Homeಪುಸ್ತಕ ವಿಮರ್ಶೆಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

ಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

- Advertisement -
- Advertisement -

ಡಾ.ರವಿಕುಮಾರ್ ನೀಹ ಅವರ ಸಂಶೋಧನಾ ಕೃತಿಯಾದ ’ಅರಸು ಕುರನ್ಗರಾಯ’ ಮರೆತ ದಾರಿಗಳನ್ನು ಕೂಡಿಸುವ ಕೊಂಡಿಯಾಗಿದೆ. ಮೂಲತಃ ಉಪನ್ಯಾಸಕರಾದ ರವಿಕುಮಾರ್ ಸಂಶೋಧಕರೂ ಆಗಿರುವುದರಿಂದ ತಮ್ಮ ಜಿಲ್ಲೆಯ ಜಾನಪದ ನಿಧಿಯೇ ಆಗಿರುವ ಕುರನ್ಗರಾಯನ ಇತಿಹಾಸಕ್ಕೆ ಕೈಚಾಚಿದ್ದಾರೆ. ಮರೆತ ದಾರಿಗಳನ್ನು ಕೂಡಿಸುವ ಮಹತ್ಕಾರ್ಯದಲ್ಲಿ ರವಿಕುಮಾರ್ ಅವರ ಬೊಗಸೆ ತುಂಬುವಷ್ಟು ಕುರನ್ಗರಾಯ ದಕ್ಕಿದ್ದಾನೆ. ಆ ಮೂಲಕ ಕನ್ನಡ ನೆಲದ ಮಹೋನ್ನತ ಚರಿತ್ರೆಯೊಂದು ಅಕ್ಷರಗಳಲ್ಲಿ ದಾಖಲಾಗಲು ಸಾಧ್ಯವಾಗಿದೆ.

ಭಾರತದ ಚರಿತ್ರೆಯು ಉಳ್ಳವರ ಮತ್ತು ಉನ್ನತ ಜಾತಿಗಳ ’ಹೆಗ್ಗಳಿಕೆ’ಯ ದಾಖಲೆಯಷ್ಟೇ ಆಗಿದೆಯೆಂಬುದನ್ನು ಕೆಲವರಾದರೂ ಸಂಶೋಧಕರು ಕಂಡುಕೊಂಡು, ಅದು ಬದಲಾಗಬೇಕೆಂದ ಎಚ್ಚರ ವಹಿಸಿದ್ದಾರೆ. ಆದರೂ, ಇಡೀ ದೇಶದ ನೆಲದ ಮಣ್ಣಿನ ಕಣಕಣದಲ್ಲೂ ಬೆರೆತಿರುವ ನಮ್ಮ ತಳ ಸಮುದಾಯಗಳ ನಿಜದ ಚರಿತ್ರೆ ಅಕ್ಷರಕ್ಕೆ ದಕ್ಕಿಯೂ ದಕ್ಕದ ಹಾಗೆ ಸವಾಲು ಹಾಕುತ್ತಲೇ ಇದೆ. ಅಂಥಾ ನಿಜದ ಚರಿತ್ರೆ ಅರಸು ಕುರನ್ಗರಾಯನದು.

ತುಮಕೂರು ಜಿಲ್ಲೆಯಲ್ಲಿ ಗಿಡಮೂಲಿಕೆಗಳಿಗೆ ಹೆಸರಾದ ಸಿದ್ಧರಬೆಟ್ಟದ ಸುತ್ತಲಿನ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಕುರನ್ಗರಾಯನೆಂಬ ರಾಜ ಆ ಬೆಟ್ಟದ ದಕ್ಷಿಣ ದಿಕ್ಕಿನಲ್ಲೊಂದು ಕೋಟೆ ಕಟ್ಟಿಸಿ ಬಹಳಷ್ಟು ವರ್ಷಗಳ ಕಾಲ ರಾಜ್ಯಭಾರ ನಡೆಸಿದ್ದಾನೆ. ಈತ ತುಮಕೂರು, ಮಧುಗಿರಿ ಮತ್ತು ಕೊರಟಗೆರೆ ಭಾಗದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಸೇರಿದವನೆಂಬುದು ವಿಶೇಷ ಸಂಗತಿ. ಭಾರತದ ಚಾತುರ್ವರ್ಣ ವ್ಯವಸ್ಥೆಯು ಪ್ರತಿಪಾದಿಸುತ್ತಿದ್ದ ಮೌಲ್ಯಗಳಿಗೆ ವಿರುದ್ಧವಾಗಿ ಕನ್ನಡ ನೆಲದಲ್ಲಿ ನಡೆದಿರಬಹುದಾದ ಮಹತ್ ಕ್ರಾಂತಿಗಳಿಗೆ ಕುರನ್ಗರಾಯ ಒಂದು ಉದಾಹರಣೆ. ಸಿದ್ಧರಬೆಟ್ಟದ ಸುತ್ತಲಿನ ಭಾಗದಲ್ಲಿ ಕುರನ್ಗರಾಯನ ಕುರಿತ ಲಾವಣಿಗಳು ಪ್ರಚಲಿತದಲ್ಲಿವೆ ಎಂದರೆ ಅವನ ಕೀರ್ತಿ ಎಷ್ಟರಮಟ್ಟಿಗಿನದ್ದು ಎಂಬುದು ಅರ್ಥವಾಗುತ್ತದೆ.

ಕುರನ್ಗರಾಯ ಆಳುತ್ತಿದ್ದ ಭೂಭಾಗ ಸಿದ್ಧರು ಬದುಕಿದ ಪ್ರದೇಶವಾಗಿತ್ತು. ಬಹುದೊಡ್ಡ ಶ್ರಮಣ ಪರಂಪರೆಯ ನೆಲೆವೀಡನ್ನು ಆಳುತ್ತಿದ್ದ ರಾಜನೊಬ್ಬ ವೈದಿಕ ಸಂಸ್ಕೃತಿಯ ಚಾತುರ್ವರ್ಣ ಪದ್ಧತಿಯಾಚೆಗೆ, ಜನರೊಪ್ಪುವ ಹಾಗೆ, ಜನರ ಬಾಯಲ್ಲಿ ಲಾವಣಿಯಾಗುವ ಹಾಗೆ ಬದುಕಿದ್ದನೆಂಬುದು ನಮ್ಮ ನೆಲವು ಒಂದು ಕಾಲಕ್ಕೆ ಅನನ್ಯವಾದ ಸೌಹಾರ್ದ ಪರಂಪರೆಯೊಂದರ ಭಾಗವೆಂಬುದನ್ನು ಅರ್ಥಮಾಡಿಸುತ್ತದೆ. ಕರ್ನಾಟಕದಲ್ಲಿ ಸಿದ್ಧರ ಕಾಲವೆಂದು ಗುರುತಿಸುವ ಹದಿನೇಳು-ಹದಿನೆಂಟನೇ ಶತಮಾನದಲ್ಲಿ ಕುರನ್ಗರಾಯ ಆಳಿರಬಹುದೆಂದು ಹಲವು ಐತಿಹಾಸಿಕ ಮತ್ತು ಪೌರಾಣಿಕ ದಾಖಲೆಗಳ ಆಧಾರದ ಮೇಲೆ ರವಿಕುಮಾರ್ ಊಹಿಸಿದ್ದಾರೆ. ಹೈದರಾಲಿಯು ಕುರನ್ಗರಾಯನ ಆಡಳಿತಾವಧಿಯಲ್ಲಿ ಸಿದ್ಧರಬೆಟ್ಟಕ್ಕೆ ಬಂದು ಸಿದ್ಧರ ದರ್ಶನ ಪಡೆದನೆಂಬುದಕ್ಕೆ ಐತಿಹ್ಯಗಳಿವೆ. ಮಾದಿಗ ಸಮುದಾಯದ ರಾಜನೊಬ್ಬ ಆಳುತ್ತಿರುವ ಪ್ರದೇಶದ ಬಗ್ಗೆ ಹೈದರಾಲಿಗೆ ಇದ್ದಿರಬಹುದಾದ ಸ್ನೇಹಪರ ಕಾಳಜಿಯ ಕುರಿತು ಆ ಪ್ರದೇಶದಲ್ಲಿ ಲಾವಣಿಗಳಿವೆ. ಆತನು ತಮ್ಮ ಪ್ರದೇಶಕ್ಕೆ ಬಂದಾಗ ದನದ ಮಾಂಸದ ಅಡುಗೆ ಮಾಡಿ ಬಡಿಸಿದ ಬಗ್ಗೆ ವಿವರಗಳಿವೆ ಎಂದರೆ ಹೈದರ್ ಮತ್ತು ಕುರನ್ಗರಾಯನ ಸ್ನೇಹಸಂಬಂಧ ಎಷ್ಟು ಸಾವಯವ ಎನ್ನುವುದು ಅರ್ಥವಾಗುತ್ತದೆ. ಅಲ್ಲದೆ ಕುರನ್ಗರಾಯ ಆ ಭಾಗದಲ್ಲಿ ಪರಿಚಯಿಸಿದ್ದ ತೊಗಲಕಾಸು (ಚರ್‍ಮದ ನಾಣ್ಯ) ಚಲಾವಣೆಯ ಬಗ್ಗೆ ಹೈದರಾಲಿ ಪ್ರಶಂಸೆಯ ಮಾತುಗಳನ್ನಾಡಿರುವ ಕುರಿತು ವಿವರಗಳು ಸಿಕ್ಕುತ್ತವೆ.

ಡಾ.ರವಿಕುಮಾರ್ ನೀಹ

ಹೈದರಾಲಿ ಮತ್ತು ಕುರನ್ಗರಾಯನ ಈ ’ಅವೈದಿಕ ಪ್ರೀತಿ’ಯ ಕಾರಣದಿಂದ ಈ ದಲಿತರಾಜನನ್ನು ಭಾರತೀಯ ಇತಿಹಾಸ ಹೊರಗೇ ಇಟ್ಟಿದೆ. ಓ.ನಾಗರಾಜ್ ಅವರು ಬರೆದಿರುವ ’ಕುರಂಗರಾಜ ವೈಭವ’ ಎನ್ನುವ ಕಾದಂಬರಿಯೊಂದಿದ್ದು, ಅದು ಕುರನ್ಗರಾಯನ ಬಗೆಗಿನ ಜನರ ನಂಬಿಕೆಗಳನ್ನು ಆಧರಿಸಿದೆ. ರವಿಕುಮಾರ್ ನೀಹ ಈ ಜನರ ನಂಬಿಕೆಗಳಿಂದಲೇ ಇತಿಹಾಸದೊಳಗೆ ಪ್ರವೇಶಿಸಿದರೂ, ಸಂಶೋಧನೆಯ ಅಧ್ಯಯನ ಕ್ರಮದಿಂದ ಬಹಳಷ್ಟು ಅಕೆಡೆಮಿಕ್ ಕೃತಿಗಳನ್ನು, ಗೆಜೆಟಿಯರ್‌ಗಳನ್ನೂ ಅಭ್ಯಸಿಸಿ ತಮ್ಮ ಕೃತಿಯನ್ನು ಬೆಳೆಸಿದ್ದಾರೆ. ಈ ಮೂಲಕ ಇತಿಹಾಸದಲ್ಲಿ ಮುಚ್ಚಿ ಹೋಗಿರುವ ದಲಿತರ ಆಡಳಿತದ ಪದರುಗಳನ್ನು ಬಿಡಿಸಲು ಕಾರಣರಾಗಿದ್ದಾರೆ. ಕ್ಷತ್ರಿಯ ಧರ್ಮವೆಂದು ತಳಜಾತಿಗಳ ರಾಜ್ಯಾಡಳಿತದ ಸಾಧ್ಯತೆಗಳನ್ನೇ ಮುಚ್ಚಿಹಾಕಿದ ವೈದಿಕ ಇತಿಹಾಸವು ಅದಲಿತ ರಾಜರ ಬಗೆಗೂ ವಸ್ತುನಿಷ್ಠ ದಾಖಲೆಗಳನ್ನು ಮಾಡಿಲ್ಲ. ಒನಕೆ ಓಬವ್ವರಂತಹ ದಲಿತ ಹೋರಾಟಗಾರ್ತಿಯ ಬಗೆಗಿನ ಪ್ರಾದೇಶಿಕ ನಂಬಿಕೆಗಳನ್ನೂ ಅಪಮಾನಿಸುವಂತೆ ’ಕೆಲಸದವಳಾಗಿ’ ಬಿಂಬಿಸಿದ ಇತಿಹಾಸ ನಮ್ಮದು. ಇದರ ಭಾಗವಾಗಿಯೇ ಕನ್ನಡಿಗರ ಮನೆಮನೆಗಳಲ್ಲಿ ಅಭಿಮಾನವಿರಿಸಿಕೊಳ್ಳಬೇಕಿದ್ದ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕುರಿತ ಇತಿಹಾಸವನ್ನು ತಿರುಚಲಾಗುತ್ತಿದೆ. ಇಂತ ಇತಿಹಾಸದ ಉಬ್ಬುಶಿಲ್ಪಗಳಂಥ ದಾಖಲೆಗಳ ಒಳನುಗ್ಗಿ ರವಿಕುಮಾರ್ ಫಲವತ್ತಾದ ಸೌಹಾರ್ದವೂ, ಅವೈದಿಕವೂ, ಸಹಿಷ್ಣುವೂ ಆದ ದಲಿತ ಪರಂಪರೆಯ ಕಾರುಣ್ಯದ ನಿಜಕತೆಯನ್ನು ಹೆಕ್ಕಿದ್ದಾರೆ ಹಾಗೂ ಸಂಶೋಧಕರಿಗೆ ಮಾದರಿಯಾದ ಒಂದು ಮೇಲ್ಪಂಕ್ತಿಯನ್ನು ಹಾಕಿದ್ದಾರೆ.

ತಮ್ಮ ತಾಯಿ ಕುರನ್ಗರಾಯನ ಕುರಿತು ಹೇಳಿದ ಒಂದು ಕತೆಯ ಜಾಡನ್ನು ಹಿಡಿದು ಆ ಪ್ರದೇಶಕ್ಕೆ ಪ್ರವೇಶಿಸಿದ ರವಿ ಕನ್ನಡ ನಾಡಿನಲ್ಲಿ ಸಮಾಧಿಯಾಗಿರಬಹುದಾದ ದಲಿತರ ಮಹತ್ತರ ಇತಿಹಾಸದ ಶೋಧನಾ ಕಾರ್ಯವನ್ನು ಉದ್ಘಾಟಿಸಿದ್ದಾರೆ. ಈಗಾಗಲೇ ಬಹಳಷ್ಟು ವಿದ್ವಾಂಸರು ಈ ರೀತಿಯ ಸಂಶೋಧನೆಯನ್ನು ಕೈಗೊಂಡಿರುವರಾದರೂ ದಲಿತ ಸಂಶೋಧಕರ ಕಣ್ಣೋಟಕ್ಕೆ ದಕ್ಕುವ ದಾಖಲೆಗಳು ಹೊಸಹಾದಿಯನ್ನು ತೋರಬಲ್ಲವು.

ಶರಣರು ಬಾಳಿ ಹೋದ ಕನ್ನಡದ ನೆಲದಲ್ಲಿ ದಲಿತ ರಾಜನೊಬ್ಬ ಯುದ್ಧ ಮಾಡದೆ, ಯಾರನ್ನೂ ಒತ್ತೆಯಾಗಿಸಿಟ್ಟುಕೊಳ್ಳದೆ, ಲೋಲುಪನಾಗದೆ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಇತಿಹಾಸವನ್ನು ಡಾ.ರವಿಕುಮಾರ್ ನೀಹ ನಮ್ಮೆದುರು ತೆರೆದಿಟ್ಟಿದ್ದಾರೆ. ಅವರು ಸಂಶೋಧನೆಗೆ ತೊಡಗಿದ ಭೂಪ್ರದೇಶದಲ್ಲಿ ಕೊರಮ ಜಾತಿಯಂತಹ ಸಣ್ಣ ಸಮುದಾಯಗಳ ರಾಜರೂ ಆಳಿರುವ ಬಗ್ಗೆ ಕುರುಹುಗಳಿವೆ. ಇದನ್ನು ರವಿಕುಮಾರ್ ಸಮರ್ಥವಾಗಿ ಗುರುತಿಸಿದ್ದಾರೆ. ಆ ಮೂಲಕ ನಿಜವಾದ ಭಾರತ ಚರಿತ್ರೆಗೆ
ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಮುಂದಡಿಯಿಟ್ಟಿದ್ದಾರೆ. ಅವರ ಸಂಶೋಧನೆಯ ’ಅರಸು ಕುರನ್ಗರಾಯ’ ಕನ್ನಡಿಗರೆಲ್ಲರೂ ಓದಲೇಬೇಕಾದ ಕೃತಿಯಾಗಿದೆ.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಪುಸ್ತಕ ಪರಿಚಯ; ಕಾಣೆಯಾಗಿದ್ದಾರೆ ಸಂಪಾದಕರು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...