Homeಮುಖಪುಟಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

ಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

- Advertisement -
- Advertisement -

ಆಪ್ತ ವಲಯದಲ್ಲಿ ನಚ್ಚಿ ಎಂದೇ ಕರೆಸಿಕೊಳ್ಳುತ್ತಿದ್ದ ಪತ್ರಕರ್ತ ಎಂ.ಎನ್. ಚಕ್ರವರ್ತಿ ಅನೇಕ ಬಣ್ಣಗಳಿಂದ ಕೂಡಿದ ಮತ್ತು ಮಲ್ಲೇಶ್ವರದಲ್ಲಿ ಎಲ್ಲ ಕಡೆಗೂ ಹರಡಿಕೊಂಡು ಬೆಳಗುತ್ತಿದ್ದ ಬೃಹತ್ತಾದ ಕಾಮನ ಬಿಲ್ಲು. ನಾನು ಬೆಂಗಳೂರಿಗೆ ಬಂದು ನನ್ನ ಪಿ.ಯು.ಸಿ. ತರಗತಿಗೆ ದಾಖಲಾದಾಗ, ನಾನು ವಾಸವಿದ್ದ ನಮ್ಮಣ್ಣನ ಮನೆಯ ರಸ್ತೆಯಲ್ಲಿಯೇ ನಚ್ಚಿಯ ಮನೆಯೂ ಇದ್ದದ್ದು. ಮೊದಲ ಭೇಟಿಯಲ್ಲಿಯೇ ನಮ್ಮಿಬ್ಬರ ಸ್ನೇಹದ ಸಂಕೋಲೆಗೆ ಪುಷ್ಟಿಕೊಟ್ಟಿದ್ದು ಇಬ್ಬರಲ್ಲಿಯೂ ಇದ್ದ ಮತ್ತು ಹೊಂದಿಕೊಳ್ಳುತ್ತಿದ್ದ ಒಂದೇ ತರಂಗಾಂತರದ ಹಾಸ್ಯ ಪ್ರಜ್ಞೆ. ನನ್ನ ಹಳ್ಳಿಯ ಅನುಭವಗಳನ್ನ ವಿವರಿಸುವಾಗ ಪಟ್ಟಣದಲ್ಲೇ ಬೆಳೆದ ನಚ್ಚಿ ವಿಸ್ಮಯಗೊಳ್ಳುತ್ತಿದ್ದ. ಇದೇ ಕಾರಣಕ್ಕೆ ಆಗತಾನೆ ನನಗೆ ಪರಿಚಯವಾಗುತ್ತಿದ್ದ ನನ್ನ ಸ್ನೇಹಿತರ ಬಳಗ ನನಗೆ ’ಗೌಡ’ ಎಂಬ ನಾಮಕರಣವನ್ನ ಮಾಡಿದ್ದರು.

ಸಂಜೆಯಾದರೆ ಈ ಬಳಗವೆಲ್ಲಾ ನಚ್ಚಿಯ ಮನೆಯ ಮುಂದಿದ್ದ ಖಾಲಿ ಸೈಟಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು. ನಚ್ಚಿಯಲ್ಲಿ ಆಗತಾನೆ ಮೊಳಕೆಯೊಡೆದ ಸಾಹಿತ್ಯಾಭಿಮಾನ ನನ್ನಲ್ಲೂ ಅದು ಅಂಕುರವಾಗುವಂತೆ ಮಾಡಿತು. ಮಲ್ಲೇಶ್ವರದ ಗುಪ್ತ ಲೈಬ್ರರಿಗೆ ಪ್ರತಿ ದಿನವೂ ನಮ್ಮ ಭೇಟಿ ಇರುತ್ತಲೇ ಇತ್ತು. ಆಗ ನಾವು ಓದುತ್ತಿದ್ದದ್ದು ನರಸಿಂಹಯ್ಯನವರ ಪುರುಷೋತ್ತಮನ ಸಾಹಸ, ಪೆರ್ರಿಮೇಸನ್ ಮುಂತಾದ ಪತ್ತೇದಾರಿ ಕಾದಂಬರಿಗಳು ಮತ್ತು ಆಸ್ಟರಿಕ್ಸ್ ಕಾಮಿಕ್ಸ್‌ಗಳು ಇತ್ಯಾದಿ. ಈ ಸಮಯದಲ್ಲಿ ನಚ್ಚಿಗೆ ವಿಶೇಷವಾದ ಆಸಕ್ತಿ ಮೂಡಿದ್ದು ಪತ್ರಿಕೋದ್ಯಮದ ಮೇಲೆ. ನಮ್ಮ ಪದವೀಧರ ಪರೀಕ್ಷೆ ಮುಗಿದ ಮೇಲೆ ನಚ್ಚಿ ಮೂರು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯ ಬರಹಗಾರ ಆಗಿದ್ದರು.

ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಮುಖ್ಯ ವರದಿಗಾರರಾಗಿ ನಿವೃತ್ತಿ ಹೊಂದಿದರು. ಈಗಿನ ದೂರದರ್ಶನದ ಮಹಾನಿರ್ದೇಶಕ ಸೂರ್ಯಪ್ರಕಾಶ್ ಅವರ ಒಡನಾಡಿಯಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಿದ್ದರು.

ಪತ್ರಿಕೋದ್ಯಮದ ಜೊತೆಜೊತೆಗೇ, ನಚ್ಚಿ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಪ್ರಕಾಶ್ ಬೆಳವಾಡಿ ನಿರ್ದೇಶಿಸಿದ್ದ ಗರ್ವ ಧಾರಾವಾಹಿಯ ಸಂಭಾಷಣೆಯನ್ನು ಕೂಡ ಬರೆದಿದ್ದರು. ಇಂತಹ ಅನೇಕ ಘಟನೆಗಳು ನನ್ನ ನೆನಪಿನಲ್ಲಿ ಹಾದುಹೋಗುತ್ತಿವೆ.

ಅಂದು ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಟಿ.ಜೆ.ಎಸ್ ಜಾರ್ಜ್ ಅವರು ಬರೆದ ಎಂ.ಎಸ್. ಸುಬ್ಬಲಕ್ಷ್ಮಿಯವರ ಜೀವನ ಚರಿತ್ರೆಯ ಬಿಡುಗಡೆ. ಅದೇ ಸಂದರ್ಭದಲ್ಲಿ ಸುಧಾ ರಘುನಾಥನ್ ಅವರ ಸಂಗೀತ. ನಾನೂ ಅಲ್ಲಿಗೆ ಹೋಗಿದ್ದೆ. ನಚ್ಚಿಯ ಪತ್ರಿಕೋದ್ಯಮದಲ್ಲಿನ ಆಸಕ್ತಿ ಅವನನ್ನು ಅಲ್ಲಿಗೆ ಕರೆತಂದಿತ್ತು. ನನ್ನ ಸಂಗೀತದ ಆಸಕ್ತಿ ನಾನು ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ್ದು. ಅಂದು ಜಾರ್ಜ್ ಅವರ ಹಸ್ತಾಕ್ಷರವನ್ನು ಎರಡೂ ಪುಸ್ತಕಗಳಿಗೆ ಇಬ್ಬರೂ ಹಾಕಿಸಿಕೊಂಡು ಕೊಂಡೆವು.

ಭಾಷಣದ ಕಾರ್ಯಕ್ರಮ ಮುಗಿದಮೇಲೆ ಇಡೀ ಮೂರು ಗಂಟೆಗಳ ಕಾಲ ನಚ್ಚಿ ನನ್ನ
ಜತೆಯಲ್ಲಿಯೇ ಕುಳಿತಿದ್ದ. ವಿಶೇಷವೆಂದರೆ ನನಗೂ ತಿಳಿಯದಿದ್ದ ಕೆಲವು ರಾಗಗಳ ಬಗ್ಗೆ ನನಗೆ ಹೇಳುತ್ತಿದ್ದ. ಅವನ ವೈವಿಧ್ಯಮಯ ಆಸಕ್ತಿಯ ಬಗ್ಗೆ ಹೇಳಬೇಕಾದ ಉದಾಹರಣೆಯಲ್ಲಿ ಇದೂ ಒಂದು.

ಇನ್ನೊಂದು ಘಟನೆ ಈಗ ನೆನಪಿಗೆ ಬರುತ್ತಿದೆ. ಒಮ್ಮೆ ’ಫ್ರೀಡಂ ಅಟ್ ಮಿಡ್ ನೈಟ್’ ಪುಸ್ತಕ ಬರೆದ ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯರ್ ಬೆಂಗಳೂರಿಗೆ ಬಂದಿದ್ದರು. ಆ ಪುಸ್ತಕವನ್ನ ಗಂಗಾರಾಮ್ ಬುಕ್‌ಹೌಸ್‌ನಲ್ಲಿ ಕೊಂಡು ಅವರ ಹಸ್ತಾಕ್ಷರವನ್ನ ಹಾಕಿಸಿಕೊಳ್ಳಲು ಅವರು ಉಳಿದುಕೊಂಡಿದ್ದ ಅಶೋಕ ಹೊಟೇಲಿಗೆ ಇಬ್ಬರೂ ನಡೆದುಕೊಂಡು ಹೋದೆವು. ಆದರೆ ಅವರು ನಮ್ಮನ್ನು ಭೇಟಿಮಾಡಲು ನಿರಾಕರಿಸಿದರು. ಅವರು ಆಚೆ ಬರುವವರೆಗೂ ನಾವು ರಿಸೆಪ್ಷನ್ ಬಳಿಯೇ ಕುಳಿತಿದ್ದೆವು. ಅವರು ಹೊರಬಂದಾಗ ನಮಗೆ ತಿಳಿಸಬೇಕೆಂದು ರಿಸೆಪ್ಷನಿಸ್ಟ್ ಅನ್ನು ಕೇಳಿಕೊಂಡಿದ್ದೆವು. ಅವರಿಬ್ಬರೂ ಆಚೆ ಬಂದಾಗ ರಿಸೆಪ್ಷನಿಸ್ಟ್ ನಮಗೆ ಸಂಜ್ಞೆ ಮಾಡಿದ. ತಕ್ಷಣ ಓಡಿ ಹೋಗಿ ಅವರ ಹಸ್ತಾಕ್ಷರವನ್ನ ಪಡೆದವು.

ಇನ್ನೂ ಒಂದು ಘಟನೆ ನೆನಪಿಗೆ ಬರುತ್ತಿದೆ. ಮಲ್ಲೇಶ್ವರದಲ್ಲಿ ಒಬ್ಬ ಉಭಯಕರ್ ಎನ್ನುವ ಎಣ್ಣೆ ಪಾರ್ಟಿ ಗೆಳೆಯ ಇದ್ದ. ನಮ್ಮಿಬ್ಬರಿಗೂ ಸ್ನೇಹಿತ. ಬೆಳಿಗ್ಗೆ ಶುರುಮಾಡಿದರೆ ರಾತ್ರಿ ಬಾರ್ ಮುಚ್ಚುವವರೆಗೂ ಕುಡಿಯುತ್ತಲೇ ಇರುತ್ತಿದ್ದ. ಅದೇ ಕಾರಣಕ್ಕೆ ಲಿವರ್ ಕೆಟ್ಟು ಹೋಗಿ ಅಸು ನೀಗಿದ್ದು ದುರಂತದ ಮತ್ತು ದುಃಖದ ಸಂಗತಿಯಾಗಿತ್ತು. ಅವನ ತಿಥಿಗೆ ಇಬ್ಬರೂ ಹೋಗಿದ್ದೆವು. ಅವನ ತಂದೆ ಪಿಂಡ ತಂದಿಟ್ಟಾಗ ಒಂದು ಕಾಗೆಯೂ ಬರಲಿಲ್ಲ. ನಚ್ಚಿಗೆ ಏನೋ ಹೊಳೆದಂತಾಯಿತು. ಅಂದು ಅಕ್ಟೋಬರ್ ಎರಡು. ಎಲ್ಲಾ ಹೆಂಡದ ಅಂಗಡಿಗಳೂ ಬಂದ್. ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಕಾಡಿ ಬೇಡಿ ನಚ್ಚಿ ಒಂದು ಕ್ವಾರ್ಟರ್ ತಂದು ಪಿಂಡ ಇಟ್ಟ ದೊನ್ನೆಯ ಒಳಗೆ ಸುರಿದ. ತಕ್ಷಣ ಅನೇಕ ಕಾಗೆಗಳು ಬಂದು ಮುತ್ತಿಕೊಂಡವು. ದುಃಖದ ಸನ್ನಿವೇಶದಲ್ಲಿಯೂ ನಚ್ಚಿಯ ಸಮಯ ಮತ್ತು ಹಾಸ್ಯಪ್ರಜ್ಞೆ ನಮ್ಮೆಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.

ಕೆಲವು ವರ್ಷಗಳಿಂದ ಕಣ್ಣಿನಲ್ಲಿ ಡಯಾಬೆಟಿಕ್ ರೆಟಿನೊಪತಿಯಿಂದ ಬಳಲುತ್ತಿದ್ದ ನಚ್ಚಿ ದೃಷ್ಟಿಹೀನರಾಗಿದ್ದರು. ಹಲವು ಬಾರಿ ಅವರ ಮನೆಗೆ ಭೇಟಿ ನೀಡಿದಾಗ ಏನೇನೋ ಓದಿ ಹೇಳುವಂತೆ ನನಗೆ ಹೇಳುತ್ತಿದ್ದ.

ನಚ್ಚಿ ಮಾರ್ಚ್ 1, 2021 ರಂದು ಈ ಇಹ ಲೋಕವನ್ನ ತ್ಯಜಿಸಿದ್ದು, ಆತನ ಪ್ರೀತಿಪಾತ್ರರೆಲ್ಲರಲ್ಲೂ ಅತೀವವಾದ ದುಃಖ ಮಡುವುಗಟ್ಟಿದೆ.

ಶ್ರೀನಾಥ್ ಕೆ
ನಟ ಮತ್ತು ಲೇಖಕ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶ್ರೀನಾಥ್ ಇತ್ತೀಚೆಗೆ ಫ್ಯೋದೊರ್ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...