Homeಕರ್ನಾಟಕಆಹಾರ ಸಂಘರ್ಷಗಳ ಹಿಂದೆ ವೈದಿಕರ ಹುನ್ನಾರವಿರುತ್ತದೆ - ಕೆ.ನೀಲಾ

ಆಹಾರ ಸಂಘರ್ಷಗಳ ಹಿಂದೆ ವೈದಿಕರ ಹುನ್ನಾರವಿರುತ್ತದೆ – ಕೆ.ನೀಲಾ

- Advertisement -
- Advertisement -

ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.

ಆಹಾರ ಕ್ರಮದ ಬಗ್ಗೆ ಚರ್ಚೆ ಹೊಸದೂ ಅಲ್ಲ, ಅಚ್ಚರಿ ಪಡುವಂಥದ್ದೂ ಅಲ್ಲ. ಇದರ ಹಿಂದೆ ಜನರನ್ನು ವಿಂಗಡಿಸುವ, ಶ್ರಮಿಕ ವರ್ಗವನ್ನು ಟೊಳ್ಳಾಗಿಸುವ ಸಂಕೀರ್ಣ ಐತಿಹಾಸಿಕ ಜಾಲ ಇರೋದ್ರಿಂದ ಇದು ಆಗಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತೆ. ವೈದಿಕ ಆಹಾರ ಪರಂಪರೆ ಮತ್ತು ಶ್ರಮಿಕ ಆಹಾರ ಪರಂಪರೆಗಳ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಬಂದಿದೆ.

ವಚನಕಾರರ ಕಾಲಘಟ್ಟದಲ್ಲೂ ಎದುರಾದ ಈ ಆಹಾರ ಸಾಂಸ್ಕೃತಿಕ ಮುಖಾಮುಖಿಯ ಸ್ಪಷ್ಟ ದೃಷ್ಟಾಂತ, ಕಣ್ಣೋಟ ನಮಗೆ ಹರಿಹರ ರಗಳೆಯ ಉಳ್ಳಿ ಪರ್ವದಲ್ಲಿ ಕಾಣಸಿಗುತ್ತದೆ. ಒಮ್ಮೆ ಮಹಾಮನೆಯಲ್ಲಿ ದಾಸೋಹದ ತಯಾರಿ ನಡೆಯುತ್ತಿದ್ದಾಗ ತಳಸಮುದಾಯದ ಆಹಾರ ಪದಾರ್ಥಗಳಾದ ಈರುಳ್ಳಿ, ಬೆಳ್ಳುಳ್ಳಿ, ಹಸೀಶುಂಠಿ ಉಪಯೋಗಿಸಿ ಆಹಾರ ಸಿದ್ದಪಡಿಸಲಾಗುತ್ತಿರುತ್ತೆ. ಅದೇ ಮಾರ್ಗವಾಗಿ ಬರುವ ಬಸವಣ್ಣ ಆ ವಾಸನೆ ಅಹಿತವೆನಿಸಿ, ಮೂಗು ಮುಚ್ಚಿಕೊಳ್ಳುತ್ತಾರೆ. ಬಿಸಿಲಿನಲ್ಲಿ ದುಡಿಯುವ ಶ್ರಮಜೀವಿಗಳಿಗೆ ಪೌಷ್ಠಿಕತೆ ತಂದುಕೊಡುವ ತಮ್ಮ ಆಹಾರದ ಬಗ್ಗೆ ಬಸವಣ್ಣ ಕೀಳಾಗಿ ಕಂಡಿದ್ದಾರೆ ಎಂದು ಕೋಪಿಸಿಕೊಳ್ಳುವ ಅಡುಗೆ ಮಾಡುತ್ತಿದ್ದ ಶರಣ, ಮಹಾಮನೆಯಿಂದ ಹೊರಟುಹೋಗುತ್ತಾರೆ. ಕೊನೆಗೆ ತನ್ನ ತಪ್ಪಿನ ಅರಿವಾದ ಬಸವಣ್ಣ, ಈರುಳ್ಳಿ ಖಾದ್ಯಗಳು, ಈರುಳ್ಳಿಯಿಂದ ಅಲಂಕರಿಸಿದ ಎತ್ತಿನಬಂಡಿಯ ಸಹಿತ ಆ ಶರಣರ ಬಳಿಹೋಗಿ ಕ್ಷಮೆ ಬೇಡುತ್ತಾರೆ. ಇದು ಆಹಾರ ಕ್ರಮದ ಬಗ್ಗೆ ಮಹಾಮನೆಯಲ್ಲಿ ತಳೆದಿದ್ದ ನಿಲುವು.

ಮಹಾಮನೆ ಎನ್ನುವುದೇ ನಿರಂತರ ಜಿಜ್ಞಾಸೆ, ಚರ್ಚೆಗಳ ಕೂಟವಾಗಿತ್ತು. ತಂತ್ರಜ್ಞಾನವೇ ಇಲ್ಲದ ಆ ಕಾಲಘಟ್ಟದಲ್ಲೂ ಶರಣರು ವೈಜ್ಞಾನಿಕ, ಜನಪರ ನಿಲುವುಗಳನ್ನು ತಳೆಯಲು ಸಾಧ್ಯವಾದದ್ದು ಅಂತಹ ಮುಕ್ತ ಸಂವಾದಗಳಿಂದ. ಅಂತಹ ಸಂವಾದ ಆಹಾರ ಕ್ರಮದಲ್ಲೂ ಏರ್ಪಟ್ಟಿತ್ತು. ಮೇಲ್ಜಾತಿಗಳಿಂದ ಬಂದ ವಚನಕಾರರು ಸಸ್ಯಾಹಾರವನ್ನು ಪ್ರತಿಪಾದಿಸಿದರೆ, ಶ್ರಮಿಕ ವರ್ಗದ ವಚನಕಾರರು ತಮ್ಮ ಮಾಂಸಾಹಾರ ಪದ್ಧತಿಯನ್ನು ಪ್ರತಿಪಾದಿಸಿಕೊಂಡಿದ್ದರು. ಅಂತಹ ಸಂವಾದದ ಅಂತಿಮ ತೀರ್ಮಾನವನ್ನು ಮೇಲೆ ಉಲ್ಲೇಖಿಸಲಾದ ದೃಷ್ಟಾಂತದಿಂದ ಅರ್ಥ ಮಾಡಿಕೊಳ್ಳಬಹುದು. ವಚನಕಾರರು ಯಾವುದೇ ಬಗೆಯ ಆಹಾರ ಪದ್ಧತಿಯ ಹೇವರಿಕೆ ಅಥವಾ ಅವೈಜ್ಞಾನಿಕ ಅಭಿಪ್ರಾಯಗಳನ್ನು ಇಟ್ಟುಕೊಂಡಿರಲಿಲ್ಲ. ಅಂತಿಮವಾಗಿ ಆಹಾರದ ಆಯ್ಕೆಯನ್ನು ಆಯಾ ಪ್ರದೇಶದ ಲಭ್ಯತೆ ಮತ್ತು ಅವಶ್ಯಕತೆಯ ಭಾಗವಾಗಿ ಅವರು ಗೌರವಿಸಿದ್ದರೇ ವಿನಾಃ ಅದನ್ನು ಮೇಲು-ಕೀಳರಿಮೆಯ ಮಾನದಂಡವಾಗಿ ಕಂಡಿರಲಿಲ್ಲ. ಬಸವಣ್ಣನವರ `ಎಡದ ಕೈಯಲ್ಲಿ……..’ ವಚನವೇ ಇದಕ್ಕೆ ಸಾಕ್ಷಿ.

ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚಿಂತನಾ ಪ್ರಧಾನವಾದ ಚರ್ಚೆಗಳು ಶ್ರಮಿಕ ಲೋಕದ ಬದುಕಿಗೆ ಹತ್ತಿರ ಅನಿಸುತ್ತಿದ್ದವು, ಯಾಕೆಂದರೆ ಅವು ವೈಜ್ಞಾನಿಕ ಚಿಂತನೆಗಳಾಗಿರುತ್ತಿದ್ದವು. ಮೌಢ್ಯದಿಂದ ಹೊರಬರುವುದೇ ವಚನಸಾಹಿತ್ಯದ ಆಶಯವಾಗಿರುವುದರಿಂದ ಅಲ್ಲಿ ಆಹಾರದ ಬಗೆಗಿನ ತಾರತಮ್ಯದ ನಿಲುವನ್ನು ಹುಡುಕ ಹೊರಡುವುದೇ ಅತಾರ್ಕಿಕವಾದುದು, ಅವಾಸ್ತವಿಕವಾದುದು. ಈ ಆಹಾರ ಸಂಸ್ಕøತಿಯ ಮುಖಾಮುಖಿಯ ಹಿಂದೆ ಮತೀಯ ಅಜೆಂಡಾವಿರುತ್ತೆ. ಆಹಾರದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವ, ಜನರಲ್ಲಿ ಕೀಳರಿಮೆ ಮೂಡಿಸಿ ಅವರೊಳಗೇ ತಿರಸ್ಕಾರ ಭಾವನೆ ಮೂಡಿಸುವ ವೈದಿಕಾ ಚಿಂತನಾ ಕ್ರಮ ಕೆಲಸ ಮಾಡಿರುತ್ತದೆ. ವೈದಿಕ ಹುನ್ನಾರಗಳನ್ನು ಖಂಡತುಂಡವಾಗಿ ಧಿಕ್ಕರಿಸುವ ಸಲುವಾಗಿ ಹುಟ್ಟಿಕೊಂಡ ವಚನಕ್ರಾಂತಿ, ಆಹಾರದ ಕುರಿತು ತಾರತಮ್ಯ ಹೊಂದಿತ್ತೆನ್ನುವುದೇ ಬಾಲಿಶವಾದುದು.

– ಕೆ.ನೀಲಾ, ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...