Homeಮುಖಪುಟಓವೈಸಿ ಪಕ್ಷ ಎಸ್‌ಪಿಗೆ ಮುಳುವಾಯಿತೆ? ಬಿಜೆಪಿ ಅತಿ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳಿವು...

ಓವೈಸಿ ಪಕ್ಷ ಎಸ್‌ಪಿಗೆ ಮುಳುವಾಯಿತೆ? ಬಿಜೆಪಿ ಅತಿ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರಗಳಿವು…

- Advertisement -
- Advertisement -

ಸಮಾಜವಾದಿ ಪಾರ್ಟಿ ಹಾಗೂ ಇದರ ಮಿತ್ರ ಪಕ್ಷಗಳಿಗೆ ಅಸಾದುದ್ದೀನ್ ಓವೈಸಿಯವರ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷ ಹಲವು ಕ್ಷೇತ್ರಗಳಲ್ಲಿ ಬಿಸಿ ತುಪ್ಪವಾಗಿರುವ ಸಾಧ್ಯತೆಯನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ತೆರೆದಿಟ್ಟಿದೆ.

ಮತಗಳಿಕೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊಮ್ಮಿರುವ ಬಹುಜನ ಸಮಾಜವಾದಿ ಪಕ್ಷವು ಹಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜೊತೆಗೆ ಹಲವಾರು ಪಕ್ಷೇತರ ಅಭ್ಯರ್ಥಿಗಳು ಮುಸ್ಲಿಮರಾಗಿದ್ದರು. ಇವೆಲ್ಲವೂ ಎಸ್‌ಪಿ ಮತ ಚದುರಲು ಕಾರಣವಾಗಿರಬಹುದು. ಅದಕ್ಕಾಗಿ ಹೆಚ್ಚಾಗಿ ಮುಸ್ಲಿಂ ಮುಖವಾಣಿ ಎಂದೇ ಬಿಂಬಿತವಾಗಿರುವ ಹೈದ್ರಾಬಾದ್‌ ಮೂಲದ ಎಎಂಐಎಂಎ ಪಕ್ಷಕ್ಕೆ ಬಿದ್ದಿರುವ ಮತಗಳು ಒಂದು ವೇಳೆ ಎಸ್‌ಪಿ ತೆಕ್ಕೆಗೆ ಬಿದ್ದಿದ್ದರೆ ಮತ್ತಷ್ಟು ಕ್ಷೇತ್ರಗಳು ಎಸ್‌ಪಿ ಪಾಲಾಗುತ್ತಿದ್ದವು ಎಂಬ ಚರ್ಚೆಯಾಗುತ್ತಿದೆ.

ಯಾದವ ಹಾಗೂ ಮುಸ್ಲಿಂ ಸಮುದಾಯದ ಮತಗಳನ್ನು ಬಹುಮುಖ್ಯವಾಗಿ ನಂಬಿಕೊಂಡಿರುವ ಸಮಾಜವಾದಿ ಪಕ್ಷವನ್ನು ಮುಸ್ಲಿಂ ಮತದಾರರು ಕೈ ಹಿಡಿದಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿ ವಿರುದ್ಧ ಕಡಿಮೆ ಅಂತರದಲ್ಲಿ ಎಸ್‌ಪಿ ಸೋತಿರುವ ಕೆಲವು ಕ್ಷೇತ್ರಗಳಲ್ಲಿ ಎಐಎಂಐಎಂ ಸೇರಿದಂತೆ ಇತರ ಪಕ್ಷಗಳು ಮುಸ್ಲಿಂ ಮತಗಳನ್ನು ಚದುರಿಸಿರುವ ಸಾಧ್ಯತೆ ಇದೆ.

ಒಟ್ಟು ಮತ ವಿಭಜನೆಯಲ್ಲಿ ಬಿಎಸ್‌ಪಿ ಶೇ. 12.88, ಬಿಜೆಪಿ ಶೇ. 41.29, ಎಸ್‌ಪಿ 32.06 ಮತಗಳನ್ನು ಪಡೆದಿವೆ. ಎಎಎಪಿ ಶೇ. 0.38, ಎಐಎಫ್‌ಬಿ ಶೇ. 0.00, ಸಿಪಿಐ ಶೇ. 0.07, ಸಿಪಿಐ(ಎಂ) ಶೇ. 0.01, ಸಿಪಿಐ(ಎಂಎಲ್‌) ಶೇ. 0.01, ಕಾಂಗ್ರೆಸ್‌ ಶೇ. 2.33, ಐಯುಎಂಎಲ್‌‌ ಶೇ. 0.00, ಜೆಡಿಯು ಶೇ 0.11, ಎಲ್‌ಜೆಪಿ ಶೇ. 0.00, ಎಲ್‌ಜೆಪಿಆರ್‌ವಿ ಶೇ. 0.01, ಎನ್‌ಸಿಪಿ ಶೇ. 0.05, ನೋಟಾ ಶೇ. 0.69%, ಆರ್‌‌ಎಲ್‌ಡಿ ಶೇ. 2.85, ಎಸ್‌‌ಎಚ್‌‌ಎಸ್‌ ಶೇ. 0.02, ಪಕ್ಷೇತರರು ಶೇ. 6.74 ಮತಗಳನ್ನು ಪಡೆದಿದ್ದಾರೆ. ಎಐಎಂಐಎಂ ಪಕ್ಷವು ಉತ್ತರ ಪ್ರದೇಶದ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಶೇ. 0.49 ಮತಗಳನ್ನು ಎಐಎಂಐಎಂ ಪಡೆದಿರುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಶೇ. 0.49ರಷ್ಟು ಮತ ಗಳಿಸಿದರೂ ಮತ ವಿಭಜನೆಯಾಗುವಲ್ಲಿ ಎಐಎಂಐಎಂ ಪ್ರಮುಖ ಪಾತ್ರ ವಹಿಸಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕೆಲವು ಕ್ಷೇತ್ರಗಳ ಫಲಿತಾಂಶ ಚರ್ಚೆಯಾಗುತ್ತಿದೆ.

ಬಿಜ್ನೋರ್‌ ಕ್ಷೇತ್ರ

ಬಿಜ್ನೋರ್‌ ಕ್ಷೇತ್ರದಲ್ಲಿ ಬಿಜೆಪಿಯ ಸುಚಿ ಮೌಸಮ್‌ ಚೌದರಿ ಗೆಲುವು ಪಡೆದಿದ್ದಾರೆ. 97,165 ಮತಗಳನ್ನು ಅವರು ಗಳಿಸಿದ್ದರೆ, ಎಸ್‌ಪಿಯ ಮಿತ್ರ ಪಕ್ಷ ಆರ್‌ಎಲ್‌ಡಿಯ ಅಭ್ಯರ್ಥಿ ನೀರಜ್ ಚೌದರಿಯವರು 95,720 ಮತಗಳನ್ನು ಪಡೆದಿದ್ದಾರೆ. ಬಿಜೆಪಿ 1,445 ಮತಗಳ ಅಂತರದಲ್ಲಿ ಗೆದ್ದಿದೆ. ಎಐಎಂಐಎಂ ಅಭ್ಯರ್ಥಿ 2,290 ಮತಗಳನ್ನು ಗಳಿಸಿದ್ದರೆ, ಮೂರನೇ ಸ್ಥಾನದಲ್ಲಿರುವ ಬಿಎಸ್‌ಪಿ ಅಭ್ಯರ್ಥಿ 52,035 ಮತಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ.

***

ನಾಕೂರ್‌ ಕ್ಷೇತ್ರ

ನಾಕೂರ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ಚೌದರಿಯವರು 315 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಎಸ್‌ಪಿ ಹಾಗೂ ಬಿಜೆಪಿಯ ಭಾರಿ ಪೈಪೋಟಿಯ ನಡುವೆ ಬಿಎಸ್‌ಪಿ ಮೂರನೇ ಸ್ಥಾನದಲ್ಲಿದೆ. ಬಿಜೆಪಿ ಅಭ್ಯರ್ಥಿ 1,04,114 ಮತಗಳನ್ನು ಗಳಿಸಿದರೆ, ಎಸ್‌ಪಿ ಅಭ್ಯರ್ಥಿ ಧರಂಸಿಂಗ್ ಸೈನಿ 1,03,799 ಮತಗಳನ್ನು ಪಡೆದು ಸೋತಿದ್ದಾರೆ. ಎಐಎಂಐಎಂ ಪಕ್ಷದ ರಿಜ್ವಾನಾ 3,593 ಮತಗಳನ್ನು ಪಡೆದಿದ್ದಾರೆ. ಬಿಎಸ್‌ಪಿಯು ಮುಸ್ಲಿಂ ಅಭ್ಯರ್ಥಿ ಸಾಹಿಲ್‌ ಖಾನ್‌ ಅವರನ್ನು ಕಣಕ್ಕಿಳಿಸಿ 55,112 ಮತಗಳನ್ನು ಗಳಿಸಿದೆ.

***

ಕುರ್ಸಿ ಕ್ಷೇತ್ರ

ಕುರ್ಸಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಕೇಂದ್ರ ಪ್ರತಾಪ್ ವರ್ಮಾ 118,720 ಮತಗಳನ್ನು ಪಡೆಯುವ ಮೂಲಕ 217 ಮತಗಳ ಅಂತರದಲ್ಲಿ ಎಸ್‌ಪಿ ಅಭ್ಯರ್ಥಿ ರಾಕೇಶ್‌ ವರ್ಮಾ ಅವರನ್ನು ಸೋಲಿಸಿದ್ದಾರೆ. ರಾಕೇಶ್‌‌ 118,503 ಮತಗಳನ್ನು ಗಳಿಸಿದ್ದರು. ಮೂರನೇ ಸ್ಥಾನದಲ್ಲಿರುವ ಬಿಎಸ್‌ಪಿ ಅಭ್ಯರ್ಥಿ ಕುಮಾರಿ ಮೀತಾ ಗೌತಮ್‌ 35,561 ಮತಗಳನ್ನು ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ಎಐಎಂಐಎಂ ಅಭ್ಯರ್ಥಿ ಕಮೈಲ್ ಅಶ್ರಫ್ ಖಾನ್‌ 8,541 ಮತಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಐದನೇ ಸ್ಥಾನದಲ್ಲಿರುವ ಉರ್ಮಿಳಾ ಪಟೆ 2,803 ಮತಗಳನ್ನು ಗಳಿಸಿದ್ದರು.

***

ಸುಲ್ತಾನ್‌ಪುರ್‌ ಕ್ಷೇತ್ರ

ಸುಲ್ತಾನ್‌ಪುರ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿನೋದ್‌ ಸಿಂಗ್‌ ಅವರು 92,715, ಎಸ್‌ಪಿ ಅಭ್ಯರ್ಥಿ ಅನೂಪ್‌ ಸಂದ 91,706 ಮತ ಗಳಿಸಿದ್ದಾರೆ. 1,009 ಮತಗಳ ಅಂತರದಲ್ಲಿ ಬಿಜೆಪಿ ಗೆದ್ದಿದ್ದು, ಎಐಎಂಐಎಂನ ಮಿರ್ಜಾ ಅಕ್ರಮ್ ಬೇಗ್‌ 5,251 ಮತ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬಿಎಸ್‌ಪಿಯ ದೇವಿ ಶಹಾ ಮಿಶ್ರಾ ಅವರು 22,521 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿ ಫಿರೋಜ್‌ ಖಾನ್‌ ಕಣದಲ್ಲಿದ್ದು, 2,655 ಮತಗಳನ್ನು ಗಳಿಸಿದ್ದಾರೆ.

***

ಔರೈ

ಔರೈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಧೀನನಾಥ್ ಭಾಸ್ಕರ್‌ 93,691, ಎಸ್‌ಪಿಯ ಅಂಜನಿಯವರು 92,044 ಮತ ಗಳಿಸಿದ್ದರು. ಬಿಜೆಪಿ 1,647 ಮತಗಳ ಅಂತರದಲ್ಲಿ ಗೆದ್ದಿದೆ. ಮೂರನೇ ಸ್ಥಾನದಲ್ಲಿರುವ ಬಿಎಸ್‌ಪಿಯ ಕಮಲಾ ಶಂಕರ್‌ 28,413 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ 2,694 ಮತ, ವಿಎಸ್‌ಐಪಿ 2,499 ಮತ, ನೋಟಾ 2,205 ಮತಗಳು, ಎಐಎಂಐಎಂ ಪಕ್ಷದ ತೆದೈ 2,190 ಮತಗಳನ್ನು ಗಳಿಸಿದ್ದಾರೆ.

***

ಶಹಗಂಜ್ ಕ್ಷೇತ್ರ

ಬಿಜೆಪಿ ಮಿತ್ರ ಪಕ್ಷವಾದ ನಿಶಾದ್ ಪಾರ್ಟಿಯ ಅಭ್ಯರ್ಥಿ ರಮೇಶ್ 719 ಮತಗಳ ಅಂತರದಲ್ಲಿ ಎಸ್‌ಪಿ ಅಭ್ಯರ್ಥಿ ಶೈಲೇಂದ್ರ ಯಾದವ್‌ ವಿರುದ್ಧ ಜಯ ಗಳಿಸಿದ್ದಾರೆ. ಶೈಲೇಂದ್ರ ಅವರು 86,514 ಮತ ಗಳಿಸಿದ್ದರೆ ರಮೇಶ್ 87,233 ಮತ ಪಡೆದಿದ್ದಾರೆ. ಬಿಎಸ್‌ಪಿಯ ಇಂದರ್‌ದೇವ್‌ 48,957 ಮತ ಗಳಿಸಿದ್ದಾರೆ. ಎಐಎಂಐಎಂ ಪಕ್ಷದ ನಯಾದ್ ಅಹಮದ್ ಖಾನ್‌ 8,128 ಮತ ಗಳಿಸಿದ್ದಾರೆ. ವಿಎಸ್‌ಐಪಿ 2,551 ಮತ, ಕಾಂಗ್ರೆಸ್ 1,529 ಮತ ಪಡೆದಿವೆ.

***

ಹೀಗೆ ಹಲವು ಕ್ಷೇತ್ರಗಳಲ್ಲಿ ಎಸ್‌ಪಿ ಮತಗಳು ವಿಭಜನೆಯಾಗಿರುವ ಸಾಧ್ಯತೆಯನ್ನು ಚುನಾವಣಾ ಫಲಿತಾಂಶ ತೆರೆದಿಟ್ಟಿದೆ. ಉತ್ತರ ಪ್ರದೇಶದ ಚುಣಾವಣೆಯಲ್ಲಿ ಓವೈಸಿಯವರ ಉಪಸ್ಥಿತಿ, ಮುಸ್ಲಿಂ ಮತಬ್ಯಾಂಕ್‌ ಮೂಲಕ ಗುರುತಿಸಿಕೊಂಡಿರುವ ಎಸ್‌ಪಿಗೆ ಹೊಡೆತ ನೀಡಿದೆ ಎಂದೇ ಚರ್ಚೆಗಳಾಗುತ್ತಿವೆ. ಚುನಾವಣಾ ರಾಜಕಾರಣದಲ್ಲಿ ಜಾತಿಗಳ ಸಮೀಕರಣ, ಕೋಮು ಧ್ರುವೀಕರಣ ಹಾಗೂ ಸಂಪತ್ತಿನ ಕ್ರೋಢೀಕರಣ ಕೆಲಸ ಮಾಡುತ್ತದೆ ಎಂಬುದು ಓಪನ್‌ ಸಿಕ್ರೆಟ್‌. ಮಾಯವತಿಯವರ ಮೌನವೂ ಬಿಜೆಪಿಯ ದಿಗ್ವಿಜಯಕ್ಕೆ ಕಾರಣವಾಗಿರಬಹುದೆಂಬ ಸಾಧ್ಯತೆಯನ್ನು ಹೊರಗಿಟ್ಟು ನೋಡಲಾಗದು.


ಇದನ್ನೂ ಓದಿರಿ: ಯುಪಿ ಫಲಿತಾಂಶ 2024ರ ಚುನಾವಣೆಗೆ ದಿಕ್ಸೂಚಿ ಎಂದ ಮೋದಿ: ಇದು ಸುಳ್ಳು ನಿರೂಪಣೆ ಎಂದ ಪ್ರಶಾಂತ್ ಕಿಶೋರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...