Homeಕರ್ನಾಟಕಆಪರೇಷನ್ ಕಮಲದ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು. ಏಕೆಂದರೆ..

ಆಪರೇಷನ್ ಕಮಲದ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು. ಏಕೆಂದರೆ..

- Advertisement -
- Advertisement -

ಕೊನೆಗೂ ಭಾರತೀಯ ಜನತಾ ಪಕ್ಷ ಎರಡನೆಯ ಬಾರಿಗೆ ಕರ್ನಾಟಕದಲ್ಲಿ ತನ್ನ ಸರಕಾರ ರಚಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಇಷ್ಟರಮಟ್ಟಿಗಿನ ಅಧಿಪತ್ಯ ಸ್ಥಾಪಿಸಿದ ಏಕೈಕ ರಾಜ್ಯ ಎಂದರೆ ಅದು ಕರ್ನಾಟಕ ಮಾತ್ರ ಎನ್ನುವ ನೆಲೆಯಲ್ಲಿ ಬಿಜೆಪಿಯ ಸಾಧನೆ ಚಾರಿತ್ರಿಕ. ಅಷ್ಟೇ ಚಾರಿತ್ರಿಕವಾಗಿ ಉಳಿಯುವ ಇನ್ನೊಂದು ಅಂಶ ಎನು ಎಂದರೆ ಎರಡು ಬಾರಿಯೂ ಬಿಜೆಪಿ ಅಡ್ಡ ದಾರಿ ಹಿಡಿದೇ ಈ ರಾಜ್ಯದಲ್ಲಿ ಸರಕಾರ ರಚನೆ ಮಾಡಬೇಕಾಯಿತು ಎನ್ನುವುದು.

ಕರ್ನಾಟಕದ ಜನ ಸಂಪೂರ್ಣವಾಗಿ ಬಿಜೆಪಿಯನ್ನು ಇನ್ನೂ ಒಪ್ಪಿಲ್ಲ, ಸಂಪೂರ್ಣವಾಗಿ ತಿರಸ್ಕರಿಸಲೂ ಇಲ್ಲ ಎನ್ನುವುದು ಈವರೆಗಿನ ಸತ್ಯ. ಈ ಸತ್ಯವನ್ನು ಸ್ವೀಕರಿಸಲಾಗದೆ ಬಿಜೆಪಿ ಆಪರೇಷನ್ ಕಮಲ ಎನ್ನುವ ರಾಜಕೀಯ ಕುತಂತ್ರದ ವ್ಯೂಹ ರಚಿಸಿ ಅಧಿಕಾರಕ್ಕೇರಿದೆ. 2018ರಲ್ಲಿ ಚುನಾವಣೆ ನಡೆದಾಗ ಬಿಜೆಪಿಗೆ ಅನುಕಂಪದ ಅಲೆಯ ಬೆಂಬಲವಿತ್ತು. ಆ ಹಿಂದೆ ಜೆಡಿಎಸ್‍ನ ಜತೆ ಸೇರಿ ರಚಿಸಿದ ಸಮ್ಮಿಶ್ರ ಸರಕಾರ ಒಡಂಬಡಿಕೆಯನ್ವಯ ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಿಲ್ಲ ಎನ್ನುವ ಕಾರಣಕ್ಕೆ ಹುಟ್ಟಿದ ಅನುಕಂಪದ ಅಲೆ ಬಿಜೆಪಿಯನ್ನು ಅಧಿಕಾರದ ಅಂಚಿಗೆ ತಂದು ನಿಲ್ಲಿಸಿತ್ತೆ ಹೊರತು ಸರಳ ಬಹುಮತ ನೀಡಲಿಲ್ಲ. 110 ಸ್ಥಾನಗಳನ್ನು ಪಡೆದ ಬಿಜೆಪಿಗೆ ಹಲವು ಪಕ್ಷೇತರ ಸದಸ್ಯರ ಬೆಂಬಲ ನಿರೀಕ್ಷಿತ ರೀತಿಯಲ್ಲೇ ಸಿಕ್ಕಿದ ಕಾರಣ ಹಾಗೂ ಹೀಗೂ ಅಧಿಕಾರ ಹಿಡಿಯಿತು. ಆ ನಂತರ ಹಿಡಿದ ಅಧಿಕಾರ ಭದ್ರಪಡಿಸಿಕೊಳ್ಳಲು ಆಪರೇಷನ್ ಕಮಲ ನಡೆಸಿತು. ಆ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು.

2018ರಲ್ಲಿ ಚುನಾವಣೆ ನಡೆದಾಗ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಬಹಳಷ್ಟು ಬದಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯ ವರ್ಚಸ್ಸು ಉತ್ತುಂಗದಲ್ಲಿತ್ತು. ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆ ಒಂದು ರಾಷ್ಟ್ರೀಯ ಐತಿಹ್ಯ ಎನ್ನುವಷ್ಟರಮಟ್ಟಿಗೆ ಮನೆಮಾತಾಗಿತ್ತು. ಮೋದಿಯ ವರ್ಚಸ್ಸು, ಅಮಿತ್ ಶಾ ತಂತ್ರಗಾರಿಕೆ, ಅರ.ಎಸ್.ಎಸ್‍ನ ತ್ರಿಕರಣ ಬೆಂಬಲ, ಸಾಮಾಜಿಕ ಜಾಲತಾಣಗಳ ಮೂಲಕ ಲಂಗುಲಗಾಮಿಲ್ಲದೆ ನಡೆಸಿದ ಪ್ರಚಾರ ಇತ್ಯಾದಿ ಎಲ್ಲವೂ ಸೇರಿಯೂ ಆ ಚುನಾವಣೆಯಲ್ಲಿ ಬಿಜೆಪಿಗೆ 2008ರಲ್ಲಿ ಗೆದ್ದಷ್ಟು ಸ್ಥಾನಗಳನ್ನೂ ಗೆಲ್ಲಲಾಗಲಿಲ್ಲ. ಏದುಸಿರು ಬಿಟ್ಟು ಗೆದ್ದದ್ದು 104 ಸ್ಥಾನ. ಆಗ ಕೈತಪ್ಪಿಹೋದ ಅಧಿಕಾರ ಈಗ 14 ತಿಂಗಳುಗಳ ನಂತರ ಮತ್ತೊಂದು ಸುತ್ತು ಆಪರೇಶನ್ ಕಮಲ ನಡೆಸಿದ ಕಾರಣಕ್ಕೆ ಬಂದಿದೆ.

2008 ರಲ್ಲಿ ಮೊದಲು ಸರಕಾರ ರಚಿಸಿ ಅದನ್ನು ಉಳಿಸಿಕೊಳ್ಳಲು ಆಪರೇಶನ್ ಕಮಲ ನಡೆಸಿದರೆ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಕೈಯ್ಯಲ್ಲಿದ್ದ ಸರಕಾರವನ್ನು ಕಸಿದುಕೊಳ್ಳಲು ಆಪರೇಷನ್ ಕಮಲ ಬಳಸಲಾಗಿದೆ. ಮೊದಲನೇ ಬಾರಿಗೆ ಆಪರೇಷನ್ ಕಮಲವನ್ನು ಒಂದಷ್ಟು ಅಂಜಿಕೆ, ಅಳುಕು ಇಲ್ಲದೆ ಬಹಿರಂಗವಾಗಿ ರಾಜಾರೋಷವಾಗಿ ಮಾಡಿದರೆ ಈ ಬಾರಿ ಅದನ್ನು ಕದ್ದುಮುಚ್ಚಿ, ಬಹಿರಂಗವಾಗಿ ಎಲ್ಲೂ ಒಪ್ಪಿಕೊಳ್ಳದೆ ನಡೆಸಲಾಗಿದೆ. ಇದರರ್ಥ ಈ ಬಾರಿ ಬಿಜೆಪಿಗೆ ಸ್ವಲ್ಪ ಮರ್ಯಾದೆಗೆ ಅಂಜುವ ಗುಣ ಬಂದಿದೆ ಅಂತ ಯಾರಾದರೂ ತಿಳಿದುಕೊಂಡರೆ ಅದು ತಪ್ಪು. ಈ ಬಾರಿ ಕದ್ದುಮುಚ್ಚಿ ಆಪರೇಷನ್ ಕಮಲ ನಡೆದದ್ದು ಬಹಿರಂಗವಾಗಿ ಮಾಡಿದರೆ ಅದು ಸೋಲುವ ಅಪಾಯವಿತ್ತು ಎನ್ನುವ ಕಾರಣಕ್ಕೆ. ಅಂತೂ ಕರ್ನಾಟಕದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರ ಪಡೆದು ಚರಿತ್ರೆ ನಿರ್ಮಿಸುವುದರ ಜತೆಗೆ ರಾಜಕೀಯ ವ್ಯಭಿಚಾರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಿಯೂ ಎರಡು ಬಾರಿ ಚರಿತ್ರೆಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿತು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

ಭಾರತದಲ್ಲಿ ಅಧಿಕಾರ ಎನ್ನುವುದು ಒಂದು ವಿಚಿತ್ರವಾದ ಗಂಗಾಜಲ. ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದವರ ವಿಚಾರದಲ್ಲಿ ಅವರು ಅಧಿಕಾರ ಹಿಡಿಯಲು ಬಳಸಿದ ಪಾಪಕಾರ್ಯಗಳು ಎಂತಹದ್ದೇ ಇರಲಿ, ಅವುಗಳನ್ನು ಜನ ಅದನ್ನು ಮರೆತು ಬಿಡುತ್ತಾರೆ. ಈ ಅಂಶವನ್ನು ಬಿಜೆಪಿ ಚೆನ್ನಾಗಿ ಅರಿತುಕೊಂಡಿದೆ. ಹಾಗಂತ ಈ ವಿಷಯದಲ್ಲಿ ಕೇವಲ ಬಿಜೆಪಿಯೊಂದನ್ನೇ ದೂರಿದರೆ ಸಾಕೇ?

ಬಿಜೆಪಿ ಅಧಿಕಾರ ಹಿಡಿಯಲು ನಡೆಸಿದ ರಾಜಕೀಯ ಮಾಂಸದಂಧೆಯಲ್ಲಿ ಇತರ ಪಕ್ಷದ ಚುನಾಯಿತ ಪ್ರತಿನಿಧಿಗಳು ಮಾರಿಕೊಳ್ಳಲು ತಯಾರಿದ್ದ ಕಾರಣಕ್ಕಾಗಿಯಲ್ಲವೇ ಬಿಜೆಪಿಗೆ ಅವರನ್ನು ಕ್ರಯಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿದ್ದು. ಅದು ಬಿಡಿ. ಖರೀದಿಸುವವರು ಎಲ್ಲಿರುತ್ತಾರೋ ಅಲ್ಲಿ ಮಾರಿಕೊಳ್ಳಲು ತಯಾರಿರುವವರು ಇದ್ದೇ ಇರುತ್ತಾರೆ. ಇದಕ್ಕಿಂತ ಮುಖ್ಯವಾದ ವಿಚಾರ ಅಂದರೆ ಮತದಾರರದ್ದು ಅಥವಾ ಜನರದ್ದು.

ಕರ್ನಾಟಕದಲ್ಲಾಗಲೀ ಇತರೆಡೆಯಾಗಲೀ ಬಿಜೆಪಿ ನಡೆಸಿದ ಮತ್ತು ನಡೆಸುತ್ತಿರುವ ಈ ದಂಧೆಗೆ ಖಡಾಖಂಡಿತವಾದ ಸಾರ್ವಜನಿಕ ತಿರಸ್ಕಾರ ಎನ್ನುವುದು ಎಲ್ಲೂ ಈತನಕ ಕಾಣಿಸಿಲ್ಲ. ಮೊದಲನೆಯ ಬಾರಿಗೆ ಬಿಜೆಪಿ ಆಪರೇಷನ್ ಕಮಲ ನಡೆಸಿ ರಾಜೀನಾಮೆ ನೀಡಿಸಿದ್ದ ಕಾಂಗ್ರೆಸ್ ಮತ್ತು ಜನತಾ ದಳ ಪಕ್ಷಗಳ ಶಾಸಕರ ಪೈಕಿ ಹಲವು ಮಂದಿ ಉಪಚುನಾವಣೆಯಲ್ಲಿ ಮರು ಆಯ್ಕೆ ಆಗಿದ್ದಾರೆ. ಇಂತವರನ್ನು ಮರು ಆಯ್ಕೆ ಮಾಡಿದ ಮತದಾರರನ್ನು ಏನು ಅಂತ ಕರೆಯುವುದು.

ಹಿಂದಿನ ಕತೆ ಬಿಡಿ. ಮೊನ್ನೆ ಮೊನ್ನೆ 2019ರ ಲೋಕಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಪರೇಷನ್ ಕಮಲಕ್ಕೆ ತನ್ನನ್ನು ಅರ್ಪಿಸಿಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಗುಲ್ಬರ್ಗದ ಮತದಾರರು ಆ ವ್ಯಕ್ತಿಯನ್ನು ಬಹುಮತದಿಂದ ಆಯ್ಕೆ ಮಾಡಿಲ್ಲವೇ? ಈ ವಿಚಾರವನ್ನೂ ಬೇಕಾದರೆ ಬದಿಗಿರಿಸೋಣ.. ಯಾಕೆಂದರೆ ಅವರ ಕಾಂಗ್ರೆಸ್ ಎದುರಾಳಿ ಹಲವು ಬಾರಿ ಗೆದ್ದಿದ್ದ ಕಾರಣಕ್ಕೆ ಅಲ್ಲೊಂದು ದೊಡ್ಡ ಮಟ್ಟದ ಅಧಿಕಾರ ವಿರೋಧಿ ಅಲೆ ಇತ್ತು ಎಂದುಕೊಳ್ಳೋಣ. ಅಥವಾ ಮೋದಿ ಅಲೆಯಲ್ಲಿ ಇತರ ಎಲ್ಲಾ ಅಂಶಗಳೂ ಕೊಚ್ಚಿ ಹೋದವು ಎಂದುಕೊಳ್ಳೋಣ. ಆದರೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಜನತೆ ರಾಜೀನಾಮೆ ನೀಡಿದ ಶಾಸಕನ ಮಗನನ್ನೇ ಪುನರಾಯ್ಕೆ ಮಾಡಿದರಲ್ಲಾ, ಅವರ ಪ್ರಜ್ಞಾವಂತಿಕೆಯನ್ನು ಯಾವ ಶಬ್ದಗಳಿಂದ ಹೊಗಳುವುದು?

ಮೊನ್ನೆ ಹದಿನೈದು ಶಾಸಕರನ್ನು ಕೆಡವಿದ ಎರಡನೆಯ ಹಂತದ ಬೃಹತ್ ಆಪರೇಷನ್ ಕಮಲಕ್ಕೆ ಪ್ರೇರಣೆಯೇ ಚಿಂಚೋಳಿಯ ಮತದಾರರು ನೀಡಿದ ತೀರ್ಪು ಎನ್ನಬೇಕು. ಯಾಕೆಂದರೆ ಅಲ್ಲಿನ ಮತದಾರರಿಂದ ಆಪರೇಷನ್ ಕಮಲ ವಿರೋಧಿ ಸಂದೇಶವೊಂದು ಹೋಗಿದ್ದರೆ ಹದಿನೈದು ಮಂದಿಯಲ್ಲಿ ಕೆಲವರಾದರೂ ಬಿಜೆಪಿಯ ತಂತ್ರಗಾರಿಕೆಗೆ ಕೈಜೋಡಿಸುವ ವೇಳೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಒಂದಿಷ್ಟು ಯೋಚಿಸುತ್ತಿದ್ದರೋ ಏನೋ.

ಯಾವತ್ತು ಮತದಾರರು ಆಪರೇಷನ್ ಕಮಲದ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಸಂದೇಶ ರವಾನೆಯಾಯಿತೋ ಅಲ್ಲಿಗೆ ಶಾಸಕರನ್ನು ಖರೀದಿಸುವ ಪಕ್ಷದ ಮತ್ತು ಮಾರಿಕೊಳ್ಳಲು ಸಿದ್ಧರಿರುವ ಶಾಸಕರ ಪಾಪಪ್ರಜ್ಞೆಯೂ ಅಷ್ಟರಮಟ್ಟಿಗೆ ಕಡಿಮೆಯಾಯಿತು ಎಂದೇ ಹೇಳಬೇಕು. ಆದುದರಿಂದ ಆಪರೇಷನ್ ಕಮಲ ಎಂಬ ಘೋರಾಪರಾಧ ನಡೆಸಿದವರ ಮತ್ತು ನಡೆಸಲು ಸಹಕರಿಸಿದವರ ವಿರುದ್ಧ ಆರೋಪ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದೇ ಆದರೆ ಅದರಲ್ಲಿ ಮೊದಲ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು.

ಸಮ್ಮಿಶ್ರ ಸರಕಾರ ಇದ್ದಷ್ಟು ಕಾಲ ಸ್ಪೀಕರ್ ಒಬ್ಬರು ಆಪರೇಷನ್ ಕಮಲದ ಹಾದಿಯಲ್ಲಿ ತೊಡಕಾಗಿದ್ದರು. ಈಗ ಆ ಸಮಸ್ಯೆಯೂ ಇಲ್ಲ. ಬಿಜೆಪಿಯ “ಸ್ವಂತ” ಸ್ಪೀಕರ್ ಅವರ ಪ್ರತಿಷ್ಠಾಪನೆಯಾಗಿದೆ. ಇನ್ನು ಕೇಳಬೇಕೆ? ನಿರೀಕ್ಷಿಸಿ, ದಂಧೆಯ ಮುಂದಿನ ಅಂಕವನ್ನು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...