Homeಅಂತರಾಷ್ಟ್ರೀಯಅಮೇರಿಕಾ: ಜೂನ್ ವೇಳೆಗೆ 2 ಲಕ್ಷ ಎಚ್ -1ಬಿ ವೀಸಾ ಉದ್ಯೋಗಿಗಳಿಗೆ ಅಪಾಯ

ಅಮೇರಿಕಾ: ಜೂನ್ ವೇಳೆಗೆ 2 ಲಕ್ಷ ಎಚ್ -1ಬಿ ವೀಸಾ ಉದ್ಯೋಗಿಗಳಿಗೆ ಅಪಾಯ

- Advertisement -
- Advertisement -

ಮಾನಸಿ ವಸವಡ ಅವರಿಗೆ ಅಮೇರಿಕಾದಲ್ಲಿ ಕಾನೂನುಬದ್ಧವಾಗಿ ಇರಲು ಇನ್ನು ಕೇವಲ ಮೂರು ವಾರಗಳಿಗಳಷ್ಟೇ ಇದೆ. 31 ವರ್ಷದ ಇವರು ನ್ಯೂಜೆರ್ಸಿಯ ಪ್ಯಾಸಾಯಿಕ್ ಕೌಂಟಿಯಲ್ಲಿ ಕಳೆದ ಎರಡು ವರ್ಷದಿಂದ ದಂತ ವೈದ್ಯರಾಗಿದ್ದಾರೆ. ಮಾರ್ಚ್ ತಿಂಗಳ ಮಧ್ಯದಿಂದ ಕೊರೊನಾ ಕಾರಣವಾಗಿ ಇವರ ದಂತಾಲಯ ಬಾಗಿಲು ಮುಚ್ಚಿದೆ. ಅಂದಿನಿಂದ ಅವರು ಯಾವುದೆ ಕೆಲಸ ಮಾಡದೇ ಪಾವತಿಯಿಲ್ಲದೇ ರಜೆಯಲ್ಲಿದ್ದಾರೆ.

ವಿಶೇಷ ಕೌಶಲ್ಯ ಹೊಂದಿರುವವರಿಗೆ ಅಮೇರಿಕ ನೀಡುವ ತಾತ್ಕಾಲಿಕ ವೀಸಾವಾದ ಎಚ್ -1ಬಿ ವೀಸಾದಲ್ಲಿ ಮಾನಸಿ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯ ಕಾನೂನಿನಂತೆ ಎಚ್ -1ಬಿ ವೀಸಾದಲ್ಲಿ ಇರುವವರು ಪಾವತಿಯಲ್ಲದೆ 60 ದಿನಗಳವರೆಗೆ ಮಾತ್ರ ದೇಶದಲ್ಲಿ ಉಳಿಯಬಹುದಾಗಿದೆ. ಮಾನಸಿ ಅವರ ಪತಿ ನಂದನ್ ಬುಚ್ ಕೂಡಾ ದಂತವೈದ್ಯರಾಗಿದ್ದು ಅವರು ಸಹ ಎಚ್ -1ಬಿ ವೀಸಾದಲ್ಲಿದ್ದಾರೆ. ಅವರ ವೀಸಾ ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಹೆಚ್ಚುತ್ತಿರುವ ಆತಂಕಗಳ ನಡುವೆ ಈಗ ಇವರಿಬ್ಬರೂ ದಿನಕಳೆಯುತ್ತಿದ್ದಾರೆ.

ಭಾರತ ಈಗಾಗಲೇ ತನ್ನ ಗಡಿಗಳನ್ನು ಅನಿರ್ದಿಷ್ಟವಾಗಿ ಮುಚ್ಚಿರುವುದರಿಂದ, ದಂಪತಿಗಳು ಅಮೆರಿಕಾದಲ್ಲಿ ಉಳಿಯಲು ಸಾಧ್ಯವಿಲ್ಲದೆ ಹಾಗೂ ಭಾರತಕ್ಕೆ ಬರಲು ಸಾಧ್ಯವಾಗದ ಪರಿಸ್ಥತಿ ಶೀಘ್ರದಲ್ಲೇ ಬರಬಹುದು. ಅವರು ಯು.ಎಸ್. ವಿಶ್ವವಿದ್ಯಾಲಯದಲ್ಲಿ ದಂತ ಪದವಿ ಪಡೆಯುವುದಕ್ಕಾಗಿ 5,20,000 ಡಾಲರ್‌ ವಿದ್ಯಾರ್ಥಿ ಸಾಲವನ್ನು ಪಡೆದಿದ್ದಾರೆ. ಈ ಸಾಲವನ್ನು ಮರುಪಾವತಿ ಮಾಡಲು ಭಾರತದಲ್ಲಿ ಗಳಿಸುವ ಸಂಬಳದಿಂದ ಅಸಾಧ್ಯವಾಗಿದೆ. ಇದೆ ಒತ್ತಡದಿಂದ 31 ವರ್ಷದ ಬುಚ್ ತನ್ನ ತಲೆ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಇಬ್ಬರೂ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಮಾನಸಿ ಹೇಳುವಂತೆ “ಇದೀಗ ಎಲ್ಲವೂ ನಿಜವಾಗಿಯೂ ಗೊಂದಲಮಯವಾಗಿದೆ ಮತ್ತು ಕತ್ತಲೆಯಾಗಿದೆ, ನಾವು ಎಲ್ಲಿಗೆ ಹೋಗುತ್ತೇವೆ ಎಂದು ನಮಗೆ ತಿಳಿದಿಲ್ಲ.” ಎಂದು ಹೇಳುತ್ತಾರೆ.

ವಾಷಿಂಗ್ಟನ್ ಡಿ.ಸಿ. ಮೂಲದ ವಲಸೆ ನೀತಿ ವಿಶ್ಲೇಷಕ ಜೆರೆಮಿ ನ್ಯೂಫೆಲ್ಡ್ ಅವರ ಪ್ರಕಾರ, ಯು.ಎಸ್.ನಲ್ಲಿ ಗ್ರೀನ್ ಕಾರ್ಡ್ ಬಯಸುವ ಎರಡುವರೆ ಲಕ್ಷ ಅತಿಥಿ ಕಾರ್ಮಿಕರು ಜೂನ್ ಅಂತ್ಯದ ವೇಳೆಗೆ ತಮ್ಮ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳಬಹುದು. ಇವರಲ್ಲಿ ಎರಡು ಲಕ್ಷ ಜನರು ಎಚ್-1ಬಿ ವೀಸಾದಲ್ಲಿರುವವರಾಗಿದ್ದಾರೆ. ನಿವಾಸಿಗಳಾಗದ ಇನ್ನೂ ಸಾವಿರಾರು ಜನರರನ್ನು ಅವರ ಮನೆಗೆ ಮರಳಲು ಒತ್ತಾಯಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ತಂತ್ರಜ್ಞಾನದ ಉದ್ಯಮದಲ್ಲಿ ಕೆಲಸ ಮಾಡುವ ಮುಕ್ಕಾಲು ಭಾಗದಷ್ಟು ಜನರು ಎಚ್-1ಬಿ ವೀಸಾವನ್ನು ಹೊಂದಿದ್ದಾರೆ. ಆದರೆ ಇದದ ನಿಖರವಾದ ಹಂತಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಇರುತ್ತವೆ.

ಕಳೆದ ಎರಡು ತಿಂಗಳಲ್ಲಿ ಒಂದು ಕೋಟಿ ಅಮೆರಿಕನ್ನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಎಚ್-1ಬಿ ವೀಸಾಗಳನ್ನು ನಿರ್ದಿಷ್ಟ ಸ್ಥಳಕ್ಕೆ ಮತ್ತು ಉದ್ಯೋಗದಾತರಿಗೆ ಸ್ವೀಕರಿಸಲಾಗುತ್ತದೆ, ಅವರು ಸ್ವೀಕರಿಸುವವರು ಕನಿಷ್ಠ ವೇತನವನ್ನು ಪಾವತಿಸಲು ಬದ್ಧರಾಗಿರುತ್ತಾರೆ. ಈ ವೀಸಾ ಸ್ವೀಕರಿಸುವವರನ್ನು ಅನುಪಸ್ಥಿತಿಯ ರಜೆ ನೀಡುವುದು, ಅವರ ವೇತನವನ್ನು ಕಡಿಮೆ ಮಾಡುವುದು ಹಾಗೂ ಕೆಲವು ಸಂದರ್ಭಗಳಲ್ಲಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದು ವೀಸಾ ನಿಯಮಗಳನ್ನು ಉಲ್ಲಂಘಿಸುತ್ತದೆ.

ಕೆಲಸದಿಂದ ವಜಾಗೊಂಡ ಎಚ್-1ಬಿ ಕಾರ್ಮಿಕರಿಗೆ ಮತ್ತೊಂದು ಉದ್ಯೋಗ ಹುಡುಕಲು, ಬೇರೆ ವೀಸಾಕ್ಕೆ ವರ್ಗಾಯಿಸಲು ಅಥವಾ ದೇಶವನ್ನು ತೊರೆಯಲು 60 ದಿನಗಳ ಕಾಲಾ ಅವಕಾಶವಿದೆ. ಅವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳದಿದ್ದರೂ ಸಹ, ಈ ಅವಧಿಯಲ್ಲಿ ತಮ್ಮ ವೀಸಾಗಳನ್ನು ನವೀಕರಿಸಲು ಸಾಧ್ಯವಾಗದಿದ್ದರೆ ಕಾರ್ಮಿಕರು ಸಂದಿಗ್ಧತೆಗೆ ಸಿಲುಕುತ್ತಾರೆ.

ವೀಸಾ ಬಿಕ್ಕಟ್ಟು “ಮಾನವ ಮಟ್ಟದಲ್ಲಿ ಮತ್ತು ಆರ್ಥಿಕ ಮಟ್ಟದಲ್ಲಿ ದುರಂತವನ್ನು ಉಂಟುಮಾಡುತ್ತಿದೆ” ಎಂದು ಒಬಾಮಾ ಆಡಳಿತದಲ್ಲಿ ತಂತ್ರಜ್ಞಾನ ಮತ್ತು ವಲಸೆ ನೀತಿಯಲ್ಲಿ ಕೆಲಸ ಮಾಡಿದ ಡೌಗ್ ರಾಂಡ್ ಹೇಳುತ್ತಾರೆ. ಇವರು ಬೌಂಡ್ಲೆಸ್ ಇಮಿಗ್ರೇಷನ್ ಇಂಕ್ ಎಂಬ ಕಂಪನಿಯ ಸಹ-ಸಂಸ್ಥಾಪಕರಾಗಿದ್ದಾರೆ. ಈ ಕಂಪೆನಿ ಜನರಿಗೆ ವಲಸೆ ಹೋಗಲು ಸಹಾಯ ಮಾಡುತ್ತದೆ. ಎಚ್-1ಬಿ ಕಾರ್ಮಿಕರು ಸಾಮಾನ್ಯವಾಗಿ ಕುಟುಂಬಗಳನ್ನು ಹೊಂದಿ, ತಮ್ಮ ಇಡೀ ಜೀವನವನ್ನು ಮಕ್ಕಳೊಂದಿಗೆ ಅಮೆರಿಕಾದಲ್ಲಿ ಕಳೆದಿರಬಹುದು ಆದರೆ ಅಮೇರಿಕಾದಲ್ಲಿ ಉಳಿಯುವಂತೆ ತಮ್ಮ ಉದ್ಯೋಗಗಳನ್ನಷ್ಟೇ ಅವಲಂಬಿಸಿರುತ್ತಾರೆ. ಇದನ್ನು ರಾಂಡ್ “ಕೇವಲ ಅವ್ಯವಸ್ಥೆ” ಎಂದು ಹೇಳುತ್ತಾರೆ.

ಆಪಲ್, ಅಮೆಜಾನ್, ಫೇಸ್ಬುಕ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಅನ್ನು ಒಳಗೊಂಡ ಟೆಕ್‌ನೆಟ್‌ ಒಕ್ಕೂಟ ವಿದೇಶಿ ಮೂಲದ ಕಾರ್ಮಿಕರಿಗೆ ಪರಿಹಾರ ಕೋರಿ ಏಪ್ರಿಲ್ 17 ರಂದು ರಾಜ್ಯ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಗಳಿಗೆ ಪತ್ರ ಕಳುಹಿಸಿ, ಕನಿಷ್ಠ ಸೆಪ್ಟೆಂಬರ್ 10 ರವರೆಗೆ ಕೆಲಸದ ಮುಕ್ತಾಯ ದಿನಾಂಕಗಳನ್ನು ವಿಳಂಬಗೊಳಿಸುವಂತೆ ಕೋರಿದೆ. “ಈ ಸಮಸ್ಯೆಗಳು ಲಕ್ಷಾಂತರ ಅಪೂರ್ಣ ಉದ್ಯೋಗಗಳಿಗೆ ಕಾರಣವಾಗುತ್ತವೆ ಮತ್ತು ಭಾರೀ ಋಣಾತ್ಮಕ ಆರ್ಥಿಕ ಪರಿಣಾಮಗಳನ್ನು ಬೀರುತ್ತವೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ದೂರದಿಂದ ಕೆಲಸ ಮಾಡುವ ಕಚೇರಿಗಳನ್ನು ಬೆಂಬಲಿಸಲು, ಟೆಲಿಹೆಲ್ತ್ ಸೇವೆಗಳನ್ನು ಒದಗಿಸಿ ವೈದ್ಯರಿಗೆ ಸಹಾಯ ಮಾಡಲು ಮತ್ತು ವಿದ್ಯಾರ್ಥಿಗಳು ಮನೆಯಲ್ಲಿಯೇ ಕಲಿಯಲು ಟೆಕ್ ಉದ್ಯಮವು ನಿರ್ಣಾಯಕವಾಗಿದೆ ಎಂದು ಟೆಕ್‌ನೆಟ್‌ ಫೆಡರಲ್ ನೀತಿ ಮತ್ತು ಸರ್ಕಾರಿ ಸಂಬಂಧಗಳ ಹಿರಿಯ ಉಪಾಧ್ಯಕ್ಷ ಅಲೆಕ್ಸ್ ಬರ್ಗೋಸ್ ಹೇಳಿದ್ದಾರೆ. “ಆಡಳಿತವು ತೆರಿಗೆ ಸಲ್ಲಿಸುವ ಗಡುವನ್ನು ವಿಸ್ತರಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ, ಹಾಗೆಯೆ ವೀಸಾ ಕಾರ್ಯಕ್ರಮಗಳಲ್ಲಿ ಕೂಡಾ ಇದೇ ರೀತಿಯ ವಿಸ್ತರೆಣೆ ಅರ್ಥಪೂರ್ಣವಾಗಿದೆ, ಯಾಕೆಂದರೆ ಇಲ್ಲಿ ಯಾರದ್ದೂ ಯಾವುದೇ ರೀತಿಯಲ್ಲಿ ತಪ್ಪಿಲ್ಲ” ಎಂದು ಅಲೆಕ್ಸ್ ಹೇಳಿದ್ದಾರೆ.

ಟೆಕ್‌ನೆಟ್‌ ಪತ್ರಕ್ಕೆ ಟ್ರಂಪ್ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕಾದ ಪೌರತ್ವ ಹಾಗೂ ವಲಸೆ ಸೇವೆಗಳ ವಕ್ತಾರರು, ಏಜೆನ್ಸಿ ವೀಸಾ ಗಡುವನ್ನು ವಿಸ್ತರಿಸುತ್ತಾರೆಯೇ ಎಂಬ ಬಗ್ಗೆ ಹೇಳಲು ನಿರಾಕರಿಸಿದರಾದರೂ, ಈ ಸಂದರ್ಭಗಳಲ್ಲಿ ಸಮಸ್ಯೆಯಾಗಿರುವ ಜನರಿಗೆ ವಿಶೇಷ ಬೆಂಬಲವನ್ನು ನೀಡಬಹುದು ಎಂದು ಹೇಳಿದರು.

ಅಮರಿಕಾ ಆಡಳಿತವು ವಲಸೆ ಹಾಗೂ ವಿದೇಶಿ ಮೂಲದ ಕಾರ್ಮಿಕರ ಬಗ್ಗೆ ಸತತ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿವೆ. 2019 ರಲ್ಲಿ ವಲಸೆ ರಹಿತ ವೀಸಾಗಳ ಸಂಖ್ಯೆ ಸತತ ನಾಲ್ಕನೇ ವರ್ಷಕ್ಕೆ ಇಳಿದಿದ್ದು, 2015 ರಲ್ಲಿ ಒಂದು ಕೋಟಿ ಒಂಬತ್ತು ಲಕ್ಷದಿಂದ 87 ಲಕ್ಷಕ್ಕೆ ಇಳಿದಿದೆ ಎಂದು ರಾಜ್ಯ ಇಲಾಖೆ ತಿಳಿಸಿದೆ. ಅಕ್ರಮ ಸ್ಥಿತಿಗೆ ಸಿಲುಕುವವರಿಗೆ ಮಾರ್ಗದರ್ಶನ ನೀಡುವ ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್ ಕಾರ್ಯಾಚರಣೆಗಳನ್ನು ಇಲಾಖೆಯು ಕಳೆದ ತಿಂಗಳು ಮುಚ್ಚಿತು. ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಘಟಕವಾದ ಅಮೇರಿಕಾದ ಪೌರತ್ವ ಮತ್ತು ವಲಸೆ ಸೇವೆಗಳಲ್ಲಿನ ವೈಯಕ್ತಿಕ ಸೇವೆಗಳನ್ನು ಮಾರ್ಚ್ 18 ರಿಂದ ಅಮಾನತುಗೊಳಿಸಲಾಗಿದೆ ಹಾಗೂ ಇದು ಜೂನ್ 4 ರವರೆಗೆ ಪ್ರಾರಂಭವಾಗುವುದಿಲ್ಲ.

ಏಪ್ರಿಲ್ 20 ರಂದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಉದ್ಯೋಗಗಳನ್ನು ರಕ್ಷಿಸಲು ಎಲ್ಲಾ ವಲಸೆಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ಯೋಜಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ; ಮರುದಿನ ಅಮೇರಿಕಾದ ಹೊರಗಿನಿಂದ ಜನರಿಗೆ 60 ದಿನಗಳವರೆಗೆ ಹಸಿರು ಕಾರ್ಡ್‌ಗಳನ್ನು ಪಡೆಯದಂತೆ ತಡೆಯುವ ಕಾರ್ಯನಿರ್ವಾಹಕ ಆದೇಶವನ್ನು ಘೋಷಿಸಿದರು. ಇದು ವಿದೇಶಿ ಮೂಲದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಕಂಪನಿಗಳಿಗೆ ಮತ್ತಷ್ಟು ಅಡ್ಡಿಯಾಗಿದೆ.

ಇಂತಹ ಕಠಿಣ ನಿರ್ಧಾರಗಳಿಂದಾಗಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪೆನಿಗಳು ಸಿಬ್ಬಂದಿಯನ್ನು ಕಡಿಮೆ ಮಾಡುತ್ತಿವೆ.

ಕೃಪೆ: ಎನ್ಡಿಟಿವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...