Homeಮುಖಪುಟಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

ಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

- Advertisement -
- Advertisement -

ಆಪ್ತ ವಲಯದಲ್ಲಿ ನಚ್ಚಿ ಎಂದೇ ಕರೆಸಿಕೊಳ್ಳುತ್ತಿದ್ದ ಪತ್ರಕರ್ತ ಎಂ.ಎನ್. ಚಕ್ರವರ್ತಿ ಅನೇಕ ಬಣ್ಣಗಳಿಂದ ಕೂಡಿದ ಮತ್ತು ಮಲ್ಲೇಶ್ವರದಲ್ಲಿ ಎಲ್ಲ ಕಡೆಗೂ ಹರಡಿಕೊಂಡು ಬೆಳಗುತ್ತಿದ್ದ ಬೃಹತ್ತಾದ ಕಾಮನ ಬಿಲ್ಲು. ನಾನು ಬೆಂಗಳೂರಿಗೆ ಬಂದು ನನ್ನ ಪಿ.ಯು.ಸಿ. ತರಗತಿಗೆ ದಾಖಲಾದಾಗ, ನಾನು ವಾಸವಿದ್ದ ನಮ್ಮಣ್ಣನ ಮನೆಯ ರಸ್ತೆಯಲ್ಲಿಯೇ ನಚ್ಚಿಯ ಮನೆಯೂ ಇದ್ದದ್ದು. ಮೊದಲ ಭೇಟಿಯಲ್ಲಿಯೇ ನಮ್ಮಿಬ್ಬರ ಸ್ನೇಹದ ಸಂಕೋಲೆಗೆ ಪುಷ್ಟಿಕೊಟ್ಟಿದ್ದು ಇಬ್ಬರಲ್ಲಿಯೂ ಇದ್ದ ಮತ್ತು ಹೊಂದಿಕೊಳ್ಳುತ್ತಿದ್ದ ಒಂದೇ ತರಂಗಾಂತರದ ಹಾಸ್ಯ ಪ್ರಜ್ಞೆ. ನನ್ನ ಹಳ್ಳಿಯ ಅನುಭವಗಳನ್ನ ವಿವರಿಸುವಾಗ ಪಟ್ಟಣದಲ್ಲೇ ಬೆಳೆದ ನಚ್ಚಿ ವಿಸ್ಮಯಗೊಳ್ಳುತ್ತಿದ್ದ. ಇದೇ ಕಾರಣಕ್ಕೆ ಆಗತಾನೆ ನನಗೆ ಪರಿಚಯವಾಗುತ್ತಿದ್ದ ನನ್ನ ಸ್ನೇಹಿತರ ಬಳಗ ನನಗೆ ’ಗೌಡ’ ಎಂಬ ನಾಮಕರಣವನ್ನ ಮಾಡಿದ್ದರು.

ಸಂಜೆಯಾದರೆ ಈ ಬಳಗವೆಲ್ಲಾ ನಚ್ಚಿಯ ಮನೆಯ ಮುಂದಿದ್ದ ಖಾಲಿ ಸೈಟಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು. ನಚ್ಚಿಯಲ್ಲಿ ಆಗತಾನೆ ಮೊಳಕೆಯೊಡೆದ ಸಾಹಿತ್ಯಾಭಿಮಾನ ನನ್ನಲ್ಲೂ ಅದು ಅಂಕುರವಾಗುವಂತೆ ಮಾಡಿತು. ಮಲ್ಲೇಶ್ವರದ ಗುಪ್ತ ಲೈಬ್ರರಿಗೆ ಪ್ರತಿ ದಿನವೂ ನಮ್ಮ ಭೇಟಿ ಇರುತ್ತಲೇ ಇತ್ತು. ಆಗ ನಾವು ಓದುತ್ತಿದ್ದದ್ದು ನರಸಿಂಹಯ್ಯನವರ ಪುರುಷೋತ್ತಮನ ಸಾಹಸ, ಪೆರ್ರಿಮೇಸನ್ ಮುಂತಾದ ಪತ್ತೇದಾರಿ ಕಾದಂಬರಿಗಳು ಮತ್ತು ಆಸ್ಟರಿಕ್ಸ್ ಕಾಮಿಕ್ಸ್‌ಗಳು ಇತ್ಯಾದಿ. ಈ ಸಮಯದಲ್ಲಿ ನಚ್ಚಿಗೆ ವಿಶೇಷವಾದ ಆಸಕ್ತಿ ಮೂಡಿದ್ದು ಪತ್ರಿಕೋದ್ಯಮದ ಮೇಲೆ. ನಮ್ಮ ಪದವೀಧರ ಪರೀಕ್ಷೆ ಮುಗಿದ ಮೇಲೆ ನಚ್ಚಿ ಮೂರು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯ ಬರಹಗಾರ ಆಗಿದ್ದರು.

ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಮುಖ್ಯ ವರದಿಗಾರರಾಗಿ ನಿವೃತ್ತಿ ಹೊಂದಿದರು. ಈಗಿನ ದೂರದರ್ಶನದ ಮಹಾನಿರ್ದೇಶಕ ಸೂರ್ಯಪ್ರಕಾಶ್ ಅವರ ಒಡನಾಡಿಯಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಿದ್ದರು.

ಪತ್ರಿಕೋದ್ಯಮದ ಜೊತೆಜೊತೆಗೇ, ನಚ್ಚಿ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಪ್ರಕಾಶ್ ಬೆಳವಾಡಿ ನಿರ್ದೇಶಿಸಿದ್ದ ಗರ್ವ ಧಾರಾವಾಹಿಯ ಸಂಭಾಷಣೆಯನ್ನು ಕೂಡ ಬರೆದಿದ್ದರು. ಇಂತಹ ಅನೇಕ ಘಟನೆಗಳು ನನ್ನ ನೆನಪಿನಲ್ಲಿ ಹಾದುಹೋಗುತ್ತಿವೆ.

ಅಂದು ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಟಿ.ಜೆ.ಎಸ್ ಜಾರ್ಜ್ ಅವರು ಬರೆದ ಎಂ.ಎಸ್. ಸುಬ್ಬಲಕ್ಷ್ಮಿಯವರ ಜೀವನ ಚರಿತ್ರೆಯ ಬಿಡುಗಡೆ. ಅದೇ ಸಂದರ್ಭದಲ್ಲಿ ಸುಧಾ ರಘುನಾಥನ್ ಅವರ ಸಂಗೀತ. ನಾನೂ ಅಲ್ಲಿಗೆ ಹೋಗಿದ್ದೆ. ನಚ್ಚಿಯ ಪತ್ರಿಕೋದ್ಯಮದಲ್ಲಿನ ಆಸಕ್ತಿ ಅವನನ್ನು ಅಲ್ಲಿಗೆ ಕರೆತಂದಿತ್ತು. ನನ್ನ ಸಂಗೀತದ ಆಸಕ್ತಿ ನಾನು ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ್ದು. ಅಂದು ಜಾರ್ಜ್ ಅವರ ಹಸ್ತಾಕ್ಷರವನ್ನು ಎರಡೂ ಪುಸ್ತಕಗಳಿಗೆ ಇಬ್ಬರೂ ಹಾಕಿಸಿಕೊಂಡು ಕೊಂಡೆವು.

ಭಾಷಣದ ಕಾರ್ಯಕ್ರಮ ಮುಗಿದಮೇಲೆ ಇಡೀ ಮೂರು ಗಂಟೆಗಳ ಕಾಲ ನಚ್ಚಿ ನನ್ನ
ಜತೆಯಲ್ಲಿಯೇ ಕುಳಿತಿದ್ದ. ವಿಶೇಷವೆಂದರೆ ನನಗೂ ತಿಳಿಯದಿದ್ದ ಕೆಲವು ರಾಗಗಳ ಬಗ್ಗೆ ನನಗೆ ಹೇಳುತ್ತಿದ್ದ. ಅವನ ವೈವಿಧ್ಯಮಯ ಆಸಕ್ತಿಯ ಬಗ್ಗೆ ಹೇಳಬೇಕಾದ ಉದಾಹರಣೆಯಲ್ಲಿ ಇದೂ ಒಂದು.

ಇನ್ನೊಂದು ಘಟನೆ ಈಗ ನೆನಪಿಗೆ ಬರುತ್ತಿದೆ. ಒಮ್ಮೆ ’ಫ್ರೀಡಂ ಅಟ್ ಮಿಡ್ ನೈಟ್’ ಪುಸ್ತಕ ಬರೆದ ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯರ್ ಬೆಂಗಳೂರಿಗೆ ಬಂದಿದ್ದರು. ಆ ಪುಸ್ತಕವನ್ನ ಗಂಗಾರಾಮ್ ಬುಕ್‌ಹೌಸ್‌ನಲ್ಲಿ ಕೊಂಡು ಅವರ ಹಸ್ತಾಕ್ಷರವನ್ನ ಹಾಕಿಸಿಕೊಳ್ಳಲು ಅವರು ಉಳಿದುಕೊಂಡಿದ್ದ ಅಶೋಕ ಹೊಟೇಲಿಗೆ ಇಬ್ಬರೂ ನಡೆದುಕೊಂಡು ಹೋದೆವು. ಆದರೆ ಅವರು ನಮ್ಮನ್ನು ಭೇಟಿಮಾಡಲು ನಿರಾಕರಿಸಿದರು. ಅವರು ಆಚೆ ಬರುವವರೆಗೂ ನಾವು ರಿಸೆಪ್ಷನ್ ಬಳಿಯೇ ಕುಳಿತಿದ್ದೆವು. ಅವರು ಹೊರಬಂದಾಗ ನಮಗೆ ತಿಳಿಸಬೇಕೆಂದು ರಿಸೆಪ್ಷನಿಸ್ಟ್ ಅನ್ನು ಕೇಳಿಕೊಂಡಿದ್ದೆವು. ಅವರಿಬ್ಬರೂ ಆಚೆ ಬಂದಾಗ ರಿಸೆಪ್ಷನಿಸ್ಟ್ ನಮಗೆ ಸಂಜ್ಞೆ ಮಾಡಿದ. ತಕ್ಷಣ ಓಡಿ ಹೋಗಿ ಅವರ ಹಸ್ತಾಕ್ಷರವನ್ನ ಪಡೆದವು.

ಇನ್ನೂ ಒಂದು ಘಟನೆ ನೆನಪಿಗೆ ಬರುತ್ತಿದೆ. ಮಲ್ಲೇಶ್ವರದಲ್ಲಿ ಒಬ್ಬ ಉಭಯಕರ್ ಎನ್ನುವ ಎಣ್ಣೆ ಪಾರ್ಟಿ ಗೆಳೆಯ ಇದ್ದ. ನಮ್ಮಿಬ್ಬರಿಗೂ ಸ್ನೇಹಿತ. ಬೆಳಿಗ್ಗೆ ಶುರುಮಾಡಿದರೆ ರಾತ್ರಿ ಬಾರ್ ಮುಚ್ಚುವವರೆಗೂ ಕುಡಿಯುತ್ತಲೇ ಇರುತ್ತಿದ್ದ. ಅದೇ ಕಾರಣಕ್ಕೆ ಲಿವರ್ ಕೆಟ್ಟು ಹೋಗಿ ಅಸು ನೀಗಿದ್ದು ದುರಂತದ ಮತ್ತು ದುಃಖದ ಸಂಗತಿಯಾಗಿತ್ತು. ಅವನ ತಿಥಿಗೆ ಇಬ್ಬರೂ ಹೋಗಿದ್ದೆವು. ಅವನ ತಂದೆ ಪಿಂಡ ತಂದಿಟ್ಟಾಗ ಒಂದು ಕಾಗೆಯೂ ಬರಲಿಲ್ಲ. ನಚ್ಚಿಗೆ ಏನೋ ಹೊಳೆದಂತಾಯಿತು. ಅಂದು ಅಕ್ಟೋಬರ್ ಎರಡು. ಎಲ್ಲಾ ಹೆಂಡದ ಅಂಗಡಿಗಳೂ ಬಂದ್. ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಕಾಡಿ ಬೇಡಿ ನಚ್ಚಿ ಒಂದು ಕ್ವಾರ್ಟರ್ ತಂದು ಪಿಂಡ ಇಟ್ಟ ದೊನ್ನೆಯ ಒಳಗೆ ಸುರಿದ. ತಕ್ಷಣ ಅನೇಕ ಕಾಗೆಗಳು ಬಂದು ಮುತ್ತಿಕೊಂಡವು. ದುಃಖದ ಸನ್ನಿವೇಶದಲ್ಲಿಯೂ ನಚ್ಚಿಯ ಸಮಯ ಮತ್ತು ಹಾಸ್ಯಪ್ರಜ್ಞೆ ನಮ್ಮೆಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.

ಕೆಲವು ವರ್ಷಗಳಿಂದ ಕಣ್ಣಿನಲ್ಲಿ ಡಯಾಬೆಟಿಕ್ ರೆಟಿನೊಪತಿಯಿಂದ ಬಳಲುತ್ತಿದ್ದ ನಚ್ಚಿ ದೃಷ್ಟಿಹೀನರಾಗಿದ್ದರು. ಹಲವು ಬಾರಿ ಅವರ ಮನೆಗೆ ಭೇಟಿ ನೀಡಿದಾಗ ಏನೇನೋ ಓದಿ ಹೇಳುವಂತೆ ನನಗೆ ಹೇಳುತ್ತಿದ್ದ.

ನಚ್ಚಿ ಮಾರ್ಚ್ 1, 2021 ರಂದು ಈ ಇಹ ಲೋಕವನ್ನ ತ್ಯಜಿಸಿದ್ದು, ಆತನ ಪ್ರೀತಿಪಾತ್ರರೆಲ್ಲರಲ್ಲೂ ಅತೀವವಾದ ದುಃಖ ಮಡುವುಗಟ್ಟಿದೆ.

ಶ್ರೀನಾಥ್ ಕೆ
ನಟ ಮತ್ತು ಲೇಖಕ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶ್ರೀನಾಥ್ ಇತ್ತೀಚೆಗೆ ಫ್ಯೋದೊರ್ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...