Homeಅಂಕಣಗಳುಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

ಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

- Advertisement -
- Advertisement -

“ಬೆಳಗಾವಿ ಸೇರಿದಂತೆ ಮರಾಠಿ ಮಾತಾಡುವ ನಾಲ್ಕು ಜಿಲ್ಲೆಗಳ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಇಂದಲ್ಲಾ ನಾಳೆ ಇದು ಆಗಲೇಬೇಕು (ಝಾಲಚ ಪಾಹೀಜೆ)” ಎನ್ನುವ ಘೋಷವಾಕ್ಯ ಗಡಿ ನಗರ ಬೆಳಗಾವಿಯಲ್ಲಿ ಚುನಾವಣೆ ಬಂದಾಗೊಮ್ಮೆ ಮೊಳಗುತ್ತದೆ. ಇದು ಸುಮಾರು 66 ವರ್ಷಗಳಿಂದ ನಡೆಯುತ್ತಿದೆ.

ಗಡಿ ಆಚೆಯ ಹೋರಾಟಗಾರರು ಹಾಗೂ ಈಚೆಗಿನ ಹೋರಾಟಗಾರರಿಗೆ ಜಟಾಪಟಿ ಶುರು ಆಗುತ್ತದೆ. ಆದರೆ ಅವರಿಬ್ಬರೂ ತಮ್ಮತಮ್ಮ ಸಿಟ್ಟನ್ನು ಬಡಪಾಯಿ ಬಸ್ಸುಗಳ ಮೇಲೆ ತೀರಿಸಿಕೊಳ್ಳುತ್ತಾರೆ. ಮೊದಲೇ ಸೊರಗಿಹೋಗಿರುವ ಮಹಾರಾಷ್ಟ್ರದ ಬಸ್ಸುಗಳು ಇನ್ನಷ್ಟು ಶಕ್ತಿಹೀನವಾಗಿ ಕುಟುಕುಟು ಓಡಾಡತೊಡಗುತ್ತವೆ. ಸೂಪರ್ ಸ್ಟಾರ್ ರಜನಿ ಅವರ ಪಾದಧೂಳು ಸೋಕಿದ ಬೆಂಗಳೂರಿನ ಮೆಜೆಸ್ಟಿಕ್ ಟು ಜೆಪಿ ನಗರವೆಂಬೋ ರೂಟಿನಲ್ಲಿ ಜಮ್‌ಜಮ್ ಅಂತ ಓಡಾಡಿ ನಂತರ ರಿಟೈರ್ ಆಗಿ ಕಲ್ಯಾಣ ಕರ್ನಾಟಕಕ್ಕೆ ಬಂದ ಕೆಂಪು ಬಸ್ಸುಗಳು ಇಲ್ಲಿ ಮೂತಿಗೆ ಮಸಿ ಬಳಿಸಿಕೊಳ್ಳುತ್ತವೆ; ರಾತ್ರಿ ಕತ್ತಲಾದ ಮೇಲೆ ಬೆಳಗಾವಿಗೆ ಬಂದು ಬಸ್ ನಿಲ್ದಾಣದ ಮೂಲೆಯಲ್ಲಿ ಯಾರಿಗೂ ಕಾಣದಂತೆ ನಿಂತುಕೊಳ್ಳುತ್ತವೆ. “ನಮ್ ಬ್ಯಾಂಗ್‌ಲೋರ್‌ನಲ್ಲಿ ಎಷ್ಟು ಚೆನ್ನಾಗಿದ್ದೆ, ಯಾರೋ ಕೆಟ್ಟ ಆಫೀಸರ್‌ಗಳು ನನ್ನನ್ನ ಜುಜುಬಿ ಒಂದು ಲಕ್ಷಕ್ಕೆ ಇಲ್ಲಿಗೆ ಮಾರ್‌ಬುಟ್ರೂ” ಅಂತ ಪಕ್ಕದ ಬಸ್ಸಿಗೆ ಗೋಳು ಹೇಳುತ್ತಾ, ಕಣ್ಣಿನಿಂದ ಕಪ್ಪಾಗಿ ಹೋದ ಇಂಜಿನ್ ಆಯಿಲ್ ಸುರಿಸುತವೆ.

ಸ್ಥಳೀಯ ‘ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ’ ಎನ್ನುವ ಪಕ್ಷ ಪ್ರತಿ ಬಾರಿ ಬಿಸಿರಕ್ತದ ತರುಣರನ್ನು ಕೆಣಕುತ್ತದೆ. ಅವರು ಕರ್ನಾಟಕ ಏಕೀಕರಣದ ದಿವಸ ‘ಕಾಳಾ ದಿನ್’ ಆಚರಿಸುತ್ತಾರೆ. ಪಾದಯಾತ್ರೆ, ಸೈಕಲ್ ಯಾತ್ರೆ ನಡೆಸುತ್ತಾರೆ. ಹಿರಿಯ ಪೊಲೀಸು ಅಧಿಕಾರಿಗಳು ಸುತ್ತಮುತ್ತಲಿನ ಜಿಲ್ಲೆಗಳ ಪೊಲೀಸರನ್ನು ಕರೆಸಿ ದೊಡ್ಡದೊಡ್ಡ ಬ್ಯಾರಿಕೇಡ್‌ಗಳನ್ನು ಹಾಕಿಸಿ, ರಾಜ್ಯೋತ್ಸವದ ಮೆರವಣಿಗೆ ಹಾಗೂ ಕಪ್ಪು ವಸ್ತ್ರಧಾರಿಗಳ ಯಾತ್ರೆ ಎರಡೂ ಒಂದಕ್ಕೊಂದು ಭೇಟಿ ಆಗದ ಹಾಗೆ ನೋಡಿಕೊಳ್ಳುತ್ತಾರೆ.

‘ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಾಗ ಬೇರೆಯವರ ಎಲೆಯಲ್ಲಿ ನೊಣ ಹೊಡೆಯುವ’ ಮಹಾರಾಷ್ಟ್ರದ ಕೆಲ ರಾಜಕಾರಣಿಗಳು ಬೆಳಗಾವಿಯ ವಿಷಯ ಬಂದಾಗ ಮುಂಬೈ ಬಿಟ್ಟು ಓಡೋಡಿ ಬರುತ್ತಾರೆ. ಇಲ್ಲಿ ಬಂದು ಬಂದ್, ಧರಣಾ, ಕರ್ಫ್ಯು ಮುಂತಾದವುಗಳನ್ನು ಪ್ರಾಯೋಜಿಸುತ್ತಾರೆ. ಆದರೆ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಭಯಂಕರ ಭಾಷಣ ಬಿಗಿಯುವ ಗಡಿ ಜಿಲ್ಲೆಯ ನಾಯಕರು ಗಡಿ ಸಮಸ್ಯೆ ಬಂದಾಗ ಬಾಯಲ್ಲಿರುವ ಅವಲಕ್ಕಿ ಚಪ್ಪರಿಸುತ್ತಾ ಮಿರ್ಚಿ-ಭಜಿಯ ಬಗ್ಗೆ ಚರ್ಚೆ ನಡೆಸುತ್ತಾ ಇರುತ್ತಾರೆ. ಇದೇ ನಾಯಕರು, ತಮ್ಮ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಇದ್ದಾಗ ಮುಂಬಯಿಗೆ ಹೋಗಿ ಅಲ್ಲಿನ ನೇತಾರರನ್ನು ಅಣ್ಣಾ-ಅಕ್ಕಾ ಎಂದು ಓಲೈಸಿ ಕೆಲಸ ಮಾಡಿಸಿಕೊಳ್ಳುತ್ತಾರೆ.

ಗಡಿ ಆಚೆ-ಈಚಿನ ನಾಯಕರು ತಮ್ಮ ಅನುಕೂಲಸಿಂಧು ರಾಜಕಾರಣದಿಂದಾಗಿ ಕನ್ನಡಿಗರು-ಮರಾಠಿಗರು ಒಬ್ಬರು ಇನ್ನೊಬ್ಬರನ್ನು ಸಂಶಯದಿಂದ ನೋಡುವ ಸನ್ನಿವೇಶ ಸೃಷ್ಟಿಸಿಬಿಟ್ಟಿದ್ದಾರೆ.

ಹಿಂದೆಲ್ಲಾ ಹೀಗಿರಲಿಲ್ಲ. ಗಾಂಧೀಜಿ ಅವರ ಯಂಗ್ ಇಂಡಿಯಾದಿಂದ ಪ್ರೇರಣೆ ಪಡೆದು ಬಾಬುರಾವ್ ಠಾಕೂರ್ ಅವರು ತರುಣ್ ಭಾರತ ಅನ್ನುವ ನಾಲ್ಕು ಪುಟಗಳ ಪತ್ರಿಕೆ ಶುರು ಮಾಡಿದರು. ಅದು ಎರಡು ಪುಟ ಕನ್ನಡ ಹಾಗೂ ಎರಡು ಪುಟ ಮರಾಠಿ ಇತ್ತು. ಹೀಗೆ ಕೆಲವು ವರ್ಷ ನಡೆಯಿತು. ಆದರೆ 1956ಕ್ಕೆ ರಾಜ್ಯ ಮರು ವಿಂಗಡಣೆ ಆದಾಗ ಅದರ ಸಂಪಾದಕೀಯ ದೃಷ್ಟಿ ಬದಲಾಯಿತು. ಅದು ಸಂಪೂರ್ಣ ಮರಾಠಿ ಪತ್ರಿಕೆ ಆಯಿತು. ಬೆಳಗಾವಿ ಸೇರಿದಂತೆ ಇತರ ಮರಾಠಿ ಬಹುಸಂಖ್ಯಾತ ಪ್ರದೇಶಗಳು ಮಹಾರಾಷ್ಟ್ರ ಸೇರಲೇಬೇಕು ಎನ್ನುವ ಏಕಮೇವ ಅಜೆಂಡಾವನ್ನು ಪತ್ರಿಕೆ ಅಳವಡಿಸಿಕೊಂಡಿತು. ಈಗಲೂ ಅದೇ ನಡೆಯುತ್ತಿದೆ. ಅವರ ಮಗ ಕಿರಣ್ ಠಾಕೂರ್ ಈಗ ಆ ಪತ್ರಿಕೆಯ ಸಂಪಾದಕರು. ಅವರು ದೇಶದಲ್ಲಿನ ಅತಿ ದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಒಂದರ ಮಾಲೀಕರು. ತಮ್ಮ ತಂದೆಯಿಂದ ಬಳುವಳಿ ಪಡೆದ ಪತ್ರಿಕೋದ್ಯಮ ಅಲ್ಲದೇ ಇನ್ನೂ ಅನೇಕ ವ್ಯವಹಾರ-ವ್ಯಾಪಾರಗಳನ್ನು ಅವರು ನಡೆಸುತ್ತಿದ್ದಾರೆ. ನೆನಪಾದಾಗ ಒಮ್ಮೆ ಮುಂಬಯಿಯ ಮಂತ್ರಾಲಯಕ್ಕೆ ಹೋಗಿ ಅಲ್ಲಿನ ತಮ್ಮ ದೇವರ ದರ್ಶನ ಮಾಡಿ, ಗಡಿ ವಿವಾದ ಇನ್ನೂ ಶತಮಾನಗಳವರೆಗೆ ಮುಂದುವರೆಯಲಿ, ನಮ್ಮ ಕೈ ತುಂಬಾ ಕೆಲಸ ಇರಲಿ ಎಂದು ಪ್ರಾರ್ಥಿಸಿ ಬರುತ್ತಾರೆ.

ಇದಕ್ಕೆಲ್ಲ ರಾಜ್ಯ ಮರು ವಿಂಗಡನಾ ಆಯೋಗದ ಶಿಫಾರಸು ಕಾರಣ ಅಂತ ಮರಾಠಿ ಹೋರಾಟಗಾರರು ಹೇಳುತ್ತಾರೆ. ಆದರೆ ಪ್ರಧಾನಿ ನೆಹರು ಅವರು ನೇಮಿಸಿದ ಮೊದಲ ಆಯೋಗ ರಾಜ್ಯಗಳನ್ನು ಭಾಷಾ ಆಧಾರದ ಮೇಲೆ ವಿಂಗಡಣೆ ಮಾಡಿ ಅಂತ ಹೇಳಲಿಲ್ಲ. ಭಾಷೆ- ಪ್ರದೇಶ ಮುಂತಾದ ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ರಾಜ್ಯ ಮರು ನಿರ್ಮಾಣ ಆಗಬಾರದು. ಅದು ರಾಜಧಾನಿಗೆ ಇರುವ ಅಂತರ, ಆಡಳಿತಾತ್ಮಕ ಅನುಕೂಲ, ಮೂಲ ಸೌಕರ್ಯಗಳ ಇರುವಿಕೆ-ಅಗತ್ಯ, ಜನಸಂಖ್ಯೆ ಇತ್ಯಾದಿ ಅಂಶಗಳ ಆಧಾರದ ಮೇಲೆ ನಿರ್ಧಾರ ಆಗಬೇಕು ಎಂದು ಆ ಸಮಿತಿಯ ತಜ್ಞರು ಹೇಳಿದರು. ಆಂಧ್ರದ ಭಾಷಾ ಪ್ರೇಮಿ ಹೋರಾಟಗಾರ ಪೊಟ್ಟಿ ಶ್ರೀರಾಮುಲು ಅವರು ಯಶಸ್ವಿ ಆಮರಣ ಉಪವಾಸ ಮಾಡಿದ ಮೇಲೆ ಪ್ರಧಾನಿ ಕಚೇರಿಯ ಮೇಲೆ ಒತ್ತಡ ಹೆಚ್ಚಾಗಿ ಎರಡನೇ ಆಯೋಗ ನೇಮಕ ಆಯಿತು. ಇವರು ಒಂದು ಭಾಷೆ ಮಾತಾಡುವವರು ಒಂದು ಕಡೆ ಎನ್ನುವ ತತ್ವದ ಮೇಲೆ ರಾಜ್ಯ ವಿಂಗಡಣೆ ಮಾಡಿದರು. ಆದರೂ ಒಂದೇ ಭಾಷೆ ಮಾತಾಡುವ ನಾಲ್ಕು ರಾಜ್ಯಗಳನ್ನು ಸೃಷ್ಟಿ ಮಾಡಿದರು. ಇರಲಿ.

ಇದನ್ನೂ ಓದಿ: ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

ಅದನ್ನು ಒಪ್ಪದ ಅಂದಿನ ಮಹಾರಾಷ್ಟ್ರ ಸರಕಾರ, ಕೇಂದ್ರಕ್ಕೆ ಮೊರೆಹೋಯಿತು. ಆಗ ಸರಕಾರ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ, ಕಾಶ್ಮೀರ ಮೂಲದವರಾದ ಮಿಹಿರ ಚಂದ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತು.

ಒಂದೇ ಭಾಷೆ ಮಾತಾಡುವರು ಒಂದೇ ಕಡೆ ಇರಲಿ ಎನ್ನುವ ತತ್ವ ಒಪ್ಪುವುದಾದರೆ ಬೆಳಗಾವಿ ಹಾಗೂ ಇತರ ಕೆಲವು ಪ್ರದೇಶ ಮಹಾರಾಷ್ಟ್ರಕ್ಕೆ ಹೋಗಲಿ, ಮಹಾರಾಷ್ಟ್ರದ ಕೆಲವು ತಾಲೂಕುಗಳು ಕರ್ನಾಟಕಕ್ಕೆ ಬರಲಿ ಎಂದು ಮಹಾಜನ್ ಆಯೋಗ ಶಿಫಾರಸು ಮಾಡಿತು. ಇದನ್ನು ಒಪ್ಪದ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟಿಗೆ ಹೋಯಿತು. ಅದರ ಕೊನೆಯ ವಾದ ವಿವಾದದ ತಾರೀಕು ನವೆಂಬರ್ 30. ತೀರ್ಪು ಬರುವುದು ಇನ್ನೂ ತಡ ಆಗಬಹುದು.

ಆಯಿತು. ಈಗ ಒಂದು ಭಾಷೆ ಮಾತಾಡುವವರು ಒಂದೇ ಕಡೆ ಇರಲಿ ಎನ್ನುವ ಬೇಡಿಕೆಯಲ್ಲಿ ಏನು ತಪ್ಪಿದೆ? ತಪ್ಪೇನೂ ಇಲ್ಲ. ಆದರೆ ಅದು ಭಾಷಾ ಗಣತಿಯ ಮೇಲೆ ಅವಲಂಬಿತವಾಗಿರಬೇಕೆ ಹೊರತು, ಚುನಾವಣೆ ಪೂರ್ವದಲ್ಲಿ ವಿವಿಧ ಜಾತಿ ನಾಯಕರು ತಮ್ಮತಮ್ಮ ಜಾತಿಯ ಸಂಖ್ಯೆಯ ಬಗ್ಗೆ ಮಾತಾಡುವ ತಳ ಬುಡವಿಲ್ಲದ ಮಾತುಗಳಂತೆ ಸುಳ್ಳಾಗಿರಬಾರದು.

ಇನ್ನೊಂದು, ಇದು ಸಾಂಸ್ಕೃತಿಕ ಹೋರಾಟ ಆಗಬೇಕೇ ಹೊರತು, ರಾಜಕೀಯ ಹೋರಾಟ ಆಗಬಾರದು. ಈಗ ಆಗುತ್ತಿರುವುದು ಎರಡನೆಯದು. ಇನ್ನೊಂದು ದುಃಖಕರ ಸಂಗತಿ ಅಂದರೆ ಇದರ ಚರ್ಚೆ ಆರೋಗ್ಯಕರವಾಗಿ ಆಗುತ್ತಿಲ್ಲ. ಮರಾಠಿ ಪತ್ರಿಕೆಗಳು ಕರ್ನಾಟಕವನ್ನು ‘ಕರ್ ನಾಟಕ’ ಅಂತ ಕರೆಯುವುದೂ, ಕನ್ನಡ ಪತ್ರಿಕೆಗಳು ಮರಾಠಿ ಹೊರಟಗಾರರನ್ನು ‘ನಾಡದ್ರೋಹಿಗಳು’, ‘ಕಂಗಾಲ ಕಂಪನಿ’ ಅಂತ ಕರೆಯುವುದು, ನಡೆದೇ ಇರುತ್ತದೆ.

ಗಡಿಯ ಮರಾಠಿ ಹೋರಾಟಗಾರರು ಕರ್ನಾಟಕ ಏಕೀಕರಣ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಾರೆ ಅನ್ನುವುದನ್ನು ಘೋರವಾಗಿ ಖಂಡಿಸಲಾಗುತ್ತದೆ. ಆದರೆ ಕಾಸರಗೋಡು ಕನ್ನಡಿಗರು ಕರ್ನಾಟಕ ಸೇರಲು ಬಯಸುತ್ತಿದ್ದಾರೆ ಎನ್ನುವ ಮಾತುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಲಾಗುತ್ತದೆ. ನಮಗೆ ಇದು ಸರಿ ಎನ್ನಿಸಿದರೂ ಹೊರಗಿನಿಂದ ನೋಡುವವರಿಗೆ ಕನ್ನಡಿಗರದು ಇಬ್ಬಗೆ ನೀತಿ ಅನ್ನಿಸಬಹುದು.

ಕೊನೆಯದಾಗಿ, ಯಾವ ರಾಜ್ಯವೂ ಇನ್ನೊಂದು ರಾಜ್ಯಕ್ಕೆ ತನ್ನ ಪ್ರದೇಶವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಈ ಐಡಿಯಾ ಪ್ರಾಯೋಗಿಕವಲ್ಲ ಎನ್ನುವುದು ಅನೇಕರಿಗೆ ಗೊತ್ತಿದೆ. ಅದನ್ನು ಜೋರಾಗಿ ಪ್ರತಿಪಾದಿಸುವವರಿಗೂ ಅದು ಗೊತ್ತಿರಬಹುದು. ಅವರು ಜೋರಾಗಿ ಹೇಳುತ್ತಿಲ್ಲ ಅಷ್ಟೇ. ಭಾಷೆಯ ಹೆಸರಿನಲ್ಲಿ ಮನೆ ಮಠ ಬಿಟ್ಟು, ಬಸ್ಸಿಗೆ ಮಸಿ ಹಚ್ಚುವ ಹುಡುಗರಿಗೆ ಇದು ಗೊತ್ತಾಗುತ್ತಿಲ್ಲ.

ಭಾಷಾ ಜಗಳ ಅನ್ನುವುದು ಅಂತಾರಾಷ್ಟ್ರೀಯ ಸಮಸ್ಯೆ. ಕೆನಡಾ ದೇಶದ ಕೇಬೇಕ ಪ್ರಾಂತದವರು ಫ್ರೆಂಚ್ ಮಾತಾಡುತ್ತಾರೆ. ಫ್ರಾನ್ಸ್ ದೇಶಕ್ಕೆ ಸೆಡ್ಡು ಹೊಡೆದು ಫ್ರೆಂಚ್ ಸಿನಿಮಾ ತಯಾರಿಸುತ್ತಾರೆ. ಟರ್ಕಿಯ ಅನೇಕ ಪ್ರದೇಶಗಳಲ್ಲಿ ಅರ್ಧ ಜನ ಒಂದು, ಇನ್ನರ್ಧ ಜನ ಇನ್ನೊಂದು ಭಾಷೆ ಮಾತಾಡುತ್ತಾರೆ. ಎಲ್ಲಾ ಹೋಗಲಿ, ಆಫ್ರಿಕಾದ ಉಬಾಂಗ ಪ್ರದೇಶದಲ್ಲಿ ಗಂಡು ಮಕ್ಕಳು ಬೇರೆ- ಹೆಣ್ಣು ಮಕ್ಕಳು ಬೇರೆ ಭಾಷೆ ಮಾತಾಡುತ್ತಾರೆ.

ಭಾಷೆ ನಮ್ಮನ್ನು ಜೋಡಿಸುವ ಉಪಕರಣ ಆಗಬೇಕೇ ಹೊರತು ಸ್ವಾರ್ಥ ಸಾಧನೆಯ ರಾಜಕಾರಣಿಗಳ ಆಯುಧವಾಗಬಾರದು; ವಿವಿಧ ಭಾಷೆ ಮಾತಾಡುವ, ನೆರೆ ಹೊರೆಯಲ್ಲಿ ಜೀವಿಸುವ ಅಣ್ಣ ತಮ್ಮಂದಿರನ್ನು ಪರಸ್ಪರ ವಿರೋಧಿಗಳನ್ನಾಗಿಸುವ ಹತಾರವಾಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...