Homeಪುಸ್ತಕ ವಿಮರ್ಶೆಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

ಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

- Advertisement -
- Advertisement -

ಡಾ.ರವಿಕುಮಾರ್ ನೀಹ ಅವರ ಸಂಶೋಧನಾ ಕೃತಿಯಾದ ’ಅರಸು ಕುರನ್ಗರಾಯ’ ಮರೆತ ದಾರಿಗಳನ್ನು ಕೂಡಿಸುವ ಕೊಂಡಿಯಾಗಿದೆ. ಮೂಲತಃ ಉಪನ್ಯಾಸಕರಾದ ರವಿಕುಮಾರ್ ಸಂಶೋಧಕರೂ ಆಗಿರುವುದರಿಂದ ತಮ್ಮ ಜಿಲ್ಲೆಯ ಜಾನಪದ ನಿಧಿಯೇ ಆಗಿರುವ ಕುರನ್ಗರಾಯನ ಇತಿಹಾಸಕ್ಕೆ ಕೈಚಾಚಿದ್ದಾರೆ. ಮರೆತ ದಾರಿಗಳನ್ನು ಕೂಡಿಸುವ ಮಹತ್ಕಾರ್ಯದಲ್ಲಿ ರವಿಕುಮಾರ್ ಅವರ ಬೊಗಸೆ ತುಂಬುವಷ್ಟು ಕುರನ್ಗರಾಯ ದಕ್ಕಿದ್ದಾನೆ. ಆ ಮೂಲಕ ಕನ್ನಡ ನೆಲದ ಮಹೋನ್ನತ ಚರಿತ್ರೆಯೊಂದು ಅಕ್ಷರಗಳಲ್ಲಿ ದಾಖಲಾಗಲು ಸಾಧ್ಯವಾಗಿದೆ.

ಭಾರತದ ಚರಿತ್ರೆಯು ಉಳ್ಳವರ ಮತ್ತು ಉನ್ನತ ಜಾತಿಗಳ ’ಹೆಗ್ಗಳಿಕೆ’ಯ ದಾಖಲೆಯಷ್ಟೇ ಆಗಿದೆಯೆಂಬುದನ್ನು ಕೆಲವರಾದರೂ ಸಂಶೋಧಕರು ಕಂಡುಕೊಂಡು, ಅದು ಬದಲಾಗಬೇಕೆಂದ ಎಚ್ಚರ ವಹಿಸಿದ್ದಾರೆ. ಆದರೂ, ಇಡೀ ದೇಶದ ನೆಲದ ಮಣ್ಣಿನ ಕಣಕಣದಲ್ಲೂ ಬೆರೆತಿರುವ ನಮ್ಮ ತಳ ಸಮುದಾಯಗಳ ನಿಜದ ಚರಿತ್ರೆ ಅಕ್ಷರಕ್ಕೆ ದಕ್ಕಿಯೂ ದಕ್ಕದ ಹಾಗೆ ಸವಾಲು ಹಾಕುತ್ತಲೇ ಇದೆ. ಅಂಥಾ ನಿಜದ ಚರಿತ್ರೆ ಅರಸು ಕುರನ್ಗರಾಯನದು.

ತುಮಕೂರು ಜಿಲ್ಲೆಯಲ್ಲಿ ಗಿಡಮೂಲಿಕೆಗಳಿಗೆ ಹೆಸರಾದ ಸಿದ್ಧರಬೆಟ್ಟದ ಸುತ್ತಲಿನ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಕುರನ್ಗರಾಯನೆಂಬ ರಾಜ ಆ ಬೆಟ್ಟದ ದಕ್ಷಿಣ ದಿಕ್ಕಿನಲ್ಲೊಂದು ಕೋಟೆ ಕಟ್ಟಿಸಿ ಬಹಳಷ್ಟು ವರ್ಷಗಳ ಕಾಲ ರಾಜ್ಯಭಾರ ನಡೆಸಿದ್ದಾನೆ. ಈತ ತುಮಕೂರು, ಮಧುಗಿರಿ ಮತ್ತು ಕೊರಟಗೆರೆ ಭಾಗದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಸೇರಿದವನೆಂಬುದು ವಿಶೇಷ ಸಂಗತಿ. ಭಾರತದ ಚಾತುರ್ವರ್ಣ ವ್ಯವಸ್ಥೆಯು ಪ್ರತಿಪಾದಿಸುತ್ತಿದ್ದ ಮೌಲ್ಯಗಳಿಗೆ ವಿರುದ್ಧವಾಗಿ ಕನ್ನಡ ನೆಲದಲ್ಲಿ ನಡೆದಿರಬಹುದಾದ ಮಹತ್ ಕ್ರಾಂತಿಗಳಿಗೆ ಕುರನ್ಗರಾಯ ಒಂದು ಉದಾಹರಣೆ. ಸಿದ್ಧರಬೆಟ್ಟದ ಸುತ್ತಲಿನ ಭಾಗದಲ್ಲಿ ಕುರನ್ಗರಾಯನ ಕುರಿತ ಲಾವಣಿಗಳು ಪ್ರಚಲಿತದಲ್ಲಿವೆ ಎಂದರೆ ಅವನ ಕೀರ್ತಿ ಎಷ್ಟರಮಟ್ಟಿಗಿನದ್ದು ಎಂಬುದು ಅರ್ಥವಾಗುತ್ತದೆ.

ಕುರನ್ಗರಾಯ ಆಳುತ್ತಿದ್ದ ಭೂಭಾಗ ಸಿದ್ಧರು ಬದುಕಿದ ಪ್ರದೇಶವಾಗಿತ್ತು. ಬಹುದೊಡ್ಡ ಶ್ರಮಣ ಪರಂಪರೆಯ ನೆಲೆವೀಡನ್ನು ಆಳುತ್ತಿದ್ದ ರಾಜನೊಬ್ಬ ವೈದಿಕ ಸಂಸ್ಕೃತಿಯ ಚಾತುರ್ವರ್ಣ ಪದ್ಧತಿಯಾಚೆಗೆ, ಜನರೊಪ್ಪುವ ಹಾಗೆ, ಜನರ ಬಾಯಲ್ಲಿ ಲಾವಣಿಯಾಗುವ ಹಾಗೆ ಬದುಕಿದ್ದನೆಂಬುದು ನಮ್ಮ ನೆಲವು ಒಂದು ಕಾಲಕ್ಕೆ ಅನನ್ಯವಾದ ಸೌಹಾರ್ದ ಪರಂಪರೆಯೊಂದರ ಭಾಗವೆಂಬುದನ್ನು ಅರ್ಥಮಾಡಿಸುತ್ತದೆ. ಕರ್ನಾಟಕದಲ್ಲಿ ಸಿದ್ಧರ ಕಾಲವೆಂದು ಗುರುತಿಸುವ ಹದಿನೇಳು-ಹದಿನೆಂಟನೇ ಶತಮಾನದಲ್ಲಿ ಕುರನ್ಗರಾಯ ಆಳಿರಬಹುದೆಂದು ಹಲವು ಐತಿಹಾಸಿಕ ಮತ್ತು ಪೌರಾಣಿಕ ದಾಖಲೆಗಳ ಆಧಾರದ ಮೇಲೆ ರವಿಕುಮಾರ್ ಊಹಿಸಿದ್ದಾರೆ. ಹೈದರಾಲಿಯು ಕುರನ್ಗರಾಯನ ಆಡಳಿತಾವಧಿಯಲ್ಲಿ ಸಿದ್ಧರಬೆಟ್ಟಕ್ಕೆ ಬಂದು ಸಿದ್ಧರ ದರ್ಶನ ಪಡೆದನೆಂಬುದಕ್ಕೆ ಐತಿಹ್ಯಗಳಿವೆ. ಮಾದಿಗ ಸಮುದಾಯದ ರಾಜನೊಬ್ಬ ಆಳುತ್ತಿರುವ ಪ್ರದೇಶದ ಬಗ್ಗೆ ಹೈದರಾಲಿಗೆ ಇದ್ದಿರಬಹುದಾದ ಸ್ನೇಹಪರ ಕಾಳಜಿಯ ಕುರಿತು ಆ ಪ್ರದೇಶದಲ್ಲಿ ಲಾವಣಿಗಳಿವೆ. ಆತನು ತಮ್ಮ ಪ್ರದೇಶಕ್ಕೆ ಬಂದಾಗ ದನದ ಮಾಂಸದ ಅಡುಗೆ ಮಾಡಿ ಬಡಿಸಿದ ಬಗ್ಗೆ ವಿವರಗಳಿವೆ ಎಂದರೆ ಹೈದರ್ ಮತ್ತು ಕುರನ್ಗರಾಯನ ಸ್ನೇಹಸಂಬಂಧ ಎಷ್ಟು ಸಾವಯವ ಎನ್ನುವುದು ಅರ್ಥವಾಗುತ್ತದೆ. ಅಲ್ಲದೆ ಕುರನ್ಗರಾಯ ಆ ಭಾಗದಲ್ಲಿ ಪರಿಚಯಿಸಿದ್ದ ತೊಗಲಕಾಸು (ಚರ್‍ಮದ ನಾಣ್ಯ) ಚಲಾವಣೆಯ ಬಗ್ಗೆ ಹೈದರಾಲಿ ಪ್ರಶಂಸೆಯ ಮಾತುಗಳನ್ನಾಡಿರುವ ಕುರಿತು ವಿವರಗಳು ಸಿಕ್ಕುತ್ತವೆ.

ಡಾ.ರವಿಕುಮಾರ್ ನೀಹ

ಹೈದರಾಲಿ ಮತ್ತು ಕುರನ್ಗರಾಯನ ಈ ’ಅವೈದಿಕ ಪ್ರೀತಿ’ಯ ಕಾರಣದಿಂದ ಈ ದಲಿತರಾಜನನ್ನು ಭಾರತೀಯ ಇತಿಹಾಸ ಹೊರಗೇ ಇಟ್ಟಿದೆ. ಓ.ನಾಗರಾಜ್ ಅವರು ಬರೆದಿರುವ ’ಕುರಂಗರಾಜ ವೈಭವ’ ಎನ್ನುವ ಕಾದಂಬರಿಯೊಂದಿದ್ದು, ಅದು ಕುರನ್ಗರಾಯನ ಬಗೆಗಿನ ಜನರ ನಂಬಿಕೆಗಳನ್ನು ಆಧರಿಸಿದೆ. ರವಿಕುಮಾರ್ ನೀಹ ಈ ಜನರ ನಂಬಿಕೆಗಳಿಂದಲೇ ಇತಿಹಾಸದೊಳಗೆ ಪ್ರವೇಶಿಸಿದರೂ, ಸಂಶೋಧನೆಯ ಅಧ್ಯಯನ ಕ್ರಮದಿಂದ ಬಹಳಷ್ಟು ಅಕೆಡೆಮಿಕ್ ಕೃತಿಗಳನ್ನು, ಗೆಜೆಟಿಯರ್‌ಗಳನ್ನೂ ಅಭ್ಯಸಿಸಿ ತಮ್ಮ ಕೃತಿಯನ್ನು ಬೆಳೆಸಿದ್ದಾರೆ. ಈ ಮೂಲಕ ಇತಿಹಾಸದಲ್ಲಿ ಮುಚ್ಚಿ ಹೋಗಿರುವ ದಲಿತರ ಆಡಳಿತದ ಪದರುಗಳನ್ನು ಬಿಡಿಸಲು ಕಾರಣರಾಗಿದ್ದಾರೆ. ಕ್ಷತ್ರಿಯ ಧರ್ಮವೆಂದು ತಳಜಾತಿಗಳ ರಾಜ್ಯಾಡಳಿತದ ಸಾಧ್ಯತೆಗಳನ್ನೇ ಮುಚ್ಚಿಹಾಕಿದ ವೈದಿಕ ಇತಿಹಾಸವು ಅದಲಿತ ರಾಜರ ಬಗೆಗೂ ವಸ್ತುನಿಷ್ಠ ದಾಖಲೆಗಳನ್ನು ಮಾಡಿಲ್ಲ. ಒನಕೆ ಓಬವ್ವರಂತಹ ದಲಿತ ಹೋರಾಟಗಾರ್ತಿಯ ಬಗೆಗಿನ ಪ್ರಾದೇಶಿಕ ನಂಬಿಕೆಗಳನ್ನೂ ಅಪಮಾನಿಸುವಂತೆ ’ಕೆಲಸದವಳಾಗಿ’ ಬಿಂಬಿಸಿದ ಇತಿಹಾಸ ನಮ್ಮದು. ಇದರ ಭಾಗವಾಗಿಯೇ ಕನ್ನಡಿಗರ ಮನೆಮನೆಗಳಲ್ಲಿ ಅಭಿಮಾನವಿರಿಸಿಕೊಳ್ಳಬೇಕಿದ್ದ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕುರಿತ ಇತಿಹಾಸವನ್ನು ತಿರುಚಲಾಗುತ್ತಿದೆ. ಇಂತ ಇತಿಹಾಸದ ಉಬ್ಬುಶಿಲ್ಪಗಳಂಥ ದಾಖಲೆಗಳ ಒಳನುಗ್ಗಿ ರವಿಕುಮಾರ್ ಫಲವತ್ತಾದ ಸೌಹಾರ್ದವೂ, ಅವೈದಿಕವೂ, ಸಹಿಷ್ಣುವೂ ಆದ ದಲಿತ ಪರಂಪರೆಯ ಕಾರುಣ್ಯದ ನಿಜಕತೆಯನ್ನು ಹೆಕ್ಕಿದ್ದಾರೆ ಹಾಗೂ ಸಂಶೋಧಕರಿಗೆ ಮಾದರಿಯಾದ ಒಂದು ಮೇಲ್ಪಂಕ್ತಿಯನ್ನು ಹಾಕಿದ್ದಾರೆ.

ತಮ್ಮ ತಾಯಿ ಕುರನ್ಗರಾಯನ ಕುರಿತು ಹೇಳಿದ ಒಂದು ಕತೆಯ ಜಾಡನ್ನು ಹಿಡಿದು ಆ ಪ್ರದೇಶಕ್ಕೆ ಪ್ರವೇಶಿಸಿದ ರವಿ ಕನ್ನಡ ನಾಡಿನಲ್ಲಿ ಸಮಾಧಿಯಾಗಿರಬಹುದಾದ ದಲಿತರ ಮಹತ್ತರ ಇತಿಹಾಸದ ಶೋಧನಾ ಕಾರ್ಯವನ್ನು ಉದ್ಘಾಟಿಸಿದ್ದಾರೆ. ಈಗಾಗಲೇ ಬಹಳಷ್ಟು ವಿದ್ವಾಂಸರು ಈ ರೀತಿಯ ಸಂಶೋಧನೆಯನ್ನು ಕೈಗೊಂಡಿರುವರಾದರೂ ದಲಿತ ಸಂಶೋಧಕರ ಕಣ್ಣೋಟಕ್ಕೆ ದಕ್ಕುವ ದಾಖಲೆಗಳು ಹೊಸಹಾದಿಯನ್ನು ತೋರಬಲ್ಲವು.

ಶರಣರು ಬಾಳಿ ಹೋದ ಕನ್ನಡದ ನೆಲದಲ್ಲಿ ದಲಿತ ರಾಜನೊಬ್ಬ ಯುದ್ಧ ಮಾಡದೆ, ಯಾರನ್ನೂ ಒತ್ತೆಯಾಗಿಸಿಟ್ಟುಕೊಳ್ಳದೆ, ಲೋಲುಪನಾಗದೆ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಇತಿಹಾಸವನ್ನು ಡಾ.ರವಿಕುಮಾರ್ ನೀಹ ನಮ್ಮೆದುರು ತೆರೆದಿಟ್ಟಿದ್ದಾರೆ. ಅವರು ಸಂಶೋಧನೆಗೆ ತೊಡಗಿದ ಭೂಪ್ರದೇಶದಲ್ಲಿ ಕೊರಮ ಜಾತಿಯಂತಹ ಸಣ್ಣ ಸಮುದಾಯಗಳ ರಾಜರೂ ಆಳಿರುವ ಬಗ್ಗೆ ಕುರುಹುಗಳಿವೆ. ಇದನ್ನು ರವಿಕುಮಾರ್ ಸಮರ್ಥವಾಗಿ ಗುರುತಿಸಿದ್ದಾರೆ. ಆ ಮೂಲಕ ನಿಜವಾದ ಭಾರತ ಚರಿತ್ರೆಗೆ
ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಮುಂದಡಿಯಿಟ್ಟಿದ್ದಾರೆ. ಅವರ ಸಂಶೋಧನೆಯ ’ಅರಸು ಕುರನ್ಗರಾಯ’ ಕನ್ನಡಿಗರೆಲ್ಲರೂ ಓದಲೇಬೇಕಾದ ಕೃತಿಯಾಗಿದೆ.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಪುಸ್ತಕ ಪರಿಚಯ; ಕಾಣೆಯಾಗಿದ್ದಾರೆ ಸಂಪಾದಕರು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...