Homeಕರ್ನಾಟಕಆಪರೇಷನ್ ಕಮಲದ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು. ಏಕೆಂದರೆ..

ಆಪರೇಷನ್ ಕಮಲದ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು. ಏಕೆಂದರೆ..

- Advertisement -
- Advertisement -

ಕೊನೆಗೂ ಭಾರತೀಯ ಜನತಾ ಪಕ್ಷ ಎರಡನೆಯ ಬಾರಿಗೆ ಕರ್ನಾಟಕದಲ್ಲಿ ತನ್ನ ಸರಕಾರ ರಚಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಇಷ್ಟರಮಟ್ಟಿಗಿನ ಅಧಿಪತ್ಯ ಸ್ಥಾಪಿಸಿದ ಏಕೈಕ ರಾಜ್ಯ ಎಂದರೆ ಅದು ಕರ್ನಾಟಕ ಮಾತ್ರ ಎನ್ನುವ ನೆಲೆಯಲ್ಲಿ ಬಿಜೆಪಿಯ ಸಾಧನೆ ಚಾರಿತ್ರಿಕ. ಅಷ್ಟೇ ಚಾರಿತ್ರಿಕವಾಗಿ ಉಳಿಯುವ ಇನ್ನೊಂದು ಅಂಶ ಎನು ಎಂದರೆ ಎರಡು ಬಾರಿಯೂ ಬಿಜೆಪಿ ಅಡ್ಡ ದಾರಿ ಹಿಡಿದೇ ಈ ರಾಜ್ಯದಲ್ಲಿ ಸರಕಾರ ರಚನೆ ಮಾಡಬೇಕಾಯಿತು ಎನ್ನುವುದು.

ಕರ್ನಾಟಕದ ಜನ ಸಂಪೂರ್ಣವಾಗಿ ಬಿಜೆಪಿಯನ್ನು ಇನ್ನೂ ಒಪ್ಪಿಲ್ಲ, ಸಂಪೂರ್ಣವಾಗಿ ತಿರಸ್ಕರಿಸಲೂ ಇಲ್ಲ ಎನ್ನುವುದು ಈವರೆಗಿನ ಸತ್ಯ. ಈ ಸತ್ಯವನ್ನು ಸ್ವೀಕರಿಸಲಾಗದೆ ಬಿಜೆಪಿ ಆಪರೇಷನ್ ಕಮಲ ಎನ್ನುವ ರಾಜಕೀಯ ಕುತಂತ್ರದ ವ್ಯೂಹ ರಚಿಸಿ ಅಧಿಕಾರಕ್ಕೇರಿದೆ. 2018ರಲ್ಲಿ ಚುನಾವಣೆ ನಡೆದಾಗ ಬಿಜೆಪಿಗೆ ಅನುಕಂಪದ ಅಲೆಯ ಬೆಂಬಲವಿತ್ತು. ಆ ಹಿಂದೆ ಜೆಡಿಎಸ್‍ನ ಜತೆ ಸೇರಿ ರಚಿಸಿದ ಸಮ್ಮಿಶ್ರ ಸರಕಾರ ಒಡಂಬಡಿಕೆಯನ್ವಯ ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಿಲ್ಲ ಎನ್ನುವ ಕಾರಣಕ್ಕೆ ಹುಟ್ಟಿದ ಅನುಕಂಪದ ಅಲೆ ಬಿಜೆಪಿಯನ್ನು ಅಧಿಕಾರದ ಅಂಚಿಗೆ ತಂದು ನಿಲ್ಲಿಸಿತ್ತೆ ಹೊರತು ಸರಳ ಬಹುಮತ ನೀಡಲಿಲ್ಲ. 110 ಸ್ಥಾನಗಳನ್ನು ಪಡೆದ ಬಿಜೆಪಿಗೆ ಹಲವು ಪಕ್ಷೇತರ ಸದಸ್ಯರ ಬೆಂಬಲ ನಿರೀಕ್ಷಿತ ರೀತಿಯಲ್ಲೇ ಸಿಕ್ಕಿದ ಕಾರಣ ಹಾಗೂ ಹೀಗೂ ಅಧಿಕಾರ ಹಿಡಿಯಿತು. ಆ ನಂತರ ಹಿಡಿದ ಅಧಿಕಾರ ಭದ್ರಪಡಿಸಿಕೊಳ್ಳಲು ಆಪರೇಷನ್ ಕಮಲ ನಡೆಸಿತು. ಆ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು.

2018ರಲ್ಲಿ ಚುನಾವಣೆ ನಡೆದಾಗ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಬಹಳಷ್ಟು ಬದಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯ ವರ್ಚಸ್ಸು ಉತ್ತುಂಗದಲ್ಲಿತ್ತು. ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆ ಒಂದು ರಾಷ್ಟ್ರೀಯ ಐತಿಹ್ಯ ಎನ್ನುವಷ್ಟರಮಟ್ಟಿಗೆ ಮನೆಮಾತಾಗಿತ್ತು. ಮೋದಿಯ ವರ್ಚಸ್ಸು, ಅಮಿತ್ ಶಾ ತಂತ್ರಗಾರಿಕೆ, ಅರ.ಎಸ್.ಎಸ್‍ನ ತ್ರಿಕರಣ ಬೆಂಬಲ, ಸಾಮಾಜಿಕ ಜಾಲತಾಣಗಳ ಮೂಲಕ ಲಂಗುಲಗಾಮಿಲ್ಲದೆ ನಡೆಸಿದ ಪ್ರಚಾರ ಇತ್ಯಾದಿ ಎಲ್ಲವೂ ಸೇರಿಯೂ ಆ ಚುನಾವಣೆಯಲ್ಲಿ ಬಿಜೆಪಿಗೆ 2008ರಲ್ಲಿ ಗೆದ್ದಷ್ಟು ಸ್ಥಾನಗಳನ್ನೂ ಗೆಲ್ಲಲಾಗಲಿಲ್ಲ. ಏದುಸಿರು ಬಿಟ್ಟು ಗೆದ್ದದ್ದು 104 ಸ್ಥಾನ. ಆಗ ಕೈತಪ್ಪಿಹೋದ ಅಧಿಕಾರ ಈಗ 14 ತಿಂಗಳುಗಳ ನಂತರ ಮತ್ತೊಂದು ಸುತ್ತು ಆಪರೇಶನ್ ಕಮಲ ನಡೆಸಿದ ಕಾರಣಕ್ಕೆ ಬಂದಿದೆ.

2008 ರಲ್ಲಿ ಮೊದಲು ಸರಕಾರ ರಚಿಸಿ ಅದನ್ನು ಉಳಿಸಿಕೊಳ್ಳಲು ಆಪರೇಶನ್ ಕಮಲ ನಡೆಸಿದರೆ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಕೈಯ್ಯಲ್ಲಿದ್ದ ಸರಕಾರವನ್ನು ಕಸಿದುಕೊಳ್ಳಲು ಆಪರೇಷನ್ ಕಮಲ ಬಳಸಲಾಗಿದೆ. ಮೊದಲನೇ ಬಾರಿಗೆ ಆಪರೇಷನ್ ಕಮಲವನ್ನು ಒಂದಷ್ಟು ಅಂಜಿಕೆ, ಅಳುಕು ಇಲ್ಲದೆ ಬಹಿರಂಗವಾಗಿ ರಾಜಾರೋಷವಾಗಿ ಮಾಡಿದರೆ ಈ ಬಾರಿ ಅದನ್ನು ಕದ್ದುಮುಚ್ಚಿ, ಬಹಿರಂಗವಾಗಿ ಎಲ್ಲೂ ಒಪ್ಪಿಕೊಳ್ಳದೆ ನಡೆಸಲಾಗಿದೆ. ಇದರರ್ಥ ಈ ಬಾರಿ ಬಿಜೆಪಿಗೆ ಸ್ವಲ್ಪ ಮರ್ಯಾದೆಗೆ ಅಂಜುವ ಗುಣ ಬಂದಿದೆ ಅಂತ ಯಾರಾದರೂ ತಿಳಿದುಕೊಂಡರೆ ಅದು ತಪ್ಪು. ಈ ಬಾರಿ ಕದ್ದುಮುಚ್ಚಿ ಆಪರೇಷನ್ ಕಮಲ ನಡೆದದ್ದು ಬಹಿರಂಗವಾಗಿ ಮಾಡಿದರೆ ಅದು ಸೋಲುವ ಅಪಾಯವಿತ್ತು ಎನ್ನುವ ಕಾರಣಕ್ಕೆ. ಅಂತೂ ಕರ್ನಾಟಕದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರ ಪಡೆದು ಚರಿತ್ರೆ ನಿರ್ಮಿಸುವುದರ ಜತೆಗೆ ರಾಜಕೀಯ ವ್ಯಭಿಚಾರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಿಯೂ ಎರಡು ಬಾರಿ ಚರಿತ್ರೆಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿತು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

ಭಾರತದಲ್ಲಿ ಅಧಿಕಾರ ಎನ್ನುವುದು ಒಂದು ವಿಚಿತ್ರವಾದ ಗಂಗಾಜಲ. ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದವರ ವಿಚಾರದಲ್ಲಿ ಅವರು ಅಧಿಕಾರ ಹಿಡಿಯಲು ಬಳಸಿದ ಪಾಪಕಾರ್ಯಗಳು ಎಂತಹದ್ದೇ ಇರಲಿ, ಅವುಗಳನ್ನು ಜನ ಅದನ್ನು ಮರೆತು ಬಿಡುತ್ತಾರೆ. ಈ ಅಂಶವನ್ನು ಬಿಜೆಪಿ ಚೆನ್ನಾಗಿ ಅರಿತುಕೊಂಡಿದೆ. ಹಾಗಂತ ಈ ವಿಷಯದಲ್ಲಿ ಕೇವಲ ಬಿಜೆಪಿಯೊಂದನ್ನೇ ದೂರಿದರೆ ಸಾಕೇ?

ಬಿಜೆಪಿ ಅಧಿಕಾರ ಹಿಡಿಯಲು ನಡೆಸಿದ ರಾಜಕೀಯ ಮಾಂಸದಂಧೆಯಲ್ಲಿ ಇತರ ಪಕ್ಷದ ಚುನಾಯಿತ ಪ್ರತಿನಿಧಿಗಳು ಮಾರಿಕೊಳ್ಳಲು ತಯಾರಿದ್ದ ಕಾರಣಕ್ಕಾಗಿಯಲ್ಲವೇ ಬಿಜೆಪಿಗೆ ಅವರನ್ನು ಕ್ರಯಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿದ್ದು. ಅದು ಬಿಡಿ. ಖರೀದಿಸುವವರು ಎಲ್ಲಿರುತ್ತಾರೋ ಅಲ್ಲಿ ಮಾರಿಕೊಳ್ಳಲು ತಯಾರಿರುವವರು ಇದ್ದೇ ಇರುತ್ತಾರೆ. ಇದಕ್ಕಿಂತ ಮುಖ್ಯವಾದ ವಿಚಾರ ಅಂದರೆ ಮತದಾರರದ್ದು ಅಥವಾ ಜನರದ್ದು.

ಕರ್ನಾಟಕದಲ್ಲಾಗಲೀ ಇತರೆಡೆಯಾಗಲೀ ಬಿಜೆಪಿ ನಡೆಸಿದ ಮತ್ತು ನಡೆಸುತ್ತಿರುವ ಈ ದಂಧೆಗೆ ಖಡಾಖಂಡಿತವಾದ ಸಾರ್ವಜನಿಕ ತಿರಸ್ಕಾರ ಎನ್ನುವುದು ಎಲ್ಲೂ ಈತನಕ ಕಾಣಿಸಿಲ್ಲ. ಮೊದಲನೆಯ ಬಾರಿಗೆ ಬಿಜೆಪಿ ಆಪರೇಷನ್ ಕಮಲ ನಡೆಸಿ ರಾಜೀನಾಮೆ ನೀಡಿಸಿದ್ದ ಕಾಂಗ್ರೆಸ್ ಮತ್ತು ಜನತಾ ದಳ ಪಕ್ಷಗಳ ಶಾಸಕರ ಪೈಕಿ ಹಲವು ಮಂದಿ ಉಪಚುನಾವಣೆಯಲ್ಲಿ ಮರು ಆಯ್ಕೆ ಆಗಿದ್ದಾರೆ. ಇಂತವರನ್ನು ಮರು ಆಯ್ಕೆ ಮಾಡಿದ ಮತದಾರರನ್ನು ಏನು ಅಂತ ಕರೆಯುವುದು.

ಹಿಂದಿನ ಕತೆ ಬಿಡಿ. ಮೊನ್ನೆ ಮೊನ್ನೆ 2019ರ ಲೋಕಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಪರೇಷನ್ ಕಮಲಕ್ಕೆ ತನ್ನನ್ನು ಅರ್ಪಿಸಿಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಗುಲ್ಬರ್ಗದ ಮತದಾರರು ಆ ವ್ಯಕ್ತಿಯನ್ನು ಬಹುಮತದಿಂದ ಆಯ್ಕೆ ಮಾಡಿಲ್ಲವೇ? ಈ ವಿಚಾರವನ್ನೂ ಬೇಕಾದರೆ ಬದಿಗಿರಿಸೋಣ.. ಯಾಕೆಂದರೆ ಅವರ ಕಾಂಗ್ರೆಸ್ ಎದುರಾಳಿ ಹಲವು ಬಾರಿ ಗೆದ್ದಿದ್ದ ಕಾರಣಕ್ಕೆ ಅಲ್ಲೊಂದು ದೊಡ್ಡ ಮಟ್ಟದ ಅಧಿಕಾರ ವಿರೋಧಿ ಅಲೆ ಇತ್ತು ಎಂದುಕೊಳ್ಳೋಣ. ಅಥವಾ ಮೋದಿ ಅಲೆಯಲ್ಲಿ ಇತರ ಎಲ್ಲಾ ಅಂಶಗಳೂ ಕೊಚ್ಚಿ ಹೋದವು ಎಂದುಕೊಳ್ಳೋಣ. ಆದರೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಜನತೆ ರಾಜೀನಾಮೆ ನೀಡಿದ ಶಾಸಕನ ಮಗನನ್ನೇ ಪುನರಾಯ್ಕೆ ಮಾಡಿದರಲ್ಲಾ, ಅವರ ಪ್ರಜ್ಞಾವಂತಿಕೆಯನ್ನು ಯಾವ ಶಬ್ದಗಳಿಂದ ಹೊಗಳುವುದು?

ಮೊನ್ನೆ ಹದಿನೈದು ಶಾಸಕರನ್ನು ಕೆಡವಿದ ಎರಡನೆಯ ಹಂತದ ಬೃಹತ್ ಆಪರೇಷನ್ ಕಮಲಕ್ಕೆ ಪ್ರೇರಣೆಯೇ ಚಿಂಚೋಳಿಯ ಮತದಾರರು ನೀಡಿದ ತೀರ್ಪು ಎನ್ನಬೇಕು. ಯಾಕೆಂದರೆ ಅಲ್ಲಿನ ಮತದಾರರಿಂದ ಆಪರೇಷನ್ ಕಮಲ ವಿರೋಧಿ ಸಂದೇಶವೊಂದು ಹೋಗಿದ್ದರೆ ಹದಿನೈದು ಮಂದಿಯಲ್ಲಿ ಕೆಲವರಾದರೂ ಬಿಜೆಪಿಯ ತಂತ್ರಗಾರಿಕೆಗೆ ಕೈಜೋಡಿಸುವ ವೇಳೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಒಂದಿಷ್ಟು ಯೋಚಿಸುತ್ತಿದ್ದರೋ ಏನೋ.

ಯಾವತ್ತು ಮತದಾರರು ಆಪರೇಷನ್ ಕಮಲದ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಸಂದೇಶ ರವಾನೆಯಾಯಿತೋ ಅಲ್ಲಿಗೆ ಶಾಸಕರನ್ನು ಖರೀದಿಸುವ ಪಕ್ಷದ ಮತ್ತು ಮಾರಿಕೊಳ್ಳಲು ಸಿದ್ಧರಿರುವ ಶಾಸಕರ ಪಾಪಪ್ರಜ್ಞೆಯೂ ಅಷ್ಟರಮಟ್ಟಿಗೆ ಕಡಿಮೆಯಾಯಿತು ಎಂದೇ ಹೇಳಬೇಕು. ಆದುದರಿಂದ ಆಪರೇಷನ್ ಕಮಲ ಎಂಬ ಘೋರಾಪರಾಧ ನಡೆಸಿದವರ ಮತ್ತು ನಡೆಸಲು ಸಹಕರಿಸಿದವರ ವಿರುದ್ಧ ಆರೋಪ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದೇ ಆದರೆ ಅದರಲ್ಲಿ ಮೊದಲ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು.

ಸಮ್ಮಿಶ್ರ ಸರಕಾರ ಇದ್ದಷ್ಟು ಕಾಲ ಸ್ಪೀಕರ್ ಒಬ್ಬರು ಆಪರೇಷನ್ ಕಮಲದ ಹಾದಿಯಲ್ಲಿ ತೊಡಕಾಗಿದ್ದರು. ಈಗ ಆ ಸಮಸ್ಯೆಯೂ ಇಲ್ಲ. ಬಿಜೆಪಿಯ “ಸ್ವಂತ” ಸ್ಪೀಕರ್ ಅವರ ಪ್ರತಿಷ್ಠಾಪನೆಯಾಗಿದೆ. ಇನ್ನು ಕೇಳಬೇಕೆ? ನಿರೀಕ್ಷಿಸಿ, ದಂಧೆಯ ಮುಂದಿನ ಅಂಕವನ್ನು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...