Homeಕರ್ನಾಟಕಪದ್ಮಶ್ರೀ ಪುರಸ್ಕೃತ ತುಳಸಜ್ಜಿ: ಮಾನವೀಯತೆ-ಸಾಮಾಜಿಕ ಬದ್ದತೆಯ ಪ್ರತೀಕ

ಪದ್ಮಶ್ರೀ ಪುರಸ್ಕೃತ ತುಳಸಜ್ಜಿ: ಮಾನವೀಯತೆ-ಸಾಮಾಜಿಕ ಬದ್ದತೆಯ ಪ್ರತೀಕ

ತುಳಸಜ್ಜಿಗೆ ದೆಹಲಿ ಖರ್ಚಿಗೆಂದು ಜನ ಕೊಟ್ಟ ಹಣವನ್ನು ಸುಕ್ರಜ್ಜಿಯ ಆರೋಗ್ಯಕ್ಕೆ ಮತ್ತು ಹರೇಕಳ ಹಾಜಬ್ಬರ ಶಾಲೆಗೆ ದೇಣಿಗೆ ನೀಡಿದ್ದಾರೆ.

- Advertisement -
- Advertisement -

ಗಿಡ-ಮರಗಳನ್ನು ತನ್ನ ಮಕ್ಕಳಂತೆ ಸಾಕಿ-ಸಲುಹಿದ ಅಂಕೋಲೆಯ ಹಾಲಕ್ಕಿ ಒಕ್ಕಲು ಬುಡಕಟ್ಟಿನ ತುಳಸಿ ಗೌಡರಿಗೆ ಪದ್ಮಶ್ರೀ ಪ್ರದಾನ ಮಾಡಲಾಗಿದೆ. ಇದರಿಂದ ಪ್ರಶಸ್ತಿಯ ತೂಕ ಹೆಚ್ಚಾಗಿದೆ. ಈ ವ್ಯವಸ್ಥೆಯಲ್ಲಿ ಅಪರೂಪಕ್ಕೊಮ್ಮೆ ಇಂತಹ ಪವಾಡವಾಗುತ್ತದೆ.. ನಿಜವಾದ ಅರ್ಹರಿಗೆ, ಪ್ರಾಮಾಣಿಕರಿಗೆ ಪ್ರಶಸ್ತಿ ಸಂದಿದಾಗ ಆ ಪುರಸ್ಕಾರಗಳಿಗೆ ಗೌರವ ಬರುತ್ತದೆ.

ಆರೇಳು ದಶಕದಿಂದ ಸುಮಾರು 30 ಸಾವಿರ ಸಸಿಗಳನ್ನು ನೆಟ್ಟು ಕಾಳಜಿಯಿಂದ ನೀರೆರೆಯುತ್ತ ನೂರಾರು ಗಿಡ-ಮರಗಳ ಹೆಸರು, ಪರಿಚಯ ಪಕ್ಕಾ ಮಾಡಿಕೊಂಡಿರುವ ತುಳಸಜ್ಜಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗ ‘ಇದೊಂದು ಯೋಗ್ಯ ಆಯ್ಕೆ’ ಎಂಬ ಉದ್ಗಾರ ಎಲ್ಲೆಡೆ ಹೊರಹೊಮ್ಮಿತ್ತು!

ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಬಂಧಿತರಾಗಿದ್ದ 83 ಮಂದಿಗೆ ತಲಾ 2 ಲಕ್ಷ ರೂ. ಪರಿಹಾರ: ಪಂಜಾಬ್ ಸರ್ಕಾರ

ತುಳಸಜ್ಜಿ ಹೊಟ್ಟೆ ಪಾಡಿಗಾಗಿ ಅಂಕೋಲಾದ ಮಾಸ್ತಿಕಟ್ಟೆ ಅರಣ್ಯ ವಿಭಾಗದ ನರ್ಸರಿ (ಸಸ್ಯ ಪಾಲನಾ ಕೇಂದ್ರ)ಯಲ್ಲಿ ಚಾಕರಿ ಮಾಡಿಕೊಂಡಿದ್ದರು. ನಿಷ್ಟೆ, ಕಾಳಜಿ ಮತ್ತು ಪರಿಸರ ಪ್ರೀತಿಯಿಂದ ಕೆಲಸ ಮಾಡುತ್ತಿದ್ದ ತುಳಸಜ್ಜಿಯನ್ನು ಮೊದಲು ಗುರುತಿಸಿದ್ದು ಹಿರಿಯ ಅರಣ್ಯಾಧಿಕಾರಿಯಾಗಿದ್ದ ಯಲ್ಲಪ್ಪ ರೆಡ್ಡಿಯವರು. ಹಾಗಾಗಿ ತುಳಸಜ್ಜಿಗೆ ಒಕ್ಕೂಟ ಸರ್ಕಾರದ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ ಬಂತು.

ತುಳಸಜ್ಜಿಯ ಮೂಲಕ ಉತ್ತರ ಕನ್ನಡಕ್ಕೆ ಮೂರನೆ ಪದ್ಮಶ್ರೀ ಪ್ರಶಸ್ತಿ ಬಂದಂತಾಗಿದೆ. 2017 ರಲ್ಲಿ ಜಾನಪದ ಕೋಗಿಲೆ ಖ್ಯಾತಿಯ ಸುಕ್ರಿ ಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿತ್ತು. 5000 ಹಾಡುಗಳು ನಾಲಿಗೆ ತುದಿಯಲ್ಲೆ ಇರುವ ಸುಕ್ರಜ್ಜಿ ಸಹ ವಿಶಿಷ್ಟ ಸಂಸ್ಕೃತಿ ಸೊಗಡಿನ ಹಾಲಕ್ಕಿ ಒಕ್ಕಲು ಬುಡಕಟ್ಟಿಗೆ ಸೇರಿದವರು. ಸಾರಾಯಿ ವಿರೋಧಿ ಆಂದೋಲನ ಮುಂತಾದ ಸಾಮಾಜಿಕ ಹೋರಾಟದಲ್ಲಿ ಸಕ್ರೀಯರಾಗಿದ್ದ ಸುಕ್ರಜ್ಜಿ ಈಗ ವಯೋಸಹಜ ನಿಶಕ್ತಿಯಿಂದ ಆಸ್ಪತ್ರೆೆ-ಮನೆಯೆಂದು ಓಡಾಡುವಂತಾಗಿದೆ.

ನವೆಂಬರ್ 8 ರಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ದಿಲ್ಲಿಗೆ ಹೋಗಬೇಕಿದ್ದ ತುಳಸಜ್ಜಿಗೆ ದಾರಿ ಖರ್ಚಿಗೆಂದು ಅಂಕೋಲೆಯ ಮಂದಿ 1 ಲಕ್ಷ 16 ಸಾವಿರ ರೂ. ಒಟ್ಟುಗೂಡಿಸಿ ಕೊಟ್ಟಿದ್ದರು. ತುಳಸಜ್ಜಿ ಇದರಲ್ಲಿ ಒಂದಷ್ಟು ಹಣವನ್ನು ಸುಕ್ರಜ್ಜಿ ಔಷದೋಪಚಾರಕ್ಕೆಂದು ಅವರ ಮನೆಗೆ ಹೋಗಿ ಕೊಟ್ಟು ಬಂದಿದ್ದು ಎಲ್ಲರ ಹೃದಯ ಆರ್ದ್ರವಾಗಿಸಿತ್ತು!. ಪದ್ಮಶ್ರೀ ಪ್ರಶಸ್ತಿ ಪಡೆಯುವ ಮೊದಲೇ ಮಾನವೀಯ ಬದ್ದತೆಯಿಂದ ಗಮನ ಸೆಳೆದಿದ್ದ ತುಳಸಜ್ಜಿ ಪ್ರಶಸ್ತಿ ಪಡೆದು ಬರುವಾಗ ತನ್ನ ಸಾಮಾಜಿಕ ಬದ್ದತೆಯ ಸ್ವಭಾವದಿಂದ ಮೂಕ ವಿಸ್ಮಿತರನ್ನಾಗಿಸಿದ್ದಾರೆ.

ಇದನ್ನೂ ಓದಿ: ’ನಿಮ್ಮ ಸಭ್ಯತೆ, ನನ್ನ ಘನತೆ’: ನ.20ಕ್ಕೆ ಗೃಹ ಕಾರ್ಮಿಕರಿಂದ ಮಹಿಳಾ ಚಲೋ

ಪದ್ಮಶ್ರೀ ಪುರಸ್ಕೃತರಾಗಿ ದಿಲ್ಲಿಯಿಂದ ಬೆಂಗಳೂರಿಗೆ ಬಂದಿದ್ದ ತುಳಸಜ್ಜಿ ನೇರ ಊರಿಗೆ [ಅಂಕೋಲ] ಬರಲಿಲ್ಲ. ಬದಲಿಗೆ ಮಂಗಳೂರಿಗೆ ತೆರಳಿ ಕಿತ್ತಳೆ ಹಣ್ಣು ಮಾರಿ ಶಾಲೆಗಳನ್ನು ತೆರೆದ ಹರೇಕಳ ಹಾಜಬ್ಬರ ಮನೆಗೆ ಹೋದರು. ಹರೇಕಳ ಹಾಜಬ್ಬ ದಿಲ್ಲಿಯಲ್ಲಿ ತುಳಸಜ್ಜಿ ಜತೆಯೆ ಪದ್ಮಶ್ರೀ ಪಡೆದಿದ್ದರು. ಅಲ್ಲಿ ಈ ಅಕ್ಷರ ಸಂತ ಮತ್ತು ವೃಕ್ಷ ದೇವತೆ ಪರಿಚಿತರಾಗಿದ್ದರು. ಹಾಜಬ್ಬರ ಶಾಲೆಗಳನ್ನೆಲ್ಲ ಕಣ್ತುಂಬಿಕೊಂಡ ತುಳಸಜ್ಜಿ ಧನ್ಯತಾಭಾವದಲ್ಲಿ ಹಾಜಬ್ಬರ ಶಾಲಾ ಅಭಿಯಾನಕ್ಕೆ ತನ್ನ ಕೈಲಾದ ದೇಣಿಗೆ ಕೊಟ್ಟಿದ್ದಾರೆ. ನನ್ನಿಂದಾದಷ್ಟು ಕೊಟ್ಟಿದ್ದೇನೆ; ಇನ್ನು ದಾನಿಗಳು ಮನಸ್ಸು ಮಾಡಬೇಕು ಎಂದಿದ್ದಾರೆ. ಇದೊಂದು ಅನಕರಣೀಯ ಆದರ್ಶವೆಂಬ ಮೆಚ್ಚುಗೆ ಮಾತು ಕರಾವಳಿಯಲ್ಲಿ ಕೇಳಿಬರುತ್ತಿದೆ.

ಇಂಥ ಮೇರು ವ್ಯಕ್ತಿತ್ವದ ತುಳಸಜ್ಜಿಯನ್ನು ಉತ್ತರ ಕನ್ನಡ ಜಿಲ್ಲಾಡಳಿತ ಸಮರ್ಪಕವಾಗಿ ಗೌರವಿಸುತ್ತಿಲ್ಲ. ಪದ್ಮಶ್ರೀ ಪ್ರಶಸ್ತಿಯೊಂದಿಗೆ ದಿಲ್ಲಿಯಿಂದ ಮಂಗಳೂರು ಮೂಲಕ ಊರಿಗೆ ಬರುತ್ತಿದ್ದ ತುಳಸಜ್ಜಿಯನ್ನು ಉಡುಪಿ-ಉತ್ತರ ಕನ್ನಡದ ಗಡಿಯಲ್ಲಿ ಭಟ್ಕಳದ ಎಸಿ ಮತ್ತು ತಹಶೀಲ್ದಾರ್ ಕಾಟಾಚಾರಕ್ಕೆಂಬಂತೆ ಹೂ ಗುಚ್ಚ ಕೊಟ್ಟು ಸ್ವಾಗತಿಸಿದ್ದಾರೆ. ಹಾಗೆ ನೋಡಿದರೆ ಪದ್ಮ ಪುರಸ್ಕೃತರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದ ತುಳಸಜ್ಜಿಯನ್ನು ಸಡಗರದಿಂದ ಜಿಲ್ಲಾಡಳಿತ ಎದುರುಗೊಳ್ಳಬೇಕಿತ್ತು. ತುಳಸಜ್ಜಿಗೆ ಪದ್ಮಶ್ರೀ ಘೋಷಣೆಯಾದಾಗ, ಪ್ರಶಸ್ತಿ ತರಲು ದಿಲ್ಲಿಗೆ ಹೊರಡುವಾಗ ಮತ್ತು ತಿರುಗಿ ಬರುವಾಗ ಜಿಲ್ಲಾಡಳಿತ ಉದಾಸೀನದಿಂದ ಏಕೆ ಎಂಬ ಪ್ರಶ್ನೆ ಎದ್ದಿದೆ.

ಕನಿಷ್ಟ ಅಂಕೋಲೆಯಿಂದ ಅವರ ಮನೆ ತನಕವಾದರೂ ಮೂರ್ನಾಲ್ಕು ಮೈಲಿ ಮೆರವಣಿಗೆಯಲ್ಲಿ ಕರೆದೊಯ್ಯಬೇಕಿತ್ತು. ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಒಂದು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿತ್ತೆಂದು ಸಾಂಸ್ಕೃತಿಕ ಲೋಕದ ಅನುಭವಿಗಳು ಹೇಳುತ್ತಾರೆ.
ಕಾರವಾರದ ರಾಮಾ ರಾಘೋಬಾ ರಾಣೆಯವರು ಪರಮವೀರ ಚಕ್ರ ಪ್ರಶಸ್ತಿ ಪಡೆದು ಬಂದಾಗ ಕಾರವಾರದಿಂದ ಅವರ ಮನೆ ತನಕ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ದಿದ್ದನ್ನು ನೆನಪಿಸಿ ತುಳಸಜ್ಜಿಗ್ಯಾಕೆ ಕಡೆಗಣಿಸಲಾಗುತ್ತಿದೆ ಎಂದು ಕೇಳಲಾಗುತ್ತಿದೆ.

ಇಷ್ಟೆಲ್ಲಾ ಚರ್ಚೆಗಳು ನಡೆದ ನಂತರ ನವೆಂಬರ್ 15ರ ಸಂಜೆ ತುಳಸಜ್ಜಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆದಿದೆ. ಇದು ಸಮಾಧಾನ ಸಂಗತಿಯಾದರೂ ಜಿಲ್ಲಾಡಳಿತ ತನ್ನ ಜವಾಬ್ದಾರಿಯನ್ನು ಮರೆಯಬಾರದು ಎಂಬುದು ಜನರ ಅಭಿಮತ.

ಇದನ್ನೂ ಓದಿ:  ವನದೇವತೆ ಹಾಲಕ್ಕಿ ಬುಡಕಟ್ಟಿನ ತುಳಸಜ್ಜಿ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...