HomeUncategorizedಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

- Advertisement -
- Advertisement -

ಈಗಿನ ಸುದ್ದಿ ಬರೀ ಲಾಠಿ -ಬೂಟಿನ ಸದ್ದಿನ ಸುದ್ದಿ. ಅಸ್ಸಾಮಿನೊಳಗ ಸುರು ಆದ ಈ ಸದ್ದು ಈಗ ಎಲ್ಲಾ ಕಡೆ ಝಂಕಾರ ಬೀಟ್ಸ ಜೊತೆ ಕೇಳಲಿಕ್ಕೆ ಹತ್ತೇದ.

ಕಾಲೇಜು- ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಾಯಿ ಮುಚ್ಚಿಕೊಂಡು ಅಧ್ಯಯನ ಮಾಡಬೇಕು. ಅದನ್ನ ಬಿಟ್ಟುಕೊಟ್ಟು ಪ್ರತಿಭಟನೆ – ಹೋರಾಟ ಎಲ್ಲಾ ಯಾಕ ಮಾಡಬೇಕು? ಅಂತ ಕೆಲವರು ಕೇಳಾಕ ಹತ್ಯಾರ. ನೀವು ಗದ್ದಲಾ ಮಾಡಿದರ ನಾವು ಬಡೀತೇವಿ ಅಂತ ಹೇಳಿ ಅದು ಖರೇ ಅನ್ನೋದನ್ನ ತೋರಿಸಲಿಕ್ಕೆ ಹತ್ಯಾರ.

ಇದೆಲ್ಲಾ ಯಾಕ ಸುರು ಆತು? ಇದು ಪಾರ್ಲಿಮೆಂಟ ಭವನದಿಂದ ಸುರು ಆತು. ಅಲ್ಲೆ ನಮ್ಮನ್ನ ಪ್ರತಿನಿಧಿಸುವ ಮಹಾಮಹೋಪಾಧ್ಯಾಯರೆಲ್ಲಾ ಸೇರಿ `ಹೊರಗಿನಿಂದ ಬಂದವರನ್ನ ಹಿಡದು ಹೊರಗ ಹಾಕೋ’ ಕಾನೂನು ಖಲಬಲಿಯಿಂದ ಪಾಸು ಮಾಡಿದರು. ಅವರ ಪ್ರಕಾರ ಇದು ಅಸ್ಸಾಮು ಮತ್ತು ಇನ್ನು ಕೆಲವು ಪೂರ್ವ ಹಾಗೂ ಈಶಾನ್ಯದ ರಾಜ್ಯಗಳಿಗೆ ಅನ್ವಯ ಆಗಬೇಕಾಗಿತ್ತು. ಆದರ ಅವರಿಗೆ ಭಾಳ ದೊಡ್ಡ ಮನಸ್ಸು ಇದ್ದದ್ದಕ್ಕ ಇಡೀ ದೇಶಕ್ಕ ಲಾಗೂ ಮಾಡೋ ಹಂಗ ಅದನ್ನ ಮಾಡಿದರು.

ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ರಕ್ತ ಬರೋ ಹಂಗ ಹೊಡದು, ಅವರ ಮ್ಯಾಲೆ ದೌರ್ಜನ್ಯ ಮಾಡಿ ಅವಮಾನ ಮಾಡಿದ್ದನ್ನ ಭಾಳ ಜನಾ ಖಂಡಿಸಲಿಕ್ಕೆ ಹತ್ಯಾರ. ಆದರ ಅದನ್ನ ಬೆಂಬಲಿಸೋರ ಸಂಖ್ಯಾನೂ ಏನು ಕಮ್ಮಿ ಇಲ್ಲ. ಅವರು `ಹಂಗ ಆಗಬೇಕು’, `ದಂಡಂ ದಶಗುಣಂ’, `ಜಿಸಕಿ ಲಾಠ, ಉಸಕೀ ಭೈಂಸ್’ ಅಂತೆಲ್ಲಾ ಸಮಾಜ ವಿರೋಧಿ ಮಾಧ್ಯಮಗಳಾದ ವಾಟ್ಸಪ್ಪು – ಫೇಸುಬುಕ್ಕಿನ್ಯಾಗ ಚೀರಲಿಕ್ಕೆ ಹತ್ಯಾರ. ಈಗ ಆಗಲಿಕ್ಕೆ ಹತ್ತಿದ್ದು ಅವರ ಪ್ರಕಾರ ಸರಿ.

ಇದರ ಬಗ್ಗೆ ಒಂದು ಸ್ವಲ್ಪ ಉಲ್ಟಾ ವಿಚಾರ ಮಾಡೋಣ. ಎನ್‍ಡಿಎ ಸರಕಾರದ ಜಾಗಾದಾಗ ಯುಪಿಎ ಇತ್ತು ಅನಕೋರಿ, ಆಗ ಪೊಲೀಸರು ಬನಾರಸ ಹಿಂದೂ ಯುನಿವರ್ಸಿಟಿ ಒಳಗ ಹೊಕ್ಕು ಹುಡುಗ- ಹುಡುಗಿಯರನ್ನು ಹೊಡದಿದ್ದರೂ ಅಂತ ಅನಕೋರಿ ಆವಾಗನೂ ಅವರದು ಇದ ರೀತಿ ಪ್ರತಿಕ್ರಿಯಾ ಇರತಿತ್ತ? ಈ ನುಡಿಮುತ್ತುಗಳನ್ನ ಬಳಸಿ ಅವರು ಇದನ್ನ ಸಮರ್ಥಿಸಿ ಕೊಳ್ಳತಿದ್ದರೇನು?

ಇಷ್ಟರಾಗ ನಮ್ಮ ಮಹಾಮಹಿಮ ಪಂತ ಪ್ರಧಾನರ ಬಾಯಿಯಿಂದ ಒಂದು ಪವಿತ್ರ ವಾಕ್ಯ ಉದರಿ ಬಿದ್ದದ. ಅದೇನಂದರ ‘ಹಿಂಸಾಕೃತ್ಯಗಳನ್ನ ಮಾಡಲಿಕ್ಕೆ ಹತ್ತವರು ಯಾರು ಅಂತ ಎಲ್ಲಾರಿಗೂ ಗೊತ್ತದ. ಅವರವರು ಹಾಕ್ಕೊಂಡ ಅರಿವಿಯಿಂದ ಗೊತ್ತಾಗೇ ಬಿಡತದ’ ಅಂತ ಅಪರೂಪಕ್ಕ ಒಂದು ಖರೇ ಹೇಳ್ಯಾರ. ಯಾಕಂದರ ಹೊಡದವರು, ಬಡದವರು, ಖಾಕಿ ಸಮವಸ್ತ್ರ ಹಾಕಿಕೊಂಡ ಪೊಲೀಸರು. ದೆಹಲಿ ಪೋಲೀಸರು ದೆಹಲಿ ರಾಜ್ಯದ ಕೆಳಗ ಕೆಲಸ ಮಾಡೋರಲ್ಲ. ನೇರವಾಗಿ ಕೇಂದ್ರ ಸರಕಾರದ ಕೈಕೆಳಗ ದುಡಿಯೋರು. ಅವರ ಚಕ್ರವರ್ತಿ ಅಂದರ ಕೇಂದ್ರದ ಗೃಹ ಮಂತ್ರಿ. ಹಿಂಗಾಗಿ ಹಿಂಸೆಯನ್ನ ಆರ್ಡರ್ ಮಾಡಿದವರು ಯಾರು ಅಂತ ಎಲ್ಲಾರಿಗೂ ಗೊತ್ತಾಗತದ.

ಇನ್ನ ಕೆಲವರು ಟೀ ಷರ್ಟು – ಜೀನ್ಸ ಪ್ಯಾಂಟ್ ಹಕ್ಕೊಂಡು, ಪೊಲೀಸರ ಹೆಲ್ಮೇಟು, ಮುಖದ ಮ್ಯಾಲೆ ಮುಸುಗು ಹಾಕಿಹೊಂಡು ಸಣ್ಣಸಣ್ಣ ಹುಡುಗಿಯರನ್ನು ಹುಡುಕಿಹುಡುಕಿ ದೊಡ್ಡ ದೊಡ್ಡ ಲಾಠಿ ತೊಗೊಂಡು ಹೊಡದಾರ. ಅವರ ಅರಿವಿ ನೋಡಿದರ ಅವರು ಯಾರು ಅಂತ ಇನ್ನೋ ಗೊತ್ತಾಗವಲ್ಲದು. ಇನ್ನೇನು ಇನ್ನೊಂದು ಸ್ವಲ್ಪ ದಿವಸದಾಗ ಗೊತ್ತಾಗತದ. ನಮ್ಮ ನಾಯಕರು ದಾಡಿ- ಪೈಜಾಮಾ- ಬುರ್ಖಾ ಮನಸಿನ್ಯಾಗ ಇಟಗೊಂಡು ಹೇಳಿದ್ದರೋ ಏನೋ. ನಮಗಂತೂ ಅಂಥಾ ಅರಿವಿ ಕಾಣಲಿಲ್ಲ.

ಇಷ್ಟು ಎಲ್ಲದಕ್ಕೂ ಕಾರಣ ಏನು? ಹೊರಗಿನಿಂದ ಬಂದವರನ್ನು ಹೊರಗ ಹಾಕೋ ಹೆಸರಿನ್ಯಾಗ ನಮ್ಮ ಅಣ್ಣತಮ್ಮಂದಿರನ್ನ ಬ್ಯಾರೆ ಮಾಡೋ ಪಿತೂರಿ ನಡದದ.

ಭಾರತದ ವಿಭಜನಾ 1947 ಆದಾಗ ಹಾಗೂ ಪಾಕಿಸ್ತಾನದ ವಿಭಜನಾ 1971 ರೊಳಗ ಭಾಳ ಕುಟುಂಬ ಈ ನಾಲ್ಕೂ ದೇಶಗಳ ಗಡಿ ದಾಟಿ ಹೋದರು, ಬಂದರು. ಅವರು ಈಗ 50-70 ವರ್ಷಗಳಿಂದ ಈ ದೇಶದ ನೀರು ಕುಡದು, ಇಲ್ಲೆ ಮಣ್ಣಿನ್ಯಾಗ ಬೆವರು ಸುರಿಸಿಕೊಂಡು, ದುಡಕೊಂಡು, ದುಃಖ ಪಟಕೊಂಡು ಇದ್ದಾರ. ಇಷ್ಟು ವರ್ಷ ಆಗಲಾರದ ಈ ನಿರಾಶ್ರಿತರ ಸಮಸ್ಯಾ ಈಗ ಬಂದಂಗ ಕಾಣತದ. ಯಾಕಂದರ ಈ ದೇಶದಾಗ ಯಾವ ಸಮಸ್ಯೆನೂ ಇಲ್ಲ ಈಗ. ಬಡತನಾ ಇಲ್ಲ, ಹಸಿವು ಇಲ್ಲಾ, ನಿರಕ್ಷರತೆ ಇಲ್ಲಾ, ದೌರ್ಜನ್ಯ ಇಲ್ಲ, ಬಾಲ್ಯವಿವಾಹ ಇಲ್ಲ, ದೇವದಾಸಿ ಪದ್ಧತಿ ಇಲ್ಲ, ಬಾಲ ಕಾರ್ಮಿಕರು ಇಲ್ಲ, ಯಾವುದೇ ರೋಗ – ರುಜಿನ ಇಲ್ಲ, ಎಲ್ಲರಿಗೂ ಬೇಕಾದಷ್ಟು ಶಿಕ್ಷಣ ಸಿಕ್ಕದ, ಸಾಕಷ್ಟು ಉದ್ಯೋಗ ಅವ. ನಮ್ಮ ಆರ್ಥಿಕತೆ ಐದೋ – ಆರೋ ಟ್ರಿಲಿಯನ್ ಡಾಲರ್ ಕಡೆ ದಾಪುಗಾಲು ಹಾಕಲಿಕ್ಕೆ ಹತ್ತೇದ. ಹಿಂಗಾಗಿ ಇವೆಲ್ಲಾ.

ಹಿಂಗಾಗಿ ನಾಗರಿಕತೆ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ನಾಗರಿಕರ ದಾಖಲೆಪಟ್ಟಿ ಅಂತೆಲ್ಲಾ ಅವರನ್ನ ಹುಡುಕೋದು, ಕುತಗೀ ಹಿಡದು ಹೊರಗ ಹಾಕೋದು ಇಂಥಾ ವಿಚಾರ ನಡದದ. ಇದು ಉಚ್ಚ ಶಿಕ್ಷಣ ಪಡದ ವಿದ್ಯಾರ್ಥಿಗಳಿಗೆ ಮನಸು ಬರವಲ್ಲತು. ಹಿಂದೂ – ಮುಸ್ಲಿಮ ಸ್ವಾತಂತ್ರ್ಯ ಹೋರಾಟಗಾರರ ಪ್ರಾಣದ ಆಹುತಿ ಪಡದ ಮ್ಯಾಲೆ ಈ ದೇಶ ಪ್ರಜಾತಂತ್ರ ಆಗೇದ. ಈಗ ಅದನ್ನ ಧರ್ಮದ ಆಧಾರದ ಮ್ಯಾಲೆ ಒಡದು ಹಾಕಿದರ ಜನಸತ್ತಾ ಹೋಗಿ ಜನಾ ಸತ್ತಾರ ಆಗತದ ಅಂತ ಅವರ ಚಿಂತಿ.

ಅದಕ್ಕೆ ಈ ದೇಶ ಬರೇ ಹಿಂದೂಗಳದ್ದಲ್ಲ. ಬರೇ ಮೇಲುಜಾತಿಯವರದಲ್ಲ, ಬರೇ ಸಾಹುಕಾರರದ್ದಲ್ಲ. ಬರೇ ಗಂಡಸರದಲ್ಲ, ಬರೇ ಅಧಿಕಾರಸ್ಥರದಲ್ಲ, ಬರೇ ಜಮೀನುದಾರರು, ವ್ಯಾಪಾರಸ್ಥರು, ಕಾರಖಾನಿ ಮಾಲಿಕರದ್ದಲ್ಲ, ಇದು ಎಲ್ಲರಿಗೂ ಸೇರಿದ್ದು. ಐದು ಸಾವಿರ ವರ್ಷದ ಶ್ರೀಮಂತ ಬಹು ಸಾಂಸ್ಕøತಿಕ ನಾಗರಿಕತೆಯನ್ನು ಬರೇ ಐದು ವರ್ಷ ಆಳಲಿಕ್ಕೆ ಪರವಾನಗಿ ಪಡದು ಬಂದಿರೋರು ಹಾಳು ಮಾಡಬಾರದು ಅಂತ ಅವರ ಆಸೆ. ನಮ್ಮ ಯಾರನ್ನೂ ಸಾಕ್ಷ್ಯ, ಪ್ರಮಾಣ, ಗುರುತು, ಪುರಾವೆ ಕೇಳಬ್ಯಾಡರಿ. ಅಣ್ಣ- ತಮ್ಮಂದಿರಿಗೆ ಅಣ್ಣಾ ತಮ್ಮನಂಗ ಇರಲಿಕ್ಕೆ ಬಿಡರಿ ಅಂತ ಅವರ ಬೇಡಿಕೆ.

ಈ ಗುಂಗಿನ್ಯಾಗ ಶಾಯರಿ ಸರದಾರ ರಾಹತ್ ಇಂದೋರಿ ಅವರ ಒಂದು ಗಜಲ್ ಕೇಳೋಣು. ಏನಂತೀ?

ಏನು ?
ವಿರೋಧ ಮಾಡ್ತಾರಂತ?
ಮಾಡ್ಲಿ ಬಿಡು,
ಅವರೇನೀಗ
ನಮಗ ಜೀವಕ್ಕ ಜೀವಾ
ಕೊಡವರದಾರು? ಇಲ್ಲಲಾ?

ಇದೆಲ್ಲಾ ಬರೇ ಹೊಗಿ
ಬರೇ ಒಣಾ ಧೂಳು-ಹೊಗಿ ಅಷ್ಟ.
ಇದನ್ನ ಏನರ
ಮುಗಲು ಅಂತ ತಿಳ್ಕೊಂಡೀಯೇನು ಮತ್ತ?
ಇಲ್ಲಲಾ?

ಒಮ್ಮೆ ಬೆಂಕಿ ಬಿತ್ತೆಪಾ ಅಂದರ
ಕಿವಿ ತುಂಬುವಂಗ
ಕೆಟ್ಟ ಸುದ್ದಿ ಬರ್ತಾವ ನೋಡು
ಮನಿ ಎಲ್ಲಾ ಉರಕೊಂಡು ಬಿದ್ದಿದ್ದು,
ಬಾಯಿಬಾಯಿ ಬಡಕೊಂಡು ಅಳೋದು,
ಗೊತೈತಿಲ್ಲ?
ಇಲ್ಲೇನು ಬರೇ
ನಮ್ಮವ ಮನೀ
ಅದಾವೇನು?
ಇಲ್ಲಲಾ?

ನೋಡಪಾ ಯಪ್ಪಾ
ನಮ್ಮ ಬಾಯಾಗ ಬಂದದ್ದ ಮಾತೆಲ್ಲಾ
ಖರೇನ ಇರತೇತಿ
ನಮ್ಮ ಬಾಯಾಗೇನರ
ನಿಮ್ಮ ನಾಲಿಗಿ ಐತೇನ?
ಇಲ್ಲಲಾ?

ನಮ್ಮ ದುಷ್ಮನಗಳೇನೂ
ಕಮ್ಮಿ ಇಲ್ಲ ಅನ್ನೋದು
ನನಗ ಗೊತೈತಿ
ಆದರ ನಮ್ಮಂಗ ಅವರೇನು
ಮುಟಿಗ್ಯಾಗ
ಜೀವಾ ಇಟಗೊಂಡ
ಹೊಂಟಾರೇನು?
ಇಲ್ಲಲಾ?

ಇವತ್ತೇನು ಗಾದಿ ಮ್ಯಾಲೆ ಕುತುಗೊಂಡು
ಮೆರಿಲ್ಯಾಕ ಹತ್ಯಾರಲಾ
ಅವರು ನಾಳೆ ಇರಂಗಿಲ್ಲಾ
ಅವರು ಇಲ್ಲೆ
ಬಾಡಗೀಲೆ ಇರಾಕ ಬಂದಾವ್ರು
ಏನು ಈ ಮನಿ
ಇವರ ಸ್ವಂತದ್ದೇನು?
ಅಲ್ಲಲಾ?

ಎಲ್ಲಾರ ರಕ್ತ ಬಿದ್ದು ಬಿದ್ದು ಕೆಂಪಾಗೇತಿ
ಈ ಮಣ್ಣು
ಯಾರದರ
ಅಪ್ಪನ ಮನೀದೇನು
ಈ ಹಿಂದುಸ್ತಾನಾ?
ಅಲ್ಲಲಾ?

ವಿಡಿಯೋ ನೋಡಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...