Homeಕರ್ನಾಟಕಆಹಾರ ಸಂಘರ್ಷಗಳ ಹಿಂದೆ ವೈದಿಕರ ಹುನ್ನಾರವಿರುತ್ತದೆ - ಕೆ.ನೀಲಾ

ಆಹಾರ ಸಂಘರ್ಷಗಳ ಹಿಂದೆ ವೈದಿಕರ ಹುನ್ನಾರವಿರುತ್ತದೆ – ಕೆ.ನೀಲಾ

- Advertisement -
- Advertisement -

ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.

ಆಹಾರ ಕ್ರಮದ ಬಗ್ಗೆ ಚರ್ಚೆ ಹೊಸದೂ ಅಲ್ಲ, ಅಚ್ಚರಿ ಪಡುವಂಥದ್ದೂ ಅಲ್ಲ. ಇದರ ಹಿಂದೆ ಜನರನ್ನು ವಿಂಗಡಿಸುವ, ಶ್ರಮಿಕ ವರ್ಗವನ್ನು ಟೊಳ್ಳಾಗಿಸುವ ಸಂಕೀರ್ಣ ಐತಿಹಾಸಿಕ ಜಾಲ ಇರೋದ್ರಿಂದ ಇದು ಆಗಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತೆ. ವೈದಿಕ ಆಹಾರ ಪರಂಪರೆ ಮತ್ತು ಶ್ರಮಿಕ ಆಹಾರ ಪರಂಪರೆಗಳ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಬಂದಿದೆ.

ವಚನಕಾರರ ಕಾಲಘಟ್ಟದಲ್ಲೂ ಎದುರಾದ ಈ ಆಹಾರ ಸಾಂಸ್ಕೃತಿಕ ಮುಖಾಮುಖಿಯ ಸ್ಪಷ್ಟ ದೃಷ್ಟಾಂತ, ಕಣ್ಣೋಟ ನಮಗೆ ಹರಿಹರ ರಗಳೆಯ ಉಳ್ಳಿ ಪರ್ವದಲ್ಲಿ ಕಾಣಸಿಗುತ್ತದೆ. ಒಮ್ಮೆ ಮಹಾಮನೆಯಲ್ಲಿ ದಾಸೋಹದ ತಯಾರಿ ನಡೆಯುತ್ತಿದ್ದಾಗ ತಳಸಮುದಾಯದ ಆಹಾರ ಪದಾರ್ಥಗಳಾದ ಈರುಳ್ಳಿ, ಬೆಳ್ಳುಳ್ಳಿ, ಹಸೀಶುಂಠಿ ಉಪಯೋಗಿಸಿ ಆಹಾರ ಸಿದ್ದಪಡಿಸಲಾಗುತ್ತಿರುತ್ತೆ. ಅದೇ ಮಾರ್ಗವಾಗಿ ಬರುವ ಬಸವಣ್ಣ ಆ ವಾಸನೆ ಅಹಿತವೆನಿಸಿ, ಮೂಗು ಮುಚ್ಚಿಕೊಳ್ಳುತ್ತಾರೆ. ಬಿಸಿಲಿನಲ್ಲಿ ದುಡಿಯುವ ಶ್ರಮಜೀವಿಗಳಿಗೆ ಪೌಷ್ಠಿಕತೆ ತಂದುಕೊಡುವ ತಮ್ಮ ಆಹಾರದ ಬಗ್ಗೆ ಬಸವಣ್ಣ ಕೀಳಾಗಿ ಕಂಡಿದ್ದಾರೆ ಎಂದು ಕೋಪಿಸಿಕೊಳ್ಳುವ ಅಡುಗೆ ಮಾಡುತ್ತಿದ್ದ ಶರಣ, ಮಹಾಮನೆಯಿಂದ ಹೊರಟುಹೋಗುತ್ತಾರೆ. ಕೊನೆಗೆ ತನ್ನ ತಪ್ಪಿನ ಅರಿವಾದ ಬಸವಣ್ಣ, ಈರುಳ್ಳಿ ಖಾದ್ಯಗಳು, ಈರುಳ್ಳಿಯಿಂದ ಅಲಂಕರಿಸಿದ ಎತ್ತಿನಬಂಡಿಯ ಸಹಿತ ಆ ಶರಣರ ಬಳಿಹೋಗಿ ಕ್ಷಮೆ ಬೇಡುತ್ತಾರೆ. ಇದು ಆಹಾರ ಕ್ರಮದ ಬಗ್ಗೆ ಮಹಾಮನೆಯಲ್ಲಿ ತಳೆದಿದ್ದ ನಿಲುವು.

ಮಹಾಮನೆ ಎನ್ನುವುದೇ ನಿರಂತರ ಜಿಜ್ಞಾಸೆ, ಚರ್ಚೆಗಳ ಕೂಟವಾಗಿತ್ತು. ತಂತ್ರಜ್ಞಾನವೇ ಇಲ್ಲದ ಆ ಕಾಲಘಟ್ಟದಲ್ಲೂ ಶರಣರು ವೈಜ್ಞಾನಿಕ, ಜನಪರ ನಿಲುವುಗಳನ್ನು ತಳೆಯಲು ಸಾಧ್ಯವಾದದ್ದು ಅಂತಹ ಮುಕ್ತ ಸಂವಾದಗಳಿಂದ. ಅಂತಹ ಸಂವಾದ ಆಹಾರ ಕ್ರಮದಲ್ಲೂ ಏರ್ಪಟ್ಟಿತ್ತು. ಮೇಲ್ಜಾತಿಗಳಿಂದ ಬಂದ ವಚನಕಾರರು ಸಸ್ಯಾಹಾರವನ್ನು ಪ್ರತಿಪಾದಿಸಿದರೆ, ಶ್ರಮಿಕ ವರ್ಗದ ವಚನಕಾರರು ತಮ್ಮ ಮಾಂಸಾಹಾರ ಪದ್ಧತಿಯನ್ನು ಪ್ರತಿಪಾದಿಸಿಕೊಂಡಿದ್ದರು. ಅಂತಹ ಸಂವಾದದ ಅಂತಿಮ ತೀರ್ಮಾನವನ್ನು ಮೇಲೆ ಉಲ್ಲೇಖಿಸಲಾದ ದೃಷ್ಟಾಂತದಿಂದ ಅರ್ಥ ಮಾಡಿಕೊಳ್ಳಬಹುದು. ವಚನಕಾರರು ಯಾವುದೇ ಬಗೆಯ ಆಹಾರ ಪದ್ಧತಿಯ ಹೇವರಿಕೆ ಅಥವಾ ಅವೈಜ್ಞಾನಿಕ ಅಭಿಪ್ರಾಯಗಳನ್ನು ಇಟ್ಟುಕೊಂಡಿರಲಿಲ್ಲ. ಅಂತಿಮವಾಗಿ ಆಹಾರದ ಆಯ್ಕೆಯನ್ನು ಆಯಾ ಪ್ರದೇಶದ ಲಭ್ಯತೆ ಮತ್ತು ಅವಶ್ಯಕತೆಯ ಭಾಗವಾಗಿ ಅವರು ಗೌರವಿಸಿದ್ದರೇ ವಿನಾಃ ಅದನ್ನು ಮೇಲು-ಕೀಳರಿಮೆಯ ಮಾನದಂಡವಾಗಿ ಕಂಡಿರಲಿಲ್ಲ. ಬಸವಣ್ಣನವರ `ಎಡದ ಕೈಯಲ್ಲಿ……..’ ವಚನವೇ ಇದಕ್ಕೆ ಸಾಕ್ಷಿ.

ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚಿಂತನಾ ಪ್ರಧಾನವಾದ ಚರ್ಚೆಗಳು ಶ್ರಮಿಕ ಲೋಕದ ಬದುಕಿಗೆ ಹತ್ತಿರ ಅನಿಸುತ್ತಿದ್ದವು, ಯಾಕೆಂದರೆ ಅವು ವೈಜ್ಞಾನಿಕ ಚಿಂತನೆಗಳಾಗಿರುತ್ತಿದ್ದವು. ಮೌಢ್ಯದಿಂದ ಹೊರಬರುವುದೇ ವಚನಸಾಹಿತ್ಯದ ಆಶಯವಾಗಿರುವುದರಿಂದ ಅಲ್ಲಿ ಆಹಾರದ ಬಗೆಗಿನ ತಾರತಮ್ಯದ ನಿಲುವನ್ನು ಹುಡುಕ ಹೊರಡುವುದೇ ಅತಾರ್ಕಿಕವಾದುದು, ಅವಾಸ್ತವಿಕವಾದುದು. ಈ ಆಹಾರ ಸಂಸ್ಕøತಿಯ ಮುಖಾಮುಖಿಯ ಹಿಂದೆ ಮತೀಯ ಅಜೆಂಡಾವಿರುತ್ತೆ. ಆಹಾರದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವ, ಜನರಲ್ಲಿ ಕೀಳರಿಮೆ ಮೂಡಿಸಿ ಅವರೊಳಗೇ ತಿರಸ್ಕಾರ ಭಾವನೆ ಮೂಡಿಸುವ ವೈದಿಕಾ ಚಿಂತನಾ ಕ್ರಮ ಕೆಲಸ ಮಾಡಿರುತ್ತದೆ. ವೈದಿಕ ಹುನ್ನಾರಗಳನ್ನು ಖಂಡತುಂಡವಾಗಿ ಧಿಕ್ಕರಿಸುವ ಸಲುವಾಗಿ ಹುಟ್ಟಿಕೊಂಡ ವಚನಕ್ರಾಂತಿ, ಆಹಾರದ ಕುರಿತು ತಾರತಮ್ಯ ಹೊಂದಿತ್ತೆನ್ನುವುದೇ ಬಾಲಿಶವಾದುದು.

– ಕೆ.ನೀಲಾ, ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...