Homeಕರ್ನಾಟಕಆಹಾರ ಸಂಘರ್ಷಗಳ ಹಿಂದೆ ವೈದಿಕರ ಹುನ್ನಾರವಿರುತ್ತದೆ - ಕೆ.ನೀಲಾ

ಆಹಾರ ಸಂಘರ್ಷಗಳ ಹಿಂದೆ ವೈದಿಕರ ಹುನ್ನಾರವಿರುತ್ತದೆ – ಕೆ.ನೀಲಾ

- Advertisement -
- Advertisement -

ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.

ಆಹಾರ ಕ್ರಮದ ಬಗ್ಗೆ ಚರ್ಚೆ ಹೊಸದೂ ಅಲ್ಲ, ಅಚ್ಚರಿ ಪಡುವಂಥದ್ದೂ ಅಲ್ಲ. ಇದರ ಹಿಂದೆ ಜನರನ್ನು ವಿಂಗಡಿಸುವ, ಶ್ರಮಿಕ ವರ್ಗವನ್ನು ಟೊಳ್ಳಾಗಿಸುವ ಸಂಕೀರ್ಣ ಐತಿಹಾಸಿಕ ಜಾಲ ಇರೋದ್ರಿಂದ ಇದು ಆಗಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತೆ. ವೈದಿಕ ಆಹಾರ ಪರಂಪರೆ ಮತ್ತು ಶ್ರಮಿಕ ಆಹಾರ ಪರಂಪರೆಗಳ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಬಂದಿದೆ.

ವಚನಕಾರರ ಕಾಲಘಟ್ಟದಲ್ಲೂ ಎದುರಾದ ಈ ಆಹಾರ ಸಾಂಸ್ಕೃತಿಕ ಮುಖಾಮುಖಿಯ ಸ್ಪಷ್ಟ ದೃಷ್ಟಾಂತ, ಕಣ್ಣೋಟ ನಮಗೆ ಹರಿಹರ ರಗಳೆಯ ಉಳ್ಳಿ ಪರ್ವದಲ್ಲಿ ಕಾಣಸಿಗುತ್ತದೆ. ಒಮ್ಮೆ ಮಹಾಮನೆಯಲ್ಲಿ ದಾಸೋಹದ ತಯಾರಿ ನಡೆಯುತ್ತಿದ್ದಾಗ ತಳಸಮುದಾಯದ ಆಹಾರ ಪದಾರ್ಥಗಳಾದ ಈರುಳ್ಳಿ, ಬೆಳ್ಳುಳ್ಳಿ, ಹಸೀಶುಂಠಿ ಉಪಯೋಗಿಸಿ ಆಹಾರ ಸಿದ್ದಪಡಿಸಲಾಗುತ್ತಿರುತ್ತೆ. ಅದೇ ಮಾರ್ಗವಾಗಿ ಬರುವ ಬಸವಣ್ಣ ಆ ವಾಸನೆ ಅಹಿತವೆನಿಸಿ, ಮೂಗು ಮುಚ್ಚಿಕೊಳ್ಳುತ್ತಾರೆ. ಬಿಸಿಲಿನಲ್ಲಿ ದುಡಿಯುವ ಶ್ರಮಜೀವಿಗಳಿಗೆ ಪೌಷ್ಠಿಕತೆ ತಂದುಕೊಡುವ ತಮ್ಮ ಆಹಾರದ ಬಗ್ಗೆ ಬಸವಣ್ಣ ಕೀಳಾಗಿ ಕಂಡಿದ್ದಾರೆ ಎಂದು ಕೋಪಿಸಿಕೊಳ್ಳುವ ಅಡುಗೆ ಮಾಡುತ್ತಿದ್ದ ಶರಣ, ಮಹಾಮನೆಯಿಂದ ಹೊರಟುಹೋಗುತ್ತಾರೆ. ಕೊನೆಗೆ ತನ್ನ ತಪ್ಪಿನ ಅರಿವಾದ ಬಸವಣ್ಣ, ಈರುಳ್ಳಿ ಖಾದ್ಯಗಳು, ಈರುಳ್ಳಿಯಿಂದ ಅಲಂಕರಿಸಿದ ಎತ್ತಿನಬಂಡಿಯ ಸಹಿತ ಆ ಶರಣರ ಬಳಿಹೋಗಿ ಕ್ಷಮೆ ಬೇಡುತ್ತಾರೆ. ಇದು ಆಹಾರ ಕ್ರಮದ ಬಗ್ಗೆ ಮಹಾಮನೆಯಲ್ಲಿ ತಳೆದಿದ್ದ ನಿಲುವು.

ಮಹಾಮನೆ ಎನ್ನುವುದೇ ನಿರಂತರ ಜಿಜ್ಞಾಸೆ, ಚರ್ಚೆಗಳ ಕೂಟವಾಗಿತ್ತು. ತಂತ್ರಜ್ಞಾನವೇ ಇಲ್ಲದ ಆ ಕಾಲಘಟ್ಟದಲ್ಲೂ ಶರಣರು ವೈಜ್ಞಾನಿಕ, ಜನಪರ ನಿಲುವುಗಳನ್ನು ತಳೆಯಲು ಸಾಧ್ಯವಾದದ್ದು ಅಂತಹ ಮುಕ್ತ ಸಂವಾದಗಳಿಂದ. ಅಂತಹ ಸಂವಾದ ಆಹಾರ ಕ್ರಮದಲ್ಲೂ ಏರ್ಪಟ್ಟಿತ್ತು. ಮೇಲ್ಜಾತಿಗಳಿಂದ ಬಂದ ವಚನಕಾರರು ಸಸ್ಯಾಹಾರವನ್ನು ಪ್ರತಿಪಾದಿಸಿದರೆ, ಶ್ರಮಿಕ ವರ್ಗದ ವಚನಕಾರರು ತಮ್ಮ ಮಾಂಸಾಹಾರ ಪದ್ಧತಿಯನ್ನು ಪ್ರತಿಪಾದಿಸಿಕೊಂಡಿದ್ದರು. ಅಂತಹ ಸಂವಾದದ ಅಂತಿಮ ತೀರ್ಮಾನವನ್ನು ಮೇಲೆ ಉಲ್ಲೇಖಿಸಲಾದ ದೃಷ್ಟಾಂತದಿಂದ ಅರ್ಥ ಮಾಡಿಕೊಳ್ಳಬಹುದು. ವಚನಕಾರರು ಯಾವುದೇ ಬಗೆಯ ಆಹಾರ ಪದ್ಧತಿಯ ಹೇವರಿಕೆ ಅಥವಾ ಅವೈಜ್ಞಾನಿಕ ಅಭಿಪ್ರಾಯಗಳನ್ನು ಇಟ್ಟುಕೊಂಡಿರಲಿಲ್ಲ. ಅಂತಿಮವಾಗಿ ಆಹಾರದ ಆಯ್ಕೆಯನ್ನು ಆಯಾ ಪ್ರದೇಶದ ಲಭ್ಯತೆ ಮತ್ತು ಅವಶ್ಯಕತೆಯ ಭಾಗವಾಗಿ ಅವರು ಗೌರವಿಸಿದ್ದರೇ ವಿನಾಃ ಅದನ್ನು ಮೇಲು-ಕೀಳರಿಮೆಯ ಮಾನದಂಡವಾಗಿ ಕಂಡಿರಲಿಲ್ಲ. ಬಸವಣ್ಣನವರ `ಎಡದ ಕೈಯಲ್ಲಿ……..’ ವಚನವೇ ಇದಕ್ಕೆ ಸಾಕ್ಷಿ.

ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚಿಂತನಾ ಪ್ರಧಾನವಾದ ಚರ್ಚೆಗಳು ಶ್ರಮಿಕ ಲೋಕದ ಬದುಕಿಗೆ ಹತ್ತಿರ ಅನಿಸುತ್ತಿದ್ದವು, ಯಾಕೆಂದರೆ ಅವು ವೈಜ್ಞಾನಿಕ ಚಿಂತನೆಗಳಾಗಿರುತ್ತಿದ್ದವು. ಮೌಢ್ಯದಿಂದ ಹೊರಬರುವುದೇ ವಚನಸಾಹಿತ್ಯದ ಆಶಯವಾಗಿರುವುದರಿಂದ ಅಲ್ಲಿ ಆಹಾರದ ಬಗೆಗಿನ ತಾರತಮ್ಯದ ನಿಲುವನ್ನು ಹುಡುಕ ಹೊರಡುವುದೇ ಅತಾರ್ಕಿಕವಾದುದು, ಅವಾಸ್ತವಿಕವಾದುದು. ಈ ಆಹಾರ ಸಂಸ್ಕøತಿಯ ಮುಖಾಮುಖಿಯ ಹಿಂದೆ ಮತೀಯ ಅಜೆಂಡಾವಿರುತ್ತೆ. ಆಹಾರದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವ, ಜನರಲ್ಲಿ ಕೀಳರಿಮೆ ಮೂಡಿಸಿ ಅವರೊಳಗೇ ತಿರಸ್ಕಾರ ಭಾವನೆ ಮೂಡಿಸುವ ವೈದಿಕಾ ಚಿಂತನಾ ಕ್ರಮ ಕೆಲಸ ಮಾಡಿರುತ್ತದೆ. ವೈದಿಕ ಹುನ್ನಾರಗಳನ್ನು ಖಂಡತುಂಡವಾಗಿ ಧಿಕ್ಕರಿಸುವ ಸಲುವಾಗಿ ಹುಟ್ಟಿಕೊಂಡ ವಚನಕ್ರಾಂತಿ, ಆಹಾರದ ಕುರಿತು ತಾರತಮ್ಯ ಹೊಂದಿತ್ತೆನ್ನುವುದೇ ಬಾಲಿಶವಾದುದು.

– ಕೆ.ನೀಲಾ, ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...