Homeಅಂಕಣಗಳುರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್

ರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್

“ನಿನ್ನ ಕೈಗಳಲ್ಲಿ ದುಡಿದು ಸಂಪಾದಿಸಿದ ಆಹಾರವಾಗಿದೆ ಶ್ರೇಷ್ಠ ಆಹಾರ. ನೀನು ಸಂಪಾದಿಸುವ ಪ್ರತಿ ಸಂಪಾದನೆಯಲ್ಲೂ ನಿನ್ನ ಪರಿಶ್ರಮವಿರಬೇಕು” ಎಂದು ಎಚ್ಚರಿಸುತ್ತದೆ ಇಸ್ಲಾಂ.

- Advertisement -
- Advertisement -

ಪ್ರವಾದಿ ಮುಹಮ್ಮದ್(ಸ. ಅ)ರನ್ನು ಅರಿಯದವರು ಅವರಿಗೆ ಕೇವಲ ಧರ್ಮ ಪ್ರಬೋಧಕರೆಂಬ ಚೌಕಟ್ಟನ್ನು ಹಾಕಿಬಿಡುತ್ತಾರೆ. ಜೊತೆಗೆ ಪೂರ್ವಾಗ್ರಹಗಳನ್ನಿಟ್ಟುಕೊಂಡು ಇಸ್ಲಾಮನ್ನು ದ್ವೇಷಿಸುತ್ತಾರೆ. ಆದರೆ ಇತಿಹಾಸದ ಸರಿಯಾದ ತಿಳಿವು ಮಾತ್ರ ಈ ಪೂರ್ವಾಗ್ರಹಗಳನ್ನು ದೂರ ಮಾಡಬಲ್ಲದು.

ಮುಹಮ್ಮದ್ ಪೈಗಂಬರರದು (ಸ) ಬಹುಮುಖ ಆಯಾಮಗಳುಳ್ಳ ವ್ಯಕ್ತಿತ್ವ. ಧರ್ಮ ಪ್ರಬೋಧಕರಾಗಿ, ಮಾನವತಾವಾದಿಯಾಗಿ, ಸಮಾನತೆಯ ಹರಿಕಾರನಾಗಿ, ಮಾನವ ಹಕ್ಕುಗಳ ಪ್ರತಿಪಾದಕನಾಗಿ, ಸ್ತ್ರೀ ವಿಮೋಚಕನಾಗಿ, ಅತ್ಯುತ್ತಮ ಶಿಕ್ಷಕನಾಗಿ, ಪರಿಸರವಾದಿಯಾಗಿ – ಹೀಗೆ ಅವರ ವ್ಯಕ್ತಿತ್ವದ ಹರವು ವಿಸ್ತಾರಗೊಳ್ಳುತ್ತಲೇ ಹೋಗುತ್ತದೆ. ತಮ್ಮ ಬೋಧನೆಗಳನ್ನು ಪ್ರಾಯೋಗಿಕವಾಗಿ ಸ್ವತಃ ಜೀವನದಲ್ಲಿ ಅಳವಡಿಸಿಕೊಂಡು ಬದುಕುವುದರ ಮೂಲಕ ಇಡೀ ಮನುಕುಲಕ್ಕೆ ಮಾದರೀಯೋಗ್ಯರಾದರು. ಪ್ರಸಿದ್ಧ ಆಂಗ್ಲ ಸಾಹಿತಿ ಮೈಕಲ್.ಎಚ್.ಹರ್ಟ್ ತನ್ನ ಪ್ರಸಿದ್ಧ ಕೃತಿಯಾದ ‘ದಿ ಹಂಡ್ರೆಡ್ಸ್’ನಲ್ಲಿ ಪ್ರವಾದಿ ಮುಹಮ್ಮದರಿಗೆ ಪ್ರಥಮ ಸ್ಥಾನವನ್ನು ನೀಡಿದರು. ಅವರು ಅದಕ್ಕೆ ನೀಡಿದ ಕಾರಣ “ಜಗತ್ತಿನ ಇತಿಹಾಸದಲ್ಲಿ ಮಾನವಕುಲವನ್ನು ಅವರಂತೆ ಪ್ರಭಾವಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ. ಬಹುತೇಕರು ಅವರನ್ನೋರ್ವ ಧರ್ಮ ಪ್ರಬೋಧಕರಾಗಿ ಮಾತ್ರ ಗುರುತಿಸುತ್ತಾರೆ. ವಾಸ್ತವದಲ್ಲಿ ಅವರ ವ್ಯಕ್ತಿತ್ವವನ್ನು ಕೇವಲ ಧಾರ್ಮಿಕ ಆಯಾಮದಡಿ ಹಿಡಿದಿಡಲು ಸಾಧ್ಯವಿಲ್ಲ” ಎಂಬುದಾಗಿತ್ತು.

ನಾನಿಲ್ಲಿ ಪೈಗಂಬರರ ಪರಿಸರ ಮತ್ತು ಕೃಷಿ ನೀತಿಯ ಬಗ್ಗೆ ಕ್ಷ-ಕಿರಣ ಬೀರುವ ಪುಟ್ಟ ಪ್ರಯತ್ನ ಮಾಡುತ್ತೇನೆ.

ಮೊನ್ನೆ ನನ್ನ ಪುಟ್ಟ ಮಗಳು ಕೋಲೊಂದರಿಂದ ಮನೆಯಂಗಳದ ದಾಸವಾಳ ಗಿಡಕ್ಕೆ ಬಡಿಯುತ್ತಾ ಎಲೆಗಳನ್ನು ಉದುರಿಸುತ್ತಿದ್ದಳು. ಹಾಗೆಲ್ಲಾ ಗಿಡಮರಗಳಿಗೆ ತೊಂದರೆ ಕೊಡಬಾರದು ನಮ್ಮಂತೆಯೇ ಅವುಗಳಿಗೂ ಜೀವವಿದೆ, ನೋವಾಗುತ್ತದೆ ಎಂದೆ. ಅಷ್ಟು ಹೇಳಿದ್ದೇ ತಡ, ಸಿಕ್ಕಸಿಕ್ಕ ವಸ್ತುಗಳಿಗೆಲ್ಲಾ ಬಡಿಯುತ್ತಾ ಇದಕ್ಕೆ ಜೀವವಿದೆಯೇ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳತೊಡಗಿದಳು. ಕಿರಿಕಿರಿಯೆನಿಸಿದರೂ ಅವಳಿಗೆ ಜೀವಿಗಳು ಮತ್ತು ನಿರ್ಜೀವಿಗಳ ನಡುವಿನ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಟ್ಟೆ. ಆ ಕೂಡಲೇ ಪಾಪ ಎಂದು ಗಿಡವನ್ನು ಅಪ್ಪಿಕೊಳ್ಳುತ್ತಾ ಇದೆಲ್ಲಾ ನಿನ್ನ ಅಮ್ಮ ನಿನಗೆ ಕಲಿಸಿದ್ದಾ ಎಂದು ಕೇಳಿದಳು. ಇದನ್ನು ಪ್ರತಿಪಾದಿಸಿ ಸಾರಿದವರು ಮುಹಮ್ಮದ್ ಪೈಗಂಬರರು(ಸ) ಎಂದೆ. ಒಮ್ಮೆ ಮುಹಮ್ಮದರು(ಸ) ಅನುಯಾಯಿಗಳ ಜೊತೆ ಮಸೀದಿಗೆ ಹೋಗುತ್ತಿದ್ದಾಗ ಅವರಲ್ಲೊಬ್ಬರು ಅಲ್ಲೇ ಪಕ್ಕದಲ್ಲಿದ್ದ ಗಿಡವೊಂದರಿಂದ ಎಲೆಗಳನ್ನು ಕಿತ್ತರು. ಇದನ್ನು ಗಮನಿಸಿದ ಪೈಗಂಬರರು, “ಇದೇನು ಮಾಡುತ್ತಿರುವಿರಿ? ವಿನಾಕಾರಣ ಎಲೆಗಳನ್ನು ಕೀಳದಿರಿ, ಅವುಗಳಿಗೂ ಜೀವವಿದೆ” ಎಂದಿದ್ದರು ಎಂದು ಅವಳದೇ ಭಾಷೆಯಲ್ಲಿ ವಿವರಿಸಿದೆ.

ಕೃಷಿಯು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ನಿಮ್ಮೊಂದಿಗೆ ನಂಬಿಕೆಯಿಂದ ಜೋಪಾನವಾಗಿ ನೋಡಿಕೊಳ್ಳುವಂತೆ ನೀಡಿದ ಸ್ವತ್ತಾಗಿದೆ ಪರಿಸರ ಎಂದು ಇಸ್ಲಾಂ ಸಾರುತ್ತದೆ. ಇಸ್ಲಾಂ ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿ ಅದನ್ನೊಂದು ಪುಣ್ಯ ಕರ್ಮವೆಂದು ಪರಿಗಣಿಸಿದೆ.

ನಾಳೆ ಲೋಕಾವಸಾನವಾಗುವುದೆಂದು ಖಾತರಿಯಿದ್ದರೂ ನಿನ್ನ ಬಳಿ ಗಿಡವೊಂದಿದ್ದರೆ ಅದನ್ನು ನೆಟ್ಟುಬಿಡು ಎಂದಿದ್ದಾರೆ ಪ್ರವಾದಿ ಮುಹಮ್ಮದ್(ಸ.ಅ). ಪ್ರಕೃತಿಯ ಮೇಲೆ ನಮಗಿರುವ ಜವಾಬ್ದಾರಿಯೇನೆಂಬುದು ಇದರಿಂದ ಮನದಟ್ಟಾಗುತ್ತದೆ.

ಮನುಷ್ಯನಂತೆಯೇ ಇತರ ಜೀವಿಗಳಿಗೂ ಈ ಪ್ರಕೃತಿಯ ಮೇಲೆ ಸಮಪಾಲಿನ ಹಕ್ಕಿದೆ ಎಂಬ ಪ್ರಜ್ಞೆಯನ್ನು ಹುಟ್ಟುಹಾಕಿದ ಅವರು “ಯಾರಾದರೂ ಒಂದು ಗಿಡ ನೆಟ್ಟರೆ/ಬೇಸಾಯ ಮಾಡಿದರೆ ಅದು ಮರವಾಗಿ ಬೆಳೆದು ಫಸಲು ನೀಡಲಾರಂಭಿಸಿದಾಗ, ಪಕ್ಷಿಗಳು, ಪ್ರಾಣಿಗಳು, ಮನುಷ್ಯರು ಅದರಲ್ಲಿನ ಫಲಗಳನ್ನು ತಿಂದರೆ ಅಥವಾ ಆ ಮರವನ್ನು ನೆರಳಿಗೋ, ಆವಾಸಕ್ಕಾಗಿಯೋ ಆಶ್ರಯಿಸಿದರೆ ದಾನದ ಪ್ರತಿಫಲವು ನೆಟ್ಟವನಿಗೆ ಲಭಿಸುವುದು” ಎನ್ನುವ ಮೂಲಕ ಹಸಿರು ಪರಿಸರವನ್ನು ಬೆಳೆಸಲು ಉತ್ತೇಜಿಸಿದರು.

ಯುದ್ಧದ ಸಂದರ್ಭದಲ್ಲಿಯೂ ಅಶಕ್ತರಿಗೆ, ವೃದ್ಧರಿಗೆ, ಸ್ತ್ರೀಯರಿಗೆ, ಮಕ್ಕಳಿಗೆ, ಮರಗಿಡಗಳಿಗೆ ಹಾಗೂ ಬೆಳೆಗಳಿಗೆ ಹಾನಿ ಮಾಡಬಾರದೆಂದು ಆಜ್ಞಾಪಿಸಿದ ಅವರ ಪರಿಸರದ ಬಗೆಗಿನ ಕಾಳಜಿ ಸರ್ವಕಾಲಕ್ಕೂ ಅನುಕರಣಾಯೋಗ್ಯವಾದುದು.

ಯಾರಲ್ಲಾದರೂ ಜಮೀನಿದ್ದರೆ ಅದನ್ನು ಕೃಷಿಗಾಗಿ ಬಳಸಬೇಕೆಂದೂ, ಒಂದು ವೇಳೆ ಉಳುಮೆ ಮಾಡುವುದಿಲ್ಲವೆಂದಾದರೆ ಯಾರಾದರೂ ಬೇಸಾಯ ಮಾಡುವವನಿಗೆ ಕೊಡಬೇಕು, ಕೃಷಿ ಭೂಮಿಯನ್ನು ಭೋಗಿಸಲು ಉಳುವ ಕೈಗಳಿಗಿಂತ ಮಿಗಿಲಾದ ಅರ್ಹ ಇನ್ನೊಬ್ಬನಿಲ್ಲ ಎಂಬುದು ಅವರ ಉಪದೇಶವಾಗಿತ್ತು. ಇಲ್ಲಿ ವಿ(ಶೇ)ಷ ಆರ್ಥಿಕ ವಲಯದ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಆಳುವ ವರ್ಗವೇ ಧಾರೆಯೆರೆದು ಕೊಡುತ್ತಿದೆ. ಕೃಷಿ ಭೂಮಿಯ ನಾಶದಿಂದಾಗಿ ಕೃಷಿ ಉತ್ಪಾದನೆಯು ಕಡಿಮೆಯಾಗಿ ಬೆಲೆಯೇರಿಕೆಗೆ ಕಾರಣವಾಗುತ್ತಿದೆ. ಆಧುನಿಕ ಕೈಗಾರಿಕೆಗಳು, ಕಾಂಕ್ರೀಟು ಕಾಡುಗಳು ದುಡ್ಡಿನ ಗುಡ್ಡೆಗಳನ್ನು ನೀಡಬಹುದೇ ಹೊರತು ಹಸಿವು ಇಂಗಿಸಲಾರದು.

ರೈತ ಮತ್ತು ಮಾರುಕಟ್ಟೆಯ ನಡುವೆ ದಲ್ಲಾಳಿಯ ಮಧ್ಯಸ್ಥಿಕೆಯನ್ನು ಪ್ರವಾದಿವರ್ಯರು ವಿರೋಧಿಸಿದ್ದರು. ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕಾದುದು ಅವನ ಹಕ್ಕಾಗಿರುತ್ತದೆ. ನಾವು ನಮ್ಮ ರಾಜ್ಯದಲ್ಲೇ ಪ್ರತೀ ವರ್ಷ ಟೊಮ್ಯಾಟೊ ಬೆಳೆಗಾರರು ಸೂಕ್ತ ಬೆಲೆ ಸಿಗದೇ ರಸ್ತೆಗೆ ಸುರಿಯುವ ದೃಶ್ಯವನ್ನು ನೋಡುತ್ತಿರುತ್ತೇವೆ. ಟೊಮ್ಯಾಟೊ ಬೆಳೆಯದ ಊರಲ್ಲಿ ಅಂತಹ ಕಾಲದಲ್ಲೂ ಬಳಕೆದಾರ ಅದಕ್ಕೆ ದುಬಾರಿ ಬೆಲೆಯನ್ನೇ ಪಾವತಿಸುತ್ತಾನೆ. ಇಲ್ಲಿ ಬೆಳೆದ ರೈತ ದಿವಾಳಿಯಾದರೆ ಮಧ್ಯವರ್ತಿ ಕೊಬ್ಬುತ್ತಾನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಕಾಲದಲ್ಲಿ ಅತಿಹೆಚ್ಚು ಬೇಡಿಕೆಯಿದ್ದ ಫಲ ಕಲ್ಲಂಗಡಿ ಹಣ್ಣು. ಈ ಹಣ್ಣಿಗೆ ಅಷ್ಟು ಬೇಡಿಕೆ ಮಂಗಳೂರು ಮಾರುಕಟ್ಟೆಯಲ್ಲಿದ್ದಾಗ್ಯೂ ಕಲ್ಲಂಗಡಿ ಬೆಳೆಗಾರನಿಗೆ ಜುಜುಬಿ ಬೆಲೆ ಕೊಟ್ಟು ಖರೀದಿಸಲಾಗುತ್ತಿದ್ದುದು ಬಹಿರಂಗ ಸತ್ಯ. ಇಲ್ಲಿಯೂ ಬೆಳೆದ ಕೈಗಳನ್ನು ವಂಚಿಸಿ ದಲ್ಲಾಳಿ ಕೊಬ್ಬಿದ್ದ.

“ನಿನ್ನ ಕೈಗಳಲ್ಲಿ ದುಡಿದು ಸಂಪಾದಿಸಿದ ಆಹಾರವಾಗಿದೆ ಶ್ರೇಷ್ಠ ಆಹಾರ. ನೀನು ಸಂಪಾದಿಸುವ ಪ್ರತಿ ಸಂಪಾದನೆಯಲ್ಲೂ ನಿನ್ನ ಪರಿಶ್ರಮವಿರಬೇಕು” ಎಂದು ಎಚ್ಚರಿಸುತ್ತದೆ ಇಸ್ಲಾಂ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕದ ಬೆಲೆಯೇರಿಕೆ, ಪ್ರಾಕೃತಿಕ ವಿಕೋಪ ಇವೆಲ್ಲದರ ಸುಳಿಯಲ್ಲಿ ಸಿಕ್ಕು ಯಾತನೆ ಅನುಭವಿಸುತ್ತಿರುವ ರೈತರಿಗೆ ದಲ್ಲಾಳಿಗಳ ಹಾವಳಿಯೂ ತಪ್ಪಿದ್ದಲ್ಲ. ಬೆವರು, ರಕ್ತ ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ದಲ್ಲಾಳಿಗಳು ಯಾವುದೇ ಪರಿಶ್ರಮ, ತ್ರಾಸವಿಲ್ಲದೇ ರೈತನ ಅಹವಾಲಿಗೆ ಬೆಲೆ ಕೊಡದೇ ತಾವಾಗಿಯೇ ನಿಗದಿಪಡಿಸಿದ ಬೆಲೆಗೆ ಕೊಂಡುಕೊಳ್ಳುತ್ತಾರೆ. ಒಂದರ್ಥದಲ್ಲಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳೇ ಏಕಸ್ವಾಮ್ಯ ಮೆರೆಯುತ್ತಾರೆ.

ತರಕಾರಿ ಹಣ್ಣು- ಹಂಪಲುಗಳನ್ನು ಇಂದಲ್ಲ ನಾಳೆ ಬೆಲೆ ಹೆಚ್ಚಾಗಬಹುದೆಂದು ಶೇಖರಿಸಿಡಲಾಗದು. ಇಲ್ಲಿ ಬೆಳೆಗಾರರ ಅಸಹಾಯಕತೆಯ ಲಾಭ ಪಡೆದು ಆಧುನಿಕ ಬಂಡವಾಳಶಾಹಿತ್ವವು ಅವರನ್ನು ವಂಚಿಸುತ್ತದೆ. ಈ ರೀತಿಯ ವ್ಯವಹಾರವು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ. ಕ್ಷಾಮಕಾಲದಲ್ಲಿ ಕೃತಕ ಅಭಾವ ಸೃಷ್ಟಿಸಿ ಬೆಲೆಯೇರಿಸುವುದನ್ನೂ ಪ್ರವಾದಿವರ್ಯರು ಕಟುವಾಗಿ ವಿರೋಧಿಸಿದ್ದಾರೆ.

ನೈಸರ್ಗಿಕ ಸಂಪನ್ಮೂಲಗಳಾದ ನೀರು, ಮಣ್ಣು, ಉಪ್ಪು ಇವುಗಳನ್ನು ಯಾರೇ ಕೇಳಿದರೂ ನಿರಾಕರಿಸಬಾರದು ಎಂದು ಪ್ರವಾದಿಯವರು ಹೇಳಿದ್ದರು. ಯಾವಾಗ ಮನುಷ್ಯ ಪ್ರಕೃತಿಯ ಮೇಲೆ ಅಧಿಪತ್ಯ ಸಾಧಿಸಹೊರಟನೋ ಅಂದಿನಿಂದ ಗುಟುಕು ನೀರಿಗೂ ತತ್ವಾರ ಪಡಬೇಕಾದ, ಹಣ ಪಾವತಿಸಿ ಪಡೆಯಬೇಕಾದ ದುಸ್ಥಿತಿ ಬಂದೊದಗಿತು. ನಿನ್ನ ಮುಂದೆ ಸಾಗರವೇ ಹರಿದುಹೋಗುತ್ತಿದ್ದರೂ ಮೂರು ಬಾರಿಯಷ್ಟೇ ಅಂಗಸ್ನಾನವನ್ನು (ನಮಾಜಿಗೆ ಮುಂಚೆ ಮಾಡುವ ಕಡ್ಡಾಯವಾದ ಒಂದು ಕರ್ಮ) ನಿರ್ವಹಿಸಬೇಕು ಎಂದಿದ್ದಾರೆ. ಮುಂದಿನ ಪೀಳಿಗೆಗೆ ನೀರಿನ ಅಭಾವ ಕಾಡದಿರಲು ನೀರನ್ನು ಪೋಲು ಮಾಡದಿರಿ ಎಂಬ ಎಚ್ಚರಿಕೆಯೂ ಇದರಲ್ಲಡಗಿದೆ.

ಇಸ್ಲಾಂ ಹಾಗೂ ಪೈಗಂಬರರು ಬೇರೆ ಬೇರೆಯಲ್ಲ. ಅವರ ಬದುಕೇ ಇಸ್ಲಾಮಿನ ಪ್ರಾಯೋಗಿಕ ರೂಪ. ತಪ್ಪು ಕಲ್ಪನೆಗಳಿಂದಾಗಿ ಅತೀಹೆಚ್ಚು ಅಪಾರ್ಥಕ್ಕೊಳಪಡುತ್ತಿರುವ, ನಿಂದನೆಗೊಳಪಡುತ್ತಿರುವ ಪೈಗಂಬರರನ್ನು ಇಂದು ಹೆಚ್ಚು ಅಧ್ಯಯನ ಮಾಡಬೇಕಾಗಿದೆ.


ಇದನ್ನೂ ಓದಿ: ಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...