Homeಮುಖಪುಟ'ರೈತರಿಂದ ನೇರ ಗ್ರಾಹಕರಿಗೆ' ಫೇಸ್‌ಬುಕ್‌ ಗ್ರೂಪ್: ವಿಭಿನ್ನ ಪ್ರಯೋಗಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

‘ರೈತರಿಂದ ನೇರ ಗ್ರಾಹಕರಿಗೆ’ ಫೇಸ್‌ಬುಕ್‌ ಗ್ರೂಪ್: ವಿಭಿನ್ನ ಪ್ರಯೋಗಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

ಕರ್ನಾಟಕ ರಾಜ್ಯ ರೈತ ಸಂಘದ ಪಚ್ಚೆ ನಂಜುಂಡಸ್ವಾಮಿ ಮತ್ತು ಯುವ ರೈತ ಸಂಘದ ಕಾರ್ಯಕರ್ತರ ಈ ಪ್ರಯತ್ನದಿಂದ ಹಲವಾರು ರೈತರು ಭವಿಷ್ಯದ ಬಗ್ಗೆ ಆಶಾವಾದ ಹೊಂದುವಂತಾಗಿದೆ.

- Advertisement -
- Advertisement -

“ಸಾವಯುವ ಕೃಷಿಯಲ್ಲಿ ಬೆಳೆದ ಅರಿಶಿನದಿಂದ ತಯಾರಿಸಿದ ಪರಿಶುದ್ಧ ಅರಿಶಿನ ಪುಡಿ. 200 ರೂಪಾಯಿ ಒಂದು ಕೆಜಿ”.. ಎಂದು ಶಿವಮೊಗ್ಗ ಜಿಲ್ಲೆಯ ಹೊಸನಗರದ ಸಂತೋಷ್ ಕೆ.ಎಸ್ ಎಂಬುವವರು ಒಂದು ಪೋಸ್ಟ್ ಹಾಕುತ್ತಾರೆ. ಎರಡೇ ದಿನದಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ನಮಗೆ ಎರಡು ಕೆಜಿ ಬೇಕು, ಒಂದು, ಅರ್ಧ ಕೆಜಿ ಬೇಕು ಎಂದು ಕಮೆಂಟ್ ಮಾಡುತ್ತಾರೆ. ನಿಮ್ಮ ಫೋನ್ ನಂಬರ್ ಕೊಡಿ ಎಂದು ಕೇಳುತ್ತಾರೆ. ಇದೇ ರೀತಿ ತೋಟದ ಅವರೆಕಾಯಿ, ಶುದ್ದ ಹರಳೆಣ್ಣೆ, ಏಲಕ್ಕಿ, ಕಾಳುಮೆಣಸು, ಜೋನಿ ಬೆಲ್ಲ, ಉಪ್ಪಿನಕಾಯಿ ರೀತಿಯ ಹಲವಾರು ಉತ್ಪನ್ನಗಳನ್ನು ಮಾರಲು ಹಲವಾರು ರೈತರು ಮುಂದೆ ಬಂದಿದ್ದಾರೆ.

ಇದು ಸಾಧ್ಯವಾಗಿರುವುದು ಪ್ರೊ.ಎಂ.ಡಿ ನಂಜುಂಡಸ್ವಾಮಿ ಕನಸಿನ ವೈಜ್ಞಾನಿಕ ಬೆಲೆಯ ಮಾರುಕಟ್ಟೆ ವ್ಯವಸ್ಥೆ ‘ರೈತರಿಂದ ನೇರ ಗ್ರಾಹಕರಿಗೆ’ ಎಂಬ ಹೆಸರಿನ ಫೇಸ್‌ಬುಕ್‌ ಗ್ರೂಪ್ ಮೂಲಕ. “ರೈತರಿಗೆ ಆರ್ಥಿಕ ಭದ್ರತೆಯನ್ನು ತಂದುಕೊಡುವುದು ಈ ಗ್ರೂಪ್‌ನ ಉದ್ದೇಶ. ರೈತರಿಗೆ ಸಿಗಲೇಬೇಕಾದ ವೈಜ್ಞಾನಿಕ ಬೆಲೆಯು ಮಧ್ಯವರ್ತಿಗಳಿಂದ ತಪ್ಪಿಹೋಗುತ್ತಿರುವುದರಿಂದ, ರೈತರೇ ತಮ್ಮ ಬೆಳೆ ಹಾಗೂ ಉತ್ಪನ್ನಗಳನ್ನು ಫೇಸ್ ಬುಕ್‌ನ ಈ ಗ್ರೂಪ್‌ನ ಮುಖಾಂತರ ಗ್ರಾಹಕರಿಗೆ ನೇರವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡುವ ವಿನೂತನ ಪ್ರಯತ್ನವಿದು. ರೈತರೆಲ್ಲರೂ ಸಹಕರಿಸಿ” ಎಂದು ಗ್ರೂಪ್‌ನ ಉದ್ದೇಶವನ್ನು ಸರಳವಾಗಿ ವಿವರಿಸಲಾಗಿದೆ.

ಈ ಗ್ರೂಪ್ ಆರಂಭವಾದ ಎರಡೇ ದಿನದಲ್ಲಿ ರೈತರು ಮತ್ತು ಗ್ರಾಹಕರಿಗೆ ಬಹುದೊಡ್ಡ ಭರವಸೆಯಾಗಿ ಕಂಡುಬಂದಿದೆ. ಜುಲೈ 9ರಂದು ಆರಂಭವಾದ ಈ ವಿಭಿನ್ನ ಪ್ರಯೋಗಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಹತ್ತಾರು ಉತ್ಪನ್ನಗಳನ್ನು ಪೋಸ್ಟ್ ಮಾಡಲಾಗಿದೆ. ನೂರಾರು ರೈತರು ಮತ್ತು ಗ್ರಾಹಕರು ಈ ಗ್ರೂಪ್‌ಗೆ ಎಡತಾಕುತ್ತಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಪಚ್ಚೆ ನಂಜುಂಡಸ್ವಾಮಿ ಮತ್ತು ಯುವ ರೈತ ಸಂಘದ ಕಾರ್ಯಕರ್ತರ ಈ ಪ್ರಯತ್ನದಿಂದ ಹಲವಾರು ರೈತರು ಭವಿಷ್ಯದ ಬಗ್ಗೆ ಆಶಾವಾದ ಹೊಂದುವಂತಾಗಿದೆ.

ಪಚ್ಚೆ ನಂಜುಂಡಸ್ವಾಮಿ

ಈ ಪ್ರಯತ್ನ ಚಿಗುರೊಡೆದಿದ್ದು ಹೇಗೆ? ಎಂಬುದರ ಕುರಿತು ಇದರ ಸ್ಥಾಪಕರಾದ ಪಚ್ಚೆ ನಂಜುಂಡಸ್ವಾಮಿಯವರು ನಾನುಗೌರಿ.ಕಾಂ ಮಾತನಾಡಿದರು. “ನನ್ನ ಮನಸ್ಸು ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಸದಾ ಮಿಡಿಯುತ್ತದೆ. ಈ ಕೋವಿಡ್ ಕಾಲದಲ್ಲಿಯೂ ಸಹ ಬೆಳೆ ಬೆಳೆದ ಎಷ್ಟೊ ರೈತರು ಮಾರಲಾಗದೇ ಬೆಳೆಯನ್ನು ಸುಟ್ಟುಬಿಟ್ಟ, ಹೊಲದಲ್ಲಿಯೇ ಉತ್ತುಬಿಟ್ಟಂತ ಘಟನೆಗಳನ್ನು ಕೇಳಿದ್ದೇವೆ. ಕೋವಿಡ್ ಬರುವುದಕ್ಕೂ ಮುಂಚೆಯೇ 16-17 ವರ್ಷಗಳಿಂದ ಲಕ್ಷಾಂತರ ರೈತರ ಆತ್ಮಹತ್ಯೆಗಳು ನಡೆದುಹೋಗಿವೆ. ಇವೆಲ್ಲವುಗಳಿಂದ ರೈತರ ಪರವಾಗಿ ಏನಾದರೂ ಮಾಡುವಂತೆ ತುಡಿಯುತ್ತಿತ್ತು. ಅದರ ಭಾಗವೇ ಈ ಗ್ರೂಪ್ ಆಗಿದೆ” ಎಂದರು.

ಮತ್ತೊಬ್ಬ ರೈತರ ಪೋಸ್ಟ್

ಇದು ಎರಡು ದಿನ ಮಗು ಅಷ್ಟೇ. ಇದರ ಹಿಂದೆ ಒಂದು ಇತಿಹಾಸವಿದೆ. ನೀರಾ ಚಳವಳಿ ಮಾಡುವಂತಹ ಸಂದರ್ಭದಲ್ಲಿ ಚಿತ್ರನಟ ಅಶೋಕ್‌ರವರು ಈ ಪರಿಕಲ್ಪನೆ ಇಟ್ಟುಕೊಂಡು ನಮ್ಮ ಮನೆಗೆ ಬಂದಿದ್ದರು. ನಮ್ಮ ತಂದೆ ಪ್ರೊ. ನಂಜುಂಡಸ್ವಾಮಿಯವರು ‘ಸ್ವದೇಶಿ’ ಎಂಬ ಹೆಸರಿನಲ್ಲಿ ಇದನ್ನು ಶುರು ಮಾಡಲು ಆರಂಭಿಸಿದ್ದರು. ಇದಕ್ಕೆ ತಮಿಳು ಚಿತ್ರನಟ ರಜಿನಿಕಾಂತ್‌ ಕೂಡ ‘ನಮ್ದು’ ಎಂಬ ಹೆಸರಿಡಿ ಎಂದು ಸಲಹೆ ನೀಡಿದ್ದರು. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಪ್ರೊ. ಎಂಡಿಎನ್ ಕ್ಯಾನ್ಸರ್‌ಗೆ ತುತ್ತಾದರು. ಈಗ ಬಹಳ ವರ್ಷಗಳ ನಂತರ ನಾವು ಇದನ್ನು ಆರಂಭಿಸಿದ್ದೇವೆ. ಸಮಾಜ ಕಟ್ಟುವ ಆರೋಗ್ಯಕರ ಚೇಷ್ಟೇ ಇದು. ಇದು ಸಮಾಜದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಜನರಿಗೆ ಸಹಾಯವಾದರೆ ಅದೇ ನೆಮ್ಮದಿ ಎನ್ನುತ್ತಾರೆ ಪಚ್ಚೆ ನಂಜುಂಡಸ್ವಾಮಿಯವರು…

“ಇದು ಒಳ್ಳೆಯ ಸಮಯ. ಪ್ರತಿ ತಾಲೂಕಿನಲ್ಲೂ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿ. ಇದರಿಂದ ದಲ್ಲಾಳಿಗಳ ಹಾವಳಿ ಕಡಿಮೆಯಾಗಿ ರೈತರಿಗೆ ತುಂಬಾ ಸಹಾಯ ಆಗುತ್ತದೆ . ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ” ಎಂದು ವೆಂಕಟೇಶಯ್ಯ ಹೆಬ್ಬಸುರು ಎಂಬುವವರು ಗ್ರೂಪ್ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಇಂದು ಇರುವ ಸಾಮಾನ್ಯ ಮಾರುಕಟ್ಟೆ ವ್ಯವಸ್ಥೆಯಲ್ಲಿ ಆಹಾರ ಬೆಳೆವ ರೈತ ಸುಖವಾಗಿಲ್ಲ. ಅದೇ ಆಹಾರ ಖರೀದಿಸುವ ಗ್ರಾಹಕರು ಕೂಡ ದುಬಾರಿ ಬೆಲೆಗೆ ಕೊಳ್ಳಬೇಕೆಂಬ ಮನೋಭಾವನೆ ಹೊಂದಿದ್ದಾರೆ. ಮಧ್ಯವರ್ತಿಗಳ ಹಾವಳಿಯ ಇಂತಹ ಪರಿಸ್ಥಿತಿಯಲ್ಲಿ ರೈತ ಮತ್ತು ಗ್ರಾಹಕ ಸ್ನೇಹಿಯಾದ ಹಲವಾರು ಪ್ರಯೋಗಗಳು ಹೊರಬರುತ್ತಿವೆ. ಅಂತಹ ಸಾಲಿಗೆ ಹೊಸ ಸೇರ್ಪಡೆಯಾದ ‘ರೈತರಿಂದ ನೇರ ಗ್ರಾಹಕರಿಗೆ’ ಪ್ರಯೋಗ ಯಶಸ್ವಿಯಾಗಲಿ. ಇದೇ ಮಾದರಿಯ ಹತ್ತಾರು ಯೋಜನೆಗಳು ಹೊರಬಂದು ರೈತರು ನೆಮ್ಮದಿಯ ಬದುಕು ಕಾಣುವಂತಾಗಲಿ ಎಂಬುದು ನಮ್ಮ ಆಶಯ. ನೀವೂ ಆ ಗ್ರೂಪ್ ಸೇರುವ ಮನಸ್ಸಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಕೊರೊನಾ: ರೋಗ ನಿರೋಧಕತೆ ಕುರಿತು ಆಯುರ್ವೇದದ ದೃಷ್ಟಿಕೋನ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...