Homeಮುಖಪುಟನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ಅಮಿತಾಬ್‌ ಬಚ್ಚನ್‌ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾ, ಅಸ್ಪೃಶ್ಯ ಭಾರತದ ನಿಜಸ್ಥಿತಿಯನ್ನು ಅನಾವರಣ ಮಾಡುತ್ತದೆ.

- Advertisement -
- Advertisement -

‘ಸ್ಪೋರ್ಟ್ಸ್ ಡ್ರಾಮಾ’ ಎಂಬ ಜಾನರ್‌ನಲ್ಲಿ ನಾವು ಸಾಕಷ್ಟು ಸಿನಿಮಾಗಳನ್ನು ಈವರೆಗೆ ನೋಡಿದ್ದೇವೆ. ಭಾರತೀಯ ಚಿತ್ರರಂಗದಲ್ಲಿ ಕ್ರೀಡೆಯನ್ನು ಮುಖ್ಯವಾಗಿಟ್ಟುಕೊಂಡು ಬಂದಿರುವ ಹಲವು ಸಿನಿಮಾಗಳು ಪ್ರಚಂಡ ಯಶಸ್ಸನ್ನೂ ಗಳಿಸಿವೆ. ಆದರೆ ಈ ಕ್ರೀಡಾ ಜಗತ್ತಿನ ಸುತ್ತಲಿನ ಅಸ್ಪೃಶ್ಯ ಜಗತ್ತನ್ನು ಮುಟ್ಟಿದವರು ತೀರಾ ಕಡಿಮೆ.

ಅಮೆಜಾ‌ನ್‌ ಪ್ರೈಮ್‌ನಲ್ಲಿ ತೆರೆಕಂಡ ಪ.ರಂಜಿತ್‌ ನಿರ್ದೇಶನದ ‘ಸರ್ಪಟ್ಟ ಪರಂಬರೈ’ ಕ್ರೀಡಾ ಕಥನಕ್ಕೆ ಹೊಸ ರೂಪ ನೀಡಿತ್ತು. ಈ ನೆಲದ ಬೇರುಗಳನ್ನು ಸ್ಪರ್ಶಿಸಲು ಯತ್ನಿಸಿತ್ತು. ಸರ್ಪಟ್ಟ ಸಿನಿಮಾ ನೋಡುತ್ತಿದ್ದರೆ ಬಾಕ್ಸಿಂಗ್ ನಂತಹ ಕ್ರೀಡೆಯೊಳಗೆ ಪ್ರೇಕ್ಷಕನೂ ಪೆಟ್ಟು ತಿನ್ನುವುದು, ಪೆಟ್ಟು ಕೊಡುವುದು ಸಾಗುತ್ತದೆ. ಬಹುಶಃ ಶ್ರಮಸಂಸ್ಕೃತಿಯೊಂದಿಗೆ ಬೆರೆತ ನೆಲಮುಖಿ ಕ್ರೀಡೆಗಳಿಗೆ ಮಾತ್ರ ಈ ಥರದ ಅನುಭವ ತರಲು ಸಾಧ್ಯವೆನಿಸುತ್ತದೆ. ಅಲ್ಲೂ ಪಿತೂರಿಗಳಿವೆ, ಕ್ರೀಡಾ ಮನೋಭಾವವಿದೆ, ಮನುಷ್ಯನ ಪ್ರತಿಷ್ಟೆ ಇದೆ, ರಾಜಕೀಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೂಟೆ ಹೊರುವವನ ಶ್ರಮವನ್ನೂ ಪ್ರತಿನಿಧಿಸುವ ಕ್ರೀಡಾಕ್ಷೇತ್ರವಿದೆ. ಇದು ಪ.ರಂಜಿತ್‌ ಕಟ್ಟಿಕೊಟ್ಟ ಲೋಕ. ಬೇರೆ ಯಾರೋ ಬಾಕ್ಸಿಂಗ್ ಕುರಿತು ಸಿನಿಮಾ ಮಾಡುವುದಕ್ಕೂ ಪ.ರಂಜಿತ್ ಬಾಕ್ಸಿಂಗ್ ಕುರಿತು ಸಿನಿಮಾ ಮಾಡುವುದಕ್ಕೂ ಇರುವ ವ್ಯತ್ಯಾಸ.

ಪ.ರಂಜಿತ್‌ ನೀಡಿದ ಈ ಸುಮಧುರ ಅನುಭವದ ಬಳಿಕ ನಾಗರಾಜ್‌ ಮಂಜುಳೆಯವರು ನಿರ್ದೇಶಿಸಿರುವ ‘ಝುಂಡ್‌’ (ಹಿಂದಿ) ಸಿನಿಮಾ ಅಂಥದ್ದೇ ಕಥನವನ್ನು ಹೊತ್ತು ತಂದಿದೆ. ಅಮಿತಾಬ್‌ ಬಚ್ಚನ್‌ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾ, ಅಸ್ಪೃಶ್ಯ ಭಾರತದ ನಿಜಸ್ಥಿತಿಯನ್ನು ಅನಾವರಣ ಮಾಡುತ್ತದೆ.

ಒಲಿಂಪಿಕ್ಸ್‌, ಫುಟ್ಬಾಲ್‌ ವರ್ಡ್‌ಕಪ್‌ ನಡೆದಾಗಲೆಲ್ಲ- ಭಾರತವೇಕೆ ಈ ಕ್ಷೇತ್ರದಲ್ಲಿ ಪ್ರಜ್ವಲಿಸುವುದಿಲ್ಲ, ಸಣ್ಣಪುಟ್ಟ ರಾಷ್ಟ್ರಗಳೇ ಹಲವು ಚಿನ್ನದ ಪದಕಗಳನ್ನು ಒಲಿಂಪಿಕ್ಸ್‌ನಲ್ಲಿ ಮುಡಿಗೇರಿಸಿಕೊಳ್ಳುವಾಗ, 130 ಕೋಟಿ ಜನಸಂಖ್ಯೆಯ ಭಾರತವೇಕೆ ಪದಕಗಳನ್ನು ಗೆಲ್ಲುವುದಿಲ್ಲ? ನಾವೇಕೆ ಸಾಕರ್‌ನಂತಹ ವಿಶ್ವವಿಖ್ಯಾತ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿಲ್ಲ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಈ ನಿಟ್ಟಿನಲ್ಲಿ ಭಾರತದ ಜಾತಿ ವ್ಯವಸ್ಥೆಗೂ ಕ್ರೀಡೆಯಲ್ಲಿ ಭಾರತ ಹಿಂದುಳಿದಿರುವುದಕ್ಕೂ ಇಲ್ಲಿನ ರೋಗಗ್ರಸ್ತ ವ್ಯವಸ್ಥೆಗೂ ಕಾರಣಗಳಿರುವುದನ್ನು ಢಾಳಾಗಿ ಶೋಧಿಸುತ್ತದೆ ‘ಝುಂಡ್’.

ಇದನ್ನೂ ಓದಿರಿ: ‘BIFFes’ ಎಂಬ ಅಂತಾರಾಷ್ಟ್ರೀಯ, Sorry ‘ಕನ್ನಡ ಅಂತಾರಾಷ್ಟ್ರೀಯ ಸಿನಿಮೋತ್ಸವ!’

‘ಸ್ಲಮ್‌ ಸಾಕರ್‌ ಇನ್‌ ಇಂಡಿಯಾ’ ಸ್ಥಾಪಕರಾದ ಸಾಮಾಜಿಕ ಕಾರ್ಯಕರ್ತ ವಿಜಯ್ ಬರ್ಸೆ ಅವರ ಜೀವನದಿಂದ ಪ್ರೇರಿತವಾದ ‘ಝುಂಡ್‌’ ವಿಜಯ್ ಬರ್ಸೆಯವರ ಜೀವನ ಕಥೆಯಾಗಿಯಷ್ಟೇ ಉಳಿಯುವುದಿಲ್ಲ. ಪೂರ್ಣ ಪ್ರಮಾಣದ ಕ್ರೀಡಾ ಕಥನವೂ ಅಲ್ಲ. ಭಾರತ ಸಾಮಾಜಿಕ ವ್ಯವಸ್ಥೆಯನ್ನು ಕ್ರೀಡೆಯ ನೆಪದಲ್ಲಿ ‘ಝುಂಡ್‌’ ಹೇಳಲು ಯತ್ನಿಸಿದೆ. ಪ್ರತಿಭೆಗಂಟಿರುವ ಅಸ್ಪೃಶ್ಯ ಜಗತ್ತನ್ನು ಬಿಚ್ಚಿಡುತ್ತದೆ.

ಫುಟ್‌ಬಾಲ್‌ ಕೋಚ್‌ ವಿಜಯ್‌ ಬರ್ಸೆ ಒಂದು ದಿನ ನಡೆದು ಹೋಗುತ್ತಿದ್ದಾಗ ಸ್ಲಮ್‌ ಹುಡುಗರು ಖಾಲಿ ಡಬ್ಬವನ್ನೇ ಫುಲ್‌ಬಾಲ್‌ ಮಾಡಿಕೊಂಡು ಆಟವಾಡುತ್ತಿರುವುದನ್ನು ಗಮನಿಸುತ್ತಾರೆ. ಈ ಹುಡುಗರು ಶಾಲಾ, ಕಾಲೇಜು ಮೆಟ್ಟಿಲೇರಿದವರಲ್ಲ. ಗಾಂಜಾ ಸೇವನೆ, ಮದ್ಯಪಾನ, ಧೂಮಪಾನ- ಹೀಗೆ ಹಲವು ಚಟಗಳ ದಾಸರಾದವರು. ಚಿಲ್ಲರೆ ಕಳ್ಳತನ ಮಾಡುವವರು. ಹೀಗೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಹುಡುಗರಲ್ಲಿ ಫುಲ್‌ಬಾಲ್‌ ಕೋಚ್‌ ಭಾರತದ ಭವಿಷ್ಯವನ್ನು ಕಾಣುತ್ತಾರೆ. ಮಾರನೇ ದಿನ ಫುಟ್‌ಬಾಲ್‌ ತಂದು, ತಾನೇ ದುಡ್ಡು ಕೊಟ್ಟು ಆಟವಾಡಿಸುತ್ತಾರೆ. ಹೀಗೆ ಕೆಲವು ದಿನ ದುಡ್ಡು ಕೊಟ್ಟು ಆಡವಾಡಿಸಿ, ಫುಟ್‌ಬಾಲ್‌ನ ರುಚಿಯನ್ನು ಆ ಹುಡುಗರಿಗೆ ಹತ್ತಿಸುತ್ತಾರೆ. ಒಂದು ದಿನ, “ನನ್ನ ಬಳಿ ದುಡ್ಡಿಲ್ಲ” ಎಂದು ಕೋಚ್‌ ಮನೆ ಬಾಗಿಲ ಹಾಕಿದಾಗ, “ನೀವು ದುಡ್ಡು ಕೊಡದಿದ್ದರೆ ಪರವಾಗಿಲ್ಲ, ಫುಲ್‌ಬಾಲ್‌ ಕೊಡಿ” ಎಂದು ಸ್ಲಮ್‌ ಹುಡುಗರು ಕೇಳುವಲ್ಲಿಗೆ ಮೊದಲ ಪರಿವರ್ತನೆ ಆರಂಭವಾಗುತ್ತದೆ.

`ಝುಂಡ್‌’ ಸಿನಿಮಾದ ಒಂದು ದೃಶ್ಯ

ಸ್ಲಮ್‌ ಪಕ್ಕದಲ್ಲಿಯೇ ಕಾಲೇಜು. ಆ ಕಾಲೇಜಿಗೆ ದೊಡ್ಡದಾದ ಕಾಂಪೌಂಡ್‌. ಶುಚಿಯಾಗಿರುವ ಅಂಗಳ. ಸ್ಮಮ್‌ ಕಾಣದಂತೆ ಎತ್ತರವಾದ ಕಟ್ಟಡ. ಸ್ಲಮ್‌ ಹಾಗೂ ಕಾಲೇಜಿನ ಅಂಗಳವನ್ನು ಒಂದೇ ಫ್ರೇಮ್‌ನಲ್ಲಿ ಹಿಡಿಯುವ ಹಲವು ದೃಶ್ಯಗಳು ಚಿತ್ರದಲ್ಲಿ ಬಂದು ಹೋಗುತ್ತವೆ. ಒಂದು ಅಂಬಾನಿ ಭಾರತವಾದರೆ ಮತ್ತೊಂದು ಅಸ್ಪೃಶ್ಯ ಭಾರತ. ಸ್ಲಮ್‌ನಲ್ಲಿರುವ ಒಂದಿಷ್ಟು ಜಾಗದಲ್ಲೇ ಹುಡುಗರು ಫುಟ್‌ಬಾಲ್ ಆಡುತ್ತಾರೆ. ಯಾವುದೇ ಸರಿಯಾದ ತರಬೇತಿ ಇಲ್ಲದ ಸ್ಲಮ್‌ ಹುಡುಗರು, ಸಾಕರ್‌ ತರಬೇತಿ ಪಡೆದ ಹುಡುಗರನ್ನು ಸೋಲಿಸುವಲ್ಲಿಗೆ ಎರಡನೇ ಅಧ್ಯಾಯ ಆರಂಭವಾಗುತ್ತದೆ. ಆ ಸ್ಲಮ್‌ ಹುಡುಗರ ಒಡಲ ಸಂಕಟವೂ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ.

ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯಲ್ಲಿ ಇಡೀ ಸ್ಲಮ್‌ ಕುಣಿದು ಕುಪ್ಪಳಿಸುವ ದೃಶ್ಯವನ್ನು ನಾಗರಾಜ್‌ ಮಂಜುಳೆ ಚಿತ್ರಿಸಿದ್ದಾರೆ. ಬಾಲಿವುಡ್‌ ಸಿನಿಮಾ ಲೋಕದಲ್ಲಿ ಈವರೆಗೆ ಗಣಪತಿ ಜಯಂತಿ, ಶಿವಾಜಿ ಜಯಂತಿಯನ್ನು ನೋಡುತ್ತಿದ್ದೆವು. ಇದೇ ಮೊದಲ ಬಾರಿಗೆ ಅಂಬೇಡ್ಕರ್‌‌ ಜಯಂತಿಯನ್ನು ನಾಗರಾಜ್‌ ಮಂಜುಳೆ ಪ್ರದರ್ಶಿಸಿದ್ದಾರೆ ಎಂದು ಅನೇಕರು ಪ್ರಶಂಸಿಸಿದ್ದಾರೆ.

`ಝುಂಡ್‌’ ಸಿನಿಮಾದ ಒಂದು ದೃಶ್ಯ

ರಾಷ್ಟ್ರಮಟ್ಟದ ಸ್ಲಮ್‌ ಟೂರ್ನಿಮೆಂಟ್‌ ನಡೆಸುವುದು ಹಾಗೂ ಸ್ಲಮ್‌ ಹುಡುಗರು ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಗೆ ಆಯ್ಕೆಯಾಗುವುದರ ಕುರಿತು ಸಿನಿಮಾದ ದ್ವಿತಿಯಾರ್ಧ ಸಾಗುತ್ತದೆ. ಸಣ್ಣಪುಟ್ಟ ಕ್ರೈಮ್‌ನಲ್ಲಿ ಸಿಲುಕಿರುವ ಈ ಹುಡುಗರು ಅನುಭವಿಸುವ ಸಂಕಟ ಅಷ್ಟಿಷ್ಟಲ್ಲ. ಅದ್ಭುತವಾಗಿ ಫುಟ್ಬಾಲ್‌ ಕಲಿತ್ತಿದ್ದಕ್ಕಿಂತ ಇಂಟರ್‌ ನ್ಯಾಷನಲ್‌ ಟೂರ್ನಿಗೆ ಹೋಗುವುದಕ್ಕಾಗಿ ಈ ಹುಡುಗರು ಎದುರಿಸುವ ಸವಾಲೇ ಇಡೀ ಚಿತ್ರದ ನಿಜದ ಸಂದೇಶ. ಸರಿಯಾದ ದಾಖಲೆಗಳಿಲ್ಲ. ಅಧಿಕಾರಿ ವರ್ಗದ ಸಹಕಾರವಿಲ್ಲ. ಪ್ರೋತ್ಸಾಹ ದೊರಕುವುದಿಲ್ಲ. ಓಡುವ ಕಾಲಿಗೆ ಗುಂಡು ಕಟ್ಟಿದ ವ್ಯವಸ್ಥೆ ನಮ್ಮ ಕಣ್ಣೆದುರು ನಿಲ್ಲುತ್ತದೆ. ಈ ಸಮಸ್ಯೆಗಳ ಬೇರುಗಳು ಯಾವುವು? ಅದೇ ಜಾತಿ ವ್ಯವಸ್ಥೆ. ಭಾರತದ ಪ್ರಗತಿಯ ಕಾಲಿಗೆ ಕಟ್ಟಿದ ಗುಂಡು- ಈ ಜಾತಿ, ಅಸ್ಪೃಶ್ಯ ಸಮಾಜ. ನ್ಯಾಯಾಧೀಶರ ಮುಂದೆ ನಿಂತು ಕೋಚ್‌ ಹೇಳುತ್ತಾರೆ- “ತರಬೇತಿ ಶಾಲೆಯಷ್ಟೇ ಭಾರತವಲ್ಲ. ಅದರಾಚೆಯ ಭಾರತವಿದು.”

ಅಜಯ್‌ ಅತುಲ್‌ ಅವರ ಸಂಗೀತ ಸಿನಿಮಾ ಕಥೆಯ ತೂಕವನ್ನು ಹೆಚ್ಚಿಸಿದೆ. ಹೊಸ ಹುಡುಗರಿಂದ ಅಭಿನಯವನ್ನು ಹೊರತೆಗೆಯುವಲ್ಲಿ ನಾಗರಾಜ್‌ ಯಶಸ್ವಿಯಾಗಿದ್ದಾರೆ. ಸುಮಾರು ಮೂರು ಗಂಟೆ ಇರುವ ‘ಝುಂಡ್‌’ ಮೊದಲಾರ್ಧ ವೇಗವಾಗಿದ್ದು, ದ್ವಿತೀಯಾರ್ಧ ಸ್ವಲ್ಪ ನಿಧಾನವೆನಿಸಿದರೂ ವ್ಯವಸ್ಥೆಯನ್ನು ವಿಮರ್ಶೆಗೊಡ್ಡುತ್ತದೆ.


ಇದನ್ನೂ ಓದಿರಿ: ನಟಿ ಸಂಜನಾರಿಗೆ ಅಶ್ಲೀಲ ಮೆಸೇಜ್‌‌: ಆ್ಯಡಂ ಬಿದ್ದಪ್ಪ ಅರೆಸ್ಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...

ಬುರ್ಖಾ ಧರಿಸದ ಕಾರಣಕ್ಕೆ ಪತ್ನಿ-ಮಕ್ಕಳ ಕೊಲೆ; ಮನೆಯೊಳಗೆ ಹೂತುಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಘೋರ ಘಟನೆಯಿಂದು ವರದಿಯಾಗಿದೆ, ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ತ್ರಿವಳಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಫಾರೂಕ್ ಎಂದು...

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ: ಮೊಬೈಲ್ ಫೋನ್, ಗಾಂಜಾ ವಶ: ಡಿಜಿಪಿ ಅಲೋಕ್ ಕುಮಾರ್

ಕರ್ನಾಟಕದ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾಕುಗಳು ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿದ್ದುಪಡಿ ಸೌಲಭ್ಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು...

ನ್ಯಾಷನಲ್ ಹೆರಾಲ್ಡ್ ಪ್ರಕರಣ : ಮೋದಿ, ಅಮಿತ್ ಶಾ ರಾಜೀನಾಮೆಗೆ ಖರ್ಗೆ ಒತ್ತಾಯ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ದ ಜಾರಿ ನಿರ್ದೇನಾಲಯ (ಇಡಿ) ದಾಖಲಿಸಿದ್ದ ಹಣ ಅಕ್ರಮ ವರ್ಗಾವಣೆ (ಪಿಎಂಎಲ್‌ಎ) ದೂರು ಸ್ವೀಕರಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿರುವುದನ್ನು ಕಾಂಗ್ರೆಸ್‌ ಸ್ವಾಗತಿಸಿದೆ. ಬಿಜೆಪಿ...

ಹಿಜಾಬ್ ಎಳೆದ ನಿತೀಶ್ ಕುಮಾರ್: ಸರ್ಕಾರಿ ಸೇವೆಗೆ ಸೇರದಿರಲು ನಿರ್ಧರಿಸಿದ ವೈದ್ಯೆ?

ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಇತ್ತೀಚೆಗೆ ತಮ್ಮ ನೇಮಕಾತಿ ಪತ್ರವನ್ನು ಪಡೆದಿದ್ದರೂ ಬಿಹಾರ ಸರ್ಕಾರಿ ಸೇವೆಗೆ ಸೇರದಿರಲು ನಿರ್ಧರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪಾಟ್ನಾದಲ್ಲಿ ನಡೆದ ಸಕಾfರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ...