Homeಅಂಕಣಗಳುರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್

ರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್

“ನಿನ್ನ ಕೈಗಳಲ್ಲಿ ದುಡಿದು ಸಂಪಾದಿಸಿದ ಆಹಾರವಾಗಿದೆ ಶ್ರೇಷ್ಠ ಆಹಾರ. ನೀನು ಸಂಪಾದಿಸುವ ಪ್ರತಿ ಸಂಪಾದನೆಯಲ್ಲೂ ನಿನ್ನ ಪರಿಶ್ರಮವಿರಬೇಕು” ಎಂದು ಎಚ್ಚರಿಸುತ್ತದೆ ಇಸ್ಲಾಂ.

- Advertisement -
- Advertisement -

ಪ್ರವಾದಿ ಮುಹಮ್ಮದ್(ಸ. ಅ)ರನ್ನು ಅರಿಯದವರು ಅವರಿಗೆ ಕೇವಲ ಧರ್ಮ ಪ್ರಬೋಧಕರೆಂಬ ಚೌಕಟ್ಟನ್ನು ಹಾಕಿಬಿಡುತ್ತಾರೆ. ಜೊತೆಗೆ ಪೂರ್ವಾಗ್ರಹಗಳನ್ನಿಟ್ಟುಕೊಂಡು ಇಸ್ಲಾಮನ್ನು ದ್ವೇಷಿಸುತ್ತಾರೆ. ಆದರೆ ಇತಿಹಾಸದ ಸರಿಯಾದ ತಿಳಿವು ಮಾತ್ರ ಈ ಪೂರ್ವಾಗ್ರಹಗಳನ್ನು ದೂರ ಮಾಡಬಲ್ಲದು.

ಮುಹಮ್ಮದ್ ಪೈಗಂಬರರದು (ಸ) ಬಹುಮುಖ ಆಯಾಮಗಳುಳ್ಳ ವ್ಯಕ್ತಿತ್ವ. ಧರ್ಮ ಪ್ರಬೋಧಕರಾಗಿ, ಮಾನವತಾವಾದಿಯಾಗಿ, ಸಮಾನತೆಯ ಹರಿಕಾರನಾಗಿ, ಮಾನವ ಹಕ್ಕುಗಳ ಪ್ರತಿಪಾದಕನಾಗಿ, ಸ್ತ್ರೀ ವಿಮೋಚಕನಾಗಿ, ಅತ್ಯುತ್ತಮ ಶಿಕ್ಷಕನಾಗಿ, ಪರಿಸರವಾದಿಯಾಗಿ – ಹೀಗೆ ಅವರ ವ್ಯಕ್ತಿತ್ವದ ಹರವು ವಿಸ್ತಾರಗೊಳ್ಳುತ್ತಲೇ ಹೋಗುತ್ತದೆ. ತಮ್ಮ ಬೋಧನೆಗಳನ್ನು ಪ್ರಾಯೋಗಿಕವಾಗಿ ಸ್ವತಃ ಜೀವನದಲ್ಲಿ ಅಳವಡಿಸಿಕೊಂಡು ಬದುಕುವುದರ ಮೂಲಕ ಇಡೀ ಮನುಕುಲಕ್ಕೆ ಮಾದರೀಯೋಗ್ಯರಾದರು. ಪ್ರಸಿದ್ಧ ಆಂಗ್ಲ ಸಾಹಿತಿ ಮೈಕಲ್.ಎಚ್.ಹರ್ಟ್ ತನ್ನ ಪ್ರಸಿದ್ಧ ಕೃತಿಯಾದ ‘ದಿ ಹಂಡ್ರೆಡ್ಸ್’ನಲ್ಲಿ ಪ್ರವಾದಿ ಮುಹಮ್ಮದರಿಗೆ ಪ್ರಥಮ ಸ್ಥಾನವನ್ನು ನೀಡಿದರು. ಅವರು ಅದಕ್ಕೆ ನೀಡಿದ ಕಾರಣ “ಜಗತ್ತಿನ ಇತಿಹಾಸದಲ್ಲಿ ಮಾನವಕುಲವನ್ನು ಅವರಂತೆ ಪ್ರಭಾವಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ. ಬಹುತೇಕರು ಅವರನ್ನೋರ್ವ ಧರ್ಮ ಪ್ರಬೋಧಕರಾಗಿ ಮಾತ್ರ ಗುರುತಿಸುತ್ತಾರೆ. ವಾಸ್ತವದಲ್ಲಿ ಅವರ ವ್ಯಕ್ತಿತ್ವವನ್ನು ಕೇವಲ ಧಾರ್ಮಿಕ ಆಯಾಮದಡಿ ಹಿಡಿದಿಡಲು ಸಾಧ್ಯವಿಲ್ಲ” ಎಂಬುದಾಗಿತ್ತು.

ನಾನಿಲ್ಲಿ ಪೈಗಂಬರರ ಪರಿಸರ ಮತ್ತು ಕೃಷಿ ನೀತಿಯ ಬಗ್ಗೆ ಕ್ಷ-ಕಿರಣ ಬೀರುವ ಪುಟ್ಟ ಪ್ರಯತ್ನ ಮಾಡುತ್ತೇನೆ.

ಮೊನ್ನೆ ನನ್ನ ಪುಟ್ಟ ಮಗಳು ಕೋಲೊಂದರಿಂದ ಮನೆಯಂಗಳದ ದಾಸವಾಳ ಗಿಡಕ್ಕೆ ಬಡಿಯುತ್ತಾ ಎಲೆಗಳನ್ನು ಉದುರಿಸುತ್ತಿದ್ದಳು. ಹಾಗೆಲ್ಲಾ ಗಿಡಮರಗಳಿಗೆ ತೊಂದರೆ ಕೊಡಬಾರದು ನಮ್ಮಂತೆಯೇ ಅವುಗಳಿಗೂ ಜೀವವಿದೆ, ನೋವಾಗುತ್ತದೆ ಎಂದೆ. ಅಷ್ಟು ಹೇಳಿದ್ದೇ ತಡ, ಸಿಕ್ಕಸಿಕ್ಕ ವಸ್ತುಗಳಿಗೆಲ್ಲಾ ಬಡಿಯುತ್ತಾ ಇದಕ್ಕೆ ಜೀವವಿದೆಯೇ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳತೊಡಗಿದಳು. ಕಿರಿಕಿರಿಯೆನಿಸಿದರೂ ಅವಳಿಗೆ ಜೀವಿಗಳು ಮತ್ತು ನಿರ್ಜೀವಿಗಳ ನಡುವಿನ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಟ್ಟೆ. ಆ ಕೂಡಲೇ ಪಾಪ ಎಂದು ಗಿಡವನ್ನು ಅಪ್ಪಿಕೊಳ್ಳುತ್ತಾ ಇದೆಲ್ಲಾ ನಿನ್ನ ಅಮ್ಮ ನಿನಗೆ ಕಲಿಸಿದ್ದಾ ಎಂದು ಕೇಳಿದಳು. ಇದನ್ನು ಪ್ರತಿಪಾದಿಸಿ ಸಾರಿದವರು ಮುಹಮ್ಮದ್ ಪೈಗಂಬರರು(ಸ) ಎಂದೆ. ಒಮ್ಮೆ ಮುಹಮ್ಮದರು(ಸ) ಅನುಯಾಯಿಗಳ ಜೊತೆ ಮಸೀದಿಗೆ ಹೋಗುತ್ತಿದ್ದಾಗ ಅವರಲ್ಲೊಬ್ಬರು ಅಲ್ಲೇ ಪಕ್ಕದಲ್ಲಿದ್ದ ಗಿಡವೊಂದರಿಂದ ಎಲೆಗಳನ್ನು ಕಿತ್ತರು. ಇದನ್ನು ಗಮನಿಸಿದ ಪೈಗಂಬರರು, “ಇದೇನು ಮಾಡುತ್ತಿರುವಿರಿ? ವಿನಾಕಾರಣ ಎಲೆಗಳನ್ನು ಕೀಳದಿರಿ, ಅವುಗಳಿಗೂ ಜೀವವಿದೆ” ಎಂದಿದ್ದರು ಎಂದು ಅವಳದೇ ಭಾಷೆಯಲ್ಲಿ ವಿವರಿಸಿದೆ.

ಕೃಷಿಯು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ನಿಮ್ಮೊಂದಿಗೆ ನಂಬಿಕೆಯಿಂದ ಜೋಪಾನವಾಗಿ ನೋಡಿಕೊಳ್ಳುವಂತೆ ನೀಡಿದ ಸ್ವತ್ತಾಗಿದೆ ಪರಿಸರ ಎಂದು ಇಸ್ಲಾಂ ಸಾರುತ್ತದೆ. ಇಸ್ಲಾಂ ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿ ಅದನ್ನೊಂದು ಪುಣ್ಯ ಕರ್ಮವೆಂದು ಪರಿಗಣಿಸಿದೆ.

ನಾಳೆ ಲೋಕಾವಸಾನವಾಗುವುದೆಂದು ಖಾತರಿಯಿದ್ದರೂ ನಿನ್ನ ಬಳಿ ಗಿಡವೊಂದಿದ್ದರೆ ಅದನ್ನು ನೆಟ್ಟುಬಿಡು ಎಂದಿದ್ದಾರೆ ಪ್ರವಾದಿ ಮುಹಮ್ಮದ್(ಸ.ಅ). ಪ್ರಕೃತಿಯ ಮೇಲೆ ನಮಗಿರುವ ಜವಾಬ್ದಾರಿಯೇನೆಂಬುದು ಇದರಿಂದ ಮನದಟ್ಟಾಗುತ್ತದೆ.

ಮನುಷ್ಯನಂತೆಯೇ ಇತರ ಜೀವಿಗಳಿಗೂ ಈ ಪ್ರಕೃತಿಯ ಮೇಲೆ ಸಮಪಾಲಿನ ಹಕ್ಕಿದೆ ಎಂಬ ಪ್ರಜ್ಞೆಯನ್ನು ಹುಟ್ಟುಹಾಕಿದ ಅವರು “ಯಾರಾದರೂ ಒಂದು ಗಿಡ ನೆಟ್ಟರೆ/ಬೇಸಾಯ ಮಾಡಿದರೆ ಅದು ಮರವಾಗಿ ಬೆಳೆದು ಫಸಲು ನೀಡಲಾರಂಭಿಸಿದಾಗ, ಪಕ್ಷಿಗಳು, ಪ್ರಾಣಿಗಳು, ಮನುಷ್ಯರು ಅದರಲ್ಲಿನ ಫಲಗಳನ್ನು ತಿಂದರೆ ಅಥವಾ ಆ ಮರವನ್ನು ನೆರಳಿಗೋ, ಆವಾಸಕ್ಕಾಗಿಯೋ ಆಶ್ರಯಿಸಿದರೆ ದಾನದ ಪ್ರತಿಫಲವು ನೆಟ್ಟವನಿಗೆ ಲಭಿಸುವುದು” ಎನ್ನುವ ಮೂಲಕ ಹಸಿರು ಪರಿಸರವನ್ನು ಬೆಳೆಸಲು ಉತ್ತೇಜಿಸಿದರು.

ಯುದ್ಧದ ಸಂದರ್ಭದಲ್ಲಿಯೂ ಅಶಕ್ತರಿಗೆ, ವೃದ್ಧರಿಗೆ, ಸ್ತ್ರೀಯರಿಗೆ, ಮಕ್ಕಳಿಗೆ, ಮರಗಿಡಗಳಿಗೆ ಹಾಗೂ ಬೆಳೆಗಳಿಗೆ ಹಾನಿ ಮಾಡಬಾರದೆಂದು ಆಜ್ಞಾಪಿಸಿದ ಅವರ ಪರಿಸರದ ಬಗೆಗಿನ ಕಾಳಜಿ ಸರ್ವಕಾಲಕ್ಕೂ ಅನುಕರಣಾಯೋಗ್ಯವಾದುದು.

ಯಾರಲ್ಲಾದರೂ ಜಮೀನಿದ್ದರೆ ಅದನ್ನು ಕೃಷಿಗಾಗಿ ಬಳಸಬೇಕೆಂದೂ, ಒಂದು ವೇಳೆ ಉಳುಮೆ ಮಾಡುವುದಿಲ್ಲವೆಂದಾದರೆ ಯಾರಾದರೂ ಬೇಸಾಯ ಮಾಡುವವನಿಗೆ ಕೊಡಬೇಕು, ಕೃಷಿ ಭೂಮಿಯನ್ನು ಭೋಗಿಸಲು ಉಳುವ ಕೈಗಳಿಗಿಂತ ಮಿಗಿಲಾದ ಅರ್ಹ ಇನ್ನೊಬ್ಬನಿಲ್ಲ ಎಂಬುದು ಅವರ ಉಪದೇಶವಾಗಿತ್ತು. ಇಲ್ಲಿ ವಿ(ಶೇ)ಷ ಆರ್ಥಿಕ ವಲಯದ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಆಳುವ ವರ್ಗವೇ ಧಾರೆಯೆರೆದು ಕೊಡುತ್ತಿದೆ. ಕೃಷಿ ಭೂಮಿಯ ನಾಶದಿಂದಾಗಿ ಕೃಷಿ ಉತ್ಪಾದನೆಯು ಕಡಿಮೆಯಾಗಿ ಬೆಲೆಯೇರಿಕೆಗೆ ಕಾರಣವಾಗುತ್ತಿದೆ. ಆಧುನಿಕ ಕೈಗಾರಿಕೆಗಳು, ಕಾಂಕ್ರೀಟು ಕಾಡುಗಳು ದುಡ್ಡಿನ ಗುಡ್ಡೆಗಳನ್ನು ನೀಡಬಹುದೇ ಹೊರತು ಹಸಿವು ಇಂಗಿಸಲಾರದು.

ರೈತ ಮತ್ತು ಮಾರುಕಟ್ಟೆಯ ನಡುವೆ ದಲ್ಲಾಳಿಯ ಮಧ್ಯಸ್ಥಿಕೆಯನ್ನು ಪ್ರವಾದಿವರ್ಯರು ವಿರೋಧಿಸಿದ್ದರು. ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕಾದುದು ಅವನ ಹಕ್ಕಾಗಿರುತ್ತದೆ. ನಾವು ನಮ್ಮ ರಾಜ್ಯದಲ್ಲೇ ಪ್ರತೀ ವರ್ಷ ಟೊಮ್ಯಾಟೊ ಬೆಳೆಗಾರರು ಸೂಕ್ತ ಬೆಲೆ ಸಿಗದೇ ರಸ್ತೆಗೆ ಸುರಿಯುವ ದೃಶ್ಯವನ್ನು ನೋಡುತ್ತಿರುತ್ತೇವೆ. ಟೊಮ್ಯಾಟೊ ಬೆಳೆಯದ ಊರಲ್ಲಿ ಅಂತಹ ಕಾಲದಲ್ಲೂ ಬಳಕೆದಾರ ಅದಕ್ಕೆ ದುಬಾರಿ ಬೆಲೆಯನ್ನೇ ಪಾವತಿಸುತ್ತಾನೆ. ಇಲ್ಲಿ ಬೆಳೆದ ರೈತ ದಿವಾಳಿಯಾದರೆ ಮಧ್ಯವರ್ತಿ ಕೊಬ್ಬುತ್ತಾನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಕಾಲದಲ್ಲಿ ಅತಿಹೆಚ್ಚು ಬೇಡಿಕೆಯಿದ್ದ ಫಲ ಕಲ್ಲಂಗಡಿ ಹಣ್ಣು. ಈ ಹಣ್ಣಿಗೆ ಅಷ್ಟು ಬೇಡಿಕೆ ಮಂಗಳೂರು ಮಾರುಕಟ್ಟೆಯಲ್ಲಿದ್ದಾಗ್ಯೂ ಕಲ್ಲಂಗಡಿ ಬೆಳೆಗಾರನಿಗೆ ಜುಜುಬಿ ಬೆಲೆ ಕೊಟ್ಟು ಖರೀದಿಸಲಾಗುತ್ತಿದ್ದುದು ಬಹಿರಂಗ ಸತ್ಯ. ಇಲ್ಲಿಯೂ ಬೆಳೆದ ಕೈಗಳನ್ನು ವಂಚಿಸಿ ದಲ್ಲಾಳಿ ಕೊಬ್ಬಿದ್ದ.

“ನಿನ್ನ ಕೈಗಳಲ್ಲಿ ದುಡಿದು ಸಂಪಾದಿಸಿದ ಆಹಾರವಾಗಿದೆ ಶ್ರೇಷ್ಠ ಆಹಾರ. ನೀನು ಸಂಪಾದಿಸುವ ಪ್ರತಿ ಸಂಪಾದನೆಯಲ್ಲೂ ನಿನ್ನ ಪರಿಶ್ರಮವಿರಬೇಕು” ಎಂದು ಎಚ್ಚರಿಸುತ್ತದೆ ಇಸ್ಲಾಂ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕದ ಬೆಲೆಯೇರಿಕೆ, ಪ್ರಾಕೃತಿಕ ವಿಕೋಪ ಇವೆಲ್ಲದರ ಸುಳಿಯಲ್ಲಿ ಸಿಕ್ಕು ಯಾತನೆ ಅನುಭವಿಸುತ್ತಿರುವ ರೈತರಿಗೆ ದಲ್ಲಾಳಿಗಳ ಹಾವಳಿಯೂ ತಪ್ಪಿದ್ದಲ್ಲ. ಬೆವರು, ರಕ್ತ ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ದಲ್ಲಾಳಿಗಳು ಯಾವುದೇ ಪರಿಶ್ರಮ, ತ್ರಾಸವಿಲ್ಲದೇ ರೈತನ ಅಹವಾಲಿಗೆ ಬೆಲೆ ಕೊಡದೇ ತಾವಾಗಿಯೇ ನಿಗದಿಪಡಿಸಿದ ಬೆಲೆಗೆ ಕೊಂಡುಕೊಳ್ಳುತ್ತಾರೆ. ಒಂದರ್ಥದಲ್ಲಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳೇ ಏಕಸ್ವಾಮ್ಯ ಮೆರೆಯುತ್ತಾರೆ.

ತರಕಾರಿ ಹಣ್ಣು- ಹಂಪಲುಗಳನ್ನು ಇಂದಲ್ಲ ನಾಳೆ ಬೆಲೆ ಹೆಚ್ಚಾಗಬಹುದೆಂದು ಶೇಖರಿಸಿಡಲಾಗದು. ಇಲ್ಲಿ ಬೆಳೆಗಾರರ ಅಸಹಾಯಕತೆಯ ಲಾಭ ಪಡೆದು ಆಧುನಿಕ ಬಂಡವಾಳಶಾಹಿತ್ವವು ಅವರನ್ನು ವಂಚಿಸುತ್ತದೆ. ಈ ರೀತಿಯ ವ್ಯವಹಾರವು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ. ಕ್ಷಾಮಕಾಲದಲ್ಲಿ ಕೃತಕ ಅಭಾವ ಸೃಷ್ಟಿಸಿ ಬೆಲೆಯೇರಿಸುವುದನ್ನೂ ಪ್ರವಾದಿವರ್ಯರು ಕಟುವಾಗಿ ವಿರೋಧಿಸಿದ್ದಾರೆ.

ನೈಸರ್ಗಿಕ ಸಂಪನ್ಮೂಲಗಳಾದ ನೀರು, ಮಣ್ಣು, ಉಪ್ಪು ಇವುಗಳನ್ನು ಯಾರೇ ಕೇಳಿದರೂ ನಿರಾಕರಿಸಬಾರದು ಎಂದು ಪ್ರವಾದಿಯವರು ಹೇಳಿದ್ದರು. ಯಾವಾಗ ಮನುಷ್ಯ ಪ್ರಕೃತಿಯ ಮೇಲೆ ಅಧಿಪತ್ಯ ಸಾಧಿಸಹೊರಟನೋ ಅಂದಿನಿಂದ ಗುಟುಕು ನೀರಿಗೂ ತತ್ವಾರ ಪಡಬೇಕಾದ, ಹಣ ಪಾವತಿಸಿ ಪಡೆಯಬೇಕಾದ ದುಸ್ಥಿತಿ ಬಂದೊದಗಿತು. ನಿನ್ನ ಮುಂದೆ ಸಾಗರವೇ ಹರಿದುಹೋಗುತ್ತಿದ್ದರೂ ಮೂರು ಬಾರಿಯಷ್ಟೇ ಅಂಗಸ್ನಾನವನ್ನು (ನಮಾಜಿಗೆ ಮುಂಚೆ ಮಾಡುವ ಕಡ್ಡಾಯವಾದ ಒಂದು ಕರ್ಮ) ನಿರ್ವಹಿಸಬೇಕು ಎಂದಿದ್ದಾರೆ. ಮುಂದಿನ ಪೀಳಿಗೆಗೆ ನೀರಿನ ಅಭಾವ ಕಾಡದಿರಲು ನೀರನ್ನು ಪೋಲು ಮಾಡದಿರಿ ಎಂಬ ಎಚ್ಚರಿಕೆಯೂ ಇದರಲ್ಲಡಗಿದೆ.

ಇಸ್ಲಾಂ ಹಾಗೂ ಪೈಗಂಬರರು ಬೇರೆ ಬೇರೆಯಲ್ಲ. ಅವರ ಬದುಕೇ ಇಸ್ಲಾಮಿನ ಪ್ರಾಯೋಗಿಕ ರೂಪ. ತಪ್ಪು ಕಲ್ಪನೆಗಳಿಂದಾಗಿ ಅತೀಹೆಚ್ಚು ಅಪಾರ್ಥಕ್ಕೊಳಪಡುತ್ತಿರುವ, ನಿಂದನೆಗೊಳಪಡುತ್ತಿರುವ ಪೈಗಂಬರರನ್ನು ಇಂದು ಹೆಚ್ಚು ಅಧ್ಯಯನ ಮಾಡಬೇಕಾಗಿದೆ.


ಇದನ್ನೂ ಓದಿ: ಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...