Homeಮುಖಪುಟ’ಸಾಂವಿಧಾನಿಕ ತತ್ತ್ವಗಳ ಉಲ್ಲಂಘನೆ’: EWS ಭಿನ್ನಮತದ ತೀರ್ಪು

’ಸಾಂವಿಧಾನಿಕ ತತ್ತ್ವಗಳ ಉಲ್ಲಂಘನೆ’: EWS ಭಿನ್ನಮತದ ತೀರ್ಪು

- Advertisement -
- Advertisement -

’ಜನಹಿತ ಅಭಿಯಾನ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ಆರ್ಥಿಕವಾಗಿ ಹಿಂದುಳಿದ ವಿಭಾಗಗಳಿಗೆ (ಇಡಬ್ಲ್ಯುಎಸ್) ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟಿನ ನಿರ್ಧಾರವು ಸಾಮಾಜಿಕ ನ್ಯಾಯದ ಸಾಂವಿಧಾನಿಕ ಸ್ಫೂರ್ತಿಗೆ ವಿರುದ್ಧವಾಗಿದೆ. 103ನೇ ಸಾಂವಿಧಾನಿಕ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿಯುವ ನ್ಯಾಯಮೂರ್ತಿಗಳಾದ ಮಹೇಶ್ವರಿ, ತ್ರಿವೇದಿ ಮತ್ತು ಪರ್ದಿವಾಲ ಅವರನ್ನು ಒಳಗೊಂಡಿದ್ದ ಪೀಠದ ಬಹುಮತದ ತೀರ್ಮಾನವು ಜಾತಿ ಆಧರಿತ ಮೀಸಲಾತಿಯ ಸಿಂಧುತ್ವದ ಬಗ್ಗೆಯೇ ಕಂಗೇಡಿಸುವ ಮತ್ತು ಕಳವಳಕಾರಿ ಪ್ರಶ್ನೆಗಳನ್ನು ಕೇಳಿದೆ.

ಆರ್ಥಿಕವಾಗಿ ಹಿಂದುಳಿದ ವಿಭಾಗಗಳು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳ ಹಾಗೆಯೇ ತಾರತಮ್ಯ ಅನುಭವಿಸುತ್ತಿರುವ ಗುಂಪುಗಳು ಎಂದು ಈ ಬಹುಮತದ ನಿರ್ಧಾರವು ಹೇಳುತ್ತದೆ. ಇಡಬ್ಲ್ಯುಎಸ್ ಗುಂಪುಗಳು ಬಡತನದ ಕಾರಣದಿಂದ ತಾರತಮ್ಯ ಎದುರಿಸುವುದರಿಂದಾಗಿ ಸರಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 10 ಶೇಕಡಾ ಮೀಸಲಾತಿಗೆ ಅರ್ಹವಾಗಿವೆ ಎಂದು ತೀರ್ಪು ಹೇಳುತ್ತದೆ. ಸಾಂವಿಧಾನಿಕ ವಿಧಿ 15(4) ಮತ್ತು 16(4)ರ ಅನ್ವಯ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳು ಈಗಾಗಲೇ ಮೀಸಲಾತಿ ಪಡೆಯುತ್ತಿರುವುದರಿಂದ ಅವುಗಳನ್ನು ಈ ಇಡಬ್ಲ್ಯುಎಸ್ ವಿಭಾಗದಿಂದ ಹೊರತುಪಡಿಸಲಾಗಿದೆ.

ಮುಂದುವರಿದ ಜಾತಿಗಳು ಮತ್ತು ಇತರ ಮೀಸಲಾತಿಯಿಲ್ಲದ ಸಮುದಾಯಗಳಲ್ಲಿ ಕೂಡಾ ಬಡವರು ಇದ್ದಾರೆ ಎಂಬುದು ನಿಜ. ಬಡತನ ನಿರ್ಮೂಲನೆಗಾಗಿ ಸಂವಿಧಾನದ ಮಾರ್ಗದರ್ಶಕ ತತ್ವಗಳ ಅನುಸಾರ ಯಾವುದಾದರೂ ಶಾಸನಾತ್ಮಕ ಕ್ರಮ ಇರಬೇಕು. ಆದರೆ, ಅವರಿಗೆ ಮೀಸಲಾತಿ ನೀಡುವುದು ಸಾಂವಿಧಾನಿಕವಾಗಿ ಸೂಕ್ತವಲ್ಲದ ಪ್ರತಿಕ್ರಿಯೆಯಾಗಿದೆ. ಬಹುಮತದ ನಿರ್ಧಾರವು ಪರಿಹಾರಾತ್ಮಕ ತಾರತಮ್ಯದ ಸಾಂವಿಧಾನಿಕ ತರ್ಕವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ವರ್ಗಗಳು ಐತಿಹಾಸಿಕವಾಗಿ ಅನುಭವಿಸಿದ ಅನ್ಯಾಯಕ್ಕೆ ಪರಿಹಾರವೆಂದು ಸಾಂವಿಧಾನಿಕವಾಗಿ ನೀಡಲಾಗಿರುವ ಮೀಸಲಾತಿಯನ್ನು, ಅದು ಯಾವುದೋ ಬಡತನ ನಿರ್ಮೂಲನಾ ಕ್ರಮ ಎಂಬಂತೆ ಪರಿಗಣಿಸಿದೆ.

ಭಾರತದ ಸಂವಿಧಾನವು ಸ್ಪಷ್ಟಪಡಿಸುವ ಬಹುಮುಖ್ಯ ತತ್ವ ಎಂದರೆ, ಭಾರತೀಯ ಸಮಾಜದಲ್ಲೇ ಆಳವಾಗಿ ಬೇರೂರಿರುವ ಹಿಂದಿನ ಜಾತಿ ಆಧರಿತ ದಮನ ಮತ್ತು ಶೋಷಣೆಗೆ ಮೀಸಲಾತಿಯು ಪರಿಹಾರ ಒದಗಿಸಲು ಬಯಸುತ್ತದೆ ಎಂಬುದು.

ಐತಿಹಾಸಿಕವಾಗಿ ಬೇರೂರಿರುವ ತಾರತಮ್ಯದ ರೂಪಗಳಿಗೆ ಪರಿಹಾರವಾಗಿ ನೀಡಲಾಗಿರುವ ಮೀಸಲಾತಿಯನ್ನು, ಬಡತನದ ಕುರಿತ ನಿಜ ಆತಂಕಗಳ ನಿವಾರಣೆಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಅಲ್ಪಸಂಖ್ಯಾತ ತೀರ್ಮಾನ ನೀಡಿದ ನ್ಯಾಯಮೂರ್ತಿಗಳಾದ ಭಟ್ ಮತ್ತು ಲಲಿತ್ ಸೇರಿದಂತೆ ಐವರು ನ್ಯಾಯಾಧೀಶರೂ ಆರ್ಥಿಕ ಆಧಾರದ ಮೀಸಲಾತಿಯು ಸಾಂವಿಧಾನಿಕ ಎಂದು ಹೇಳಿರುವುದು ನಿರಾಶಾಜನಕವಾಗಿದೆ. ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಆರ್ಥಿಕ ಪರಿಸ್ಥಿತಿಯೇ ಏಕೈಕ ಮಾನದಂಡವಲ್ಲ ಎಂಬ ’ಇಂದಿರಾ ಸಾಹ್ನಿ ವರ್ಸಸ್ ಭಾರತ ಸರಕಾರ’ ಪ್ರಕರಣದ ಪೂರ್ವ ನಿದರ್ಶನವನ್ನು ಸದರಿ ನ್ಯಾಯಪೀಠ ಈ ತೀರ್ಪಿನಲ್ಲಿ ಬದಿಗೆ ಸರಿಸಿದೆ.

ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಬಹುಮತದ ತೀರ್ಮಾನವು ಆರ್ಥಿಕವಾಗಿ ಹಿಂದುಳಿದಿರುವವರ ಕೋಟಾದಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜಾತಿಗಳನ್ನು ಹೊರತುಪಡಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳು ತಾಳಮೇಳವಿಲ್ಲದಷ್ಟು ಅತಿ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಜನರ ಪ್ರಮಾಣವನ್ನು ಹೊಂದಿರುವುದರಿಂದ, ಈ ತಿದ್ದುಪಡಿಯು ಅವರನ್ನು ಮೀಸಲಾತಿಯಿಂದ ಹೊರತುಪಡಿಸಿರುವುದು ಅತಾರ್ಕಿಕವಾಗಿದೆ.

ವಾಸ್ತವದಲ್ಲಿ ನ್ಯಾಯಮೂರ್ತಿಗಳಾದ ಭಟ್ ಮತ್ತು ಲಲಿತ್ ಅವರ ಅಲ್ಪಸಂಖ್ಯಾತ ಅಭಿಪ್ರಾಯವು ಪರಿಶಿಷ್ಟ ಬುಡಕಟ್ಟುಗಳ ಒಟ್ಟು ಜನಸಂಖ್ಯೆಯಲ್ಲಿ 48 ಶೇಕಡಾ ಮಂದಿ, ಪರಿಶಿಷ್ಟ ಜಾತಿಗಳ 38 ಶೇಕಡಾ ಮಂದಿ ಹಾಗೂ ಒಬಿಸಿ ಜನಸಂಖ್ಯೆಯ 33 ಶೇಕಡಾ ಜನಕ್ಕೆ ಕಡಿಮೆ ಇಲ್ಲದಷ್ಟು ಮಂದಿ ಕಡುಬಡವರು ಎಂಬ ಸತ್ಯವನ್ನು ಗಮನಿಸಿದೆ. ಬಡ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಇಡಬ್ಲ್ಯುಎಸ್ ಕೋಟದಿಂದ ಹೊರಗಿಡುವ ಕ್ರಮದ ಉದ್ದೇಶವೆಂದರೆ, ಅದನ್ನು ಕೇವಲ ಮೇಲ್ಜಾತಿಯವರಿಗೆ ನೀಡುವುದು. ’ಆರ್ಥಿಕ ಮಾನದಂಡದ ಮೀಸಲಾತಿಗೆ ಅರ್ಹರಾಗಿರುವ ಮತ್ತು ಒಟ್ಟಾಗಿ ದೇಶದ ಜನಸಂಖ್ಯೆಯಲ್ಲಿ 82 ಶೇಕಡಾ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಅದರಿಂದ ಹೊರತುಪಡಿಸುವ ಕ್ರಮ’ವನ್ನು ತೀರ್ಪಿನ ಅಲ್ಪಸಂಖ್ಯಾತ ಅಭಿಪ್ರಾಯವು ಕಟುವಾಗಿ ಟೀಕಿಸಿದ್ದು, ’ಈ ಕ್ರಮವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದೆಂದು ಸೂಚಿಸುವಂತದ್ದು ಏನೂ ಇಲ್ಲ ಎಂದು ಹೇಳಿದೆ.

ಬಹುಸಂಖ್ಯಾತ ಅಭಿಪ್ರಾಯವು ಇದನ್ನು ನಿರಾಕರಿಸಿದರೂ, 103ನೇ ಸಾಂವಿಧಾನಿಕ ತಿದ್ದುಪಡಿಯು ಎಂಟು ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಮುಂದುವರಿದ ವರ್ಗಗಳಿಗೆ ನೀಡಿದ ಮೀಸಲಾತಿ ಎಂದು ಸೂಕ್ತವಾಗಿಯೇ ಕರೆಯಬಹುದು. (ಈ ಆದಾಯ ಮಿತಿಯನ್ನು ಸರಕಾರಿ ಅಧಿಸೂಚನೆಯಲ್ಲಿ ನೀಡಲಾಗಿದೆ.) ಹಿಂದೆ 50 ಶೇಕಡಾದಷ್ಟಿದ್ದ ಮುಕ್ತ ಸ್ಥಾನಗಳು ಎಲ್ಲರಿಗೂ ಮುಕ್ತವಾಗಿದ್ದವು. ಅಂದರೆ, ಮೀಸಲಾತಿ ಇರುವ ಅಭ್ಯರ್ಥಿಗಳಿಗೂ ಅನ್ವಯವಾಗುತ್ತಿದ್ದವು. ಪ್ರಸ್ತುತ ವ್ಯವಸ್ಥೆಯಲ್ಲಿ ಈ 10 ಶೇಕಡಾ ಮೀಸಲಾತಿಯನ್ನು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳಿಗೆ ಸಿಗದಂತೆ ಮಾಡಲಾಗಿದೆ.

ಹೀಗಿದ್ದರೂ, ಅಲ್ಪಸಂಖ್ಯಾತ ತೀರ್ಮಾನವು ತಾರತಮ್ಯ ರಹಿತತೆ ಕುರಿತ ವಿಶ್ಲೇಷಣೆಯಲ್ಲಿ ಬಹುಸಂಖ್ಯಾತ ತರ್ಕವನ್ನು ಗೌರವಿಸುತ್ತಲೇ ಹಲವಾರು ದಲಿತರು, ಆದಿವಾಸಿಗಳು ಮತ್ತು ಮಾನವಹಕ್ಕು ಗುಂಪುಗಳು ಬಹುಸಂಖ್ಯಾತ ತೀರ್ಮಾನದ ಬಗ್ಗೆ ವ್ಯಕ್ತಪಡಿಸುತ್ತಿರುವ ಆತಂಕಗಳಿಗೆ ಧ್ವನಿ ನೀಡಿದೆ.

ಅಲ್ಪಸಂಖ್ಯಾತ ತೀರ್ಮಾನವು ಈ ತಿದ್ದುಪಡಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ: “ನಮ್ಮ ಸಂವಿಧಾನವು ’ಹೊರತುಪಡಿಸುವ’ ಭಾಷೆಯಲ್ಲಿ ಮಾತನಾಡುವುದಿಲ್ಲ ಮತ್ತು ಈ ತಿದ್ದುಪಡಿಯು ’ಹೊರತುಪಡಿಸುವ’ ಭಾಷೆಯ ಮೂಲಕ ಸಾಮಾಜಿಕ ನ್ಯಾಯದ ಮೂಲಕಲ್ಪನೆಯನ್ನೇ ಮಾತ್ರವಲ್ಲ; ಆ ಮೂಲಕ- ಸಂವಿಧಾನದ ಮೂಲ ಸಂರಚನೆಯನ್ನೇ ಅವಗಣಿಸಿದೆ” ಎಂದಿದೆ. “ಮೊದಲ ಬಾರಿಗೆ ಸಾಮಾಜಿಕ ಅನ್ಯಾಯದ ಬಲಿಪಶುಗಳೂ, ಈ ದೇಶದಲ್ಲಿ ಅತ್ಯಂತ ಬಡವರೂ ಆಗಿರುವವರ ಹೊರತುಪಡಿಸುವಿಕೆಯನ್ನು ಕಾರ್ಯರೂಪಕ್ಕೆ ತರಲು ಸಾಂವಿಧಾನಿಕ ಅಧಿಕಾರವನ್ನು ಬಳಸಲಾಗಿದೆ” ಎಂದು ಅಲ್ಪಸಂಖ್ಯಾತ ತೀರ್ಮಾನವು ಕಟುವಾಗಿ ಹೇಳಿದೆ.

ಅಲ್ಪಸಂಖ್ಯಾತ ತೀರ್ಮಾನದ ಪ್ರಕಾರ, ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವರ್ಗಗಳನ್ನು ಇಡಬ್ಲ್ಯುಎಸ್ ಮೀಸಲಾತಿಯಿಂದ ಹೊರತುಪಡಿಸಿರುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾದುದು ಎಂದು ಅಲ್ಪಸಂಖ್ಯಾತ ಅಭಿಪ್ರಾಯವು ಹೇಳುತ್ತದೆ. ಈ ಸಮಾನತೆಯ ತತ್ವವು, ಅಂದರೆ ವಿಧಿ 14, 15, 16 ಮತ್ತು 17 ಎಂಬುದು “ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿನ ಪ್ರಕಾರ ಸಮಾನ ರಕ್ಷಣೆ” ಕುರಿತ ತೆಳುವಾದ ಹೇಳಿಕೆಯಲ್ಲ; “ಜಾತಿಯಂತಹ ಸೂಚಿತ ವಿಷಯಗಳ ಆಧಾರದಲ್ಲಿ ತಾರತಮ್ಯ ಮಾಡದಂತೆ ಸರಕಾರವನ್ನು ಪ್ರತಿಬಂಧಿಸುತ್ತದೆ” ಎಂದು ಈ ತೀರ್ಮಾನ ಹೇಳುತ್ತದೆ. ಅದು ವಿಧಿ 17ನ್ನು ಅಸ್ಪೃಶ್ಯತೆಯ ವಿರುದ್ಧ ಒಂದು ಅತ್ಯಂತ ಸ್ಪಷ್ಟವಾದ ಪ್ರತಿಬಂಧಕಾಜ್ಞೆ ಎಂದು ಹೇಳಿದ್ದು, “ಪ್ರತ್ಯಕ್ಷವಾಗಿ ಅಥವಾ ವರ್ಗೀಕರಣದ ಮೂಲಕ ಜಾತಿ ತಾರತಮ್ಯವನ್ನು ತಡೆಯುವ ಹೊಣೆಗಾರಿಕೆಯನ್ನು ಸರಕಾರದ ಮೇಲೆ ಹೊರಿಸಿರುವುದು ಮಾತ್ರವಲ್ಲ; ಅದು ಸಮಾನತೆಯ ತತ್ವದ ಮತ್ತು ಖಂಡಿತವಾಗಿಯೂ ಇಡೀ ಸಂವಿಧಾನದ ಚೌಕಟ್ಟಿನ ಬಹುದೊಡ್ಡ ಭಾಗವಾಗಿದೆ.”

ಸರಕಾರವು 103ನೇ ತಿದ್ದುಪಡಿಯ ಮೂಲಕ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತುಪಡಿಸಿರುವ ಕ್ರಮದಿಂದ ಸರಕಾರವು ಸಂವಿಧಾನದ ಈ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿದೆ ಎಂದು ಅಲ್ಪಸಂಖ್ಯಾತ ತೀರ್ಮಾನವು ಹೇಳುತ್ತದೆ.

ಹಾಗೆ ನೋಡಿದರೆ, ಈ ಹೊರತುಪಡಿಸುವಿಕೆಯು ಭಾರತೀಯ ಸಂವಿಧಾನದ ಮೂಲ ಸಂರಚನೆಯನ್ನೇ ಉಲ್ಲಂಘಿಸಿದೆ. ಭಾರತೀಯ ಸಾಂವಿಧಾನಿಕ ಕಾನೂನಿನ ಮೂಲ ಅಡಿಪಾಯವೇ “ಭಾರತೀಯ ಸಂವಿಧಾನದ ಅಸ್ಮಿತೆ, ವ್ಯಕ್ತಿತ್ವ, ಸ್ವಭಾವ ಮತ್ತು ಚಾರಿತ್ರ್ಯದ” ಒಳಗೇ ಅಡಕವಾಗಿರುವ ಆಯಾಮಗಳನ್ನು ಬದಲಿಸಲು ಸಂಸತ್ತಿಗೆ ಅಧಿಕಾರ ಇಲ್ಲವೆಂದು ಹೇಳುತ್ತದೆ.

ಇದನ್ನೂ ಓದಿ: EWS: ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿಯನ್ನೇ ದುರ್ಬಲಗೊಳಿಸುವ ಹುನ್ನಾರ

ಅಲ್ಪಸಂಖ್ಯಾತ ತೀರ್ಮಾನದ ಪ್ರಕಾರ ಈ ತಿದ್ದುಪಡಿಯು ಭಾರತೀಯ ಸಂವಿಧಾನದ ಮೂಲ ಸಂರಚನೆಯ ಉಲ್ಲಂಘನೆ ಆಗಿದೆ. ಅದು ಹೇಳುವಂತೆ, ಹೊರತುಪಡಿಸುವಿಕೆಯು ಅದರ ಎಲ್ಲಾ ಋಣಾತ್ಮಕ ಅರ್ಥಗಳ ಹೊರತಾಗಿಯೂ ಸಂವಿಧಾನದ ತತ್ವಗಳಲ್ಲಿ ಇಲ್ಲ. “ಮತ್ತದಕ್ಕೆ ನಮ್ಮ ಸಂವಿಧಾನದ ತತ್ವಗಳ ನಡುವೆ ಜಾಗವಿಲ್ಲ. ಹಿಂದುಳಿದಿರುವಿಕೆಯ ಆಧಾರದಲ್ಲಿ ಜನರನ್ನು ಹೊರತುಪಡಿಸುವುದು ಎಂದರೆ, ’ಸಂವಿಧಾನದ ಮೌಲ್ಯಗಳಾದ ಭ್ರಾತೃತ್ವ, ತಾರತಮ್ಯವೆಸಗದಿರುವ, ಹೊರತುಪಡಿಸುವಿಕೆಯನ್ನು ಇಲ್ಲವಾಗಿಸುವ” ಇತ್ಯಾದಿ ಸಾಂವಿಧಾನಿಕ ತತ್ವಗಳನ್ನು ನಾಶಪಡಿಸುವುದು ಎಂದರ್ಥ.

ಅಲ್ಪಸಂಖ್ಯಾತ ತೀರ್ಮಾನವು ಸಾಂವಿಧಾನಿಕ ತಿಳಿವಳಿಕೆಯ ಮೇಲೆ ಆಳವಾಗಿ ಬೇರುಬಿಟ್ಟಿದೆ. ಆದುದರಿಂದಲೇ ಸ್ವಾಗತಾರ್ಹವಾಗಿದೆ.

ಎಡಿಎಂ ಜಬ್ಬಲ್ಪುರ್ ನ್ಯಾಯಮೂರ್ತಿ ಖನ್ನಾ, ತುರ್ತುಪರಿಸ್ಥಿತಿಯ ಪ್ರಕರಣದಲ್ಲಿ ಹೇಳಿದ್ದು: “ಒಂದು ನ್ಯಾಯಾಲಯದಲ್ಲಿ ಭಿನ್ನಮತವು ಒಂದು ಕೊನೆಯ ಅವಕಾಶ.. ಅದು ಕಾನೂನಿನ ಸಹಜ ಸ್ಫೂರ್ತಿಗೆ, ಭವಿಷ್ಯದಲ್ಲಿ ಕಾಣಬಹುದಾದ ಬುದ್ಧಿವಂತಿಕೆಗೆ ಒಂದು ಮನವಿ… ಅದು ಬಹುಶಃ ನ್ಯಾಯವ್ಯವಸ್ಥೆಯೇ ದ್ರೋಹ ಬಗೆದಿರಬಹುದು ಎಂದು ತಾವು ನಂಬಿದ್ದ, ಹಿಂದಿನ ತೀರ್ಪಿನ ತಪ್ಪನ್ನು ಮುಂದಿನವರು ಸರಿಪಡಿಸಬಹುದು ಎಂಬ ವಿಶ್ವಾಸವೇ ಆ ಭಿನ್ನಮತದ ನ್ಯಾಯಾಧೀಶರದ್ದು.”

ಆ ದಿನಗಳು ಮುಂದೆ ಬೇಗನೇ ಬರಲಿ ಎಂದು ಆಶಿಸೋಣ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ರಾಜ್ಯಾಧ್ಯಕ್ಷರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...