Homeಮುಖಪುಟವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ನಡುವಿನ ಕಂದರವನ್ನು ಮೀರಿದ ಪ್ರೊ. ರೊದ್ದಂ ನರಸಿಂಹ

ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ನಡುವಿನ ಕಂದರವನ್ನು ಮೀರಿದ ಪ್ರೊ. ರೊದ್ದಂ ನರಸಿಂಹ

ಪ್ರೊ ನರಸಿಂಹ ಅವರು ತಮ್ಮ ವ್ಯಕ್ತಿತ್ವವನ್ನು ನೆಲದ ಬೇರುಗಳ ಜೊತೆಗೆ ಉಳಸಿಕೊಂಡಿದ್ದರಿಂದ, ಪ್ರಾಚೀನ ಭಾರತೀಯ ವಿಜ್ಞಾನದ ಸಾಧನೆಗಳ ನೈಜವಾದ ಪ್ರತಿಪಾದನೆಗಳು ಮತ್ತು ಅತಿರಂಜಿತ ಪ್ರತಿಪಾದನೆಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಕಂಡುಹಿಡಿಯಬಲ್ಲವರಾಗಿದ್ದರು.

- Advertisement -
- Advertisement -
ನುಡಿನಮನ

ರೊದ್ದಂ ನರಸಿಂ

(20 ಜುಲೈ 1933, – 14 ಡಿಸೆಂಬರ್ 2020)

ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ನಡುವೆ ಇರುವ ಕಂದರವನ್ನು ಮೀರಲು ಕೆಲವೇ ವಿಜ್ಞಾನಿಗಳಿಗೆ ಸಾಧ್ಯ. ಅಂತಹವರಲ್ಲಿ ಪ್ರೊ ರೊದ್ದಂ ನರಸಿಂಹ ಒಬ್ಬರು. ಫ್ಲುಯಿಡ್ ಡೈನಾಮಿಕ್ಸ್‌ನ ವಿಜ್ಞಾನದಲ್ಲಿ ಮುಂಚೂಣಿಯ ಹೆಸರಾಗಿದ್ದ ನರಸಿಂಹ ಅವರಿಗೆ ಮಾನವಿಕ ಶಾಸ್ತ್ರದಲ್ಲಿ ಆಳವಾದ ಆಸಕ್ತಿ ಇತ್ತು. ಆದೇ ಆಸಕ್ತಿ ಅವರನ್ನು ವಿಜ್ಞಾನದ ತತ್ವಶಾಸ್ತ್ರದ ಕಡೆಗೆ ಕೊಂಡೊಯ್ಯಿತು. ವಿಜ್ಞಾನಕ್ಕೆ ವಿವಿಧ ಪರಂಪರೆಗಳಲ್ಲಿ ಇರುವ ವಿಭಿನ್ನ ದೃಷ್ಟಿಕೋನಗಳ ಬಗ್ಗೆ ಅವರು ವಿಶೇಷವಾಗಿ ಆಕರ್ಷಿತರಾಗಿದ್ದರು. ಅವರು ಎಲ್ಲರೊಂದಿಗೆ ಸುಲಭವಾಗಿ ಬೆರೆಯಬಲ್ಲವರಾಗಿದ್ದರು ಹಾಗೂ ಅತ್ಯಂತ ಕ್ಲಿಷ್ಟಕರವಾದ ವಿಷಯಗಳ ಸಾರವನ್ನು ಸರಳವಾದ ಪದಗಳಲ್ಲಿ ಹೇಳಿಕೊಡಬಲ್ಲ ವಿಶಿಷ್ಟ ಸಾಮರ್ಥ್ಯ ಉಳ್ಳವರಾಗಿದ್ದರು. ಅದರಿಂದ, ಅವರೊಂದಿಗೆ ಮಾಡಿದ ಸಹಜ ಮಾತುಕತೆಗಳೂ ಸಹ ವಿಶಿಷ್ಟ ಒಳನೋಟಗಳನ್ನು ಒದಗಿಸುತ್ತಿದ್ದವು. ಕೆಲವೇ ತಿಂಗಳುಗಳ ಹಿಂದೆ ರಸ್ತೆ ಬದಿಯಲ್ಲಿ ನಿಂತು ಮಾಡಿದ ಮಾತುಕತೆಯಲ್ಲಿ ತಿಳಿದಿದ್ದೇನೆಂದರೆ, ಭಾರತದಲ್ಲಿ ಶಿಕ್ಷೆಯ ರೂಪದಲ್ಲಿ ವ್ಯಕ್ತಿಗಳ ಮೂಗನ್ನು ಕತ್ತರಿಸಲಾಗುತ್ತಿತ್ತಂತೆ ಮತ್ತು ಮೂಗು ಕತ್ತರಿಸುವ ಪಾರಂಪರಿಕ ಭಾರತೀಯ ವಿಧಾನವು ಪ್ಲಾಸ್ಟಿಕ್ ಸರ್ಜರಿಯ ಪಾರಂಪರಿಕ ವಿಧಾನದ ಬೆಳವಣಿಗೆಗೆ ಕೊಡುಗೆ ನೀಡಿದ್ದನ್ನು ಹೇಳಿದ್ದರು. ಮೂಗು ಕತ್ತರಿಸಿಕೊಂಡ ವ್ಯಕ್ತಿಗಳನ್ನು ಒಂದು ವರ್ಷದ ಬಳಿಕ ನೋಡಿದಾಗ ಮೂಗು ಅದೇ ಸ್ಥಾನಕ್ಕೆ ಮರಳಿ ಬಂದಿದ್ದನ್ನು ನೋಡಿ ಬ್ರಿಟಿಷರು ಆಶ್ಚರ್ಯಚಕಿತರಾಗಿದ್ದರು ಎಂಬುದರ ಬಗ್ಗೆಯೂ ಹೇಳಿದ್ದರು.

ಪ್ರೊ ನರಸಿಂಹ ಅವರು ತಮ್ಮ ವ್ಯಕ್ತಿತ್ವವನ್ನು ನೆಲದ ಬೇರುಗಳ ಜೊತೆಗೆ ಉಳಸಿಕೊಂಡಿದ್ದರಿಂದ, ಪ್ರಾಚೀನ ಭಾರತೀಯ ವಿಜ್ಞಾನದ ಸಾಧನೆಗಳ ನೈಜವಾದ ಪ್ರತಿಪಾದನೆಗಳು ಮತ್ತು ಅತಿರಂಜಿತ ಪ್ರತಿಪಾದನೆಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಕಂಡುಹಿಡಿಯಬಲ್ಲವರಾಗಿದ್ದರು. ಅವರು ಪ್ರಾಚೀನ ಭಾರತದ ನಿರ್ದಿಷ್ಟ ಪಠ್ಯಗಳನ್ನು ಉಲ್ಲೇಖಿಸಬಲ್ಲವರಾಗಿದ್ದರು; ಉದಾಹರಣೆಗೆ ಕ್ರಿ,ಪೂ ಆರನೇ ಶತಮಾನದ ಸುಲ್ವ ಸೂತ್ರ: ಅದು ಉದ್ದದ ವರ್ಗ (ಸ್ಕ್ವೇರ್ ಆಫ್ ಲೆಂತ್) ಹಾಗೂ ಅಗಲದ ವರ್ಗದ (ಸ್ಕ್ವೇರ್ ಆಫ್ ಬ್ರೆಡ್ತ್) ಮೊತ್ತವು ಕರ್ಣರೇಖೆಯ ವರ್ಗಕ್ಕೆ (ಸ್ಕ್ವೇರ್ ಆಫ್ ಡಯಾಗನಲ್) ಸಮನಾಗಿರುತ್ತೆ ಎಂಬುದರ ಸಾರ, ಮುಂದೆ ಪೈಥಾಗರಸ್ ಥಿಯೋರಮ್ ಆಗಿ ವರ್ಣಿಸಲಾಯಿತು ಎಂದು ವಿವರಿಸಿದ್ದರು. ಅದೇ ಸಮಯದಲ್ಲಿ, ಪ್ರಾಚೀನ ಭಾರತೀಯ ವಿಜ್ಞಾನದ ವೈಭವ-ಆಡಂಬರದ ಕಲ್ಪನೆಗಳು ಒಬ್ಬ ವಿಜ್ಞಾನಿಯಾಗಿ ಅವರ ಕೆಲಸದ ಮೇಲೆ ಪ್ರಭಾವ ಬೀರುವ ಪ್ರಶ್ನೆ ಎಂದೂ ಬರಲಿಲ್ಲ, ಅದರಲ್ಲೂ ವಿಶೇಷವಾಗಿ, ಎನ್‌ಎಎಲ್‌ನಲ್ಲಿ ಲೈಟ್ ಕೊಂಬ್ಯಾಟ್ ಏರ್‌ಕ್ರಾಫ್ಟ್‌ನ ರಚನೆಯಲ್ಲಿ ಅವರ ಒಂದು ಪಾತ್ರವಿತ್ತು, ಅಲ್ಲಿಯೂ ಪ್ರಾಚೀನ ಕಲ್ಪನೆಗಳು ಪ್ರಭಾವ ಬೀರಲಿಲ್ಲ.

ವಿಜ್ಞಾನ ಮತ್ತು ವಿಜ್ಞಾನದ ಆಡಳಿತದಲ್ಲಿ ಅವರ ಸಾಧನೆಗಳಿಗಿಂತ, ಸಮಾಜದ ಎಲ್ಲಾ ಸ್ತರದ ಜನರೊಂದಿಗೆ ಬೆರೆದು, ಅವರು ವಿದ್ಯಾರ್ಥಿಗಳಾಗಿರಲಿ, ಜೊತೆಗೆ ಕೆಲಸ ಮಾಡುವವರಾಗಿರಲಿ, ದೊಡ್ಡ ಸಾಧನೆ ಮಾಡಿದ ವಿಜ್ಞಾನಿಗಳಾಗಿರಲಿ ಅಥವಾ ಯಾವುದೇ ಪರಿಚಯಸ್ಥರಾಗಿರಲಿ, ಅವರೆಲ್ಲರ ಜೊತೆಗೆ ವಿಜ್ಞಾನದ ಬಗ್ಗೆ ಮಾತನಾಡುವ ಅವರ ಸಾಮರ್ಥ್ಯದಿಂದಲೇ ಅವರನ್ನು ನೆನಪಿಸಿಕೊಳ್ಳಲಾಗುವುದು. ಇದನ್ನು ಮಾಡಲು ಸಾಧ್ಯವಾಗಿದ್ದು ಕೇವಲ ವಿಜ್ಞಾನದ ಮೇಲಿದ್ದ ಪಾಂಡಿತ್ಯದಿಂದ ಅಲ್ಲ, ಅದಕ್ಕಿಂತ ಮುಖ್ಯವಾಗಿ, ಕಲಿಯಲು ಮತ್ತು ಕಲಿಸಲು ಅವರಿಗೆ ಜೀವನದುದ್ದಕ್ಕೂ ಇದ್ದ ಬದ್ಧತೆಯ ಕಾರಣದಿಂದ.

ಪ್ರೊ. ನರೇಂದ್ರ ಪಾಣಿ
ಬೆಂಗಳೂರಿನ ಎನ್‌ಐಎಎಸ್ ಸಂಸ್ಥೆಯ ಸಮಾಜ ಶಾಸ್ತ್ರ ವಿಭಾಗದ ಡೀನ್


ಇದನ್ನೂ ಓದಿ: ಹೆಸರಾಂತ ಹಿರಿಯ ವಿಜ್ಞಾನಿ ಪ್ರೊ.ರೊದ್ದಾಂ ನರಸಿಂಹ ನಿಧನ: ಗಣ್ಯರ ಸಂತಾಪ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...