HomeUncategorizedಕಲಾವಿಭಾಗದ ಟಾಪರುಗಳ ಭವಿಷ್ಯವೇನು?

ಕಲಾವಿಭಾಗದ ಟಾಪರುಗಳ ಭವಿಷ್ಯವೇನು?

ಕಲಾವಿಭಾಗದಲ್ಲಿ ಟಾಪರ್ ಗಳಾದ ನಮ್ಮೂರಿನ ಹುಡುಗಿಯರು ಇಂದು ಏನಾಗಿದ್ದಾರೆ ಗೊತ್ತೇ?

- Advertisement -
- Advertisement -

| ಡಾ.ಅರುಣ್ ಜೋಳದಕೂಡ್ಲಿಗಿ |

ಇಂದು ಶಿಕ್ಷಣ ಪಡೆಯುವುದೇ ಉದ್ಯೋಗಕ್ಕಾಗಿ ಎಂದಾಗಿರುವುದರಿಂದ ಎಸ್.ಎಸ್.ಎಲ್.ಸಿ ನಂತರರ ಓದಿನ ಆಯ್ಕೆಯಲ್ಲಿ ಕಲಾ ವಿಭಾಗಕ್ಕಿಂತ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದ ಆಯ್ಕೆಗಳು ಹೆಚ್ಚಾಗುತ್ತಿದೆ. ಅದರಲ್ಲೂ ಕಲಾ ವಿಭಾಗವನ್ನು ಆಯ್ದುಕೊಳ್ಳುವುದೆಂದರೆ ಬಡವರು, ಹಳ್ಳಿಗರು, ಕನ್ನಡ ಮೀಡಿಯಂ ಓದಿದವರು, ಕಡಿಮೆ ಖರ್ಚಿನ ಕೋರ್ಸು, ಓದಿದರೂ ಉದ್ಯೋಗ ಕಷ್ಟ ಎನ್ನುವ ಸಮೀಕರಣವಿದೆ. ಅದಕ್ಕೆ ವಿರುದ್ಧವಾಗಿ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದ ಆಯ್ಕೆಯು ಉಳ್ಳವರು, ಇಂಗ್ಲೀಷ್ ಕಲಿತವರು, ನಗರದವರು, ಓದಿನ ಖರ್ಚು ಹೆಚ್ಚು, ಓದಿಗೆ ಉದ್ಯೋಗವಿದೆ ಇತ್ಯಾದಿಗಳು ತಳಕು ಹಾಕಿವೆ. ಇದರಲ್ಲಿ ಕೆಲವು ಸಂಗತಿಗಳು ವಾಸ್ತವ ಕೂಡ. ವ್ಯವಸ್ಥೆಯೂ ಇದಕ್ಕೆ ಪೂರಕವಾಗಿದೆ.ಈ ನಡುವೆ ಕಳೆದ ಒಂದೆರಡು ದಶಕದಲ್ಲಿ ಕಲಾವಿಭಾಗದ ಆಯ್ಕೆಯ ಬದಲಿಗೆ ಇದೇ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗಕ್ಕೆ ಬದಲಾಗುತ್ತಿದ್ದಾರೆ.

ಕುಸುಮ

ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಪಿಯು ಕಾಲೇಜು ಸತತವಾಗಿ 5 ವರ್ಷ ಕಲಾವಿಭಾಗದಲ್ಲಿ ಮೊದಲ ಸ್ಥಾನ ಪಡೆಯುತ್ತಿದೆ. ಇದೊಂದು ರೀತಿಯಲ್ಲಿ ಖಾಸಗಿ ಕಾಲೇಜುಗಳು ವಿಜ್ಞಾನ ವಾಣಿಜ್ಯ ಕಂಪ್ಯೂಟರ್ ವಿಭಾಗವನ್ನು ಹೊತ್ತು ಮೆರೆಸುವಾಗ, ಈ ಕಾಲೇಜಿನ ಕಲಾ ವಿಭಾಗದ ಒಲವು ಮೆಚ್ಚುವಂತಹದ್ದು. ಈ ರ್ಯಾಂಕುಗಳ ಮೂಲಕ ಇಂದು ಕಾಲೇಜು ರಾಜ್ಯದ ಗಮನ ಸೆಳೆದಿದೆ. ಹೀಗಿರುವಾಗಲೂ ಬರೀ ರ್ಯಾಂಕ್‍ಗಳ ಮೂಲಕ ಕಲಾ ವಿಭಾಗದ ಮೌಲ್ಯವನ್ನು ಹೆಚ್ಚಿಸಬಹುದೇ? ಬಹುಶಃ ಸಾಧ್ಯವಿಲ್ಲ. ಬದಲಿಗೆ ರ್ಯಾಂಕಿನ ಅಥವ ಹೆಚ್ಚು ಅಂಕಗಳನ್ನು ಪಡೆದ ಕಲಾ ವಿಭಾಗದ ಪ್ರತಿಭೆಗಳಿಗೆ ತಕ್ಕುನಾದ ಉಜ್ವಲ ಭವಿಷ್ಯ ರೂಪುಗೊಂಡರೆ ಮಾತ್ರ ಕಲಾ ವಿಭಾಗದ ಬಗ್ಗೆ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಒಲವು ಮತ್ತು ಹುರುಪು ಹೆಚ್ಚಬಹುದು.

ಈ ಕಾರಣಕ್ಕೆ ಕೊಟ್ಟೂರಿನ ಇಂದು ಕಾಲೇಜಿನಲ್ಲಿ ಕಳೆದ ಐದು ವರ್ಷ ಮೊದಲ ಟಾಪರ್ ಹುಡುಗಿಯರನ್ನು ಮಾತನಾಡಿಸಿದೆ. ಐದೂ ಜನರೂ ಕೆಳಜಾತಿ ಮತ್ತು ಕೆಳವರ್ಗಕ್ಕೆ ಸೇರಿದವರು. ಇವರೆಲ್ಲಾ ಟಾಪರ್ ಆದಾಗ ಪ್ರತಿಕ್ರಿಯೆಯಾಗಿ ಕೆ.ಎ.ಎಸ್. ಐ.ಎ.ಎಸ್ ಮೊದಲಾದ ಉನ್ನತ ಹುದ್ದೆಗಳ ಕನಸು ಕಂಡಿದ್ದರು. ಆದರೆ ಹೆಚ್ಚುವರಿ ಅಂಕಗಳು ಅವರನ್ನು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ತಡೆಯೊಡ್ಡಿತು. ಹಾಗಾಗಿ ಈ ವರ್ಷದ ಟಾಪರ್ ಕುಸುಮಾಳನ್ನು (2019 ಪಡೆದ ಅಂಕ 594) ಹೊರತುಪಡಿಸಿ ಉಳಿದ ನೇತ್ರಾವತಿ ಎಂ.ಬಿ (2015/579), ಅನಿತಾ ಪಿ (2016/585), ಚೈತ್ರ.ಬಿ (2017/589) ಸ್ವಾತಿ ಎಸ್. (2018/595) ಈ ನಾಲ್ವರು ವಿಲೇಜ್ ಅಕೌಂಟೆಂಟ್(ವಿ.ಎ) ಆಗಿದ್ದಾರೆ.

ಅನಿತಾ

ಸದ್ಯಕ್ಕೆ ಎಲ್ಲರೂ ದೂರಶಿಕ್ಷಣದಲ್ಲಿ ಬಿ.ಎ ಮಾಡುತ್ತಿದ್ದು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೆ.ಎ.ಎಸ್ ಅಥವಾ ಐ.ಎ.ಎಸ್ ತೆಗೆದುಕೊಳ್ಳುವುದಾಗಿ ಚೂರು ಮೆಲ್ಲಗೆ ಹೇಳುತ್ತಾರೆ. ಟಾಪರ್ ಆದಾಗ ಪ್ರತಿಕ್ರಿಯಿಸಿದ ಆತ್ಮವಿಶ್ವಾಸ ಇದೀಗ ಕುಗ್ಗಿದೆ. ಇವರೆಲ್ಲಾ ಹೇಳುವ ಕಾರಣ ತಮ್ಮ ಮನೆಗಳ ಬಡತನದ್ದು. ಮುಂದೆ ಓದುವ ಕನಸಿದ್ದರೂ ಬಡತನದ ಕಾರಣ ಉದ್ಯೋಗದ ಮುಂದೆ ಬೇರೆ ಆಯ್ಕೆಯಿಲ್ಲ. ಆದರೆ ವಿಜ್ಞಾನ ತಂತ್ರಜ್ಞಾನ ವಾಣಿಜ್ಯದ ರ್ಯಾಂಕ್ ವಿದ್ಯಾರ್ಥಿಗಳು ಬಹುಪಾಲು ಮುಂದಿನ ವಿದ್ಯಾಭ್ಯಾಸದಲ್ಲಿ ತೊಡಗುವುದು ಹೆಚ್ಚು. ಇವರ ಓದಿಗೆ ಸಾಂಸ್ಥಿಕ ಸಹಾಯ ಸಿಗುವುದಲ್ಲದೆ, ಮುಂದೆ ಒಳ್ಳೆಯ ಸಂಬಳದ ಉದ್ಯೋಗ ಸಿಗುವ ಭರವಸೆ ಕೂಡಾ ಇರುತ್ತದೆ.

ಇಲ್ಲಿ ಮುಖ್ಯವಾಗಿ ಇಂದು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ಭಾಷೆಯ ಆಯ್ಕೆಯಲ್ಲಿ ಇಂಗ್ಲೀಷ್ ಬದಲಿಗೆ ಸಂಸ್ಕೃತವನ್ನೂ, ಉಳಿದಂತೆ ಶಿಕ್ಷಣ, ಕಡ್ಡಾಯ ಕನ್ನಡದ ಜತೆ ಐಚ್ಚಿಕ ಕನ್ನಡ, ಇತಿಹಾಸ, ರಾಜ್ಯಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. `ಅತಿಹೆಚ್ಚು ಕಿರುಪರೀಕ್ಷೆಗಳನ್ನು ಆಯೋಜಿಸುವುದು, ನಿರಂತರವಾಗಿ ಹಳೆಯ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ತರಬೇತಿ ಕೊಡುವುದು ರ್ಯಾಂಕಿಗೆ ಕಾರಣ’ ಎಂದು ಇಂದು ಕಾಲೇಜಿನ ಪ್ರಾಂಶುಪಾಲರಾದ ಭದ್ರಿನಾಥ ಹೇಳುತ್ತಾರೆ. ಬಹುಶಃ ಈ ಬಗೆಯ ವಿಷಯದ ಆಯ್ಕೆಯೂ ಟಾಪರ್ ಆದವರಿಗೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲೀಷ್ ಭಾಷೆ ತೊಡಕಾಗುವ ಭಯವಿರಬಹುದು. ಇದರಿಂದಾಗಿಯೂ ಪಿಯುನ ಹೆಚ್ಚಿನ ಅಂಕದ ಕಾರಣಕ್ಕೆ ಸಿಕ್ಕ ವಿ.ಎ ಹುದ್ದೆಯನ್ನು ತಿರಸ್ಕರಿಸಲು ಸಾಧ್ಯವಾಗಿಲ್ಲ.

ಚೈತ್ರ

ಇಂದು ಇಡೀ ದೇಶದಲ್ಲಿ ಮಾನವಿಕ ವಿಜ್ಞಾನಗಳು ನಿರುದ್ಯೋಗದ ಕೋರ್ಸ್‍ಗಳೆಂಬಂತೆ ಅಪಮೌಲ್ಯಕ್ಕೆ ಒಳಗಾಗಿವೆ. ಇಂದು ಬಹುಸಂಖ್ಯಾತ ಯುವಜನರು ಸಮಾಜದ ಬಗೆಗೆ ಅರಿವು ಮೂಡಿಸಿಕೊಳ್ಳದೆ, ವಿಜ್ಞಾನ ತಂತ್ರಜ್ಞಾನ ವಾಣಿಜ್ಯದ ಓದಿನ ಆಯ್ಕೆಗೆ ಒಳಗಾದ ಕಾರಣ ಮಕ್ಕಳಿಗೆ ತನ್ನದೇ ಸಮಾಜದ ಸೂಕ್ಷ್ಮ ತಿಳುವಳಿಕೆಯೂ ಇಲ್ಲದಾಗುತ್ತದೆ. ಇಂತಹ ಕಲೆಯೇತರ ಆಯ್ಕೆಗಳು ಹೆಚ್ಚಾದಂತೆ ಅರಾಜಕ ಯುವಜನರೂ ಹೆಚ್ಚುವ ಸಾಧ್ಯತೆಯಿದೆ. ಇದರಿಂದಾಗಿ ಯುವಜನರಲ್ಲಿ ಸಮಾಜದ ಜತೆಗಿನ ಸಾವಯವ ಸಂಬಂಧದ ನಡವಳಿಕೆ ಇಲ್ಲವಾಗಿ, ಉಡಾಫೆಯ ಭಾವವನ್ನು ಬೆಳಸಿಕೊಳ್ಳುವ ಸಾಧ್ಯತೆಯಿದೆ. ಅಂತೆಯೇ ಸಮಾಜದ ಸಮಗ್ರ ಬೆಳವಳಿಗೆಯ ಕಡೆಗಲ್ಲದೆ, ಅಸಮಾನ ಸಮಾಜದ ಬೆಳವಣಿಗೆಯ ಪಾಲುದಾರರಾಗುವ ಸಾಧ್ಯತೆ ಇದೆ.

ಮುಖ್ಯವಾಗಿ ಸರಕಾರಗಳು ಕಲಾವಿಭಾಗಕ್ಕೆ ಹಚ್ಚು ಮೌಲ್ಯ ಪ್ರಾಪ್ತವಾಗುವಂತೆ ಪಠ್ಯಕ್ರಮಗಳನ್ನು ಅಳವಡಿಸುವುದು, ವಿಜ್ಞಾನ ತಂತ್ರಜ್ಞಾನ ವಾಣಿಜ್ಯ ಕೋರ್ಸ್‍ಗಳಲ್ಲಿಯೂ ಕನಿಷ್ಠ ಎರಡು ಮೂರು ಮಾನವಿಕ ವಿಷಯಗಳನ್ನು ಕಡ್ಡಾಯವಾಗಿ ಓದಲೆಬೇಕೆನ್ನುವ ಕಟ್ಟುನಿಟ್ಟಿನ ನಿಯಮ ತರುವುದು. ಜ್ಞಾನ ಪರಂಪರೆಯಲ್ಲಿ ದೇಸಿ ಜ್ಞಾನವೆ ಮೂಲವಾದ ಕಾರಣ ಎಲ್ಲಾ ಕೋರ್ಸುಗಳಲ್ಲಿ ಕಡ್ಡಾಯವಾಗಿ ದೇಸಿಜ್ಞಾನದ ಪಠ್ಯವನ್ನು ಅಳವಡಿಸುವುದು, ಇದಕ್ಕೆ ವಿಶೇಷವಾಗಿ ಜಾನಪದ ಪದವಿ ಪಡೆದವರನ್ನು ಬೋಧಕರನ್ನಾಗಿ ಆಯ್ಕೆ ಮಾಡುವುದು, ಅದಕ್ಕೆ ಪೂರಕವಾದ ಉದ್ಯೋಗಗಳನ್ನು ಸೃಷ್ಠಿಸುವುದು, ಕಲಾವಿಭಾಗದಲ್ಲಿ ರ್ಯಾಂಕ್ ಪಡೆದವರಿಗೆ ವಿಶೇಷ ಕೋಟದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯವನ್ನೂ ಒಳಗೊಂಡಂತೆ ಕಲಾ ವಿಭಾಗವನ್ನು ಮೌಲ್ಯೀಕರಿಸುವ ಕೆಲವು ಕಟ್ಟುನಿಟ್ಟಾದ ಯೋಜನೆಗಳನ್ನು ರೂಪಿಸಿಸಬೇಕಿದೆ. ಹೀಗೆ ಕಲಾವಿಭಾಗಕ್ಕೆ ಉಜ್ಞಲ ಭವಿಷ್ಯದ ದಾರಿಗಳು ತೆರೆದರೆ, ಈ ವಿಭಾಗದ ರ್ಯಾಂಕ್ ವಿದ್ಯಾರ್ಥಿಗಳು ಸಹಜವಾಗಿ ಎತ್ತರದ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರಲು ಸಜ್ಜಾಗುತ್ತಾರೆ.

(ಲೇಖಕರು ಪೋಸ್ಟ್ ಡಾಕ್ಟರಲ್ ಫೆಲೋ, ಕನ್ನಡ ವಿಶ್ವವಿದ್ಯಾಲಯ ಹಂಪಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...