Homeಮುಖಪುಟಗರ್ಭಪಾತ ಕಾನೂನು: ಮತ್ತೆ ಚರ್ಚೆಯ ಮುನ್ನಲೆಯಲ್ಲಿ..

ಗರ್ಭಪಾತ ಕಾನೂನು: ಮತ್ತೆ ಚರ್ಚೆಯ ಮುನ್ನಲೆಯಲ್ಲಿ..

- Advertisement -
- Advertisement -

ದೇಹ ನಿನ್ನದು, ಗರ್ಭ ನಿನ್ನದು ಆದರೆ ಗರ್ಭಪಾತ ಮಾಡುವ/ಮಾಡಿಸುವ ಅಧಿಕಾರ ನಿನಗಿಲ್ಲ. ಅಂದರೆ ಹೆಣ್ಣಿನ ದೇಹ ಅವಳದಾದರೂ ಅದರ ಮೇಲೆ ಅವಳಿಗೆ ಸಂಪೂರ್ಣ ಹಕ್ಕಿಲ್ಲ. ಈ ಗರ್ಭಪಾತ ಎಂಬುದು ಮುಂದುವರಿದ, ಮುಂದುವರಿಯುತ್ತಿರುವ ಅಥವಾ ಅತ್ಯಂತ ಸಂಪ್ರದಾಯಸ್ಥ ದೇಶಗಳು ಎನಿಸಿಕೊಂಡಲ್ಲಿ ಕೂಡ ಸಮಾನವಾಗಿ ಅಗಾಗ ಚರ್ಚೆಗೆ ಗ್ರಾಸವಾಗುವ ವಿಷಯ.

ಮನುಷ್ಯರು ಎಚ್ಟೇ ಮುಂದುವರಿದರೂ Reproduction ಅಥವಾ ಸಂತಾನೋತ್ಪತ್ತಿ ಕ್ರಿಯೆಯನ್ನು ಧಾರ್ಮಿಕ ಮತ್ತು ಸಾಮಾಜಿಕ ದೃಷ್ಟಿಕೋನದಿಂದಲೇ ಹೆಚ್ಚಾಗಿ ನೋಡುವುದರಿಂದ ಆ ಕ್ರಿಯೆಯ ಸುತ್ತ ನೂರಾರು ಚರ್ಚೆಗಳು ಮತ್ತು ವಿವಾದಗಳು ಹೆಣೆದುಕೊಂಡಿರುತ್ತವೆ. ಅಂಥ ಚರ್ಚೆ ಮತ್ತು ವಿವಾದಗಳು ಆಯಾ ಕಾಲ ದೇಶದ ಗಡಿಗಳನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದರೆ ಅದರ ಪ್ರಸ್ತುತತೆ ಮತ್ತು ಅಗತ್ಯಗಳ ಬಗ್ಗೆ ಮುಕ್ತ ಚರ್ಚೆಯಾಗುವ ಅವಶ್ಯಕತೆ ಹೆಚ್ಚಾಗಿದೆ ಎಂದರ್ಥ.

ಇತ್ತೀಚೆಗೆ ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತ ಕಾನೂನನ್ನು ತೆಗೆದು ಹಾಕಿದಾಗ ಎಷ್ಟೋ ಜನ ’ಅಮೆರಿಕದಂತಹ ದೇಶದಲ್ಲಿ ಇದು ಸಾಧ್ಯವೇ?’ ಎಂದು ಆಶ್ಚರ್ಯಪಟ್ಟರು. ಅದಕ್ಕೆ ಕಾರಣವೂ ಇದೆ. ಒಂದು ಅತ್ಯಂತ ಮುಂದುವರೆದ ದೇಶ, ಉತ್ತಮ ಆಧುನಿಕ ಜೀವನಶೈಲಿಗೆ ಹೆಸರಾದ ದೇಶ ಎಂದು ಗುರುತಿಸಲ್ಪಡುವ ಅಮೆರಿಕದಲ್ಲಿ ಇಂಥ ಪುರೋಗಾಮಿ ಕಾನೂನು ಬರಬಹುದೇ ಎಂದು ಜನ ಆಶ್ಚರ್ಯಪಡುವುದು ಸಹಜ. ಆದರೆ ಈ ಬದಲಾವಣೆಗೆ ಮುನ್ನುಡಿ ಬರೆದಿದ್ದು 2016ರಲ್ಲಿ ಅಮೆರಿಕ ಅಧ್ಯಕ್ಷ ಚುನಾವಣೆಯ ಸಮಯದಲ್ಲಿ. ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧ್ಯಕ್ಷೀಯ ಚುನಾವಣಾ ಪ್ರಣಾಳಿಕೆಯಲ್ಲಿ 1973ರಿಂದ ಜಾರಿಗೆ ಬಂದ ಗರ್ಭಪಾತ ಕಾನೂನನ್ನು ತೆಗೆದುಹಾಕುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೇ ಅಧಿಕಾರಕ್ಕೆ ಬಂದ ಕೂಡಲೇ ಸುಪ್ರೀಂಕೋರ್ಟಿಗೆ 3 ಹೊಸ ಜಡ್ಜ್‌ಗಳ ನೇಮಕ ಮಾಡಿದ್ದರು. ಅದರ ಪರಿಣಾಮವಾಗಿಯೇ ಇತ್ತೀಚೆಗೆ 1973ರಲ್ಲಿ ರೋ ವರ್ಸಸ್ ವೇಡ್ ಕೇಸಿನ ಮೂಲಕ ನೀಡಲಾಗಿದ್ದ ಗರ್ಭಪಾತದ ಸ್ವಾತಂತ್ರ್ಯವನ್ನು ತಿರಸ್ಕರಿಸಿ ಪರಿಸ್ಥಿತಿಯನ್ನು ದಶಕಗಳಷ್ಟು ಹಿಂದಕ್ಕೆ ಒಯ್ಯಲಾಗಿದೆ.

ಅಮೆರಿಕದಲ್ಲಿ ಮೊದಲಿನಿಂದಲೂ ಗರ್ಭಪಾತ ಎಂಬುದು ಅತ್ಯಂತ ಚರ್ಚಾಹ ವಸ್ತು. ಸಂಪ್ರದಾಯವಾದಿಗಳು ಮತ್ತು ಲಿಬರಲ್ಸ್‌ಗಳ ನಡುವೆ ಈ ಚರ್ಚೆ ನಡೆಯುತ್ತಲೇ ಇರುತ್ತದೆ. ಸಂಪ್ರದಾಯವಾದಿಗಳು ಮಕ್ಕಳನ್ನು/ಗರ್ಭವನ್ನು ದೇವರ ಆಶೀರ್ವಾದ ಎಂದು ಬಗೆದರೆ, ಲಿಬರಲ್ಸ್ ’ಮಹಿಳೆಗೆ ಸಂವಿಧಾನಾತ್ಮಕವಾಗಿ ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿದೆ’ ಎನ್ನುತ್ತಾರೆ.

ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಅವಕಾಶ ನೀಡಿದ ಹಳೆಯ ತೀರ್ಪನ್ನು ತೆಗೆದು ಹಾಕಿದ ಕೂಡಲೇ 13 ರಾಜ್ಯಗಳು ಈ ತೀರ್ಪನ್ನು ತಕ್ಷಣವೇ ಒಪ್ಪಿಕೊಂಡು ಅನುಷ್ಠಾನಕ್ಕೂ ತಂದವು. ಸಂಪ್ರದಾಯವಾದಿಗಳಾದ ರಿಪಬ್ಲಿಕನ್ ಬಹುಮತ ಇರುವ ರಾಜ್ಯಗಳು ಬಹುತೇಕ ಇದನ್ನು ಇರುವಂತೆಯೇ ಸ್ವೀಕರಿಸಿ ತಕ್ಷಣದಿಂದಲೇ ಜಾರಿಗೆ ತಂದವು.

ಅಮೆರಿಕದ ಮಹಿಳಾ ಹೋರಾಟಗಾರರು, ಲಿಬರಲ್ಸ್ ಹಾಗೂ ತೀರ್ಪಿನ ಬಗ್ಗೆ ಅಸಮಾಧಾನವಿರುವವರೆಲ್ಲ ’ನನ್ನ ದೇಹ ನನ್ನ ಸ್ವಾತಂತ್ರ್ಯ’ ಎಂಬ ಘೋಷಣೆಯೊಂದಿಗೆ ವಿಶ್ವದಾದ್ಯಂತ ತಮ್ಮ ಈ ನಿಲುವಿಗೆ ಸಮರ್ಥನೆಯನ್ನು ಮತ್ತು ಬೆಂಬಲವನ್ನು ಬಯಸುತ್ತಿದ್ದಾರೆ. ಒಟ್ಟಿನಲ್ಲಿ ಗರ್ಭಪಾತ ಎಂಬ ವಿಷಯ ವೈಜ್ಞಾನಿಕ ಮತ್ತು ವೈಯಕ್ತಿಕ ಪರಿಧಿಯನ್ನು ಬಿಟ್ಟು ಬೇರೆಯದೇ ಲೋಕ ಪ್ರವೇಶಿಸಿದೆ.

ಗರ್ಭಪಾತ ವಿರೋಧಿ ಧೋರಣೆಗಳು ಸ್ಪಷ್ಟವಾಗಿ ಕಾಣಲು ಪ್ರಾರಂಭವಾಗುವುದು 19ನೇ ಶತಮಾನದಲ್ಲಿ. ಯುರೋಪಿನ ದೇಶಗಳು ವಿಶ್ವದಾದ್ಯಂತ ತಮ್ಮ ವಸಾಹತುಗಳನ್ನು ಸ್ಥಾಪಿಸುತ್ತ ಹೋದಂತೆ ತಮ್ಮ ಕಾನೂನು ವ್ಯವಸ್ಥೆಯನ್ನೂ ಕೊಂಡೊಯ್ದರು. ಆ ಕಾನೂನುಗಳಲ್ಲಿ ಕೆಲವೊಂದು ಅವರ ಧಾರ್ಮಿಕ ವಿಚಾರಧಾರೆಗಳಿಗೆ ಪೂರಕವಾಗಿದ್ದು ಅದಕ್ಕೆ ಕಾನೂನಿನ ಚೌಕಟ್ಟನ್ನು ಒದಗಿಸಲಾಯಿತು. ಆದರೆ ಕ್ರಮೇಣ ಜನ ಹಾಗೂ ದೇಶಗಳ ಬದಲಾದ ರಾಜಕೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಸುರಕ್ಷಿತ ಗರ್ಭಪಾತ ಎನ್ನುವ ಹೊಸ ತತ್ವ ರೂಪುಗೊಂಡಿತು. ಆದರೆ ಹೆಚ್ಚುಕಮ್ಮಿ ಕ್ರಿಶ್ಚಿಯಾನಿಟಿ ತರಹವೇ ಆದರೂ ಅದಕ್ಕಿಂತ ತೀವ್ರವಾಗಿ ಗರ್ಭಪಾತವನ್ನು ವಿರೋಧಿಸುವ ಧರ್ಮವೆಂದರೆ ಇಸ್ಲಾಂ. ಕೇವಲ ’ಟ್ಯುನಿಸಿಯಾ ಮತ್ತು ಯುಎಇ’ಗಳಲ್ಲಿ ಮಾತ್ರ 120 ದಿನಗಳ ಒಳಗಿನ ಗರ್ಭವನ್ನು ತೆಗೆಸಬಹುದು. ಇದನ್ನು ಹೊರತುಪಡಿಸಿ ಯಾವುದೇ ಇಸ್ಲಾಮಿಕ್ ದೇಶಗಳಲ್ಲಿ ಗರ್ಭಪಾತಕ್ಕೆ ಅವಕಾಶವಿಲ್ಲ. ಕೆಲವು ವರ್ಷಗಳ ಹಿಂದೆ ಐರ್ಲೆಂಡಿನಲ್ಲಿ ಭಾರತದ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಎಂಬುವವರು ಗರ್ಭಧಾರಣೆಯಲ್ಲಿ ತೊಂದರೆಯಾಗಿ ಗರ್ಭಪಾತಕ್ಕೆ ಅರ್ಜಿ ಸಲ್ಲಿಸಿದಾಗ ಅದು ಇಂಥದೇ ಕಾನೂನಿನ ತೊಡಕುಗಳಿಗೆ ಸಿಕ್ಕು ಅದಕ್ಕೆ ಅವಕಾಶ ಸಿಗದೆ ಗರ್ಭದಲ್ಲಿ ನಂಜು ಹರಡಿ ಅವರು ಮೃತಪಟ್ಟ ಘಟನೆ ನಡೆದಿತ್ತು. ಇದು ಗರ್ಭಪಾತ ಕಾನೂನುಗಳನ್ನು ಬಹಳ ಚರ್ಚೆಗೆ ಒಳಪಡುವಂತೆ ಮಾಡಿತ್ತು. ಆದರೆ ಅದರ ಕಾನೂನು ಪರಿಹಾರಕ್ಕೆ ಬಹಳ ಕಾಲ ಬೇಕಾಯಿತು.

ಜಗತ್ತಿನ ಬಹುತೇಕ ದೇಶಗಳು ಕೆಲವೊಂದು ನಿರ್ದಿಷ್ಟ ಕಾರಣಗಳಿಗಾಗಿ ಗರ್ಭಪಾತಕ್ಕೆ ಅವಕಾಶ ನೀಡುತ್ತವೆ ಮತ್ತು ಕೆಲವು ನಿರ್ದಿಷ್ಟ ಅವಧಿಯವರೆಗೆ ನೀಡುತ್ತವೆ. ಅವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ತಾಯಿಯ ಜೀವಕ್ಕೆ ಅಪಾಯವಿದ್ದಲ್ಲಿ ಎಂಬುದು; ಇನ್ನುಳಿದಂತೆ ಹುಟ್ಟಲಿರುವ ಮಗುವಿನ ಅಂಗವೈಕಲ್ಯ, ಬೆಳವಣಿಗೆಯ ಕೊರತೆ, ಸಾಮಾಜಿಕ ಆರ್ಥಿಕ ಕಾರಣಗಳು ಮುಂತಾದವು.

ಆದರೆ ಈ ರೀತಿಯ ನಿರ್ಬಂಧಗಳು ಕಾನೂನುಬಾಹಿರ ಗರ್ಭಪಾತಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಸರ್ವೆಗಳು ಹೇಳುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸರ್ವೇ ಪ್ರಕಾರ ಯಾವುದೇ ಪ್ರತಿಬಂಧಗಳಿಲ್ಲದೆ ಗರ್ಭಪಾತಕ್ಕೆ ಅವಕಾಶವಿರುವ ಮತ್ತು ಅದನ್ನು ಅಪರಾಧಿತವಲ್ಲದ (Decriminalised) ಕ್ರಿಯೆ ಎಂದು ಪರಿಗಣಿಸಿರುವ ದೇಶಗಳಲ್ಲಿ ’ಗರ್ಭಪಾತದ ಸಮಯದಲ್ಲಿ ಮಹಿಳೆಯ ಸಾವಿನ ಸಂಖ್ಯೆ ’೦’ (ಶೂನ್ಯ) ಇದೆ. ಕೆನಡಾ ಅಂಥ ಒಂದು ದೇಶ. ಗರ್ಭಪಾತಕ್ಕೆ ಕಾನೂನಿನ ಸುರಕ್ಷೆ ಇರುವುದರಿಂದ ಅಲ್ಲಿ ಕದ್ದು ಮುಚ್ಚಿ ಗರ್ಭ ಎಸಗುವ ಅಥವಾ ಅನಾರೋಗ್ಯಕರವಾದ ಹಾಗೂ ಸುರಕ್ಷಿತವಲ್ಲದ ಕಾನೂನುಬಾಹಿರ ಗರ್ಭಪಾತ ಕೇಂದ್ರಗಳಿಗೆ ಹೋಗುವ ಪ್ರಮೇಯವೇ ಇರುವುದಿಲ್ಲ.

ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿಯೂ ಗರ್ಭಪಾತಕ್ಕೆ ಮೇಲೆ ಹೇಳಿದ ಕಾರಣಗಳ ರೀತಿಯಲ್ಲಿಯೇ ಅವಕಾಶವಿದೆ. ಗರ್ಭಧಾರಣೆಯ ಮೊದಲ ಕೆಲವಾರಗಳಲ್ಲಿ ನಿರ್ದಿಷ್ಟವಾದ ಕಾರಣಗಳಿದ್ದರೆ ಗರ್ಭಪಾತವನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾಡಬಹುದು. 20 ವಾರಗಳಿಗಿಂತ ಹೆಚ್ಚಿದ್ದರೆ ನ್ಯಾಯಾಲಯದ ಅನುಮತಿಯಿಂದಲೇ ಮಾಡಬೇಕು.

ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಏಳುವ ಪ್ರಶ್ನೆ ಎಂದರೆ ಈ ಎಲ್ಲ ಪ್ರಕ್ರಿಯೆಲ್ಲಿ ಗರ್ಭ ಧರಿಸಿದ ಮಹಿಳೆಯ ಪಾತ್ರ ಏನು? ಮೂಲಭೂತ ಸ್ವಾತಂತ್ರ್ಯ ಎಂಬ ಪರಿಕಲ್ಪನೆಯಲ್ಲಿ ಅವಳಿಗೆ ತನ್ನ ದೇಹದ ಮೇಲೆ ಹಕ್ಕಿಲ್ಲವೆ? ಎಂಬುದು.

ಇನ್ನೊಂದು ಪ್ರಶ್ನೆ, ಕೇವಲ ಗರ್ಭಪಾತಕ್ಕೆ ಅವಕಾಶ ಇದೆ ಎಂಬ ಕಾರಣಕ್ಕೆ ಜನ ಅನವಶ್ಯಕವಾಗಿ ಗರ್ಭಪಾತ ಮಾಡಿಸುತ್ತಾರಾ? ಎಂಬುದು.

ಈ ಎರಡನೇ ಪ್ರಶ್ನೆಯನ್ನೇ ಮೊದಲು ನಮ್ಮ ದೇಶದ ಹಿನ್ನೆಲೆಯಲ್ಲಿ ನೋಡಿದರೆ “ಹೌದು ದುರುಪಯೋಗ ಆಗುತ್ತದೆ” ಎನ್ನಬಹುದು. ಗಂಡು ಮಕ್ಕಳಿಂದಲೇ ವಂಶೋದ್ಧಾರ ಎನ್ನುವ ಜನರ ಮಧ್ಯೆ ಹೆಣ್ಣು ಭ್ರೂಣವನ್ನು ತೆಗೆಸುವ ಲಕ್ಷಾಂತರ ಪ್ರಕರಣಗಳು ನಮ್ಮ ಎದುರಿಗಿವೆ. ಗರ್ಭಧರಿಸಿದ ಮಹಿಳೆಯ ಆರೋಗ್ಯ ಕೆಲವು ಬಾರಿ ಪ್ರಾಣಕ್ಕೆ ಕುತ್ತು ಉಂಟಾಗುವ ಸಂದರ್ಭಗಳೂ ಇವೆ. ಭಾರತದಂತಹ ದೇಶದಲ್ಲಿ ಇದಕ್ಕೆ ಕಾನೂನಿನ ಸ್ಪಷ್ಟ ಚೌಕಟ್ಟು ಮತ್ತು ಪರಿಭಾಷೆಯ ಅಗತ್ಯ ಖಂಡಿತವಾಗಿಯೂ ಇದೆ. ಇನ್ನು ಮೊದಲನೆಯ ಪ್ರಶ್ನೆಗೆ ಬಂದರೆ ಮಹಿಳೆಗೆ ಖಂಡಿತವಾಗಿಯೂ ಈ ಮೇಲೆ ಹೇಳಲಾದ ಕಾರಣಗಳ ಹೊರತಾಗಿಯೂ ತನ್ನ ದೇಹದ ಮೇಲೆ ಸ್ವಾತಂತ್ರ್ಯ ಹೊಂದುವ ಅಗತ್ಯವಿದೆ. ಗರ್ಭಧಾರಣೆಯನ್ನು ಕೇವಲ ಪುರುಷಪ್ರಧಾನ ವ್ಯವಸ್ಥೆಯ ಕಣ್ಣಿನಿಂದ ನೋಡುವುದನ್ನು ಬಿಟ್ಟು ಬದಲಾಗುತ್ತಿರುವ ಕಾಲಮಾನದಲ್ಲಿ ಮಹಿಳೆಯ ಅಗತ್ಯ ಮತ್ತು ಮನಸ್ಥಿತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಅಗತ್ಯ ಹಿಂದೆಗಿಂತಲೂ ಹೆಚ್ಚಿದೆ.,

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...