Homeಪುಸ್ತಕ ವಿಮರ್ಶೆಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

ಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

- Advertisement -
- Advertisement -

ಡಾ.ರವಿಕುಮಾರ್ ನೀಹ ಅವರ ಸಂಶೋಧನಾ ಕೃತಿಯಾದ ’ಅರಸು ಕುರನ್ಗರಾಯ’ ಮರೆತ ದಾರಿಗಳನ್ನು ಕೂಡಿಸುವ ಕೊಂಡಿಯಾಗಿದೆ. ಮೂಲತಃ ಉಪನ್ಯಾಸಕರಾದ ರವಿಕುಮಾರ್ ಸಂಶೋಧಕರೂ ಆಗಿರುವುದರಿಂದ ತಮ್ಮ ಜಿಲ್ಲೆಯ ಜಾನಪದ ನಿಧಿಯೇ ಆಗಿರುವ ಕುರನ್ಗರಾಯನ ಇತಿಹಾಸಕ್ಕೆ ಕೈಚಾಚಿದ್ದಾರೆ. ಮರೆತ ದಾರಿಗಳನ್ನು ಕೂಡಿಸುವ ಮಹತ್ಕಾರ್ಯದಲ್ಲಿ ರವಿಕುಮಾರ್ ಅವರ ಬೊಗಸೆ ತುಂಬುವಷ್ಟು ಕುರನ್ಗರಾಯ ದಕ್ಕಿದ್ದಾನೆ. ಆ ಮೂಲಕ ಕನ್ನಡ ನೆಲದ ಮಹೋನ್ನತ ಚರಿತ್ರೆಯೊಂದು ಅಕ್ಷರಗಳಲ್ಲಿ ದಾಖಲಾಗಲು ಸಾಧ್ಯವಾಗಿದೆ.

ಭಾರತದ ಚರಿತ್ರೆಯು ಉಳ್ಳವರ ಮತ್ತು ಉನ್ನತ ಜಾತಿಗಳ ’ಹೆಗ್ಗಳಿಕೆ’ಯ ದಾಖಲೆಯಷ್ಟೇ ಆಗಿದೆಯೆಂಬುದನ್ನು ಕೆಲವರಾದರೂ ಸಂಶೋಧಕರು ಕಂಡುಕೊಂಡು, ಅದು ಬದಲಾಗಬೇಕೆಂದ ಎಚ್ಚರ ವಹಿಸಿದ್ದಾರೆ. ಆದರೂ, ಇಡೀ ದೇಶದ ನೆಲದ ಮಣ್ಣಿನ ಕಣಕಣದಲ್ಲೂ ಬೆರೆತಿರುವ ನಮ್ಮ ತಳ ಸಮುದಾಯಗಳ ನಿಜದ ಚರಿತ್ರೆ ಅಕ್ಷರಕ್ಕೆ ದಕ್ಕಿಯೂ ದಕ್ಕದ ಹಾಗೆ ಸವಾಲು ಹಾಕುತ್ತಲೇ ಇದೆ. ಅಂಥಾ ನಿಜದ ಚರಿತ್ರೆ ಅರಸು ಕುರನ್ಗರಾಯನದು.

ತುಮಕೂರು ಜಿಲ್ಲೆಯಲ್ಲಿ ಗಿಡಮೂಲಿಕೆಗಳಿಗೆ ಹೆಸರಾದ ಸಿದ್ಧರಬೆಟ್ಟದ ಸುತ್ತಲಿನ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಕುರನ್ಗರಾಯನೆಂಬ ರಾಜ ಆ ಬೆಟ್ಟದ ದಕ್ಷಿಣ ದಿಕ್ಕಿನಲ್ಲೊಂದು ಕೋಟೆ ಕಟ್ಟಿಸಿ ಬಹಳಷ್ಟು ವರ್ಷಗಳ ಕಾಲ ರಾಜ್ಯಭಾರ ನಡೆಸಿದ್ದಾನೆ. ಈತ ತುಮಕೂರು, ಮಧುಗಿರಿ ಮತ್ತು ಕೊರಟಗೆರೆ ಭಾಗದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಸೇರಿದವನೆಂಬುದು ವಿಶೇಷ ಸಂಗತಿ. ಭಾರತದ ಚಾತುರ್ವರ್ಣ ವ್ಯವಸ್ಥೆಯು ಪ್ರತಿಪಾದಿಸುತ್ತಿದ್ದ ಮೌಲ್ಯಗಳಿಗೆ ವಿರುದ್ಧವಾಗಿ ಕನ್ನಡ ನೆಲದಲ್ಲಿ ನಡೆದಿರಬಹುದಾದ ಮಹತ್ ಕ್ರಾಂತಿಗಳಿಗೆ ಕುರನ್ಗರಾಯ ಒಂದು ಉದಾಹರಣೆ. ಸಿದ್ಧರಬೆಟ್ಟದ ಸುತ್ತಲಿನ ಭಾಗದಲ್ಲಿ ಕುರನ್ಗರಾಯನ ಕುರಿತ ಲಾವಣಿಗಳು ಪ್ರಚಲಿತದಲ್ಲಿವೆ ಎಂದರೆ ಅವನ ಕೀರ್ತಿ ಎಷ್ಟರಮಟ್ಟಿಗಿನದ್ದು ಎಂಬುದು ಅರ್ಥವಾಗುತ್ತದೆ.

ಕುರನ್ಗರಾಯ ಆಳುತ್ತಿದ್ದ ಭೂಭಾಗ ಸಿದ್ಧರು ಬದುಕಿದ ಪ್ರದೇಶವಾಗಿತ್ತು. ಬಹುದೊಡ್ಡ ಶ್ರಮಣ ಪರಂಪರೆಯ ನೆಲೆವೀಡನ್ನು ಆಳುತ್ತಿದ್ದ ರಾಜನೊಬ್ಬ ವೈದಿಕ ಸಂಸ್ಕೃತಿಯ ಚಾತುರ್ವರ್ಣ ಪದ್ಧತಿಯಾಚೆಗೆ, ಜನರೊಪ್ಪುವ ಹಾಗೆ, ಜನರ ಬಾಯಲ್ಲಿ ಲಾವಣಿಯಾಗುವ ಹಾಗೆ ಬದುಕಿದ್ದನೆಂಬುದು ನಮ್ಮ ನೆಲವು ಒಂದು ಕಾಲಕ್ಕೆ ಅನನ್ಯವಾದ ಸೌಹಾರ್ದ ಪರಂಪರೆಯೊಂದರ ಭಾಗವೆಂಬುದನ್ನು ಅರ್ಥಮಾಡಿಸುತ್ತದೆ. ಕರ್ನಾಟಕದಲ್ಲಿ ಸಿದ್ಧರ ಕಾಲವೆಂದು ಗುರುತಿಸುವ ಹದಿನೇಳು-ಹದಿನೆಂಟನೇ ಶತಮಾನದಲ್ಲಿ ಕುರನ್ಗರಾಯ ಆಳಿರಬಹುದೆಂದು ಹಲವು ಐತಿಹಾಸಿಕ ಮತ್ತು ಪೌರಾಣಿಕ ದಾಖಲೆಗಳ ಆಧಾರದ ಮೇಲೆ ರವಿಕುಮಾರ್ ಊಹಿಸಿದ್ದಾರೆ. ಹೈದರಾಲಿಯು ಕುರನ್ಗರಾಯನ ಆಡಳಿತಾವಧಿಯಲ್ಲಿ ಸಿದ್ಧರಬೆಟ್ಟಕ್ಕೆ ಬಂದು ಸಿದ್ಧರ ದರ್ಶನ ಪಡೆದನೆಂಬುದಕ್ಕೆ ಐತಿಹ್ಯಗಳಿವೆ. ಮಾದಿಗ ಸಮುದಾಯದ ರಾಜನೊಬ್ಬ ಆಳುತ್ತಿರುವ ಪ್ರದೇಶದ ಬಗ್ಗೆ ಹೈದರಾಲಿಗೆ ಇದ್ದಿರಬಹುದಾದ ಸ್ನೇಹಪರ ಕಾಳಜಿಯ ಕುರಿತು ಆ ಪ್ರದೇಶದಲ್ಲಿ ಲಾವಣಿಗಳಿವೆ. ಆತನು ತಮ್ಮ ಪ್ರದೇಶಕ್ಕೆ ಬಂದಾಗ ದನದ ಮಾಂಸದ ಅಡುಗೆ ಮಾಡಿ ಬಡಿಸಿದ ಬಗ್ಗೆ ವಿವರಗಳಿವೆ ಎಂದರೆ ಹೈದರ್ ಮತ್ತು ಕುರನ್ಗರಾಯನ ಸ್ನೇಹಸಂಬಂಧ ಎಷ್ಟು ಸಾವಯವ ಎನ್ನುವುದು ಅರ್ಥವಾಗುತ್ತದೆ. ಅಲ್ಲದೆ ಕುರನ್ಗರಾಯ ಆ ಭಾಗದಲ್ಲಿ ಪರಿಚಯಿಸಿದ್ದ ತೊಗಲಕಾಸು (ಚರ್‍ಮದ ನಾಣ್ಯ) ಚಲಾವಣೆಯ ಬಗ್ಗೆ ಹೈದರಾಲಿ ಪ್ರಶಂಸೆಯ ಮಾತುಗಳನ್ನಾಡಿರುವ ಕುರಿತು ವಿವರಗಳು ಸಿಕ್ಕುತ್ತವೆ.

ಡಾ.ರವಿಕುಮಾರ್ ನೀಹ

ಹೈದರಾಲಿ ಮತ್ತು ಕುರನ್ಗರಾಯನ ಈ ’ಅವೈದಿಕ ಪ್ರೀತಿ’ಯ ಕಾರಣದಿಂದ ಈ ದಲಿತರಾಜನನ್ನು ಭಾರತೀಯ ಇತಿಹಾಸ ಹೊರಗೇ ಇಟ್ಟಿದೆ. ಓ.ನಾಗರಾಜ್ ಅವರು ಬರೆದಿರುವ ’ಕುರಂಗರಾಜ ವೈಭವ’ ಎನ್ನುವ ಕಾದಂಬರಿಯೊಂದಿದ್ದು, ಅದು ಕುರನ್ಗರಾಯನ ಬಗೆಗಿನ ಜನರ ನಂಬಿಕೆಗಳನ್ನು ಆಧರಿಸಿದೆ. ರವಿಕುಮಾರ್ ನೀಹ ಈ ಜನರ ನಂಬಿಕೆಗಳಿಂದಲೇ ಇತಿಹಾಸದೊಳಗೆ ಪ್ರವೇಶಿಸಿದರೂ, ಸಂಶೋಧನೆಯ ಅಧ್ಯಯನ ಕ್ರಮದಿಂದ ಬಹಳಷ್ಟು ಅಕೆಡೆಮಿಕ್ ಕೃತಿಗಳನ್ನು, ಗೆಜೆಟಿಯರ್‌ಗಳನ್ನೂ ಅಭ್ಯಸಿಸಿ ತಮ್ಮ ಕೃತಿಯನ್ನು ಬೆಳೆಸಿದ್ದಾರೆ. ಈ ಮೂಲಕ ಇತಿಹಾಸದಲ್ಲಿ ಮುಚ್ಚಿ ಹೋಗಿರುವ ದಲಿತರ ಆಡಳಿತದ ಪದರುಗಳನ್ನು ಬಿಡಿಸಲು ಕಾರಣರಾಗಿದ್ದಾರೆ. ಕ್ಷತ್ರಿಯ ಧರ್ಮವೆಂದು ತಳಜಾತಿಗಳ ರಾಜ್ಯಾಡಳಿತದ ಸಾಧ್ಯತೆಗಳನ್ನೇ ಮುಚ್ಚಿಹಾಕಿದ ವೈದಿಕ ಇತಿಹಾಸವು ಅದಲಿತ ರಾಜರ ಬಗೆಗೂ ವಸ್ತುನಿಷ್ಠ ದಾಖಲೆಗಳನ್ನು ಮಾಡಿಲ್ಲ. ಒನಕೆ ಓಬವ್ವರಂತಹ ದಲಿತ ಹೋರಾಟಗಾರ್ತಿಯ ಬಗೆಗಿನ ಪ್ರಾದೇಶಿಕ ನಂಬಿಕೆಗಳನ್ನೂ ಅಪಮಾನಿಸುವಂತೆ ’ಕೆಲಸದವಳಾಗಿ’ ಬಿಂಬಿಸಿದ ಇತಿಹಾಸ ನಮ್ಮದು. ಇದರ ಭಾಗವಾಗಿಯೇ ಕನ್ನಡಿಗರ ಮನೆಮನೆಗಳಲ್ಲಿ ಅಭಿಮಾನವಿರಿಸಿಕೊಳ್ಳಬೇಕಿದ್ದ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕುರಿತ ಇತಿಹಾಸವನ್ನು ತಿರುಚಲಾಗುತ್ತಿದೆ. ಇಂತ ಇತಿಹಾಸದ ಉಬ್ಬುಶಿಲ್ಪಗಳಂಥ ದಾಖಲೆಗಳ ಒಳನುಗ್ಗಿ ರವಿಕುಮಾರ್ ಫಲವತ್ತಾದ ಸೌಹಾರ್ದವೂ, ಅವೈದಿಕವೂ, ಸಹಿಷ್ಣುವೂ ಆದ ದಲಿತ ಪರಂಪರೆಯ ಕಾರುಣ್ಯದ ನಿಜಕತೆಯನ್ನು ಹೆಕ್ಕಿದ್ದಾರೆ ಹಾಗೂ ಸಂಶೋಧಕರಿಗೆ ಮಾದರಿಯಾದ ಒಂದು ಮೇಲ್ಪಂಕ್ತಿಯನ್ನು ಹಾಕಿದ್ದಾರೆ.

ತಮ್ಮ ತಾಯಿ ಕುರನ್ಗರಾಯನ ಕುರಿತು ಹೇಳಿದ ಒಂದು ಕತೆಯ ಜಾಡನ್ನು ಹಿಡಿದು ಆ ಪ್ರದೇಶಕ್ಕೆ ಪ್ರವೇಶಿಸಿದ ರವಿ ಕನ್ನಡ ನಾಡಿನಲ್ಲಿ ಸಮಾಧಿಯಾಗಿರಬಹುದಾದ ದಲಿತರ ಮಹತ್ತರ ಇತಿಹಾಸದ ಶೋಧನಾ ಕಾರ್ಯವನ್ನು ಉದ್ಘಾಟಿಸಿದ್ದಾರೆ. ಈಗಾಗಲೇ ಬಹಳಷ್ಟು ವಿದ್ವಾಂಸರು ಈ ರೀತಿಯ ಸಂಶೋಧನೆಯನ್ನು ಕೈಗೊಂಡಿರುವರಾದರೂ ದಲಿತ ಸಂಶೋಧಕರ ಕಣ್ಣೋಟಕ್ಕೆ ದಕ್ಕುವ ದಾಖಲೆಗಳು ಹೊಸಹಾದಿಯನ್ನು ತೋರಬಲ್ಲವು.

ಶರಣರು ಬಾಳಿ ಹೋದ ಕನ್ನಡದ ನೆಲದಲ್ಲಿ ದಲಿತ ರಾಜನೊಬ್ಬ ಯುದ್ಧ ಮಾಡದೆ, ಯಾರನ್ನೂ ಒತ್ತೆಯಾಗಿಸಿಟ್ಟುಕೊಳ್ಳದೆ, ಲೋಲುಪನಾಗದೆ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಇತಿಹಾಸವನ್ನು ಡಾ.ರವಿಕುಮಾರ್ ನೀಹ ನಮ್ಮೆದುರು ತೆರೆದಿಟ್ಟಿದ್ದಾರೆ. ಅವರು ಸಂಶೋಧನೆಗೆ ತೊಡಗಿದ ಭೂಪ್ರದೇಶದಲ್ಲಿ ಕೊರಮ ಜಾತಿಯಂತಹ ಸಣ್ಣ ಸಮುದಾಯಗಳ ರಾಜರೂ ಆಳಿರುವ ಬಗ್ಗೆ ಕುರುಹುಗಳಿವೆ. ಇದನ್ನು ರವಿಕುಮಾರ್ ಸಮರ್ಥವಾಗಿ ಗುರುತಿಸಿದ್ದಾರೆ. ಆ ಮೂಲಕ ನಿಜವಾದ ಭಾರತ ಚರಿತ್ರೆಗೆ
ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಮುಂದಡಿಯಿಟ್ಟಿದ್ದಾರೆ. ಅವರ ಸಂಶೋಧನೆಯ ’ಅರಸು ಕುರನ್ಗರಾಯ’ ಕನ್ನಡಿಗರೆಲ್ಲರೂ ಓದಲೇಬೇಕಾದ ಕೃತಿಯಾಗಿದೆ.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಪುಸ್ತಕ ಪರಿಚಯ; ಕಾಣೆಯಾಗಿದ್ದಾರೆ ಸಂಪಾದಕರು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...