Homeಅಂತರಾಷ್ಟ್ರೀಯಅಮೇರಿಕಾ: ಜೂನ್ ವೇಳೆಗೆ 2 ಲಕ್ಷ ಎಚ್ -1ಬಿ ವೀಸಾ ಉದ್ಯೋಗಿಗಳಿಗೆ ಅಪಾಯ

ಅಮೇರಿಕಾ: ಜೂನ್ ವೇಳೆಗೆ 2 ಲಕ್ಷ ಎಚ್ -1ಬಿ ವೀಸಾ ಉದ್ಯೋಗಿಗಳಿಗೆ ಅಪಾಯ

- Advertisement -
- Advertisement -

ಮಾನಸಿ ವಸವಡ ಅವರಿಗೆ ಅಮೇರಿಕಾದಲ್ಲಿ ಕಾನೂನುಬದ್ಧವಾಗಿ ಇರಲು ಇನ್ನು ಕೇವಲ ಮೂರು ವಾರಗಳಿಗಳಷ್ಟೇ ಇದೆ. 31 ವರ್ಷದ ಇವರು ನ್ಯೂಜೆರ್ಸಿಯ ಪ್ಯಾಸಾಯಿಕ್ ಕೌಂಟಿಯಲ್ಲಿ ಕಳೆದ ಎರಡು ವರ್ಷದಿಂದ ದಂತ ವೈದ್ಯರಾಗಿದ್ದಾರೆ. ಮಾರ್ಚ್ ತಿಂಗಳ ಮಧ್ಯದಿಂದ ಕೊರೊನಾ ಕಾರಣವಾಗಿ ಇವರ ದಂತಾಲಯ ಬಾಗಿಲು ಮುಚ್ಚಿದೆ. ಅಂದಿನಿಂದ ಅವರು ಯಾವುದೆ ಕೆಲಸ ಮಾಡದೇ ಪಾವತಿಯಿಲ್ಲದೇ ರಜೆಯಲ್ಲಿದ್ದಾರೆ.

ವಿಶೇಷ ಕೌಶಲ್ಯ ಹೊಂದಿರುವವರಿಗೆ ಅಮೇರಿಕ ನೀಡುವ ತಾತ್ಕಾಲಿಕ ವೀಸಾವಾದ ಎಚ್ -1ಬಿ ವೀಸಾದಲ್ಲಿ ಮಾನಸಿ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯ ಕಾನೂನಿನಂತೆ ಎಚ್ -1ಬಿ ವೀಸಾದಲ್ಲಿ ಇರುವವರು ಪಾವತಿಯಲ್ಲದೆ 60 ದಿನಗಳವರೆಗೆ ಮಾತ್ರ ದೇಶದಲ್ಲಿ ಉಳಿಯಬಹುದಾಗಿದೆ. ಮಾನಸಿ ಅವರ ಪತಿ ನಂದನ್ ಬುಚ್ ಕೂಡಾ ದಂತವೈದ್ಯರಾಗಿದ್ದು ಅವರು ಸಹ ಎಚ್ -1ಬಿ ವೀಸಾದಲ್ಲಿದ್ದಾರೆ. ಅವರ ವೀಸಾ ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಹೆಚ್ಚುತ್ತಿರುವ ಆತಂಕಗಳ ನಡುವೆ ಈಗ ಇವರಿಬ್ಬರೂ ದಿನಕಳೆಯುತ್ತಿದ್ದಾರೆ.

ಭಾರತ ಈಗಾಗಲೇ ತನ್ನ ಗಡಿಗಳನ್ನು ಅನಿರ್ದಿಷ್ಟವಾಗಿ ಮುಚ್ಚಿರುವುದರಿಂದ, ದಂಪತಿಗಳು ಅಮೆರಿಕಾದಲ್ಲಿ ಉಳಿಯಲು ಸಾಧ್ಯವಿಲ್ಲದೆ ಹಾಗೂ ಭಾರತಕ್ಕೆ ಬರಲು ಸಾಧ್ಯವಾಗದ ಪರಿಸ್ಥತಿ ಶೀಘ್ರದಲ್ಲೇ ಬರಬಹುದು. ಅವರು ಯು.ಎಸ್. ವಿಶ್ವವಿದ್ಯಾಲಯದಲ್ಲಿ ದಂತ ಪದವಿ ಪಡೆಯುವುದಕ್ಕಾಗಿ 5,20,000 ಡಾಲರ್‌ ವಿದ್ಯಾರ್ಥಿ ಸಾಲವನ್ನು ಪಡೆದಿದ್ದಾರೆ. ಈ ಸಾಲವನ್ನು ಮರುಪಾವತಿ ಮಾಡಲು ಭಾರತದಲ್ಲಿ ಗಳಿಸುವ ಸಂಬಳದಿಂದ ಅಸಾಧ್ಯವಾಗಿದೆ. ಇದೆ ಒತ್ತಡದಿಂದ 31 ವರ್ಷದ ಬುಚ್ ತನ್ನ ತಲೆ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಇಬ್ಬರೂ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಮಾನಸಿ ಹೇಳುವಂತೆ “ಇದೀಗ ಎಲ್ಲವೂ ನಿಜವಾಗಿಯೂ ಗೊಂದಲಮಯವಾಗಿದೆ ಮತ್ತು ಕತ್ತಲೆಯಾಗಿದೆ, ನಾವು ಎಲ್ಲಿಗೆ ಹೋಗುತ್ತೇವೆ ಎಂದು ನಮಗೆ ತಿಳಿದಿಲ್ಲ.” ಎಂದು ಹೇಳುತ್ತಾರೆ.

ವಾಷಿಂಗ್ಟನ್ ಡಿ.ಸಿ. ಮೂಲದ ವಲಸೆ ನೀತಿ ವಿಶ್ಲೇಷಕ ಜೆರೆಮಿ ನ್ಯೂಫೆಲ್ಡ್ ಅವರ ಪ್ರಕಾರ, ಯು.ಎಸ್.ನಲ್ಲಿ ಗ್ರೀನ್ ಕಾರ್ಡ್ ಬಯಸುವ ಎರಡುವರೆ ಲಕ್ಷ ಅತಿಥಿ ಕಾರ್ಮಿಕರು ಜೂನ್ ಅಂತ್ಯದ ವೇಳೆಗೆ ತಮ್ಮ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳಬಹುದು. ಇವರಲ್ಲಿ ಎರಡು ಲಕ್ಷ ಜನರು ಎಚ್-1ಬಿ ವೀಸಾದಲ್ಲಿರುವವರಾಗಿದ್ದಾರೆ. ನಿವಾಸಿಗಳಾಗದ ಇನ್ನೂ ಸಾವಿರಾರು ಜನರರನ್ನು ಅವರ ಮನೆಗೆ ಮರಳಲು ಒತ್ತಾಯಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ತಂತ್ರಜ್ಞಾನದ ಉದ್ಯಮದಲ್ಲಿ ಕೆಲಸ ಮಾಡುವ ಮುಕ್ಕಾಲು ಭಾಗದಷ್ಟು ಜನರು ಎಚ್-1ಬಿ ವೀಸಾವನ್ನು ಹೊಂದಿದ್ದಾರೆ. ಆದರೆ ಇದದ ನಿಖರವಾದ ಹಂತಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಇರುತ್ತವೆ.

ಕಳೆದ ಎರಡು ತಿಂಗಳಲ್ಲಿ ಒಂದು ಕೋಟಿ ಅಮೆರಿಕನ್ನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಎಚ್-1ಬಿ ವೀಸಾಗಳನ್ನು ನಿರ್ದಿಷ್ಟ ಸ್ಥಳಕ್ಕೆ ಮತ್ತು ಉದ್ಯೋಗದಾತರಿಗೆ ಸ್ವೀಕರಿಸಲಾಗುತ್ತದೆ, ಅವರು ಸ್ವೀಕರಿಸುವವರು ಕನಿಷ್ಠ ವೇತನವನ್ನು ಪಾವತಿಸಲು ಬದ್ಧರಾಗಿರುತ್ತಾರೆ. ಈ ವೀಸಾ ಸ್ವೀಕರಿಸುವವರನ್ನು ಅನುಪಸ್ಥಿತಿಯ ರಜೆ ನೀಡುವುದು, ಅವರ ವೇತನವನ್ನು ಕಡಿಮೆ ಮಾಡುವುದು ಹಾಗೂ ಕೆಲವು ಸಂದರ್ಭಗಳಲ್ಲಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದು ವೀಸಾ ನಿಯಮಗಳನ್ನು ಉಲ್ಲಂಘಿಸುತ್ತದೆ.

ಕೆಲಸದಿಂದ ವಜಾಗೊಂಡ ಎಚ್-1ಬಿ ಕಾರ್ಮಿಕರಿಗೆ ಮತ್ತೊಂದು ಉದ್ಯೋಗ ಹುಡುಕಲು, ಬೇರೆ ವೀಸಾಕ್ಕೆ ವರ್ಗಾಯಿಸಲು ಅಥವಾ ದೇಶವನ್ನು ತೊರೆಯಲು 60 ದಿನಗಳ ಕಾಲಾ ಅವಕಾಶವಿದೆ. ಅವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳದಿದ್ದರೂ ಸಹ, ಈ ಅವಧಿಯಲ್ಲಿ ತಮ್ಮ ವೀಸಾಗಳನ್ನು ನವೀಕರಿಸಲು ಸಾಧ್ಯವಾಗದಿದ್ದರೆ ಕಾರ್ಮಿಕರು ಸಂದಿಗ್ಧತೆಗೆ ಸಿಲುಕುತ್ತಾರೆ.

ವೀಸಾ ಬಿಕ್ಕಟ್ಟು “ಮಾನವ ಮಟ್ಟದಲ್ಲಿ ಮತ್ತು ಆರ್ಥಿಕ ಮಟ್ಟದಲ್ಲಿ ದುರಂತವನ್ನು ಉಂಟುಮಾಡುತ್ತಿದೆ” ಎಂದು ಒಬಾಮಾ ಆಡಳಿತದಲ್ಲಿ ತಂತ್ರಜ್ಞಾನ ಮತ್ತು ವಲಸೆ ನೀತಿಯಲ್ಲಿ ಕೆಲಸ ಮಾಡಿದ ಡೌಗ್ ರಾಂಡ್ ಹೇಳುತ್ತಾರೆ. ಇವರು ಬೌಂಡ್ಲೆಸ್ ಇಮಿಗ್ರೇಷನ್ ಇಂಕ್ ಎಂಬ ಕಂಪನಿಯ ಸಹ-ಸಂಸ್ಥಾಪಕರಾಗಿದ್ದಾರೆ. ಈ ಕಂಪೆನಿ ಜನರಿಗೆ ವಲಸೆ ಹೋಗಲು ಸಹಾಯ ಮಾಡುತ್ತದೆ. ಎಚ್-1ಬಿ ಕಾರ್ಮಿಕರು ಸಾಮಾನ್ಯವಾಗಿ ಕುಟುಂಬಗಳನ್ನು ಹೊಂದಿ, ತಮ್ಮ ಇಡೀ ಜೀವನವನ್ನು ಮಕ್ಕಳೊಂದಿಗೆ ಅಮೆರಿಕಾದಲ್ಲಿ ಕಳೆದಿರಬಹುದು ಆದರೆ ಅಮೇರಿಕಾದಲ್ಲಿ ಉಳಿಯುವಂತೆ ತಮ್ಮ ಉದ್ಯೋಗಗಳನ್ನಷ್ಟೇ ಅವಲಂಬಿಸಿರುತ್ತಾರೆ. ಇದನ್ನು ರಾಂಡ್ “ಕೇವಲ ಅವ್ಯವಸ್ಥೆ” ಎಂದು ಹೇಳುತ್ತಾರೆ.

ಆಪಲ್, ಅಮೆಜಾನ್, ಫೇಸ್ಬುಕ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಅನ್ನು ಒಳಗೊಂಡ ಟೆಕ್‌ನೆಟ್‌ ಒಕ್ಕೂಟ ವಿದೇಶಿ ಮೂಲದ ಕಾರ್ಮಿಕರಿಗೆ ಪರಿಹಾರ ಕೋರಿ ಏಪ್ರಿಲ್ 17 ರಂದು ರಾಜ್ಯ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಗಳಿಗೆ ಪತ್ರ ಕಳುಹಿಸಿ, ಕನಿಷ್ಠ ಸೆಪ್ಟೆಂಬರ್ 10 ರವರೆಗೆ ಕೆಲಸದ ಮುಕ್ತಾಯ ದಿನಾಂಕಗಳನ್ನು ವಿಳಂಬಗೊಳಿಸುವಂತೆ ಕೋರಿದೆ. “ಈ ಸಮಸ್ಯೆಗಳು ಲಕ್ಷಾಂತರ ಅಪೂರ್ಣ ಉದ್ಯೋಗಗಳಿಗೆ ಕಾರಣವಾಗುತ್ತವೆ ಮತ್ತು ಭಾರೀ ಋಣಾತ್ಮಕ ಆರ್ಥಿಕ ಪರಿಣಾಮಗಳನ್ನು ಬೀರುತ್ತವೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ದೂರದಿಂದ ಕೆಲಸ ಮಾಡುವ ಕಚೇರಿಗಳನ್ನು ಬೆಂಬಲಿಸಲು, ಟೆಲಿಹೆಲ್ತ್ ಸೇವೆಗಳನ್ನು ಒದಗಿಸಿ ವೈದ್ಯರಿಗೆ ಸಹಾಯ ಮಾಡಲು ಮತ್ತು ವಿದ್ಯಾರ್ಥಿಗಳು ಮನೆಯಲ್ಲಿಯೇ ಕಲಿಯಲು ಟೆಕ್ ಉದ್ಯಮವು ನಿರ್ಣಾಯಕವಾಗಿದೆ ಎಂದು ಟೆಕ್‌ನೆಟ್‌ ಫೆಡರಲ್ ನೀತಿ ಮತ್ತು ಸರ್ಕಾರಿ ಸಂಬಂಧಗಳ ಹಿರಿಯ ಉಪಾಧ್ಯಕ್ಷ ಅಲೆಕ್ಸ್ ಬರ್ಗೋಸ್ ಹೇಳಿದ್ದಾರೆ. “ಆಡಳಿತವು ತೆರಿಗೆ ಸಲ್ಲಿಸುವ ಗಡುವನ್ನು ವಿಸ್ತರಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ, ಹಾಗೆಯೆ ವೀಸಾ ಕಾರ್ಯಕ್ರಮಗಳಲ್ಲಿ ಕೂಡಾ ಇದೇ ರೀತಿಯ ವಿಸ್ತರೆಣೆ ಅರ್ಥಪೂರ್ಣವಾಗಿದೆ, ಯಾಕೆಂದರೆ ಇಲ್ಲಿ ಯಾರದ್ದೂ ಯಾವುದೇ ರೀತಿಯಲ್ಲಿ ತಪ್ಪಿಲ್ಲ” ಎಂದು ಅಲೆಕ್ಸ್ ಹೇಳಿದ್ದಾರೆ.

ಟೆಕ್‌ನೆಟ್‌ ಪತ್ರಕ್ಕೆ ಟ್ರಂಪ್ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕಾದ ಪೌರತ್ವ ಹಾಗೂ ವಲಸೆ ಸೇವೆಗಳ ವಕ್ತಾರರು, ಏಜೆನ್ಸಿ ವೀಸಾ ಗಡುವನ್ನು ವಿಸ್ತರಿಸುತ್ತಾರೆಯೇ ಎಂಬ ಬಗ್ಗೆ ಹೇಳಲು ನಿರಾಕರಿಸಿದರಾದರೂ, ಈ ಸಂದರ್ಭಗಳಲ್ಲಿ ಸಮಸ್ಯೆಯಾಗಿರುವ ಜನರಿಗೆ ವಿಶೇಷ ಬೆಂಬಲವನ್ನು ನೀಡಬಹುದು ಎಂದು ಹೇಳಿದರು.

ಅಮರಿಕಾ ಆಡಳಿತವು ವಲಸೆ ಹಾಗೂ ವಿದೇಶಿ ಮೂಲದ ಕಾರ್ಮಿಕರ ಬಗ್ಗೆ ಸತತ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿವೆ. 2019 ರಲ್ಲಿ ವಲಸೆ ರಹಿತ ವೀಸಾಗಳ ಸಂಖ್ಯೆ ಸತತ ನಾಲ್ಕನೇ ವರ್ಷಕ್ಕೆ ಇಳಿದಿದ್ದು, 2015 ರಲ್ಲಿ ಒಂದು ಕೋಟಿ ಒಂಬತ್ತು ಲಕ್ಷದಿಂದ 87 ಲಕ್ಷಕ್ಕೆ ಇಳಿದಿದೆ ಎಂದು ರಾಜ್ಯ ಇಲಾಖೆ ತಿಳಿಸಿದೆ. ಅಕ್ರಮ ಸ್ಥಿತಿಗೆ ಸಿಲುಕುವವರಿಗೆ ಮಾರ್ಗದರ್ಶನ ನೀಡುವ ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್ ಕಾರ್ಯಾಚರಣೆಗಳನ್ನು ಇಲಾಖೆಯು ಕಳೆದ ತಿಂಗಳು ಮುಚ್ಚಿತು. ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಘಟಕವಾದ ಅಮೇರಿಕಾದ ಪೌರತ್ವ ಮತ್ತು ವಲಸೆ ಸೇವೆಗಳಲ್ಲಿನ ವೈಯಕ್ತಿಕ ಸೇವೆಗಳನ್ನು ಮಾರ್ಚ್ 18 ರಿಂದ ಅಮಾನತುಗೊಳಿಸಲಾಗಿದೆ ಹಾಗೂ ಇದು ಜೂನ್ 4 ರವರೆಗೆ ಪ್ರಾರಂಭವಾಗುವುದಿಲ್ಲ.

ಏಪ್ರಿಲ್ 20 ರಂದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಉದ್ಯೋಗಗಳನ್ನು ರಕ್ಷಿಸಲು ಎಲ್ಲಾ ವಲಸೆಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ಯೋಜಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ; ಮರುದಿನ ಅಮೇರಿಕಾದ ಹೊರಗಿನಿಂದ ಜನರಿಗೆ 60 ದಿನಗಳವರೆಗೆ ಹಸಿರು ಕಾರ್ಡ್‌ಗಳನ್ನು ಪಡೆಯದಂತೆ ತಡೆಯುವ ಕಾರ್ಯನಿರ್ವಾಹಕ ಆದೇಶವನ್ನು ಘೋಷಿಸಿದರು. ಇದು ವಿದೇಶಿ ಮೂಲದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಕಂಪನಿಗಳಿಗೆ ಮತ್ತಷ್ಟು ಅಡ್ಡಿಯಾಗಿದೆ.

ಇಂತಹ ಕಠಿಣ ನಿರ್ಧಾರಗಳಿಂದಾಗಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪೆನಿಗಳು ಸಿಬ್ಬಂದಿಯನ್ನು ಕಡಿಮೆ ಮಾಡುತ್ತಿವೆ.

ಕೃಪೆ: ಎನ್ಡಿಟಿವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...