Homeಮುಖಪುಟಬಹು ಜನಾಂಗೀಯ ಸಮಾಜ, ಹೆಚ್ಚುತ್ತಿರುವ ಆಕಾಂಕ್ಷೆಗಳು ಮತ್ತು ಪಲಾಯನವಾದಿ ಆಡಳಿತ; ಮಣಿಪುರದಲ್ಲಿ 2023ರ ಕುಕಿ-ಮೈತ್‌ಯಿ ಘರ್ಷಣೆಗಳು

ಬಹು ಜನಾಂಗೀಯ ಸಮಾಜ, ಹೆಚ್ಚುತ್ತಿರುವ ಆಕಾಂಕ್ಷೆಗಳು ಮತ್ತು ಪಲಾಯನವಾದಿ ಆಡಳಿತ; ಮಣಿಪುರದಲ್ಲಿ 2023ರ ಕುಕಿ-ಮೈತ್‌ಯಿ ಘರ್ಷಣೆಗಳು

- Advertisement -
- Advertisement -

ಮೇ2023ರಲ್ಲಿ ಮಣಿಪುರದಲ್ಲಿ ಕುಕಿಗಳು ಮತ್ತು ಮೈತ್‌ಯಿಯರು ಪರಸ್ಪರ ಹೊಡೆದಾಡಿಕೊಂಡದ್ದು ದುರದೃಷ್ಟಕರ ಸರಣಿ ಘಟನೆಗಳಾಗಿವೆ. ಆದರೂ, ಇದಕ್ಕೆ ಮುನ್ನುಡಿ ಬರೆದ ರಾಜಕೀಯ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳು, ಕೆಸರೆರಚಾಟಗಳೆಲ್ಲವೂ ಮುಂದುವರಿಯುತ್ತಲೇ ಇವೆ. ಈ ರೀತಿಯ ಸಂದರ್ಭದಲ್ಲಿ, ನಡೆದದ್ದೇನು ಹಾಗೂ ಇವೆಲ್ಲದರ ಒಟ್ಟು ಪರಿಣಾಮವೇನು ಎಂಬುದು ಸಾಮಾನ್ಯವಾಗಿ ನಮ್ಮ ತಿಳಿವಳಿಕೆಯನ್ನು ರೂಪಿಸುತ್ತದೆಯಾದರೂ, ಪ್ರಸ್ತುತ ಬಿಕ್ಕಟ್ಟನ್ನು ಅರ್ಥೈಸಿ ವಿವರಿಸಲು ಇಂತಹ ವಿಧಾನಗಳು ಸೂಕ್ತವಲ್ಲ ಎಂದು ನಾನು ದೃಢವಾಗಿ ನಂಬಿದ್ದೇನೆ. ಇದಕ್ಕಾಗಿ ನಾವು ಹಿಂದಿನ ಕೆಲವು ದಶಕಗಳಲ್ಲಿ ಜನಾಂಗೀಯತೆಗಳು ರೂಪುಗೊಂಡ ಬಗೆ, ಎಲ್ಲಾ ಜನಾಂಗಗಳಲ್ಲಿನ ಜನರಲ್ಲಿ ರೂಪಿತವಾಗಿರುವ ಹೊಸ ಬೆಸುಗೆ ಭಾವಗಳು, ಪ್ರತಿ ಜನಾಂಗದ ಸಂಖ್ಯಾಬಲಗಳು ಹಾಗೂ ಅವುಗಳ ಗುಣಾತ್ಮಕ ಏರಿಳಿತಗಳು ಹಾಗೂ ಒಟ್ಟಾರೆಯಾಗಿ ಆರ್ಥಿಕತೆ ಮತ್ತು ಸಮಾಜದಲ್ಲಿ ಉಂಟಾಗುತ್ತಿರುವ ಪಲ್ಲಟಗಳನ್ನು ಗಮನಿಸಿದರೆ ಮಾತ್ರ ಇದನ್ನು ಸರಿಯಾಗಿ ಅರ್ಥೈಸಬಹುದಾಗಿದೆ.

ಮಣಿಪುರದ ಉಚ್ಚ ನ್ಯಾಯಾಲಯವು, ಮೈತ್‌ಯಿ ಸಮುದಾಯವನ್ನು ಭಾರತದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವಂತೆ ಸರ್ಕಾರಕ್ಕೆ ನೀಡಿದ ಆದೇಶದಾಚೆಗೆ ಮಣಿಪುರದಲ್ಲಿ ನಡೆದ ಘಟನಾವಳಿಗಳನ್ನು ದೂರದೃಷ್ಟಿ ಮತ್ತು ಸಮಗ್ರತೆಯೊಂದಿಗೆ ವಿಶ್ಲೇಷಿಸಲು ಬಯಸುತ್ತೇನೆ. ಮೈತ್‌ಯಿ ಸಮುದಾಯವನ್ನು ಭಾರತದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂಬ ಒತ್ತಾಯ ಮತ್ತು ಅದಕ್ಕೆ ಪೂರಕವಾದ ಉಚ್ಚ ನ್ಯಾಯಾಲಯದ ಆದೇಶ ಮಾತ್ರವೇ ಇತ್ತೀಚಿನ ಘರ್ಷಣೆಗಳಿಗೆ ಕಾರಣವಲ್ಲ.

ಆದ್ದರಿಂದ, ಇದಕ್ಕೆ ಎಡೆ ಮಾಡಿಕೊಡಬಹುದಾದ ಸಂಭವನೀಯ ಕಾರಣಗಳನ್ನು ಗಮನಿಸೋಣ. ಕಳೆದ ಎರಡು ದಶಕಗಳಲ್ಲಿ, ಕುಕಿಗಳಲ್ಲಿನ ಆರೋಗ್ಯಪೂರ್ಣ, ಸಕಾರಾತ್ಮಕ ಸಾಮಾಜಿಕ ಶಕ್ತಿಯು ಜನರ ಕಣ್ಣುಗಳನ್ನು ಸೆಳೆದಿವೆ. ಕುಕಿ ಯುವಕರು ಮತ್ತು ಕುಕಿ ಯುವತಿಯರನ್ನು ಶೈಕ್ಷಣಿಕ ಕೋರ್ಸುಗಳಿಂದ ಹಿಡಿದು ವೃತ್ತಿಪರ ಪದವಿಗಳವರೆಗೆ ಎಲ್ಲಾ ಕಡೆಗಳಲ್ಲಿಯೂ ನಾವಿಂದು ಹೆಚ್ಚಾಗಿ ಕಾಣುತ್ತಿದ್ದೇವೆ. ಇದು ಅವರ ಸಮುದಾಯದ ಸಾಮಾಜಿಕ ಆಕಾಂಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಪ್ರಕ್ರಿಯೆಯು ಖಂಡಿತವಾಗಿಯೂ ಅವರ ನಡವಳಿಕೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸಿರಬೇಕು. ಅಲೆಮಾರಿ ಸಮುದಾಯವಾಗಿದ್ದ ಕುಕಿಗಳು ಕಳೆದ ಮೂವತ್ತು/ನಲವತ್ತು ವರ್ಷಗಳಲ್ಲಿ, ತಮ್ಮ ಹಿಂದಿನ ಜೀವನಶೈಲಿ ಮತ್ತು ಸಾಮಾಜಿಕ ಪದ್ಧತಿಗಿಂತ ಭಿನ್ನವಾದ ರೀತಿಯಲ್ಲಿ ಅಂದರೆ ಶಾಶ್ವತವಾಗಿ ಒಂದು ಸ್ಥಳದಲ್ಲಿ ನೆಲೆಸಲು ಆದ್ಯತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ನಾವು ಗಮನಿಸಬಹುದು. ನೆಲೆಯನ್ನು ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿನ ಗಣನೀಯ ಕುಸಿತವು ಅವರ ಗಮನವನ್ನು ಸರ್ಕಾರದತ್ತ ಸೆಳೆದಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳ ಭೌಗೋಳಿಕ ಗಾತ್ರವು ಈ ಹಿಂದೆಯಂತೆಯೇ, ಇಂದೂ ಕೂಡ ಹೆಚ್ಚುಕಮ್ಮಿ ಒಂದೇ ಆಗಿದ್ದರೂ, ಅಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಮರಗಳು ಅಧಿಕಾರಗಳ ಮತ್ತು ಮೇಲಧಿಕಾರಿಗಳ ಸ್ವಾರ್ಥಕ್ಕೆ ಸುಲಭ ಗುರಿಗಳಾಗಿವೆ. ಆದ್ದರಿಂದ ಕುಕಿಗಳು ಈ ಪ್ರದೇಶಗಳಲ್ಲಿ ನೆಲೆಗೊಳ್ಳಲು ತಮ್ಮ ಆದ್ಯತೆಯನ್ನು ವ್ಯಕ್ತಪಡಿಸಿದಾಗ, ಅದನ್ನು ನಿರಾಕರಿಸುವ ನೈತಿಕ ನೆಲೆಯು ಸ್ವಾಭಾವಿಕವಾಗಿ ದುರ್ಬಲವಾಗಿರುತ್ತದೆ.

ಇದನ್ನೂ ಓದಿ: ಎಲ್ಲ ವಿಷಯಗಳಲ್ಲಿ ಕೇಂದ್ರ ಮೂಗು ತೂರಿಸುವಂತಿಲ್ಲ; ದೆಹಲಿ ಸರ್ಕಾರದ ಪರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನೆರೆಯ ರಾಷ್ಟ್ರವಾದ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ಸ್ಥಾಪನೆಯೂ ಕೂಡ ಈ ವಾಸ್ತವತೆಯೊಂದಿಗೆ ಬೆಸೆದುಕೊಂಡಿದೆ. ಗಡಿಯ ಎರಡೂ ಕಡೆಗಳಲ್ಲಿ ನೆಲೆಸಿರುವ ಕುಕಿಗಳು ಚೀನಾದ ಉತ್ತೇಜನದೊಂದಿಗೆ ತಮ್ಮ ನಡುವಿನ ಸಂವಹನವನ್ನು ಗಟ್ಟಿಗೊಳಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂಬ ಸೂಚನೆಗಳೂ ಸಿಗುತ್ತಲಿವೆ. ಇಲ್ಲಿನ ಗಡಿಗಳು ಭದ್ರವಿಲ್ಲದ ಕಾರಣಕ್ಕೆ ಹಾಗೂ ಮಹತ್ವದ ರಾಜಕೀಯ ಬೆಳವಣಿಗೆಗಳು ಗಡಿಯುದ್ದಕ್ಕೂ ನಡೆಯುತ್ತಿರುವ ಹಿನ್ನಲೆಯಲ್ಲಿ, ಭಾರತವು ಈಶಾನ್ಯ ರಾಜ್ಯಗಳು ಹಾಗೂ ಅದರಲ್ಲೂ ವಿಶೇಷವಾಗಿ ಮಣಿಪುರವನ್ನು ಗಮನದಲ್ಲಿರಿಸಿ ಮ್ಯಾನ್ಮಾರ್‌ನೊಂದಿಗೆ ವ್ಯವಹರಿಸಲು ನೀತಿಯೊಂದನ್ನು ಹೊಂದುವುದು ಅತ್ಯಂತ ಅನಿವಾರ್ಯವೆನಿಸಿದೆ. ಆದರೆ, ಮ್ಯಾನ್ಮಾರಿನೊಟ್ಟಿಗೆ ವ್ಯವಹರಿಸಲು ಸೂಕ್ತವಾದ ನೀತಿಯೊಂದನ್ನು ಭಾರತವು ಹೊಂದಿದೆಯೇ? ಇಲ್ಲ.

ಮಣಿಪುರದ ಸಮಾಜವನ್ನು ರಚಿಸುವ ವಿಭಿನ್ನ ಜನಾಂಗೀಯ ಗುಂಪುಗಳೊಂದಿಗೆ ಮತ್ತು ಅಂತರ-ಜನಾಂಗೀಯ ಸಂಖ್ಯಾಬಲಗಳು ಮತ್ತು ಈ ಜನಾಂಗಗಳ ಗುಣಾತ್ಮಕ ಆಯಾಮಗಳು ಗಮನಾರ್ಹವಾಗಿ ಬದಲಾಗುತ್ತಿರುವುದರಿಂದ, ದೇಶೀಯ ಮತ್ತು ಅಂತಾರಾಷ್ಟ್ರೀಯ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಮನದಲ್ಲಿರಿಸಿಕೊಂಡು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳನ್ನು ಪ್ರತಿಬಿಂಬಿಸುವಂತಹ ಜನಸಂಖ್ಯಾ (ಜನಸಂಖ್ಯೆ) ನೀತಿಯನ್ನು ರೂಪಿಸಿಕೊಳ್ಳುವುದು ಈ ಕಾಲದ ತುರ್ತಾಗಿದೆ. ಹಾಗಾದರೆ, ಭಾರತವಾಗಲೀ, ಮಣಿಪುರವಾಗಲೀ ಈ ರೀತಿಯ ನೀತಿಯೊಂದನ್ನು ಹೊಂದಿದೆಯೇ? ಇಲ್ಲ.

ವಿವಿಧ ಆಸ್ತಿ-ಹಕ್ಕುಗಳ ಆಡಳಿತ ವ್ಯವಸ್ಥೆಗಳಿರುವ ಮಣಿಪುರದಂತಹ ರಾಜ್ಯಗಳು ಸಣ್ಣ ಪ್ರದೇಶದಲ್ಲಿ ವಿವಿಧ ಜನಾಂಗಗಳ ಹಿತಾಸಕ್ತಿಗಳನ್ನು ಕಾಪಾಡಿ ಎಲ್ಲರಿಗೂ ನ್ಯಾಯಸಮ್ಮತ ಎನಿಸುವಂತಹ ಭೂನೀತಿಯನ್ನು ರೂಪಿಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ. ಹಾಗಾದರೆ, ಮಣಿಪುರವು ತನ್ನದೇ ಆದ ಭೂ ನೀತಿಯನ್ನು ಹೊಂದಿದೆಯೇ? ಇಲ್ಲ.

ಕುಕಿಗಳು ಮಣಿಪುರದ ಸಾಮಾಜಿಕ ಸಂರಚನೆಯೊಂದಿಗೆ ಬಹಳ ಹಿಂದಿನಿಂದಲೂ ಬೆಸೆದುಕೊಂಡಿರುವ ಕಾರಣಕ್ಕೆ ಮಣಿಪುರದೊಂದಿಗಿನ ಕುಕಿಗಳ ಸಾಮಾಜಿಕ ಭಾಗವಹಿಸುವಿಕೆ ಹಾಗೂ ಮೈತ್ರಿಯು ಇತರೆಡೆಗಳಿಗಿಂತ ಬಲಿಷ್ಟವಾಗಿದೆ.

ಜನಾಂಗೀಯತೆಯನ್ನೇ ಹೆಚ್ಚಾಗಿ ಆಧರಿಸಿದ ಸಮಾಜದಲ್ಲಿ, ಇತ್ತೀಚಿನ ದಿನಗಳಲ್ಲಿ ಧರ್ಮಾಧಾರಿತ ರಾಜಕೀಯ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿದೆ.

ಈ ಪ್ರಕ್ರಿಯೆಗಳೆಲ್ಲವೂ ನಡೆಯುತ್ತಿರುವುದು ಅಭಿವೃದ್ಧಿಯ ಬಗ್ಗೆ ಯಾವುದೇ ದೀರ್ಘಕಾಲೀನ ಚಿಂತನೆಗಳೇ ಇಲ್ಲದಿರುವಾಗ. ಅಭಿವೃದ್ಧಿಯ ಲಾಭವು ಎಲ್ಲರೊಂದಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವ ಸಾಮಾಜಿಕ-ರಾಜಕೀಯ ಪ್ರಯತ್ನಗಳೇ ಕಾಣಸಿಗದಂತಹ ಸಂದರ್ಭದಲ್ಲಿ. ವಿವಿಧ ಗುಂಪುಗಳು, ಅವುಗಳ ನಾಯಕರುಗಳು ತಮ್ಮ ಹಿತಾಸಕ್ತಿಗಾಗಿ, ತಮ್ಮೊಬ್ಬರ ಉನ್ನತಿಗಾಗಿ ಕಸರತ್ತು ನಡೆಸಲು ಇದು ಅನುಕೂಲಕರ ವಾತಾವರಣವಾಗಿದೆ. ಕಳೆದ ಕೆಲವು ತಿಂಗಳುಗಳಿಂದಲೂ, ವಿವಿಧ ಜನಾಂಗೀಯ ಗುಂಪುಗಳಿಂದಲೂ – ಅದು ಕುಕಿಗಳೇ ಇರಬಹುದು ಅಥವಾ ಮೈತ್‌ಯಿಗಳೇ ಇರಬಹುದು – ಪ್ರಚೋದನೆಗೆ ಎಡೆಮಾಡಿಕೊಡುವ ಹೇಳಿಕೆಗಳು ಬಹಳವಾಗಿಯೇ ಕೇಳಿಬರುತ್ತಿತ್ತು. ಆಡಳಿತಾಂಗವು ಮಧ್ಯಪ್ರವೇಶಿಸಿ ಅಪೇಕ್ಷಿತ ಕ್ರಮಗಳನ್ನು ಕೈಗೊಳ್ಳಲಿಕ್ಕೆ ಇದು ಸೂಕ್ತ ಸಮಯವಾಗಿದೆ. ಸರಕಾರ ಆಧಿಕಾರ ವಹಿಸಿರುವಾಗಲೂ ಆಡಳಿತ ಮಾತ್ರ ಕಾಣಿಸುತ್ತಲೇ ಇಲ್ಲ.

ಹೀಗಾಗಿ, ಅತ್ಯಗತ್ಯವೆನಿಸುವ ನೀತಿಗಳು ಮತ್ತು ಆಡಳಿತ ವ್ಯವಸ್ಥೆ; ಇವೆರಡರ ಅನುಪಸ್ಥಿತಿಯು ಮಣಿಪುರದಲ್ಲಿ ಅಂತರ-ಜನಾಂಗೀಯ ಸಂಘರ್ಷದ ಬಿಕ್ಕಟ್ಟಿಗೆ ಕಾರಣವಾಗಿದೆ. ಆದರೂ ಅತಿಸಹಜವಾಗಿ ಜನರ ರಕ್ತದಲ್ಲಿಯೇ ಹರಿದುಬಂದಿರುವ ಜನಾಂಗೀಯತೆಗಳನ್ನೂ ಮೀರಿ ಬೆರೆಯುವ – ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳುವ ಹಾಗೂ ಹಂಚಿ ತಿನ್ನುವ ಗುಣಗಳು ಸುಸ್ಥಿರತೆಯನ್ನು ತನ್ನ ಒಡಲಿನಲ್ಲಿಯೇ ಅಡಗಿಸಿಕೊಂಡಿದೆ.

ಕನ್ನಡಕ್ಕೆ : ಶಶಾಂಕ್

ಪ್ರೊ. ಅಮರ್ ಯುಮ್ನಮ್

ಪ್ರೊ. ಅಮರ್ ಯುಮ್ನಮ್
ಫೆಲೋ/ ವಿಸಿಟಿಂಗ್ ಪ್ರಾಧ್ಯಾಪಕರು, ಸೆಂಟರ್ ಫಾರ್ ಇಕನಾಮಿಕ್ ಮತ್ತು ಸೋಶಿಯಲ್ ಸ್ಟಡೀಸ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...