Homeಮುಖಪುಟಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ...

ಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ ಗೊತ್ತೇನು?

ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ – ಐ.ವಿ ಗೌಲ್‌

ಸುಪ್ರೀಂಕೋರ್ಟು ಮೊನ್ನೆ ಮೊನ್ನೆ ಫ್ರೆಷ್ ಆಗಿ ಒಂದು ಟಪ್ಪಣಿ ಕೊಟ್ಟದ. ಅದು ಎಷ್ಟು ಬಿಸಿ ಬಿಸಿ ಸುದ್ದಿ ಅಂದರ ಅದನ್ನ ಬರೆದ ಕಾಗದ ಇನ್ನೂ ಸುಡು -ಸುಡು ಅನ್ನಲಿಕ್ಕೆ ಹತ್ತೇದ.

ಅದೇನಪಾ ಅಂದರ ಮೀಸಲಾತಿ ಅಂದರ ನಾಗರಿಕರ ಮೂಲಭೂತ ಹಕ್ಕೇನಲ್ಲ. ಅದು ಸರಕಾರದ ಜನ ಕಲ್ಯಾಣ ನೀತಿ. ಅದನ್ನು ಸರಕಾರಗಳು ಕೊಟ್ಟರ ಕೊಡಬಹುದು, ಇಲ್ಲಾಂದರ ಇಲ್ಲಾ. ಅವರ ಮ್ಯಾಲೆ ನೀವು ಈ ಸೌಲತ್ತು ಕೊಡಲೇಬೇಕು ಅಂತ ದಬಾಯಿಸಲಿಕ್ಕೆ ಬರಂಗಿಲ್ಲ ಅಂತ.

ಅದು ಅಂತಿಮ ತೀರ್ಪು ಅಲ್ಲ. ಅದಕ್ಕ ಸರಕಾರ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಅದು ಏನಂತ ಪ್ರತಿಕ್ರಿಯೆ ಕೊಡತದ ಅನ್ನೋದರ ಮ್ಯಾಲೆ ನಾವು ಪ್ರತಿಕ್ರಿಯೆ ಕೊಡೋಣಂತ. ಆದರ ಅದರ ಹಿನ್ನೆಲೆ ತಿಳದು ಕೊಳ್ಳೋಣ.

ಈಗ ಮೀಸಲಾತಿ ಅನ್ನೋದು ಏನು ಅಂತ ತಿಳಕೋಕಿಂತಾ ಮೊದಲ ಮೂಲಭೂತ ಹಕ್ಕು ಅಂದರೇನು ಅಂತ ತಿಳಿಯೋಣು. ಮೂಲಭೂತ ಹಕ್ಕು ಅಂದರ ಹುಟ್ಟಿನಿಂದ ಬಂದ ಹಕ್ಕು. ಅದರ ಸಲುವಾಗಿ ಏನೂ ವಿಶೇಷ ಮಸಲತ್ತು ಮಾಡಬೇಕಿಲ್ಲ. ಯಾ ಮನುಷಾ ನಾಗರಿಕ ಇರತಾನೋ ಅವನಿಗೆ ಸಹಜವಾಗಿ ಬಂದ ಬಿಡೋ ಹಕ್ಕುಗಳು ಮೂಲಭೂತ ಹಕ್ಕುಗಳು. ಕೆಲವು ಎಲ್ಲಾ ಮನುಷ್ಯರಿಗೂ ಬರತಾವು. ಅವಕ್ಕ ಮಾನವ ಹಕ್ಕುಗಳು ಅಂತ ಅನಸಿಗೋತಾವು.

ಇನ್ನು ಕೆಲವು ಬರೇ ನಾಗರಿಕರಿಗೆ ಮಾತ್ರ ಸಿಗೋವು. ಅವು ಕಾನೂನಿನಿಂದ ಮಾತ್ರ ಸಿಗೋವಂಥವು. ಅವನ್ನು ಆಯಾ ದೇಶದ ಸಂವಿಧಾನದ ಒಳಗ ಬರದು ಇಡಲಾಗುತ್ತದೆ. ಅದರಾಗ ಬರದಾರ ಅಂದ ಮಾತ್ರಕ್ಕ ಅವು ಸಿಗತಾವು ಅಂತ ಅಲ್ಲ. ಅವು ನಿಸರ್ಗದ ನಿಯಮಗಳು. ಮಾನವ ಅಂತ ಅನ್ನಿಸಿಕೊಂಡವನು ಹಿಂಗ ಇರಬೇಕು ಅಂತ ಮಾನವ ಇತಿಹಾಸದ ಜೀವನಚಕ್ರದ ಅಲ್ಲಲ್ಲಿ ನಿಂತು ತೋರಸತದ. ಅದನ್ನು ಸಂವಿಧಾನದಾಗ ದಾಖಲಿಸಲಾಗತದ. ಸಂವಿಧಾನಕ್ಕ ಅಷ್ಟು ಯಾಕ ಇಂಪಾರ್ಟನ್ಸ ಕೊಡತೀರಿ? ಅದು ಒಂದು ಬುಕ್ಕು ಅಷ್ಟ. ಅಂತ ಮಾತಾಡೋರನ್ನ ವಾದದಾಗ ಸೋಲಸಲಿಕ್ಕೆ ಆಗಂಗಿಲ್ಲ. ಆದರ ಅವರಿಗೆ ಒಂದು ಮಾತು ಹೇಳಬೇಕು. ಸಂವಿಧಾನ ಅನ್ನೋದು ಒಂದು ಬುಕ್ಕು ಅಷ್ಟ. ಆದರ ಅದು ಸಮಗ್ರ ಮಾನವ ಜೀವ ವಿಕಾಸದ ಬುದ್ಧಿಮತ್ತೆ ಹಾಗೂ ವಿವೇಕವನ್ನು ದಾಖಲಿಸಿರುವ ಬುಕ್ಕು. ಅದನ್ನು ಬದಲು ಮಾಡಿದರ, ಮುಚ್ಚಿ ಇಟ್ಟರ, ಬೀಸಿ ಒಗದರ ಸಹಿತ ಅದರಲ್ಲಿರುವ ವಿವೇಕ ಹಾಳಾಗುವುದಿಲ್ಲ ಅಂತ.

ಇನ್ನು ಭಾರತದ ಸಂವಿಧಾನದಲ್ಲಿ ಇರುವ ಸುಮಾರು 20 ಮೂಲಭೂತ ಹಕ್ಕುಗಳಲ್ಲಿ ಪ್ರಮುಖವಾದ್ದು ಸಮಾನತೆಯ ಹಕ್ಕು. ಅಸಮಾನತೆ ತಳಹದಿಯ ಮೇಲೆ ನಿಂತಿರುವ ಸಮಾಜದಲ್ಲೆ ಸಮಾನತೆ ಸ್ಥಾಪಿಸೋದು ಹೆಂಗ ಹಂಗಾರ?

ಈ ದೇಶದ ರಾಜಕೀಯದ ಮೇಲೆ ಹಿಂದೆಂದೂ ಇಲ್ಲದ ಪ್ರಭಾವ ಬೀರಿ ಬದಲಾವಣೆ ತಂದದ್ದು ಮಂಡಲ ವರದಿ. ಅದರ ಶಿಫಾರಸು ಪುಸ್ತಕ ನೋಡಿದವರು ಕಮ್ಮಿ. ಅದರ ಹೆಸರಿನಲ್ಲಿ ಹೋರಾಟ ಮಾಡಿದವರು ಹೆಚ್ಚು. ಅದು ಆ ಕಡೆನೂ ಇರಬಹುದು, ಈ ಕಡೆನೂ ಇರಬಹುದು.

ಆ ವರದಿಯ ಮೊದಲ ಪುಟದ ಮೇಲೆ ಒಂದು ಮಾತು ಬರದದ. ಸಾವಿರ ವರ್ಷಕ್ಕೂ ಸಲ್ಲುವ ಮಾತು ಅದು. “ಅಸಮಾನನನ್ನು ಸಮಾನನ ಜೊತೆ ಸೇರಿಸಿ ನೋಡುವುದು, ಅಸಮಾನತೆಯನ್ನು ಮುಂದುವರೆಸಿದಂತೆ”. ಅಸಮಾನತೆಯನ್ನು ಮುರಿಯಲಿಕ್ಕೆ ಬೇರೆ ಬೇರೆ ಪ್ರಯತ್ನ ಮಾಡಿ ಅವು ಯಾವುವೂ ಯಶಸ್ಸು ಗಳಿಸದೇ ಹೋದಾಗ ಪ್ರಾರಂಭವಾಗಿದ್ದು, ತಕ್ಕಮಟ್ಟಿಗೆ ಯಶಸ್ಸು ಗಳಿಸಿದ್ದು ಮೀಸಲಾತಿ.

ಅದರ ಬಗ್ಗೆ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳೋಣ. ಈ ಬ್ರಹ್ಮಾಂಡದಾಗ 200 ದೇಶ ಅವ. ಅದರಾಗ ಸುಮಾರು 170 ದೇಶದೊಳಗ ಪ್ರಜಾಪ್ರಭುತ್ವ ಅದ. ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

ಬಿಲ್ ಕ್ಲಿಂಟನ್ನಿನ ಕಚೇರಿಯೊಳಗ ಕರಿಯರು, ಮೆಕ್ಸಿಕೋದವರು, ಏಷಿಯಾದವರು, ಮಹಿಳೆಯರು ಕಮ್ಮಿ ಇದ್ದಾರೆ ಅಂತ ಅಲ್ಲಿನ ಧನಾತ್ಮಕ ತಾರತಮ್ಯ ಆಯೋಗ ಅಲ್ಲಿನ ಅಧ್ಯಕ್ಷನಿಗೆ ನೋಟಿಸು ಕೊಟ್ಟಿತ್ತು.

ಯುರೋಪಿನಲ್ಲಿ ಪ್ರತಿ ಸರಕಾರಿ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ, ಎಲ್ಲಾ ರೀತಿಯ ಜಾತಿ- ಜನಾಂಗ- ಲಿಂಗದವರಿಗೆ ಅವಕಾಶ ನೀಡಲೇಬೇಕು ಅಂತ ಒಂದು ಕಾನೂನು ಇದೆ. ಅದನ್ನು ತಪ್ಪಿದರೆ ವಾಗ್ದಂಡನೆ ಹಾಗೂ ಇತರ ಶಿಕ್ಷೆ ಅದ. ಇದು ನಮ್ಮ ಭಾಳ ಜಾನ ಎನ್‍ಆರ್‍ಐಗಳಿಗೆ ಅನಿವಾಸಿ ಭಾರತೀಯರಿಗೆ ಗೊತ್ತಿರೋದಿಲ್ಲ. ಭಾರತ ಹಾಳಾಗಿರುವುದು ಮೀಸಲಾತಿಯಿಂದ ಅಂತ ಅವರು ಘಂಟಾಘೋಷವಾಗಿ ಹೇಳತಾರ. ತಮ್ಮ ಅಜ್ಞಾನದ ಬಲದಿಂದ ತಿಳಿದವರನ್ನ ಗೋಳು ಹೊಯ್ಕೊತಾರ.

ಯಾಕಂದರ ಅವರು ತಮಗೆ ರೊಟ್ಟಿ – ಬ್ಯಾಳಿ ನೀಡಿದ ದೇಶದ ಸರಕಾರ ಹಾಗೂ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಬೆಳೆಸಿಕೊಳ್ಳಲಿಕ್ಕೆ ಹೋಗಿರೋದಿಲ್ಲ.

ಅವರು ಅಲ್ಲಿ ಇರೋತನಕಾ ಪ್ರವಾಸಿಗಳ ಥರಾ ಇದ್ದು, ತಮಗೆ ಕೆಲಸ ನೀಡಿದ ದೇಶದ ಬಗ್ಗೆ ಅಭಿಮಾನ ಹಾಗೂ ತಮಗೆ ಜನ್ಮ ನೀಡಿದ ದೇಶದ ಬಗ್ಗೆ ತಾತ್ಸಾರ ಬೆಳೆಸಿಕೊಂಡಿರತಾರ.

ನೀವು ಹಳ್ಳಿಯೊಳಗ ಜಂಗೀ ನಿಕಾಲಿ ಕುಸ್ತಿ ನೋಡಿರಬಹುದು. ಹಂಗಂದರ ಯುದ್ಧದಲ್ಲಿ ಕೊನೆಯಾಗುವ ಕುಸ್ತಿ ಅಂತ ಅರ್ಥ. ಅದರಾಗ ಎದುರಾಳಿಗಳನ್ನ ಹೆಂಗ ಹುಡುಕತಾರ, ಹೆಂಗ ಅವರ ನಡುವೆ ಸ್ಪರ್ಧೆ ಹಚ್ಚತಾರ ಅಂತ ನೋಡಬೇಕು .ಅದು ಅವರ ವಯಸ್ಸು ಅಥವಾ ಅನುಭವದ ಮ್ಯಾಲೆ ಇರಂಗಿಲ್ಲ. ಅವರ ದೇಹದ ತೂಕದ ಮ್ಯಾಲೆ ಇರತದ. ಯಾಕಂದರ ಸ್ಪರ್ಧೆ ಅನ್ನೋದು ಸಮಾನರ ನಡುವೆ ಇರಬೇಕು ಅಂತ. ಒಲಂಪಿಕ್ಸನ್ಯಾಗ ನಮ್ಮ ಹೆಮ್ಮೆಯ ಹುಡುಗಿ ಮೇರಿ ಕೋಮ ಅಂತಿಮ ಸುತ್ತಿನ್ಯಾಗ ಯಾಕ ಸೋತು ಹೋದಳು ಅಂದರ ಅಕಿನ್ನ ತನಗಿಂತ ಹೆಚ್ಚು ತೂಕದ ಹುಡುಗಿಯೊಂದಿಗೆ ಹೊಡದಾಡಲಿಕ್ಕೆ ಹಚ್ಚಿದರು.

ನಮ್ಮ ಸಮಾಜದಾಗ ಅಸಮಾನತೆ ಸಾವಿರಾರು ವರ್ಷಗಳಿಂದ ಅದ. ಅದನ್ನ ಪ್ರಜಾಪ್ರಭುತ್ವದ ನಂತರ ಅಳಿಸಬೇಕು ಅಂದರ ಸರಳ ಇಲ್ಲ. ಆದರೂ ಪ್ರಯತ್ನ ಕೈಬಿಡಬಾರದು. ಅದರಾಗುನೂ ಆ ಅಸಮಾನತೆ ಮಾನವ ನಿರ್ಮಿತವಾದ್ದರಿಂದ ಅದನ್ನು ಮಾನವರೇ ಅಳಿಸಬೇಕು. ಸಮಾನತೆ ಮೂಲಭೂತ ಹಕ್ಕು ಅಂದರ ಅದನ್ನು ನಿವಾರಿಸಲು ಬೇಕಾಗುವ ಪರಿಕರಗಳು ಮೂಲಭೂತ ಹಕ್ಕು ಯಾಕ ಆಗಂಗಿಲ್ಲ? ಆ ಪರಿಕರಗಳನ್ನ ಕಸಗೊಂಡರ ಯಾವ ರೀತಿ ಸಮಾನತೆ ಸಾಧಿಸಲಿಕ್ಕೆ ಸಾಧ್ಯ ಅದ?

ಘನ ಸರಕಾರಗಳು ನ್ಯಾಯಾಧೀಶರ ಮುಂದ ಇಡುವ ವಾದಗಳಲ್ಲಿ ಈ ಮಾತುಗಳು ಬರಬಹುದು ಅಂತ ಆಶೆ ಮಾಡೋಣ. ಪ್ರಾರ್ಥನೆಗಿಂತ ದೊಡ್ಡದು ಯಾವುದೂ ಇಲ್ಲ ಅನ್ನೋ ಮಾತನ್ನು ಬಂಗಾಳದ ಭಕ್ತಿ ಸಂತ ಕೃಷ್ಣ ಚೈತನ್ಯ ಹೇಳಿದರು. ಸದ್ಯಕ್ಕಂತೂ ನಮಗ ಪ್ರಾರ್ಥನೆ ಮಾಡೋದು ಬಿಟ್ಟು ಬ್ಯಾರೆ ದಾರಿನ ಇಲ್ಲ. ಅದು ದೇವರಿಗೆ ಇರಬಹುದು, ಸರಕಾರದಲ್ಲಿ ಇರೋ ನಮ್ಮ ದಾತಾರರಿಗೆ ಇರಬಹುದು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...