Homeಚಳವಳಿ’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ...

’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ…

- Advertisement -
- Advertisement -

ಈಗ ನಮ್ಮ ದೇಶದಾಗ ಹಿಂದೂ ಅನ್ನೋ ಪದ ಎನ್ನುವುದು ಟ್ರೆಂಡಿಂಗ್ ಆಗೇದ. ಒಂದ ಏನಪಾ ಅಂದರ ಹಿಂದೆಲ್ಲಾ ‘ನಾವೆಲ್ಲ ಹಿಂದೂ ಅಂತ ಅಂತಿದ್ದವರು ಈಗ ನಾವಷ್ಟ ಹಿಂದೂ’ ಅಂತ ಅನ್ನಲಿಕ್ಕೆ ಹತ್ಯಾರ.

ಭಾರತ- ಪಾಕಿಸ್ತಾನ ಎರಡೂ ದೇಶಗಳ ಸಾಂಸ್ಕೃತಿಕ ಕೊಂಡಿಯಾಗಿದ್ದ ಜನಪ್ರಿಯ ಕವಿ ಫೈಜ್ ಅಹಮದ್ ಫೈಜ್ ಅವರ ‘ಹಮ್ ದೇಖೇಂಗೆ’ ಅನ್ನೋ ಹಾಡು ಹಿಂದೂ ವಿರೋಧಿ ಅಂತ ಕೆಲವರು ದೂರು ಕೊಟ್ಟಾರ. ಅದು ಹೌದೋ ಅಲ್ಲೋ ಅಂತ ನೋಡಲಿಕ್ಕೆ ಐಐಟಿ ಯವರು ಒಂದು ಸಮಿತಿ ನೇಮಕ ಮಾಡ್ಯಾರ. ವಿಧಾನಸೌಧದ ಮೂರನೇ ಮಹಡಿಯೊಳಗ ಒಂದು ಜೋಕ್ ಅದ. ಯಾವುದರೇ ವಿಷಯಕ್ಕ ಯಾವ ನಿರ್ಧಾರಕ್ಕ ಬರಬೇಕು ಅಂತ ತಿಳೀದೇ ಇದ್ದಾಗ ಒಂದು ಸಮಿತಿ ನೇಮಕ ಮಾಡ್ರಿ.

ಹಿಂಗ ಮಾಡಬಹುದು ಅಂತ ಗೊತ್ತಾದನಂತರ ಅದನ್ನ ಈಗ ಸದ್ಯ ಜಾರಿ ಮಾಡಬಾರದು ಅಂತ ಇದ್ದರ ಅದರ ಪರಾಮರ್ಶೆಗೆ ಇನ್ನೊಂದು ಸಮಿತಿ ನೇಮಿಸಿರಿ ಅಂತ.

ನಾಲ್ಕು ಪ್ಯಾರಾದ ಆ ಹಾಡಿನ್ಯಾಗ ಬಳಸಿದ ಕೆಲವು ಶಬ್ದ ಕೆಲವರಿಗೆ ಕಿರಿಕಿರಿ ಆಗ್ಯಾವು.

ಇದರಾಗಿನ ಒಂದು ಸಾಲು ಇದು- “ದೇವ ಭೂಮಿ ಕಾಬಾದಾಗಿನ ಎಲ್ಲಾ ಮೂರ್ತಿಗಳನ್ನು ತೆಗೆಯಲಾಗತದ”. ಇದು ಇಸ್ಲಾಮಿನ ಇತಿಹಾಸಕ್ಕೆ ಸಂಬಂಧಪಟ್ಟದ್ದು. ಇಸ್ಲಾಂ ಪೂರ್ವ ಅರೇಬಿಯಾದಲ್ಲಿ ಮೂರ್ತಿ ಪೂಜೆ ಇತ್ತು. ಪ್ರವಾದಿ ಮಹಮ್ಮದರು ಮೂರ್ತಿ ಪೂಜೆಯ ವಿರೋಧಿ. ಅವರು ಬದ್ರದ ಯುದ್ಧ ಗೆದ್ದು ಮೆಕ್ಕಾಗೆ ಬಂದನಂತರ ಕಾಬಾದಾಗ ಸುಮಾರು 360 ಮೂರ್ತಿಗಳನ್ನ ಇಟ್ಟದ್ದನ್ನ ನೋಡಿದರು. ಅದರಾಗ ಅಂದಿನ ಪ್ರಮುಖ ದೇವತೆ ಹುಬಾಲನ ವಿಗ್ರಹವೂ ಇತ್ತು.

ಅವನ್ನೆಲ್ಲಾ ಅವರು ಅಲ್ಲಿಂದ ತೆಗೆದರು.
ಫೈಜ್ ಅವರ ಕವನದಲ್ಲಿ ಇದು ಮೂರ್ತಿ ಪೂಜೆಯ ವಿರೋಧದಂತೆ ಕಂಡರೂ, ಅದು ಅಸಲಿಗೆ ಆಧುನಿಕ ಕಾಲದ ವ್ಯಕ್ತಿ ಪೂಜೆಯ ವಿರೋಧವಾಗಿರೋದು.

ಇನ್ನ ಅದರಾಗ “ಎಲ್ಲಾ ಕಡೆ ಅನಲ್ ಹಕ್‍ನ ಘೋಷಣೆ ಹೊಮ್ಮಲಿದೆ” ಅನ್ನೋ ಇನ್ನೊಂದು ಸಾಲು ಅದ. ಇದು “ಅಹಂ ಬ್ರಹ್ಮಾಸ್ಮಿ”ಗೆ ಹತ್ತಿರವಾದದ್ದು.

“ನಾನೇ ದೇವರು, ನಾನೇ ಸತ್ಯ” ಅನ್ನೋದು ಇಸ್ಲಾಂನ ಮೂಲತತ್ವ ಅಲ್ಲ ಅಂತ ವಾದಿಸುವವರು ಇರಬಹುದು. ಆದರೆ ಅದನ್ನೇ ನಂಬಿ ಬದುಕಿದ. ಆ ಘೋಷಣೆ ಕೂಗಿದ್ದಕ್ಕೆ ಫಾಸಿ ಶಿಕ್ಷೆ ಅನುಭವಿಸಿದ ಸೂಫಿ ಮನ್ಸೂರ ಅಂಥವರೂ ಇಲ್ಲೇ ದೆಹಲಿಯೊಳಗ ಇದ್ದರು ಅನ್ನೋದು ನಾವು ಮರೆಯಬಾರದು.

ಅದು ಇರಲಿ ಬಿಡಲಿ. ಅಹಂ ಬ್ರಹ್ಮಾಸ್ಮಿ ಅನ್ನೋದಂತೂ ಚೊಕ್ಕ ಹಿಂದೂ ಧರ್ಮದ ತತ್ವ. ಅದನ್ನು ಯಾರಿಗೂ ನೆನಪು ಮಾಡೋದು ಬ್ಯಾಡ.
ಹಂಗಾರ ಇದರಾಗ ಹಿಂದೂ ವಿರೋಧಿ ಅನ್ನೋದು ಏನು ಐತಿ?
ಹೋಗಲಿ ಬಿಡ್ರಿ. ಹಿಂದೂ ಅಂದರರ ಏನು?

ಇದರ ಬಗ್ಗೆ ತತ್ವಜ್ಞಾನಿಗಳು ತಮ್ಮಳವಿಗೆ ತಿಳಿದಂತೆ ಉತ್ತರ ಕೊಟ್ಟರ ಭಾರತದ ಸರ್ವೋಚ್ಚ ನ್ಯಾಯಾಲಯ ಇನ್ನೊಂದು ಉತ್ತರ ಕೊಟ್ಟದ.

ಇವತ್ತಿಗೆ ಸುಮಾರು 50 ವರ್ಷದ ಹಿಂದೆ ಶಾಸ್ತ್ರಿ ವಿರುದ್ಧ ಮೂಲದಾಸ ಪ್ರಕರಣದಾಗ ನ್ಯಾಯಮೂರ್ತಿ ಪಿ. ಬಿ ಗಜೇಂದ್ರಗಡಕರ ಅವರು ಮತ್ತು ಇತರರು ಇದಕ್ಕೊಂದು ಸರ್ವಮಾನ್ಯ ಅನ್ನೋವಂಥಾ ವ್ಯಾಖ್ಯಾನ ಕೊಟ್ಟಾರ.

“ಹಿಂದೂ ಅಂದರ ಅದು ಒಂದು ಜೀವನಶೈಲಿ ಅಷ್ಟೇ. ಅದಕ್ಕೂ ಹೆಚ್ಚಿನದೇನೂ ಇಲ್ಲ” ಅಂತ ಅಧಿಕಾರಯುತವಾಗಿ ಅವರು ಹೇಳಿದ ಮಾತು ಇವತ್ತಿನವರೆಗೂ ನಮ್ಮ ನ್ಯಾಯಾಲಯಗಳನ್ನ ಕೈಹಿಡಿದು ನಡೆಸುತ್ತಾ ಬಂದದ.

ಆ ತೀರ್ಪಿನೊಳಗ ಕಾಣುವ ಮಾತುಗಳು ಇವು.
“ವೇದಗಳಲ್ಲಿ ವಿಶ್ವಾಸ ಹಾಗೂ ಪುನರ್‍ಜನ್ಮದಲ್ಲಿ ನಂಬಿಕೆ ಮತ್ತು ಜನನಮರಣದ ಚಕ್ರದಿಂದ ಬಿಡುಗಡೆಯೇ ಹಿಂದೂ ಧರ್ಮದಲ್ಲಿ ಜೀವನದ ಅಂತಿಮ ಗುರಿ.

ಇದು ಸಾಧ್ಯವಾಗುವುದು ಅನೇಕ ವಿಧಗಳಿಂದ, ಅನೇಕ ರೀತಿ ರಿವಾಜುಗಳಿಂದ. ಇದಕ್ಕ ಒಂದ ದಾರಿ, ಒಂದ ರೀತಿ, ಒಂದ ಧರ್ಮಸಿಂಧು ಅಂತ ಇಲ್ಲ.

ಕೆಲವರು ಇದು ಜ್ಞಾನದಿಂದ ಸಾಧ್ಯ ಎಂದರೆ ಕೆಲವರು ಕರ್ಮ ಹಾಗೂ ಇನ್ನು ಕೆಲವರು ಭಕ್ತಿಯಿಂದ ಅಂತಾರ. ಸತ್ಯಕ್ಕೆ ಹಲವು ಮುಖ. ಅವುಗಳನ್ನು ಯಾರೂ ಸಂಪೂರ್ಣವಾಗಿ ತಿಳಿಸಲು ಸಾಧ್ಯ ಇಲ್ಲ. ಆದ್ದರಿಂದ ಅವೆಲ್ಲವೂ ಖರೆ.”

“ಇದು ಸತ್ಯ ಅಂತ ಎಲ್ಲರಿಗೂ ಗೊತ್ತು. ಎಲ್ಲರೂ ಅದನ್ನು ಅರ್ಥಮಾಡಿಕೊಂಡಾರ. ಆದ್ದರಿಂದನ ಎಲ್ಲಾರಿಗೂ ಹಿಂದೂ ಧರ್ಮದ ಯಾವುದೇ ಮುಖ ಅಪರಿಚಿತ ಅನ್ನಿಸೋದಿಲ್ಲ. ಯಾರು ಯಾವ ಅಭಿಪ್ರಾಯ ಮಂಡಿಸಿದರೂ ಅದನ್ನು ಒಪ್ಪುವುದು ಸಹಜ. ನಂದ ಖರೇ ಅಂತ ಯಾರಾದರೂ ವಾದಾ ಮಾಡಿದರ ಇರಲೆಪ್ಪ, ನನಗ ನಂದ ಖರೇ ನಿನಗ ನಿಂದ ಖರೇ, ಅಂತ ಹೇಳಿ ಸುಮ್ಮನೇ ಆಗತಾರ. ಸತ್ಯದ ಕಡೆ ಹೋಗೋ ದಾರಿ ಪ್ರತಿಯೊಬ್ಬರದೂ ಬ್ಯಾರೆ ಇರಬಹುದು. ಆದರ ಈ ದಾರಿಯೊಳಗ ಬಂದವರಷ್ಟ ನಮ್ಮವರು, ಆ ದಾರಿಯೊಳಗ ಬಂದವರು ನಮ್ಮವರಲ್ಲಾ ಅಂತ ಹೇಳಲಿಕ್ಕೆ ಬರೋದಿಲ್ಲ. ಇದೇ ಸತ್ಯ. ಹಿಂದೂ ಧರ್ಮದ ಪರಂಪರೆಯೊಳಗ ಇರುವ ಅಗಣಿತ ತಾತ್ವಿಕ ಪರಂಪರೆಗಳು ಎಲ್ಲವೂ ಮಾನ್ಯ. ಯಾವುವೂ ತಿರಸ್ಕಾರಕ್ಕೆ ಯೋಗ್ಯ ಅಲ್ಲ.”

“ಯಾಕೆ ಇಷ್ಟೋಂದು ಪಂಥಗಳು ಆದವು ಅನ್ನೋದು ಸಹಿತ ಆಸಕ್ತಿಕರ ವಿಷಯ. ಅದು ಈ ಧಾರ್ಮಿಕ ಪರಂಪರೆಯೊಳಗಿನ ಸೃಜನಶೀಲ ಚಲನೆಯ ಕುರುಹು. ಸಂತರು, ದಾರ್ಶನಿಕರು, ಈ ಧರ್ಮ ಭ್ರಷ್ಟತೆಯನ್ನ, ಅಂಧ ವಿಶ್ವಾಸವನ್ನ ಎದುರಿಸಿದರು. ಪುರೋಹಿತಶಾಹಿಯ ವಿರುದ್ಧ, ವಿಚಾರಕ್ಕಿಂತ ಆಚರಣೆಯ ಹೆಚ್ಚು ಮಹತ್ವ ಪಡೆಯುವುದರ ವಿರುದ್ಧ, ಸಮರ ಸಾರಿದರು. ಇದರಿಂದಾಗಿಯೇ ನಮಗೆ ಬೇರೆ ಬೇರೆ ಪಂಥ ಅಂತ ಅನ್ನಿಸತಾವು. ಆದರ ಇವು ಎಲ್ಲವೂ ಸತ್ಯವನ್ನು ಕಂಡುಕೊಳ್ಳುವ ವಿವಿಧ ದಾರಿಗಳು ಅಷ್ಟ. ಮೇಲುನೋಟಕ್ಕ ಇವು ಬ್ಯಾರೆ ಅಂತ ಅನ್ನಿಸಿದರೂ ಇವು ಒಳಗೆಲ್ಲಾ ಒಂದೇ.”

“ಈ ಎಲ್ಲಾ ಸಂತರ ವಿಚಾರದ ಮೂಲ ನೋಡಿದಾಗ ಅವು ವೇದಗಳಿಂದ ಬಂದದ್ದವು ಅಂತ ಸ್ಪಷ್ಟವಾಗಿ ಗೊತ್ತಾಗತದ. ವೇದ ಎಂಬ ವೈಚಾರಿಕ ಜಲಾಶಯದಿಂದನ ಇವರಿಗೆಲ್ಲಾ ಸ್ಫೂರ್ತಿ ಸಿಕ್ಕದ. ಅವರ ವಿಚಾರದ ಮೂಲಗಳ ಆಕರ ವೇದ ಎಂಬ ಝರಿ. ಹಿಂದೂ ಧರ್ಮ ಅಪೌರುಶೇಯ. ಇದಕ್ಕೆ ಯಾರೋ ಒಬ್ಬ ಮೂಲ ಪುರುಷ, ಜನಕ ಅಥವಾ ಸ್ಥಾಪಕ ಅಂತ ಇಲ್ಲ. ಒಂದೇ ಸಿದ್ಧಾಂತ ಅಂತ ಇಲ್ಲ. ಹಿಂದೂಗಳು ಒಬ್ಬ ದೇವರನ್ನೇ ಪೂಜಿಸುತ್ತಾರೆ ಅಂತೇನೂ ಇಲ್ಲ. ಒಂದೇ ಕಟ್ಟುಪಾಡುಗಳು, ರೀತಿ ರಿವಾಜುಗಳು ಇಲ್ಲ. ಖರೇ ಹೇಳಬೇಕಂದರ ಧರ್ಮ ಅಂದರ ಹಿಂಗ ಇರಬೇಕು ಅಂತ ನಾವು ಯಾವುದಕ್ಕ ಹೇಳತೇವೋ ಅವು ಯಾವ ಗುಣಗಳೂ ಇದಕ್ಕೆ ಇಲ್ಲ. ಇದೊಂದು ಜೀವನ ಶೈಲಿ ಅಷ್ಟ”.
ನಂತರ ಅಪ್ಪಾ ಬಾಳು ಇಂಗಳೆ ಪ್ರಕರಣದಾಗ ಅಸ್ಪøಶ್ಯತೆ ಎನ್ನುವುದು ಹಿಂದೂ ಧರ್ಮವನ್ನು ನಾವು ಅಪಾರ್ಥ ಮಾಡಿಕೊಂಡಿದ್ದರಿಂದ ಬಂದ ಕೆಡುಕು. ಇದು ಹಿಂದು ಧರ್ಮದ ಭಾಗ ಅಂತ ವಾದ ಮಾಡೋರು ಹಿಂದೂ ಧರ್ಮ ಅರ್ಥಮಾಡಿಕೊಂಡೇ ಇಲ್ಲ ಅನ್ನೋ ಮಾತು ಬಂತು.

ಹಿಂದೂ ಧರ್ಮ ಅನ್ನೋದು ಇಷ್ಟು ಸರಳ ಅಂತಾದರ, ಹಿಂದೂ ವಿರೋಧಿ ಅನ್ನೋದು ಯಾಕ ನಮಗ ಅಷ್ಟ ಕಠಿಣ ಆಗೇದ? ತಿಳಿಯಲಾರದವರೇ ತಿಳಿ ಹೇಳಬೇಕು.

ಅಷ್ಟಕ್ಕೂ ಆಳುವವರು ಕಾವ್ಯ ವಿರೋಧಿಗಳಾಗಿರೋದು ಯಾಕ?
ಅದರ ಉತ್ತರ ಕವಿ ಹಬೀಬ್ ಜಾಲಿಬ್‍ರ ಶಾಯರಿಯೊಳಗ ಐತಿ.

“ಶೇರು ಶಾಯರಿಗಳಿಗೆ ಹೆದರತಾರೋ ಇವರು
ಇರುಳುಗಣ್ಣಿನವರು ಬೆಳಕಿಗೆ ಹೆದರತಾರೋ”…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...