Homeಅಂಕಣಗಳುನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

ನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

- Advertisement -
- Advertisement -

ಎಲೆಮರೆ- 14

`ಐದು ಎಕರೆ ಬಳ್ಳಿ ಶೇಂಗಾ ಹಾಕಿದ್ದೆ ಕಾಯಿ ಚಲೋ ಹಿಡದಾತಿ, ಬೇರೆಯವ್ರು ಸರಕಾರಿ ಗೊಬ್ಬರ ಹಾಕಿ, ಕಳೆನಾಶಕ ಸಿಂಪಡಿಸಿದ್ರು. ನಾನು ಸೆಗಣಿಗೊಬ್ಬರ ಹಾಕಿ ಕಳೆ ತಗಸಿದ್ದೆ. ಅದಕ್ಕ ನಲ್ವತ್ ಸಾವ್ರ ಖರ್ಚಾಗಿತ್ತು. ಇದನ್ನ ನೋಡಿ ಊರವರೆಲ್ಲ ನಕ್ಕಿದ್ರು. ಈತಗ ಹುಚ್ ಹಿಡದಿರಬೇಕು, ಎರಡು ಸಾವ್ರ ಕಳೆನಾಶಕ ಹೊಡದಿದ್ರ ಸಾಕಿತ್ತು ಅಂದಿದ್ರು. ನನ್ನ ಲೆಕ್ಕ ಹೆಂಗಂದ್ರ ಕಳೆ ತಗಿಯೋರು ಬದುಕಬೇಕು ನಾನು ಬದುಕಬೇಕು ಅನ್ನೋದು. ಸೆಗಣಿ ಹಾಕಿ, ಕಳೆ ತಗಸಿದ್ದಕ್ಕ ನೆಲ ಮಿದುವು ಆಗಿ ಕಾಯಿ ಬಾಳ ಹಿಡದಾತಿ. 60-70 ಚೀಲ ಆಗಬಹುದು. ಬೇರೆಯವ್ರದ್ದು ಸರಕಾರಿ ಗೊಬ್ಬರ, ಕಳೆನಾಶಕ ಬಳಸಿದ್ದಕ್ಕ ಮಳಿನೂ ಬಾಳ ಆಗಿ ನೆಲ ಬಿಗುವು ಆಗಿ ಕಾಯಿ ಹಿಡದಿಲ್ಲ. ಅಂತ ರೈತರೆಲ್ಲಾ ಈ ಸಲ ಲಾಸ್ ಆದ್ರು. ನೀರಾವರಿಗೆ ಒಂದೆಕರೆ ಬಾಳೆ ಹಾಕೀನಿ. ಒಬ್ಬಂಟಿಗರಾಗಿ ಬಾಳ ಹೊಲ ಮಾಡಕಾಗಲ್ಲ’ ಹೀಗೆ ತಣ್ಣಗೆ ನೆಲದ ಜತೆಗಿನ ಪಿಸುಮಾತುಗಳನ್ನು ಆಡುವ ಕವಿ ಚಂಸು ಪಾಟೀಲ.

ಚಂದ್ರಶೇಖರ ಸುಭಾಶಗೌಡ ಪಾಟೀಲ ಅಂದ್ರೆ ಯಾರೀತ, ಯಾವುದೋ ರಾಜಕಾರಣೀದೋ, ದೊಡ್ ಮನ್ಷನ ಹೆಸರಿದ್ದಂಗೈತಿ ಅಂತ ಅನ್ನಿಸುತ್ತದೆ. ಇದೇ ಹೆಸರನ್ನು ಸಂಕ್ಷಿಪ್ತಗೊಳಿಸಿ ಚಂಸು ಪಾಟೀಲ ಅಂದರೆ ಸಾಹಿತ್ಯ ವಲಯದ ಹೊಸ ತಲೆಮಾರನ್ನು ಸೂಕ್ಷ್ಮವಾಗಿ ಗಮನಿಸುವ ಕೆಲವರಿಗಾದರೂ, ಅದರಲ್ಲೂ ಪೇಸ್‍ಬುಕ್‍ನ್ನು ಆಕ್ಟಿವ್ ಆಗಿ ಬಳಸುವವರಿಗೆ ಈ ಹೆಸರಿನ ಜತೆ ರೈತಾಪಿ ಮುಖದ ಚಿತ್ರವೊಂದು ಕಣ್ಮುಂದೆ ಬರಬಹುದು. ನನಗೋ ಕಾಸ್ಟವೆ ಸಿನೆಮಾದ ಕೊನೆಯಲ್ಲಿ ರೂಪಾಂತರ ಹೊಂದಿದ ನಟ ಟಾಮ್ ಹ್ಯಾಂಕ್ಸ್ ತರವೂ, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹಾಗೆಯೂ ಚಂಸು ಕಾಣಿಸುತ್ತಾನೆ.

ನನಗೆ ಕಳೆದ ಒಂದೂವರೆ ದಶಕದಿಂದ ಚಂಸು ಪಾಟೀಲ ಪರಿಚಯ. ಆತ ಸಾದಾಸೀದಾ ಜವಾರಿ ಮನ್ಷ. ಒಮ್ಮೆ ಸೊಂಡೂರು ಭೂ ಹೋರಾಟ ಪುಸ್ತಕ ಬರೆಯುವಾಗ ದಾಖಲೆಗಳನ್ನು ಹುಡುಕಿಕೊಂಡು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಕಚೇರಿಗೆ ಹೋಗಿದ್ದೆ. ಆಗ ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಐವತ್ತು ದಾಟಿದ ತಲೆ ಬಿಳಿಯಾದ ಹಿರಿಯರೇ ತುಂಬಿರುವಾಗ ಕರಿಕೂದಲಿನ ಕಡ್ಡಿಯಂಥ ಹುಡುಗ ಒಂದು ಮೂಲೆಯ ಹಳೇ ಕಂಪ್ಯೂಟರಿನಲ್ಲಿ ಕಣ್ಣು ನೆಟ್ಟು ಕೂತಿದ್ದ. ನಾನು ನನ್ನ ಹೆಸರೇಳಿ ಪರಿಚಯಿಸಿಕೊಂಡೆ, `ಹೇಯ್ ಬರ್ರಿ ಅರುಣ್ ನೀವು ನಮಗ ಗೊತ್ತು ನಿಮ್ಮ ಬರಹ ಓದೇನಿ’ ಎಂದು ಸಹಜವಾದ ಪ್ರೀತಿ ತೋರಿದ್ದ’ ಈ ಹುಡುಗನೆ ಚಂಸು ಪಾಟೀಲ. ಬಹುಶಃ ನನಗೆ ನೆನಪಿರುವಂತೆ ಅದುವೆ ಮೊದಲ ಭೇಟಿ ಇರಬೇಕು.

2002 ರಲ್ಲಿ ಬೆಂಗಳೂರಿನ `ನೋಟ’ ವಾರಪತ್ರಿಕೆಯಲ್ಲಿಯೂ, 2003 ರಲ್ಲಿ ಗುಲ್ಬರ್ಗಾದ ಕ್ರಾಂತಿ ದೈನಿಕದಲ್ಲಿಯೂ, 2003 ರಿಂದ 2006 ರ ತನಕ ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಸಂಯುಕ್ತ ಕರ್ನಾಟಕದಲ್ಲಿಯೂ ಚಂಸು ಪತ್ರಕರ್ತನಾಗಿ ಕೆಲಸ ಮಾಡಿದ. ಈತನ ವ್ಯಕ್ತಿ ಸ್ವಭಾವಕ್ಕೆ ಈ ಪತ್ರಕರ್ತ ಹುದ್ದೆ ಉಸಿರುಕಟ್ಟಿಸಿತು, ಮನೆಯ ಘಟನೆಗಳೂ ಪತ್ರಕರ್ತನಾಗಿ ಮುಂದುವರಿಯಲು ತೊಡಕಾದವು. ಈ ಎಲ್ಲದರ ಕಾರಣ ಹುಟ್ಟೂರಿಗೆ ಬಂದು, ತಾನು ಓದಿದ್ದೆಲ್ಲವನ್ನೂ ಮರೆತು 2007 ರಿಂದ ಕಮ್ತಕ್ಕೆ ನಿಂತ. ಆರಂಭಕ್ಕೆ ರೈತಾಪಿ ಕೆಲಸ ಸುಲಭವೇನಾಗಿರಲಿಲ್ಲ. ಹೊಲವೇ ಕಡುಕಷ್ಟಗಳನ್ನೊಡ್ಡಿ ಚಂಸುವನ್ನು ಪರೀಕ್ಷಿಸಿತು. ಈ ಎಲ್ಲಾ ಕಷ್ಟಗಳಿಗೆ ಬಂಡೆಯಂತಾಗಿ ನೆಲದ ಜತೆಗಿನ ಸಾಂಗತ್ಯವನ್ನು ಮುಂದುವರಿಸಿದ. ಬರುಬರುತ್ತಾ ನೆಲ ಚಂಸುವನ್ನು ಕೈಹಿಡಿಯತೊಡಗಿತು. ಅಹರ್ನಿಶಿ ಮತ್ತು ನಾವುನಮ್ಮಲ್ಲಿ ಬಳಗ 2018 ರಲ್ಲಿ ಪ್ರಕಟಿಸಿದ `ಬೇಸಾಯದ ಕತಿ’ ಪುಸ್ತಕದಲ್ಲಿ ಈ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಚಂಸು ಕಟ್ಟಿಕೊಟ್ಟಿದ್ದಾರೆ. ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಬೇಕು ಅಂದುಕೊಂಡ ಯುವಜನತೆಗೆ ಇದೊಂದು ಅತ್ಯಂತ ಪ್ರಾಯೋಗಿಕ ಮಾರ್ಗದರ್ಶಿ. ಈ ಕೃತಿಯನ್ನು ಹಿರಿಯ ರೈತ ಹೋರಾಟಗಾರರಾದ ಶಾಮಣ್ಣನವರು ಅಕ್ಷತಾ ಅವರಿಂದ ಪುಸ್ತಕ ಪಡೆದು ರೈತ ಸಮಾವೇಶಗಳು ನಡೆವಲ್ಲಿ ಹೋಗಿ ಸ್ವತಃ ತಾವೇ ರೈತರಿಗೆ ಮಾರಾಟ ಮಾಡಿದ್ದಾರೆ. ಬಹುಶಃ ಈ ಕೃತಿಯ ಮಹತ್ವವನ್ನು ಇದಕ್ಕಿಂತ ಬೇರೆ ರೂಪದಲ್ಲಿ ಹೇಳಲಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ನಮ್ಮ ಗ್ರಾಮೀಣ ಕೃಷಿಕರು ಮಾಡುತ್ತಿದ್ದ ಸಹಜ ಸಾವಯವ ಬೇಸಾಯ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ. ಚಂಸು ಪಾಟೀಲರು ಮೂಲತಃ ಕವಿ. ಈ ತನಕ `ಗೆಳೆಯನಿಗೆ’ (1995), `ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು’ (2005) `ಅದಕ್ಕೇ ಇರಬೇಕು’ (2009) ಮೂರು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
2007 ರ ನಂತರ ಕಮ್ತಕ್ಕೆ ಬಂದಾಗಿನಿಂದ ನೆಲದ ಜತೆಗಿನ ಪಿಸುಮಾತುಗಳ ಆಲಿಸಿಕೊಂಡು ರೈತರ ಕಣ್ಣೋಟದಲ್ಲಿ ಕವಿತೆ ಬರೆಯಲು ತೊಡಗಿದ್ದಾರೆ. ಈ ಕವಿತೆಗಳು ಚಂಸು ಅವರ ಮೊದಲ ಕವಿತೆಗಳಿಗಿಂತ ತೀರಾ ಭಿನ್ನವಾಗಿವೆ. ಈ ನೆಲದ ನಿಜದ ರೈತನ ನಾಡಿಮಿಡಿತದಂತೆ ಈ ಕವಿತೆಗಳು ಮಾತನಾಡುತ್ತವೆ. ಚಂಸು ಅವರಿಗಿರುವ ವಿಶಿಷ್ಟತೆ ಏನೆಂದರೆ ತನ್ನ ಹಳ್ಳಿ ಕೂನುಬೇವಿನ ಹೊಲದಲ್ಲಿ ಉಳುಮೆ ಮಾಡಿಕೊಂಡೇ ಪೇಸ್‍ಬುಕ್ ಮತ್ತು ಅಂತರ್ಜಾಲದಲ್ಲಿ ಲೋಕದ ವಿದ್ಯಮಾನಗಳನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲ ಇದಕ್ಕೆಲ್ಲಾ ಪ್ರಖರವಾದ ವ್ಯಂಗ್ಯ ವಿಷಾದ ಸಿಟ್ಟು ತಣ್ಣನೆಯ ಪ್ರತಿರೋಧದ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಈ ಪ್ರತಿಕ್ರಿಯೆಯನ್ನು ದಾಟಿಸಲು ಚಂಸು ಕವಿತೆಯನ್ನು ಮಾಧ್ಯಮವನ್ನಾಗಿಸಿಕೊಂಡಿದ್ದಾರೆ.

ಟಿ.ಕೆ.ತ್ಯಾಗರಾಜ್ ಅವರು ಸಂಪಾದಕರಾಗಿರುವ `ದ ಡೆಕ್ಕನ್ ನ್ಯೂಸ್’ ಅಂತರ್ಜಾಲ ಪತ್ರಿಕೆಯಲ್ಲಿ ಚಂಸು `ಭಪ್ಪರೇ ಶವ್ವಾ’ ಎನ್ನುವ ಅಂಕಣ ಬರೆಯುತ್ತಾರೆ. ಬಯಲಾಟ ದೊಡ್ಡಾಟದಲ್ಲಿ ಪರಸ್ಪರ ಹೊಗಳುವ ಸಂದರ್ಭದಲ್ಲಿ ಅಲೆಲೆಲೆ ಭಪ್ಪರೇ ಶವ್ವಾ..! ಎನ್ನುವ ನುಡಿಗಟ್ಟನ್ನು ಬಳಸುತ್ತಾರೆ. ಹಾಗಾಗಿಯೇ ಚಂಸು ಸಾಮಾನ್ಯ ಜನರ ಬದುಕಿನ ಅಪರೂಪದ ಘಟನೆಗಳ ಕುರಿತು ಬರೆಯಲು `ಭಪ್ಪರೇ ಶವ್ವಾ..!’ ಎಂದು ಹೆಸರುಕೊಟ್ಟುಕೊಂಡಿದ್ದಾರೆ.

ಈ ಅಂಕಣವು ಲಘು ಹಾಸ್ಯಮಿಶ್ರಿತ ವ್ಯಂಗ್ಯ ನೋವು ಸಂಕಟ ಎಲ್ಲವನ್ನೂ ಬೆರೆಸಿದಂತಿದೆ. ಹೊಸ ತಲೆಮಾರು ಬರೆವ ಬರಹದಲ್ಲಿ ಇದು ವಿಶಿಷ್ಟವಾಗಿದೆ. ಗ್ರಾಮೀಣ ಚಿತ್ರಕಲಾವಿದ ಮುರಿಗೆಜ್ಜಪ್ಪ, ಅಪ್ಪಣ್ಣ, ಉಪ್ಪಾರ ಗುಡ್ಡಪ್ಪ, ಬಯಲಾಟದ ಅನುಭವ, ಶಿಶುನಾಳ ಶರೀಫರ ಹಾಡುಗಳು ನೆಲೆಗೊಂಡ ಬಗೆ, ರಂಗಭೂಮಿಯ ನಂಟು ಭಜನೆಯ ಒಡನಾಟ ಹೀಗೆ ಹಾವೇರಿ, ರಾಣೇಬೆನ್ನೂರು ಭಾಗದ ಸಾಂಸ್ಕøತಿಕ ಗುರುತುಗಳನ್ನು ಬೆರೆಸಿ ಅಲ್ಲಿಯದ್ದೇ ಆದ ಉಪಭಾಷೆಯ ನುಡಿಗಟ್ಟನ್ನು ಬಳಸಿ ವಿಶಿಷ್ಟ ಸಂಕಥನದಂತೆ ಈ ಅಂಕಣ ಬರೆಯುತ್ತಿದ್ದಾರೆ.

`ಪ್ರತಿದಿನವೂ/ವಲಸೆ ಬರುವ/ ಸೂರ್ಯ ಚಂದ್ರರಿಗೆ/ ಸಿಕ್ಕಬಹುದೇ? ಪೌರತ್ವದ ಕೊಡುಗೆ ! ಆದರೂ ನಿತ್ಯ/ ಈ ಅತಿಕ್ರಮಣವನ್ನು ಸಹಿಸುವುದು ಹೇಗೆ?/ ಕೊರಳುಪಟ್ಟಿ/ ಹಿಡಿದು ದಬ್ಬಿರವರನು/ಹೊರಗೆ’ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹೀಗೆ ಕವಿತೆ ಬರೆವ ಚಂಸು, ಸಾಸಿವೆ ಕಾಳಿನಷ್ಟು ಬರೆದು ಬೆಟ್ಟದಷ್ಟು ಪ್ರಚಾರ ಬಯಸುವ ಈ ಕಾಲದ ಹೊಸತಲೆಮಾರಿನ ಕವಯಿತ್ರಿ ಕವಿಗಳಿಗಿಂತ ನೂರುಪಾಲು ಎತ್ತರದಲ್ಲಿದ್ದಾರೆ. ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾಯಕದಲ್ಲಿ ತೊಡಗಿ ಬೇಸಾಯದ ಕತಿ ಹೇಳುವ ಚಂಸುಗೆ ಒಳಿತಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...