Homeಮುಖಪುಟಬಹು ಜನಾಂಗೀಯ ಸಮಾಜ, ಹೆಚ್ಚುತ್ತಿರುವ ಆಕಾಂಕ್ಷೆಗಳು ಮತ್ತು ಪಲಾಯನವಾದಿ ಆಡಳಿತ; ಮಣಿಪುರದಲ್ಲಿ 2023ರ ಕುಕಿ-ಮೈತ್‌ಯಿ ಘರ್ಷಣೆಗಳು

ಬಹು ಜನಾಂಗೀಯ ಸಮಾಜ, ಹೆಚ್ಚುತ್ತಿರುವ ಆಕಾಂಕ್ಷೆಗಳು ಮತ್ತು ಪಲಾಯನವಾದಿ ಆಡಳಿತ; ಮಣಿಪುರದಲ್ಲಿ 2023ರ ಕುಕಿ-ಮೈತ್‌ಯಿ ಘರ್ಷಣೆಗಳು

- Advertisement -
- Advertisement -

ಮೇ2023ರಲ್ಲಿ ಮಣಿಪುರದಲ್ಲಿ ಕುಕಿಗಳು ಮತ್ತು ಮೈತ್‌ಯಿಯರು ಪರಸ್ಪರ ಹೊಡೆದಾಡಿಕೊಂಡದ್ದು ದುರದೃಷ್ಟಕರ ಸರಣಿ ಘಟನೆಗಳಾಗಿವೆ. ಆದರೂ, ಇದಕ್ಕೆ ಮುನ್ನುಡಿ ಬರೆದ ರಾಜಕೀಯ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳು, ಕೆಸರೆರಚಾಟಗಳೆಲ್ಲವೂ ಮುಂದುವರಿಯುತ್ತಲೇ ಇವೆ. ಈ ರೀತಿಯ ಸಂದರ್ಭದಲ್ಲಿ, ನಡೆದದ್ದೇನು ಹಾಗೂ ಇವೆಲ್ಲದರ ಒಟ್ಟು ಪರಿಣಾಮವೇನು ಎಂಬುದು ಸಾಮಾನ್ಯವಾಗಿ ನಮ್ಮ ತಿಳಿವಳಿಕೆಯನ್ನು ರೂಪಿಸುತ್ತದೆಯಾದರೂ, ಪ್ರಸ್ತುತ ಬಿಕ್ಕಟ್ಟನ್ನು ಅರ್ಥೈಸಿ ವಿವರಿಸಲು ಇಂತಹ ವಿಧಾನಗಳು ಸೂಕ್ತವಲ್ಲ ಎಂದು ನಾನು ದೃಢವಾಗಿ ನಂಬಿದ್ದೇನೆ. ಇದಕ್ಕಾಗಿ ನಾವು ಹಿಂದಿನ ಕೆಲವು ದಶಕಗಳಲ್ಲಿ ಜನಾಂಗೀಯತೆಗಳು ರೂಪುಗೊಂಡ ಬಗೆ, ಎಲ್ಲಾ ಜನಾಂಗಗಳಲ್ಲಿನ ಜನರಲ್ಲಿ ರೂಪಿತವಾಗಿರುವ ಹೊಸ ಬೆಸುಗೆ ಭಾವಗಳು, ಪ್ರತಿ ಜನಾಂಗದ ಸಂಖ್ಯಾಬಲಗಳು ಹಾಗೂ ಅವುಗಳ ಗುಣಾತ್ಮಕ ಏರಿಳಿತಗಳು ಹಾಗೂ ಒಟ್ಟಾರೆಯಾಗಿ ಆರ್ಥಿಕತೆ ಮತ್ತು ಸಮಾಜದಲ್ಲಿ ಉಂಟಾಗುತ್ತಿರುವ ಪಲ್ಲಟಗಳನ್ನು ಗಮನಿಸಿದರೆ ಮಾತ್ರ ಇದನ್ನು ಸರಿಯಾಗಿ ಅರ್ಥೈಸಬಹುದಾಗಿದೆ.

ಮಣಿಪುರದ ಉಚ್ಚ ನ್ಯಾಯಾಲಯವು, ಮೈತ್‌ಯಿ ಸಮುದಾಯವನ್ನು ಭಾರತದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವಂತೆ ಸರ್ಕಾರಕ್ಕೆ ನೀಡಿದ ಆದೇಶದಾಚೆಗೆ ಮಣಿಪುರದಲ್ಲಿ ನಡೆದ ಘಟನಾವಳಿಗಳನ್ನು ದೂರದೃಷ್ಟಿ ಮತ್ತು ಸಮಗ್ರತೆಯೊಂದಿಗೆ ವಿಶ್ಲೇಷಿಸಲು ಬಯಸುತ್ತೇನೆ. ಮೈತ್‌ಯಿ ಸಮುದಾಯವನ್ನು ಭಾರತದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂಬ ಒತ್ತಾಯ ಮತ್ತು ಅದಕ್ಕೆ ಪೂರಕವಾದ ಉಚ್ಚ ನ್ಯಾಯಾಲಯದ ಆದೇಶ ಮಾತ್ರವೇ ಇತ್ತೀಚಿನ ಘರ್ಷಣೆಗಳಿಗೆ ಕಾರಣವಲ್ಲ.

ಆದ್ದರಿಂದ, ಇದಕ್ಕೆ ಎಡೆ ಮಾಡಿಕೊಡಬಹುದಾದ ಸಂಭವನೀಯ ಕಾರಣಗಳನ್ನು ಗಮನಿಸೋಣ. ಕಳೆದ ಎರಡು ದಶಕಗಳಲ್ಲಿ, ಕುಕಿಗಳಲ್ಲಿನ ಆರೋಗ್ಯಪೂರ್ಣ, ಸಕಾರಾತ್ಮಕ ಸಾಮಾಜಿಕ ಶಕ್ತಿಯು ಜನರ ಕಣ್ಣುಗಳನ್ನು ಸೆಳೆದಿವೆ. ಕುಕಿ ಯುವಕರು ಮತ್ತು ಕುಕಿ ಯುವತಿಯರನ್ನು ಶೈಕ್ಷಣಿಕ ಕೋರ್ಸುಗಳಿಂದ ಹಿಡಿದು ವೃತ್ತಿಪರ ಪದವಿಗಳವರೆಗೆ ಎಲ್ಲಾ ಕಡೆಗಳಲ್ಲಿಯೂ ನಾವಿಂದು ಹೆಚ್ಚಾಗಿ ಕಾಣುತ್ತಿದ್ದೇವೆ. ಇದು ಅವರ ಸಮುದಾಯದ ಸಾಮಾಜಿಕ ಆಕಾಂಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಪ್ರಕ್ರಿಯೆಯು ಖಂಡಿತವಾಗಿಯೂ ಅವರ ನಡವಳಿಕೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸಿರಬೇಕು. ಅಲೆಮಾರಿ ಸಮುದಾಯವಾಗಿದ್ದ ಕುಕಿಗಳು ಕಳೆದ ಮೂವತ್ತು/ನಲವತ್ತು ವರ್ಷಗಳಲ್ಲಿ, ತಮ್ಮ ಹಿಂದಿನ ಜೀವನಶೈಲಿ ಮತ್ತು ಸಾಮಾಜಿಕ ಪದ್ಧತಿಗಿಂತ ಭಿನ್ನವಾದ ರೀತಿಯಲ್ಲಿ ಅಂದರೆ ಶಾಶ್ವತವಾಗಿ ಒಂದು ಸ್ಥಳದಲ್ಲಿ ನೆಲೆಸಲು ಆದ್ಯತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ನಾವು ಗಮನಿಸಬಹುದು. ನೆಲೆಯನ್ನು ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿನ ಗಣನೀಯ ಕುಸಿತವು ಅವರ ಗಮನವನ್ನು ಸರ್ಕಾರದತ್ತ ಸೆಳೆದಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳ ಭೌಗೋಳಿಕ ಗಾತ್ರವು ಈ ಹಿಂದೆಯಂತೆಯೇ, ಇಂದೂ ಕೂಡ ಹೆಚ್ಚುಕಮ್ಮಿ ಒಂದೇ ಆಗಿದ್ದರೂ, ಅಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಮರಗಳು ಅಧಿಕಾರಗಳ ಮತ್ತು ಮೇಲಧಿಕಾರಿಗಳ ಸ್ವಾರ್ಥಕ್ಕೆ ಸುಲಭ ಗುರಿಗಳಾಗಿವೆ. ಆದ್ದರಿಂದ ಕುಕಿಗಳು ಈ ಪ್ರದೇಶಗಳಲ್ಲಿ ನೆಲೆಗೊಳ್ಳಲು ತಮ್ಮ ಆದ್ಯತೆಯನ್ನು ವ್ಯಕ್ತಪಡಿಸಿದಾಗ, ಅದನ್ನು ನಿರಾಕರಿಸುವ ನೈತಿಕ ನೆಲೆಯು ಸ್ವಾಭಾವಿಕವಾಗಿ ದುರ್ಬಲವಾಗಿರುತ್ತದೆ.

ಇದನ್ನೂ ಓದಿ: ಎಲ್ಲ ವಿಷಯಗಳಲ್ಲಿ ಕೇಂದ್ರ ಮೂಗು ತೂರಿಸುವಂತಿಲ್ಲ; ದೆಹಲಿ ಸರ್ಕಾರದ ಪರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನೆರೆಯ ರಾಷ್ಟ್ರವಾದ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ಸ್ಥಾಪನೆಯೂ ಕೂಡ ಈ ವಾಸ್ತವತೆಯೊಂದಿಗೆ ಬೆಸೆದುಕೊಂಡಿದೆ. ಗಡಿಯ ಎರಡೂ ಕಡೆಗಳಲ್ಲಿ ನೆಲೆಸಿರುವ ಕುಕಿಗಳು ಚೀನಾದ ಉತ್ತೇಜನದೊಂದಿಗೆ ತಮ್ಮ ನಡುವಿನ ಸಂವಹನವನ್ನು ಗಟ್ಟಿಗೊಳಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂಬ ಸೂಚನೆಗಳೂ ಸಿಗುತ್ತಲಿವೆ. ಇಲ್ಲಿನ ಗಡಿಗಳು ಭದ್ರವಿಲ್ಲದ ಕಾರಣಕ್ಕೆ ಹಾಗೂ ಮಹತ್ವದ ರಾಜಕೀಯ ಬೆಳವಣಿಗೆಗಳು ಗಡಿಯುದ್ದಕ್ಕೂ ನಡೆಯುತ್ತಿರುವ ಹಿನ್ನಲೆಯಲ್ಲಿ, ಭಾರತವು ಈಶಾನ್ಯ ರಾಜ್ಯಗಳು ಹಾಗೂ ಅದರಲ್ಲೂ ವಿಶೇಷವಾಗಿ ಮಣಿಪುರವನ್ನು ಗಮನದಲ್ಲಿರಿಸಿ ಮ್ಯಾನ್ಮಾರ್‌ನೊಂದಿಗೆ ವ್ಯವಹರಿಸಲು ನೀತಿಯೊಂದನ್ನು ಹೊಂದುವುದು ಅತ್ಯಂತ ಅನಿವಾರ್ಯವೆನಿಸಿದೆ. ಆದರೆ, ಮ್ಯಾನ್ಮಾರಿನೊಟ್ಟಿಗೆ ವ್ಯವಹರಿಸಲು ಸೂಕ್ತವಾದ ನೀತಿಯೊಂದನ್ನು ಭಾರತವು ಹೊಂದಿದೆಯೇ? ಇಲ್ಲ.

ಮಣಿಪುರದ ಸಮಾಜವನ್ನು ರಚಿಸುವ ವಿಭಿನ್ನ ಜನಾಂಗೀಯ ಗುಂಪುಗಳೊಂದಿಗೆ ಮತ್ತು ಅಂತರ-ಜನಾಂಗೀಯ ಸಂಖ್ಯಾಬಲಗಳು ಮತ್ತು ಈ ಜನಾಂಗಗಳ ಗುಣಾತ್ಮಕ ಆಯಾಮಗಳು ಗಮನಾರ್ಹವಾಗಿ ಬದಲಾಗುತ್ತಿರುವುದರಿಂದ, ದೇಶೀಯ ಮತ್ತು ಅಂತಾರಾಷ್ಟ್ರೀಯ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಮನದಲ್ಲಿರಿಸಿಕೊಂಡು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳನ್ನು ಪ್ರತಿಬಿಂಬಿಸುವಂತಹ ಜನಸಂಖ್ಯಾ (ಜನಸಂಖ್ಯೆ) ನೀತಿಯನ್ನು ರೂಪಿಸಿಕೊಳ್ಳುವುದು ಈ ಕಾಲದ ತುರ್ತಾಗಿದೆ. ಹಾಗಾದರೆ, ಭಾರತವಾಗಲೀ, ಮಣಿಪುರವಾಗಲೀ ಈ ರೀತಿಯ ನೀತಿಯೊಂದನ್ನು ಹೊಂದಿದೆಯೇ? ಇಲ್ಲ.

ವಿವಿಧ ಆಸ್ತಿ-ಹಕ್ಕುಗಳ ಆಡಳಿತ ವ್ಯವಸ್ಥೆಗಳಿರುವ ಮಣಿಪುರದಂತಹ ರಾಜ್ಯಗಳು ಸಣ್ಣ ಪ್ರದೇಶದಲ್ಲಿ ವಿವಿಧ ಜನಾಂಗಗಳ ಹಿತಾಸಕ್ತಿಗಳನ್ನು ಕಾಪಾಡಿ ಎಲ್ಲರಿಗೂ ನ್ಯಾಯಸಮ್ಮತ ಎನಿಸುವಂತಹ ಭೂನೀತಿಯನ್ನು ರೂಪಿಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ. ಹಾಗಾದರೆ, ಮಣಿಪುರವು ತನ್ನದೇ ಆದ ಭೂ ನೀತಿಯನ್ನು ಹೊಂದಿದೆಯೇ? ಇಲ್ಲ.

ಕುಕಿಗಳು ಮಣಿಪುರದ ಸಾಮಾಜಿಕ ಸಂರಚನೆಯೊಂದಿಗೆ ಬಹಳ ಹಿಂದಿನಿಂದಲೂ ಬೆಸೆದುಕೊಂಡಿರುವ ಕಾರಣಕ್ಕೆ ಮಣಿಪುರದೊಂದಿಗಿನ ಕುಕಿಗಳ ಸಾಮಾಜಿಕ ಭಾಗವಹಿಸುವಿಕೆ ಹಾಗೂ ಮೈತ್ರಿಯು ಇತರೆಡೆಗಳಿಗಿಂತ ಬಲಿಷ್ಟವಾಗಿದೆ.

ಜನಾಂಗೀಯತೆಯನ್ನೇ ಹೆಚ್ಚಾಗಿ ಆಧರಿಸಿದ ಸಮಾಜದಲ್ಲಿ, ಇತ್ತೀಚಿನ ದಿನಗಳಲ್ಲಿ ಧರ್ಮಾಧಾರಿತ ರಾಜಕೀಯ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿದೆ.

ಈ ಪ್ರಕ್ರಿಯೆಗಳೆಲ್ಲವೂ ನಡೆಯುತ್ತಿರುವುದು ಅಭಿವೃದ್ಧಿಯ ಬಗ್ಗೆ ಯಾವುದೇ ದೀರ್ಘಕಾಲೀನ ಚಿಂತನೆಗಳೇ ಇಲ್ಲದಿರುವಾಗ. ಅಭಿವೃದ್ಧಿಯ ಲಾಭವು ಎಲ್ಲರೊಂದಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವ ಸಾಮಾಜಿಕ-ರಾಜಕೀಯ ಪ್ರಯತ್ನಗಳೇ ಕಾಣಸಿಗದಂತಹ ಸಂದರ್ಭದಲ್ಲಿ. ವಿವಿಧ ಗುಂಪುಗಳು, ಅವುಗಳ ನಾಯಕರುಗಳು ತಮ್ಮ ಹಿತಾಸಕ್ತಿಗಾಗಿ, ತಮ್ಮೊಬ್ಬರ ಉನ್ನತಿಗಾಗಿ ಕಸರತ್ತು ನಡೆಸಲು ಇದು ಅನುಕೂಲಕರ ವಾತಾವರಣವಾಗಿದೆ. ಕಳೆದ ಕೆಲವು ತಿಂಗಳುಗಳಿಂದಲೂ, ವಿವಿಧ ಜನಾಂಗೀಯ ಗುಂಪುಗಳಿಂದಲೂ – ಅದು ಕುಕಿಗಳೇ ಇರಬಹುದು ಅಥವಾ ಮೈತ್‌ಯಿಗಳೇ ಇರಬಹುದು – ಪ್ರಚೋದನೆಗೆ ಎಡೆಮಾಡಿಕೊಡುವ ಹೇಳಿಕೆಗಳು ಬಹಳವಾಗಿಯೇ ಕೇಳಿಬರುತ್ತಿತ್ತು. ಆಡಳಿತಾಂಗವು ಮಧ್ಯಪ್ರವೇಶಿಸಿ ಅಪೇಕ್ಷಿತ ಕ್ರಮಗಳನ್ನು ಕೈಗೊಳ್ಳಲಿಕ್ಕೆ ಇದು ಸೂಕ್ತ ಸಮಯವಾಗಿದೆ. ಸರಕಾರ ಆಧಿಕಾರ ವಹಿಸಿರುವಾಗಲೂ ಆಡಳಿತ ಮಾತ್ರ ಕಾಣಿಸುತ್ತಲೇ ಇಲ್ಲ.

ಹೀಗಾಗಿ, ಅತ್ಯಗತ್ಯವೆನಿಸುವ ನೀತಿಗಳು ಮತ್ತು ಆಡಳಿತ ವ್ಯವಸ್ಥೆ; ಇವೆರಡರ ಅನುಪಸ್ಥಿತಿಯು ಮಣಿಪುರದಲ್ಲಿ ಅಂತರ-ಜನಾಂಗೀಯ ಸಂಘರ್ಷದ ಬಿಕ್ಕಟ್ಟಿಗೆ ಕಾರಣವಾಗಿದೆ. ಆದರೂ ಅತಿಸಹಜವಾಗಿ ಜನರ ರಕ್ತದಲ್ಲಿಯೇ ಹರಿದುಬಂದಿರುವ ಜನಾಂಗೀಯತೆಗಳನ್ನೂ ಮೀರಿ ಬೆರೆಯುವ – ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳುವ ಹಾಗೂ ಹಂಚಿ ತಿನ್ನುವ ಗುಣಗಳು ಸುಸ್ಥಿರತೆಯನ್ನು ತನ್ನ ಒಡಲಿನಲ್ಲಿಯೇ ಅಡಗಿಸಿಕೊಂಡಿದೆ.

ಕನ್ನಡಕ್ಕೆ : ಶಶಾಂಕ್

ಪ್ರೊ. ಅಮರ್ ಯುಮ್ನಮ್

ಪ್ರೊ. ಅಮರ್ ಯುಮ್ನಮ್
ಫೆಲೋ/ ವಿಸಿಟಿಂಗ್ ಪ್ರಾಧ್ಯಾಪಕರು, ಸೆಂಟರ್ ಫಾರ್ ಇಕನಾಮಿಕ್ ಮತ್ತು ಸೋಶಿಯಲ್ ಸ್ಟಡೀಸ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...