Homeಕರ್ನಾಟಕಎನ್ನಾರ್ಸಿ, ಸಿಎಬಿ ಹಾಗೂ ಎನ್‍ಪಿಆರ್ ಎನ್ನುವ ಮೂರು ಅಂಕದ ನಾಟಕ

ಎನ್ನಾರ್ಸಿ, ಸಿಎಬಿ ಹಾಗೂ ಎನ್‍ಪಿಆರ್ ಎನ್ನುವ ಮೂರು ಅಂಕದ ನಾಟಕ

- Advertisement -
- Advertisement -

ನಮ್ಮ ಘನ ಸರಕಾರದವರು ನೀನು ಯಾರು ಅನ್ನೋ ಪ್ರಶ್ನೆ ಸೀದಾ ಸೀದಾ ಕೇಳೋದನ್ನ ಬಿಟ್ಟು ನಮ್ಮೆಲ್ಲರ ಪೌರತ್ವದ ಪುರಾವೆ ಕೇಳಾಕ ಹತ್ಯಾರ. ನೀವು ಓದಿದ್ದು ಸರಿ. ನಮ್ಮೆಲ್ಲರನ್ನೂ ಕೇಳಲಿಕ್ಕೆ ಹತ್ಯಾರ. ಬರೇ ಮುಸಲಮಾನರದಲ್ಲ.

ಇದರದು ಮೂರು ರೂಪ ಅವ. ಒಂದೊಂದಾಗಿ ನಮ್ಮನ್ನ ಸೀಳಿ ನೋಡೋ ಇವನ್ನ ನಾವೂ ಸೀಳಿ ನೋಡೋಣ.

ಒಂದು ಎನ್‍ಪಿಆರ್
(ರಾಷ್ಟ್ರೀಯ ಜನಸಂಖ್ಯಾ ದಾಖಲೆಪಟ್ಟಿ)
ಇದು ಸರ್ವೇಸಾಧಾರಣ ರಹವಾಸಿಗಳ ಪಟ್ಟಿ. ಇದರ ಮೂಲ ದಾಖಲೆಗಳನ್ನು ಜನಗಣತಿಯಿಂದ ಪಡೆಯಲಾಗುತ್ತದೆ. ಆದರೆ ಮನೆಮನೆಗೆ ಭೇಟಿ ನೀಡಿ ಅದನ್ನು ಪರಿಶೀಲಿಸಲಾಗುತ್ತದ. 2015 ರಲ್ಲಿ ಇದರ ಮೊದಲ ಪ್ರಯತ್ನ ನಡೆಯಿತು. ಎರಡನೇ ಹಂತದಲ್ಲಿ ಇದು 2020ರ ಎಪ್ರಿಲ್‍ನಲ್ಲಿ ಆರಂಭ ಆಗತದ.
ಇದರ ಪ್ರಕಾರ ಕಳೆದ ಆರು ತಿಂಗಳಿಂದ ಭರತ ಖಂಡದಲ್ಲಿ ಇದ್ದವರು ಹಾಗೂ ಅಥವಾ ಮುಂದಿನ ಆರು ತಿಂಗಳು ಇಲ್ಲಿ ಇರಬೇಕೆನ್ನುವವರು ಇದರ ಪ್ರಕಾರ ಸರ್ವೇಸಾಧಾರಣ ರಹವಾಸಿಗಳು.

ನಿಮ್ಮ ಮನೆಯ ಬೆಲ್ಲು ಬಡಿದು ನಿಮ್ಮನ್ನು ಕೇಳುವ ಪ್ರಶ್ನೆಗಳು ಇವು- ಹೆಸರು, ಲಿಂಗ, ಹುಟ್ಟಿದ ಸ್ಥಳ, ದಿನಾಂಕ, ಮನೆಯ ಮುಖ್ಯಸ್ಥನೊಂದಿಗೆ ಸಂಬಂಧ, ಅಪ್ಪ, ಅವ್ವನ ಹೆಸರು, ಮದುವೆಯಾಗಿದ್ದರ ಹೆಂಡತಿ/ ಗಂಡನ ಹೆಸರು, ಕೆಲಸ, ಈಗ ಇರುವ ವಿಳಾಸ, ಇಲ್ಲಿ ಎಷ್ಟು ದಿವಸ ಉಳದೀರಿ? ಕಾಯಂ ವಿಳಾಸ, ವಿದ್ಯಾಭ್ಯಾಸ ಹಾಗೂ ಇತರ ವಿವರಗಳು. ನೀವು ಕೊಟ್ಟ ಮಾಹಿತಿ ಸರಕಾರದ ಹತ್ತಿರ ಇರೋ ಮಾಹಿತಿಗೆ ಹೊಂದಲಿಲ್ಲಾ ಅಂದರ ಬೇರೆಯವರು ಬರತಾರ. ಅವರು ನಿಮ್ಮ ಬೆಲ್ಲನ್ನೂ ಬಡಿಯಬಹುದು, ನಿಮ್ಮನ್ನೂ ಬಡಿಯಬಹುದು.

ಇನ್ನೊಂದು ಎನ್‍ಆರ್‍ಸಿ.
ಈ ದಸ್ತಾವೇಜಿನ ಹೆಸರು ರಾಷ್ಟ್ರೀಯ ನಾಗರಿಕರ ದಾಖಲೆಪಟ್ಟಿ. ಇದನ್ನು ಉಪಯೋಗಿಸಿ ಬೇರೆ ದೇಶದಿಂದ ಬಂದ ನುಸುಳುಕೋರರ ಹೆಸರು ಹಾಕಿ ಅವರನ್ನು ಅವರ ದೇಶಕ್ಕೆ ವಾಪಸು ಕಳಿಸಬಹುದು. ದಾಖಲೆ ಇಲ್ಲದ ಜನರನ್ನು ಗುರುತಿಸಿ ಅವರನ್ನು ಗೈರು ನಾಗರಿಕರು ಅಂತ ಬರೆಯೋದು. ಆಮ್ಯಾಲೆ ಅವರನ್ನು ಹಿಡದು ಇಡಲಿಕ್ಕೆ ದೊಡ್ಡ ದೊಡ್ಡ ಹಿಡಿದಿಟ್ಟುಕೊಳ್ಳುವ ಕೇಂದ್ರಗಳನ್ನು ಕಟ್ಟೋದು.

ಒಂದು ಸಲೆ ಅಸ್ಸಾಮಿನೊಳಗ ಇದನ್ನ ಮಾಡಿ 19 ಲಕ್ಷ ಜನರನ್ನ ಗೈರು ನಾಗರಿಕರು ಅಂತ ಗುರುತಿಸಿದರು. ಅದರೊಳಗ 11 ಲಕ್ಷ ಹಿಂದೂಗಳು, ಎಂಟು ಲಕ್ಷ ಮುಸಲಮಾನರು. ಈಗ ಅಲ್ಲಿ ಇಂಥಾ ಕೇಂದ್ರ, ಅಥವಾ ಬಯಲು ಜೈಲಿನ ತಯಾರಿ ನಡದದ.

ಎನ್ನಾರ್ಸಿ ಅಧಿಕಾರಿಗಳು
ನಿಮ್ಮನ್ನ ಬಂದು ಏನು ಕೇಳತಾರಪಾ ಅಂದರ ನಿಮ್ಮ ಆಧಾರ ಕಾರಡು ಅದೇನು? ಓದಿದ್ದರ ಎಸ್ಸೆಸೆಲ್ಸಿ ಅಂಕ ಪಟ್ಟಿ ಅದೇನು? ಮತ್ತ ಏನೇನ ಅದಾವ ಅಂತ ಕೇಳಬಹುದು.

ಎಲ್ಲಾಕ್ಕಿಂತ ಮುಖ್ಯವಾಗಿ ನಿಮಗೂ ನಿಮ್ಮಪ್ಪನಿಗೂ ಸಂಬಂಧ ಏನು, ಅದನ್ನ ಸಿದ್ಧ ಮಾಡಿ ತೋರಿಸೋ ಸಾಕ್ಷಿ ಏನು ಅಂತ ಕೇಳತಾರ.

ಮಹಾಮಹಿಮ ಅಮಿತ ಶಾ ಅವರು ಹೊರದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫಘಾನಿಸ್ತಾನದೊಳಗ ಧರ್ಮದ ಆಧಾರದ ಮ್ಯಾಲೆ ಹಿಂಸೆ ಅನುಭವಿಸಿ ಭಾರತಕ್ಕ ಓಡಿಬಂದ ಹಿಂದೂಗಳನ್ನ ಇಲ್ಲೇ ಇಟಗೋತೇವಿ, ಹೊಳ್ಳಿ ಕಳಸಂಗಿಲ್ಲಾ ಅಂತ ಹೇಳ್ಯಾರ. ಹಿಂದೂಗಳ ಸಂಗ್ತೆ ಜೈನ, ಬೌದ್ಧ, ಸಿಖ್, ಪಾರಸೀ, ಕ್ರಿಶ್ಚಿಯನ್‍ಗಳನ್ನೂ ಕರಕೋತೇವಿ ಅಂತ ಹೇಳ್ಯಾರ. ಇನ್ನೊಂದು ಧರ್ಮದವರನ್ನ ಜಾಣತನದಿಂದ ಕೈ ಬಿಟ್ಟಾರ. ಹಂಗನ, ಭಾರತದೊಳಗ ಧರ್ಮದ ಆಧಾರದ ಮ್ಯಾಲೆ ಹಿಂಸೆ ಅನುಭವಿಸಿದವರು ಎಲ್ಲೆ ಹೋಗಬೇಕು ಅಂತ ಹೇಳೋದು ಮರತ ಬಿಟ್ಟಾರ. ಬರೇ ಅಸಾಮಿನಂಥ ಗಡಿ ರಾಜ್ಯಗಳಲ್ಲೆ ಅಲ್ಲ, ದೇಶಾದ್ಯಂತ ಇದನ್ನ ಮಾಡಬೇಕು ಅಂತ ಶಾಜೀ ಅಪ್ಪಣೆ ಕೊಡಸ್ಯಾರ. ಅದನ್ನ ಕೇಳಿ ನಮ್ಮ ಗೃಹಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರೂ ಅದ ರಾಗ ಹಾಡ್ಯಾರ. ನಿಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಸೋಮಪ್ಪಾ ರಾಯಪ್ಪಾ ಬೊಮ್ಮಾಯಿ ಅವರು ಸಮಾಜವಾದಿಗಳು ಆಗಿದ್ದರು. ಎಮ್ ಎನ್ ರಾಯ ಅವರ ವಿಶ್ವ ಮಾನವತ್ವದ ಸಿದ್ಧಾಂತದ ಪ್ರತಿಪಾದಕರಾಗಿದ್ದರು ಅನ್ನೊದನ್ನ ಅವರಿಗೆ ಯಾರೂ ನೆನಪು ಮಾಡಿದಂಗ ಕಾಣಂಗಿಲ್ಲ.

ಉಪೇಂದ್ರ ಅವರ ಏಕೆ 47 ನಿಂದಾಗಿ ಒಂದು ಜೈಲು ಫೇಮಸ್ ಆತಲ್ಲಾ ಅದರ ಹೆಸರು ಪರಪ್ಪನ ಅಗ್ರಹಾರ ಅಂತ. ಅದರೊಳಗ 2200 ಕೈದಿಗಳನ್ನ ಇಡಬಹುದು. ಆದರ 4400 ಜನರನ್ನ ಇಟ್ಟಾರ. ಇನ್ನು 19 ಲಕ್ಷ ಜನರನ್ನು ಇಡೋ ಜೈಲು ಎಷ್ಟು ದೊಡ್ಡದಿರಬಹುದು, ಅದರಾಗ ಏಷ್ಟು ಅಡಿಗಿ ಮಾಡಬೇಕು, ಹೆಂಗ ಅವರೆಲ್ಲರಿಗೂ ಊಟಕ್ಕ ಹಾಕಬೇಕು, ವಿಚಾರ ಮಾಡರಿ. ಅದರ ಸಲುವಾಗಿ ಕೇಂದ್ರ ಸರಕಾರ ಈಗಾಗಲೇ 50 ಕೋಟಿ ರೂಪಾಯಿ ಕೊಟ್ಟಾರ. ಅವರನ್ನು ಹೊರಗ ಬಿಟ್ಟರ ಅವರು ದುಡಕೊಂಡ ತಿನ್ನತಿದ್ದರು. ಹಿಂಗ ಅವರನ್ನು ಕೂಡಿಸಿ ಊಟಕ್ಕ ಹಾಕೋ ಪರಿಸ್ಥಿತಿ ಬರತಿದ್ದಿಲ್ಲಾ.

ಇನ್ನ ಇಡೀ ದೇಶದೊಳಗ ಈ ಕೇಂದ್ರಗಳನ್ನ ಮಾಡಲಿಕ್ಕೆ ಹೋದರ ಗತಿ?
ಮೂರನೆಯ ಬಹು ಚರ್ಚಿತ ವಿಷಯ ಸಿಎಬಿ ಅಥವಾ ನಾಗರಿಕತೆ ತಿದ್ದುಪಡಿ ಮಸೂದೆ. ಅದು ತಿರಗಿ ಎರಡೂ ಸಂಸತ್ ಸಭೆಗಳಲ್ಲಿ ಪಾಸಾಗಿ ಮಧ್ಯರಾತ್ರಿಯೊಳಗ ರಾಷ್ಟ್ರಪತಿಗಳ ಅಂಕಿತ ಪಡದು ಕಾನೂನು ಆಗಿ ಹೋಗೇದ. ಅದು ಈಗ ಸಿಎಎ. ನಾಗರಿಕತೆ ತಿದ್ದುಪಡಿ ಕಾಯಿದೆ. ಅದರ ಪ್ರಕಾರ ನೈಸರ್ಗೀಕರಣದ ನಾಗರಿಕತೆ ಸಾಧ್ಯ ಇಲ್ಲ. ಅಂದರ ನಾನು ಭಾರತದ ಪ್ರಜೆ ಆಗಬೇಕು ಅಂತ ಅರ್ಜಿ ಹಾಕಿದರ ಅದು ಸಿಗೋದಿಲ್ಲ. ಇಷ್ಟು ದಿವಸ ಸಿಗತಿತ್ತು. ಈ ದೇಶದಾಗ 26 ತಿಂಗಳು ಅಥವಾ 5 ವರ್ಷ ಅಥವಾ 11 ವರ್ಷ ಕಳೆದವರು (ಕೆಲವು ಷರತ್ತುಗಳೊಂದಿಗೆ) ಮತ್ತು ಕಾಯಂ ಆಗಿ ಇಲ್ಲಿ ಉಳಿಯೋ ವಿಚಾರದವರು ಅರ್ಜಿ ಹಾಕಬಹುದಿತ್ತು. ಅವರಿಗೆ ನಾಗರಿಕತೆ ಸಿಗತಿತ್ತು. ಈಗ ಸಿಗಂಗಿಲ್ಲ. ಆದರ ಈ ಕಾಯಿದೆ ಎಲ್ಲ ಧರ್ಮದವರಿಗೆ ಲಾಗೂ ಆಗಂಗಿಲ್ಲ. ಹಿಂದೂಗಳು ಮತ್ತು ಜೈನ, ಬೌದ್ಧ, ಸಿಖ್, ಪಾರಸೀ, ಕ್ರಿಶ್ಚಿಯನ್ ಈ ಧರ್ಮದವರು ನೈಸರ್ಗೀಕರಣಗೊಳ್ಳಬಹುದು, ಮುಸಲಮಾನರಿಗೆ ಇದು ಸಾಧ್ಯ ಇಲ್ಲ.

ಇದು ಸಂವಿಧಾನ ವಿರೋಧಿ ಅಂತ ಕೆಲವರು ಹೇಳಲಿಕ್ಕೆ ಹತ್ಯಾರ. ಇಲ್ಲಾ, ಇದು ಬರೇ ಸಂವಿಧಾನ ವಿರೋಧಿ ಅಲ್ಲ. ಇದು ಮಾನವೀಯತೆಯ ಪರಿಕಲ್ಪನೆಗೆ ವಿರೋಧಿ ಅಂತ ಕೆಲವರು ಹೇಳಲಿಕ್ಕೆ ಹತ್ಯಾರ. ಅದು ಅರ್ಥ ಆಗಲಿಕ್ಕೆ ಸ್ವಲ್ಪ ಸಮಯ ಬೇಕಾಗಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

"ಒಳಮೀಸಲಾತಿ ಇಲ್ಲದೆ ಒಂದೇಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ" ಎಂದು ಆಹಾರ...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...