆಗೆದರು.
ಫೈಜ್ ಅವರ ಕವನದಲ್ಲಿ ಇದು ಮೂರ್ತಿ ಪೂಜೆಯ ವಿರೋಧದಂತೆ ಕಂಡರೂ, ಅದು ಅಸಲಿಗೆ ಆಧುನಿಕ ಕಾಲದ ವ್ಯಕ್ತಿ ಪೂಜೆಯ ವಿರೋಧವಾಗಿರೋದು.

ಇನ್ನ ಅದರಾಗ “ಎಲ್ಲಾ ಕಡೆ ಅನಲ್ ಹಕ್‍ನ ಘೋಷಣೆ ಹೊಮ್ಮಲಿದೆ” ಅನ್ನೋ ಇನ್ನೊಂದು ಸಾಲು ಅದ. ಇದು “ಅಹಂ ಬ್ರಹ್ಮಾಸ್ಮಿ”ಗೆ ಹತ್ತಿರವಾದದ್ದು.

“ನಾನೇ ದೇವರು, ನಾನೇ ಸತ್ಯ” ಅನ್ನೋದು ಇಸ್ಲಾಂನ ಮೂಲತತ್ವ ಅಲ್ಲ ಅಂತ ವಾದಿಸುವವರು ಇರಬಹುದು. ಆದರೆ ಅದನ್ನೇ ನಂಬಿ ಬದುಕಿದ. ಆ ಘೋಷಣೆ ಕೂಗಿದ್ದಕ್ಕೆ ಫಾಸಿ ಶಿಕ್ಷೆ ಅನುಭವಿಸಿದ ಸೂಫಿ ಮನ್ಸೂರ ಅಂಥವರೂ ಇಲ್ಲೇ ದೆಹಲಿಯೊಳಗ ಇದ್ದರು ಅನ್ನೋದು ನಾವು ಮರೆಯಬಾರದು.

ಅದು ಇರಲಿ ಬಿಡಲಿ. ಅಹಂ ಬ್ರಹ್ಮಾಸ್ಮಿ ಅನ್ನೋದಂತೂ ಚೊಕ್ಕ ಹಿಂದೂ ಧರ್ಮದ ತತ್ವ. ಅದನ್ನು ಯಾರಿಗೂ ನೆನಪು ಮಾಡೋದು ಬ್ಯಾಡ.
ಹಂಗಾರ ಇದರಾಗ ಹಿಂದೂ ವಿರೋಧಿ ಅನ್ನೋದು ಏನು ಐತಿ?
ಹೋಗಲಿ ಬಿಡ್ರಿ. ಹಿಂದೂ ಅಂದರರ ಏನು?

ಇದರ ಬಗ್ಗೆ ತತ್ವಜ್ಞಾನಿಗಳು ತಮ್ಮಳವಿಗೆ ತಿಳಿದಂತೆ ಉತ್ತರ ಕೊಟ್ಟರ ಭಾರತದ ಸರ್ವೋಚ್ಚ ನ್ಯಾಯಾಲಯ ಇನ್ನೊಂದು ಉತ್ತರ ಕೊಟ್ಟದ.

ಇವತ್ತಿಗೆ ಸುಮಾರು 50 ವರ್ಷದ ಹಿಂದೆ ಶಾಸ್ತ್ರಿ ವಿರುದ್ಧ ಮೂಲದಾಸ ಪ್ರಕರಣದಾಗ ನ್ಯಾಯಮೂರ್ತಿ ಪಿ. ಬಿ ಗಜೇಂದ್ರಗಡಕರ ಅವರು ಮತ್ತು ಇತರರು ಇದಕ್ಕೊಂದು ಸರ್ವಮಾನ್ಯ ಅನ್ನೋವಂಥಾ ವ್ಯಾಖ್ಯಾನ ಕೊಟ್ಟಾರ.

“ಹಿಂದೂ ಅಂದರ ಅದು ಒಂದು ಜೀವನಶೈಲಿ ಅಷ್ಟೇ. ಅದಕ್ಕೂ ಹೆಚ್ಚಿನದೇನೂ ಇಲ್ಲ” ಅಂತ ಅಧಿಕಾರಯುತವಾಗಿ ಅವರು ಹೇಳಿದ ಮಾತು ಇವತ್ತಿನವರೆಗೂ ನಮ್ಮ ನ್ಯಾಯಾಲಯಗಳನ್ನ ಕೈಹಿಡಿದು ನಡೆಸುತ್ತಾ ಬಂದದ.

ಆ ತೀರ್ಪಿನೊಳಗ ಕಾಣುವ ಮಾತುಗಳು ಇವು.
“ವೇದಗಳಲ್ಲಿ ವಿಶ್ವಾಸ ಹಾಗೂ ಪುನರ್‍ಜನ್ಮದಲ್ಲಿ ನಂಬಿಕೆ ಮತ್ತು ಜನನಮರಣದ ಚಕ್ರದಿಂದ ಬಿಡುಗಡೆಯೇ ಹಿಂದೂ ಧರ್ಮದಲ್ಲಿ ಜೀವನದ ಅಂತಿಮ ಗುರಿ.

ಇದು ಸಾಧ್ಯವಾಗುವುದು ಅನೇಕ ವಿಧಗಳಿಂದ, ಅನೇಕ ರೀತಿ ರಿವಾಜುಗಳಿಂದ. ಇದಕ್ಕ ಒಂದ ದಾರಿ, ಒಂದ ರೀತಿ, ಒಂದ ಧರ್ಮಸಿಂಧು ಅಂತ ಇಲ್ಲ.

ಕೆಲವರು ಇದು ಜ್ಞಾನದಿಂದ ಸಾಧ್ಯ ಎಂದರೆ ಕೆಲವರು ಕರ್ಮ ಹಾಗೂ ಇನ್ನು ಕೆಲವರು ಭಕ್ತಿಯಿಂದ ಅಂತಾರ. ಸತ್ಯಕ್ಕೆ ಹಲವು ಮುಖ. ಅವುಗಳನ್ನು ಯಾರೂ ಸಂಪೂರ್ಣವಾಗಿ ತಿಳಿಸಲು ಸಾಧ್ಯ ಇಲ್ಲ. ಆದ್ದರಿಂದ ಅವೆಲ್ಲವೂ ಖರೆ.”

“ಇದು ಸತ್ಯ ಅಂತ ಎಲ್ಲರಿಗೂ ಗೊತ್ತು. ಎಲ್ಲರೂ ಅದನ್ನು ಅರ್ಥಮಾಡಿಕೊಂಡಾರ. ಆದ್ದರಿಂದನ ಎಲ್ಲಾರಿಗೂ ಹಿಂದೂ ಧರ್ಮದ ಯಾವುದೇ ಮುಖ ಅಪರಿಚಿತ ಅನ್ನಿಸೋದಿಲ್ಲ. ಯಾರು ಯಾವ ಅಭಿಪ್ರಾಯ ಮಂಡಿಸಿದರೂ ಅದನ್ನು ಒಪ್ಪುವುದು ಸಹಜ. ನಂದ ಖರೇ ಅಂತ ಯಾರಾದರೂ ವಾದಾ ಮಾಡಿದರ ಇರಲೆಪ್ಪ, ನನಗ ನಂದ ಖರೇ ನಿನಗ ನಿಂದ ಖರೇ, ಅಂತ ಹೇಳಿ ಸುಮ್ಮನೇ ಆಗತಾರ. ಸತ್ಯದ ಕಡೆ ಹೋಗೋ ದಾರಿ ಪ್ರತಿಯೊಬ್ಬರದೂ ಬ್ಯಾರೆ ಇರಬಹುದು. ಆದರ ಈ ದಾರಿಯೊಳಗ ಬಂದವರಷ್ಟ ನಮ್ಮವರು, ಆ ದಾರಿಯೊಳಗ ಬಂದವರು ನಮ್ಮವರಲ್ಲಾ ಅಂತ ಹೇಳಲಿಕ್ಕೆ ಬರೋದಿಲ್ಲ. ಇದೇ ಸತ್ಯ. ಹಿಂದೂ ಧರ್ಮದ ಪರಂಪರೆಯೊಳಗ ಇರುವ ಅಗಣಿತ ತಾತ್ವಿಕ ಪರಂಪರೆಗಳು ಎಲ್ಲವೂ ಮಾನ್ಯ. ಯಾವುವೂ ತಿರಸ್ಕಾರಕ್ಕೆ ಯೋಗ್ಯ ಅಲ್ಲ.”

“ಯಾಕೆ ಇಷ್ಟೋಂದು ಪಂಥಗಳು ಆದವು ಅನ್ನೋದು ಸಹಿತ ಆಸಕ್ತಿಕರ ವಿಷಯ. ಅದು ಈ ಧಾರ್ಮಿಕ ಪರಂಪರೆಯೊಳಗಿನ ಸೃಜನಶೀಲ ಚಲನೆಯ ಕುರುಹು. ಸಂತರು, ದಾರ್ಶನಿಕರು, ಈ ಧರ್ಮ ಭ್ರಷ್ಟತೆಯನ್ನ, ಅಂಧ ವಿಶ್ವಾಸವನ್ನ ಎದುರಿಸಿದರು. ಪುರೋಹಿತಶಾಹಿಯ ವಿರುದ್ಧ, ವಿಚಾರಕ್ಕಿಂತ ಆಚರಣೆಯ ಹೆಚ್ಚು ಮಹತ್ವ ಪಡೆಯುವುದರ ವಿರುದ್ಧ, ಸಮರ ಸಾರಿದರು. ಇದರಿಂದಾಗಿಯೇ ನಮಗೆ ಬೇರೆ ಬೇರೆ ಪಂಥ ಅಂತ ಅನ್ನಿಸತಾವು. ಆದರ ಇವು ಎಲ್ಲವೂ ಸತ್ಯವನ್ನು ಕಂಡುಕೊಳ್ಳುವ ವಿವಿಧ ದಾರಿಗಳು ಅಷ್ಟ. ಮೇಲುನೋಟಕ್ಕ ಇವು ಬ್ಯಾರೆ ಅಂತ ಅನ್ನಿಸಿದರೂ ಇವು ಒಳಗೆಲ್ಲಾ ಒಂದೇ.”

“ಈ ಎಲ್ಲಾ ಸಂತರ ವಿಚಾರದ ಮೂಲ ನೋಡಿದಾಗ ಅವು ವೇದಗಳಿಂದ ಬಂದದ್ದವು ಅಂತ ಸ್ಪಷ್ಟವಾಗಿ ಗೊತ್ತಾಗತದ. ವೇದ ಎಂಬ ವೈಚಾರಿಕ ಜಲಾಶಯದಿಂದನ ಇವರಿಗೆಲ್ಲಾ ಸ್ಫೂರ್ತಿ ಸಿಕ್ಕದ. ಅವರ ವಿಚಾರದ ಮೂಲಗಳ ಆಕರ ವೇದ ಎಂಬ ಝರಿ. ಹಿಂದೂ ಧರ್ಮ ಅಪೌರುಶೇಯ. ಇದಕ್ಕೆ ಯಾರೋ ಒಬ್ಬ ಮೂಲ ಪುರುಷ, ಜನಕ ಅಥವಾ ಸ್ಥಾಪಕ ಅಂತ ಇಲ್ಲ. ಒಂದೇ ಸಿದ್ಧಾಂತ ಅಂತ ಇಲ್ಲ. ಹಿಂದೂಗಳು ಒಬ್ಬ ದೇವರನ್ನೇ ಪೂಜಿಸುತ್ತಾರೆ ಅಂತೇನೂ ಇಲ್ಲ. ಒಂದೇ ಕಟ್ಟುಪಾಡುಗಳು, ರೀತಿ ರಿವಾಜುಗಳು ಇಲ್ಲ. ಖರೇ ಹೇಳಬೇಕಂದರ ಧರ್ಮ ಅಂದರ ಹಿಂಗ ಇರಬೇಕು ಅಂತ ನಾವು ಯಾವುದಕ್ಕ ಹೇಳತೇವೋ ಅವು ಯಾವ ಗುಣಗಳೂ ಇದಕ್ಕೆ ಇಲ್ಲ. ಇದೊಂದು ಜೀವನ ಶೈಲಿ ಅಷ್ಟ”.
ನಂತರ ಅಪ್ಪಾ ಬಾಳು ಇಂಗಳೆ ಪ್ರಕರಣದಾಗ ಅಸ್ಪøಶ್ಯತೆ ಎನ್ನುವುದು ಹಿಂದೂ ಧರ್ಮವನ್ನು ನಾವು ಅಪಾರ್ಥ ಮಾಡಿಕೊಂಡಿದ್ದರಿಂದ ಬಂದ ಕೆಡುಕು. ಇದು ಹಿಂದು ಧರ್ಮದ ಭಾಗ ಅಂತ ವಾದ ಮಾಡೋರು ಹಿಂದೂ ಧರ್ಮ ಅರ್ಥಮಾಡಿಕೊಂಡೇ ಇಲ್ಲ ಅನ್ನೋ ಮಾತು ಬಂತು.

ಹಿಂದೂ ಧರ್ಮ ಅನ್ನೋದು ಇಷ್ಟು ಸರಳ ಅಂತಾದರ, ಹಿಂದೂ ವಿರೋಧಿ ಅನ್ನೋದು ಯಾಕ ನಮಗ ಅಷ್ಟ ಕಠಿಣ ಆಗೇದ? ತಿಳಿಯಲಾರದವರೇ ತಿಳಿ ಹೇಳಬೇಕು.

ಅಷ್ಟಕ್ಕೂ ಆಳುವವರು ಕಾವ್ಯ ವಿರೋಧಿಗಳಾಗಿರೋದು ಯಾಕ?
ಅದರ ಉತ್ತರ ಕವಿ ಹಬೀಬ್ ಜಾಲಿಬ್‍ರ ಶಾಯರಿಯೊಳಗ ಐತಿ.

“ಶೇರು ಶಾಯರಿಗಳಿಗೆ ಹೆದರತಾರೋ ಇವರು
ಇರುಳುಗಣ್ಣಿನವರು ಬೆಳಕಿಗೆ ಹೆದರತಾರೋ”…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...