Homeಸಿನಿಮಾಕ್ರೀಡೆಶೇನ್ ವಾರ್ನ್: ಮೂರು ಹೆಜ್ಜೆ ಗುರುತುಗಳು ನೂರಾರು ಕವಲು ದಾರಿಗಳು ಸಾವಿರದೊಂದು ರಹದಾರಿಗಳು!

ಶೇನ್ ವಾರ್ನ್: ಮೂರು ಹೆಜ್ಜೆ ಗುರುತುಗಳು ನೂರಾರು ಕವಲು ದಾರಿಗಳು ಸಾವಿರದೊಂದು ರಹದಾರಿಗಳು!

- Advertisement -
- Advertisement -

ಅದು ಸೀದಾಸಾದಾ ಮೂರೇಮೂರು ಹೆಜ್ಜೆ.. ತೋಳ್ಬಲದ ಜೊತೆಗೆ ಮಣಿಕಟ್ಟು ಮೂಲಕ ಕೈಬೆರಳಿನಲ್ಲಿ ಚೆಂಡನ್ನು ತಿರುಗಿಸುವ ಜಾದುಗಾರ! ಬುಗರಿಯಂತೆ ಗಾಳಿಯಲ್ಲಿ ತೇಲಿ ಬರುವ ಎಸೆತ. ಬ್ಯಾಟ್ಸ್‌ಮೆನ್‌ನನ್ನು ಒಂದುಕ್ಷಣ ತಬ್ಬಿಬ್ಬುಗೊಳಿಸುವ ಮಾಂತ್ರಿಕ!

ಕ್ರಿಕೆಟ್ ಜಗತ್ತಿನಲ್ಲಿ ಹತ್ತಾರು ಸ್ಪಿನ್ ಮಾಂತ್ರಿಕರು ಬಂದು ಹೋಗಿದ್ದಾರೆ. ಆದರೆ, ಶೇನ್ ವಾರ್ನ್ ಎಂಬ ಆ ಒಂದು ಹೆಸರು ಮಾತ್ರ ಎಂದೂ ಅಚ್ಚಳಿಯದ ಅಚ್ಚರಿಯೇ ಸರಿ. ಪುಟ್ಟಪುಟ್ಟ ಮೂರು ಹೆಜ್ಜೆಗಳನ್ನಿಟ್ಟು ಬಲಗೈನ ಮೂರು ಬೆರಳನ್ನು ಉಪಯೋಗಿಸಿ ಲೆಗ್‌ಸ್ಪಿನ್ ಮಾಡುವ ಮೂಲಕ ವಿಕೆಟ್‌ಅನ್ನು ಯ:ಕಶ್ಚಿತ್ ಮ್ಯಾಜಿಕ್ ರೀತಿಯಲ್ಲಿ ಉಡಾಯಿಸುತ್ತಿದ್ದ ಪರಿಗೆ ಇಡೀ ಜಗತ್ತೇ ತಲೆದೂಗಿತ್ತು.

ತನ್ನ ಪ್ರತಿಭೆ, ಸಾಮರ್ಥ್ಯದ ಮೇಲೆ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುವ ಹುಂಬ ಮನುಷ್ಯ ಎಷ್ಟೆಲ್ಲಾ ಸಾಧನೆಗಳನ್ನು ಮಾಡಬಹುದು, ದಾಖಲೆಗಳ ಶಿಖರದ ಮೂಲಕ ಮುಂದಿನ ಪೀಳಿಗೆಗೂ ತಾನು ಹೇಗೆ ಸವಾಲು ಎಸೆಯಬಹುದು ಎಂಬುದಕ್ಕೆ ಉದಾಹರಣೆಯಂತೆ ಬದುಕಿದ್ದ ಸಾಧಕ ವಾರ್ನ್. ಮುಂದುವರಿದು ಹೇಳಬೇಕೆಂದರೆ ಆತ ಬ್ಯಾಟ್ಸ್‌ಮೆನ್‌ನ ಮನಸ್ಥಿತಿಯನ್ನು ಅರಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದ ಮನಃಶಾಸ್ತ್ರಜ್ಞ. ಶಸ್ತ್ರಚಿಕಿತ್ಸೆ ಮಾಡುವ ಡಾಕ್ಟರ್‌ನಂತೆ ಏಕಾಗ್ರತೆಯಿಂದ ತನ್ನ ಬೌಲಿಂಗ್ ಲಯ ಮತ್ತು ನಿಖರತೆಯನ್ನು ಕಾಯ್ಡುಕೊಳ್ಳುವ ಸ್ಪಿನ್ ಡಾಕ್ಟರ್ ಆತ!

ಶೋಕಿ, ದುಶ್ಚಟಗಳ ದಾಸ, ವಿವಾದಗಳು, ವಾಕ್ಸಮರಗಳು ಆತನ ಯಶಸ್ಸಿನ ಸುತ್ತ
ಅಂಟಿಕೊಂಡಿರುವ ಕಪ್ಪುಚುಕ್ಕೆಗಳೇನೋ ಹೌದು. ಆದರೂ, ಆತನ ಸಾಧನೆಯ ಮುಂದೆ ಆ ತಪ್ಪುಗಳೆಲ್ಲವೂ ಮರೆಯಾಗುತ್ತಿದ್ದವು. ಇಡೀ ಕ್ರಿಕೆಟ್ ಜಗತ್ತು ಆತನ ಯಶಸ್ಸನ್ನು ಪಕ್ಕಕ್ಕಿಟ್ಟು ಕರೆಯುತ್ತಿದ್ದದ್ದು ಕ್ರಿಕೆಟ್‌ನ ಬ್ಯಾಡ್ ಬಾಯ್ ಎಂದು.

ಆತನ ಬೌಲಿಂಗ್ ಬತ್ತಳಿಕೆಯಲ್ಲಿದ್ದ ಅಸ್ತ್ರಗಳೇ ವಿಭಿನ್ನ. ಅದನ್ನು ಅರ್ಥಮಾಡಿಕೊಳ್ಳುವುದು ಸಹ ಅಷ್ಟೇ ಕಷ್ಟ. ಎದುರಾಳಿ ಬ್ಯಾಟ್ಸ್‌ಮೆನ್‌ಗಳ ಆತ್ಮವಿಶ್ವಾಸವನ್ನು ಕುಗ್ಗಿಸುವಂತಹ ಸಾಮರ್ಥ್ಯ
ಆತನ ಬೌಲಿಂಗ್‌ನಲ್ಲಿತ್ತು. ಅದಕ್ಕಾಗಿ ಏನು ಬೇಕಾದ್ರೂ ಮಾಡುವ ಕಲೆಯೂ ಚೆನ್ನಾಗಿಯೇ ಗೊತ್ತಿತ್ತು. ಹಾಗಾಗಿಯೇ ಶೇನ್ ವಾರ್ನ್ ಜಂಟಲ್‌ಮ್ಯಾನ್ ಆಟದ ಜಂಟಲ್‌ಮ್ಯಾನ್ ಆಟಗಾರನಲ್ಲದಿದ್ದರೂ, ಆತನನ್ನು ವಿಶ್ವದ ಸರ್ವಶ್ರೇಷ್ಠ ಸ್ಪಿನ್ನರ್ ಅಂತ ಕರೆಯಲಾಗುತ್ತದೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮೆನ್‌ಗಳನ್ನು ದಿಗ್ಭ್ರಮೆಗೊಳಿಸಿದ್ದ ಮಾಂತ್ರಿಕ ಬೌಲರ್ ಆತ.

ಆತನ ಸ್ವಭಾವ, ವ್ಯಕ್ತಿತ್ವಗಳನ್ನು ಬದಿಗಿಟ್ಟು ಕ್ರಿಕೆಟ್ ಮೈದಾನದಲ್ಲಿ ಆತ ಮಾಡಿರುವ ಕರಾಮತ್ತಿನಿಂದ ಯುವಪೀಳಿಗೆಗೆ ಸ್ಫೂರ್ತಿಯ ಚಿಲುಮೆ ಎಂಬುದರಲ್ಲಿ ಎರಡು ಮಾತಿಲ್ಲ. ಆತನ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡಿಕೊಂಡವರು ಅನೇಕರಿದ್ದಾರೆ. ಈ ಸಾಲಿನಲ್ಲಿ ಶೇನ್ ವಾರ್ನ್‌ನನ್ನು ಬಹುವಾಗಿ ಕಾಡಿದ್ದ ಭಾರತದ ಸಚಿನ್ ತೆಂಡೂಲ್ಕರ್ ಸಹ ಇದ್ದಾರೆ. ಈ ಎಲ್ಲವನ್ನೂ ಮೀರಿ ಶೇನ್ ವಾರ್ನ್‌ಗೆ ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಗುಣಗಳಿದ್ದವು. ಹಾಗಾಗಿಯೇ ಆತ ವಿಶ್ವ ಕ್ರಿಕೆಟ್‌ನ ಎವರ್‌ಗ್ರೀನ್ ಹೀರೋ ಆಗಿಬಿಟ್ಟ!

ಇದನ್ನೂ ಓದಿ: ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡ ಐಪಿಎಲ್‌ನಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆ ನೀಡುವ ಮೂಲಕ ಭವಿಷ್ಯವನ್ನು ಕಟ್ಟಿಕೊಟ್ಟದ್ದು ಇದೇ ವಾರ್ನ್. ಮೊದಲ ಋತುವಿನಲ್ಲೇ ರಾಜಸ್ತಾನ ರಾಯಲ್ಸ್ ತಂಡದ ನಾಯಕ ಮತ್ತು ಕೋಚ್ ಆಗಿ ಕಣ ಪ್ರವೇಶಿಸಿದ್ದ ವಾರ್ನ್ ಅಂದು ತಮ್ಮ ತಂಡದಲ್ಲಿ ರವೀಂದ್ರ ಜಡೇಜಾ ಸೇರಿದಂತೆ ಅನೇಕ ಯುವಕರಿಗೆ ಅವಕಾಶ ನೀಡಿದ್ದರು. ತಮ್ಮ ಅನುಭವದ ಮೂಲಕ ಮಾರ್ಗದರ್ಶನವನ್ನೂ ಧಾರೆ ಎರೆದಿದ್ದರು. ಪರಿಣಾಮ ಮೊದಲ ಆವೃತ್ತಿಯಲ್ಲೇ ರಾಜಸ್ಥಾನ ಚಾಂಪಿಯನ್ ಪಟ್ಟ ಧರಿಸಿತು, ಭಾರತದ ಆಲ್‌ರೌಂಡರ್ ಜಡೇಜಾ ಏರಿರುವ ಉತ್ತುಂಗ ಎಲ್ಲರಿಗೂ ತಿಳಿದೇ ಇದೆ.

ಆತ ಚೆಂಡನ್ನು ಕೈ ಬೆರಳಿನಲ್ಲೇ ಆಡಿಸುವ ಮೋಡಿಗಾರ. ಏರಿಳಿತಗಳ ನಡುವೆಯೇ ಯಶಸ್ಸಿನ ಉತ್ತುಂಗಕ್ಕೇರಿದ್ದ ಅತ್ಯದ್ಭುತ ಬೌಲರ್. ಕವಲು ದಾರಿಯ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ಬಂದ ಚಾಣಕ್ಯ. ಮೂರು ಹೆಜ್ಜೆಗಳನ್ನು ಹಾಕಿ 22 ಯಾರ್ಡ್‌ನ ಪಿಚ್‌ನಲ್ಲಿ ಆತ ಮಾಡಿರುವ ಮೋಡಿಯನ್ನು ಕ್ರಿಕೆಟ್ ಜಗತ್ತು ಎಂದೆಂದೂ ಮರೆಯಲು ಸಾಧ್ಯವಿಲ್ಲ.

ಕವಲುದಾರಿಯನ್ನು ರಹದಾರಿಯನ್ನಾಗಿಸಿಕೊಂಡು ಪ್ರತಿ ವಿಕೆಟ್‌ಅನ್ನೂ ಒಂದೊಂದು ಮೈಲುಗಲ್ಲಾಗಿಸಿಕೊಂಡಿದ್ದ. ಒಟ್ಟಾರೆ ಕ್ರಿಕೆಟ್ ವೃತ್ತಿಜೀವನದಲ್ಲಿ 1001 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಉರುಳಿಸಿದ. ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳಿಸಿದ ಮೊದಲ ಬೌಲರ್ ಎಂಬ ಶ್ರೇಯಕ್ಕೂ ಪಾತ್ರನಾದ. ಆದರೆ, ತನ್ನ ವಿಕೆಟ್ ಗಳಿಕೆ ಸಾವಿರದೊಂದು ತಲುಪುವಷ್ಟರಲ್ಲಿ ಕ್ರಿಕೆಟ್ ಸಾಕು ಎಂದು ಆತನಿಗೆ ಅನ್ನಿಸಿಬಿಟ್ಟಿತ್ತು. ಅದಕ್ಕೊಂದು ಸಲಾಂ ಹೊಡೆದು ತನ್ನ ಎರಡನೇ ಇನಿಂಗ್ಸ್‌ನ ಬದುಕನ್ನು ಚೆನ್ನಾಗಿಯೇ ಎಂಜಾಯ್ ಮಾಡುತ್ತಿದ್ದ.

ಮೈದಾನದಲ್ಲಿ ವಿಕೆಟ್ ಪಡೆದ ಹಾಗೇ ವಿದಾಯದ ನಂತರ ಒಂದೊಂದು ದುಶ್ಚಟಗಳನ್ನು ಹವ್ಯಾಸವನ್ನಾಗಿಸಿಕೊಂಡ. ಆರೋಗ್ಯದ ಕಡೆ ಗಮನ ಹರಿಸಲಿಲ್ಲ. ಅಷ್ಟರಲ್ಲೇ ವಿಧಿಯ ಆಟಕ್ಕೆ ಈ ಲೋಕವನ್ನೇ ಬಿಟ್ಟು ಹೋದ ಈ ಮಹಾನ್ ಕ್ರಿಕೆಟಿಗ.

ಹೌದು, ಶೇನ್ ವಾರ್ನ್, ಮೂರು ಹೆಜ್ಜೆ ಗುರುತುಗಳು.. ನೂರಾರು ಕವಲು ದಾರಿಗಳು… ಸಾವಿರದೊಂದು ರಹದಾರಿಗಳು! ಇನ್ನು ನೆನಪು ಮಾತ್ರ.


ಇದನ್ನೂ ಓದಿ: ನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...