Homeಅಂತರಾಷ್ಟ್ರೀಯಅಮೇರಿಕಾ: ಜೂನ್ ವೇಳೆಗೆ 2 ಲಕ್ಷ ಎಚ್ -1ಬಿ ವೀಸಾ ಉದ್ಯೋಗಿಗಳಿಗೆ ಅಪಾಯ

ಅಮೇರಿಕಾ: ಜೂನ್ ವೇಳೆಗೆ 2 ಲಕ್ಷ ಎಚ್ -1ಬಿ ವೀಸಾ ಉದ್ಯೋಗಿಗಳಿಗೆ ಅಪಾಯ

- Advertisement -
- Advertisement -

ಮಾನಸಿ ವಸವಡ ಅವರಿಗೆ ಅಮೇರಿಕಾದಲ್ಲಿ ಕಾನೂನುಬದ್ಧವಾಗಿ ಇರಲು ಇನ್ನು ಕೇವಲ ಮೂರು ವಾರಗಳಿಗಳಷ್ಟೇ ಇದೆ. 31 ವರ್ಷದ ಇವರು ನ್ಯೂಜೆರ್ಸಿಯ ಪ್ಯಾಸಾಯಿಕ್ ಕೌಂಟಿಯಲ್ಲಿ ಕಳೆದ ಎರಡು ವರ್ಷದಿಂದ ದಂತ ವೈದ್ಯರಾಗಿದ್ದಾರೆ. ಮಾರ್ಚ್ ತಿಂಗಳ ಮಧ್ಯದಿಂದ ಕೊರೊನಾ ಕಾರಣವಾಗಿ ಇವರ ದಂತಾಲಯ ಬಾಗಿಲು ಮುಚ್ಚಿದೆ. ಅಂದಿನಿಂದ ಅವರು ಯಾವುದೆ ಕೆಲಸ ಮಾಡದೇ ಪಾವತಿಯಿಲ್ಲದೇ ರಜೆಯಲ್ಲಿದ್ದಾರೆ.

ವಿಶೇಷ ಕೌಶಲ್ಯ ಹೊಂದಿರುವವರಿಗೆ ಅಮೇರಿಕ ನೀಡುವ ತಾತ್ಕಾಲಿಕ ವೀಸಾವಾದ ಎಚ್ -1ಬಿ ವೀಸಾದಲ್ಲಿ ಮಾನಸಿ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯ ಕಾನೂನಿನಂತೆ ಎಚ್ -1ಬಿ ವೀಸಾದಲ್ಲಿ ಇರುವವರು ಪಾವತಿಯಲ್ಲದೆ 60 ದಿನಗಳವರೆಗೆ ಮಾತ್ರ ದೇಶದಲ್ಲಿ ಉಳಿಯಬಹುದಾಗಿದೆ. ಮಾನಸಿ ಅವರ ಪತಿ ನಂದನ್ ಬುಚ್ ಕೂಡಾ ದಂತವೈದ್ಯರಾಗಿದ್ದು ಅವರು ಸಹ ಎಚ್ -1ಬಿ ವೀಸಾದಲ್ಲಿದ್ದಾರೆ. ಅವರ ವೀಸಾ ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಹೆಚ್ಚುತ್ತಿರುವ ಆತಂಕಗಳ ನಡುವೆ ಈಗ ಇವರಿಬ್ಬರೂ ದಿನಕಳೆಯುತ್ತಿದ್ದಾರೆ.

ಭಾರತ ಈಗಾಗಲೇ ತನ್ನ ಗಡಿಗಳನ್ನು ಅನಿರ್ದಿಷ್ಟವಾಗಿ ಮುಚ್ಚಿರುವುದರಿಂದ, ದಂಪತಿಗಳು ಅಮೆರಿಕಾದಲ್ಲಿ ಉಳಿಯಲು ಸಾಧ್ಯವಿಲ್ಲದೆ ಹಾಗೂ ಭಾರತಕ್ಕೆ ಬರಲು ಸಾಧ್ಯವಾಗದ ಪರಿಸ್ಥತಿ ಶೀಘ್ರದಲ್ಲೇ ಬರಬಹುದು. ಅವರು ಯು.ಎಸ್. ವಿಶ್ವವಿದ್ಯಾಲಯದಲ್ಲಿ ದಂತ ಪದವಿ ಪಡೆಯುವುದಕ್ಕಾಗಿ 5,20,000 ಡಾಲರ್‌ ವಿದ್ಯಾರ್ಥಿ ಸಾಲವನ್ನು ಪಡೆದಿದ್ದಾರೆ. ಈ ಸಾಲವನ್ನು ಮರುಪಾವತಿ ಮಾಡಲು ಭಾರತದಲ್ಲಿ ಗಳಿಸುವ ಸಂಬಳದಿಂದ ಅಸಾಧ್ಯವಾಗಿದೆ. ಇದೆ ಒತ್ತಡದಿಂದ 31 ವರ್ಷದ ಬುಚ್ ತನ್ನ ತಲೆ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಇಬ್ಬರೂ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಮಾನಸಿ ಹೇಳುವಂತೆ “ಇದೀಗ ಎಲ್ಲವೂ ನಿಜವಾಗಿಯೂ ಗೊಂದಲಮಯವಾಗಿದೆ ಮತ್ತು ಕತ್ತಲೆಯಾಗಿದೆ, ನಾವು ಎಲ್ಲಿಗೆ ಹೋಗುತ್ತೇವೆ ಎಂದು ನಮಗೆ ತಿಳಿದಿಲ್ಲ.” ಎಂದು ಹೇಳುತ್ತಾರೆ.

ವಾಷಿಂಗ್ಟನ್ ಡಿ.ಸಿ. ಮೂಲದ ವಲಸೆ ನೀತಿ ವಿಶ್ಲೇಷಕ ಜೆರೆಮಿ ನ್ಯೂಫೆಲ್ಡ್ ಅವರ ಪ್ರಕಾರ, ಯು.ಎಸ್.ನಲ್ಲಿ ಗ್ರೀನ್ ಕಾರ್ಡ್ ಬಯಸುವ ಎರಡುವರೆ ಲಕ್ಷ ಅತಿಥಿ ಕಾರ್ಮಿಕರು ಜೂನ್ ಅಂತ್ಯದ ವೇಳೆಗೆ ತಮ್ಮ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳಬಹುದು. ಇವರಲ್ಲಿ ಎರಡು ಲಕ್ಷ ಜನರು ಎಚ್-1ಬಿ ವೀಸಾದಲ್ಲಿರುವವರಾಗಿದ್ದಾರೆ. ನಿವಾಸಿಗಳಾಗದ ಇನ್ನೂ ಸಾವಿರಾರು ಜನರರನ್ನು ಅವರ ಮನೆಗೆ ಮರಳಲು ಒತ್ತಾಯಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ತಂತ್ರಜ್ಞಾನದ ಉದ್ಯಮದಲ್ಲಿ ಕೆಲಸ ಮಾಡುವ ಮುಕ್ಕಾಲು ಭಾಗದಷ್ಟು ಜನರು ಎಚ್-1ಬಿ ವೀಸಾವನ್ನು ಹೊಂದಿದ್ದಾರೆ. ಆದರೆ ಇದದ ನಿಖರವಾದ ಹಂತಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಇರುತ್ತವೆ.

ಕಳೆದ ಎರಡು ತಿಂಗಳಲ್ಲಿ ಒಂದು ಕೋಟಿ ಅಮೆರಿಕನ್ನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಎಚ್-1ಬಿ ವೀಸಾಗಳನ್ನು ನಿರ್ದಿಷ್ಟ ಸ್ಥಳಕ್ಕೆ ಮತ್ತು ಉದ್ಯೋಗದಾತರಿಗೆ ಸ್ವೀಕರಿಸಲಾಗುತ್ತದೆ, ಅವರು ಸ್ವೀಕರಿಸುವವರು ಕನಿಷ್ಠ ವೇತನವನ್ನು ಪಾವತಿಸಲು ಬದ್ಧರಾಗಿರುತ್ತಾರೆ. ಈ ವೀಸಾ ಸ್ವೀಕರಿಸುವವರನ್ನು ಅನುಪಸ್ಥಿತಿಯ ರಜೆ ನೀಡುವುದು, ಅವರ ವೇತನವನ್ನು ಕಡಿಮೆ ಮಾಡುವುದು ಹಾಗೂ ಕೆಲವು ಸಂದರ್ಭಗಳಲ್ಲಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದು ವೀಸಾ ನಿಯಮಗಳನ್ನು ಉಲ್ಲಂಘಿಸುತ್ತದೆ.

ಕೆಲಸದಿಂದ ವಜಾಗೊಂಡ ಎಚ್-1ಬಿ ಕಾರ್ಮಿಕರಿಗೆ ಮತ್ತೊಂದು ಉದ್ಯೋಗ ಹುಡುಕಲು, ಬೇರೆ ವೀಸಾಕ್ಕೆ ವರ್ಗಾಯಿಸಲು ಅಥವಾ ದೇಶವನ್ನು ತೊರೆಯಲು 60 ದಿನಗಳ ಕಾಲಾ ಅವಕಾಶವಿದೆ. ಅವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳದಿದ್ದರೂ ಸಹ, ಈ ಅವಧಿಯಲ್ಲಿ ತಮ್ಮ ವೀಸಾಗಳನ್ನು ನವೀಕರಿಸಲು ಸಾಧ್ಯವಾಗದಿದ್ದರೆ ಕಾರ್ಮಿಕರು ಸಂದಿಗ್ಧತೆಗೆ ಸಿಲುಕುತ್ತಾರೆ.

ವೀಸಾ ಬಿಕ್ಕಟ್ಟು “ಮಾನವ ಮಟ್ಟದಲ್ಲಿ ಮತ್ತು ಆರ್ಥಿಕ ಮಟ್ಟದಲ್ಲಿ ದುರಂತವನ್ನು ಉಂಟುಮಾಡುತ್ತಿದೆ” ಎಂದು ಒಬಾಮಾ ಆಡಳಿತದಲ್ಲಿ ತಂತ್ರಜ್ಞಾನ ಮತ್ತು ವಲಸೆ ನೀತಿಯಲ್ಲಿ ಕೆಲಸ ಮಾಡಿದ ಡೌಗ್ ರಾಂಡ್ ಹೇಳುತ್ತಾರೆ. ಇವರು ಬೌಂಡ್ಲೆಸ್ ಇಮಿಗ್ರೇಷನ್ ಇಂಕ್ ಎಂಬ ಕಂಪನಿಯ ಸಹ-ಸಂಸ್ಥಾಪಕರಾಗಿದ್ದಾರೆ. ಈ ಕಂಪೆನಿ ಜನರಿಗೆ ವಲಸೆ ಹೋಗಲು ಸಹಾಯ ಮಾಡುತ್ತದೆ. ಎಚ್-1ಬಿ ಕಾರ್ಮಿಕರು ಸಾಮಾನ್ಯವಾಗಿ ಕುಟುಂಬಗಳನ್ನು ಹೊಂದಿ, ತಮ್ಮ ಇಡೀ ಜೀವನವನ್ನು ಮಕ್ಕಳೊಂದಿಗೆ ಅಮೆರಿಕಾದಲ್ಲಿ ಕಳೆದಿರಬಹುದು ಆದರೆ ಅಮೇರಿಕಾದಲ್ಲಿ ಉಳಿಯುವಂತೆ ತಮ್ಮ ಉದ್ಯೋಗಗಳನ್ನಷ್ಟೇ ಅವಲಂಬಿಸಿರುತ್ತಾರೆ. ಇದನ್ನು ರಾಂಡ್ “ಕೇವಲ ಅವ್ಯವಸ್ಥೆ” ಎಂದು ಹೇಳುತ್ತಾರೆ.

ಆಪಲ್, ಅಮೆಜಾನ್, ಫೇಸ್ಬುಕ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಅನ್ನು ಒಳಗೊಂಡ ಟೆಕ್‌ನೆಟ್‌ ಒಕ್ಕೂಟ ವಿದೇಶಿ ಮೂಲದ ಕಾರ್ಮಿಕರಿಗೆ ಪರಿಹಾರ ಕೋರಿ ಏಪ್ರಿಲ್ 17 ರಂದು ರಾಜ್ಯ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಗಳಿಗೆ ಪತ್ರ ಕಳುಹಿಸಿ, ಕನಿಷ್ಠ ಸೆಪ್ಟೆಂಬರ್ 10 ರವರೆಗೆ ಕೆಲಸದ ಮುಕ್ತಾಯ ದಿನಾಂಕಗಳನ್ನು ವಿಳಂಬಗೊಳಿಸುವಂತೆ ಕೋರಿದೆ. “ಈ ಸಮಸ್ಯೆಗಳು ಲಕ್ಷಾಂತರ ಅಪೂರ್ಣ ಉದ್ಯೋಗಗಳಿಗೆ ಕಾರಣವಾಗುತ್ತವೆ ಮತ್ತು ಭಾರೀ ಋಣಾತ್ಮಕ ಆರ್ಥಿಕ ಪರಿಣಾಮಗಳನ್ನು ಬೀರುತ್ತವೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ದೂರದಿಂದ ಕೆಲಸ ಮಾಡುವ ಕಚೇರಿಗಳನ್ನು ಬೆಂಬಲಿಸಲು, ಟೆಲಿಹೆಲ್ತ್ ಸೇವೆಗಳನ್ನು ಒದಗಿಸಿ ವೈದ್ಯರಿಗೆ ಸಹಾಯ ಮಾಡಲು ಮತ್ತು ವಿದ್ಯಾರ್ಥಿಗಳು ಮನೆಯಲ್ಲಿಯೇ ಕಲಿಯಲು ಟೆಕ್ ಉದ್ಯಮವು ನಿರ್ಣಾಯಕವಾಗಿದೆ ಎಂದು ಟೆಕ್‌ನೆಟ್‌ ಫೆಡರಲ್ ನೀತಿ ಮತ್ತು ಸರ್ಕಾರಿ ಸಂಬಂಧಗಳ ಹಿರಿಯ ಉಪಾಧ್ಯಕ್ಷ ಅಲೆಕ್ಸ್ ಬರ್ಗೋಸ್ ಹೇಳಿದ್ದಾರೆ. “ಆಡಳಿತವು ತೆರಿಗೆ ಸಲ್ಲಿಸುವ ಗಡುವನ್ನು ವಿಸ್ತರಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ, ಹಾಗೆಯೆ ವೀಸಾ ಕಾರ್ಯಕ್ರಮಗಳಲ್ಲಿ ಕೂಡಾ ಇದೇ ರೀತಿಯ ವಿಸ್ತರೆಣೆ ಅರ್ಥಪೂರ್ಣವಾಗಿದೆ, ಯಾಕೆಂದರೆ ಇಲ್ಲಿ ಯಾರದ್ದೂ ಯಾವುದೇ ರೀತಿಯಲ್ಲಿ ತಪ್ಪಿಲ್ಲ” ಎಂದು ಅಲೆಕ್ಸ್ ಹೇಳಿದ್ದಾರೆ.

ಟೆಕ್‌ನೆಟ್‌ ಪತ್ರಕ್ಕೆ ಟ್ರಂಪ್ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕಾದ ಪೌರತ್ವ ಹಾಗೂ ವಲಸೆ ಸೇವೆಗಳ ವಕ್ತಾರರು, ಏಜೆನ್ಸಿ ವೀಸಾ ಗಡುವನ್ನು ವಿಸ್ತರಿಸುತ್ತಾರೆಯೇ ಎಂಬ ಬಗ್ಗೆ ಹೇಳಲು ನಿರಾಕರಿಸಿದರಾದರೂ, ಈ ಸಂದರ್ಭಗಳಲ್ಲಿ ಸಮಸ್ಯೆಯಾಗಿರುವ ಜನರಿಗೆ ವಿಶೇಷ ಬೆಂಬಲವನ್ನು ನೀಡಬಹುದು ಎಂದು ಹೇಳಿದರು.

ಅಮರಿಕಾ ಆಡಳಿತವು ವಲಸೆ ಹಾಗೂ ವಿದೇಶಿ ಮೂಲದ ಕಾರ್ಮಿಕರ ಬಗ್ಗೆ ಸತತ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿವೆ. 2019 ರಲ್ಲಿ ವಲಸೆ ರಹಿತ ವೀಸಾಗಳ ಸಂಖ್ಯೆ ಸತತ ನಾಲ್ಕನೇ ವರ್ಷಕ್ಕೆ ಇಳಿದಿದ್ದು, 2015 ರಲ್ಲಿ ಒಂದು ಕೋಟಿ ಒಂಬತ್ತು ಲಕ್ಷದಿಂದ 87 ಲಕ್ಷಕ್ಕೆ ಇಳಿದಿದೆ ಎಂದು ರಾಜ್ಯ ಇಲಾಖೆ ತಿಳಿಸಿದೆ. ಅಕ್ರಮ ಸ್ಥಿತಿಗೆ ಸಿಲುಕುವವರಿಗೆ ಮಾರ್ಗದರ್ಶನ ನೀಡುವ ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್ ಕಾರ್ಯಾಚರಣೆಗಳನ್ನು ಇಲಾಖೆಯು ಕಳೆದ ತಿಂಗಳು ಮುಚ್ಚಿತು. ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಘಟಕವಾದ ಅಮೇರಿಕಾದ ಪೌರತ್ವ ಮತ್ತು ವಲಸೆ ಸೇವೆಗಳಲ್ಲಿನ ವೈಯಕ್ತಿಕ ಸೇವೆಗಳನ್ನು ಮಾರ್ಚ್ 18 ರಿಂದ ಅಮಾನತುಗೊಳಿಸಲಾಗಿದೆ ಹಾಗೂ ಇದು ಜೂನ್ 4 ರವರೆಗೆ ಪ್ರಾರಂಭವಾಗುವುದಿಲ್ಲ.

ಏಪ್ರಿಲ್ 20 ರಂದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಉದ್ಯೋಗಗಳನ್ನು ರಕ್ಷಿಸಲು ಎಲ್ಲಾ ವಲಸೆಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ಯೋಜಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ; ಮರುದಿನ ಅಮೇರಿಕಾದ ಹೊರಗಿನಿಂದ ಜನರಿಗೆ 60 ದಿನಗಳವರೆಗೆ ಹಸಿರು ಕಾರ್ಡ್‌ಗಳನ್ನು ಪಡೆಯದಂತೆ ತಡೆಯುವ ಕಾರ್ಯನಿರ್ವಾಹಕ ಆದೇಶವನ್ನು ಘೋಷಿಸಿದರು. ಇದು ವಿದೇಶಿ ಮೂಲದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಕಂಪನಿಗಳಿಗೆ ಮತ್ತಷ್ಟು ಅಡ್ಡಿಯಾಗಿದೆ.

ಇಂತಹ ಕಠಿಣ ನಿರ್ಧಾರಗಳಿಂದಾಗಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪೆನಿಗಳು ಸಿಬ್ಬಂದಿಯನ್ನು ಕಡಿಮೆ ಮಾಡುತ್ತಿವೆ.

ಕೃಪೆ: ಎನ್ಡಿಟಿವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...