Homeಮುಖಪುಟಕಾದಂಬರಿ ಆಧಾರಿತ ಹಾಗೂ ಮೂಲ ಚಿತ್ರಕಥೆಗಳು

ಕಾದಂಬರಿ ಆಧಾರಿತ ಹಾಗೂ ಮೂಲ ಚಿತ್ರಕಥೆಗಳು

- Advertisement -
- Advertisement -

| ರಾಜಶೇಖರ್ ಅಕ್ಕಿ |

“ಇದೇನು ನಾಗರಹಾವೋ, ಕೇರೇ ಹಾವೋ?” ತರಾಸು ನಾಗರಹಾವು ಚಿತ್ರ ನೋಡಿದ ನಂತರ ನೀಡಿದ ಪ್ರತಿಕ್ರಿಯೆ.
ಯಾವುದೋ ಒಂದು ಘಟನೆ, ಆ ಘಟನೆಯ ಸುತ್ತ ಆಗುವ ವಿದ್ಯಮಾನಗಳು, ಪತ್ರಿಕೆಯೊಂದರಲ್ಲಿಯ ಒಂದು ವರದಿ, ನಮಗೆ ಪರಿಚಯದ ಅಥವಾ ಎಲ್ಲೋ ಕೇಳಿದ ಯಾರದೋ ಒಂದು ಸಾಹಸದ, ದುಃಖದ ಕಥೆ, ಇವೆಲ್ಲವುಗಳೂ ಒಂದು ಸಿನೆಮಾಗೆ ಕಥೆಯಾಗಬಲ್ಲ ಸಾಧ್ಯತೆ ಹೊಂದಿರುತ್ತವೆ. (ನೆನಪಿಡಿ, ಇಲ್ಲಿ ಬರೆಯುತ್ತಿರುವುದು ಸುಮಾರು ಎರಡು ಗಂಟೆಗಳ ಪೂರ್ಣಾವಧಿ ಸಿನೆಮಾ ಬಗ್ಗೆ ಮಾತ್ರ) ಆದರೆ ಅವೆಲ್ಲವುಗಳೂ ಚಿತ್ರಕಥೆಯಾಗುವುದಿಲ್ಲ. ನಮಗೆ ತಿಳಿದಿರುವ ಆ ಘಟನೆ ಕೇವಲ ಘಟನೆಯಾಗಿ ಮಾತ್ರ ಉಳಿಯಬಲ್ಲದು, ಪೂರ್ಣಪ್ರಮಾಣದ ಚಿತ್ರಕಥೆಯಾಗಬೇಕಾದರೆ ಇನ್ನೂ ಅನೇಕ ಅಂಶಗಳನ್ನು ಹಾಕಬೇಕಾಗುತ್ತದೆ. ಆಗ ಎದುರಾಗುವ ಸಮಸ್ಯೆಗಳೂ ಅನೇಕ.

ಒಂದು ಘಟನೆಯನ್ನು ಚಿತ್ರಕಥೆಯನ್ನಾಗಿಸುವ ಭರದಲ್ಲಿ ಅದಕ್ಕೆ ಇತರ ಅನೇಕ ಅಂಶಗಳನ್ನು ತುಂಬಿದಾಗ (ಇಲ್ಲಿ ಕಾಮೆಡಿ ಟ್ರ್ಯಾಕ್ ಅಥವಾ ಫೈಟ್ ಸಿಕ್ವೆನ್ಸ್ ಬಗ್ಗೆ ಹೇಳುತ್ತಿಲ್ಲ) ಆ ಕಥೆಗೆ ಪ್ರೇರಕವಾದ ಘಟನೆಯೇ ಗೌಣವಾಗಿಬಿಟ್ಟರೆ? ಹಾಗೆ ಆಗಿರುವ ಉದಾಹರಣೆಗಳು ಉಂಟು. ಆಗ ಕೇಳಬೇಕಾದ ಪ್ರಶ್ನೆ; ನಾವು ಯಾವ ಕಥೆಯನ್ನು ಹೇಳಲು ಬಯಸುತ್ತಿದ್ದೇವೆ? ಆ ಪ್ರಶ್ನೆಗೆ ಕೇವಲ ನಾಲ್ಕೈದು ವಾಕ್ಯಗಳಲ್ಲಿ ಉತ್ತರ ನೀಡಬೇಕು. ಆ ನಾಲ್ಕೈದು ವಾಕ್ಯಗಳಲ್ಲಿ ಮೂಲ ಘಟನೆಯೇ ಕಾಣಿಸಿಕೊಳ್ಳದಿದ್ದರೆ? ಬಿಟ್ಟುಬಿಡಿ, ಏಕೆಂದರೆ, ನಾವು ಬದ್ಧರಾಗಿರಬೇಕಾದದ್ದು ನಮ್ಮ ಕಥೆಗೇ ಹೊರತು ಆ ಕಥೆಗೆ ಕಾರಣೀಭೂತವಾಗಿರುವ ಘಟನೆಗೆ ಅಲ್ಲ. ಆದರೆ ಆ ಘಟನೆಗೂ ಮತ್ತು ಈಗ ಮೂಡಿಬಂದಿರುವ ಕಥೆಗೂ ಇರುವ ಸಂಬಂಧ ಎಂಥದ್ದು ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ನೀಡಲೇಬೇಕು.

ಇನ್ನು, ಈ ಎಲ್ಲ ಘಟನೆಗಳು, ವರದಿಗಳು, ಸ್ನೇಹಿತರ, ಪರಿಚಿತರ ಅಥವಾ ಅಪರಿಚಿತರ ಕಥೆಗಳು ಚಿತ್ರಕಥೆಯಾಗುವುದಿಲ್ಲ. ಅಲ್ಲಿಯ ಕಥೆಗಳು ಎರಡು ಗಂಟೆಗಳ ಕಾಲ ನೋಡುಗರನ್ನು ಹಿಡಿದಿಡುವಷ್ಟು ಸತ್ವವನ್ನು ಹೊಂದಿರುವುದಿಲ್ಲ ಅಥವಾ ಆ ಕಥೆಯನ್ನು ಒಂದು ಚಿತ್ರಕಥೆಗೆ ಇರಬೇಕಾದ ಸ್ಟ್ರಕ್ಚರ್‍ನಲ್ಲಿ ಕೂಡಿಸುವುದು ಆಗದೇ ಇರಬಹುದು. ಆಗ ಒಂದೋ ಅವುಗಳನ್ನು ಕೈಬಿಡಬೇಕಾಗುತ್ತದೆ ಅಥವಾ ಆ ವರದಿ ಅಥವಾ ಘಟನೆ ನಮಗೆ ಯಾವ ಕಾರಣಕ್ಕೆ ಚಿತ್ರಕಥೆ ಬರೆಯಬೇಕೆಂದು ಪ್ರಚೋದಿಸಿತು ಎನ್ನುವ ಉತ್ತರವನ್ನು ಹುಡುಕಿ, ಆ ಅಂಶದ ಮೇಲೆಯೇ ಕಥೆಯನ್ನು ಹೆಣೆಯಬೇಕಾಗುತ್ತದೆ. ಇದು ಅಷ್ಟು ಸುಲಭದ ಕೆಲಸವಲ್ಲ. (ಚಿತ್ರಕಥೆ ಬರೆಯುವುದು ಸುಲಭದ ಕೆಲಸ ಎಂದು ಯಾರೂ ಹೇಳಿಲ್ಲ. ಇದರ ಬಗ್ಗೆ ಇನ್ನೊಂದು ಲೇಖನ ಈಗಾಗಲೇ ಬರೆದಿದ್ದೇನೆ.)

ಈ ರೀತಿ ಕಷ್ಟಪಟ್ಟು ಬರೆದ ಚಿತ್ರಕಥೆಗಳನ್ನು ಮೂಲಚಿತ್ರಕಥೆಗಳು (original screenplay) ಎನ್ನಲಾಗುತ್ತದೆ. ಪ್ರಖ್ಯಾತ ಆಸ್ಕರ್ ಪ್ರಶಸ್ತಿಗಳಲ್ಲಿ ಒಂದು ಪ್ರಶಸ್ತಿ ಒರಿಜಿನಲ್ ಸ್ಕ್ರೀನ್‍ಪ್ಲೇಗೆ ಮೀಸಲಿಡಲಾಗಿದೆ. ಇನ್ನು ಕಥೆ ಕಾದಂಬರಿಗಳನ್ನು ಆಧರಿಸಿ ಬರೆದ ಚಿತ್ರಕಥೆಗಳು; ಅವುಗಳ ಪಯಣವೂ ಅಷ್ಟೇ ರೋಚಕವಾಗಿದೆ. ಮೊದಲು ಕೆಲವು ಉದಾಹರಣೆಗಳನ್ನು ನೋಡುವ.

ಪಾಲ್ ಥಾಮಸ್ ಆ್ಯಂಡರ್ಸನ್ ನಿರ್ದೇಶಿಸಿದ ‘ದೇರ್ ವಿಲ್ ಬಿ ಬ್ಲಡ್’ ಚಿತ್ರ ಅಪ್ಟನ್ ಸಿಂಕ್ಲೇರ್ ಅವರ ಆಯಿಲ್ ಎನ್ನುವ ಕಾದಂಬರಿಯನ್ನು ಆಧರಿಸಿದ ಚಿತ್ರ ಎಂದು ಹೇಳಲಾಗಿತ್ತು. ಈ ಚಿತ್ರವನ್ನು ಅತ್ಯಂತ ಇಷ್ಟಪಟ್ಟ ನಾನು ಕಾದಂಬರಿಯನ್ನು ಪಡೆದು ಓದಲಾರಂಭಿಸಿದೆ. ಕೆಲವೇ ಕೆಲವು ಸಾಮ್ಯತೆಗಳನ್ನು ಮತ್ತು ಆ ಚಿತ್ರ ನಡೆಯುವ ಅವಧಿಯನ್ನು ಬಿಟ್ಟರೆ ಚಿತ್ರಕ್ಕೂ ಕಾದಂಬರಿಗೂ ಹೆಚ್ಚಿನ ಸಂಬಂಧ ಕಾಣಲಿಲ್ಲ. 20ನೇ ಶತಮಾನದ ಪ್ರಾರಂಭದಲ್ಲಿ ತೈಲವನ್ನು ಹೊರತೆಗೆದು, ಅದರಿಂದ ಸಾಮ್ರಾಜ್ಯವನ್ನೇ ಕಟ್ಟುವ ಕಥೆಯು ಕಾದಂಬರಿ ಮತ್ತು ಚಿತ್ರಗಳಲ್ಲಿ ಸಾಮಾನ್ಯವಾಗಿದ್ದರೂ, ಚಿತ್ರದ ಆತ್ಮವೇ ಭಿನ್ನವಾಗಿದೆ. ಕಾದಂಬರಿಯನ್ನು ಚಿತ್ರಕಥೆಗೆ ಅಳವಡಿಸುವ ದೀರ್ಘ ಪ್ರಕ್ರಿಯೆಯಲ್ಲಿ ಮೂಲಕತೆಯಿಂದ ಬಲುದೂರ ಸಾಗಿದ್ದು ನಿರ್ದೇಶಕ ಪಾಲ್ ಆ್ಯಂಡರ್ಸನ್‍ಗೆ ತಿಳಿದಿದ್ದರೂ ಮುಂದುವರೆದರು. ನಾವು ಮೂಲಕಥೆಗೆ ಬದ್ಧರಾಗಲಿಲ್ಲ (faithful) ಎಂದು ಆ್ಯಂಡರ್ಸನ್ ಹೇಳಿದರು.

ಈ ಬದ್ಧತೆಯ ಪ್ರಶ್ನೆಯೂ ತುಂಬಾ ಕುತೂಹಲಕಾರಿಯಾಗಿದೆ. ದೇರ್ ವಿಲ್ ಬಿ ಬ್ಲಡ್ ಚಿತ್ರನ ನಿದರ್ಶನ ಎಕ್ಸ್ಟ್ರೀಮ್ (extreme) ಆಗಿದೆ. ಇನ್ನು ಅಲೆಕ್ಸಾಂಡರ್ ಪೇನ್‍ನ ಚಿತ್ರಗಳ ಪ್ರಯೋಗವೂ ವಿಶಿಷ್ಟವಾಗಿದೆ. ಅವರ ಎಲೆಕ್ಷನ್, ಅಬೌಟ್ ಶ್ಮಿತ್ ಮುಂತಾದ ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳು. ಅಲೆಕ್ಸಾಂಡರ್ ಪೇನ್‍ಗೆ ಅಥವಾ ಅವರ ಲೇಖನದ ಪಾಟ್ರ್ನರ್ ಜಿಮ್ ಟೇಲರ್‍ಗೆ ಒಂದು ಕಾದಂಬರಿಯನ್ನು ಸಿನೆಮಾಗೆ ಅಳವಡಿಸಬೇಕಾದಲ್ಲಿ, ಅವರಿಬ್ಬರೂ ಚಿತ್ರಕಥೆ ಬರೆಯುವ ಮುಂಚೆ ಆ ಮೂಲಕಾದಂಬರಿಯನ್ನು ಹಲವಾರು ಬಾರಿ ಓದುತ್ತಾರೆ. ಕಾದಂಬರಿಯ ಅಂಶಗಳು ಮನದಟ್ಟಾದ ನಂತರ ತಾವು ಬರೆಯಲಿರುವ ಚಿತ್ರದ ಆತ್ಮ ಅಥವಾ ಮೂಲಅಂಶ ಏನು ಎನ್ನುವುದನ್ನು ನಿರ್ಧರಿಸುತ್ತಾರೆ. ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮೂಲಕಾದಂಬರಿಯನ್ನು ಮರೆತು ಚಿತ್ರಕಥೆಯನ್ನು ಬರೆಯತೊಡಗುತ್ತಾರೆ. ಅವಶ್ಯಕತೆ ಬಿದ್ದಾಗ ಮಾತ್ರವೇ ಮೂಲಪುಸ್ತಕವನ್ನು ರೆಫರೆನ್ಸ್‍ಗಾಗಿ ಬಳಸುತ್ತಾರೆ. ಈ ಪ್ರಯೋಗಗಳ ಫಲಿತಾಂಶ ನಮ್ಮೆಲ್ಲರ ಕಣ್ಣೆದುರಿಗಿದೆ.
ಆದರೆ ಒಂದುವೇಳೆ ಮೂಡಿಬಂದ ಚಿತ್ರ ಮೂಲ ಬರಹಗಾರರಿಗೆ ಇಷ್ಟವಾಗದಿದ್ದರೆ?

ಅಮೇರಿಕದ ಪ್ರಖ್ಯಾತ ಲೇಖಕ ಸ್ಟೀಫನ್ ಕಿಂಗ್ ಅವರ ಕಾದಂಬರಿ ಶೈನಿಂಗ್ ಅನ್ನು ಅಷ್ಟೇ ಪ್ರಖ್ಯಾತ ಮತ್ತು ಪ್ರತಿಭಾವಂತ ನಿರ್ದೇಶಕ ಸ್ಟ್ಯಾನ್ಲಿ ಕೂಬ್ರಿಕ್ ಕೈಗೆತ್ತಿಕೊಂಡರು. ಜಾಕ್ ನಿಕಲ್ಸನ್ ಅವರ ಅಭಿನಯದಲ್ಲಿ ಮೂಡಿಬಂದ ಈ ಚಿತ್ರವು ಹಾರರ್ ಚಿತ್ರಗಳ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಚಿತ್ರ ಎಂದು ಪರಿಗಣಿಸಲಾಗಿದೆ. ಈ ಚಿತ್ರದಲ್ಲಿ ಯಾರು ಪ್ರಮುಖ ಪಾತ್ರ ಮಾಡಬೇಕು ಎನ್ನುವುದಕ್ಕೂ ಸ್ಟೀಫನ್ ಕಿಂಗ್ ಒಪ್ಪಿಗೆ ಪಡೆಯಬೇಕಿತ್ತು. ಒಂದು ಚಿತ್ರವು ಪಡೆಯಬಹುದಾದ ಎಲ್ಲಾ ರೀತಿಯ ಮನ್ನಣೆಗಳು ಶೈನಿಂಗ್ ಚಿತ್ರಕ್ಕೆ ದೊರೆತರೂ ಕಾದಂಬರಿಯ ಕರ್ತೃ ಸ್ಟೀಫನ್‍ಗೆ ಚಿತ್ರ ಇಷ್ಟವಾಗಲಿಲ್ಲ. ತನ್ನ ಮೂಲಕಥೆಗಿಂತ ಭಿನ್ನವಾಗಿ ಅನೇಕ ಸ್ವಾತಂತ್ರ್ಯ ತೆಗೆದುಕೊಳ್ಳಲಾಗಿದೆ ಎಂದು ಸ್ಟೀಫನ್ ಕಿಂಗ್ ಭಾವಿಸಿದರು. ಆದರೆ ಕೂಬ್ರಿಕ್‍ಗೆ ಕಥೆಯೊಂದಿಗೆ ಏನು ಮಾಡಬೇಕು ಎನ್ನುವುದರಲ್ಲಿ ಹೆಚ್ಚಿನ ಸಂಶಯವಿರಲಿಲ್ಲ. ಸಿನೆಮಾದ ಅಪರಿಮಿತ ಸಾಧ್ಯತೆಗಳನ್ನು ಮತ್ತು ಮಿತಿಗಳನ್ನು ಅರಿತಿದ್ದ ಕೂಬ್ರಿಕ್ ದೃಶ್ಯಮಾಧ್ಯಮಕ್ಕೆ ಅಳವಡಿಸುವಲ್ಲಿ ಸೋಮಾರಿತನ ತೋರಿಸಲಿಲ್ಲ. ಆದರೆ ಈ ಪ್ರಯೋಗದಿಂದ ಸಿಟ್ಟಿಗೆದ್ದ ಲೇಖಕ ಸ್ಟೀಫನ್ ಕಿಂಗ್ ಕೆಲವು ವರ್ಷಗಳ ನಂತರ ಕಾದಂಬರಿಯನ್ನು ಟಿವಿ ಸಿರೀಸ್ ಮಾಡಲು ಹಕ್ಕುಗಳನ್ನು ನೀಡಿದರು. ಹಾಗೂ ಅದರ ಮೆಲ್ವಿಚಾರಣೆಯನ್ನು ಖುದ್ದಾಗಿ ಮಾಡಿದರು. ಆದರೆ ಆ ಟಿವಿ ಸಿರೀಸ್ ಬಗ್ಗೆ ಯಾರೂ ಮಾತನಾಡುವುದಿಲ್ಲ.

ಕಾದಂಬರಿಯಾಧಾರಿತ ಚಿತ್ರಗಳಲ್ಲಿ ಗಾಡ್‍ಫಾದರ್ ಸರಣಿಯ ಚಿತ್ರಗಳನ್ನು ಬಿಡಲು ಸಾಧ್ಯವಿಲ್ಲ. ಮಾರಿಯೊ ಪೂಜೊ ಎಂಬ ಲೇಖಕನ ಅತ್ಯಂತ ಸಾಧಾರಣ ಕೃತಿಯನ್ನು ದೃಶ್ಯ ಮಾಧ್ಯಮದ ಅತ್ಯಂತ ಅದ್ಭುತ ಉದಾಹರಣೆಯನ್ನಾಗಿ ಮಾಡಿದ್ದು ಫ್ರಾನ್ಸಿಸ್ ಫೋರ್ಡ್ ಕೊಪೋಲಾ. ಈ ಕಾದಂಬರಿಯನ್ನು ಅಳವಡಿಸಲು ಕೊಪೋಲಾ ಅತ್ಯಂತ ಉತ್ಸುಕರಾಗಿದ್ದಿಲ್ಲ. ಕ್ರಮೇಣ ಕಾದಂಬರಿಯಲ್ಲಿ ಅಡಗಿರುವ ಅದ್ಭುತ ಚಿತ್ರವನ್ನು ಕಂಡು ಅದನ್ನು ಅಳವಡಿಸಿಕೊಂಡರು. ಆಗಿದ್ದು ಇತಿಹಾಸ. (ಅಂದಹಾಗೆ ಗಾಡ್‍ಫಾದರ್ ಪಾತ್ರ ಮಾಡಲು ಮಾರ್ಲನ್ ಬ್ರ್ಯಾಂಡೋ ಕೂಡ ಹಿಂಜರಿಕೆಯಿಂದಲೇ ಒಪ್ಪಿಕೊಂಡಿದ್ದರಂತೆ.)

ಈ ಮೇಲಿನ ಉದಾಹರಣೆಗಳೆಲ್ಲ ಮೂಲಕೃತಿಯನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಿ ಅದರ ಮೌಲ್ಯವನ್ನು ಹೆಚ್ಚಿಸಿದ ಉದಾಹರಣೆಗಳೇ ಆಗಿವೆ. ಈ ಅದ್ಭುತ ನಿರ್ದೇಶಕರೆಲ್ಲರೂ ಸಿನೆಮಾ ಎಂಬ ಮಾಧ್ಯಮವನ್ನು ಆಳವಾಗಿ ಪ್ರೀತಿಸಿದವರು, ಅದನ್ನು ಆಳವಾಗಿ ಅಭ್ಯಸಿಸಿದವರು, ವಿಶಿಷ್ಟ ಪ್ರಯೋಗಗಳನ್ನು ಮಾಡಿದವರು. ಮೂಲಕೃತಿಯ ಬಗ್ಗೆ ಇವರಿಗಿರುವ ಪ್ರೀತಿಯು ಆ ಕೃತಿಯನ್ನು ಬದಲಿಸಲು ಅಡ್ಡಿಯಾಗಲಿಲ್ಲ. ಆಯಾ ಕೃತಿಯ ವಿಶಿಷ್ಟತೆ, ಆಳ ಮತ್ತು ಅವರಿಗೆ ತಟ್ಟಿದ ಅಂಶವನ್ನು ಇಟ್ಟುಕೊಂಡು ಚಿತ್ರಕಥೆಯನ್ನು ಅಭಿವೃದ್ಧಿಪಡಿಸಿದವರು ಇವರೆಲ್ಲ. ಸಿನೆಮಾ ಮಾಧ್ಯಮದ ತಾಂತ್ರಿಕತೆಯನ್ನು ಆ ಮಾಧ್ಯಮದ ಅಡ್ಡಿ ಎಂದು ಪರಿಭಾವಿಸದೇ, ಅದನ್ನೇ ಒಂದು ಕಲೆಯೆಂದು ಪ್ರಯೋಗ ಮಾಡಿದವರು ಇವರು.
ಭಾರತದಲ್ಲೂ ಇಂತಹ ಅನೇಕ ಯಶಸ್ವೀ ಪ್ರಯೋಗಗಳು ಆಗಿವೆ. ಗುರುದತ್ ಅವರು ಮಾಡಿದ ಸಾಹಿಬ್ ಬೀವಿ ಔರ್ ಘುಲಾಮ್ (ಮೂಲ ಲೇಖಕ ಬಿಮಲ್ ಮಿತ್ರ), ಸತ್ಯಜಿತ್ ರಾಯ್ ಅವರ ಅದ್ಭುತ ಅಪು ಸರಣಿ (ಮೂಲ ಲೇಖಕ ವಿಭೂತಿಭೂಷಣ್ ಬಂಡೋಪಾಧ್ಯಾಯ), ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ ಹೆಚ್ಚಿನ ಚಿತ್ರಗಳು ಕಾದಂಬರಿಗಳನ್ನು ಸರಳವಾಗಿ ಸಿನೆಮಾ ರೂಪಕ್ಕೆ ಅಳವಡಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿವೆ.

ಕಥೆ ಕಾದಂಬರಿ ಆಧಾರಿತ ಚಿತ್ರಕಥೆ(ಅಡಾಪ್ಟೆಡ್ ಸ್ಕ್ರೀನ್‍ಪ್ಲೇ)ಗಳನ್ನು ಮೂಲಕೃತಿ ಮತ್ತು ಚಿತ್ರಕಥೆಯ ನಡುವಿನ ಸೆಣೆಸಾಟ ಅಥವಾ ಅಕ್ಷರಮಾಧ್ಯಮ ಮತ್ತು ದೃಶ್ಯಮಾಧ್ಯಮದ ಮಿಲನದ ಫಲಿತಾಂಶ ಎಂತಲೂ ಎನ್ನಬಹುದು. ಏನೇ ಆಗಲಿ ಈ ಪ್ರಕ್ರಿಯೆಯಂತೂ ನಿಲ್ಲಲಾಗದ ಪ್ರಕ್ರಿಯೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...